Tag: ಯುಜಿ ಸಿಇಟಿ

  • 2025ರ UG-CET ಫಲಿತಾಂಶ ಪ್ರಕಟ – 2,75,677 ವಿದ್ಯಾರ್ಥಿಗಳಿಗೆ ರ‍್ಯಾಂಕ್‌

    2025ರ UG-CET ಫಲಿತಾಂಶ ಪ್ರಕಟ – 2,75,677 ವಿದ್ಯಾರ್ಥಿಗಳಿಗೆ ರ‍್ಯಾಂಕ್‌

    ಬೆಂಗಳೂರು: ಯುಜಿ ಸಿಇಟಿ 2025ರ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, 2,75,677 ವಿದ್ಯಾರ್ಥಿಗಳಿಗೆ ರ‍್ಯಾಂಕ್‌ ನೀಡಲಾಗಿದೆ.

    ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

    3 ಲಕ್ಷದ 11 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,75,677 ವಿದ್ಯಾರ್ಥಿಗಳಿಗೆ ರ‍್ಯಾಂಕ್ ನೀಡಲಾಗಿದೆ. ಬೀದರ್‌ನಲ್ಲಿ ವಿದ್ಯಾರ್ಥಿ ಜನಿವಾರ ಹಾಕಿದ್ದಕ್ಕೆ ಎಕ್ಸಾಂಗೆ ಕೂರಿಸದ ಪ್ರಕರಣದಲ್ಲಿ ವಿದ್ಯಾರ್ಥಿಗೆ ಉಳಿದ ವಿಷಯಗಳ ಅಂಕಗಳ ಆಧಾರದಲ್ಲಿ ಸರಾಸರಿ ಅಂಕಗಳನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಇನ್ನು ಭೌತಶಾಸ್ತ್ರದಲ್ಲಿ ಒಂದು ಗ್ರೇಸ್ ಅಂಕ ನೀಡಲಾಗಿದೆ. ರಸಾಯನ ಶಾಸ್ತ್ರದಲ್ಲಿ 2 ಪ್ರಶ್ನೆಗಳಿಗೆ ಎರಡು ಸರಿ ಉತ್ತರ ಮತ್ತು ಜೀವಶಾಸ್ತ್ರದಲ್ಲಿ 1 ಪ್ರಶ್ನೆಗೆ ಎರಡು ಸರಿ ಉತ್ತರ ಅಂತ ಪರಿಗಣನೆ ಮಾಡಲಾಗಿದೆ ಎಂದು ತಿಳಿಸಿದರು. ರ‍್ಯಾಂಕ್ ಪಡೆದವರ ವಿವರ ಹೀಗಿದೆ…ಇದನ್ನೂ ಓದಿ: CET: ನೋಂದಣಿ ಸಂಖ್ಯೆ ನಮೂದಿಸುವಲ್ಲಿ ದೋಷ – ಕೆಇಎ

    ಸಿಇಟಿ ರ‍್ಯಾಂಕ್ ಡಿಟೇಲ್ಸ್:
    ಒಟ್ಟು ಪರೀಕ್ಷೆಗೆ ಅರ್ಜಿ ಹಾಕಿದವರು- 3,30,787 ವಿದ್ಯಾರ್ಥಿಗಳು.
    ಪರೀಕ್ಷೆ ಹಾಜರಾದವರು- 3,11,991 ವಿದ್ಯಾರ್ಥಿಗಳು.
    ಸಿಇಟಿ ರ‍್ಯಾಂಕ್ ಪಡೆದವರು- 2,75,677 ವಿದ್ಯಾರ್ಥಿಗಳು.
    ಎಂಜಿನಿಯರ್ ರ‍್ಯಾಂಕ್ ಪಡೆದವರು- 2,62,195 ವಿದ್ಯಾರ್ಥಿಗಳು
    BNYS ರ‍್ಯಾಂಕ್ ಪಡೆದವರು- 1,98,679 ವಿದ್ಯಾರ್ಥಿಗಳು.
    ಅಗ್ರಿಕಲ್ಚರ್ ರ‍್ಯಾಂಕ್ ಪಡೆದವರು- 2,14,588 ವಿದ್ಯಾರ್ಥಿಗಳು.
    ವೆಟರ್ನರಿ ರ‍್ಯಾಂಕ್- 2,18,282 ವಿದ್ಯಾರ್ಥಿಗಳು.
    ಬಿ ಫಾರ್ಮ್ ರ‍್ಯಾಂಕ್- 2,66,256 ವಿದ್ಯಾರ್ಥಿಗಳು.
    ಫಾರ್ಮ್ ಆ ರ‍್ಯಾಂಕ್ ಪಡೆದವರು- 2,66,757 ವಿದ್ಯಾರ್ಥಿಗಳು.
    ನರ್ಸಿಂಗ್ ರ‍್ಯಾಂಕ್ ಪಡೆದವರು- 2,08,171 ವಿದ್ಯಾರ್ಥಿಗಳು.

    ಟಾಪ್ 3 ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ವಿವರ:
    > ಎಂಜಿನಿಯರ್ ರ‍್ಯಾಂಕ್
    1. ಭವೇಶ್ ಜಯಂತಿ- 99.06% ಚೈತನ್ಯ ಟೆಕ್ನೋ ಮಾರತ್ ಹಳ್ಳಿ.
    2. ಸಾತ್ವಿಕ್ ಬಿರಾದರ್- 98.83% ಚೈತನ್ಯ ಟೆಕ್ನೊ ಉತ್ತರಹಳ್ಳಿ
    3. ದಿನೇಶ್ ಗೋಮತಿ- 98.67% ಚೈತನ್ಯ ಟೆಕ್ನೋ ಮಾತರ್ ಹಳ್ಳಿ.

    > ವೆಟರ್ನರಿ ರ‍್ಯಾಂಕ್

    1. ಹರೀಶ್ ರಾಜ್- ನಾರಾಯಣ ಇ ಟೆಕ್ನೊ, ದೊಡ್ಡ ಬೆಟ್ಟಹಳ್ಳಿ
    2. ಆತ್ರೇಯ ವೆಂಕಟಾಚಲಂ- ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.
    3. ಸಪಲ್ S ಶೆಟ್ಟಿ- ಎಕ್ಸ್‌ಪರ್ಟ್‌ ಪಿಯು ಕಾಲೇಜ್ ಮಂಗಳೂರು.

    > ಅಗ್ರಿಕಲ್ಚರ್ ರ‍್ಯಾಂಕ್
    1. ಅಕ್ಷಯ್ ಒ ಹೆಗ್ಡೆ- ಆಳ್ವಾಸ್ ಪಿಯು ಕಾಲೇಜ್, ಮೂಡಬಿದಿರೆ.
    2. ಸಾಯಿಶ್ ಶ್ರವಣ್ ಪಂಡಿತ್-ಎಕ್ಸ್‌ಪರ್ಟ್‌ ಪಿಯು ಕಾಲೇಜ್ ಮಂಗಳೂರು
    3. ಸುಚಿತ್ ಪಿ ಪ್ರಸಾದ್- ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು.

    >BNYS ರ‍್ಯಾಂಕ್
    1. ಹರೀಶ್ ರಾಜ್, ನಾರಾಯಣ ಇ ಟೆಕ್ನೊ ದೊಡ್ಡಬೆಟ್ಟಹಳ್ಳಿ
    2. ಆತ್ರೇಯ ವೆಂಕಟಾಚಲಂ- ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.
    3. ಸಫಲ್ ಎಸ್ ಶೆಟ್ಟಿ- ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು.

    > ನರ್ಸಿಂಗ್ ರ‍್ಯಾಂಕ್
    1. ಹರೀಶ್ ರಾಜ್, ನಾರಾಯಣ ಇ ಟೆಕ್ನೊ ದೊಡ್ಡಬೆಟ್ಟಹಳ್ಳಿ
    2. ಆತ್ರೇಯ ವೆಂಕಟಾಚಲಂ- ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.
    3. ಸಫಲ್ ಎಸ್ ಶೆಟ್ಟಿ- ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು.

    > ಫಾರ್ಮ್ D ರ‍್ಯಾಂಕ್
    1. ಆತ್ರೇಯ ವೆಂಕಟಾಚಲಂ- ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.
    2. ಭವೇಶ್ ಜಯಂತಿ- ಚೈತನ್ಯ ಟೆಕ್ನೊ, ಮಾರತ್ ಹಳ್ಳಿ.
    3. ಹರೀಶ್ ರಾಜ್, ನಾರಾಯಣ ಇ ಟೆಕ್ನೊ ದೊಡ್ಡಬೆಟ್ಟಹಳ್ಳಿ

    > B ಫಾರ್ಮ್ ರ‍್ಯಾಂಕ್
    1. ಆತ್ರೇಯ ವೆಂಕಟಾಚಲಂ- ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.
    2. ಭವೇಶ್ ಜಯಂತಿ- ಚೈತನ್ಯ ಟೆಕ್ನೊ, ಮಾರತ್ ಹಳ್ಳಿ.
    3. ಹರೀಶ್ ರಾಜ್, ನಾರಾಯಣ ಇ ಟೆಕ್ನೊ,ದೊಡ್ಡಬೆಟ್ಟಹಳ್ಳಿ ಯಲಹಂಕ.

    > ವೆಟರ್ನರಿ ಪ್ರಾಕ್ಟಿಕಲ್ ರಾಂಕ್
    1. ರಕ್ಷಿತಾ- HMR ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಲ್ಯಾಣ ನಗರ
    2. ನಂದನ್ ಟಿ.ಎಸ್- RK ವಿಷನ್ ಪಿಯು ಕಾಲೇಜ್, ಚಿಕ್ಕಬಳ್ಳಾಪುರ
    3. ಭುವನೇಶ್ವರಿ- ಶ್ರೀ ಉಮಾಮಹೇಶ್ವರಿ ಪಿಯು ಕಾಲೇಜ್, ರಾಯಚೂರು.

    ಅಗ್ರಿಕಲ್ಚರ್ ಪ್ರಾಕ್ಟಿಕಲ್ ರಾಂಕ್

    1. ಕೀರ್ತನಾ- ಶಾರದಾಂಬ ಪಿಯು ಕಾಲೇಜ್,ತುಮಕೂರು
    2. ರಕ್ಷಿತಾ- HMR ನ್ಯಾಷನಲ್ ಪಿಯು ಕಾಲೇಜ್, ಕಲ್ಯಾಣ ನಗರ
    3. ಅಶ್ವಿನಿ ಯಕ್ಕುಂಡಿ- ಎಕ್ಸಲೆನ್ಸ್ ಸೈನ್ಸ್ ಪಿಯು ಕಾಲೇಜ್, ವಿಜಯಪುರ.ಇದನ್ನೂ ಓದಿ: ರಾಜ್ಯದಲ್ಲಿ 35 ಕೋವಿಡ್ ಸಕ್ರಿಯ ಕೇಸ್, ಆತಂಕಪಡಬೇಕಿಲ್ಲ: ದಿನೇಶ್ ಗುಂಡೂರಾವ್

  • ಯುಜಿ ನೀಟ್ & ಯುಜಿ ಸಿಇಟಿ-24 | ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಆ.31 ರಿಂದ ʻಚಾಯ್ಸ್ʼ ಆಯ್ಕೆ!

    ಯುಜಿ ನೀಟ್ & ಯುಜಿ ಸಿಇಟಿ-24 | ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಆ.31 ರಿಂದ ʻಚಾಯ್ಸ್ʼ ಆಯ್ಕೆ!

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು  (Karnataka Examination Authority) ಯುಜಿ ನೀಟ್-24 ಮತ್ತು ಯುಜಿ ಸಿಇಟಿ-24 ಅಭ್ಯರ್ಥಿಗಳಿಗೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. ಉದ್ದೇಶಿತ ಪ್ರಕಟಣೆಗೂ ಎರಡು ದಿನ‌ ಮೊದಲೇ ಫಲಿತಾಂಶ ಪ್ರಕಟಿಸಿದೆ. ಇದರೊಂದಿಗೆ, ಅಭ್ಯರ್ಥಿಗಳಿಗೆ ʻಚಾಯ್ಸ್ʼ ಆಯ್ಕೆ ಪ್ರಕ್ರಿಯೆ ಆಗಸ್ಟ್ 31 ರಿಂದ (ಶನಿವಾರ) ಆರಂಭವಾಗಲಿದೆ.

    ವೈದ್ಯಕೀಯ, ದಂತವೈದ್ಯಕೀಯ, ಆಯುಷ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ, ಬಿಎಸ್ಸಿ (ನರ್ಸಿಂಗ್), ಯೋಗ ಮತ್ತು ನ್ಯಾಚುರೋಪತಿ ಮುಂತಾದ ಕೋರ್ಸ್‌ಗಳ ಅಭ್ಯರ್ಥಿಗಳಿಗೆ (UG-NEET Candidate) ಇದು ಅನ್ವಯವಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಪೋಷಕರ ಜೊತೆ ಚರ್ಚಿಸಿ ಸೂಕ್ತ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಆಗಸ್ಟ್ 31ರ ಬೆಳಿಗ್ಗೆ 11 ರಿಂದ ಸೆಪ್ಟೆಂಬರ್ 3ರ ವರೆಗೆ (ರಾತ್ರಿ 11.59) ಅವಕಾಶವಿರುತ್ತದೆ. ಅಭ್ಯರ್ಥಿಗಳು ನಾಲ್ಕು ಚಾಯ್ಸ್‌ಗಳಲ್ಲಿ ತಮಗೆ ಸರಿ ಎನಿಸುವ ಯಾವುದಾದರೂ ಒಂದು ಚಾಯ್ಸ್ ಆಯ್ಕೆ ಮಾಡುವ ಮೊದಲು, ಅದಕ್ಕೆ ಸಂಬಂಧಿಸಿದ ವಿವರಣೆ ಓದಿ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

    ಚಾಯ್ಸ್ 1 ಮತ್ತು ಚಾಯ್ಸ್ 2 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಆಗಸ್ಟ್ 31ರ ಮಧ್ಯಾಹ್ನ 1ರಿಂದ ಸೆಪ್ಟೆಂಬರ್ 4ರ ಸಂಜೆ 4ರ ಒಳಗೆ ಶುಲ್ಕ ಪಾವತಿಸಬೇಕು.

    ಚಾಯ್ಸ್-1 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿದ ನೀಟ್ ಅಭ್ಯರ್ಥಿಗಳು ಮೂಲ ದಾಖಲೆಗಳು ಮತ್ತು ಎರಡು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಕೆಇಎ, ಬೆಂಗಳೂರು ಇಲ್ಲಿಗೆ ಖುದ್ದಾಗಿ ಸಲ್ಲಿಸಲು ಸೆಪ್ಟೆಂಬರ್ 2ರ ಬೆಳಿಗ್ಗೆ 10:30 ರಿಂದ ಸೆಪ್ಟೆಂಬರ್ 4ರ ಸಂಜೆ 4ರ ವರೆಗೆ ಅವಕಾಶವಿರುತ್ತದೆ. (ಯಾವ ವರ್ಗದ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಸೂಚನೆ ಓದಿ ತಿಳಿದುಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ).

    ಚಾಯ್ಸ್ 1 ಆಯ್ಕೆ ಮಾಡಿ ಶುಲ್ಕ ಪಾವತಿಸಿ ಮೂಲ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಸೆಪ್ಟೆಂಬರ್ 2 ರಿಂದ ಸೆಪ್ಟಂಬರ್ 5ರ ಒಳಗೆ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಸೀಟು ಹಂಚಿಕೆಯಾದ ಕಾಲೇಜುಗಳಲ್ಲಿ ಸೆ.5ರ ಸಂಜೆ 5:30ಕ್ಕೆ ಮುಂಚೆ ಪ್ರವೇಶ ಪಡೆಯಬೇಕು. ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಮುಗಿಸುವ ಸಲುವಾಗಿ ಎಲ್ಲಾ ಶನಿವಾರ, ಭಾನುವಾರ ಹಾಗೂ ಗೆಜೆಟ್ ಪ್ರಕಟಿತ ರಜಾದಿನಗಳನ್ನು ಕೆಲಸದ ದಿನಗಳೆಂದು ಪರಿಗಣಿಸಲಾಗುವುದು ಎಂದು ಹೆಚ್. ಪ್ರಸನ್ನ ಹೇಳಿದ್ದಾರೆ.

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಎಂಜಿನಿಯರಿಂಗ್ ಪ್ರವೇಶ ಪಡೆಯುವ ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಸಂಬಂಧಪಟ್ಟ ಕಾಲೇಜುಗಳಿಗೆ ಹೋಗಿ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್‌ಸೈಟ್‌ ಗಮನಿಸುವಂತೆ ತಿಳಿಸಿದ್ದಾರೆ.