Tag: ಯುಡಿಎಫ್

  • Exit Polls | ಕೇರಳದಲ್ಲೂ ಖಾತೆ ತೆರೆಯಲಿದೆ ಬಿಜೆಪಿ

    Exit Polls | ಕೇರಳದಲ್ಲೂ ಖಾತೆ ತೆರೆಯಲಿದೆ ಬಿಜೆಪಿ

    ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕೇರಳದಲ್ಲಿ (Kerala) ಬಿಜೆಪಿ (BJP) ಖಾತೆ ತೆರೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

    ಪೂಲ್‌ ಹಬ್‌ ಸಮೀಕ್ಷೆಯ ಪ್ರಕಾರ ಎನ್‌ಡಿಎ 1-3 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಯುಡಿಎಫ್‌ ಮೈತ್ರಿಕೂಟ 15-18, ಎಲ್‌ಡಿಎಫ್‌ 2-5 ಸ್ಥಾನ ಗೆಲ್ಲಬಹುದು ಹೇಳಿದೆ. ಯುಡಿಎಫ್‌ 45%, ಎಲ್‌ಡಿಎಫ್‌ 36%, ಎನ್‌ಡಿಎ 16%, ಇತರರು 3% ಮತ ಗಳಿಸಬಹುದು ಎಂದು ಹೇಳಿದೆ.

     

    ಟುಡೇಸ್‌ ಚಾಣಕ್ಯ ಸಮೀಕ್ಷೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 4 ± 3, ಯುಡಿಎಫ್‌ 15 ± 3, ಎಲ್‌ಡಿಎಫ್‌ 1 ± 1 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ. ಟೈಮ್ಸ್‌ ನೌ ಸಮೀಕ್ಷೆ ಯುಡಿಎಎಫ್‌ 14-15, ಎಲ್‌ಡಿಎಫ್‌ 04, ಬಿಜೆಪಿ +01 ಸ್ಥಾನ ಗಳಿಸಬಹುದು ಎಂದು ಭವಿಷ್ಯ ನುಡಿದಿವೆ.

    ಇಲ್ಲಿಯವರೆಗೆ ಬಿಜೆಪಿ ಕೇರಳದಲ್ಲಿ ಖಾತೆ ತೆರೆದಿಲ್ಲ. ಖಾತೆ ತೆರೆಯಬಹುದು ಎಂದು ಯಾರು ಅಂದಾಜಿಸಿಲ್ಲ. ಒಂದು ವೇಳೆ ಖಾತೆ ತೆರೆದರೆ ದಕ್ಷಿಣ ಭಾರತದ ಕೇರಳದಲ್ಲೂ ಮೋದಿ ಅಲೆ ಮ್ಯಾಜಿಕ್‌ ಮಾಡಿದೆ ಎಂದೇ ಅರ್ಥೈಸಬಹುದು.

  • LDF, UDF ರಾಜ್ಯದ ಪರಿಸ್ಥಿತಿ ಹದಗೆಡಿಸುತ್ತಿವೆ- ಕೇರಳದಲ್ಲಿ ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

    LDF, UDF ರಾಜ್ಯದ ಪರಿಸ್ಥಿತಿ ಹದಗೆಡಿಸುತ್ತಿವೆ- ಕೇರಳದಲ್ಲಿ ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

    ಪಾಲಕ್ಕಾಡ್: ಕೇರಳದ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (LDF) ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ರಾಜ್ಯದ ಸ್ಥಿತಿಯನ್ನು ಹದಗೆಡಿಸುತ್ತಿವೆ. ಕೇರಳದ (Kerala) ಜನರು ಎಲ್‌ಡಿಎಫ್ ಮತ್ತು ಯುಡಿಎಫ್ ಎರಡರ ಬಗ್ಗೆ ಎಚ್ಚರದಿಂದಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪಾಲಕ್ಕಾಡ್‌ನಲ್ಲಿ (Palakkad) ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇರಳ ಅಥವಾ ಪಶ್ಚಿಮ ಬಂಗಾಳದಲ್ಲಿ ಎಲ್ಲಾ ಎಡ ಸರ್ಕಾರಗಳು ಒಂದೇ ಆಗಿದ್ದು, ಅವರು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಾರೆ ಎಂದು ಆರೋಪಿಸಿದರು. ಕೇರಳ ಮತ್ತು ಇಡೀ ಪ್ರದೇಶದ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪ್ರಯತ್ನಗಳಿಗೆ ವಿರೋಧ ಪಕ್ಷಗಳು ಅಡ್ಡಿಪಡಿಸುತ್ತವೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಕೇಂದ್ರ ಸರ್ಕಾರ ರಾಜ್ಯಕ್ಕೆ ಮೀಸಲಿಟ್ಟ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕೇಜ್ರಿವಾಲ್‍ರನ್ನು ಭಯೋತ್ಪಾದಕನಂತೆ ನಡೆಸಿಕೊಳ್ಳಲಾಗುತ್ತಿದೆ: ಪಂಜಾಬ್ ಸಿಎಂ

    ಪಶ್ಚಿಮ ಬಂಗಾಳದಿಂದ ಕೇರಳದವರೆಗೆ ಎಲ್ಲಾ ಎಡಪಂಥೀಯ ಸರ್ಕಾರಗಳ ಸ್ವಭಾವ ಸಾಮಾನ್ಯವಾಗಿದೆ. ಅವರಿಗೆ ಯಾವ ಎಡವಿಲ್ಲ ಮತ್ತು ಯಾವ ಬಲವಿಲ್ಲ. ಕೇರಳದಲ್ಲಿ ಕಾಂಗ್ರೆಸ್ ಎಡ ಪಕ್ಷದ ಜನರನ್ನು ‘ಭಯೋತ್ಪಾದಕರು’ ಎಂದು ಕರೆಯುತ್ತದೆ. ಆದರೆ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಈ ‘ಭಯೋತ್ಪಾದಕರು’ ಒಟ್ಟಿಗೆ ಕುಳಿತು ಒಟ್ಟಿಗೆ ತಿನ್ನುತ್ತಾರೆ ಮತ್ತು ಚುನಾವಣೆಗೆ ತಂತ್ರಗಳನ್ನು ಮಾಡುತ್ತಾರೆ. ಇಂತಹ ಜನರ ಬಗ್ಗೆ ಎಚ್ಚರಿಕೆ ಇರಲಿ ಎಂದು ಹರಿಹಾಯ್ದರು. ಇದನ್ನೂ ಓದಿ: ಕುಟುಂಬದೊಂದಿಗೆ ಅಯೋಧ್ಯೆಯಲ್ಲಿ ರಾಮನವಮಿ ಆಚರಣೆಗೆ ಅರುಣ್‌ ಯೋಗಿರಾಜ್‌ ಪ್ಲಾನ್‌

    ಕಾಂಗ್ರೆಸ್‌ನ ದೊಡ್ಡ ನಾಯಕರೊಬ್ಬರು ಉತ್ತರ ಪ್ರದೇಶದಲ್ಲಿ ತಮ್ಮ ಕುಟುಂಬದ, ಸ್ಥಾನದ ಗೌರವವನ್ನು ಉಳಿಸಿಕೊಳ್ಳಲು ಕಷ್ಟಪಟ್ಟಿದ್ದಾರೆ. ಈಗ ಚುನಾವಣೆ ಗೆಲ್ಲಲು ಕೇರಳದಲ್ಲಿ ತಮ್ಮ ಹೊಸ ನೆಲೆಯನ್ನು ಕಂಡುಕೊಂಡಿದ್ದಾರೆ. ರಾಷ್ಟ್ರವಿರೋಧಿ ಧೋರಣೆಗಾಗಿ ದೇಶದಲ್ಲಿ ನಿಷೇಧಕ್ಕೊಳಗಾಗಿರುವ ಸಂಘಟನೆಯೊಂದರ ರಾಜಕೀಯ ವಿಭಾಗದ ಜೊತೆ ಕಾಂಗ್ರೆಸ್ ಹಿಂಬಾಗಿಲ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್‌ನ ಯುವರಾಜ ಕೇರಳದ ಜನರಲ್ಲಿ ಮತ ಕೇಳುತ್ತಾರೆ. ಆದರೆ ನಿಮ್ಮ ಸಮಸ್ಯೆಗಳ ಬಗ್ಗೆ ಒಂದೇ ಒಂದು ಮಾತನ್ನೂ ಹೇಳುವುದಿಲ್ಲ ಎಂದು ಪರೋಕ್ಷವಾಗಿ ವಯನಾಡ್‌ನಿಂದ ಸ್ಪರ್ಧಿಸಿರುವ ರಾಹುಲ್ ಗಾಂಧಿ ಅವರನ್ನು ಟೀಕಿಸಿದರು. ಇದನ್ನೂ ಓದಿ: ಪ್ರಹ್ಲಾದ್‌ ಜೋಶಿ 2 ಲಕ್ಷಕ್ಕೂ ಹೆಚ್ಚು ಲೀಡ್ ಪಡೆದು ಗೆಲ್ತಾರೆ : ಬಿಎಸ್‌ವೈ ವಿಶ್ವಾಸ

  • ಕೇರಳದಲ್ಲಿ ಪಿಣರಾಯಿ ‘ವಿಜಯ’ನ್ ಪತಾಕೆ – ಒಂದಂಕಿಗೆ ಸೀಮಿತವಾದ ಬಿಜೆಪಿ

    ಕೇರಳದಲ್ಲಿ ಪಿಣರಾಯಿ ‘ವಿಜಯ’ನ್ ಪತಾಕೆ – ಒಂದಂಕಿಗೆ ಸೀಮಿತವಾದ ಬಿಜೆಪಿ

    – ಕಾಂಗ್ರೆಸ್ ಬೆಂಬಲಿತ ಯುಡಿಎಫ್‍ಗೆ ನಿರಾಸೆ

    ನವದೆಹಲಿ: ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್ ವಿಜಯದ ಪತಾಕೆ ಹಾರಿಸಿದ್ದು, ಮತ್ತೊಮ್ಮೆ ಸಿಎಂ ಸ್ಥಾನ ಅಲಂಕರಿಸೋದು ಪಕ್ಕಾ ಆಗಿದೆ. ಚುನಾವಣೋತ್ತರ ಸಮೀಕ್ಷೆಗಳು ಪಿಣರಾಯಿ ವಿಜಯನ್ ಗೆಲುವನ್ನೇ ಹೇಳಿತ್ತು.

    ಪಶ್ಚಿಮ ಬಂಗಾಳದಲ್ಲಿ ಎಲ್‍ಡಿಎಫ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಇಲ್ಲಿ ಅದರ ವಿರುದ್ಧವೇ ರಣರಂಗಕ್ಕೆ ಇಳಿದಿತ್ತು. ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ ಸಾಲು ಸಾಲು ಸಮಾವೇಶಗಳಲ್ಲಿ ತೊಡಗಿಕೊಂಡಿದ್ದರು. ರಾಹುಲ್ ಗಾಂಧಿ ಕೇರಳದ ಜನಪ್ರತಿನಿಧಿ ಆಗಿದ್ದರಿಂದ ಕಾಂಗ್ರೆಸ್ ಗೆಲುವಿನ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿದ್ದವು.

    ಯಾರಿಗೆ ಎಷ್ಟು ಕ್ಷೇತ್ರ?: ಕೇರಳ ಒಟ್ಟು ವಿಧಾನಸಭಾ ಕ್ಷೇತ್ರಗಳು – 140

    * ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ
    ಎಲ್‍ಡಿಎಫ್: 104-120
    ಯುಡಿಎಫ್+ಕಾಂಗ್ರೆಸ್: 20-36
    ಬಿಜೆಪಿ: 0-2
    ಇತರೆ: 0-2

    * ಟೈಮ್ಸ್ ನೌ-ಸಿ ವೋಟರ್
    ಎಲ್‍ಡಿಎಫ್: 74
    ಯುಡಿಎಫ್+ಕಾಂಗ್ರೆಸ್: 65
    ಬಿಜೆಪಿ: 1
    ಇತರೆ: 0

    * ಟುಡೇಸ್ ಚಾಣಕ್ಯ
    ಎಲ್‍ಡಿಎಫ್: 93-111
    ಯುಡಿಎಫ್+ಕಾಂಗ್ರೆಸ್: 26-44
    ಬಿಜೆಪಿ: 0-6
    ಇತರೆ: 0-3

    * ಸಿಎನ್‍ಎಕ್ಸ್
    ಎಲ್‍ಡಿಎಫ್: 72-80
    ಯುಡಿಎಫ್+ಕಾಂಗ್ರೆಸ್: 58-64
    ಬಿಜೆಪಿ: 1-5
    ಇತರೆ: 0

    ಕೇರಳದಲ್ಲಿ ನೆಲೆ ಇಲ್ಲದ ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಆದ್ರೆ ಒಂದಂಕಿ ಸಾಧನೆ ಮಾತ್ರ ಆಗಿದೆ. ಕೊರೊನಾ ಸಮಯದಲ್ಲಿ ನಿರ್ವಹಣೆ ಪಿಣರಾಯಿ ವಿಜಯನ್ ಪ್ಲಸ್ ಪಾಯಿಂಟ್ ಅಂತ ವಿಮರ್ಶಕರು ಒತ್ತಿ ಒತ್ತಿ ಹೇಳಿದ್ದಾರೆ. ಇತ್ತ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅವರನ್ನ ಬಿಜೆಪಿ ಕರೆ ತಂದಿತ್ತು. ಇ.ಶ್ರೀಧರನ್ ಅವರೇ ಬಿಜೆಪಿಯ ಸಿಎಂ ಅಭ್ಯರ್ಥಿ ಅಂತ ಇಡೀ ಚುನಾವಣೆಯಲ್ಲಿ ಬಿಂಬಿತವಾಗಿತ್ತು. ಇತ್ತ ನಮ್ಮ ರಾಜ್ಯದ ಸಚಿವರು ಸಹ ಕೇರಳದಲ್ಲಿ ಕ್ಯಾಂಪೇನ್ ಗಳಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಅಸ್ಸಾಂ ಚಹಾ ತೋಟದಲ್ಲಿ ಎರಡನೇ ಬಾರಿ ಅರಳಿದ ಕಮಲ

    2016ರ ಫಲಿತಾಂಶ: 2016ರಲ್ಲಿ ಪಿಣರಾಯಿ ಸರ್ಕಾರ 91ರ ಶಾಸಕರೊಂದಿಗೆ ಸರ್ಕಾರ ರಚನೆ ಮಾಡಿತ್ತು. ಆಡಳಿತ ವಿರೋಧ ಅಲೆಯ ನಡುವೆಯೂ ಎಲ್‍ಡಿಎಫ್ ಮತ್ತಷ್ಟು ಕ್ಷೇತ್ರ ಗೆದ್ದು ಸರ್ಕಾರ ರಚನೆ ಮಾಡಲಿದೆ ಚುನಾವಣೋತ್ತರ ಸಮೀಕ್ಷೆ ಹೇಳಿದೆ. 2016ರಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ 47 ಸೀಟ್ ಗೆದ್ದಿತ್ತು. ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿತ್ತು. ಕೇರಳದ ಜನ ಸಿಎಂ ವಿಜಯನ್ ಅವರನ್ನ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಇಷ್ಟಪಡುತ್ತಾರೆ. ಮಾಜಿ ಸಿಎಂ ಉಮ್ಮನ್ ಚಾಂಡಿ ಎರಡನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೀದಿ ಅಧಿಕಾರಕ್ಕೆ

    ಇದನ್ನೂ ಓದಿ: ಮಸ್ಕಿ, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ – ಬೆಳಗಾವಿಯಲ್ಲಿ ಮತ್ತೆ ಬಿಜೆಪಿ

  • ಭಯೋತ್ಪಾದನೆ ತಡೆಗಾಗಿ ಭಾರತವನ್ನ ಹಿಂದೂ ರಾಷ್ಟ್ರ ಅಂತ ಘೋಷಿಸಿ: ಶಾಸಕ ಪಿ.ಸಿ.ಜಾರ್ಜ್

    ಭಯೋತ್ಪಾದನೆ ತಡೆಗಾಗಿ ಭಾರತವನ್ನ ಹಿಂದೂ ರಾಷ್ಟ್ರ ಅಂತ ಘೋಷಿಸಿ: ಶಾಸಕ ಪಿ.ಸಿ.ಜಾರ್ಜ್

    ತಿರುವನಂತಪುರ: ದೇಶದಲ್ಲಿ ಭಯೋತ್ಪಾದನೆ ತಡೆಗಾಗಿ ಭಾರತವನ್ನ ಹಿಂದೂ ರಾಷ್ಟ್ರ ಎಂದು ಘೋಷಿಸಿಬೇಕಾಗಿದೆ. ಕೇರಳದಲ್ಲಿ ಎಲ್‍ಡಿಎಫ್ ಮತ್ತು ಯುಡಿಎಫ್ 2030ರೊಳಗೆ ಭಾರತವನ್ನ ಇಸ್ಲಾಮಿಕ್ ಸ್ಟೇಟ್ ಮಾಡಲು ಮುಂದಾಗಿವೆ ಎಂದು ಕೇರಳದ ಜನಪಕ್ಷ (ಸೆಕ್ಯೂಲರ್) ಶಾಸಕ ಪಿ.ಸಿ.ಜಾರ್ಜ್ ಗಂಭೀರ ಆರೋಪ ಮಾಡಿದ್ದಾರೆ.

    ಇಡುಕ್ಕಿ ಜಿಲ್ಲೆಯ ಥೋಡುಪುಜಾದಲ್ಲಿ ಆಯೋಜಿಸಲಾಗಿದ್ದ ಬೈಠಕ್ ನಲ್ಲಿ ಶಾಸಕ ಪಿ.ಸಿ.ಜಾರ್ಜ್ ಭಾಗಿಯಾಗಿದ್ದರು. ಲವ್ ಜಿಹಾದ್ ವಿಷಯದ ಕುರಿತು ಮಾತನಾಡುತ್ತಿರುವ ವೇಳೆ ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕಿದೆ. ಎಲ್‍ಡಿಎಫ್ ಮತ್ತು ಯುಡಿಎಫ್ ಭಾರತವನ್ನ ಮುಸ್ಲಿಂ ರಾಷ್ಟ್ರವನ್ನಾಗಿ ಬದಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

    2016ರಲ್ಲಿ ಮೋದಿ ಸರ್ಕಾರ ನೋಟ್ ಬ್ಯಾನ್ ಮಾಡಿದ್ದರಿಂದ, ಹೊರಗಿನಿಂದ ಬರುತ್ತಿದ್ದ ಹಣ ಸ್ಥಗಿತಗೊಂಡಿದೆ. ಹಾಗಾಗಿ ಅವರ ಕೆಲಸ ನಿಧಾನವಾಗಿದೆ. ಸುಪ್ರೀಂಕೋಟ್ ಮದುವೆಯನ್ನ ಲವ್ ಜಿಹಾದ್ ಅಂತ ಹೇಳಲ್ಲ. ಅದು ಲವ್ ಜಿಹಾದ್ ಅನ್ನೋದು ನನಗೆ ಗೊತ್ತಿದೆ. ಕೇರಳದಲ್ಲಿ ಲವ್ ಜಿಹಾದ್ ತಡೆಯಬೇಕಿದ್ದು, ಅದಕ್ಕಾಗಿ ಮಹಾನ್ ಭಾರತವನ್ನು ಹಿಂದೂ ರಾಷ್ಟ್ರ ಅಂತ ಘೋಷಿಸಿಬೇಕಿದೆ ಎಂದರು.

    ವಿಶ್ವದ ಶೇ.68ರಷ್ಟು ಹಿಂದೂಗಳು ಭಾರತದಲ್ಲಿದ್ದಾರೆ. ವಿಶ್ವದ ಬಹುತೇಕ ದೇಶಗಳು ಒಂದು ಧರ್ಮದ ಬಗ್ಗೆ ಹೆಚ್ಚು ಒಲವು ಹೊಂದಿರೋದನ್ನ ಗಮನಿಸಬಹುದು. ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳನ್ನು ಮುಸ್ಲಿಂ ರಾಷ್ಟ್ರಗಳನ್ನಾಗಿ ಬದಲಿಸುವ ಪ್ರಯತ್ನಗಳು ಜಾಗತೀಕ ಮಟ್ಟದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

    ಕೇರಳದ ಕೊಟ್ಟಾಯಂ ಜಿಲ್ಲೆಯ ಪೂಂಜರ್ ಕ್ಷೇತ್ರದ ಶಾಸಕರಾದ ಪಿ.ಸಿ.ಜಾರ್ಜ್ 2016ರ ಚುನಾವಣೆಯಲ್ಲಿ ಯುಡಿಎಫ್ ಮತ್ತು ಎಲ್‍ಡಿಎಫ್ ಅಭ್ಯರ್ಥಿಗಳು ಭಾರೀ ಮತಗಳ ಅಂತರದಲ್ಲಿ ಸೋಲಿಸಿ ಕೇರಳದ ವಿಧಾನಸಭೆ ಪ್ರವೇಶಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಜೊತೆ ತಮ್ಮ ಕೇರಳ ಜನಪಕ್ಷೀಯ ಪಾರ್ಟಿ ಮೈತ್ರಿ ಮಾಡಿಕೊಂಡಿದ್ದರು. ನಂತರ ತಾವೇ ಮೈತ್ರಿಯಿಂದ ಹೊರ ಬಂದಿದ್ದಾರೆ.

  • ಕೇರಳ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದ ತೃತೀಯ ಲಿಂಗಿ ಅಭ್ಯರ್ಥಿ

    ಕೇರಳ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದ ತೃತೀಯ ಲಿಂಗಿ ಅಭ್ಯರ್ಥಿ

    ತಿರುವನಂತಪುರ: ಕೇರಳದ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿ ಅನನ್ಯಾ ಕುಮಾರಿ ಅಲೆಕ್ಸಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಇದೀಗ ಅವರಿಗೆ ಮಾನಸಿಕ ಕಿರುಕುಳ, ಪ್ರಾಣ ಬೆದರಿಕೆ ಇರುವುದಾಗಿ ಕಾರಣಕೊಟ್ಟು ಕೊನೆ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

    ಅಲೆಕ್ಸಾ ಅವರು ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿ ಕೇರಳದ ವೆಂಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಇದೀಗ ನಾಮಪತ್ರ ಹಿಂಪಡೆಯುವ ಮೂಲಕ ಚುನಾವಣೆಯಿಂದ ಹೊರಬಂದಿದ್ದಾರೆ. ವೆಂಗರ ಕ್ಷೇತ್ರದಿಂದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಯು.ಡಿಎಫ್)ಪಕ್ಷದ ಹಿರಿಯ ಅಭ್ಯರ್ಥಿ ಪಿ.ಕೆ ಕುನ್ಹಾಲಿಕುಟ್ಟಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಪಿ. ಜಿಜಿ, ಎಡ ಡೆಮಾಕ್ರಟಿಕ್ ಫ್ರಂಟ್( ಎಲ್‍ಡಿಎಫ್) ಪರವಾಗಿ ಸ್ಪರ್ಧಿಸಿದ್ದರು.

    ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿದ್ದ ಅಲೆಕ್ಸಾ ಅವರು, ಚುನಾವಣೆಯ ಪ್ರಚಾರದ ವೇಳೆ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಹಿರಿಯ ಅಭ್ಯರ್ಥಿ ಪಿ.ಕೆ ಕುನ್ಹಾಲಿಕುಟ್ಟಿ ಅವರ ವಿರುದ್ಧ ಆರೋಪ ಮಾಡಬೇಕಾಗಿ ತಿಳಿಸಿದ್ದರು. ಇದನ್ನು ಒಪ್ಪದ ನನಗೆ ನಮ್ಮ ಪಕ್ಷದಿಂದಲೇ ಮಾನಸಿಕ ಒತ್ತಡ ಬಂದಿದೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

    ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿ ವೆಂಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಪಕ್ಷದಿಂದ ಮೊದಲು ಕರೆಬಂತು. ಆದರೆ ಮೊದಲು ನಾನು ಇದನ್ನು ಒಪ್ಪಿಕೊಂಡೆ. ನಂತರ ಇದರಲ್ಲಿದ್ದ ಕೆಲವು ಹುಳುಕುಗಳು ನನಗೆ ತಿಳಿಯಿತು. ಹಾಗಾಗಿ ಇದರಿಂದ ಸಮಸ್ಯೆಗೆ ಒಳಗಾಗಲು ನಾನು ಬಯಸುವುದಿಲ್ಲ ಎಂದರು.

    ಅನನ್ಯಾ ಕುಮಾರಿ ಅಲೆಕ್ಸಾ ಕೇರಳದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಆಗಿ ಕೆಲಸನಿರ್ವಹಿಸುತ್ತಿದ್ದರು. ಇವರು ಮೇಕಪ್ ಕಲಾವಿದೆಯಾಗಿ ಮತ್ತು ಖಾಸಗಿ ನ್ಯೂಸ್ ಚಾನಲ್‍ಗಳಲ್ಲಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದರು.

    ಕೇರಳದಲ್ಲಿ ಮೊದಲ ಹಂತದ ಚುನಾವಣೆ ಏಪ್ರಿಲ್ 6ರಂದು ಪ್ರಾರಂಭಗೊಳ್ಳಲಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

  • ಕಾಂಗ್ರೆಸ್-ಎಡಪಕ್ಷಗಳ ನಡ್ವೆ ಫಿಕ್ಸಿಂಗ್: ಪ್ರಧಾನಿ ಮೋದಿ

    ಕಾಂಗ್ರೆಸ್-ಎಡಪಕ್ಷಗಳ ನಡ್ವೆ ಫಿಕ್ಸಿಂಗ್: ಪ್ರಧಾನಿ ಮೋದಿ

    – ಒಬ್ಬರು ಚಿನ್ನ, ಮತ್ತೊಬ್ಬರು ಬೆಳ್ಳಿ ಕದ್ರು

    ತಿರುವನಂತಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಲಕ್ಕಾಡದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ. ಕೇರಳದ ಜನತೆ ಎಲ್‍ಡಿಎಫ್-ಯುಡಿಎಫ್ ರಾಜಕಾರಣಕ್ಕೆ ಬೇಸತ್ತಿದ್ದು, ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದರು.

    ಐದು ವರ್ಷ ಒಬ್ಬರು ಲೂಟಿ ಮಾಡ್ತಾರೆ, ಮತ್ತೈದು ವರ್ಷ ಮತ್ತೊಬ್ಬರು ಕನ್ನ ಹಾಕ್ತಾರೆ. ಒಬ್ಬರು ಚಿನ್ನ ಮತ್ತು ಮತ್ತೊಬ್ಬರು ಬೆಳ್ಳಿ ಕದ್ದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಂದೇ ಆಗಿವೆ. ಉತ್ತರ ಪ್ರದೇಶದಲ್ಲಿ ಜೊತೆಯಾಗಿದ್ದು, ಚುನಾವಣೆ ಹಿನ್ನೆಲೆ ಇಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕೇರಳ ವಿಕಾಸದ ಕುರಿತು ಮಾತನಾಡಿ ಮತಯಾಚನೆ ಮಾಡಿದರು. ದೇಶದ ಜನತೆ ವಿಕಾಸ ಮತ್ತು ವಿಶ್ವಾಸದ ಮೇಲೆ ಬಿಜೆಪಿ ಜೊತೆ ಕೈ ಜೋಡಿಸುತ್ತಿದ್ದಾರೆ ಎಂದು ಹೇಳಿದರು. ಈ ವೇದಿಕೆ ಮೇಲಿದ್ದ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅವರನ್ನ ಹಾಡಿ ಹೊಗಳಿದರು. ಕೆಲವರು ಸ್ವಾರ್ಥ ಅಥವಾ ತಮ್ಮ ಲಾಭಕ್ಕಾಗಿ ರಾಜಕಾರಣಕ್ಕೆ ಬರುತ್ತಾರೆ. ಆದ್ರೆ ಶ್ರೀಧರನ್, ತಮ್ಮ ಜೀವನವನ್ನೇ ದೇಶಕ್ಕೆ ಅರ್ಪಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿಯೂ ಕೇರಳ ಜನತೆಯ ಸೇವೆಗೆ ಮುಂದಾಗಿದ್ದಾರೆ ಎಂದು ಹೇಳಿದರು.