Tag: ಯೂಟ್ಯೂಬ್ ಚಾನೆಲ್

  • 10 YouTube ಚಾನೆಲ್‌ನ ವೀಡಿಯೋಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ

    10 YouTube ಚಾನೆಲ್‌ನ ವೀಡಿಯೋಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ

    ನವದೆಹಲಿ: ಸಮುದಾಯಗಳ (Religious Communities) ನಡುವೆ ದ್ವೇಷ ಹರಡಲು ನಕಲಿ ಸುದ್ದಿ ಪ್ರಸಾರ ಮಾಡುತ್ತಿದ್ದ 10 ಚಾನಲ್‌ಗಳ (YouTube Channels) 45 ಯುಟ್ಯೂಬ್ ವೀಡಿಯೋ (YouTube Videos) ಗಳನ್ನ ಕೇಂದ್ರ ಸರ್ಕಾರ (Central Government) ನಿಷೇಧಿಸಿದೆ.

    ಉದಾಹರಣೆಗೆ ಕೆಲವು ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳುವುದು, ಸಮುದಾಯದ ವಿರುದ್ಧ ಹಿಂಸಾತ್ಮಕ ಬೆದರಿಕೆ ಹಾಕುವುದು ಅಥವಾ ದೇಶದಲ್ಲಿ ಅಂತರ್ಯುದ್ಧ ಘೋಷಣೆಯಂತಹ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ವೀಡಿಯೋಗಳನ್ನ ನಿರ್ಬಂಧಿಸುವಂತೆ ಆದೇಶಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ (Anurag Thakur) ಇಂದು ಆದೇಶಿಸಿದ್ದಾರೆ. ಇದನ್ನೂ ಓದಿ: ಸುಳ್ಳು ಮತ್ತು ದೇಶದ್ರೋಹ ಸುದ್ದಿಗಳ ಪ್ರಕಟ – 8 ಯೂಟ್ಯೂಬ್ ಚಾನಲ್‍ಗಳು ನಿಷೇಧ

    10 ಚಾನೆಲ್‌ಗಳಲ್ಲಿ ಪ್ರಸಾರವಾಗಿದ್ದ ಈ 45 ವೀಡಿಯೋಗಳು ಸಮಯದಾಯಗಳ ನಡುವೆ ದ್ವೇಷ ಹುಟ್ಟಿಸುವಂತವಾಗಿದ್ದವು, ತಪ್ಪು ಕಲ್ಪನೆಯನ್ನು ಹೊಂದಿದ್ದವು. ಒಟ್ಟಾರೆ 1.30 ಕೋಟಿಗೂ ಅಧಿಕ ಮಂದಿ ಈ ವೀಡಿಯೋಗಳನ್ನ ವೀಕ್ಷಿಸಿದ್ದರು. ಕೆಲವು ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಗೌರವಿಸುವ ಉದ್ದೇಶದಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಎಪಿ ಶಾಸಕ ಅಮಾನತುಲ್ಲಾ ಖಾನ್‍ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

    ಬ್ಲಾಕ್ ಮಾಡಲಾಗಿರುವ ವೀಡಿಯೋಗಳ ಪೈಕಿ ಕೆಲವು ವೀಡಿಯೋಗಳು ಅಗ್ನಿಪಥ್ ಯೋಜನೆ, ಭಾರತೀಯ ಸೇನೆ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡುವಂತವಾಗಿದ್ದವು. ಜಮ್ಮು ಮತ್ತು ಕಾಶ್ಮೀರ (Jammu and Kashmir)  ಹಾಗೂ ಲಡಾಖ್ (Ladakh) ನಡುವಿನ ಗಡಿ ರೇಖೆಯನ್ನು ತಪ್ಪಾಗಿ ಬಿಂಬಿಸಿದ ರೀತಿಯಲ್ಲಿ ವೀಡಿಯೋ ಪ್ರಸಾರ ಮಾಡಲಾಗಿತ್ತು. ಈ ವಿಷಯಗಳು ಅತಿಸೂಕ್ಷ್ಮ ಹಾಗೂ ಸುಳ್ಳು ಎಂಬುದು ಗೊತ್ತಾಗಿತ್ತು ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

    ಮಾಹಿತಿ ತಂತ್ರಜ್ಞಾನ ನಿಯಮ-2021ರ ಅಡಿಯಲ್ಲಿ ಈ ವೀಡಿಯೊಗಳನ್ನು ಬ್ಲಾಕ್ ಮಾಡಲು ಸೆಪ್ಟೆಂಬರ್ 23ರಂದು ಆದೇಶ ಹೊರಡಿಸಲಾಗಿತ್ತು ಎಂದೂ ಪ್ರಕಟಣೆ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‌ ಯೂಟ್ಯೂಬ್‌ ಚಾನೆಲ್‌ ಡಿಲೀಟ್‌ – ಪಕ್ಷ ಹೇಳಿದ್ದೇನು?

    ಕಾಂಗ್ರೆಸ್‌ ಯೂಟ್ಯೂಬ್‌ ಚಾನೆಲ್‌ ಡಿಲೀಟ್‌ – ಪಕ್ಷ ಹೇಳಿದ್ದೇನು?

    ನವದೆಹಲಿ: ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ ಡಿಲೀಟ್‌ ಆಗಿರುವ ಬಗ್ಗೆ ವರದಿಯಾಗಿದೆ. ಆದರೆ ಡಿಲೀಟ್‌ ಆಗಿರುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

    ನಮ್ಮ ಯೂಟ್ಯೂಬ್‌ ಚಾನೆಲ್ ಡಿಲೀಟ್‌ ಆಗಿದೆ. ದೋಷ ಬಗೆಹರಿಸಲು ಕ್ರಮವಹಿಸಲಾಗಿದೆ. ಗೂಗಲ್‌ ಹಾಗೂ ಯೂಟ್ಯೂಬ್‌ ತಂಡದೊಂದಿಗೆ ಕಾಂಗ್ರೆಸ್‌ ಸಂಪರ್ಕದಲ್ಲಿದೆ ಎಂದು ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ ಟೀಮ್‌ ಟ್ವೀಟ್‌ ಮಾಡಿ ತಿಳಿಸಿದೆ. ಇದನ್ನೂ ಓದಿ: 10 ಸಾವಿರ ಟವರ್‌ ಮಾರಾಟಕ್ಕೆ ಮುಂದಾದ ಬಿಎಸ್‌ಎನ್‌ಎಲ್‌

    ಯಾವ ಕಾರಣಕ್ಕೆ ಚಾನೆಲ್‌ ಡಿಲೀಟ್‌ ಆಗಿದೆ ಎಂಬುದು ಸ್ಪಷ್ಟವಾಗಿಲ್ಲ. ತಾಂತ್ರಿಕ ದೋಷ ಅಥವಾ ಇನ್ಯಾವುದೇ ಕಾರಣಕ್ಕೆ ಡಿಲೀಟ್‌ ಆಗಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಸುಳ್ಳು ಮತ್ತು ದೇಶದ್ರೋಹ ಸುದ್ದಿಗಳ ಪ್ರಕಟ – 8 ಯೂಟ್ಯೂಬ್ ಚಾನಲ್‍ಗಳು ನಿಷೇಧ

    ಸುಳ್ಳು ಮತ್ತು ದೇಶದ್ರೋಹ ಸುದ್ದಿಗಳ ಪ್ರಕಟ – 8 ಯೂಟ್ಯೂಬ್ ಚಾನಲ್‍ಗಳು ನಿಷೇಧ

    ನವದೆಹಲಿ: ಸುಳ್ಳು ಮತ್ತು ದೇಶದ್ರೋಹದ ಸುದ್ದಿಗಳ ಪ್ರಕಟ ಹಿನ್ನೆಲೆ ಪಾಕಿಸ್ತಾನ ಸೇರಿದಂತೆ ಭಾರತದ ಒಟ್ಟು ಎಂಟು ಯೂಟ್ಯೂಬ್ ಚಾನಲ್‍ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

    ಐಟಿ ನಿಯಮಗಳು, 2021ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಯೂಟ್ಯೂಬ್ ಮೂಲಕ ಸುದ್ದಿ ಪ್ರಕಟಿಸುತ್ತಿದ್ದ ಚಾನಲ್‍ಗಳನ್ನು ನಿಷೇಧಿಸಿದೆ. ಇದನ್ನೂ ಓದಿ: ಮಗನ ತಿಥಿಯ ದಿನವೇ ತಾಯಿ ಸಾವು – ಸುದ್ದಿ ಕೇಳಿ ಮತ್ತಿಬ್ಬರು ಮಕ್ಕಳು ಆಸ್ಪತ್ರೆಗೆ

    ಲೋಕತಂತ್ರ ಟಿವಿ, U&V ಟಿವಿ, ಎಎಮ್ ರಜ್ವಿ, ಗೌರವಶಾಲಿ ಪವನ್ ಮಿಥಿಲಾಂಚಲ್, Top5TH, ಸರ್ಕಾರಿ ನವೀಕರಣ, ಸಬ್ ಕುಚ್ ದೇಖೋ ಹಾಗೂ ಪಾಕಿಸ್ತಾನ ಮೂಲದ ನ್ಯೂಸ್ ಕಿ ದುನ್ಯಾ ನಿಷೇಧಿತ ಯೂಟ್ಯೂಬ್ ಸುದ್ದಿ ಚಾನಲ್‍ಗಳಾಗಿವೆ.  ಇದನ್ನೂ ಓದಿ: ಕೆರೆಗೆ ಹಾರಿ ಯುವಕ, ಮಹಿಳೆ ಆತ್ಮಹತ್ಯೆ- ಸೂಸೈಡ್‍ಗೂ ಮುನ್ನ ಗೆಳೆಯನಿಗೆ ಕರೆ ಮಾಡಿದ್ದ ಚರಣ್

    114 ಕೋಟಿ ವೀವ್ಸ್ ಮತ್ತು 85 ಲಕ್ಷದ 73 ಸಾವಿರ ಸಬ್‍ಸ್ಕ್ರೈಬ್ ಹೊಂದಿದ್ದ ಈ ಎಂಟು ಚಾನಲ್‍ಗಳು ದೇಶದಲ್ಲಿನ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ತಪ್ಪು ಮಾಹಿತಿ ರವಾನೆ ಮಾಡುತ್ತಿದ್ದವು. ನಕಲಿ ಮತ್ತು ಸಂವೇದನಾಶೀಲ ಥಂಬ್‍ನೇಲ್‍ಗಳು, ಸುದ್ದಿ ನಿರೂಪಕರ ಚಿತ್ರಗಳು ಮತ್ತು ಕೆಲವು ಟಿವಿ ನ್ಯೂಸ್ ಚಾನೆಲ್‍ಗಳ ಲೋಗೊಗಳನ್ನು ಬಳಸಿಕೊಂಡು ವೀಕ್ಷಕರನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿದ್ದವು ಎಂದು ಆರೋಪಿಸಲಾಗಿದೆ.

    ಈ ನಿಷೇಧಿತ ಎಲ್ಲಾ ಯೂಟ್ಯೂಬ್ ಚಾನೆಲ್‍ಗಳು ತಮ್ಮ ವೀಡಿಯೊಗಳಲ್ಲಿ ಕೋಮು ಸೌಹಾರ್ದತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭಾರತದ ವಿದೇಶಿ ಸಂಬಂಧಗಳಿಗೆ ಹಾನಿಯುಂಟುಮಾಡುವ ಸುಳ್ಳು ವಿಷಯವನ್ನು ಹೊಂದಿರುವ ಜಾಹೀರಾತುಗಳನ್ನು ಪ್ರದರ್ಶಿಸುತ್ತಿವೆ ಎಂದು ಸಚಿವಾಲಯ ಹೇಳಿದೆ. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ – `ಗೋ ಬ್ಯಾಕ್ ಸಿದ್ದುಖಾನ್’ ಎಂದು ಆಕ್ರೋಶ

    ಭಾರತದ ಸಾರ್ವಭೌಮತೆ, ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳು ಮತ್ತು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದ್ದು, ಅದರಂತೆ, ವಿಷಯವು ಮಾಹಿತಿ ತಂತ್ರಜ್ಞಾನ ಕಾಯಿದೆ, 2000ರ ಸೆಕ್ಷನ್ 69ಂ ವ್ಯಾಪ್ತಿಯೊಳಗೆ ಒಳಗೊಂಡಿದೆ. ಈ ಹಿನ್ನೆಲೆ ಈ ಚಾನಲ್‍ಗಳನ್ನು ನಿಷೇಧಿಸಲಾಗಿದೆ.

    ಡಿಸೆಂಬರ್ 2021 ರಿಂದ, ಸಚಿವಾಲಯವು 102 ಯೂಟ್ಯೂಬ್ ಆಧಾರಿತ ಸುದ್ದಿ ಚಾನಲ್‍ಗಳು ಮತ್ತು ಹಲವಾರು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ನಿರ್ದೇಶನ ನೀಡಿದೆ. ಭಾರತದ ಸಾರ್ವಭೌಮತೆ, ಸಮಗ್ರತೆ, ಏಕತೆಗೆ ಧಕ್ಕೆ ಉಂಟು ಮಾಡುವ ಸುಳ್ಳು ಸುದ್ದಿ ಬಿತ್ತರಿಸುವ ಯೂಟ್ಯೂಬ್ ಚಾನಲ್‍ಗಳನ್ನು ಹಂತ ಹಂತವಾಗಿ ನಿಷೇಧಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಗ ಅರ್ಜುನ್‍ಗೆ ಐಪಿಎಲ್‍ನಲ್ಲಿ ಸಿಗದ ಅವಕಾಶ – ಕೊನೆಗೂ ಮೌನ ಮುರಿದ ತೆಂಡೂಲ್ಕರ್

    ಮಗ ಅರ್ಜುನ್‍ಗೆ ಐಪಿಎಲ್‍ನಲ್ಲಿ ಸಿಗದ ಅವಕಾಶ – ಕೊನೆಗೂ ಮೌನ ಮುರಿದ ತೆಂಡೂಲ್ಕರ್

    ಮುಂಬೈ: ಐಪಿಎಲ್ 2022ರ ಟೂರ್ನಿಯಲ್ಲಿ ಮುಂಬೈ ತಂಡದ ಪರ ಲೀಗ್ ಪಂದ್ಯಗಳಲ್ಲಿ ಆಡಲು ಅರ್ಜುನ್‍ಗೆ ಒಂದೇ ಒಂದು ಅವಕಾಶ ಸಿಗದ ಕಾರಣ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೌನ ಮುರಿದಿದ್ದಾರೆ.

    ಈ ಕುರಿತು ಮಂಗಳವಾರ ಯೂಟ್ಯೂಬ್ ಚಾನೆಲ್‍ವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಂಬೈ ಫ್ರಾಂಚೈಸಿಯ ಮಾರ್ಗದರ್ಶಕರಾದ ಸಚಿನ್, ಮಗ ಅರ್ಜುನ್‍ಗೆ ನೀಡಿದ್ದ ಕೆಲ ಸಲಹೆಗಳನ್ನು ಬಹಿರಂಗಪಡಿಸಿದ್ದಾರೆ. ಅರ್ಜುನ್‍ಗೆ ಕೇವಲ ತನ್ನ ಆಟದ ಮೇಲೆ ಗಮನಹರಿಸು ಅಂತ ಹೇಳಿದ್ದೆ. ತಂಡದ ಆಯ್ಕೆಯ ಭಾಗದ ಬಗ್ಗೆ ಯೋಚಿಸುವುದಿಲ್ಲ. ನಾನು ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗುವುದಿಲ್ಲ. ನಾನು ಆ ಭಾಗವನ್ನು ನಿರ್ವಹಣೆಗೆ ಮಾತ್ರ ಬಿಡುತ್ತೇನೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಇಂದು ಎಲಿಮಿನೇಟರ್ ಪಂದ್ಯ – ಡುಪ್ಲೆಸಿ ಬಳಗಕ್ಕೆ ನಿರ್ಣಾಯಕ

    ಎಡಗೈ ಮಧ್ಯಮ ವೇಗಿ ಅರ್ಜುನ್‍ರನ್ನು ಈ ವರ್ಷದ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ 30 ಲಕ್ಷ ನೀಡಿ ಖರೀದಿಸಲಾಗಿತ್ತು. ಆದರೆ ಲೀಗ್ ಹಂತದ ಒಂದೇ ಒಂದು ಪಂದ್ಯದಲ್ಲೂ ಅವರಿಗೆ ಆಡಲೂ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

    ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ 14 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, 10 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಕ್ರಮವಾಗಿ ಕೊನೆ ಸ್ಥಾನದಲ್ಲಿದೆ. ಟೂರ್ನಿಯ ಆರಂಭದಿಂದಲೂ ಸ್ಥಿರ ಪದರ್ಶನ ನೀಡಲು ಎಡವಿದ್ದ ಮುಂಬೈ, ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದೆ.

  • ಪಾಕ್‍ನ 20 ಯೂಟ್ಯೂಬ್ ಚಾನೆಲ್, 2 ವೆಬ್‍ಸೈಟ್‍ಗಳಿಗೆ ನಿರ್ಬಂಧ

    ಪಾಕ್‍ನ 20 ಯೂಟ್ಯೂಬ್ ಚಾನೆಲ್, 2 ವೆಬ್‍ಸೈಟ್‍ಗಳಿಗೆ ನಿರ್ಬಂಧ

    ಇಸ್ಲಾಮಾಬಾದ್: ಭಾರತ ವಿರೋಧಿ ಮತ್ತು ಸುಳ್ಳು ಸುದ್ದಿ ಹರಡುತ್ತಿರುವ ಕಾರಣ 20 ಯೂಟ್ಯೂಬ್ ಚಾನೆಲ್‍ಗಳು ಮತ್ತು ಎರಡು ವೆಬ್‍ಸೈಟ್‍ಗಳನ್ನು  ನಿರ್ಬಂಧಿಸಲಾಗಿದೆ.

    ಭಾರತೀಯ ಸೇನೆ, ಆಯೋಧ್ಯೆ ರಾಮ ಮಂದಿರ, ಕಾಶ್ಮೀರ, ಭಾರತದಲ್ಲಿ ಅಲ್ಪಸಂಖ್ಯಾತರು ಜ.ಬಿಪಿನ್ ರಾವತ್ ವಿಷಯದಲ್ಲಿ ಸತತವಾಗಿ ಸುಳ್ಳು ಸುದ್ದಿ ಮತ್ತು ಭಾರತ ವಿರೋಧಿ ಸುದ್ದಿ ಪ್ರಸಾರ ಮಾಡುತ್ತಿದ್ದ ಪಾಕಿಸ್ತಾನ ಮೂಲದ 20 ಯೂಟ್ಯೂಬ್ ಚಾನೆಲ್, 2 ವೆಬ್‍ಸೈಟ್‍ಗಳನ್ನು ಕೇಂದ್ರ ಸರ್ಕಾರ ಬಂದ್ ಮಾಡಿದೆ. ಇದನ್ನೂ ಓದಿ:  ರಷ್ಯಾದ ಮಹಿಳಾ ಗಗನಯಾತ್ರಿ ಸ್ಪೇಸ್ ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ

    ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ದನಯಾಪಾಕಿಸ್ತಾನ್ ಗ್ರೂಪ್ ಈ ಯೂಟ್ಯೂಬ್ ಚಾನೆಲ್ ಮತ್ತು ವೆಬ್‍ಸೈಟ್‍ಗಳನ್ನು ನಿರ್ವಹಿಸುತ್ತಿದೆ. ಈ ಚಾನೆಲ್‍ಗಳಲ್ಲಿ ಪ್ರಸಾರವಾಗುವ ಸುದ್ದಿ, ನಿಜ ಎಂದು ಜನರನ್ನು ನಂಬಿಸಲು ಪಾಕ್ ಸುದ್ದಿವಾಹಿಸಿಗಳ ಪ್ರಮುಖ ಆ್ಯಂಕರ್‌ಗಳನ್ನೇ ಬಳಸಿಕೊಂಡು ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿತ್ತು. ಹೀಗಾಗಿ ಸಾಕಷ್ಟು ಜನಯವಾಗಿದ್ದ ಈ ಚಾನೆಲ್‍ಗಳು 35 ಲಕ್ಷಕ್ಕೂ ಸಬ್‍ಸ್ಕೈಬ್ರರ್‌ಗಳನ್ನು ಹೊಂದಿದ್ದ 55 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿವೆ. ಇದನ್ನೂ ಓದಿ: ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್‌ ಉಪಗ್ರಹಗಳು? ದರ ಎಷ್ಟು? ನೆಟ್‌ ಹೇಗೆ ಸಿಗುತ್ತೆ?

    PAK

    ಭಾರತಕ್ಕೆ ಸಂಬಂಧಿಸಿದ ವಿವಿಧ ಸೂಕ್ಷ್ಮ ವಿಷಯಗಳ ಬಗ್ಗೆ ನಕಲಿ ಸುದ್ದಿಗಳನ್ನು ಹರಡುತ್ತಿವೆ. ವೆಬ್‍ಸೈಟ್‍ಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಮಾಹಿತಿ ಜಾಲಕ್ಕೆ ಸೇರಿವೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗುಪ್ತಚರ ಸಂಸ್ಥೆ ತಿಳಿಸಿವೆ.

  • ಬದುಕಿದ್ದಾಗಲೇ ಸತ್ತಿದ್ದಾರೆ ಅಂದ ಯೂಟ್ಯೂಬ್ ಚಾನೆಲ್ – ನಟ ಸಿದ್ಧಾರ್ಥ್ ಗರಂ

    ಬದುಕಿದ್ದಾಗಲೇ ಸತ್ತಿದ್ದಾರೆ ಅಂದ ಯೂಟ್ಯೂಬ್ ಚಾನೆಲ್ – ನಟ ಸಿದ್ಧಾರ್ಥ್ ಗರಂ

    ಚೆನ್ನೈ: ಕಾಲಿವುಡ್‍ನ ಖ್ಯಾತ ನಟ ಸಿದ್ಧಾರ್ಥ್ ನಿಧನರಾಗಿದ್ದಾರೆ ಎಂದು ಇತ್ತೀಚೆಗಷ್ಟೆ ಯೂಟ್ಯೂಬ್ ಚಾನೆಲ್‍ವೊಂದು ವರದಿಮಾಡಿತ್ತು. ಈ ಕುರಿತಂತೆ ಇದೀಗ ಸಿದ್ಧಾರ್ಥ್‍ರವರು ಪ್ರತಿಕ್ರಿಯೆ ನೀಡಿದ್ದಾರೆ.

    ಚಿಕ್ಕವಯಸ್ಸಿನಲ್ಲಿಯೇ ಮೃತಪಟ್ಟ ದಕ್ಷಿಣ ಭಾರತದ ಖ್ಯಾತ ನಟ, ನಟಿಯರ ಸಾಲಿನಲ್ಲಿ ಸಿದ್ದಾರ್ಥ್ ಫೋಟೋವನ್ನು ಕೂಡ ಸೇರಿಸಿ ಯೂಟ್ಯೂಬ್ ಸುದ್ದಿಯೊಂದನ್ನು ಪ್ರಕಟಿಸಿತ್ತು. ಅಲ್ಲದೇ ಸಿದ್ದಾರ್ಥ್ ನಿಧನರಾಗಿದ್ದಾರೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಗಾಬರಿಯಾಗಿದ್ದರು.

    ಈ ವಿಚಾರ ತಿಳಿದು ಸಿದ್ಧಾರ್ಥ್‍ರವರು ಯೂಟ್ಯೂಬ್‍ಗೆ ರಿಪೋರ್ಟ್ ಮಾಡಿರುವ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾನು ಈ ವೀಡಿಯೋ ಬಗ್ಗೆ ಯೂಟ್ಯೂಬ್‍ಗೆ ರಿಪೋರ್ಟ್ ಮಾಡಿದ್ದೆ. ಆದರೆ ಯೂಟ್ಯೂಬ್ ತಂಡ ಕ್ಷಮಿಸಿ ಈ ವೀಡಿಯೋದಲ್ಲಿ ನಮಗೆ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇದನ್ನು ಕಂಡು ನಾನು ಎಲಾ ಇವರಾ.. ಎಂದು ಕೊಂಡಿದ್ದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ತೆಲುಗಿನ ಬೊಮ್ಮರಿಲ್ಲು, ನೂವು ವಸ್ತಾನಂಟೆ ನೇನೊದ್ದಾಂಟಾನಾ, ಆಟ ಹಾಗೂ ತಮಿಳಿನ ಜಿಗರ್ ತಾಂಡ, ಬಾಯ್ಸ್, ಓ ಮೈ ಫ್ರೆಂಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ನಟ ಅಮೀರ್ ಖಾನ್ ಜೊತೆ ‘ರಂಗ್ ದೇ ಬಸಂತಿ’ ಸಿನಿಮಾದಲ್ಲಿ ಕೂಡ ಸ್ಕ್ರೀನ್ ಶೇರ್ ಮಾಡಿದ್ದರು. ಈ ಸಿನಿಮಾ ಬಾಲಿವುಡ್‍ನಲ್ಲಿ ಸಖತ್ ಸದ್ದು ಮಾಡಿತ್ತು. ಇದನ್ನೂ ಓದಿ: ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ

  • ಶಿವರಾತ್ರಿ ದಿನ  2 ಗುಡ್‌ನ್ಯೂಸ್‌ ಹಂಚಿಕೊಂಡ ರಾಗಿಣಿ

    ಶಿವರಾತ್ರಿ ದಿನ 2 ಗುಡ್‌ನ್ಯೂಸ್‌ ಹಂಚಿಕೊಂಡ ರಾಗಿಣಿ

    ಬೆಂಗಳೂರು: ಶಿವರಾತ್ರಿ ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಸ್ಯಾಂಡಲ್‍ವುಡ್ ನಟಿಮಣಿ ರಾಗಿಣಿ ದ್ವಿವೇದಿ ಅಭಿಮಾನಿಗಳೊಂದಿಗೆ 2 ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ.

    ಜೀವನದಲ್ಲಿ ಎಲ್ಲಾ ತರ ಸಮಯ ಮನೆಗ ಬರುತ್ತದೆ, ಒಳ್ಳೆಯ ಸಮಯ, ಕೆಟ್ಟ ಸಮಯ ಹಾಗೂ ನಮ್ಮನ್ನು ಪರೀಕ್ಷೆ ಮಾಡುವ ಎಷ್ಟೋ ಸಮಯವು ಬರುತ್ತದೆ. ಇಂದು ತುಂಬಾ ಸಂತೋಷದ ದಿನವಾಗಿದೆ. ನನ್ನನ್ನು ಕನ್ನಡದ ಅಭಿಮಾನಿಗಳು ಒಪ್ಪಿಕೊಂಡು ಹಾಗೂ ನನ್ನ ಸಿನಿ ಜರ್ನಿಯನ್ನು ಆರಂಭಿಸಿ 10 ವರ್ಷವಾಗಿದೆ. ಕೆಂಪೇಗೌಡ ಸಿನಿಮಾ ಸಿನಿಮಾ ತೆರೆ ಮೇಲೆ ಬಂದು 10 ವರ್ಷವಾಗಿದೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಸುದೀಪ್ ನೆನಪು:
    ಕೆಂಪೇಗೌಡ ಜರ್ನಿ ನನಗೆ ಮರೆಯಲಾಗದ ನೆನಪು. ಶೂಟಿಂಗ್ ನಲ್ಲಿ ಕಳೆದ ಒಂದೊಂದು ದಿನನವು ನನಗೆ ಇಂದು ನೆನಪಿದೆ. ನಿಮ್ಮಿಂದ ನಾನು ತುಂಬಾ ಕಲಿತಿದ್ದೇನೆ. ಎಷ್ಟೊಂದು ಪ್ರೀತಿ, ಸಹಕಾರವನ್ನು ನನಗೆ ಕೊಟ್ಟಿದ್ದೀರಿ. ನನ್ನ ಸಿನಿಮಾ ಜರ್ನಿಯನ್ನು ನಿಮ್ಮೊಂದಿಗೆ ನಾನು ಪ್ರಾರಂಭಿಸಿದ್ದೇನೆ. ನನಗೆ ತುಂಬಾ ಪ್ರೋತ್ಸಾಹ ಕೊಟ್ಟಿದ್ದೀರಿ ಎಂದು ಹೇಳಿ ನೆನಪು ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ನಾನು ನಿಮ್ಮನ್ನು ನೋಡಿ ನಟನೆಯನ್ನು ಕಲಿತಿದ್ದೇನೆ. ಕೆಂಪೇಗೌಡ ಸಿನಿನಿಮಾದಿಂದ ಎಷ್ಟೊಂದು ಜನರು ಜೀವನವನ್ನು ಕಟ್ಟಿಕೊಂಡಿದ್ದಾರೆ. ನನಗೆ ಮೊದಲು ಸಿನಿಮಾ ರಂಗಕ್ಕೆ ಬಂದಾಗ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ನನಗೆ ಎಷ್ಟೊಂದು ಒಳ್ಳೆಯ ಪಾತ್ರಕೊಟ್ಟು ನನ್ನ ಸಿನಿಮಾರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದಿರಾ. ಸುದೀಪ್ ಅವರು ಪ್ರತಿಯೊಬ್ಬರಿಗೂ ಸಪೋರ್ಟ್ ಮಾಡುತ್ತಾರೆ. ನನ್ನ ಕಡೆಯಿಂದ ಕಿಚ್ಚಾ ಸುದೀಪ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಯೂಟ್ಯೂಬ್ ಚಾನೆಲ್ ಆರಂಭ
    ನಟಿ ಜೈಲಿನಿಂದ ಹೊರ ಬಂದ ನಂತರ ಸಖತ್ ಸಕ್ರಿಯವಾಗಿರುವ ನಟಿ ರಾಗಿಣಿ ಮಹಿಳಾ ದಿನದಂದು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಇನ್ನು ಮುಂದೆ ತಮ್ಮ ವಿಡಿಯೋಗಳನ್ನು ಅಲ್ಲೇ ಪೋಸ್ಟ್ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. ನಿನ್ನೆ ಶಿವರಾತ್ರಿ ಹಬ್ಬದಂದು ಮಾಡಿದ ವಿಶೇಷ ಪೂಜೆಯ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಪೋಸ್ಟ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಮಂದಿನ ದಿನಗಳಲ್ಲಿ ರಾಗಿಣಿಯವರನ್ನು ನಾವು ಯೂಟ್ಯೂಬ್ ಚಾನಲ್‍ನಲ್ಲಿ ನೋಡಬಹುದಾಗಿದೆ. ಕುಟುಂಬದೊಂದಿಗೆ ಶಿವರಾತ್ರಿ ಹಬ್ಬವನ್ನು ರಾಗಿಣಿ ಸಂಭ್ರಮದಿಂದ ಆಚರಿಸಿದ್ದಾರೆ. ಕೆಲವು ಫೊಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಡುಗೆ ಮಾಡುವ ಹಾಗೂ ಇತರೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ ನಟಿ ಈಗ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನಲ್‍ನಲ್ಲಿ ಅಪ್ಲೋಡ್ ಮಾಡಲಿದ್ದಾರೆ.

  • ಹೊಸ ಯೂಟ್ಯೂಬ್ ಚಾನೆಲ್ ತೆರೆದ ವಾರ್ನರ್ ಕಾಲೆಳೆದ ಯುವರಾಜ್

    ಹೊಸ ಯೂಟ್ಯೂಬ್ ಚಾನೆಲ್ ತೆರೆದ ವಾರ್ನರ್ ಕಾಲೆಳೆದ ಯುವರಾಜ್

    ನವದೆಹಲಿ: ಹೊಸ ಯೂಟ್ಯೂಬ್ ಚಾನೆಲ್ ತೆರೆದ ಆಸೀಸ್ ಆಟಗಾರ ಡೇವಿಡ್ ವಾರ್ನರ್ ಅವರನ್ನು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಕಾಲೆಳೆದಿದ್ದಾರೆ.

    ಡೇವಿಡ್ ವಾರ್ನರ್ ಅವರು ಸದ್ಯ ಯುಇಎಯಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ. ತನ್ನ ನಾಯಕತ್ವದ ಸನ್‍ರೈಸಸ್ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ನಿನ್ನೆ ನಡೆದ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಹೈದರಾಬಾದ್ ತಂಡ 69 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.

    ಈ ನಡುವೆ ಇಂದು ಟ್ವೀಟ್ ಮಾಡಿರುವ ಡೇವಿಡ್ ವಾರ್ನರ್ ಅವರು, ಎಲ್ಲರಿಗೂ ನಮಸ್ಕಾರ, ನಾನು ಈಗ ತಾನೇ ನನ್ನ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಓಪನ್ ಮಾಡಿದ್ದೇನೆ. ಜೊತೆಗೆ ಹೊಸ ವಿಡಿಯೋವನ್ನು ಅದರಲ್ಲಿ ಹಾಕಿದ್ದೇನೆ. ನನ್ನ ಟ್ವಿಟ್ಟರಿನಲ್ಲಿ ಆ ಯೂಟ್ಯೂಬ್ ಚಾನೆಲಿನ ಲಿಂಕ್ ಇದ್ದು, ಎಲ್ಲರೂ ಹೋಗಿ ವಿಡಿಯೋ ನೋಡಿ. ಜೊತೆಗೆ ಫಾಲೋ ಮಾಡುವುದನ್ನು ಮರೆಯಬೇಡಿ ಎಂದು ಬರೆದುಕೊಂಡಿದ್ದರು.

    ಡೇವಿಡ್ ವಾರ್ನರ್ ಅವರ ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ಅವರು, ಹೌದಾ. ಆದರೆ ಈ ಯೂಟ್ಯೂಬ್ ಚಾನೆಲ್ ಅಲ್ಲಿ ನಿಮ್ಮ ಡ್ಯಾನ್ಸ್ ವಿಡಿಯೋ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ. ಡೇವಿಡ್ ವಾರ್ನರ್ ಅವರು ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ಹಲವಾರು ಡ್ಯಾನ್ಸ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ವೇಳೆ ಟಿಕ್‍ಟಾಕ್‍ನಲ್ಲಿ ಬಹಳ ಜನಪ್ರಿಯವಾಗಿದ್ದ ಡೇವಿಡ್ ವಾರ್ನರ್ ಕೆಲ ಹಿಂದಿ, ತಮಿಳು ಮತ್ತು ತೆಲುಗು ಚಿತ್ರದ ಟಿಕ್‍ಟಾಕ್ ವಿಡಿಯೋ ಮಾಡಿ ಭಾರತದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ಹಿಂದಿ ಹಾಡುಗಳಿಗೆ ಫನ್ನಿ ಡ್ಯಾನ್ಸ್ ಮಾಡಿ ತಮ್ಮ ಟಿಕ್‍ಟಾಕಿನಲ್ಲಿ ಹಾಕಿಕೊಂಡಿದ್ದರು. ತಮ್ಮ ಮಗಳ ಮನವಿಯ ಮೇರೆಗೆ ಟಿಕ್‍ಟಾಕ್‍ಗೆ ಬಂದಿದ್ದ ವಾರ್ನರ್ ಕೆಲ ದಿನಗಳ ನಂತರ ಟಿಕ್‍ಟಾಕ್‍ನಲ್ಲಿ ಸ್ಟಾರ್ ಆಗಿದ್ದರು.

  • ಶುರುವಾಗಲಿದೆ ಬಿಗ್‍ ಬಾಸ್ ಶಾಲಿನಿಯವರ ‘ಶಾಲಿವುಡ್’!

    ಶುರುವಾಗಲಿದೆ ಬಿಗ್‍ ಬಾಸ್ ಶಾಲಿನಿಯವರ ‘ಶಾಲಿವುಡ್’!

    ಕ್ರಿಯೇಟಿವ್ ಕಾರ್ಯಕ್ರಮಗಳ ರುಚಿಹತ್ತಿಸಲಿದೆ ಯೂಟ್ಯೂಬ್ ಚಾನೆಲ್!

    ಪಾಪ ಪಾಂಡು ಧಾರಾವಾಹಿಯ ಪಾಚು ಶ್ರೀಮತಿಯಾಗಿ, ಬಿಗ್ ಬಾಸ್ ಶೋನ ಸ್ಪರ್ಧಿಯಾಗಿ ಮತ್ತು ಇತ್ತೀಚಿನ ದಿನಗಳಲ್ಲಿ ಥರಥರದ ಪಾತ್ರಗಳ ಮೂಲಕ ಹಿರಿತೆರೆಯಲ್ಲಿಯೂ ಸಕ್ರೀಯರಾಗಿರುವವರು ಶಾಲಿನಿ. ತಮ್ಮದೇ ಶೈಲಿಯ ನಿರೂಪಣೆಯ ಮೂಲಕ ಕಿರುತೆರೆ ಕಾರ್ಯಕ್ರಮಗಳ ಮೂಲಕವೂ ಛಾಪು ಮೂಡಿಸಿರುವ ಶಾಲಿನಿ ಇದೀಗ ಕಿರುತೆರೆ ಮತ್ತು ಹಿರಿತೆರೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಈ ಒತ್ತಡದ ನಡುವೆಯೂ ವರ್ಷಾಂತರದ ಕನಸೊಂದನ್ನು ಅವರು ನನಸಾಗಿಸಿಕೊಳ್ಳುವ ಖುಷಿಯಲ್ಲಿದ್ದಾರೆ. ಅಂದಹಾಗೆ ಶಾಲಿನಿ ‘ಶಾಲಿವುಡ್’ ಎಂಬ ಯೂಟ್ಯೂಬ್ ಚಾನೆಲ್ ಶುರುಮಾಡಲು ಅಂತಿಮ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

    ಈ ಹೊಸ ಯೂಟ್ಯೂಬ್ ಚಾನೆಲ್‍ಗೆ ಶಾಲಿನಿ ಅವರು ನಾಮಕರಣ ಮಾಡಿರುವ ರೀತಿಯೇ ಎಲ್ಲರಿಗೂ ಹಿಡಿಸುವಂತಿದೆ. ಶಾಲಿವುಡ್ ಎಂಬ ಹೆಸರೇ ಗೆಲುವು ಮತ್ತು ಕ್ರಿಯೇಟಿವಿಟಿಯ ಸೂಚನೆಗಳನ್ನು ಹೊಮ್ಮಿಸುತ್ತಿದೆ. ಹಾಗಾದರೆ ಈ ಯೂ ಟ್ಯೂಬ್ ಚಾನೆಲ್‍ನ ರೂಪುರೇಷೆಗಳೇನು? ಅದರಲ್ಲಿ ಯಾವ್ಯಾವ ಕಾರ್ಯಕ್ರಮಗಳು ಮೂಡಿ ಬರಲಿವೆ? ಅದಕ್ಕಾಗಿ ಹೇಗೆಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ ಅನ್ನೋದರ ಬಗ್ಗೆ ಶಾಲಿನಿ ಇಂಚಿಂಚು ವಿವರಗಳನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ. ಈ ಮೂಲಕ ಬಹು ಕಾಲದಿಂದ ಉಸಿರಾಗಿಸಿಕೊಂಡಿದ್ದ ಕನಸಿನ ಪದರುಗಳನ್ನು ತೆರೆದಿಟ್ಟಿದ್ದಾರೆ.

    ಶಾಲಿವುಡ್ ಅನ್ನು ಯಾರಿಗೇ ಆದರೂ ಫೆಶ್ ಅನ್ನಿಸುವಂಥಾ ವೆರೈಟಿ ವೆರೈಟಿ ಕಾರ್ಯಕ್ರಮಗಳಿಂದ ಸಿಂಗಾರ ಮಾಡಲು, ಈ ಮೂಲಕ ಪ್ರೇಕ್ಷಕರಿಗೆ ಹೊಸತನದ ಕಾರ್ಯಕ್ರಮಗಳನ್ನು ಉಣಬಡಿಸಲು ಶಾಲಿನಿ ಸನ್ನದ್ಧರಾಗಿದ್ದಾರೆ. ಶಾಲಿನಿ ಯಾವುದೇ ಕಾರ್ಯಕ್ರಮ ನಡೆಸಿಕೊಟ್ಟರೂ ಅಲ್ಲೊಂದು ಲವ ಲವಿಕೆ ಇರುತ್ತದೆ. ಯುವ ಸಮುದಾಯದಿಂದ ಮೊದಲ್ಗೊಂಡು ಎಲ್ಲ ವಯೋಮಾನದವರನ್ನೂ ಮಾತಿನ ಶೈಲಿಯಿಂದಲೇ ಮರುಳಾಗಿಸೋ ಕಲೆಯೂ ಅವರಿಗೆ ಸಿದ್ಧಿಸಿದೆ. ಪ್ರೇಕ್ಷಕರಲ್ಲಿ ತಮ್ಮ ಮೇಲಿರುವ ನಂಬಿಕೆಯನ್ನು ಮತ್ತಷ್ಟು ಹೊಳಪುಗಟ್ಟಿಸುವಂತೆ ಶಾಲಿನಿ ಶಾಲಿವುಡ್‍ನ ಕಾರ್ಯಕ್ರಮಗಳಿಗೆ ರೂಪುರೇಷೆ ಹಾಕಿಕೊಂಡಿದ್ದಾರೆ.

    ಮೊದಲಿಗೆ ಶಾಲಿನಿ ತಮ್ಮ ಚಾನೆಲ್‍ನಲ್ಲಿ ಪುಟ್‍ಪುಟ್ಟ ಮುದ್ದು ಮಕ್ಕಳ ಕಲರವದ ಮೂಲಕವೇ ಕಳೆತುಂಬುವ ನಿರ್ಧಾರ ಮಾಡಿದ್ದಾರೆ. ಕಿರಿಕ್ ಪಾರ್ಟಿ ಹೆಸರಿನ ಈ ಶೋನಲ್ಲಿ ಪುಟ್ಟ ಮಕ್ಕಳ ತೊದಲು ಮಾತುಗಳಲ್ಲಿಯೇ ಪ್ರತಿ ಪ್ರೇಕ್ಷಕರ ಮನಗೆಲ್ಲುವ ಇರಾದೆಯೊಂದಿಗೆ ಚೆಂದದ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಈ ಕಾರ್ಯಕ್ರಮವನ್ನೂ ಕೂಡಾ ಚಿತ್ರೀಕರಿಸಿಕೊಳ್ಳಲಾಗಿದೆ. ಯಾವ ಕಿಸುರೂ ಇಲ್ಲದ ತಾಜಾತಾಜ ಮನಸ್ಸುಗಳ ಮನೋಲೋಕಕ್ಕೆ ಲಗ್ಗೆಯಿಡುವ ಈ ಕಾರ್ಯಕ್ರಮದ ಪ್ರೋಮೋ ಕೂಡಾಈಗಾಗಲೇ ಬಿಡುಗಡೆಗೊಂಡಿದೆ. ಇನ್ನುಳಿದಂತೆ ಸೌಂದರ್ಯ ಸಂಬಂಧಿ ಕಾರ್ಯಕ್ರಮಗಳಿಂದ ಹಿಡಿದು ಎಲ್ಲ ಥರದ ಪ್ರೋಗ್ರಾಮುಗಳಿಗೂ ಶಾಲಿನಿ ತಯಾರಾಗಿದ್ದಾರೆ.

    ಇಲ್ಲಿ ಎಲ್ಲ ಇದೆ ಎಂದ ಮೇಲೆ ಸಿನಿಮಾದ ಹಾಜರಿ ಇಲ್ಲದಿರಲು ಸಾಧ್ಯವೇ? ಹೇಳಿಕೇಳಿ ಸಿನಿಮಾ ಎಂಬುದು ಶಾಲಿನಿಯವರ ಪ್ರಧಾನ ಆಸಕ್ತಿ. ಈ ಬಗೆಗಿನ ಅಪರೂಪದ ಕಾರ್ಯಕ್ರಮಗಳನ್ನು ರೂಪಿಸಲು ಅವರು ತಯಾರಾಗುತ್ತಿದ್ದಾರೆ. ಈ ತಲೆಮಾರಿನ ನಟ ನಟಿಯರು ನಿರ್ದೇಶಕರುಗಳನ್ನು ಮಾತ್ರವಲ್ಲದೇ ಹಳಬರನ್ನೂ ಮುಖಾಮುಖಿಯಾಗೋ ಇರಾದೆ ಶಾಲಿನಿಯವರದ್ದಾಗಿದೆ. ತುಂಬಾನೇ ಹೊಸತೆನ್ನಿಸುವಂಥಾ, ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳೇ ಥ್ರಿಲ್ಲ ಆಗುವಂತೆ ಶಾಲಿವುಡ್‍ನ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಿರಬೇಕೆಂಬುದು ಶಾಲಿನಿ ಅವರ ಬಯಕೆ. ಶಾಲಿವುಡ್ ಎಂಬ ಹೆಸರಿನಷ್ಟೇ ಆಕರ್ಷಕವಾದ ಕಾರ್ಯಕ್ರಮಗಳನ್ನು ಅವರೀಗಾಗಲೇ ಪಟ್ಟಿ ಮಾಡಿಕೊಂಡಿದ್ದಾರೆ.

    ಅಷ್ಟಕ್ಕೂ ಬಿಗ್‍ಬಾಸ್ ಶೋ ಮುಗಿಸಿಕೊಂಡ ಕ್ಷಣದಲ್ಲಿಯೇ ಶಾಲಿನಿ ಈ ಯೂಟ್ಯೂಬ್ ಚಾನೆಲ್ ಶುರು ಮಾಡುವ ನಿರ್ಧಾರಕ್ಕೆ ಬಂದಿದ್ದರಂತೆ. ಈಗ್ಗೆ ಒಂದೂವರೆ ವರ್ಷದ ಹಿಂದೆಯೇ ಅದಕ್ಕೆ ಶಾಲಿವುಡ್ ಎಂಬ ಟೈಟಲ್ ಅನ್ನೂ ನಿಕ್ಕಿ ಮಾಡಿಕೊಳ್ಳಾಗಿತ್ತು. ಕೇಸರಿ ವರ್ಣದ ಹನುಮಾನ್ ಚಿತ್ರದ ಮೂಲಕ ಭಾರೀ ಪ್ರಸಿದ್ಧಿ ಪಡೆದುಕೊಂಡಿರುವ ಕರಣ್ ಆಚಾರ್ಯ ಶಾಲಿವುಡ್ ಲೋಗೋವನ್ನೂ ರೂಪಿಸಿ ಕೊಟ್ಟಿದ್ದರಂತೆ. ಆದರೆ ಬೇರೆ ಬೇರೆ ಕಾರ್ಯಕ್ರಮ, ನಟನೆಯಲ್ಲಿ ಬ್ಯುಸಿಯಾದ ಪರಿಣಾಮವಾಗಿ ಶಾಲಿವುಡ್ ಕನಸು ಮುಂದೂಡಲ್ಪಡುತ್ತಿರೋದರ ಬಗ್ಗೆ ಶಾಲಿನಿಯವರಿಗೇ ಬೇಸರವಿತ್ತು.

    ಈ ವರ್ಷದ ಆರಂಭವನ್ನವರು ಶಾಲಿವುಡ್ ಎಂಬ ಕನಸಿನೊಂದಿಗೇ ಎದುರುಗೊಂಡಿದ್ದಾರೆ. ಆನವರಿ ಇಪ್ಪತ್ತರಂದು ಅವರ ಪತಿಯ ಹುಟ್ಟುಹಬ್ಬದಂದೇ ಶಾಲಿವುಡ್ ಯೂಟ್ಯೂಬ್ ಚಾನೆಲ್ ಅನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಆ ನಂತರ ಮತ್ಯಾವುದರತ್ತಲೂ ಗಮನ ಹರಿಸದೇ ಈ ಚಾನೆಲ್ ಅನ್ನು ರೂಪಿಸುವತ್ತಲೇ ತಮ್ಮ ಸಮಯವನ್ನೆಲ್ಲ ಶಾಲಿನಿ ಮುಡಿಪಾಗಿಟ್ಟಿದ್ದಾರೆ. ಇದೀಗ ಈ ಚಾನೆಲ್‍ನ ಎಲ್ಲ ಕೆಲಸ ಕಾರ್ಯಗಳೂ ಅಂತಿಮ ಘಟ್ಟ ತಲುಪಿಕೊಳ್ಳುತ್ತಿವೆ. ಇದೇ ತಿಂಗಳ ಹದಿನಾಲಕ್ಕನೇ ತಾರೀಕು ಪ್ರೇಮಿಗಳ ದಿನದಂದು ಅಥವಾ ಅದರ ಆಸು ಪಾಸಲ್ಲಿಯೇ ಶಾಲಿವುಡ್‍ಗೆ ಚಾಲನೆ ನೀಡಲು ಶಾಲಿನಿ ನಿರ್ಧರಿಸಿದ್ದಾರೆ. ಇದು ಕನ್ನಡ ಪ್ರೇಕ್ಷಕರಿಗೆ ಖಂಡಿತಾ ಶುಭ ಸುದ್ದಿ.