Tag: ಯುವರಾಜ್ ಸಿಂಗ್

  • ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ನಿಷೇಧ- ಹಿಂದೂ ಧಾರ್ಮಿಕ ಆಚರಣೆ ಮೇಲೆ ಮಾತ್ರ ನಿಷೇಧ ಏಕೆ: ಚೇತನ್ ಭಗತ್ ಪ್ರಶ್ನೆ

    ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ನಿಷೇಧ- ಹಿಂದೂ ಧಾರ್ಮಿಕ ಆಚರಣೆ ಮೇಲೆ ಮಾತ್ರ ನಿಷೇಧ ಏಕೆ: ಚೇತನ್ ಭಗತ್ ಪ್ರಶ್ನೆ

    ನವದೆಹಲಿ: ದೀಪಾಳಿಗೆ ಪಟಾಕಿ ನೀಷೆಧಿಸುವುದು ಕ್ರಿಸ್‍ಮಸ್ ಹಬ್ಬಕ್ಕೆ ಕ್ರಿಸ್‍ಮಸ್ ಟ್ರೀ ನಿಷೇಧ ಮಾಡಿದ ಹಾಗೆ ಎಂದು ಲೇಖಕ ಚೇತನ್ ಭಗತ್ ಟ್ವೀಟ್ ಮಾಡಿದ್ದಾರೆ.

    ರಾಷ್ಟ್ರ ರಾಜಧಾನಿಯಲ್ಲಿ ನವೆಂಬರ್ 1 ರವರೆಗೆ ಪಟಾಕಿಗಳನ್ನು ಮಾರಾಟವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರೋ ಹಿನ್ನೆಲೆಯಲ್ಲಿ ಲೇಖಕ ಚೇತನ್ ಭಗತ್ ಟ್ವೀಟ್ ಮಾಡಿದ್ದು, ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ಮಾತ್ರ ಏಕೆ ಈ ನಿಷೇಧ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ತೀರ್ಪಿನ ಕುರಿತು ಬಾಲಿವುಡ್ ಹಾಗೂ ಕ್ರಿಕೆಟ್‍ನ ಹಲವು ತಾರೆಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

    ಲೇಖಕ ಚೇತನ್ ಭಗತ್ ಅವರು ಈ ಕುರಿತು ಟ್ವಿಟ್ಟರ್‍ನಲ್ಲಿ ಸರಣಿ ಟ್ವೀಟ್‍ಗಳನ್ನು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ದೀಪಾಳಿ ಸಂದರ್ಭದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿದ್ದು ಯಾಕೆ? ಇದು ಸಂಪೂರ್ಣ ನಿಷೇಧವೇ? ಪಟಾಕಿ ಇಲ್ಲದ ದೀಪಾಳಿಯನ್ನು ಮಕ್ಕಳು ಹೇಗೆ ಆಚರಿಸುತ್ತಾರೆ? ಕೇವಲ ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ಮಾತ್ರ ಹೀಗೆ ಮಾಡಲು ಧೈರ್ಯ ಹೇಗೆ? ಶೀಘ್ರದಲ್ಲೇ ಮೇಕೆಗಳ ಬಲಿ ಹಾಗೂ ಮೊಹರಂ ರಕ್ತಪಾತವನ್ನೂ ನಿಷೇಧಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

    ದೀಪಾಳಿಗೆ ಪಟಾಕಿಯನ್ನು ನೀಷೆಧ ಮಾಡುವುದು ಕ್ರಿಸ್‍ಮಸ್ ಹಬ್ಬಕ್ಕೆ ಕ್ರಿಸ್‍ಮಸ್ ಟ್ರೀ ನಿಷೇಧ ಮಾಡಿದ ಹಾಗೆ. ಬಕ್ರೀದ್‍ಗೆ ಮೇಕೆಗಳನ್ನ ನಿಷೇಧಿಸಿದ ಹಾಗೆ. ನಿಯಂತ್ರಣ ಮಾಡಿ. ಆದ್ರೆ ನಿಷೇಧ ಬೇಡ. ಸಂಪ್ರದಾಯಗಳನ್ನ ಗೌರವಿಸಿ ಎಂದಿದ್ದಾರೆ.

    ಇದು ಕೇವಲ ವರ್ಷದಲ್ಲಿ ಒಂದು ಸಲ ಬರುವಂತದ್ದು. ನಮ್ಮ ಬಹುದೊಡ್ಡ ಹಬ್ಬವಿದು. ಯಾವುದೇ ನಿಷೇಧಕ್ಕಿಂತ ಊಬರ್ ಹೆಚ್ಚಿನ ಮಾಲಿನ್ಯವನ್ನ ಉಳಿಸಿದೆ. ಹೊಸ ಪರಿಹಾರಗಳೊಂದಿಗೆ ಬನ್ನಿ. ನಿಷೇಧವಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಭಗತ್ ಅವರ ಟ್ವೀಟ್‍ಗಳಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದು, ನೀವು ಹೇಳಿರುವ ಆಚರಣೆಗಳ ಉದಾಹರಣೆಗಳನ್ನ ನೋಡುವುದಾದ್ರೆ ಅವೆಲ್ಲಾ ಅಚರಣೆಗಳ ಅವಿಭಾಜ್ಯ ಅಂಗ. ಅವುಗಳನ್ನ ಬ್ಯಾನ್ ಮಾಡುವುದೆಂದರೆ ದೀಪಾವಳಿಗೆ ದೀಪಗಳನ್ನ ಬ್ಯಾನ್ ಮಾಡಿದಂತೆ. ಪಟಾಕಿಗಳು ಹೆಚ್ಚುವರಿಯಾಗಿ ಸೇರಿಸಲಾಗಿರುವಂತದ್ದು ಎಂದಿದ್ದಾರೆ.

    ಕ್ರಿಕೆಟರ್ ಯುವರಾಜ್ ಸಿಂಗ್ ತಮ್ಮ ಟ್ವಿಟ್ಟರ್‍ನಲ್ಲಿ `ಸೇ ನೋ ಟು ಕ್ರ್ಯಾಕರ್ಸ್’ ಎಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಾಲಿನ್ಯರಹಿತ ದೀಪಾವಳಿ ಆಚರಿಸೋಣ ಎಂದಿದ್ದಾರೆ.

    ಇನ್ನುಳಿದಂತೆ ನಿರೂಪಕರಾದ ರಾಕಿ ಮತ್ತು ಮಯೂರ್ ಪಟಾಕಿಯನ್ನ ವಿರೋಧಿಸಿದ್ದಾರೆ. ಪಟಾಕಿಯ ಹೊಗೆ ಅಂದ್ರೆ ಕಾನ್ಸರ್‍ಕಾರಕ ಅಂಶಗಳು. ಜೊತೆಗೆ ತೀವ್ರ ಉಸಿರಾಟದ ತೊಂದರೆಗಳನ್ನ ಉಂಟು ಮಾಡಬಹುದಾದ ಮಾಲಿನ್ಯ. ಇದರಿಂದ ಮಕ್ಕಳು ಹಾಗೂ ಹಿರಿಯರಿಗೆ ಹೆಚ್ಚಾಗಿ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

    ದೀಪಾವಳಿ ಸಂದರ್ಭದಲ್ಲಿ ವಾಯುಮಾಲಿನ್ಯ ಹೆಚ್ಚಾಗುವ ಕಾರಣ 2016 ನವೆಂಬರ್ ನಲ್ಲಿಯೇ ಸುಪ್ರೀಂ ಕೋರ್ಟ್ ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಪ್ರದೇಶದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿತ್ತು. ಕಳೆದ ತಿಂಗಳು ಕೋರ್ಟ್ ತಾತ್ಕಾಲಿಕವಾಗಿ ಪಟಾಕಿ ಮಾರಾಟವನ್ನು ನಿಷೇಧಿಸಿತ್ತು.

    2015 ರಲ್ಲಿ ದೀಪಾವಳಿ ಹಬ್ಬದಂದು ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದರಿಂದ ಜನರಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಂಡುಬಂದಿತ್ತು. ಹೀಗಾಗಿ 2015 ರಲ್ಲಿ ಮೂವರು ಬಾಲಕರು ದೆಹಲಿಯಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ ಎಂದು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆರೋಗ್ಯವಂತರಾಗಿ ಜೀವನ ನಡೆಸಬೇಕೆಂದು ಸಂವಿಧಾನ ನಮಗೆ ಬದುಕುವ ಹಕ್ಕು ನೀಡಿದೆ. ಆದರೆ ಪಟಾಕಿಯಲ್ಲಿರುವ ರಾಸಾಯನಿಕ ಅಂಶಗಳಿಂದಾಗಿ ವಾಯುಮಾಲಿನ್ಯ ಆಗುವುದಲ್ಲದೇ ನಮಗೆ ಅಸ್ತಮಾ, ಕೆಮ್ಮು, ಇತ್ಯಾದಿ ಆರೋಗ್ಯ ಸಮಸ್ಯೆಗಳು ಬರುತ್ತಿದೆ. ಹೀಗಾಗಿ ಪಟಾಕಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಬಾಲಕರು ಅರ್ಜಿಯಲ್ಲಿ ಮನವಿ ಮಾಡಿದ್ದರು.

    ಆದರೆ ಪಟಾಕಿ ಅಂಗಡಿಯ ಮಾಲೀಕರು, ದೆಹಲಿಯಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿದರೆ ಜೀವನೋಪಾಯಕ್ಕೆ ಸಮಸ್ಯೆಯಾಗುತ್ತದೆ. ಹೀಗಾಗಿ ನಿಷೇಧ ಮಾಡಬಾರದು ಎಂದು ವಾದಿಸಿದ್ದರು. ಕೋರ್ಟ್ ಸಾರ್ವಜನಿಕರ ಆರೋಗ್ಯದ ಕಾಳಜಿಯಿಂದ ನವೆಂಬರ್ 1ರ ರವರೆಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ ಆದೇಶ ಪ್ರಕಟಿಸಿದೆ.

    https://twitter.com/Crimson_Bud/status/917343745552478209?

    https://twitter.com/autumnrainwish/status/917272332032282624?

    https://twitter.com/YUVSTRONG12/status/917045683126902784?

  • ನೆಹ್ರಾ, ಜಡೇಜಾ, ಇರ್ಫಾನ್, ಯುವರಾಜ್ ಸಿಂಗ್ ಹಿಂದಿಕ್ಕಿ ಬೂಮ್ರಾ ದಾಖಲೆ!

    ನೆಹ್ರಾ, ಜಡೇಜಾ, ಇರ್ಫಾನ್, ಯುವರಾಜ್ ಸಿಂಗ್ ಹಿಂದಿಕ್ಕಿ ಬೂಮ್ರಾ ದಾಖಲೆ!

    ಬೆಂಗಳೂರು: ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಬೂಮ್ರಾ ಆಶಿಷ್ ನೆಹ್ರಾ, ರವೀಂದ್ರ ಜಡೇಜಾ, ಇರ್ಫಾನ್ ಪಠಾಣ್, ಯುವರಾಜ್ ಸಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಸದ್ಯ ಸ್ಪಿನ್ನರ್ ಆರ್.ಅಶ್ವಿನ್ ಹೆಸರಲ್ಲಿದೆ. ಇದುವರೆಗೆ 52 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ ಅಶ್ವಿನ್.

    ಟಾಪ್ 5 ಬೌಲರ್: ಆರ್.ಅಶ್ವಿನ್ – 52 ವಿಕೆಟ್, ಜಸ್ಪ್ರೀತ್ ಬೂಮ್ರಾ – 36 ವಿಕೆಟ್, ಆಶಿಷ್ ನೆಹ್ರಾ – 34, ರವೀಂದ್ರ ಜಡೇಜಾ 31, ಇರ್ಫಾನ್ ಪಠಾಣ್ ಮತ್ತು ಯುವರಾಜ್ ಸಿಂಗ್ ತಲಾ 28 ವಿಕೆಟ್ ಪಡೆದು ಮೊದಲ ಐದು ಸ್ಥಾನದಲ್ಲಿದ್ದಾರೆ.

    ರಾಂಚಿಯಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಬೂಮ್ರಾ ಈ ದಾಖಲೆ ಮಾಡಿದ್ದಾರೆ. ಈ ಪಂದ್ಯದಲ್ಲಿ 3 ಓವರ್ ನಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ಇದುವರೆಗೆ ಬೂಮ್ರಾ ಒಟ್ಟು 26 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದು 36 ವಿಕೆಟ್ ಪಡೆದಿದ್ದಾರೆ. ಆಸೀಸ್ ವಿರುದ್ಧ 5 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ ಬೂಮ್ರಾ.

  • ಟಿ20 ಸರಣಿಗೆ ಯುವಿ ಕೈಬಿಟ್ಟಿದ್ದು ಯಾಕೆ: ಬಿಸಿಸಿಐ ವಿರುದ್ಧ ಅಭಿಮಾನಿಗಳು ಗರಂ

    ಟಿ20 ಸರಣಿಗೆ ಯುವಿ ಕೈಬಿಟ್ಟಿದ್ದು ಯಾಕೆ: ಬಿಸಿಸಿಐ ವಿರುದ್ಧ ಅಭಿಮಾನಿಗಳು ಗರಂ

    ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಮೂರು ಟಿ20 ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಪಟ್ಟಿಯಲ್ಲಿ ಯುವರಾಜ್ ಸಿಂಗ್ ಅವರನ್ನು ಕೈ ಬಿಟ್ಟದ್ದಕ್ಕೆ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

    ಅಕ್ಟೋಬರ್ 7ರಿಂದ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಪ್ರಾರಂಭವಾಗಲಿದ್ದು ರಾಂಚಿಯಲ್ಲಿ ಮೊದಲ ಪಂದ್ಯ ನಡೆಯಲಿದೆ. ಈ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿಯ ಎಂಎಸ್‍ಕೆ ಪ್ರಸಾದ್ ಅವರ ನೇತೃತ್ವದಲ್ಲಿ 15 ಜನ ಆಟಗಾರರ ಆಯ್ಕೆ ನಡೆದಿದೆ.

    ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ಯುವರಾಜ್ ಸ್ಥಾನ ಸಿಗದೇ ಇದ್ದರೂ ಟಿ20ಗೆ ಆಯ್ಕೆಯಾಗುವ ತಂಡದಲ್ಲಿ ಸ್ಥಾನ ಸಿಗಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಯುವಿ ಯನ್ನು ಕೈಬಿಟ್ಟದ್ದಕ್ಕೆ ಅಭಿಮಾನಿಗಳಿಗೆ ನಿರಾಸೆಯಾಗಿದೆ.

     

    http://twitter.com/anuragd123/status/914709755158962176

    ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ನ ನಡೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯುವರಾಜ್ ಸಿಂಗ್ ಮತ್ತೆ ಕಮ್ ಬ್ಯಾಕ್ ಮಾಡಲು ಬಿಸಿಸಿಐ ಅವಕಾಶ ನೀಡಬೇಕಿತ್ತು. ಆದರೆ ಯುವರಾಜ್ ಆಯ್ಕೆಯಲ್ಲಿ ಬಿಸಿಸಿಐ ಯಾಕೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಯುವರಾಜ್ ಸಿಂಗ್ ಆಸ್ಟ್ರೇಲಿಯಾ ವಿರುದ್ಧ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಉತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರನಾಗಿದ್ದು, ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲೂ ಸಹ ಆಸ್ಟ್ರೇಲಿಯಾ ತಂಡವನ್ನು ಕಾಡಬಲ್ಲ ಸಾಮಥ್ರ್ಯ ಹೊಂದಿದ್ದಾರೆ. ಅಲ್ಲದೇ ಭಾರತ ಆಡಿದ ಹಲವು ಟಿ20 ಪಂದ್ಯಗಳಲ್ಲಿ ಯುವಿ ಗೆಲುವಿಗೆ ಮುಖ್ಯ ಪಾತ್ರವಾಹಿಸುತ್ತಿದ್ದರು.

    ಸುರೇಶ್ ರೈನಾ ಕೂಡ ಟಿ20 ಸರಣಿಗೆ ಆಯ್ಕೆಯಾಗಿಲ್ಲ. ಜೊತೆಗೆ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಜಿಂಕ್ಯಾ ರಹಾನೆಯನ್ನು ಕೂಡ ಕೈ ಬಿಡಲಾಗಿದೆ. ಆದರೆ ವೇಗದ ಬೌಲರ್ 38 ವರ್ಷದ ಆಶಿಶ್ ನೆಹ್ರಾ ಅವರನ್ನು ಸರಣಿಗೆ ಆಯ್ಕೆ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

    ಟಿ20 ಸ್ಟ್ರೈಕ್ ರೇಟ್:
    ಯುವರಾಜ್ ಸಿಂಗ್ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 10 2013ರಲ್ಲಿ ರಾಜ್‍ಕೋಟ್ ನಲ್ಲಿ ನಡೆದ ಪಂದ್ಯದಲ್ಲಿ 57 ಬಾಲ್‍ಗಳಲ್ಲಿ 5 ಸಿಕ್ಸ್ 8 ಬೌಂಡರಿ ಸಹಿತ 77 ರನ್‍ಗಳನ್ನು ಬಾರಿಸಿದ್ದರು. ಜೊತೆಗೆ 2007ರ ಟಿ 20 ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 38 ಬಾಲ್‍ಗೆ 70 ರನ್ ಬಾರಿಸಿ ಭಾರತ ವಿಶ್ವ ಕಪ್ ಫೈನಲ್ ಪ್ರವೇಶ ಮಾಡಲು ಪ್ರಮುಖ ಪಾತ್ರ ವಹಿಸಿದ್ದರು. 2017 ಫೆ.1ರಂದು ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಪಂದ್ಯವೇ ಯುವಿ ಕೊನೆಯ ಟಿ 20 ಪಂದ್ಯವಾಗಿದ್ದು, ಈ ಪಂದ್ಯದಲ್ಲಿ 27 ರನ್ ಹೊಡೆದಿದ್ದರು.

    https://youtu.be/MHFgWsfZBk4

  • 6 ಎಸೆತಗಳಲ್ಲಿ 6 ಸಿಕ್ಸ್ ಚಚ್ಚಿದ ಇಂಗ್ಲೆಂಡ್ ಬ್ಯಾಟ್ಸ್ ಮನ್

    6 ಎಸೆತಗಳಲ್ಲಿ 6 ಸಿಕ್ಸ್ ಚಚ್ಚಿದ ಇಂಗ್ಲೆಂಡ್ ಬ್ಯಾಟ್ಸ್ ಮನ್

    ಲಂಡನ್: ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ಒಂದೇ ಓವರ್ ನಲ್ಲಿ ಆರ್ ಸಿಕ್ಸರ್ ಬಾರಿಸಿದ್ದು ನಿಮಗೆ ಗೊತ್ತೆ ಇದೆ. ಈಗ ಇಂಗ್ಲೆಂಡ್ ಬ್ಯಾಟ್ಸ್ ಮನ್ ಒಬ್ಬರು ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಸುದ್ದಿಯಾಗಿದ್ದಾರೆ.

    ನ್ಯಾಟ್‍ವೆಸ್ಟ್ ಟಿ 20 ಬ್ಲಾಸ್ಟ್ ನಲ್ಲಿ ವೆರ್ಸೆಸ್ಟ್ ರ್ಶೈರ್ ಬ್ಯಾಟ್ಸ್ ಮನ್ ರಾಸ್ ವೈಟ್ಲಿ 6 ಸಿಕ್ಸ್ ಸಿಡಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ಯಾರ್ಕ್ ಶೈರ್ 6 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತ್ತು. ಈ ರನ್ ಗುರಿಯನ್ನು ಬೆನ್ನಟ್ಟುವ ವೇಳೆ ರಾಸ್ ವೈಟ್ಲಿ ಈ ಸಾಧನೆ ಮಾಡಿದ್ದಾರೆ.

    ಎಡಗೈ ಸ್ಪಿನ್ನರ್ ಕಾರ್ಲ್ ಕಾವರ್ ಅವರ ಎಲ್ಲ ಎಸೆತವನ್ನು ವೈಟ್ಲಿ ಸಿಕ್ಸರ್‍ಗೆ ಅಟ್ಟಿದ್ದರು. ವೈಟ್ಲಿ 26 ಎಸೆತಗಳಲ್ಲಿ 56 ರನ್ ಸಿಡಿಸಿದರೂ ವೆರ್ಸೆಸ್ಟ್ ರ್ಶೈರ್ 7 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ 37 ರನ್ ಗಳಿಂದ ಪಂದ್ಯವನ್ನು ಕಳೆದುಕೊಂಡಿದೆ.

    ಪ್ರಥಮ ದರ್ಜೆ ಕ್ರಿಕಟ್ ನಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್‍ನ ಗ್ಯಾರಿ ಸೋಬರ್ಸ್ 6 ಸಿಕ್ಸ್ ಸಿಡಿಸಿದ್ದಾರೆ. 1968ರಲ್ಲಿ ನಾಟಿಂಗ್ ಹ್ಯಾಮ್ ಶೈರ್ ಪರ ಆಡುತ್ತಿದ್ದಾಗ ಕೌಂಟಿ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದರು.

    1985ರಲ್ಲಿ ರವಿಶಾಸ್ತ್ರಿ ರಣಜಿ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, ಟಿ-20 ಕ್ರಿಕೆಟ್ ನಲ್ಲಿ ಯುವರಾಜ್ ಸಿಂಗ್ 6 ಸಿಕ್ಸ್ ಸಿಡಿಸಿದ್ದರು.

     

    https://twitter.com/Cob_Adder/status/889379066180235264

    https://twitter.com/iTharunG/status/889173363163185152

     

  • ಹುಟ್ಟುಹಬ್ಬದ ದಿನದಂದು ಧೋನಿಗೆ ಹೊಸ ಹೆಸರಿಟ್ಟ ಯುವಿ

    ಹುಟ್ಟುಹಬ್ಬದ ದಿನದಂದು ಧೋನಿಗೆ ಹೊಸ ಹೆಸರಿಟ್ಟ ಯುವಿ

    ಹೊಸದಿಲ್ಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ಅವರು 36ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಆಟಗಾರರಾದ ಯುವರಾಜ್ ಸಿಂಗ್, ಸೆಹ್ವಾಗ್ ಸೇರಿದಂತೆ ಹಲವಾರು ಆಟಗಾರು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

    ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು ಟ್ವೀಟ್ ಮಾಡಿ ಹೆಲಿಕಾಪ್ಟರ್ ಧೋನಿ ಎಂದು ಕರೆದು ಶುಭಾಶಯ ಕೋರಿದ್ದಾರೆ. ಕ್ರಿಕೆಟ್ ಚರಿತ್ರೆಯಲ್ಲಿ ನಿಮ್ಮ ಸಾಧನೆ ಇನ್ನೂ ಹೆಚ್ಚಾಗಲಿ. ಈ ಹುಟ್ಟುಹಬ್ಬದ ಕೇಕ್ ನಿಮಗಾಗಿ ಕಾಯುತ್ತಿದೆ ಎಂದು ಟ್ವೀಟರ್‍ನಲ್ಲಿ ಶುಭ ಕೋರಿದ್ದಾರೆ.

    ಕ್ಯಾಪ್ಟನ್ ಕೂಲ್ ಧೋನಿ ಹೆಲಿಕಾಪ್ಟರ್ ಶಾಟ್ ಹಿಂದೆ ನೋವಿನ ಕಥೆಯಿದೆ. ಧೋನಿ ಅವರಿಗೆ ಈ ರೀತಿಯ ಸಿಕ್ಸರ್ ಹೊಡೆಯುವುದನ್ನು ಕಲಿಸಿಕೊಟ್ಟವರು ಸ್ನೇಹಿತ ಮಾಜಿ ರಣಜಿ ಆಟಗಾರ ಸಂತೋಷ್ ಲಾಲ್. ಧೋನಿ ಮತ್ತು ಸಂತೋಷ್ ಲಾಲ್ ಈ ಹಿಂದೆ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಲಾಲ್ ಉತ್ತಮ ಬ್ಯಾಟ್ಸ್ ಮನ್ ಆಗಿದ್ದರು. ಇಬ್ಬರು ಒಟ್ಟಿಗೆ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಧೋನಿ ಹೆಲಿಕಾಪ್ಟರ್ ಶಾಟ್ ಹೊಡೆಯುವದುನ್ನು ಹೇಳಿಕೊಟ್ಟಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಸಂತೋಷ್ 2013ರ ಜೂನ್‍ನಲ್ಲಿ ಮೃತಪಟ್ಟಿದ್ದಾರೆ.

    https://www.youtube.com/watch?v=Qxw6IKyFr94

    https://twitter.com/YUVSTRONG12/status/883088220950478848

     

     

  • ವಿಂಡೀಸ್ ವಿರುದ್ಧದ ಎರಡನೇ ಏಕದಿನದಲ್ಲಿ ಯುವರಾಜ್ ಎಡವಟ್ಟು!

    ವಿಂಡೀಸ್ ವಿರುದ್ಧದ ಎರಡನೇ ಏಕದಿನದಲ್ಲಿ ಯುವರಾಜ್ ಎಡವಟ್ಟು!

    ಪೋರ್ಟ್ ಆಫ್ ಸ್ಪೈನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 105 ರನ್‍ಗಳಿಂದ ಜಯಿಸಿದ್ದರೂ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಎಡವಟ್ಟು ಮಾಡಿಕೊಂಡಿದ್ದಾರೆ.

    ನಾಲ್ಕನೇಯವರಾಗಿ ಕ್ರೀಸ್ ಗೆ ಆಗಮಿಸಿದ ಯುವರಾಜ್ ಸಿಂಗ್ ಈ ಪಂದ್ಯಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಧರಿಸಿದ್ದ ಜೆರ್ಸಿ ಧರಿಸಿ ಅಂಗಳಕ್ಕೆ ಇಳಿದಿದ್ದರು. ಹಾರ್ದಿಕ್ ಪಾಂಡ್ಯಾ ಔಟಾದ ಕೂಡಲೇ ಕ್ರೀಸ್ ಗೆ ಆಗಮಿಸಿದ ಯುವಿ 14 ರನ್(10 ಎಸೆತ, 1 ಬೌಂಡರಿ)ಸಿಡಿಸಿ 39ನೇ ಓವರ್‍ನಲ್ಲಿ ಔಟಾದರು.

    ಟೂರ್ನ್ ಮೆಂಟ್‍ಗಳಲ್ಲಿ ಟೂರ್ನಿಯ ಲೋಗೋ ಇರುವ ಜೆರ್ಸಿಯನ್ನು ಆಟಗಾರರು ಧರಿಸಬೇಕು ಎನ್ನುವ ನಿಯಮವಿದ್ದರೆ, ಎರಡು ದೇಶಗಳ ಮಧ್ಯೆ ನಡೆಯುವ ಪಂದ್ಯಗಳಲ್ಲಿ ಕ್ರಿಕೆಟ್ ಮಂಡಳಿ ಆಟಗಾರರಿಗೆ ನೀಡಿದ ಜೆರ್ಸಿಗಳನ್ನು ಧರಿಸಬೇಕು. ಹೀಗಾಗಿ ಪಂದ್ಯದಲ್ಲಿ ಯುವಿ ಚಾಂಪಿಯನ್ಸ್ ಟ್ರೋಫಿ ಜೆರ್ಸಿಯನ್ನು ಧರಿಸಿ ಕಣಕ್ಕೆ ಇಳಿದಿದ್ದನ್ನು ನೋಡಿ ಟ್ವಿಟ್ಟರ್‍ನಲ್ಲಿ ಜನ ಪ್ರಶ್ನೆ ಮಾಡುತ್ತಿದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 43 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು. ವಿಂಡೀಸ್ 43 ಓವರ್ ಗಳಲ್ಲಿ 6ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು.

    5 ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯವನ್ನು ಭಾರತ ಜಯಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ

     

    https://twitter.com/CricketHuddle/status/879256198310240257

  • ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ

    ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ

    ಓವಲ್: ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಪಾಕ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

    ಐಸಿಸಿ ಆಯೋಜಿಸಿದ್ದ ಟೂರ್ನಿಯಲ್ಲಿ 7 ಫೈನಲ್ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಯುವಿ ಪಾತ್ರರಾಗಿದ್ದಾರೆ. ಶ್ರೀಲಂಕಾದ ಆಟಗಾರರಾದ ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನೆ, ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾ ರಿಕ್ಕಿಪಾಟಿಂಗ್ ಇದೂವರೆಗೆ 6 ಫೈನಲ್ ಆಡಿದ್ದರು.

    ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯದಲ್ಲಿ ಪಾಕ್ ವಿರುದ್ಧ 32 ಎಸೆತಗಳಲ್ಲಿ 53 ರನ್ ಯುವರಾಜ್ ಚಚ್ಚಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. 2000 ನೇ ಇಸ್ವಿಯಲ್ಲಿ 17ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಎಂಟ್ರಿ ಕೊಟ್ಟ ಯುವಿ ಇದೂವರೆಗೆ 301 ಏಕದಿನ ಪಂದ್ಯ, 58 ಟಿ 20 ಪಂದ್ಯಗಳನ್ನು ಆಡಿದ್ದಾರೆ.

    ಆ 7  ಫೈನಲ್‍ಗಳು
    1. ಐಸಿಸಿ ಚಾಂಪಿಯನ್ಸ್ ಟ್ರೋಫಿ 2000 – ಭಾರತ ವರ್ಸಸ್ ನ್ಯೂಜಿಲೆಂಡ್
    2. ಐಸಿಸಿ ಚಾಂಪಿಯನ್ಸ್ ಟ್ರೋಫಿ 2002 – ಭಾರತ ವರ್ಸಸ್ ಶ್ರೀಲಂಕಾ
    3. ಐಸಿಸಿ ವಿಶ್ವಕಪ್ ಕ್ರಿಕೆಟ್ 2003 – ಭಾರತ ವರ್ಸಸ್ ಆಸ್ಟ್ರೇಲಿಯಾ
    4. ಐಸಿಸಿ ಟಿ20 ವಿಶ್ವಕಪ್ 2007 – ಭಾರತ ವರ್ಸಸ್ ಪಾಕಿಸ್ತಾನ
    5. ಐಸಿಸಿ ವಿಶ್ವಕಪ್ ಕ್ರಿಕೆಟ್ 2011- ಭಾರತ ವರ್ಸಸ್ ಶ್ರೀಲಂಕಾ
    6. ಐಸಿಸಿ ಟಿ20 ವಿಶ್ವಕಪ್ 2014- ಭಾರತ ವರ್ಸಸ್ ಶ್ರೀಲಂಕಾ
    7. ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 – ಭಾರತ ವರ್ಸಸ್ ಪಾಕಿಸ್ತಾನ

  • ಮೊದಲ ಪಂದ್ಯದಲ್ಲಿ ಆರ್‍ಸಿಬಿಗೆ ಸೋಲು, ಹೈದ್ರಾಬಾದ್‍ಗೆ 35 ರನ್‍ಗಳ ಜಯ

    ಮೊದಲ ಪಂದ್ಯದಲ್ಲಿ ಆರ್‍ಸಿಬಿಗೆ ಸೋಲು, ಹೈದ್ರಾಬಾದ್‍ಗೆ 35 ರನ್‍ಗಳ ಜಯ

    ಹೈದರಾಬಾದ್: ಐಪಿಎಲ್ 10ನೇ ಆವೃತ್ತಿಯ ಮೊದಲ ಪಂದ್ಯವನ್ನು ಹೈದ್ರಾಬಾದ್ ಸನ್ ರೈಸರ್ಸ್ ಬೆಂಗಳೂರು ವಿರುದ್ಧ 35 ರನ್ ಗಳಿಂದ ಗೆದ್ದುಕೊಳ್ಳುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

    208ರನ್‍ಗಳ ಕಠಿಣ ಗುರಿಯನ್ನು ಬೆನ್ನಟ್ಟಿನ ಆರ್‍ಸಿಬಿ ಅಂತಿಮವಾಗಿ 19.4 ಓವರ್ ಗಳಲ್ಲಿ 172 ರನ್‍ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಕ್ರಿಸ್ ಗೇಲ್ ಮತ್ತು ಮನ್‍ದೀಪ್ ಸಿಂಗ್ ಮೊದಲ ವಿಕೆಟ್‍ಗೆ 5.4 ಓವರ್‍ಗಳಲ್ಲಿ 52 ರನ್ ಜೊತೆಯಾಟವಾಡಿದ್ದರೂ ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ ಮೊದಲ ಪಂದ್ಯದಲ್ಲಿ ಆರ್‍ಸಿಬಿ ಸೋಲನ್ನು ಅನುಭವಿಸಿದೆ.

    ವಿಂಡೀಸಿನ ಕ್ರೀಸ್ ಗೇಲ್ 32 ರನ್( 21 ಎಸೆತ, 2 ಬೌಂಡರಿ, 3 ಸಿಕ್ಸರ್) ಮನ್‍ದೀಪ್ ಸಿಂಗ್ 24 ರನ್, ಟ್ರಾವಿಸ್ ಹೆಡ್ 30 ರನ್, ಕೇದಾರ್ ಜಾದವ್ 31 ರನ್( 16 ಎಸೆತ, 4 ಬೌಂಡರಿ, 1 ಸಿಕ್ಸರ್), ಸಚಿನ್ ಬೆಬಿ 1 ರನ್, ಶೇನ್ ವಾಟ್ಸನ್ 22 ರನ್‍ಗಳಿಸಿ ಗಳಿಸಿ ಔಟಾದರು.

    100ನೇ ವಿಕೆಟ್: ವೇಗದ ಬೌಲರ್ ಆಶಿಶ್ ನೆಹ್ರಾ ಆರ್‍ಸಿಬಿ ನಾಯಕ ವಾಟ್ಸನ್ ವಿಕೆಟ್ ಪಡೆಯುವ ಮೂಲಕ ಐಪಿಎಲ್‍ನಲ್ಲಿ ನೂರನೇ ವಿಕೆಟ್ ಪಡೆದ ಸಾಧನೆ ಮಾಡಿದರು

    ನೆಹ್ರಾ ಭುವನೇಶ್ವರ್ ಕುಮಾರ್, ರಶೀದ್ ಖಾನ್ ತಲಾ 2 ವಿಕೆಟ್ ಪಡೆದರೆ ಹೂಡಾ ಮತ್ತು ಬಿಪುಲ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

    ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದ್ರಾಬಾದ್ ಆರಂಭದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡರೂ ಯುವರಾಜ್ ಸಿಂಗ್ ಮತ್ತು ಮಾರ್ಕ್ ಹೆನ್ರಿಕ್ಸ್ ಅವರ ಅರ್ಧಶತಕದಿಂದಾಗಿ 4 ವಿಕೆಟ್ ನಷ್ಟಕ್ಕೆ 207 ರನ್‍ಗಳಿಸಿತ್ತು.

    ಯುವಿ, ಹೆನ್ರಿಕ್ಸ್ ಜುಗಲ್ ಬಂದಿ: 10.3 ಓವರ್‍ಗೆ 93 ರನ್‍ಗಳಿಸಿದ್ದಾಗ ಶಿಖರ್ ಧವನ್ ಔಟಾದರು. ಕ್ರೀಸ್‍ಗೆ ಆಗಮಿಸಿದ ಯುವಿ ಆರಂಭದಲ್ಲಿ ನಿಧಾನವಾಗಿ ಆಡಿದ್ದರೂ ಬರಬರುತ್ತಾ ಭರ್ಜರಿ ಸಿಕ್ಸರ್, ಬೌಂಡರಿಗಳನ್ನು ಸಿಡಿಸಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರು. ಹೆನ್ರಿಕ್ಸ್ ಮತ್ತು ಯುವಿ 3ನೇ ವಿಕೆಟ್‍ಗೆ 29 ಎಸೆತಗಳಲ್ಲಿ 58 ರನ್ ಜೊತೆಯಾಟವಾಡಿದರು. ಹೆನ್ರಿಕ್ಸ್ 52 ರನ್(37 ಎಸೆತ, 7 ಬೌಂಡರಿ, 2 ಸಿಕ್ಸರ್)ಸಿಡಿಸಿ ಔಟಾದರೆ ಯುವಿ 62 ರನ್(27 ಎಸೆತ, 7ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು.

    ಶಿಖರ್ ಧವನ್ 40 ರನ್(31 ಎಸೆತ, 5 ಬೌಂಡರಿ) ಗಳಿಸಿದರೆ, ನಾಯಕ ಡೇವಿಡ್ ವಾರ್ನರ್ 14 ರನ್ ಗಳಿಸಿದರು. ದೀಪಕ್ ಹೂಡಾ 16 ರನ್ ಗಳಿಸಿ ಔಟಾಗದೇ ಉಳಿದರೆ ಕೊನೆಯಲ್ಲಿ ಬೆನ್ ಕಟ್ಟಿಂಗ್ 6 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ 16 ರನ್‍ಗಳಿಸಿ ಔಟಾಗದೇ ಉಳಿದರು.

    ಟೈಮಲ್ ಮಿಲ್ಸ್, ಅಂಕಿತ್ ಚೌಧರಿ, ಚಹಲ್, ಸ್ಟುವರ್ಟ್ ಬಿನ್ನಿ ತಲಾ ಒಂದೊಂದು ವಿಕೆಟ್ ಪಡೆದರು.

  • ಯುವಿ, ಹೆನ್ರಿಕ್ಸ್ ಅಬ್ಬರದ ಅರ್ಧಶತಕ, ಬೆಂಗಳೂರಿಗೆ 208 ರನ್ ಟಾರ್ಗೆಟ್

    ಯುವಿ, ಹೆನ್ರಿಕ್ಸ್ ಅಬ್ಬರದ ಅರ್ಧಶತಕ, ಬೆಂಗಳೂರಿಗೆ 208 ರನ್ ಟಾರ್ಗೆಟ್

    ಹೈದರಾಬಾದ್: ಐಪಿಎಲ್‍ನ ಮೊದಲ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದ್ರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 208 ರನ್‍ಗಳ ಗುರಿಯನ್ನು ನೀಡಿದೆ.

    ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದ್ರಾಬಾದ್ ಆರಂಭದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡರೂ ಯುವರಾಜ್ ಸಿಂಗ್ ಮತ್ತು ಮಾರ್ಕ್ ಹೆನ್ರಿಕ್ಸ್ ಅವರ ಅರ್ಧಶತಕದಿಂದಾಗಿ 4 ವಿಕೆಟ್ ನಷ್ಟಕ್ಕೆ 207 ರನ್‍ಗಳಿಸಿತು.

    ಯುವಿ ಹೆನ್ರಿಕ್ಸ್ ಜುಗಲ್ ಬಂದಿ: 10.3 ಓವರ್‍ಗೆ 93 ರನ್‍ಗಳಿಸಿದ್ದಾಗ ಶಿಖರ್ ಧವನ್ ಔಟಾದರು. ಕ್ರೀಸ್‍ಗೆ ಆಗಮಿಸಿದ ಯುವಿ ಆರಂಭದಲ್ಲಿ ನಿಧಾನವಾಗಿ ಆಡಿದ್ದರೂ ಬರಬರುತ್ತಾ ಭರ್ಜರಿ ಸಿಕ್ಸರ್, ಬೌಂಡರಿಗಳನ್ನು ಸಿಡಿಸಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರು. ಹೆನ್ರಿಕ್ಸ್ ಮತ್ತು ಯುವಿ 3ನೇ ವಿಕೆಟ್‍ಗೆ 29 ಎಸೆತಗಳಲ್ಲಿ 58 ರನ್ ಜೊತೆಯಾಟವಾಡಿದರು. ಹೆನ್ರಿಕ್ಸ್ 52 ರನ್(37 ಎಸೆತ, 7 ಬೌಂಡರಿ, 2 ಸಿಕ್ಸರ್)ಸಿಡಿಸಿ ಔಟಾದರೆ ಯುವಿ 62 ರನ್(27 ಎಸೆತ, 7ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು.

    ಶಿಖರ್ ಧವನ್ 40 ರನ್(31 ಎಸೆತ, 5 ಬೌಂಡರಿ) ಗಳಿಸಿದರೆ, ನಾಯಕ ಡೇವಿಡ್ ವಾರ್ನರ್ 14 ರನ್ ಗಳಿಸಿದರು. ದೀಪಕ್ ಹೂಡಾ 16 ರನ್ ಗಳಿಸಿ ಔಟಾಗದೇ ಉಳಿದರೆ ಕೊನೆಯಲ್ಲಿ ಬೆನ್ ಕಟ್ಟಿಂಗ್ 6 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ 16 ರನ್‍ಗಳಿಸಿ ಔಟಾಗದೇ ಉಳಿದರು.

    ಟೈಮಲ್ ಮಿಲ್ಸ್, ಅಂಕಿತ್ ಚೌಧರಿ, ಚಹಲ್, ಸ್ಟುವರ್ಟ್ ಬಿನ್ನಿ ತಲಾ ಒಂದೊಂದು ವಿಕೆಟ್ ಪಡೆದರು.

  • ಶಿಖರ್ ಧವನ್‍ಗೆ ಯುವರಾಜ್ ಸಿಂಗ್ ಏಪ್ರಿಲ್ ಫೂಲ್ ಮಾಡಿದ್ದನ್ನು ನೋಡಿ

    ಶಿಖರ್ ಧವನ್‍ಗೆ ಯುವರಾಜ್ ಸಿಂಗ್ ಏಪ್ರಿಲ್ ಫೂಲ್ ಮಾಡಿದ್ದನ್ನು ನೋಡಿ

    ನವದೆಹಲಿ: ಡ್ರೆಸಿಂಗ್ ರೂಮ್‍ನಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಒಬ್ಬರಿಗೊಬ್ಬರು ಮೋಜು ಮಸ್ತಿ ಮಾಡುತ್ತಿರುತ್ತಾರೆ. ನಿನ್ನೆ ಏಪ್ರಿಲ್ 1, ಹೀಗಾಗಿ ಯುವರಾಜ್ ಸಿಂಗ್ ತನ್ನ ಸನ್ ರೈಸರ್ಸ್ ತಂಡದ ಸಹ ಆಟಗಾರ ಶಿಖರ್ ಧವನ್‍ಗೆ ಏಪ್ರಿಲ್ ಫೂಲ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಸನ್ ರೈಸರ್ಸ್ ತಂಡದ ಆಟಗಾರರು ಹೋಟೆಲ್‍ನಲ್ಲಿರುವಾಗ, ಶಿಖರ್ ಧವನ್ ಸ್ವಿಮಿಂಗ್ ಮಾಡುತ್ತಿದ್ದರು. ಈ ವೇಳೆ ಯುವಿ, ನಿಮ್ಮ ಪತ್ನಿ ಆಯೇಶಾ ಮುಖರ್ಜಿ ಕರೆ ಮಾಡಿದ್ರು. ಏನೋ ಎಮರ್ಜೆನ್ಸಿ ಅಂತೆ ಎಂದು ಧವನ್‍ಗೆ ಹೇಳಿದ್ದಾರೆ. ತಕ್ಷಣವೇ ಸ್ವಿಮಿಂಗ್ ಪೂಲ್‍ನಿಂದ ಹೊರಬಂದ ಧವನ್ ಪತ್ನಿಗೆ ಕರೆ ಮಾಡಲು ಬ್ಯಾಗ್‍ನಲ್ಲಿ ಮೊಬೈಲ್‍ಗಾಗಿ ಹುಡಿಕಿದ್ದಾರೆ. ಹಿಂದಿನಿಂದ ಬಂದ ಯುವಿ ಏಪ್ರಿಲ್ ಪೂಲ್ ಎಂದು ಹೇಳಿ ನಕ್ಕಿದ್ದಾರೆ.

    ಈ ವಿಡಿಯೋವನ್ನು ಯುವಿ ಟ್ವಿಟರ್ ನಲ್ಲಿ ಅಪಲೋಡ್ ಮಾಡಿದ್ದು, ಏಪ್ರಿಲ್ 1 ರಂದು ಫೂಲ್ ಮಾಡದಿದ್ದರೆ ಹೇಗೆ? ಇದು ತುಂಬಾ ತಮಾಷೆಯಾಗಿತ್ತು. ಎಲ್ಲರಿಗೂ ಏಪ್ರಿಲ್ ಫೂಲ್ಸ್ ಡೇ ಶುಭಾಶಯ ಎಂದು ಬರೆದುಕೊಂಡಿದ್ದಾರೆ.

    ಈ ಬಾರಿ ಯುವರಾಜ್ ಸಿಂಗ್ ಮತ್ತು ಶಿಖರ್ ಧವನ್ ಇಬ್ಬರೂ ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲಿ ಆಡಲಿದ್ದಾರೆ. ಏಪ್ರಿಲ್ 5 ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭಗೊಳ್ಳಲಿದೆ.

    https://twitter.com/YUVSTRONG12/status/848121660595220481

    https://www.facebook.com/yuvirajsinghofficial/videos/10155120939354254/