Tag: ಯುವ ಉದ್ಯಮಿ

  • ಐ ಲವ್ ಯು ನೀಲಂ- ಆತ್ಮಹತ್ಯೆಗೆ ಶರಣಾದ ಯುವ ಉದ್ಯಮಿ

    ಐ ಲವ್ ಯು ನೀಲಂ- ಆತ್ಮಹತ್ಯೆಗೆ ಶರಣಾದ ಯುವ ಉದ್ಯಮಿ

    – ನಾಲ್ಕು ಕಂಪನಿ ಹೊಂದಿದ್ದ ಯುವಕ

    ಭೋಪಾಲ್: 28 ವರ್ಷದ ಯುವ ಉದ್ಯಮಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ ಉದ್ಯಮಿಯ ಡೈರಿ ಲಭ್ಯವಾಗಿದ್ದು, ಅದರಲ್ಲಿ ಐ ಲವ್ ಯು ನೀಲಂ ಎಂದು ಬರೆಯಲಾಗಿದೆ.

    28 ವರ್ಷದ ಪಂಕಜ್ ಆತ್ಮಹತ್ಯೆಗೆ ಶರಣಾದ ಯುವ ಉದ್ಯಮಿ. ಇಂದೋರ್ ನಗರದ ಕನಾಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ನಲ್ಲಿ ಪಂಕಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಪಂಕಜ್ ಮುಂಬೈನಲ್ಲಿ ನಾಲ್ಕು ಇವೆಂಟ್ ಮ್ಯಾನೇಜ್‍ಮೆಂಟ್ ಕಂಪನಿ ಮಾಲೀಕರಾಗಿದ್ದು, ಇವರ ಹೆಸರು ಗಿನ್ನಿಸ್ ಬುಕ್ ನಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ.

    ಪಂಕಜ್ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಕೋಣೆಯಲ್ಲಿ ಲಭ್ಯವಿದ್ದ ಡೈರಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಡೈರಿಯಲ್ಲಿ ಐ ಲವ್ ಯು ನೀಲಂ ಎಂದು ಬರೆಯಲಾಗಿದ್ದ, ಕೆಲ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾಹಿತಿ ಇದೆ.

    ರಾಜಕೀಯ ಮುಖಂಡ ಸಂಜಯ್ ಶುಕ್ಲಾ ಮಗನ ಮದುವೆ ಆಯೋಜಿಸಲು ಪಂಕಜ್ ಇಂದೋರ್ ಗೆ ಆಗಮಿಸಿದ್ದರು. ಮಂಗಳವಾರ ರಾತ್ರಿ ಮದುವೆ ಕೆಲಸ ಮಾಡಿದ್ದ ಪಂಕಜ್, ಸುಸ್ತಾಗಿದೆ ಎಂದು ಹೋಟೆಲ್ ಗೆ ತೆರಳಿದ್ದರು. ಬೆಳಗ್ಗೆ ಬಂದ ಸಿಬ್ಬಂದಿ ಕೋಣೆಯ ಬಾಗಿಲು ತೆಗೆದಾಗ ನೇಣು ಬಿಗಿದು ಸ್ಥಿತಿಯಲ್ಲಿ ಪಂಕಜ್ ಶವ ಪತ್ತೆಯಾಗಿತ್ತು.

  • ‘ಮನೆಯೇ’ ಮಂತ್ರಾಲಯದಿಂದ ಪ್ರಭಾವಿತರಾದ ಯುವ ಉದ್ಯಮಿ- ಬಡವರ ಸಂಕಷ್ಟಕ್ಕೆ ಸಹಾಯಹಸ್ತ

    ‘ಮನೆಯೇ’ ಮಂತ್ರಾಲಯದಿಂದ ಪ್ರಭಾವಿತರಾದ ಯುವ ಉದ್ಯಮಿ- ಬಡವರ ಸಂಕಷ್ಟಕ್ಕೆ ಸಹಾಯಹಸ್ತ

    – ಅಮ್ಮನ ನೆನಪಿಗಾಗಿ ಕ್ಯಾಂಟೀನ್ ಆರಂಭ

    ಯಾದಗಿರಿ: ಹಣ ಇದ್ದವರು ಬಡವರ ಕಷ್ಟಕ್ಕೆ ಮರುಗುವುದಿಲ್ಲ ಎಂಬ ಮಾತಿದೆ. ಆದರೆ ಈ ಮಾತನ್ನು ಯಾದಗಿರಿ ಜಿಲ್ಲೆಯ ಶಹಪುರದ ಯುವ ಉದ್ಯಮಿ ಗುರು ಮಣಿಮಠ ಹುಸಿಯಾಗಿಸಿದ್ದಾರೆ.

    ಶಹಪುರ ಪಟ್ಟಣದಲ್ಲಿ ಯಾರಿಗಾದರೂ ಕಷ್ಟ ಎಂದು ಬಂದಾಗ ಅವರಿಗೆ ಗುರು ಸಹಾಯ ಹಸ್ತ ಚಾಚುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಪಬ್ಲಿಕ್ ಟಿವಿಯ ಮನವಿಗೆ ಗುರು ಮಣಿಕಂಠ ಸ್ಪಂದಿಸಿದ ರೀತಿ ಇದೀಗ ಎಲ್ಲರೂ ಮೆಚ್ಚುವಂತದ್ದಾಗಿದೆ.

    ಸದ್ಯ ಯಾದಗಿರಿಯಲ್ಲಿ ಲಾಕ್ ಡೌನ್ ಸಂಪೂರ್ಣ ಸಡಿಲಿಕೆಯಾಗಿದೆ. ಹೀಗಿದ್ದರೂ ಕೆಲ ಕುಟುಂಬಗಳು ಇನ್ನೂ ಸಂಕಷ್ಟದಿಂದ ಹೊರ ಬಂದಿಲ್ಲ. ಒಂದು ಹೊತ್ತು ಊಟಕ್ಕೂ ದಿನಸಿಗಳಿಲ್ಲದೆ ಪರದಾಡುತ್ತಿವೆ. ಇಂತಹ ಕುಟುಂಬಗಳು ಪಬ್ಲಿಕ್ ಟಿವಿಗೆ ನೆರವು ಕೋರಿ ದೂರವಾಣಿಗಳ ಮೂಲಕ ಮನವಿ ಮಾಡಿದ್ದವು. ಈ ವಿಷಯ ತಿಳಿದ ಗುರು, ಸಂಕಷ್ಟದಲ್ಲಿರುವ ಕುಟುಂಬಗಳ ಬಳಿಗೆ ತೆರಳಿ ಆ ಕುಟುಂಬಗಳ ನೆರವಿಗೆ ನಿಂತಿದ್ದಾರೆ. 15 ದಿನಕ್ಕೆ ಆಗುವಷ್ಟು ದಿನಸಿಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುವ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮದಿಂದ ಪ್ರಭಾವಿತರಾಗಿರುವ ಗುರು ಮಣಿಕಂಠ, ಕೊರೊನಾ ವಿರುದ್ಧ ತಮ್ಮದೇ ರೀತಿಯ ಹೋರಾಟ ನಡೆಸಿದ್ದಾರೆ. ಸದ್ಯ ಸಂಕಷ್ಟದಲ್ಲಿರುವ ರೈತರು ಬೆಳೆದ ತರಕಾರಿ, ಹಣ್ಣು-ಹಂಪಲು ಖರೀದಿಸಿ ಅದನ್ನು ಉಚಿತವಾಗಿ ಬಡವರಿಗೆ ಹಂಚುತ್ತಿದ್ದಾರೆ.

    ಮುಂಜಾಗ್ರತಾ ಹಿತದೃಷ್ಟಿಯಿಂದ ಶಹಪುರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸ್ಯಾನಿಟೈಸರ್ ಸ್ಪ್ರೇ ಟೆನಲ್ ಹಾಕಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಅವರ ತಾಯಿಯ ನೆನಪಿಗಾಗಿ ಅಮ್ಮ ಕ್ಯಾಂಟೀನ್ ಆರಂಭಿಸಿದ ಇವರು, ಬರೀ ಹತ್ತು ರೂಪಾಯಿಯಲ್ಲಿ ಬಡವರ ಮತ್ತು ಶ್ರಮಿಕರ ಹೊಟ್ಟೆ ತುಂಬಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಜನರಿಗಾಗಿ ಪಬ್ಲಿಕ್ ಟಿವಿ ಜೊತೆ ಸದಾ ಕೈ ಜೋಡಿಸುವ ಗುರು ಮಣಿಕಂಠರಿಗೆ ಕಾರ್ಯಕ್ಕೆ ಜಿಲ್ಲೆಯಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

  • ಬೀದರ್‌ನಲ್ಲಿ ಯುವ ಉದ್ಯಮಿ ಕಿಡ್ನಾಪ್

    ಬೀದರ್‌ನಲ್ಲಿ ಯುವ ಉದ್ಯಮಿ ಕಿಡ್ನಾಪ್

    ಬೀದರ್: ನಗರದ ಯುವ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಣ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

    ನಗರದ ನಿವಾಸಿ ಅಭಿಷೇಕ್ ಇನಾನಿ ಅಪಹರಣವಾದ ಯುವ ಉದ್ಯಮಿ. ಅಭಿಷೇಕ್ ಅವರು ಬುಧವಾರ ಸಂಜೆ ಕಂಪನಿ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಕೋಳಾರದ ಕೈಗಾರಿಕಾ ಪ್ರದೇಶದಲ್ಲಿರುವ ಆಂಜನೇಯ ದೇವಸ್ಥಾನ ಸಮೀಪದ ನಿರ್ಜನ ಪ್ರದೇಶದಲ್ಲಿ ಅಪಹರಣ ಮಾಡಿದ್ದಾರೆ.

    ಅಭಿಷೇಕ್ ಅವರು ಕೋಳಾರ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ದಾಲ್ ಮಿಲ್ ಫ್ಯಾಕ್ಟರಿ ನಡೆಸುತ್ತಿದ್ದರು. ಅಪಹರಣಕ್ಕೂ ಎರಡು ದಿನ ಮುಂಚೆ ಅಭಿಷೇಕ್ ಅವರಿಗೆ ದುಷ್ಕರ್ಮಿಗಳು ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಅಭಿಷೇಕ್ ಅವರು ಬೀದರ್ ಜಿಲ್ಲಾ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೆ ದೂರು ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ದುಷ್ಕರ್ಮಿಗಳು ಹಣದಾಸೆಗೆ ಅಭಿಷೇಕ್ ಅವರನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬುಧವಾರ ರಾತ್ರಿಯಿಂದಲೇ ಶೋಧ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.