Tag: ಯೋಗ

  • ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ಭುವನೇಶ್ವರ: ಜೂನ್ 21ರಂದು ನಡೆಯುವ 5ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾರತೀಯ ಭದ್ರತಾ ಪಡೆಯ ಯೋಧರು ಒಡಿಶಾದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಹೌದು. ಸದಾ ದೇಶದ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಭದ್ರತಾ ಪಡೆಯು ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗಾಭ್ಯಾಸ ಮಾಡುತ್ತಿದೆ. ಸಾಮಾನ್ಯ ಪ್ರದೇಶದಲ್ಲಿ ಯೋಧರು ಯೋಗಾಭ್ಯಾಸ ಮಾಡಿದರೆ ಅಷ್ಟೇನು ಸುದ್ದಿಯಾಗುತ್ತಿರಲಿಲ್ಲ. ಆದರೆ ನಮ್ಮ ಕೆಚ್ಚೆದೆಯ ಯೋಧರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಅಂತರಾಷ್ಟ್ರೀಯ ಯೋಗ ದಿನಕ್ಕೆ ಯೋಗಾಭ್ಯಾಸ ಮಾಡಿ ತಯಾರಿ ನಡೆಸುತ್ತಿರುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

    5 ಸಾವಿರ ವರ್ಷದ ಇತಿಹಾಸವಿರುವ ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ನೀಡಲು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನವನ್ನು ಜೂನ್ 21ರಂದು ಆಚರಿಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯಂತೆ ಜೂನ್ 21 2014ರಿಂದ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಯಶಸ್ವಿಯಾಗಿ ಎಲ್ಲಡೆ ಆಚರಿಸಲಾಗಿದೆ.

    ಕಳೆದ ಬಾರಿ 4ನೇ ವಿಶ್ವ ಯೋಗ ದಿನದ ಕಾರ್ಯಕ್ರಮವನ್ನು ಡೆಹ್ರಾಡೂನ್‍ನಲ್ಲಿ ಆಚರಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಮೋದಿ ಅವರು ಕೂಡ ಪಾಲ್ಗೊಂಡಿದ್ದರು. ಹಾಗೆಯೇ ಈ ಬಾರಿ ಜಾರ್ಖಂಡ್‍ನ ರಾಂಚಿಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

  • ಪ್ಯಾಂಟ್-ಶರ್ಟ್‌ನಲ್ಲಿ ಗಮನ ಸೆಳೆದ ಜಿಟಿಡಿ

    ಪ್ಯಾಂಟ್-ಶರ್ಟ್‌ನಲ್ಲಿ ಗಮನ ಸೆಳೆದ ಜಿಟಿಡಿ

    ಮೈಸೂರು: ಜೂನ್ 21 ರಂದು ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ಮೈಸೂರಿನ ರೇಸ್ ಕೋರ್ಸ್ ನಲ್ಲಿ ಇಂದು ಮೆಗಾ ರಿಹರ್ಸಲ್ ನಡೆದಿದೆ.

    ಸುಮಾರು 5000ಕ್ಕೂ ಹೆಚ್ಚು ಯೋಗಪಟುಗಳಿಂದ ಸಾಮೂಹಿಕ ಯೋಗಾಭ್ಯಾಸ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪಾಲತಾ ಜಗನ್ನಾಥ್, ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

    ಇದೇ ವೇಳೆ ಜಿ.ಟಿ. ದೇವೇಗೌಡರು ಹೆಚ್ಚು ಗಮನ ಸೆಳೆದರು. ಕಾರಣ ಪ್ಯಾಂಟ್, ಶರ್ಟ್ ನಲ್ಲಿ ಜಿ.ಟಿ ದೇವೇಗೌಡರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಜಿ.ಟಿ. ದೇವೇಗೌಡರು ಬಿಳಿ ಪಂಚೆ, ಬಿಳಿ ಶರ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇಂದು ಅಪರೂಪಕ್ಕೆ ಸಚಿವರು ಕಂದು ಬಣ್ಣದ ಪ್ಯಾಂಟ್, ತಿಳಿ ಬೂದು ಬಣ್ಣದ ಶರ್ಟ್ ತೊಟ್ಟು ಯೋಗ ತಾಲೀಮಿಗೆ ಬಂದಿದ್ದಾರೆ. ಅವರ ಉಡುಪು ಎಲ್ಲರ ಗಮನಸೆಳೆಯಿತು.

    ರೇಸ್ ಕೋರ್ಸ್ ನಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ಸಾಮೂಹಿಕವಾಗಿ ಯೋಗಪಟುಗಳು ಯೋಗ್ಯಾಭ್ಯಾಸ ಮಾಡಿದ್ದಾರೆ. ಸಚಿವ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಯೋಗ ಪಟುಗಳು ಜೊತೆ ಸೇರಿ ತಾವೂ ಯೋಗಾಭ್ಯಾಸ ಮಾಡಿದ್ದಾರೆ.

  • ಕಬ್ಬನ್ ಪಾರ್ಕಿನಲ್ಲಿ ಉಚಿತ ಯೋಗ ಅಭ್ಯಾಸಕ್ಕೆ ಮುಸ್ಲಿಮರ ವಿರೋಧ

    ಕಬ್ಬನ್ ಪಾರ್ಕಿನಲ್ಲಿ ಉಚಿತ ಯೋಗ ಅಭ್ಯಾಸಕ್ಕೆ ಮುಸ್ಲಿಮರ ವಿರೋಧ

    ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕಿನಲ್ಲಿ ಹೊಸ ವಿವಾದ ತಲೆಯೆತ್ತಿದೆ. ಪಾರ್ಕಿನಲ್ಲಿ ಯೋಗ ಮಾಡುವುದು ಬೇಡ ಎಂದು ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಯೋಗ ಮಾಡಲು ಅನುಮತಿ ನೀಡಿದರೆ ನಮಾಜ್‍ಗೂ ಅವಕಾಶ ಕೊಡಿ ಎಂದು ಬೇಡಿಕೆ ಕೇಳಿಬಂದಿದೆ.

    ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದಿಂದ ಹುಲ್ಲು ಹಾಸಿನ ಮೇಲೆ ಪ್ರೀತಿ ಅವರು ಉಚಿತವಾಗಿ ಯೋಗ ತರಗತಿ ನೀಡುತ್ತಿದ್ದಾರೆ. ಈ ಖಾಸಗಿ ಯೋಗ ತರಗತಿಗೆ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹುಲ್ಲು ಹಾಸಿನ ಮೇಲೆ ಕ್ಲಾಸ್ ನಡೆಯುತ್ತದೆ. ಫ್ಲೆಕ್ಸ್ ಗಳನ್ನು ಪ್ರದರ್ಶನ ಮಾಡುತ್ತಾರೆ ಎಂದು ದೂರಿದ್ದಾರೆ. ಯೋಗ ನಡೆಸಲು ಅನುಮತಿ ನೀಡಿದರೆ ನಮಾಜ್ ಮಾಡಲು ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿದ್ದಾರೆ.

    ಯೋಗ ಮಾಡಲು ಅವಕಾಶ ಕೊಟ್ಟರೆ ಮುಸ್ಲಿಂ ಬಾಂಧವರು ನಮಾಜ್ ಮಾಡಲು ಅವಕಾಶ ಕೇಳುತ್ತಿದ್ದಾರೆ. ಹೀಗಾಗಿ ಉಚಿತ ಯೋಗ ಕ್ಲಾಸ್ ಬೇಡ ಎಂಬ ವಿರೋಧ ಎದುರಾಗಿದೆ ಕಬ್ಬನ್ ಪಾರ್ಕ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ತಿಳಿಸಿದ್ದಾರೆ.

    ಈ ಬಗ್ಗೆ ಯೋಗ ತರಬೇತಿದಾರಾದ ಪ್ರೀತಿಯವರನ್ನು ಕೇಳಿದರೆ ಉಚಿತವಾಗಿ ಕ್ಲಾಸ್ ಮಾಡುತ್ತಿದ್ದೇನೆ. ಈ ಕ್ಲಾಸ್‍ಗೆ ವಿರೋಧ ಯಾಕೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಪ್ರತಿ ದಿನ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೂ ನಡೆಯುವ ಈ ಕ್ಲಾಸ್‍ನಲ್ಲಿ ವಯೋವೃದ್ಧರು, ಯೋಗ ಆಸಕ್ತರು ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ.

  • ವಯಸ್ಸು 10, ವಿಶ್ವದಾಖಲೆಗಳು ನಾಲ್ಕು – ಇದು ಉಡುಪಿಯ ತನುಶ್ರೀ ಪಿತ್ರೋಡಿಯ ಸಾಧನೆ

    ವಯಸ್ಸು 10, ವಿಶ್ವದಾಖಲೆಗಳು ನಾಲ್ಕು – ಇದು ಉಡುಪಿಯ ತನುಶ್ರೀ ಪಿತ್ರೋಡಿಯ ಸಾಧನೆ

    – ಒಂದೇ ದಿನ ಎರಡು ದಾಖಲೆ

    ಉಡುಪಿ: ಈಗಾಗಲೇ ಎರಡು ವಿಶ್ವದಾಖಲೆ ಮಾಡಿರುವ 10ರ ಪೋರಿ, ಒಂದೇ ದಿನ ಮತ್ತೆರಡು ದಾಖಲೆ ಮಾಡಿದ್ದಾಳೆ. ದೇಹದೊಳಗೆ ಮೂಳೆ ಇದ್ಯೋ ಇಲ್ಲವೋ ಅಂತ ಡೌಟ್ ಬರುವಂತೆ ಉಡುಪಿಯ ತನುಶ್ರೀ ಸಾವಿರಾರು ಜನರನ್ನು ಚಕಿತಗೊಳ್ಳುವಂತೆ ಮಾಡಿದ್ದಾಳೆ.

    ಉಡುಪಿಯ ತನುಶ್ರೀ ಪಿತ್ರೋಡಿಗೆ ಈ 10 ವರ್ಷ. ಆದರೆ ಜೀವಮಾನದಲ್ಲಿ ಹೆಚ್ಚಿನವರಿಂದ ಅಸಾಧ್ಯವಾದುದನ್ನು ಬಾಲ್ಯದಲ್ಲೇ ಸಾಧಿಸಿದ್ದಾಳೆ. ಭರತನಾಟ್ಯ- ಯಕ್ಷಗಾನ ಕಲೆಯಲ್ಲಿ ಪರಿಣತಿ ಪಡೆದಿರುವ ಈಕೆ ಯೂಟ್ಯೂಬ್‍ನಲ್ಲಿ ನೋಡಿ ಯೋಗ ಕಲಿತು ವಿಶ್ವದಾಖಲೆ ಮೇಲೆ ವಿಶ್ವದಾಖಲೆ ಮಾಡಿದ್ದಾಳೆ. ತನುಶ್ರೀ ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ಹಿಂದೆ ನಿರಾಲಂಭ ಪೂರ್ಣ ಚಕ್ರಾಸನದಲ್ಲಿ ಎರಡು ದಾಖಲೆ ಮಾಡಿದ್ದಳು. 1 ನಿಮಿಷದಲ್ಲಿ 42 ಬಾರಿ ಆಸನ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಳು. ಇದೀಗ ಒಂದು ನಿಮಿಷದಲ್ಲಿ 60ಕ್ಕೂ ಹೆಚ್ಚು ಬಾರಿ ಧನುರಾಸನ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾಳೆ.

    ಸಂಸ್ಥೆಯ ಏಷ್ಯಾ ಹೆಡ್ ಮನೀಷ್ ಉಡುಪಿಗೆ ಬಂದು ಸಾಧಕಿ ತನುಶ್ರೀಗೆ ಸರ್ಟಿಫಿಕೇಟ್ ಕೊಟ್ಟು ಬೆನ್ನು ತಟ್ಟಿದ್ದಾರೆ. ಈ ಹಿಂದೆಯೂ ಬಾಲಕಿಯ ಸಾಧನೆ ನೋಡಿದ್ದೇವೆ. ಜೀವನದಲ್ಲಿ ಮತ್ತಷ್ಟು ದಾಖಲೆಗಳು ಮಾಡುವ ಮತ್ತು ಬೆಳೆದು ದೊಡ್ಡ ಹೆಸರು ಮಾಡುವ ಎಲ್ಲಾ ಲಕ್ಷಣ ಇದೆ ಅಂತ ಹೇಳಿದರು.

    ಸಾಧಕಿ ತನುಶ್ರೀ ಮಾತನಾಡಿ, ಮೈದಾನದಲ್ಲಿ ನಾನು ಪ್ರ್ಯಾಕ್ಟೀಸ್ ಮಾಡಿಯೇ ಇರಲಿಲ್ಲ. ಕ್ಯಾಮೆರಾಗಳು, ಜನರು ಎಲ್ಲ ಸೇರಿದಾಗ ಬಹಳ ಮುಜುಗರ ಆಯ್ತು. ನರ್ವಸ್ ಆಗದಂತೆ ತಂದೆ ತಾಯಿ ಹುರಿದುಂಬಿಸಿದರು. ಕಾನ್ಸನ್ಟ್ರೇಶನ್ ಮಾಡಿ ಸಾಧಿಸಿಯೇ ಬಿಟ್ಟೆ ಅಂತ ಹೇಳಿದ್ದಾಳೆ.

    ಮನೆಯೊಳಗೆ ಚಾವಡಿಯಲ್ಲಿ- ಟೆರೇಸ್ ಮೇಲೆ ಅಭ್ಯಾಸ ಮಾಡುತ್ತಿದ್ದ ತನ್ನ ಶಾಲೆಯ ಮೈದಾನದಲ್ಲಿ ಪ್ರಥಮ ಪ್ರಯೋಗದಲ್ಲೇ ದಾಖಲೆ ಮಾಡಿದ್ದಾಳೆ. ತಂದೆ ಉದಯಕುಮಾರ್- ತಾಯಿ ಸಂಧ್ಯಾ ಈ ಸಾಧನೆಯ ಹಿಂದಿರುವ ಬೆನ್ನೆಲುಬು.

    ತನುಶ್ರೀ ತಂದೆ ಉದಯಕುಮಾರ್, ತಾಯಿ ಸಂಧ್ಯಾ ಮಾತನಾಡಿ, ನಾವು ಅವಳಿಗೆ ಎಲ್ಲಾ ವಿಷಯದಲ್ಲಿ ಸಪೋರ್ಟ್ ಮಾಡುತ್ತೇವೆ. ಯೋಗ ಕ್ಲಾಸಿಗೆ ಅವಳು ಹೋಗದೇ ಯುಟ್ಯೂಬ್ ನೋಡಿಯೇ ಈ ನಾಲ್ಕು ದಾಖಲೆ ಮಾಡಿದ್ದಾಳೆ. ಯಕ್ಷಗಾನ -ಭರತನಾಟ್ಯದಲ್ಲೂ ಸಾಧನೆ ಮಾಡುವ ಹಂಬಲ ಅವಳಲ್ಲಿದೆ. ಕಲಿಕೆಯಲ್ಲೂ ಮುಂದಿರುವುದರಿಂದ ಪಠ್ಯೇತರ ಚಟುವಟಿಕೆಗೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

    ಸಾಧಕಿಗೆ ಸ್ಥಳದಲ್ಲೇ ಪ್ರಾವಿಜನ್ ಸರ್ಟಿಫಿಕೇಟ್ ಕೊಡಲಾಗಿದೆ. ಯೋಗ ದಿನಾಚರಣೆಯ ಪಬ್ಲಿಕ್ ಹೀರೋ ಆಗಿದ್ದ ತನುಶ್ರೀ ಒಂದು ನಿಮಿಷದ ರೆಕಾರ್ಡ್ ಜೊತೆ ತನುಶ್ರೀ ಮೋಸ್ಟ್ ನಂಬರ್ ಆಫ್ ಧನುರಾಸನ ಎಂಬ ದಾಖಲೆಯನ್ನೂ ಮಾಡಿದ್ದಾಳೆ. ಒಂದು ನಿಮಿಷ 1.46 ಸೆಕೆಂಡುಗಳ ಕಾಲ ಧನುರಾಸನ ಮಾಡಿ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾಳೆ. ಮತ್ತಷ್ಟು ದಾಖಲೆ ಮಾಡುವ ತಯಾರಿಯನ್ನು ತನುಶ್ರೀ ಮಾಡಿಕೊಳ್ಳುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2 ಕಾಲುಗಳಿಲ್ಲದಿದ್ರೂ 12 ವರ್ಷಗಳಿಂದ ಉಚಿತ ಯೋಗ ಪಾಠ ಮಾಡ್ತಿದ್ದಾರೆ ಹುಬ್ಬಳ್ಳಿಯ ಮೃತ್ಯುಂಜಯ

    2 ಕಾಲುಗಳಿಲ್ಲದಿದ್ರೂ 12 ವರ್ಷಗಳಿಂದ ಉಚಿತ ಯೋಗ ಪಾಠ ಮಾಡ್ತಿದ್ದಾರೆ ಹುಬ್ಬಳ್ಳಿಯ ಮೃತ್ಯುಂಜಯ

    ಹುಬ್ಬಳ್ಳಿ: ಕೆಲವರು ಅಂಗವಿಕಲತೆಗೆ ಒಳಗಾದ್ರೆ ಜೀವನವೇ ಮುಗಿಯಿತು ಅಂತ ತಲೆ ಮೇಲೆ ಕೈಹೊತ್ತು ಕೂರುತ್ತಾರೆ. ಆದರೆ ಅಪಘಾತದಲ್ಲಿ ಎರಡು ಕಾಲನ್ನೂ ಕಳೆದುಕೊಂಡಿರೋ ನಮ್ಮ ಪಬ್ಲಿಕ್ ಹೀರೋ ಹುಬ್ಬಳ್ಳಿಯ ಮೃತ್ಯುಂಜಯ ಅವರು ಯೋಗದಲ್ಲಿ ಮಗ್ನರಾಗಿದ್ದಾರೆ.

    ಅಂಗವೈಕಲ್ಯ ಮೆಟ್ಟಿ ನಿಂತು ಯೋಗ ಗುರುವಾಗಿರುವ 45 ವರ್ಷದ ಮೃತ್ಯುಂಜಯ ಹಿರೇಮಠ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹುಬ್ಬಳ್ಳಿಯ ವಿದ್ಯಾನಗರ ನಿವಾಸಿಯಾಗಿರುವ ಇವರು ಬಿ.ಕಾಂ. ಮುಗಿಸಿದ ಬಳಿಕ ಯೋಗಕ್ಕೆ ಆಕರ್ಷಿತರಾಗಿ ಕಠ್ಮಂಡುವಿನಲ್ಲಿ ಯೋಗ ತರಬೇತಿ ಪಡೆದು ಬಂದಿದ್ದಾರೆ.

    ಕಳೆದ 12 ವರ್ಷಗಳಿಂದ ರಾಜ್ಯ, ಹೊರ ರಾಜ್ಯದಲ್ಲಿಯ ಸಾವಿರಾರು ಜನರಿಗೆ ಯೋಗ ತರಬೇತಿ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಬೆಂಗಳೂರಿನ ಯೋಗ ಕ್ಲಾಸ್ ಮುಗಿಸಿ ವಾಪಸ್ ಆಗುತ್ತಿದ್ದಾಗ ಅಪಘಾತವಾಗಿ ತಮ್ಮ ಎರಡು ಕಾಲು ಕಳೆದುಕೊಂಡಿದ್ದಾರೆ. ಆದರೂ ಯೋಗದ ಮೇಲಿನ ಪ್ರೀತಿ ಮಾತ್ರ ದೂರವಾಗಿಲ್ಲ.

    ಪ್ರತಿದಿನ ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಸ್ನೇಹಿತರು ಮತ್ತು ವಿದ್ಯಾರ್ಥಿಗಳಿಗೆ ಯೋಗ ಕಲಿಸುತ್ತಾರೆ. ಮತ್ತೊಂದು ವಿಶೇಷ ಅಂದ್ರೆ ಇವರು ನೀಡುವ ಯೋಗ ತರಬೇತಿಗೆ ಯಾವುದೇ ಹಣ ಪಡೆಯುವುದಿಲ್ಲ.

    https://www.youtube.com/watch?v=jxRoJimVsR0

  • ಮಗಳ ಜೊತೆ ಗೋಲ್ಡನ್ ಸ್ಟಾರ್ ಯೋಗ!

    ಮಗಳ ಜೊತೆ ಗೋಲ್ಡನ್ ಸ್ಟಾರ್ ಯೋಗ!

    ಬೆಂಗಳೂರು: ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತವಾಗಿ ಇಂದು ಸಾಮಾನ್ಯ ಜನರಿಂದ ಭಾರತದ ತಾರೆಯರು ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಈಗ ಸ್ಯಾಂಡಲ್‍ವುಡ್ ಗೋಲ್ದನ್ ಸ್ಟಾರ್ ಗಣೇಶ್ ತಮ್ಮ ಮಗಳ ಜೊತೆ ಯೋಗ ಮಾಡಿದ್ದಾರೆ.

    ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್, ತಮ್ಮ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಯೋಗಭ್ಯಾಸವನ್ನು ಮಾಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರಾ ಹಾಗೂ ಪುತ್ರ ವಿಹಾನ್‍ನೊಂದಿಗೆ ಯೋಗ ಮಾಡಿದ್ದು, ತನ್ನ ತಂದೆ ಜೊತೆ ಸೇರಿ ಮಗಳು ಚಾರಿತ್ರ್ಯಾ ಕೂಡ ಯೋಗ ಮಾಡಿದ್ದಾರೆ. ಚಾರಿತ್ರ್ಯಾ ಕಷ್ಟ ಇರುವ ಆಸನಗಳನ್ನೆಲ್ಲಾ ತನ್ನ ತಂದೆ ಜೊತೆ ಮಾಡಿ ತೋರಿಸಿದ್ದಾರೆ.

    ಗಣೇಶ್ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ದಿನ ಜಿಮ್‍ಗೆ ಹೋಗಿ ಯೋಗವನ್ನು ಕೂಡ ಮಾಡುತ್ತಾರೆ. ಇದರಿಂದ ಅವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿರಲು ಸಹಾಯ ಮಾಡುತ್ತದೆ. ಗಣೇಶ್ ತಮ್ಮ ಮಗಳ ಜೊತೆ ಯೋಗ ಮಾಡುತ್ತಿರುವ ಫೋಟೋಗಳು ಸಾಕಷ್ಟು ವೈರಲ್ ಆಗಿದೆ.

  • ಯೋಗ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಶಿಕ್ಷಕ ಸಾವು!

    ಯೋಗ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಶಿಕ್ಷಕ ಸಾವು!

    ಬಾಗಲಕೋಟೆ: ಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ.

    ವಿಶ್ವನಾಥ್ ಬಿರಾದಾರ(50) ಮೃತ ದುರ್ದೈವಿ ಶಿಕ್ಷಕ. ತೇರದಾಳ ಪಟ್ಟಣದ ಜೆವಿ ಮಂಡಲ ಸಂಸ್ಥೆಯ ಗುರುಕುಲ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶ್ವನಾಥ್ ಅವರು ಭಾಗಿಯಾಗಿದ್ದರು. ಯೋಗ ಮಾಡುತ್ತಿದ್ದ ವೇಳೆಯೇ ವಿಶ್ವನಾಥ್ ಅವರಿಗೆ ಹೃದಯಾಘಾತವಾಗಿದೆ.

    ವಿಶ್ವನಾಥ್ ಎಸ್.ಜೆ. ಹೆಣ್ಣು ಮಕ್ಕಳ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿದ್ದು, ಮೊದಲಿಂದಲೂ ಯೋಗ ಅಭ್ಯಾಸ ಮಾಡುತ್ತಿದ್ದರು. ಸದ್ಯ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾನ್ಯಾರಿಗೂ ಚಾಲೆಂಜ್ ಹಾಕಲ್ಲ- ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

    ನಾನ್ಯಾರಿಗೂ ಚಾಲೆಂಜ್ ಹಾಕಲ್ಲ- ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

    ಬೆಂಗಳೂರು: ವಿಶ್ವಯೋಗ ದಿನಾಚರಣೆಯ ಅಂಗವಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು, ಪ್ರಧಾನಿ ಮೋದಿಯವರು ಫಿಟ್ ನೆಸ್ ಚಾಲೆಂಜ್ ಗೆ ಇದೇ ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮರಾ ಮುಂದೆ ಯೋಗ ಮಾಡಿದ್ದಾರೆ. ಯೋಗ ಗುರು ಕಾರ್ತಿಕ್ ಮಾರ್ಗದರ್ಶನದಲ್ಲಿ ದೇವೇಗೌಡರು ಯೋಗ ಮಾಡಿದ್ದಾರೆ.

    ಅದ್ಯಾರೋ ಚೇಂಬರ್ ಆಫ್ ಕಾಮರ್ಸ್ ನವರು ಬಂದು ಪ್ಯಾಲೇಸ್ ಗ್ರೌಂಡ್ ನಲ್ಲಿ ಯೋಗಾ ಡೇ ಮಾಡ್ತೀವಿ ಅಂದ್ರು. ನೀವು ಬರಬೇಕು ಅಂತ ಆಹ್ವಾನ ನೀಡಿದ್ರು. ನಾನು ಯಾವಾಗ ನಾನೇ ಯೋಗ ಮಾಡ್ತೀನಿ ಅಂತ ಹೇಳಿದ್ನೋ, ಅವರು ವಾಪಸ್ ಬರಲೇ ಇಲ್ಲ. ಬಹುಶಃ ಮೋದಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕ್ತೀನಿ ಅಂತ. ಆದ್ರೆ ನಾನು ಯಾರಿಗೂ ಚಾಲೆಂಜ್ ಹಾಕಲ್ಲ ಎಂದು ಯೋಗ ಮಾಡುತ್ತಲೇ ಎಚ್ ಡಿಡಿ ಹೇಳಿದ್ದಾರೆ.

    ಇಂದು ವಿಶ್ವ ಯೋಗ ದಿನಾಚರಣೆ. ಮೂರು ವರ್ಷದಿಂದ ಪ್ರಧಾನಿ ಮೋದಿ ಈ ದಿನಾಚರಣೆಯನ್ನು ಆಚರಣೆಗೆ ತಂದಿದ್ದಾರೆ. ಮೋದಿ ಈಗ ಯೋಗಕ್ಕೆ ಒಂದು ಸ್ವರೂಪ ನೀಡಿದ್ದಾರೆ. ಹಿಂದೆ ಋಷಿ-ಮುನಿಗಳು ತಮ್ಮ ಆರೋಗ್ಯವನ್ನು ಯೋಗದಿಂದ ಕಾಪಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರು 100, 200 ವರ್ಷಗಳ ಕಾಲ ಬದುಕುತ್ತಿದ್ದರು. ಈಗಲೂ ಇಂತಹ ಸಾಧಕರು ಹಿಮಾಲಯದಲ್ಲಿ ಬದುಕಿದ್ದಾರೆ. ಇದು ಸತ್ಯ ಎಂದು ಯೋಗ ಬಳಿಕ ಅವರು ಹೇಳಿದ್ರು.

    ನಾನು ಆರೋಗ್ಯ ಕಾಪಾಡಲು ನನ್ನದೇ ಆದ ಕೆಲವೊಂದು ನಿಯಮಗಳನ್ನು ಇಟ್ಟುಕೊಂಡಿದ್ದೇನೆ. ಯೋಗದ ಜೊತೆ ಆಹಾರ ಪದ್ಧತಿಯನ್ನು ಕೂಡ ಅಳವಡಿಸಿಕೊಂಡಿದ್ದೇನೆ. ಆದುದರಿಂದ ನಾನು ಇನ್ನು ಕೆಲಸ ಮಾಡುವ ಮತ್ತು ದುಡಿಮೆ ಮಾಡುವ ಆಸಕ್ತಿ ಇದೆ. ಪ್ರಧಾನಿ ಮೋದಿ ಅವರು ಯೋಗಕ್ಕೆ ಒಂದು ಸ್ವರೂಪ ಕೊಟ್ಟಿದ್ದಾರೆ. ಯೋಗ ನಮಗೆ ಹೊಸದಾಗಿ ಬಂದಿರೋದಲ್ಲ. ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಇನ್ನು ಅನೇಕರು ಯೋಗ ಮಾಡುತ್ತಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.

  • ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದೊಂದಿಗೆ ಸ್ವಾಗತಿಸ್ತಿದ್ದಾರೆ- ಪ್ರಧಾನಿ ಮೋದಿ

    ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದೊಂದಿಗೆ ಸ್ವಾಗತಿಸ್ತಿದ್ದಾರೆ- ಪ್ರಧಾನಿ ಮೋದಿ

    ಡೆಹ್ರಾಡೂನ್: ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 55 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಇಂದು ಯೋಗಸಾನ ಮಾಡಿದ್ರು.

    ಈ ಮೊದಲು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ವಿಶಾಲ ಹಾಗೂ ಸುಂದರ ಮೈದಾನದಲ್ಲಿರುವ ಎಲ್ಲರಿಗೂ ಹಾಗೂ ಎಲ್ಲಾ ಯೋಗ ಪ್ರೇಮಿಗಳಿಗೂ ನಾನು ದೈವ ಭೂಮಿ ಉತ್ತರಾಖಂಡ್ ನಿಂದ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯ ತಿಳಿಸುತ್ತೇನೆ ಅಂದ್ರು.

    ತಾಯಿ ಗಂಗಾ ನೆಲೆಸಿರುವ ಈ ಭೂಮಿಯಲ್ಲಿ ಆದಿಶಂಕರಚಾರ್ಯ ಕಾಲಿಟ್ಟಿದ್ದಾರೆ. ಈ ಜಾಗ ವಿವೇಕಾನಂದ ಅವರಿಗೆ ಪ್ರೇರಣೆ ಮಾಡಿತ್ತು. ಅಂತಹ ಭೂಮಿಯಲ್ಲಿ ನಾವು ಈ ರೀತಿ ಸೇರಿರುವುದು ಯಾವುದೇ ಸೌಭಾಗ್ಯಕ್ಕೆ ಕಡಿಮೆ ಇಲ್ಲ. ಉತ್ತರಾಖಂಡ್ ಹಲವಾರು ದಶಕಗಳಿಂದ ಯೋಗದ ಮುಖ್ಯ ಕೇಂದ್ರವಾಗಿದೆ. ಇಲ್ಲಿನ ಪರ್ವತಗಳು ಸ್ವತಃ ಯೋಗ ಹಾಗೂ ಆಯುರ್ವೇದಕ್ಕೆ ಪ್ರೇರಣೆ ನೀಡುತ್ತದೆ. ಸಾಮಾನ್ಯನಾಗಿರುವ ನಾಗರಿಕ ಈ ಭೂಮಿಗೆ ಬಂದಾಗ ಅವರಿಗೆ ಒಂದು ಬೇರೆ ರೀತಿಯ ದಿವ್ಯ ಅನುಭವ ಆಗುತ್ತದೆ ಅಂತ ತಿಳಿಸಿದ್ರು.

    ಇದು ನಮ್ಮ ಎಲ್ಲ ಭಾರತೀಯರಿಗೆ ಗೌರವದ ಮಾತು. ಏಕೆಂದರೆ ಸೂರ್ಯ ಹುಟ್ಟುತ್ತಲೇ ತಮ್ಮ ಕಿರಣವನ್ನು ಎಲ್ಲೆಡೆ ಹರಡಿಸಿದ್ದಾನೆ. ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದ ಮೂಲಕ ಸ್ವಾಗತಿಸುತ್ತಿದ್ದಾರೆ. ಡೆಹ್ರಾಡೂನ್‍ನಿಂದ ಡಬ್ಲಿನ್ ವರೆಗೂ, ಶಾಂಘೈಯಿಂದ ಚಿಕಾಗೋವರೆಗೂ ಎಲ್ಲಾ ಕಡೆ ಯೋಗ ಮಾಡುತ್ತಿದ್ದಾರೆ. ಹಿಮಾಲಯದ ಸಾವಿರಾರು ಮೇಲಿರುವ ಪರ್ವತಗಳಲ್ಲಿ ಹಾಗೂ ರಾಜಸ್ಥಾನದಲ್ಲಿರುವ ಮರಳುಗಾಡಿನಲ್ಲಿ ಜನರು ಎಲ್ಲ ಪರಿಸ್ಥಿತಿಯಲ್ಲಿ ತಮ್ಮ ಜೀವನವನ್ನು ಸಮೃದ್ಧಿ ಮಾಡುತ್ತಿದ್ದಾರೆ ಅಂದ್ರು.

    ಯುಎಎನ್ ಯೋಗಕ್ಕಾಗಿ ಪ್ರಸ್ತಾವನೆ ನೀಡಿದಾಗ ಎಲ್ಲ ದೇಶದವರು ಈ ಯೋಗಕ್ಕಾಗಿ ಸಹಕಾರ ನೀಡಿದ್ದಾರೆ. ಮೊದಲ ಬಾರಿಗೆ ಕಡಿಮೆ ಸಮಯದಲ್ಲಿ ಯೋಗ ಇಷ್ಟರ ಮಟ್ಟಿಗೆ ಖ್ಯಾತಿಗೊಂಡಿದೆ. ವಿಶ್ವದ ಎಲ್ಲ ಜನರು ಹಾಗೂ ಎಲ್ಲ ದೇಶದವರು ಯೋಗವನ್ನು ತಮ್ಮದೇ ಎಂದುಕೊಳ್ಳುತ್ತಿದ್ದಾರೆ ಅಂತ ಅವರು ನುಡಿದ್ರು.

    ಯೋಗದ ಕುರಿತು ಏರುತ್ತಿರುವ ಪ್ರಚಾರದಿಂದ ಭಾರತ ಇನ್ನಷ್ಟು ಪ್ರಸಿದ್ಧಿಗೊಂಡಿದೆ. ಸ್ವಸ್ತ ಹಾಗೂ ಒಳ್ಳೆಯ ಜೀವನಕ್ಕಾಗಿ ಯೋಗ ಸಮಾಜವನ್ನು ಹೆಚ್ಚು ಸಮೃದ್ಧಿಗೊಳಿಸುತ್ತಿದೆ ಎಂದು ಹೇಳುತ್ತಾ ಮತ್ತೊಮ್ಮೆ ಎಲ್ಲರಿಗೂ 4ನೇ ವಿಶ್ವ ಯೋಗ ದಿನಾಚರಣೆಯ ಶುಭಾಶಯವನ್ನು ಮೋದಿ ತಿಳಿಸಿದ್ರು.

    ಡೆಹ್ರಾಡೂನ್‍ನಲ್ಲಿ 55 ಸಾವಿರಕ್ಕೂ ಹೆಚ್ಚು ಯೋಗಪಟುಗಳಿಂದ ಪ್ರಧಾನಿ ಮೋದಿ ಯೋಗಾಸನ ಮಾಡಿದ್ರು. ಇದೇ ವೇಳೆ ಪ್ರಧಾನಿಯ ಸಂಪುಟ ಸಚಿವರು ಕೂಡ ಯೋಗದಲ್ಲಿ ಭಾಗಿಯಾಗಿದ್ದರು. ಲಕ್ನೋದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ನಾಗ್ಪುರದಲ್ಲಿ ನಿತಿನ್ ಗಡ್ಕರಿ, ಚೆನ್ನೈನಲ್ಲಿ ಸುರೇಶ್ ಪ್ರಭು, ರುದ್ರಪ್ರಯಾಗದಲ್ಲಿ ಉಮಾ ಭಾರತಿ, ಹಜೀಪುರದಲ್ಲಿ ರಾಮ್ ವಿಲಾಸ್ ಪಾಸ್ವಾನ್, ಪಾಟ್ನಾದಲ್ಲಿ ರವಿಶಂಕರ್ ಪ್ರಸಾದ್ ಭಾಗಿಯಾಗಿದ್ದಾರೆ.

    ಇತ್ತ ಬೆಂಗಳೂರಿನಲ್ಲಿ ಅನಂತ್‍ಕುಮಾರ್, ಶಿಮ್ಲಾದಲ್ಲಿ ಜೆ.ಪಿ ನಡ್ಡಾ, ಗ್ವಾಲಿಯರ್ ನಲ್ಲಿ ನರೇಂದ್ರ ಸಿಂಗ್ ತೋಮರ್, ನೋಯ್ಡಾದಲ್ಲಿ ಪಿಯೂಸ್ ಗೋಯೆಲ್, ಮುಂಬೈನಲ್ಲಿ ಪ್ರಕಾಶ್ ಜಾವ್ಡೇಕರ್ ಯೋಗಾಸನ ಮಾಡಿದ್ದಾರೆ.

    ಬ್ರಹ್ಮ ಕುಮಾರಿ ಸಂಸ್ಥೆಯು ದೆಹಲಿ ಕೆಂಪು ಕೋಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಎಸ್‍ಎಫ್, ಸಿಆರ್ ಪಿಎಫ್, ಸಿಐಎಸ್‍ಎಫ್‍ನ ಅರೆಸೇನಾ ತುಕಡಿಯ ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 50 ಸಾವಿರ ಮಂದಿ ಯೋಗದಲ್ಲಿ ಪಾಲ್ಗೊಂಡಿದ್ದಾರೆ.

    ಕೇಂದ್ರ ಆಯುಷ್ಯ ಸಚಿವಾಲಯ ಯೋಗ ಲೋಕೇಟರ್ ಎಂಬ ಹೊಸ ಆ್ಯಪ್‍ನ್ನು ಬಿಡುಗಡೆ ಮಾಡಿದೆ. ಯೋಗವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಬಾರದು ಅಲ್ಲದೇ ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದಲ್ಲ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.

  • ಮಗನಿಗೆ ಚಾಲೆಂಜ್, ಈಗ ಅಪ್ಪನ ಕಸರತ್ತು!

    ಮಗನಿಗೆ ಚಾಲೆಂಜ್, ಈಗ ಅಪ್ಪನ ಕಸರತ್ತು!

    ಬೆಂಗಳೂರು: ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಫಿಟ್ ನೆಸ್ ಚಾಲೆಂಜ್ ಹಾಕಿದ್ದರು. ಆದರೆ ಈಗ ಮಗನಿಗೆ ಚಾಲೆಂಜ್ ಹಾಕಿದ್ದರಿಂದ ಈಗ ಅಪ್ಪ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನ ವರಿಷ್ಠ ಅಧಿಕಾರಿ ಎಚ್.ಡಿ. ದೇವೇಗೌಡರು ಕಸರತ್ತು ಮಾಡುತ್ತಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಅಧಿಕಾರಕ್ಕೆ ಸಹ ಬಂದಾಗಿದೆ. ಈಗ ಮತ್ತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ `ಆರೋಗ್ಯ’ದ ಅಖಾಡಕ್ಕಿಳಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ದೇವೇಗೌಡರು ಯೋಗಾಭ್ಯಾಸ ನಿಲ್ಲಿಸಿದ್ದರು. ಆದರೆ ಹೆಚ್‍ಡಿಕೆಗೆ ಮೋದಿ ಸವಾಲು ಹಾಕುತ್ತಿದ್ದಂತೆ ಮತ್ತೆ ಯೋಗಾಭ್ಯಾಸ ಶುರು ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಸವಾಲಿಗೆ ಟಾಂಗ್ ನೀಡಿ ಉತ್ತರ ಕೊಟ್ಟ ಎಚ್‍ಡಿಕೆ

    ಜೂನ್ 21ರ ಯೋಗ ದಿನದಂದು ದೇವೇಗೌಡರಿಂದ ಮೆಗಾ ಯೋಗಾ ಶೋ ನಡೆಯಲಿದೆ. ಶ್ರೀಜಯ ಸರಸ್ವತಿ ಯೋಗಾ ಕೇಂದ್ರದಿಂದ ಯೋಗ ಗುರು ಕಾರ್ತಿಕ್ ಪಟೇಲ್ ರಿಂದ ದೇವೇಗೌಡರ ಯೋಗ ಶೋ ಆಯೋಜನೆಗೊಂಡಿದೆ. ಪ್ರತಿದಿನ ಬೆಳಗ್ಗೆ 7.30 ರಿಂದ 8.30ರ ತನಕ ದೇವೇಗೌಡರು ಯೋಗಾಭ್ಯಾಸ ಮಾಡುತ್ತಿದ್ದಾರೆ.

    ಏನಿದು ಫಿಟ್ ನೆಸ್ ಚಾಲೆಂಜ್:
    ಕೇಂದ್ರ ಯುವಜನ ಮತ್ತು ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22ರಂದು,“ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಚಾಲೆಂಜ್ ಹಾಕಿ ಟ್ವೀಟ್ ಮಾಡಿದ್ದರು.

    ವಿರಾಟ್ ಕೊಹ್ಲಿ ಸವಾಲು ಸ್ವೀಕರಿಸಿದ ನಂತರ ಅದನ್ನು ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದ್ದರು. ನಂತರ ಕೊಹ್ಲಿಯವರ ಸವಾಲನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಫಿಟ್ನೆಸ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಸವಾಲನ್ನು ಸ್ವೀಕರಿಸಿದ ಮೋದಿಯವರು ಸಿಎಂ ಕುಮಾರಸ್ವಾಮಿ ಹಾಗೂ ಅಂತರಾಷ್ಟ್ರೀಯ ಟೆಬಲ್ ಟೆನ್ನಿಸ್ ಆಟಗಾರ್ತಿ ಮಣಿಕ ಬಾತ್ರಾ ಅವರಿಗೆ ಚಾಲೆಂಜ್ ನೀಡಿದ್ದರು.

    ಮೋದಿಯವರು ತಮ್ಮ ಫಿಟ್ನೆಸ್ ವಿಡಿಯೋ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದರು. ಮೋದಿ ವಿಡಿಯೋ ಹಾಕಿ ಅದ್ದಕ್ಕೆ, “ಇದು ನನ್ನ ಬೆಳಗ್ಗಿನ ವ್ಯಾಯಾಮಗಳು. ಯೋಗ ಹೊರತಾಗಿ ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶದಿಂದ ಪ್ರೇರಣೆಗೊಂಡು ನಾನು ಟ್ರ್ಯಾಕ್‍ಗಳ ಮೇಲೆ ನಡೆಯುತ್ತೇನೆ. ಇದರ ಜೊತೆ ನಾನು ಉಸಿರಾಟದ ವ್ಯಾಯಾಮವನ್ನು ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದರು.

    ವಿಡಿಯೋ ಅಪ್ಲೋಡ್ ಮಾಡಿದ ನಂತರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಶ್ರೀ ಹೆಚ್.ಡಿ ಕುಮಾರಸ್ವಾಮಿ ಹಾಗೂ ಭಾರತದ ಹೆಮ್ಮೆಯ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರಿಗೆ ಈ ಚಾಲೆಂಜ್ ನೀಡಿದ್ದರು.