Tag: ಯಶವಂತ್ ಶೆಟ್ಟಿ

  • ಕ್ಷಣ ಕ್ಷಣಕ್ಕೂ ಕುತೂಹಲ ಕ್ರಿಯೇಟ್ ಮಾಡುವ ತ್ರಾಟಕ!

    ಕ್ಷಣ ಕ್ಷಣಕ್ಕೂ ಕುತೂಹಲ ಕ್ರಿಯೇಟ್ ಮಾಡುವ ತ್ರಾಟಕ!

    ಈ ಹಿಂದೆ ಜಿಗರ್ ಥಂಡಾ, ಹೃದಯದಲಿ ಇದೇನಿದು ಮತ್ತು ಈಗಷ್ಟೇ ಬಿಡುಗಡೆಗೆ ತಯಾರಾಗುತ್ತಿರುವ ಅಖಾಡ ಎಂಬ ರಗಡ್ ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕವೇ ಕನ್ನಡ ಚಿತ್ರ ರಂಗದಲ್ಲಿ ಸಂಚಲನ ಉಂಟು ಮಾಡಿದ್ದವರು ಶಿವಗಣೇಶ್. ಈ ಕಾರಣಕ್ಕಾಗಿಯೇ ತ್ರಾಟಕ ಸಿನಿಮಾದ ಕುರಿತು ಕ್ಯೂರಿಯಾಸಿಟಿ ಹೆಚ್ಚಾಗಿತ್ತು.

    ಅದೇನೋ ವಿಕ್ಷಿಪ್ತ ನಿಗೂಢವನ್ನು ತನ್ನೊಳಗೆ ಬಚ್ಚಿಟ್ಟುಕೊಂಡಂತಿರೋ ತ್ರಾಟಕ ಅಂದ್ರೇನು ಅಂತೊಂದು ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಅಂದಹಾಗೆ ಈ ಹೆಸರಿನ ಅರ್ಥಕ್ಕೂ ಇಡೀ ಚಿತ್ರದ ಕಥೆಗೂ ಕನೆಕ್ಷನ್ನುಗಳಿವೆ. ತ್ರಾಟಕ ಅಂದರೆ ಮೇಣದ ಬತ್ತಿಯ ಬೆಳಕನ್ನು ದಿಟ್ಟಿಸಿ ನೋಡುತ್ತಾ ಯೋಗ ವಿದ್ಯೆಯಲ್ಲಿ ಏಕಾಗ್ರತೆ ಸಾಧಿಸೋ ಒಂದು ವಿಧಾನ ಅನ್ನೋದು ಬಿಡುಗಡೆಯಾಗಿರುವ ಸಿನಿಮಾದ ಮೂಲಕ ಜಾಹೀರಾಗಿದೆ.

    ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ರಮ್ಯ ಚೈತ್ರ ಕಾಲ, ಅಖಾಡ ಮತ್ತು ತಾರೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ರಾಹುಲ್ ಐನಾಪುರ ಈ ಚಿತ್ರವನ್ನು ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿದ್ದಾರೆ. ಅವರು ಈ ಚಿತ್ರದಲ್ಲಿ ಎಂಥಾದ್ದೇ ಅಪರಾಧ ಪ್ರಕರಣವನ್ನಾದರೂ ಬೆನ್ನತ್ತಿ ರಹಸ್ಯ ಜಾಹೀರು ಮಾಡುವ ಸಿಸಿಬಿ ಎಸಿಪಿಯಾಗಿ ನಟಿಸಿದ್ದಾರೆ.

    ನಾಯಕ ಇಲ್ಲಿ ತನ್ನ ವೃತ್ತಿಯ ಒತ್ತಡಗಳನ್ನು ಮೀರಿಕೊಂಡು ಅಪರಾಧ ಪ್ರಕರಣಗಳನ್ನು ಭೇದಿಸಲು ತ್ರಾಟಕ ವಿದ್ಯೆಯ ಮೊರೆ ಹೋಗುವ ಅಂಶಗಳಿವೆ. ಸರಣಿ ಕೊಲೆಗಳನ್ನು ಬೆನ್ನತ್ತುವ ಕಥೆ ಕ್ಷಣಕ್ಷಣಕ್ಕೂ ರೋಚಕ ತಿರುವುಗಳನ್ನು ಪಡೆಯುತ್ತಾ ನೋಡುಗರನ್ನು ಥ್ರಿಲ್ ಗೆ ಒಳಪಡಿಸುತ್ತದೆ. ವಿನೋದ್ ಭಾರತಿ ಛಾಯಾಗ್ರಹಣ ಕಥೆಗೆ ಪೂರಕವಾಗಿ ಕೆಲಸ ಮಾಡಿದೆ. ಸುರೇಶ್ ಆರ್ಮುಗಂ ಸಂಕಲನವಂತೂ ತೀಕ್ಷ್ಣವಾಗಿದೆ.

    ಭವಾನಿ ಪ್ರಕಾಶ್ ಎಂಬ ರಂಭೂಮಿ ನಟಿಯಂತೂ ಪೊಲೀಸ್ ಅಧಿಕಾರಿಯನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ನಂದಗೋಪಾಲ್ ಎನ್ನುವ ಯುವ ಪ್ರತಿಭೆ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ದಕ್ಕಿದ ಸಮರ್ಥ ಹಾಸ್ಯ ಕಲಾವಿದ ಎನಿಸಿಕೊಳ್ಳುತ್ತಾರೆ. ಒಟ್ಟಾರೆಯಾಗಿ ತ್ರಾಟಕವನ್ನು ಜನ ಮಿಸ್ ಮಾಡದೇ ನೋಡಿದರೆ ಭರ್ಜರಿ ಥ್ರಿಲ್ಲರ್ ಸಿನಿಮಾವನ್ನು ನೋಡಿದ ಅನುಭೂತಿಗೊಳಗಾಗೋದು ಗ್ಯಾರೆಂಟಿ.

    ರೇಟಿಂಗ್ – 3.5/5 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ತ್ರಾಟಕ – ಅಬ್ಬರಿಸಿ ಬೊಬ್ಬಿರಿದ ಖಳನ ಕೈಲೀಗ ಸ್ಟೆಥಸ್ಕೋಪ್!

    ತ್ರಾಟಕ – ಅಬ್ಬರಿಸಿ ಬೊಬ್ಬಿರಿದ ಖಳನ ಕೈಲೀಗ ಸ್ಟೆಥಸ್ಕೋಪ್!

    ಬೆಂಗಳೂರು: ನಿರೀಕ್ಷೆಗಳ ಒಡ್ಡೋಲಗದಲ್ಲಿ ರಾಹುಲ್ ಐನಾಪುರ ನಾಯಕನಾಗಿ ನಟಿಸಿರೋ ತ್ರಾಟಕ ಚಿತ್ರ ತೆರೆ ಕಾಣುವ ಸನ್ನಾಹದಲ್ಲಿದೆ. ಈ ವಾರ ಪ್ರೇಕ್ಷಕರ ಮುಂದೆ ಬರಲಿರೋ ಈ ಚಿತ್ರದಲ್ಲಿ ಯುವ ಖಳನಟ ಯಶವಂತ್ ಶೆಟ್ಟಿ ಕೂಡಾ ಪ್ರಧಾನವಾದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

    ಜ್ವಲಂತಂ ಚಿತ್ರದ ಮೂಲಕ ಖಳ ನಟನಾಗಿ ಎಂಟ್ರಿ ಕೊಟ್ಟಿರೋ ಯಶವಂತ್ ಭರವಸೆ ಹುಟ್ಟಿಸಿರುವ ನಟ. ಇತ್ತೀಚೆಗೆ ತೆರೆ ಕಂಡಿದ್ದ ಅಥರ್ವ ಚಿತ್ರದ ಅಬ್ಬರದ ನಟನೆಯ ಮೂಲಕವೇ ಗುರುತಿಸಿಕೊಂಡಿರೋ ಯಶವಂತ್ ತ್ರಾಟಕ ಚಿತ್ರದಲ್ಲಿಯೂ ವಿಲನ್ ಆಗಿ ಆರ್ಭಟಿಸಿದ್ದಾರೆ ಅಂದುಕೊಳ್ಳೋದು ಸಹಜ. ಆದರೆ ತ್ರಾಟಕ ಚಿತ್ರದಲ್ಲಿ ಅವರ ಪಾತ್ರ ಪಕ್ಕಾ ಡಿಫರೆಂಟಾಗಿದೆ.

    ಈ ಚಿತ್ರದಲ್ಲಿ ಯಶವಂತ್ ಡಾಕ್ಟರ್ ಆಗಿ ನಟಿಸಿದ್ದಾರಂತೆ. ಅದು ಇಡೀ ಕಥೆಗೆ ಟ್ವಿಸ್ಟು ಕೊಡುವಂಥಾ ಮುಖ್ಯವಾದ ಪಾತ್ರ. ಡಾಕ್ಟರ್ ಅಂದ ಮೇಲೆ ಆ ಪಾತ್ರಕ್ಕೆ ಮೃದುವಾದ, ಬೇರೆಯದ್ದೇ ಥರದ ಮ್ಯಾನರಿಸಂ ಇರುತ್ತೆ. ಯಾವ ಅಬ್ಬರವೂ ಇಲ್ಲದ ಈ ಪಾತ್ರ ತೆಳುವಾದ ನೆಗೆಟಿವ್ ಛಾಯೆಯಾಚೆಗೆ ವಿಶಿಷ್ಟವಾಗಿ ಮೂಡಿ ಬಂದಿದೆಯಂತೆ. ಇದೀಗ ರಗಡ್ ಪಾತ್ರಗಳಲ್ಲಿಯೇ ಬ್ಯುಸಿಯಾಗಿದ್ದುಕೊಂಡು, ಅಂಥಾ ಪಾತ್ರಗಳನ್ನೇ ಗಿಟ್ಟಿಸಿಕೊಳ್ಳುತ್ತಿರೋ ಯಶವಂತ್ ತ್ರಾಟಕ ಚಿತ್ರದ ಮೂಲಕ ಬೇರೆಯದ್ದೇ ಲುಕ್ಕಿನಲ್ಲಿ ಪ್ರೇಕ್ಷಕರಿಗೆ ಅಚ್ಚರಿಯಂತೆದುರಾಗಲು ತಯಾರಾಗಿದ್ದಾರೆ.

    ಪ್ರತಿಷ್ಟಿತ ನಟನಾ ತರಬೇತಿ ಸಂಸ್ಥೆಗಳಲ್ಲಿ ಪಳಗಿಕೊಂಡು ಬಂದಿರೋ ಯಶವಂತ್ ಶೆಟ್ಟಿ ಸದಾ ಹೊಸತನ ಬಯಸೋ ಯುವ ನಟ. ತ್ರಾಟಕ ಚಿತ್ರದಲ್ಲಿನ ಡಾಕ್ಟರ್ ಪಾತ್ರವನ್ನವರು ಅತೀವವಾಗಿ ಇಷ್ಟಪಟ್ಟು ಮಾಡಿದ್ದಾರಂತೆ. ಈ ಚಿತ್ರವೂ ಅದ್ಭುತವಾಗಿ ಮೂಡಿ ಬಂದಿರೋದರಿಂದ ದೊಡ್ಡ ಗೆಲುವು ಸಿಕ್ಕಿ ತನ್ನ ಪಾತ್ರವೂ ಜನರ ಮನಸಲ್ಲುಳಿಯುತ್ತದೆ ಎಂಬ ಭರವಸೆಯನ್ನೂ ಯಶವಂತ್ ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಬ್ಬರಿಸಿದ ಅಥರ್ವ: ಪವರ್‌ಫುಲ್ ಹೀರೋ ಪವನ್ ತೇಜ!

    ಅಬ್ಬರಿಸಿದ ಅಥರ್ವ: ಪವರ್‌ಫುಲ್ ಹೀರೋ ಪವನ್ ತೇಜ!

    ಅರುಣ್ ನಿರ್ದೇಶನದ ಅಥರ್ವ ಚಿತ್ರದ ಮೂಲಕ ಚಿರಂಜೀವಿ ಸರ್ಜಾರ ಅಳಿಯ ಪವನ್ ತೇಜಾ ನಾಯಕನಾಗಿರುವ ಅಥರ್ವ ಇಂದು ತೆರೆಗೆ ಬಂದಿದೆ. ಹುಟ್ಟು ಸಾವುಗಳ ನಡುವೆ ಘಟಿಸೋ ಸೂಕ್ಷ್ಮ ಕಥಾ ಹಂದರ ಹೊಂದಿರೋ ಈ ಚಿತ್ರದ ಮೂಲಕ ಪವನ್ ತೇಜಾ ಮಾಸ್ ಲುಕ್ಕಿನಲ್ಲಿಯೇ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಪವನ್ ಮತ್ತು ಯುವ ಖಳನಟ ಯಶವಂತ್ ಶೆಟ್ಟಿ ನಡುವೆ ಈ ಚಿತ್ರದಲ್ಲಿ ಭೀಕರ ಕಾಳಗ ಕೂಡಾ ಅನಾವರಣಗೊಂಡಿದೆ! ಅಥರ್ವ ಚಿತ್ರದಲ್ಲಿ ಪವನ್ ತೇಜಾ ಪಕ್ಕಾ ಮಾಸ್ ಲುಕ್ಕಿನಲ್ಲಿ ದಿಗ್ದರ್ಶನ ನೀಡಿದ್ದಾರೆ.

    ಅದಕ್ಕೆ ಸರಿಯಾಗಿ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ನೆಲೆಯೂರುತ್ತಿರುವ ಯಶವಂತ್ ಶೆಟ್ಟಿ ಕೂಡಾ ಈ ಚಿತ್ರದಲ್ಲಿ ಅಬ್ಬರಿಸಿದ್ದಾರೆ.

    ಅಥರ್ವ ಎಂದರೆ ನರಸಿಂಹಸ್ವಾಮಿಯಂತೆ. ಹೀರೋ ಕೂಡಾ ನರಸಿಂಹದೇವರ ಪರಮಭಕ್ತ. ಆದರೆ ನಾಯಕಿಯ ದೃಷ್ಟಿಯಲ್ಲೇ ಹೀರೋನೇ ವಿಲನ್ನು. ಆಕೆ ಹಾಗೆ ತಿಳಿದುಕೊಳ್ಳಲು ಕಾರಣ ಸಂದರ್ಭ. ತಾಯಿಯಲ್ಲದ ಆಕೆಗೆ ತಂದೆಯೇ ಸರ್ವಸ್ವ. ಆಕೆ ಜೀವಕ್ಕೆ ಜೀವವಾಗಿ ಪ್ರೀತಿಸೋ ತಂದೆಯೇ ಇಲ್ಲವಾಗುತ್ತಾನೆ. ಯಾರೋ ಮಾಡಿದ ತಪ್ಪು ಮತ್ತೊಬ್ಬನ ಹೆಗಲಿಗೆ ನೇತುಬೀಳುತ್ತದೆ. ತನ್ನದಲ್ಲದ ತಪ್ಪನ್ನು ಸಾಬೀತು ಮಾಡಲು ನಾಯಕ ನಟ ನಾಯಕಿಯ ತಂದೆಯನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳಬೇಕಾಗುತ್ತದೆ. ಈ ನಡುವೆ ತನ್ನಪ್ಪನಿಗೆ ಕೊಟ್ಟ ಭಾಷೆಯ ಕಾರಣಕ್ಕೆ ಆಕೆ ಮತ್ತೊಬ್ಬನನ್ನು ಮದುವೆಯಾಗಬೇಕಾದ ಸಂದಿಗ್ಧ ಎದುರಾಗುತ್ತದೆ. ಕಡೆಗೂ ಪ್ರೀತಿಸಿದವನನ್ನೇ ಕೈ ಹಿಡಿಯುತ್ತಾಳಾ ಅಥವಾ ತಂದೆಗೆ ಕೊಟ್ಟ ಮಾತಿಗೆ ಒಪ್ಪಿ ಬೇರೊಬ್ಬನ ಜೊತೆಗಾತಿಯಾಗುತ್ತಾಳಾ ಅನ್ನೋದು ಕುತೂಹಲ ಹುಟ್ಟಿಸುವ ವಿಚಾರ.

    ನಿರ್ದೇಶಕ ಅರುಣ್ ಸಿನಿಮಾವನ್ನು ಸುಂದರವಾಗಿಸುವ ಭರದಲ್ಲಿ ಚಿತ್ರಕತೆಯ ಬಗ್ಗೆ ತಲೆಕೆಡಿಸಿಕೊಳ್ಳೋದನ್ನು ಮರೆತಂತೆ ಕಾಣುತ್ತದೆ. ರಂಗಭೂಮಿಯಲ್ಲಿ ಪಳಗಿರುವ ಪವನ್ ತೇಜ ಸಿನಿಮಾಗೆ ಬೇಕಿರುವ ಗ್ರಾಮರನ್ನು ಒಂಚೂರು ಒಗ್ಗಿಸಿಕೊಂಡರೂ ಕನ್ನಡ ಚಿತ್ರತಂಗದಲ್ಲಿ ಸಮರ್ಥ ನಾಯಕನಟನಾಗಿ ನೆಲೆ ನಿಲ್ಲಬಹುದು. ರಾಘವೇಂದ್ರ ನೀಡಿರುವ ಸಂಗೀತ ಹಿತವಾಗಿದೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್ ಎಂದಿನಂತೆ ಲೀಲಾಜಾಲವಾಗಿ ನಟಿಸಿದ್ದಾರೆ. ಶಿವಸೇನ ಅವರ ಛಾಯಾಗ್ರಹಣ ಸಿನಿಮಾದ ದೊಡ್ಡ ಶಕ್ತಿಯಾಗಿದೆ. ಒಟ್ಟಾರೆ ಅಥರ್ವ ಖಡಕ್ಕಾದ ಕಮರ್ಷಿಲ್ ಚಿತ್ರವಾಗಿದೆ.