Tag: ಯೂಸುಫ್

  • ರಾಜ್ಯ ವಕ್ಫ್‌ ಬೋರ್ಡ್‌ ಅಧ್ಯಕ್ಷ ಡಾ. ಯೂಸುಫ್‌ ನಿಧನ

    ರಾಜ್ಯ ವಕ್ಫ್‌ ಬೋರ್ಡ್‌ ಅಧ್ಯಕ್ಷ ಡಾ. ಯೂಸುಫ್‌ ನಿಧನ

    ಬೆಂಗಳೂರು: ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷ, ಮುಸ್ಲಿಂ ಸಮಾಜ ಹಿರಿಯ ನಾಯಕ ಡಾ.ಮೊಹಮ್ಮದ್ ಯೂಸುಫ್ ಇಂದು ಮುಂಜಾನೆ ನಿಧನರಾಗಿದ್ದಾರೆ.

    ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಯೂಸುಫ್‌ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಬೆಳಗ್ಗೆ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ನಿಧನಕ್ಕೆ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

    ಕರ್ನಾಟಕ ವಕ್ಫ್ ಬೋರ್ಡ್ ರಾಜ್ಯ ಅಧ್ಯಕ್ಷರು, ಸಮಾಜದ ಮುಖಂಡರೂ ಆಗಿದ್ದ ಜನಾಬ್ ಡಾ. ಮೊಹಮ್ಮದ್ ಯೂಸುಫ್ ರವರು ವಿಧಿವಶರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ದೇವರು ಅವರಿಗೆ ಸದ್ಗತಿಯನ್ನು ಕರುಣಿಸಲಿ, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

    ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶ್ರೀ ಮಹಮ್ಮದ್ ಯೂಸುಫ್ ಅವರ ನಿಧನದ ಸುದ್ದಿ ದುಃಖಕರ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಬಂಧು ಬಳಗದ ವರೆಲ್ಲರಿಗೂ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಶ್ರೀರಾಮುಲು ಸಂತಾಪ ಸೂಚಿಸಿದ್ದಾರೆ.

  • ಏರ್ ಸ್ಟ್ರೈಕ್ ಮಾಸ್ಟರ್ ಮೈಂಡ್ ಬೀರೇಂದ್ರ ಸಿಂಗ್ ಧನೋವಾ

    ಏರ್ ಸ್ಟ್ರೈಕ್ ಮಾಸ್ಟರ್ ಮೈಂಡ್ ಬೀರೇಂದ್ರ ಸಿಂಗ್ ಧನೋವಾ

    -ಭದ್ರತಾ ಸಲಹೆಗಾರ ಧೋವಲ್‍ಗೆ ಧನೋವಾ ಸಲಹೆ..!?

    ನವದೆಹಲಿ: ಏರ್ ಸ್ಟ್ರೈಕ್ ಹಿಂದಿನ ಮಾಸ್ಟರ್ ಮೈಂಡ್ ವಾಯುಸೇನೆಯ ಮುಖ್ಯಸ್ಥರಾದ ಬೀರೇಂದ್ರ ಸಿಂಗ್ ಧನೋವಾ. ಕಾರ್ಗಿಲ್ ಯುದ್ಧದ ವೇಳೆ ಕತ್ತಲಿನಲ್ಲಿ ಆಪರೇಷನ್ ನಡೆಸಿದ್ದ ಧನೋವಾ ಅವರೇ ಏರ್ ಸ್ಟ್ರೈಕ್‍ಗೆ ಸೂಚಿಸಿದ್ದರಂತೆ.

    ಬೀರೇಂದ್ರ ಸಿಂಗ್ ಧನೋವಾ ಇಂಡಿಯನ್ ಏರ್ ಫೋರ್ಸ್ ನ ಮುಖ್ಯಸ್ಥರು. ಸೆಪ್ಟೆಂಬರ್ 7, 1957ರಲ್ಲಿ ಜನಿಸಿದ ಧನೋವಾ ಅವರು ಸೇನಾಪಡೆಯಲ್ಲಿ 37 ವರ್ಷಗಳಿಂದ ಅವಿರತ ಶ್ರಮಿಸುತ್ತಿದ್ದಾರೆ. ಪಾಕಿಸ್ತಾನದ ನೆಲಕ್ಕೆ ನುಗ್ಗಿ ಬಾಲ್‍ಕೋಟ್‍ನಲ್ಲಿ 350 ಉಗ್ರರ ಚೆಂಡಾಡಿದ ಏರ್ ಸ್ಟ್ರೈಕ್ ಹಿಂದಿನ ಮಾಸ್ಟರ್ ಮೈಂಡ್. ಅಲ್ಲದೆ, ಈ ಸಂಪೂರ್ಣ ಆಪರೇಷನ್ ನಿರ್ವಹಿಸಿದವರು.

    ಪಾಕಿಸ್ತಾನ ಪ್ರಾಯೋಜಿತ ಜೈಶ್ ಉಗ್ರರು, ಪುಲ್ವಾಮಾದ ಆವಂತಿಪೋರ್ ನಲ್ಲಿ ಫೆಬ್ರವರಿ 14ರಂದು ಮಧ್ಯಾಹ್ನ 3.15ರ ವೇಳೆಗೆ ನಡೆದ ಆತ್ಮಾಹುತಿ ದಾಳಿಗೆ 40 ಯೋಧರ ಹುತಾತ್ಮರಾಗಿದ್ದರು. ಘಟನೆ ಬಳಿಕ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಭೂಸೇನೆ, ವಾಯುಸೇನೆ, ನೌಕಾಪಡೆಯ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ವೇಳೆ ಪಾಕ್ ಉಗ್ರರ ಹುಟ್ಟಡಗಿಸಲು ಏರ್ ಸ್ಟ್ರೈಕ್ ಒಳ್ಳೆಯ ಆಯ್ಕೆ ಅಂತ ಧನೋಆ ಸಲಹೆ ನೀಡಿದ್ದರು ಅಂತ ತಿಳಿದು ಬಂದಿದೆ.

    ಧನೋವಾ ಅವರು 1999ರ ಕಾರ್ಗಿಲ್ ಯುದ್ಧದ ವೇಳೆ ಫೈಟರ್ ಸ್ಕ್ವಾಡ್ರನ್ ಮತ್ತು ಅಂದಿನ ಏರ್ ಫೋರ್ಸ್ ಮುಖ್ಯಸ್ಥರಾಗಿದ್ದ ಎ.ವೈ ಟಿಪ್ನಿಸ್ ಅವರಿಗೆ ಸಾಥ್ ನೀಡಿದ್ದರು. ಐಎಎಫ್ ಪೈಲಟ್‍ಗಳಿಗೆ ಮಾನಸಿಕ ಸ್ಥೈರ್ಯ ತುಂಬಲು ಅಂದಿನ ಮಾರ್ಷಲ್ ಟಿಫ್ನಿಸ್ ಅವರೇ ಖುದ್ದಾಗಿ ಪೈಲಟ್‍ಗಳ ಜೊತೆಗೆ ತೆರಳಿದ್ದರು. ಆದರೆ ಟಿಪ್ನಿಸ್ ಹಾಗೂ ಪೈಲಟ್‍ಗಳ ಪ್ರಾಣ ಕಾಪಾಡಲು ಧನೋವಾ ಅವರು ರಾತ್ರಿ ವೇಳೆ ಅತ್ಯಂತ ಎತ್ತರದದಿಂದಲೇ ದಾಳಿ ಮಾಡೋಣ ಅಂತ ಐಡಿಯಾ ಕೊಟ್ಟಿದ್ದರು. ಇದರಲ್ಲಿ ಯಶಸ್ವಿ ಸಹ ಆಗಿದ್ದರು.

    1978ರಲ್ಲಿ ವಾಯು ಸೇನೆ ಸೇರಿದ್ದ ಧನೋವಾ, ಎಚ್‍ಜೆಟಿ-16 ಕಿರಣ್, ಸೆಪೆಕ್ಯಾಟ್, ಜಾಗ್ವಾರ್, ಮಿಗ್-29 ಹಾಗೂ ಸುಖೋಯ್-30 ಎಂಕೆಐ ಫೈಟರ್ ಜೆಟ್‍ಗಳನ್ನು ಹಾರಿಸಿದ್ದಾರೆ. ಈ ಮೂಲಕ ಪರಿಣತ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 37 ವರ್ಷಗಳ ಸೇವೆಯಲ್ಲಿ ಹಲವಾರು ಅತ್ಯುನ್ನತ ಪ್ರಶಸ್ತಿ, ಪದಕಗಳನ್ನು ಧನೋವಾ ಪಡೆದಿದ್ದಾರೆ.

    https://www.youtube.com/watch?v=LuNOYN08Gu0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 21 ನಿಮಿಷಗಳ ದಾಳಿಗೆ 3,686 ಕೋಟಿ ವೆಚ್ಚದ ವಸ್ತುಗಳ ಬಳಕೆ..!

    21 ನಿಮಿಷಗಳ ದಾಳಿಗೆ 3,686 ಕೋಟಿ ವೆಚ್ಚದ ವಸ್ತುಗಳ ಬಳಕೆ..!

    – ಯುದ್ಧ ಸಾಮಾಗ್ರಿಗಳ ಮೌಲ್ಯ ಹೀಗಿದೆ

    ನವದೆಹಲಿ: ಭಾರತೀಯ ವಾಯುಸೇನೆ ಜೆಇಎಂ ಉಗ್ರಸಂಘಟನೆಗಳ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ ಸರ್ವನಾಶ ಮಾಡಿದೆ. ಫೆ.26ರಂದು ಮುಂಜಾನೆ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ಮಿಂಚಿನ ವೇಗದಲ್ಲಿ ವೈಮಾನಿಕ ದಾಳಿ ನಡೆಸಿ ಸೇಫಾಗಿ ತವರಿಗೆ ಬಂದು ನೆಲೆಸಿದೆ. ಬಾಲಾಕೋಟ್‍ನಲ್ಲಿರುವ ಉಗ್ರರ ತಾಣ ನಾಶ ಮಾಡಲು 2,568 ಕೋಟಿ ರೂ.ಮೌಲ್ಯದ ವಾಯುಪಡೆಯ ಯುದ್ಧ ಸಾಮಾಗ್ರಿಗಳನ್ನು ಬಳಸಿಕೊಳ್ಳಲಾಗಿದೆ.

    ದಾಳಿಯಲ್ಲಿ ಸಾವಿರ ಕೆಜಿ ಬಾಂಬ್ ಬಳಕೆ ಮಾಡಲಾಗಿದ್ದು, ಪ್ರತಿ ಬಾಂಬ್ ಮೌಲ್ಯ 56 ಲಕ್ಷ ರೂ. ಆಗಿದೆ. ಒಂದೊಂದು ಬಾಂಬ್ 225 ಕೆಜಿ ತೂಕದ ಜಿಬಿಯು 12 ಬಾಂಬ್ ಸ್ಫೋಟಿಸಿದ್ದು, ಬಾಂಬ್ ದಾಳಿಗೆ 1.7 ಕೋಟಿಯಿಂದ 2.2 ಕೋಟಿ ವೆಚ್ಚವಾಗಿದೆ.

    ಫೆ.26 ಮುಂಜಾನೆ 3.30ರ ವೇಳೆಗೆ ಬಾಲಕೋಟ್, ಮುಜಾಫರಾಬಾದ್, ಚಕ್ಕೋತಿಯಲ್ಲಿ ನೆಲೆಸಿದ್ದ 200 ರಿಂದ 300 ಉಗ್ರರನ್ನು ಹೊಡೆದುರುಳಿಸಿ ಉಗ್ರರ ತಾಣ ಧ್ವಂಸಗೊಳಿಸಲಾಯ್ತು. ಉಗ್ರರ ಬೇಟೆಗೆ 6,300 ಕೋಟಿ ಮೌಲ್ಯದ ವಸ್ತುಗಳನ್ನು ಸಜ್ಜುಗೊಳಿಸಿತ್ತು. ಇವುಗಳಲ್ಲಿ ಯುದ್ಧ ವಿಮಾನ, ಬಾಂಬ್ ಎಲ್ಲವೂ ಸೇರಿದಂತೆ 3,686 ಕೋಟಿ ಮೌಲ್ಯದ ವಸ್ತುಗಳನ್ನು ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: 7 ಶಕ್ತಿಗಳನ್ನು ಬಳಸಿ ಪಾಕ್ ಮೇಲೆ ಬಾಂಬ್ ದಾಳಿಗೈದ ಭಾರತ!

    ಉಗ್ರರ ಬೇಟೆ ಸಂದರ್ಭದಲ್ಲಿ ಪಾಕ್ ಸೇನೆ ಪ್ರತಿದಾಳಿ ನಡೆಸಬಹುದು ಅಂತಾ ಭಾರತೀಯ ವಾಯುಪಡೆ 1,750 ಕೋಟಿ ಮೌಲ್ಯದ ರೆಡಾರ್ ಹೊಂದಿರುವ ಎಡಬ್ಲ್ಯೂಎಸಿಎಸ್ ವಿಮಾನದ ಕಾವಲಿಗಿರಿಸಿತ್ತು. ಕಾರ್ಯಾಚರಣೆಯಲ್ಲಿ ವಿಮಾನಗಳಿಗೆ ಇಂಧನ ತುಂಬುವ 22 ಕೋಟಿ ಮೌಲ್ಯದ ಟ್ಯಾಂಕರ್ ಜೆಟ್, 80 ಕೋಟಿ ಮೌಲ್ಯದ ಡ್ರೋಣ್ ಕ್ಯಾಮೆರಾಗಳನ್ನು ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಯ್ತು. ಅಲ್ಲದೇ 3 ಸುಖೋಯ್ ವಿಮಾನಗಳನ್ನು ಸನ್ನದ್ಧವಾಗಿರಿಸಿತ್ತು.

    ಮಧ್ಯಪ್ರದೇಶದ ಗ್ವಾಲಿಯರ್‍ನಿಂದ ಹಾರಿದ ಮಿರಾಜ್ 2000 ಯುದ್ಧ ವಿಮಾನಗಳು ಪಾಕಿಸ್ತಾನಕ್ಕೂ ಸಣ್ಣದೊಂದು ಸುಳಿವು ನೀಡದೇ 21 ನಿಮಿಷಗಳಲ್ಲಿ ಉಗ್ರರ ತಾಣಗಳನ್ನು ಸರ್ವನಾಶ ಮಾಡಿ ಭಾರತಕ್ಕೆ ಸೇಫಾಗಿ ಮರಳಿದೆ. ಆದರೆ 21 ನಿಮಿಷಗಳ ಯುದ್ಧಕ್ಕೆ ಸಾವಿರಾರು ಕೋಟಿ ವೆಚ್ಚವಾಗಿದ್ದು ಬಲಿಷ್ಠ ಭಾರತೀಯ ಸೇನೆ ಎದುರು ಭಿಕ್ಷುಕ ರಾಷ್ಟ್ರ ಪಾಕಿಸ್ತಾನ ಯುದ್ಧಕ್ಕೆ ಮುಂದಾಗುತ್ತಾ ಅನ್ನೋದು ಕಾದು ನೋಡಬೇಕಿದೆ.

    ದಾಳಿಗೆ ಬಳಕೆಯಾದ ಯುದ್ಧಸಾಮಾಗ್ರಿಗಳ ಮೌಲ್ಯ

    * 12 ಮಿರಾಜ್ 2000 ಜೆಟ್ ಮೌಲ್ಯ – 2,568 ಕೋಟಿ
    * ಎಡಬ್ಲ್ಯೂಎಸಿಆರ್ ವಿಮಾನ – 1750 ಕೋಟಿ
    * 1 ಸುಖೋಯ್ ಯುದ್ಧ ವಿಮಾನಕ್ಕೆ 358 ಕೋಟಿ ವೆಚ್ಚ
    * 3 ಸುಖೋಯ್ ಎಸ್‍ಯು-30ಎಸ್ ಯುದ್ಧ ವಿಮಾನ – 1,074 ಕೋಟಿ
    * 1 ಮಿಗ್ 29 ಎಸ್ ಯುದ್ಧ ವಿಮಾನಕ್ಕೆ 154 ಕೋಟಿ
    * 5 ಮಿಗ್ 29 ಎಸ್ ಯುದ್ಧ ವಿಮಾನ – 770 ಕೋಟಿ
    * ಹೆರೋನ್ ಡ್ರೋಣ್ – 80 ಕೋಟಿ
    * ವಿಮಾನಗಳಿಗೆ ಇಂಧನ ತುಂಬುವ ಟ್ಯಾಂಕರ್ ಜೆಟ್ – 22 ಕೋಟಿ
    * ಒಟ್ಟಾರೆ 21 ನಿಮಿಷದ ದಾಳಿಗೆ – 6, 264 ಕೋಟಿ ರೂ.ಸೇನಾ ಸಂಪತ್ತಿನ ಬಳಕೆ

    https://www.youtube.com/watch?v=tWx5VyQ388w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಜಿಕಲ್ ದಾಳಿಯಲ್ಲಿ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಹತ್ಯೆ!

    ಸರ್ಜಿಕಲ್ ದಾಳಿಯಲ್ಲಿ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಹತ್ಯೆ!

    ನವದೆಹಲಿ: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಬಾಲಕೋಟ್ ನೆಲೆಯ ಮೇಲೆ ಭಾರತೀಯ ವಾಯು ಪಡೆಯು ಇಂದು ಬೆಳಗ್ಗೆ ನಡೆಸಿದ ದಾಳಿಯಲ್ಲಿ 300 ಉಗ್ರರು, ತರಬೇತುದಾರರು ಹಾಗೂ ಜೇಶ್ ಸಂಘಟನೆಯ ಕಮಾಂಡೋಗಳು ಬಲಿಯಾಗಿದ್ದಾರೆ ಎನ್ನಲಾಗಿದೆ.

    ಈ ದಾಳಿಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಅಲಿಯಾಸ್ ಉಸ್ತಾದ್ ಘೋರಿ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.

    ಉಸ್ತಾದ್ ಘೋರಿ ಯಾರು?:
    ಮಸೂದ್ ಅಜರ್ ಭಾಮೈದ ಯೂಸುಫ್ 1999ರಲ್ಲಿ ಇಂಡಿಯನ್ ಏರ್‌ಲೈನ್ಸ್‌ ವಿಮಾನ ಐಸಿ-814ರ ಹೈಜಾಕ್ ಪ್ರಕರಣದಲ್ಲಿ ಭಾಗಿಯಾಗಿದ್ದ. ಅಷ್ಟೇ ಅಲ್ಲದೆ ಪ್ರಮುಖ ಆರೋಪಗಳಿಂದ ಇಂಟರ್‍ಪೋಲ್‍ನ ಪಟ್ಟಿಸೇರಿದ್ದ.

    ಭಾರತದ ಸಿಬಿಐ 2000ರಲ್ಲಿ ಸಲ್ಲಿಸಿದ್ದ ಮನವಿಯಂತೆ ಇಂಟರ್‍ಪೋಲ್, ಯೂಸುಫ್ ವಿರುದ್ಧ ಕಳೆದ ವರ್ಷ ರೆಡ್ ಕಾರ್ನನ್ ನೋಟಿಸ್ ಹೊರಡಿಸಿತ್ತು. ಇಂಟರ್‍ಪೋಲ್, ಮಾಹಿತಿ ಪ್ರಕಾರ ಯೂಸುಫ್ ಪಾಕಿಸ್ತಾನ ಕರಾಚಿ ನಗರದವನಾಗಿದ್ದು, ಉರ್ದು, ಹಿಂದಿ, ಮತ್ತು ಪಾಕಿಸ್ತಾನಿ ಭಾಷೆ ಮಾತನಾಡಬಲ್ಲವನಾಗಿದ್ದ.

    ಯೂಸುಫ್ ಬಾಲಕೋಟ್‍ನಲ್ಲಿರುವ ಉಗ್ರ ತರಬೇತಿ ಶಿಬಿರದ ಮುಖ್ಯಸ್ಥನಾಗಿದ್ದ. ಈ ಶಿಬಿರವನ್ನೇ ಭಾರತೀಯ ವಾಯುಪಡೆ ಮಂಗಳವಾರದ ದಾಳಿಯಲ್ಲಿ ಧ್ವಂಸಗೊಳಿಸಿದೆ.

    ಮಸೂದ್ ಅಜರ್ ನನ್ನು ಭಾರತೀಯ ಸೇನೆಯಿಂದ ಬಿಡುಗಡೆಗೊಳಿಸಲು ಯೂಸುಫ್ ಸೇರಿದಂತೆ ಕೆಲ ಉಗ್ರರು, 1999ರಲ್ಲಿ ನೇಪಾಳದಿಂದ ಕಂದಹಾರ್ ಗೆ ಇಂಡಿಯನ್ ಏರ್‍ಲೈನ್ಸ್ ವಿಮಾನವನ್ನು ಅಪಹರಣ ಮಾಡಿದ್ದರು. ಪ್ರಯಾಣಿಕರ ಜೀವ ರಕ್ಷಿಸುವ ಉದ್ದೇಶದಿಂದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಜರ್ ಮಸೂದ್ ಸೇರಿದಂತೆ ಒಟ್ಟು ಮೂವರು ಉಗ್ರರನ್ನು ಬಿಡುಗಡೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv