Tag: ಯಶೋಮತಿ

  • ಶಾಸಕನಾಗಲು ಹೀಗೆ ಮಾಡ್ತಿದ್ದೀಯಾ?- ಪಾಟೀಲ್ ಪುತ್ರನಿಗೆ ಕೈ ಶಾಸಕಿ ಅವಾಜ್

    ಶಾಸಕನಾಗಲು ಹೀಗೆ ಮಾಡ್ತಿದ್ದೀಯಾ?- ಪಾಟೀಲ್ ಪುತ್ರನಿಗೆ ಕೈ ಶಾಸಕಿ ಅವಾಜ್

    ಮುಂಬೈ: ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆಯುತ್ತಿರೋ ಮುಂಬೈನ ಸೈಂಟ್ ಜಾರ್ಜ್ ಆಸ್ಪತ್ರೆ ಬಳಿ ಭಾರೀ ಹೈಡ್ರಾಮಾ ನಡೆದಿದೆ.

    ಶ್ರೀಮಂತ್ ಪಾಟೀಲ್ ಭೇಟಿಯಾಗಲು ಮುಂಬೈನ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಯಶೋಮತಿ ಠಾಕೂರ್ ಆಗಮಿಸಿದರು. ಆದರೆ ಶಾಸಕಿಗೆ ಶ್ರೀಮಂತ್ ಪಾಟೀಲ್ ಅವರನ್ನು ಭೇಟಿಯಾಗಲು ಅವಕಾಶವೇ ಸಿಗಲಿಲ್ಲ.

    ಬಾಗಿಲಲ್ಲೇ ನಿಂತಿದ್ದ ಶ್ರೀಮಂತ್ ಪಾಟೀಲ್ ಪುತ್ರ ಶ್ರೀನಿವಾಸ್, ಶಾಸಕಿಯನ್ನು ತಡೆದರು. ಈ ವೇಳೆ ಶ್ರೀನಿವಾಸ್ ಹಾಗೂ ಶಾಸಕಿ ಯಶೋಮತಿ ನಡುವೆ ಮಾತಿನ ಚಕಮಕಿ ನಡೆಯಿತು. ನೀನು ಎಂಎಲ್‍ಎ ಆಗಲು ಇದನ್ನೆಲ್ಲಾ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ ಶಾಸಕಿ, ಬಿಡು ನಿಮ್ಮಪ್ಪನನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇವೆ ಎಂದು ಯಶೋಮತಿ ಗಲಾಟೆ ಮಾಡಿದ್ದಾರೆ.

    ಮಹಾರಾಷ್ಟ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಶಾಸಕಿ ಯಶೋಮತಿಯನ್ನು ಆಸ್ಪತ್ರೆ ಒಳ ಹೋಗದಂತೆ ತಡೆದರು.

  • ಯಶೋಮತಿಯಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ- ಸುನಿಲ್ ಹೆಗ್ಗರವಳ್ಳಿ

    ಯಶೋಮತಿಯಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ- ಸುನಿಲ್ ಹೆಗ್ಗರವಳ್ಳಿ

    ಬೆಂಗಳೂರು: ಮಾಧ್ಯಮದ ಮೂಲಕ ಪತ್ರಕರ್ತ ರವಿ ಬೆಳಗೆಯವರ ಪತ್ನಿ ಯಶೋಮತಿ ಅವರ ಫೇಸ್‍ಬುಕ್ ಸ್ಟೇಟಸ್ ನ್ನು ಗಮನಿಸಿದ್ದೇನೆ. ಸುನಿಲ್ ವಿರುದ್ಧದ ಹೇಳಿಕೆ ಅಂತ ನನಗನ್ನಿಸಿಲ್ಲ. ಆದ್ರೆ ಯಶೋಮತಿಯವರಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ ಅಂತ ಸುನಿಲ್ ಹೆಗ್ಗರವಳ್ಳಿ ಪ್ರತಿಕ್ರಿಯಿಸಿದ್ದಾರೆ.

    ಕೊಲೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ಕರೆದಿರುವ ಹಿನ್ನೆಲೆಯಲ್ಲಿ ಇಂದು ಸುನಿಲ್ ಹೆಗ್ಗರವಳ್ಳಿ ಕಮಿಷನರ್ ಕಚೇರಿಗೆ ಬಂದಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶೋಮತಿಯವರ ಸ್ಟೇಟಸ್ ನ ಮೊದಲನೇ ಲೈನ್ ನಲ್ಲಿ ನನ್ನ ಮಗ ಎರಡು ದಿನದಿಂದ ಶಾಲೆಗೆ ಹೋಗಲಿಲ್ಲ. ಊಟ ಮಾಡಲೆಂದು ಅನ್ನ ಹಾಕ್ಕೊಂಡ್ರೆ ರವಿ ಕಣ್ಣೆದುರಿಗೆ ಬರುತ್ತಾರೆ ಅಂತೆಲ್ಲಾ ಬರೆದಿದ್ದಾರೆ. ಹಾಗೆಯೇ ನನಗೂ ಕುಟುಂಬ ಇದೆ. ನನಗೂ 80 ವರ್ಷದ ತಂದೆ, 75 ವರ್ಷದ ತಾಯಿಯಿದ್ದಾರೆ. 8 ವರ್ಷದ ಮಗ ಇದ್ದಾನೆ. ಒಂದು ವೇಳೆ ನನಗೇನಾದ್ರೂ ಹೆಚ್ಚು ಕಡಿಮೆ ಆಗಿದ್ರೆ ಅಥವಾ ನನ್ನ ಕೊಲೆಯೇ ಆಗಿದ್ರೆ ಇಂದು ನನ್ನ ತಂದೆ-ತಾಯಿ, ಹೆಂಡ್ತಿ-ಮಗನ ಸ್ಥಿತಿ ಹೇಗಿರುತ್ತಿತ್ತು ಎಂದು ಪ್ರಶ್ನಿಸಿದ ಅವರು, ಇಂದು ಅದೃಷ್ಟವಶಾತ್ ನಾನು ಬದುಕಿದ್ದೀನಿ. ಹೀಗಾಗಿ ಅವರು ಅತ್ಯಂತ ಸುಲಭವಾಗಿ ಈ ಮಾತುಗಳನ್ನು ಹೇಳಬಹುದು ಅಂತ ಹೇಳಿದ್ರು. ಇದನ್ನೂ ಓದಿ: ಸುನಿಲ್ ಹೆಗ್ಗರವಳ್ಳಿ ವಿರುದ್ಧ ಮೊದಲ ಬಾರಿಗೆ ಸಿಡಿದ ಯಶೋಮತಿ

    ಬಳಿಕ ಹೇಡಿತರ ರಕ್ಷಣೆ ಕೇಳಿದ್ದಾನೆ ಅಂತ ಹೇಳಿದ್ದಾರೆ. ಹೇಡಿ ಅನ್ನೋದಕ್ಕಿಂತ ನನಗೂ ಒಂದು ಜವಾಬ್ದಾರಿ ಇದೆ. ಯಾರು ಹೇಡಿ ಅನ್ನೋದು ಈಗಾಗ್ಲೇ ಎಲ್ಲರಿಗೂ ತಿಳಿದಿದೆ. ನನಗೆ ನನ್ನ ತಂದೆ-ತಾಯಿ, ಪತ್ನಿ ಮಗ ಇವರೆಲ್ಲರ ಜವಾಬ್ದಾರಿ ಇದ್ದಾಗ, ನಾನು ರವಿ ಬೆಳಗೆರೆ ಎದುರಿಗೆ ಎದೆ ಬಿಚ್ಚಿ ರಿವಾಲ್ವರ್ ಕೊಟ್ಟು ಗುಂಡು ಹೊಡಿರಿ ಅಂತ ಕೇಳಕ್ಕಾಗಲ್ಲ. ಹೀಗಾಗಿ ಒಂದು ಪ್ರಕರಣ ನಡೆದಾಗ ಯಾವ ರೀತಿ ನಡೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಅದೇ ರೀತಿ ನಾನು ನಡೆದುಕೊಳ್ಳುತ್ತಿದ್ದೇನೆ. ಒಟ್ಟಿನಲ್ಲಿ ಯಶೋಮತಿಯವರಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ. ಹಾಗೆಯೇ ಅವರ ಸಲಹೆ ನನಗೆ ಬೇಕಾಗಿಲ್ಲ. ಅವರ ವಿಷಯ ಏನ್ ಬೇಕಾದ್ರೂ ಮಾತನಾಡಿಕೊಳ್ಳಲಿ. ಆದ್ರೆ ನನ್ನ ಹಾಗೂ ನನ್ನ ಕುಟುಂಬದ ವಿಷಯಕ್ಕೆ ಅವರು ಬರುವುದು ಬೇಡ ಅಂತ ಸುನಿಲ್ ಹೆಗ್ಗರವಳ್ಳಿ ಎಚ್ಚರಿಕೆ ನೀಡಿದ್ದಾರೆ.

    ಭದ್ರತೆಗೆ ಕೋರಿಕೆ: ನನಗೆ ಭದ್ರತೆ ಬೇಕು. ಹೀಗಾಗಿ ಈಗಾಗಲೆ ಸಿಎಂ, ಗೃಹಸಚಿವರನ್ನು ಭೇಟಿಯಾಗಿದ್ದೇನೆ. ಸಿಎಂ ಕೂಡ ಭದ್ರತೆ ಕೊಡಿಸುವುದಾಗಿ ಹೇಳಿದ್ರು. ಇಂಟಲಿಜೆನ್ಸ್ ಕರೆ ಮಾಡಿ ಸ್ಟೇಟ್ ಸ್ ಚೆಕ್ ಮಾಡಿದ್ರು. ನನಗೆ ಗನ್ ಮ್ಯಾನ್ ಬೇಕು ಅಂತ ಹೇಳಿದ್ದೀನಿ ವಿಚಾರ ಮಾಡಿ ನಮಗೆ ವ್ಯವಸ್ಥೆ ಮಾಡ್ತಾರೆ. ರವಿ ಬೆಳಗೆರೆ ಪ್ರಭಾವಿ ವ್ಯಕ್ತಿ ಹೀಗಾಗಿ ಭದ್ರತೆಗೆ ಕೋರಿದ್ದೆನೆ. ಆದ್ರೆ ಗನ್ ಮ್ಯಾನ್ ಕೊಡ್ತಾರೋ ಏನೋ ಸರ್ಕಾರಕ್ಕೆ ಬಿಟ್ಟ ವಿಚಾರ ಅಂತ ಸುನಿಲ್ ಹೇಳಿದ್ದಾರೆ.

  • ಸುನಿಲ್ ಹೆಗ್ಗರವಳ್ಳಿ ವಿರುದ್ಧ ಮೊದಲ ಬಾರಿಗೆ ಸಿಡಿದ ಯಶೋಮತಿ

    ಸುನಿಲ್ ಹೆಗ್ಗರವಳ್ಳಿ ವಿರುದ್ಧ ಮೊದಲ ಬಾರಿಗೆ ಸಿಡಿದ ಯಶೋಮತಿ

    ಬೆಂಗಳೂರು: ಸೋಮವಾರ ಪತಿ ರವಿ ಬೆಳಗೆರೆಯನ್ನು ಬೆಂಬಲಿಸಿ ಪೋಸ್ಟ್ ಪ್ರಕಟಿಸಿದ್ದ ಯಶೋಮತಿ ಸಾರಂಗಿ ಅವರು ಮಂಗಳವಾರ ಫೇಸ್‍ಬುಕ್ ನಲ್ಲಿ ಸುನಿಲ್ ಹೆಗ್ಗರವಳ್ಳಿ ವಿರುದ್ಧ ಸಿಡಿದಿದ್ದಾರೆ.

    “ನಾನೇನಾದರೂ ಸುನಿಲ್ ಹೆಗ್ಗರವಳ್ಳಿಯ ಸ್ಥಾನದಲ್ಲಿದ್ದಿದ್ದರೆ ಅವರ ಪರಮ ಗುರುವಾದ ರವಿಯ ಬಗ್ಗೆ ಹೀಗೆಲ್ಲ ಮಾಧ್ಯಮದಲ್ಲಿ ಅವಮಾನಕರ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ. ಇನ್ನೊಂದೆರಡು ಕೇಸುಗಳು ಜಡಿಯುವಂತೆ ಪ್ರೇರೇಪಿಸುತ್ತಿರಲಿಲ್ಲ. ಜೊತೆಗೆ ಹೆದರಿ ಪೊಲೀಸ್ ರಕ್ಷಣೆಯನ್ನು ಕೇಳುತ್ತಲೂ ಇರಲಿಲ್ಲ” ಎಂದು ಬರೆದಿದ್ದಾರೆ.

    ಸೋಮವಾರ ಪ್ರಕಟಿಸಿದ ಪೋಸ್ಟಿಗೆ ಸಂಬಂಧಿಸಿದಂತೆ ಬಂದಿರುವ ಕಮೆಂಟ್ ಗಳಿಗೆ ಪ್ರತಿಕ್ರಿಯಿಸುವ ವೇಳೆ ಯಶೋಮತಿ ಈ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹೀಗಾಗಿ ಇಲ್ಲಿ ಯಶೋಮತಿ ಅವರ ಎರಡು ಪೋಸ್ಟ್ ಗಳನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

    ಮಂಗಳವಾರದ ಬರಹ:
    ಪ್ರತಿಕ್ರಿಯಿಸಿದ ಎಲ್ಲರಿಗೂ ಚಿರರುಣಿ… ವಿ ಆಲ್ ಲವ್ ರವಿ…ನಮ್ಮ ಹಿಮ ಇನ್ನೂ ಚಿಕ್ಕವನಾದ್ದರಿಂದ ಹಿ ಲವ್ಸ್ ಮೋರ್ ದೆನ್ ಅಸ್, ಹೀ ನೀಡ್ಸ್ ಹಿಸ್ ಕಂಪ್ಲೀಟ್ ಲವ್. ಎರಡು ದಿನದಿಂದ ಶಾಲೆಗೆ ಹೋಗಿಲ್ಲ. ಸ್ವಲ್ಪ ಡಿಸ್ಟರ್ಬ್ ಆದಂತೆ ಕಾಣ್ತಿದ್ದಾನೆ. ಬಟ್ ಐ ಆ್ಯಮ್ ದೇರ್ ಫಾರ್ ಹಿಮ್ ಅವರೆಲ್ಲೋ ಜೋಯಿಡಾದಲ್ಲೋ, ಆಫೀಸಲ್ಲೋ, ಕರಿಶ್ಮಾ ಹಿಲ್ಸ್ ನಲ್ಲೋ ಇದ್ದಾರೆ ಅಂದ್ರೆ ನಮಗೂ ಒಂದು ರೀತಿಯ ಭರವಸೆ ಇರುತ್ತಿತು.್ತ ಅವರು ಸುರಕ್ಷಿತವಾಗಿದ್ದಾರೆಂದು. ಊಟದ ಮುಂದೆ ಕುಳಿತರೆ ಕಣ್ತುಂಬಿ ಬರುತ್ತೆ. ಧುತ್ತನೆ ಒಂದು ಅನೂಹ್ಯ ಘಟನೆ ಎದುರಾದಾಗ ಆಘಾತ, ಆತಂಕ, ಕುತೂಹಲ, ದಿಗ್ಭ್ರಮೆಗಳು ಎಲ್ಲರ ಮನದಲ್ಲಿ ಮೂಡುವುದು ಸಹಜವೇ. ಆ ಸಮಯದಲ್ಲಿ ನೀಡುವ ಪ್ರತಿಕ್ರಿಯೆಗಳು ಇನ್ನಷ್ಟು ಗೊಂದಲಗಳನ್ನುಂಟು ಮಾಡುವಂತಾಗಬಾರದು ಅಷ್ಟೆ.

    ಮಾಧ್ಯಮದವರಿಗೆ ನನ್ನ ಮನವಿ. “ನಾನು ಮನೆಬಿಟ್ಟು ಓಡಿ ಹೋಗಿದ್ದೇನೆ”, “ಪೊಲೀಸರ ಮುಂದೆ ಸಿಟ್ಟಿನಿಂದ ವರ್ತಿಸಿದ್ದೇನೆ”, “ನನ್ನ ಹೇಳಿಕೆಯಿಂದಲೇ ರವಿಗೆ ಇಂದು ಈ ಗತಿ ಬಂದಿದೆ” ಎಂದೆಲ್ಲ ಇಲ್ಲಸಲ್ಲದ ಮಾತುಗಳನ್ನು ಪ್ರಸರಿಸಬೇಡಿ. ದೈಹಿಕವಾಗಿ ಅನಾರೋಗ್ಯಗೊಂಡಾಗ ಮಾನಸಿಕವಾಗಿಯೂ ಬಲಹೀನರಾಗುತ್ತಾರೆ. ಹೀಗಾಗಿ ನಮಗೆಲ್ಲ ರವಿಯ ಆರೋಗ್ಯದ ಬಗ್ಗೆಯೇ ಬಹಳವಾಗಿ ಆತಂಕವಾಗುತ್ತಿದೆ.

    ಇನ್ನು ಸುನೀಲ್ ಹೆಗ್ಗರವಳ್ಳಿಯವರು ‘ಹಾಯ್ ಬೆಂಗಳೂರ್’ ಕಚೇರಿಯಲ್ಲಿ ಬಹಳ ಕಾಲದಿಂದ ಸಹೋದ್ಯೋಗಿಯಾಗಿ ದುಡಿದಿದ್ದರಿಂದ ಅದಕ್ಕಿಂತ ಹೆಚ್ಚಾಗಿ ಅವರು ಸದಾ ರವಿಯ ಒಳಿತನ್ನೇ ಬಯಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆನಷ್ಟೆ. ಅದರ ಹೊರತಾಗಿ ಮತ್ಯಾವ ಕಾರಣವೂ ಇಲ್ಲ. ಒಂದುವೇಳೆ ಅನುಮಾನಗೊಂಡು ಸುಪಾರಿ ಕೊಟ್ಟಿದ್ದರೆಂದೇ ಊಹಿಸಿಕೊಂಡಾಗ ನಾನೇನಾದರೂ ಸುನಿಲ್ ಹೆಗ್ಗರವಳ್ಳಿಯ ಸ್ಥಾನದಲ್ಲಿದ್ದಿದ್ದರೆ ಅವರ ಪರಮ ಗುರುವಾದ ರವಿಯ ಬಗ್ಗೆ ಹೀಗೆಲ್ಲ ಮಾಧ್ಯಮದಲ್ಲಿ ಅವಮಾನಕರ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ. ಇನ್ನೊಂದೆರಡು ಕೇಸುಗಳು ಜಡಿಯುವಂತೆ ಪ್ರೇರೇಪಿಸುತ್ತಿರಲಿಲ್ಲ. ಜೊತೆಗೆ ಹೆದರಿ ಪೊಲೀಸ್ ರಕ್ಷಣೆಯನ್ನು ಕೇಳುತ್ತಲೂ ಇರಲಿಲ್ಲ. “ನಿಮ್ಮ ಕೈಯಲ್ಲೇ ಪ್ರಾಣ ಹೋಗುವುದಾದರೆ ಅದಕ್ಕಿಂತ ಹೆಚ್ಚಿನ ಸಂತೋಷ ಬೇರೇನಿದೆ. ನೀವು ನನ್ನನ್ನು ತಂದೆಯಾಗಿ, ಗುರುವಾಗಿ ಸಲಹಿದ್ದೀರಿ ಎಂದು ಅವರ ಕೈಗೆ ಬಂದೂಕನ್ನ ನಾನೇ ಕೊಡುತ್ತಿದ್ದೆ.”

    ಇನ್ನು ರವಿ ದುಡಿದ ಹಣ, ಆಸ್ತಿ ಎಲ್ಲವೂ ಅವರ ಸ್ವಯಾರ್ಜಿತ. ಅದೆಲ್ಲದರ ಹಕ್ಕುದಾರರೂ ಅವರೇ. ನಾನವರನ್ನು ಪ್ರೀತಿಸಿದಾಗ ಅವರ ಮನೆ ಹಾಗೂ ಕಚೇರಿಗಳು ಬಾಡಿಗೆ ಕಟ್ಟಡಗಳಾಗಿದ್ದವು. ಅವರಿಂದ ನಾನು ಸದಾ ಬಯಸುವುದು ನಿಷ್ಕಲ್ಮಷ ಪ್ರೀತಿ ಹಾಗೂ ಅವರ ನಿರಂತರ ಸಮಾಜಮುಖಿ ಬರವಣಿಗೆ. ಹಿಮವಂತನಿಗೆ ಅಪ್ಪನ ಒಡನಾಟದ ಅಗತ್ಯವಿದೆ. ಆ ಮಗುವಿಗೆ ಅದರ ಸವಿ ಸದಾ ಸಿಗಲೆಂದು ನಿಮ್ಮೆಲ್ಲರ ಹಾರೈಕೆಯಿರಲಿ.

    ಸೋಮವಾರದ ಬರಹ:
    ಮೊನ್ನೆ ತಾನೇ ನಡೆದ ಹಿಮನ ಬರ್ತ್ ಡೇಯ ಫೊಟೋಗಳನ್ನು ನೋಡುತ್ತಾ ಕುಳಿತಿದ್ದೆ. ಅದರಲ್ಲಿ ಕೆಲವನ್ನು ಸೆಲೆಕ್ಟ್ ಮಾಡಿ ರವಿಗೆ ಕಳಿಸಬೇಕು ಅಂದುಕೊಳ್ಳುವಷ್ಟರಲ್ಲಿ…“ಯಶೂ ಮಾ ಎಲ್ಲಿದ್ದೀರ? ಒಂದು ಸ್ವಲ್ಪ ಟಿವಿ ನೋಡಿ” ಅಂದ ಕೂಡಲೇ ಅದನ್ನು ಅಲ್ಲೇ ಬಿಟ್ಟು ಟಿವಿ ಆನ್ ಮಾಡಿದವಳ ಕಿವಿಗೆ ಮೊದಲು ರಾಚಿದ್ದೇ ನನ್ನ ಹೆಸರು… ಏನಾಗ್ತಿದೆ? ನನ್ನ ಹೆಸರು ಯಾಕೆ ಬರ್ತಿದೆ ಅದೂ ನಂಗೇ ಗೊತ್ತಿಲ್ಲದೇ…. ಹಿಮ ಬೇರೆ ಸ್ಕೂಲಿಂದ ಬರುವ ಹೊತ್ತಾಗಿತ್ತು. ಮೊದಲು ಓಡಿ ಹೋಗಿ ಅವನನ್ನು ಕರೆದುಕೊಂಡು ಬಂದೆ.

    ರಾತ್ರಿಯಿಡೀ ಒಂದೇ ಸಮನೆ ಟಿವಿಗಳಲ್ಲಿ ಬಿತ್ತರವಾಗುತ್ತಿದ್ದ ಸುದ್ದಿಗಳು ಕಿವಿಗೆ ಕಾದ ಸೀಸದಂತೆ ಬೀಳುತ್ತಿದ್ದವು. ಕಚೇರಿಯಲ್ಲಿ ಫೋನುಗಳೆಲ್ಲ ಪೊಲೀಸರ ವಶದಲ್ಲಿದ್ದವು. ಹಾಗಾಗಿ ಎಲ್ಲಿಂದಲೂ ಉತ್ತರ ಸಿಗುತ್ತಿಲ್ಲ. ಸರಿ ಆದದ್ದಾಗಲಿ ನೋಡೋಣ ಭಗವಂತನೊಬ್ಬನಿದ್ದಾನೆ ಅಂದು ಧೈರ್ಯವಾಗಿ ಕುಳಿತವಳಿಗೆ ಅಮ್ಮ, ತಂಗಿ, ಅಣ್ಣನ ಮಗನ ಜೊತೆಗೆ ಗೆಳತಿಯರ ಧೈರ್ಯ ತುಂಬುವ ಮೆಸೇಜುಗಳು ಜೊತೆಯಾದವು.

    ಅಮ್ಮಾ ಯಾವುದಕ್ಕೂ ಹೆದರಿಕೊಳ್ಳಬೇಡ. ಏನೇ ಬಂದ್ರೂ ಧೈರ್ಯವಾಗಿ ಫೇಸ್ ಮಾಡು…. ಅಂದ ಹಿಮ. ಅನುಮಾನಗಳು, ಅವಮಾನಗಳು, ಆರೋಪಗಳು ಬೆನ್ನ ಹಿಂದೆ ನೆರಳಿನಂತೆ ನಡೆದು ಬರುತ್ತಲೇ ಇವೆ. ನಿಖರವಾದ ಮಾಹಿತಿಯಿಲ್ಲದೆ ಟಿವಿ ಮಾಧ್ಯಮಗಳು ತಮಗೆ ಬೇಕಾದ ಬಣ್ಣ ತುಂಬಿ ಒಂದು ರೀತಿಯ ರಿವೇಂಜಿಗಿಳಿದಿವೆ. ಕೆಲವರಿಗೆ ಮನರಂಜನೆ, ಕೆಲವರಿಗೆ ಆತಂಕ. ಕೆಲವರಿಗೆ ಕುತೂಹಲ. ಇನ್ನು ಕೆಲವರಿಗೆ ಅನುಮಾನ..

    “ಏನೂ ಯೋಚನೆ ಮಾಡಬೇಡ ನಂಗೇನೂ ಆಗಲ್ಲ” ಅಂತ ಚೆಲ್ಲಿ ಹೋದ ರವಿಯ ನಗುವೇ ಮನೆ ಮನ ತುಂಬಿದೆ. ಅದೇ ನಿರೀಕ್ಷೆಯಲ್ಲಿದ್ದೇವೆ ನಾನು ಹಿಮ. ನಿಮಗೇನೂ ಆಗಲ್ಲ ವೀ. ನಮ್ಮೆಲ್ಲರ ಪ್ರಾರ್ಥನೆ ಸದಾ ನಿಮ್ಮೊಂದಿಗಿದೆ. ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ. ಇದನ್ನೂ ಓದಿ: Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

  • ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ: ಯಶೋಮತಿ

    ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ: ಯಶೋಮತಿ

    ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಜೈಲುಪಾಲಾಗಿದ್ದಾರೆ. ಒಂದನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದೆ.

    ರವಿ ಬೆಳಗೆರೆ ಜೈಲುಪಾಲದ ಬೆನ್ನಲ್ಲೇ ಅವರ ಪತ್ನಿ ಯಶೋಮತಿ ಸಾರಂಗಿ ಸಂಜೆ 6.54ಕ್ಕೆ ಫೇಸ್‍ಬುಕ್ ನಲ್ಲಿ ಸಣ್ಣ ಬರಹ ಪ್ರಕಟಿಸಿದ್ದಾರೆ. ಇದೊಂದು ಸಣ್ಣ ಪರೀಕ್ಷೆ ಅಷ್ಟೇ ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ ಎಂದು ಕೊನೆಯಲ್ಲಿ ಬರೆದು ಈ ಬರಹವನ್ನು ಅವರು ಪೂರ್ಣಗೊಳಿಸಿದ್ದಾರೆ.

    ಯಶೋಮತಿ ಅವರ ಎಫ್‍ಬಿ ಪೋಸ್ಟ್ ನ ಯಥಾವತ್ ಬರಹ ಇಲ್ಲಿದೆ:
    ಮೊನ್ನೆ ತಾನೇ ನಡೆದ ಹಿಮನ ಬರ್ತ್ ಡೇಯ ಫೊಟೋಗಳನ್ನು ನೋಡುತ್ತಾ ಕುಳಿತಿದ್ದೆ. ಅದರಲ್ಲಿ ಕೆಲವನ್ನು ಸೆಲೆಕ್ಟ್ ಮಾಡಿ ರವಿಗೆ ಕಳಿಸಬೇಕು ಅಂದುಕೊಳ್ಳುವಷ್ಟರಲ್ಲಿ…“ಯಶೂ ಮಾ ಎಲ್ಲಿದ್ದೀರ? ಒಂದು ಸ್ವಲ್ಪ ಟಿವಿ ನೋಡಿ” ಅಂದ ಕೂಡಲೇ ಅದನ್ನು ಅಲ್ಲೇ ಬಿಟ್ಟು ಟಿವಿ ಆನ್ ಮಾಡಿದವಳ ಕಿವಿಗೆ ಮೊದಲು ರಾಚಿದ್ದೇ ನನ್ನ ಹೆಸರು… ಏನಾಗ್ತಿದೆ? ನನ್ನ ಹೆಸರು ಯಾಕೆ ಬರ್ತಿದೆ ಅದೂ ನಂಗೇ ಗೊತ್ತಿಲ್ಲದೇ…. ಹಿಮ ಬೇರೆ ಸ್ಕೂಲಿಂದ ಬರುವ ಹೊತ್ತಾಗಿತ್ತು. ಮೊದಲು ಓಡಿ ಹೋಗಿ ಅವನನ್ನು ಕರೆದುಕೊಂಡು ಬಂದೆ. ಇದನ್ನೂ ಓದಿ: ಬೆಳಗೆರೆ ವಿರುದ್ಧ ಸಿಸಿಬಿ ಪೊಲೀಸರು ಸಲ್ಲಿಸಿದ್ದ ಜಾಮೀನು ಆಕ್ಷೇಪಣೆಯಲ್ಲಿ ಏನಿದೆ ಗೊತ್ತಾ?

    ರಾತ್ರಿಯಿಡೀ ಒಂದೇ ಸಮನೆ ಟಿವಿಗಳಲ್ಲಿ ಬಿತ್ತರವಾಗುತ್ತಿದ್ದ ಸುದ್ದಿಗಳು ಕಿವಿಗೆ ಕಾದ ಸೀಸದಂತೆ ಬೀಳುತ್ತಿದ್ದವು. ಕಚೇರಿಯಲ್ಲಿ ಫೋನುಗಳೆಲ್ಲ ಪೊಲೀಸರ ವಶದಲ್ಲಿದ್ದವು. ಹಾಗಾಗಿ ಎಲ್ಲಿಂದಲೂ ಉತ್ತರ ಸಿಗುತ್ತಿಲ್ಲ. ಸರಿ ಆದದ್ದಾಗಲಿ ನೋಡೋಣ ಭಗವಂತನೊಬ್ಬನಿದ್ದಾನೆ ಅಂದು ಧೈರ್ಯವಾಗಿ ಕುಳಿತವಳಿಗೆ ಅಮ್ಮ, ತಂಗಿ, ಅಣ್ಣನ ಮಗನ ಜೊತೆಗೆ ಗೆಳತಿಯರ ಧೈರ್ಯ ತುಂಬುವ ಮೆಸೇಜುಗಳು ಜೊತೆಯಾದವು.

    ಅಮ್ಮಾ ಯಾವುದಕ್ಕೂ ಹೆದರಿಕೊಳ್ಳಬೇಡ. ಏನೇ ಬಂದ್ರೂ ಧೈರ್ಯವಾಗಿ ಫೇಸ್ ಮಾಡು…. ಅಂದ ಹಿಮ. ಅನುಮಾನಗಳು, ಅವಮಾನಗಳು, ಆರೋಪಗಳು ಬೆನ್ನ ಹಿಂದೆ ನೆರಳಿನಂತೆ ನಡೆದು ಬರುತ್ತಲೇ ಇವೆ. ನಿಖರವಾದ ಮಾಹಿತಿಯಿಲ್ಲದೆ ಟಿವಿ ಮಾಧ್ಯಮಗಳು ತಮಗೆ ಬೇಕಾದ ಬಣ್ಣ ತುಂಬಿ ಒಂದು ರೀತಿಯ ರಿವೇಂಜಿಗಿಳಿದಿವೆ. ಕೆಲವರಿಗೆ ಮನರಂಜನೆ, ಕೆಲವರಿಗೆ ಆತಂಕ. ಕೆಲವರಿಗೆ ಕುತೂಹಲ. ಇನ್ನು ಕೆಲವರಿಗೆ ಅನುಮಾನ..

    “ಏನೂ ಯೋಚನೆ ಮಾಡಬೇಡ ನಂಗೇನೂ ಆಗಲ್ಲ” ಅಂತ ಚೆಲ್ಲಿ ಹೋದ ರವಿಯ ನಗುವೇ ಮನೆ ಮನ ತುಂಬಿದೆ. ಅದೇ ನಿರೀಕ್ಷೆಯಲ್ಲಿದ್ದೇವೆ ನಾನು ಹಿಮ. ನಿಮಗೇನೂ ಆಗಲ್ಲ ವೀ. ನಮ್ಮೆಲ್ಲರ ಪ್ರಾರ್ಥನೆ ಸದಾ ನಿಮ್ಮೊಂದಿಗಿದೆ. ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ.

  • ರವಿ ಬೆಳಗೆರೆ ಸುಪಾರಿ ಪ್ರಕರಣ: ಸಿಸಿಬಿ ಅಧಿಕಾರಿಗಳಿಗೆ ಪತ್ನಿ ಯಶೋಮತಿ ಹೇಳಿದ್ದಿಷ್ಟು

    ರವಿ ಬೆಳಗೆರೆ ಸುಪಾರಿ ಪ್ರಕರಣ: ಸಿಸಿಬಿ ಅಧಿಕಾರಿಗಳಿಗೆ ಪತ್ನಿ ಯಶೋಮತಿ ಹೇಳಿದ್ದಿಷ್ಟು

    ಬೆಂಗಳೂರು: ತನ್ನ ಸಹೋದ್ಯೋಗಿ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಯವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಅವರ ಎರಡನೇ ಪತ್ನಿ ಯಶೋಮತಿ ನಾಪತ್ತೆಯಾಗಿದ್ದರು.

    ಸದ್ಯ ರವಿ ಬೆಳಗೆರೆ ವಿಚಾರಣೆ ನಡೆಯುತ್ತಿದ್ದು, ಶನಿವಾರ ರವಿ ಜೊತೆ ಪೊಲೀಸರು ರಾಜರಾಜೇಶ್ವರಿ ನಗರದಲ್ಲಿರೋ ಯಶೋಮತಿಯವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಯಶೋಮತಿ ಅಲ್ಲಿರಲಿಲ್ಲ. ಬಳಿಕ ನಿನ್ನೆ ಸಂಜೆಯೇ ಸಿಸಿಬಿ ಅಧಿಕಾರಿಗಳ ಜೊತೆ ಮಾತನಾಡಿದ ಯಶೋಮತಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇನು ಹೇಳೋದಿಲ್ಲ. ವೈಯಕ್ತಿಕವಾಗಿ ನನ್ನ ಮಾನ ಹರಣ ಆಗ್ತಿದೆ. ಸುನಿಲ್ ನನಗೆ ರವಿ ಕಡೆಯಿಂದ ಪರಿಚಯವಾಗಿದ್ದರು ಅಂತ ಹೇಳಿದ್ದಾರೆ.

    ಈ ಪ್ರಕರಣದಲ್ಲಿ ಅವರಿಬ್ಬರ ನಡುವೆ ಗಲಾಟೆಯಾಗಿದೆ. ಇದ್ರಲ್ಲಿ ನಾನೇನು ಹೆಚ್ಚು ಹೇಳೋ ವಿಚಾರ ಇಲ್ಲ ಅಂತ ಯಶೋಮತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

    ಶುಕ್ರವಾರ ರಾತ್ರಿಯಿಂದ 2ನೇ ಪತ್ನಿ ಯಶೋಮತಿ ನಾಪತ್ತೆಯಾಗಿದ್ದರು. ಅಲ್ಲದೆ ತನ್ನ ಫೇಸ್‍ಬುಕ್ ಅಕೌಂಟ್ ಕೂಡ ಅವರು ಬ್ಲಾಕ್ ಮಾಡಿದ್ದಾರೆ. ಅಲ್ಲದೆ ಯಶೋಮತಿ ಯಾವುದೇ ಫೋನ್ ಕರೆಗಳನ್ನ ಸ್ವೀಕರಿಸುತ್ತಿಲ್ಲ ಎಂಬುದಾಗಿ ತಿಳಿದುಬಂದಿತ್ತು.

    ಸುನಿಲ್ ಹೆಗ್ಗರವಳ್ಳಿ ಹಾಗೂ ಯಶೋಮತಿ ನಡುವೆ ಅನೈತಿಕ ಸಂಬಂಧವಿತ್ತು. ಈ ಬಗ್ಗೆ ಮನೆ ಕೆಲಸದಾಕೆ ರವಿ ಬೆಳಗೆರೆಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಒಂದು ಬಾರಿ ರವಿ ಬೆಳಗೆರೆ ಮಧ್ಯರಾತ್ರಿ ಮನೆಗೆ ಬಂದಾಗ ಸುನಿಲ್ ಓಡಿಹೋಗಿದ್ದರು ಎಂಬ ಮಾತುಗಳೂ ಕೂಡ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಸುನೀಲ್ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.

    https://www.youtube.com/watch?v=OA0RbYjR09k

    https://www.youtube.com/watch?v=y8cIVgw5Yno

    https://www.youtube.com/watch?v=hEoR4Fec7Ec

  • ಬೆಳಗೆರೆ 2ನೇ ಪತ್ನಿ ಯಶೋಮತಿ ನಾಪತ್ತೆ – ಫೇಸ್‍ಬುಕ್ ಅಕೌಂಟ್ ಕ್ಲೋಸ್

    ಬೆಳಗೆರೆ 2ನೇ ಪತ್ನಿ ಯಶೋಮತಿ ನಾಪತ್ತೆ – ಫೇಸ್‍ಬುಕ್ ಅಕೌಂಟ್ ಕ್ಲೋಸ್

    ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಬಂಧನವಾದ ಬೆನ್ನಲ್ಲೇ ಅವರ 2ನೇ ಪತ್ನಿ ನಾಪತ್ತೆಯಾಗಿದ್ದಾರೆ.

     

    ಬೆಂಗಳೂರು ಸಿಸಿಬಿ ಪೊಲೀಸರಿಂದ ಎರಡನೇ ಪತ್ನಿ ಯಶೋಮತಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಯಾವುದೇ ಕ್ಷಣದಲ್ಲಿ ಸಿಸಿಬಿ ವಿಚಾರಣೆ ಹಾಜರಾಗುವಂತೆ ಹೇಳೋ ಸಾಧ್ಯತೆ ಇದ್ದು, ಹೆಗ್ಗರವಳ್ಳಿ ಜೊತೆ ನಂಟಿನ ಬಗ್ಗೆ ಮಾಹಿತಿ ಸಂಗ್ರಹಿಸುವ ನಿರೀಕ್ಷೆ ಇದೆ. ರವಿ ಬೆಳಗೆರೆ ಬೆದರಿಕೆ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಲಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಐಪಿಸಿ 164 ಅನ್ವಯ ಯಶೋಮತಿಯ ಸ್ವಇಚ್ಛಾ ಹೇಳಿಕೆ ಪಡೆಯುವ ಸಾಧ್ಯತೆ ಇದೆ ಎಂದು ಪಬ್ಲಿಕ್ ಟಿವಿಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಆದ್ರೆ ಶುಕ್ರವಾರ ರಾತ್ರಿಯಿಂದ 2ನೇ ಪತ್ನಿ ಯಶೋಮತಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರೋ ಮನೆಯಲ್ಲಿ ಸದ್ಯ ಯಶೋಮತಿ ಇಲ್ಲ. ತನ್ನ ಫೇಸ್‍ಬುಕ್ ಅಕೌಂಟ್ ಕೂಡ ಕ್ಲೋಸ್ ಮಾಡಿದ್ದಾರೆ. ಅಲ್ಲದೆ ಯಶೋಮತಿ ಯಾವುದೇ ಫೋನ್ ಕರೆಗಳನ್ನ ಸ್ವೀಕರಿಸುತ್ತಿಲ್ಲ.

    ಸುನೀಲ್ ಹೆಗ್ಗರವಳ್ಳಿ ಹಾಗೂ ಯಶೋಮತಿ ನಡುವೆ ಅನೈತಿಕ ಸಂಬಂಧವಿತ್ತು. ಈ ಬಗ್ಗೆ ಮನೆ ಕೆಲಸದಾಕೆ ರವಿ ಬೆಳಗೆರೆಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಒಂದು ಬಾರಿ ರವಿ ಬೆಳಗೆರೆ ಮಧ್ಯರಾತ್ರಿ ಮನೆಗೆ ಬಂದಾಗ ಸುನೀಲ್ ಓಡಿಹೋಗಿದ್ದರು ಎಂಬ ಮಾತುಗಳೂ ಕೂಡ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಸುನೀಲ್ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ.

    https://www.youtube.com/watch?v=lgEoaxQ1l44

    https://www.youtube.com/watch?v=86k-IW3-boE

    https://www.youtube.com/watch?v=tvAkOpM6ZZo

    https://www.youtube.com/watch?v=p0Orve2DpiM