Tag: ಮ್ಯೂಸಿಕ್ ಡೈರೆಕ್ಟರ್

  • ಕನ್ನಡದ ‘ಸ್ನೇಹದ ಕಡಲಲ್ಲಿ’ ಸಂಗೀತ ನಿರ್ದೇಶಕ ರಾಜ್ ನಿಧನ

    ಕನ್ನಡದ ‘ಸ್ನೇಹದ ಕಡಲಲ್ಲಿ’ ಸಂಗೀತ ನಿರ್ದೇಶಕ ರಾಜ್ ನಿಧನ

    ಚಿತ್ರರಂಗ ಕಂಡ ಜನಪ್ರಿಯ ಸಂಗೀತ ನಿರ್ದೇಶಕರಾದ ಕೋಟಿ-ರಾಜ್ ಜೋಡಿಯಲ್ಲಿ ಒಬ್ಬರಾದ ರಾಜ್ ಅವರು ಮೇ 21ರಂದು ನಿಧನರಾಗಿದ್ದಾರೆ. ಹೃದಯಾಘಾತದಿಂದ (Heart Attack) ರಾಜ್ (Raj)ಅವರು ನಿಧನರಾಗಿದ್ದಾರೆ. ಇದನ್ನೂ ಓದಿ:ಅಂಬಿ ಪುತ್ರನ ಕಲ್ಯಾಣಕ್ಕೆ ಡೇಟ್ ಫಿಕ್ಸ್

    ಸಂಗೀತ ನಿರ್ದೇಶಕ ರಾಜ್ (Music Director Raj) ಅವರಿಗೆ 68 ವರ್ಷ ವಯಸ್ಸಾಗಿತ್ತು. ರಾಜ್ ಅವರು ಸಲೂರಿ ಕೋಟೆಶ್ವರ ರಾವ್ ಜೊತೆ ಸೇರಿ 150ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅದರಲ್ಲಿ ಕೆಲವು ಕನ್ನಡ ಸಿನಿಮಾಗಳು ಸಹ ಇವೆ. ರಾಜ್ ಹಾಗೂ ಕೋಟಿ 1982ರಿಂದ 1994ರವರೆಗೆ ಒಟ್ಟಿಗೆ ಕೆಲಸ ಮಾಡುತ್ತಾ ಸುಮಾರು 180 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಈ ಜೋಡಿ ಸುಮಾರು 3000 ಸಾವಿರ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. 1994ರ ಬಳಿಕ ಇಬ್ಬರೂ ಸಂಗೀತ ನಿರ್ದೇಶಕರು ಬೇರಾಗಿ ಏಕಾಂಗಿಯಾಗಿ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಲು ಆರಂಭಿಸಿದರು.

    ರಾಜ್- ಕೋಟಿ ಕನ್ನಡದ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದ ಸ್ನೇಹದ ಕಡಲಲ್ಲಿ (Snehada Kadalali), ಎದುರು ಮನೇಲಿ ಗಂಡ, ಪಕ್ಕದ ಮನೇಲಿ ಹೆಂಡ್ತಿ, ನಗರದಲ್ಲಿ ನಾಯಕರು, ರಾಯರು ಬಂದರು ಮಾವನ ಮನೆಗೆ ಹಾಗೂ ಕಿಲಾಡಿಗಳು ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶಕ ರಾಜ್ ಅವರ ನಿಧನಕ್ಕೆ ಮೆಗಾ ಸ್ಟಾರ್ ಚಿರಂಜೀವಿ (Megastar Chiranjeevi) ಅವರು ಸಂತಾಪ ಸೂಚಿಸಿದ್ದಾರೆ. ಚಿತ್ರರಂಗದ ಹಲವು ಕಲಾವಿದರು ಕಂಬನಿ ಮಿಡಿದಿದ್ದಾರೆ.

  • ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಪುಣೆ ಪೊಲೀಸರು

    ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಪುಣೆ ಪೊಲೀಸರು

    ಬಾಲಿವುಡ್ (Bollywood) ಸ್ಟಾರ್ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ (AR Rahman) ಸಂಗೀತ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ ಘಟನೆ ಪುಣೆಯಲ್ಲಿ ನಡೆದಿದೆ. ಸ್ವತಃ ಎ.ಆರ್ ರೆಹಮಾನ್ ವೇದಿಕೆಯಲ್ಲಿ ಹಾಡುತ್ತಿದ್ದ ವೇಳೆ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಪುಣೆ ಪೊಲೀಸರು, ಆಯೋಜಕರಿಗೆ ಈವೆಂಟ್ ನಿಲ್ಲಿಸುವಂತೆ ಹೇಳಿದ್ದಾರೆ. ವೇದಿಕೆಯ ಮೇಲೆ ಹಾಡುತ್ತಿದ್ದ ರೆಹಮಾನ್‌ಗೂ ಪೊಲೀಸರು ಹಾಡು ನಿಲ್ಲಿಸುವಂತೆ ಸೂಚಿಸಿದ್ದಾರೆ. ಪೊಲೀಸರ ಸೂಚನೆಯಂತೆ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ:ಎಲೆಕ್ಷನ್ ರಿಸಲ್ಟ್ ದಿನವೇ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ ಎಂಗೇಜ್‌ಮೆಂಟ್

    ಪುಣೆಯಲ್ಲಿ ರಾತ್ರಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಆರ್ ರೆಹಮಾನ್ ತಂಡ ಈ ಕಾರ್ಯಕ್ರಮದಲ್ಲಿ ವಿಶೇಷ ಪ್ರದರ್ಶನ ನೀಡಿತ್ತು. ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ ರಾತ್ರಿ 10 ಗಂಟೆಯೊಳಗೆ ಪುಣೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಬೇಕು. ಆದರೆ ಎಆರ್ ರಹೆಮಾನ್ ಸಂಗೀತ ಕಾರ್ಯಕ್ರಮ 10 ಗಂಟೆಯಾದರೂ ಮುಗಿಯಲಿಲ್ಲ. ಹಾಗಾಗಿ ಈ ಕಾರ್ಯಕ್ರಮಕ್ಕೆ ಪೊಲೀಸರು ತಡೆ ನೀಡಿದ್ದಾರೆ. ಸ್ವತಃ ಎ.ಆರ್ ರೆಹಮಾನ್ ಹಾಡುತ್ತಿದ್ದಂತೆ ಪುಣೆ ಪೊಲೀಸರು ವೇದಿಯತ್ತ ಆಗಮಿಸಿ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ.

    ಇತ್ತ ಎ.ಆರ್ ರೆಹಮಾನ್ ಪುಣೆ ಸಂಗೀತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕೆ ಟ್ವಿಟ್ಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಪುಣೆ ಮತ್ತೆ ಬರೋದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

  • ಕಷ್ಟದಲ್ಲಿದ್ದಾಗ ಯಾರೂ ಇರಲಿಲ್ಲ ಅಂದ್ರು ಚಂದನ್ ಶೆಟ್ಟಿ

    ಕಷ್ಟದಲ್ಲಿದ್ದಾಗ ಯಾರೂ ಇರಲಿಲ್ಲ ಅಂದ್ರು ಚಂದನ್ ಶೆಟ್ಟಿ

    ಬೆಂಗಳೂರು: ಗೆಲುವಿಗೆ ನೂರು ಜನ ಅಪ್ಪಂದಿರು ಅನ್ನೋ ಗಾದೆಯಿದೆಯಲ್ಲಾ? ಹಾಗೆ ಒಬ್ಬ ವ್ಯಕ್ತಿ ಗೆದ್ದ ನಂತರ ಹತ್ತಾರು ಜನ ಅದಕ್ಕೆ ನಾನೇ ಕಾರಣ, ನನ್ನಿಂದಲೇ ಆಗಿದ್ದು ಅಂತಾ ರಾಗ ತೆಗೆಯೋದು ಮಾಮೂಲು.

    ಈಗ ಚಂದನ್ ಶೆಟ್ಟಿ ಅನ್ನೋ ಯುವಕ ಬಿಗ್ ಬಾಸ್ ಶೋ ಗೆದ್ದಿದ್ದು ಮಾತ್ರವಲ್ಲದೆ, ಕನ್ನಡದ ರ‍್ಯಾಪ್ ಹಾಡುಗಳ ಮೂಲಕ ಜಗತ್ತಿಗೇ ಗೊತ್ತಾಗುತ್ತಿದ್ದಾರೆ. ಥ್ರೀ ಪೆಗ್ ಅನ್ನೋ ಹಾಡು ಚಂದನ್ ಗೆ ಬೇರೆ ಲೆವೆಲ್ಲಿನ ವರ್ಚಸ್ಸು ತಂದುಕೊಟ್ಟಿದೆ ಅನ್ನೋದು ನಿಜ. ಥ್ರೀ ಪೆಗ್ ಹಿಟ್ ಆಗಿ, ಚಂದನ್ ಅವಕಾಶಗಳ ಮೇಲೆ ಅವಕಾಶ ಪಡೆಯುತ್ತಿದ್ದಂತೇ ಒಂದಷ್ಟು ಮಂದಿಯ ಕಣ್ಣು ಕೆಂಪಾಗಿದ್ದು ಸುಳ್ಳಲ್ಲ.

    ಇತ್ತೀಚೆಗೆ ಥ್ರೀ ಪೆಗ್ ಹಾಡಿನ ಮ್ಯೂಸಿಕ್ ಡೈರೆಕ್ಟರ್ ಆಗಿದ್ದ ವಿಜೇತ್ ಕೃಷ್ಣ ‘ನನ್ನ ಹೆಸರು ಹೆಚ್ಚು ಪ್ರಸ್ತಾಪವಾಗಲೇ ಇಲ್ಲ. ಜೊತೆಗೆ ನನಗೆ ಆ ಪ್ರಾಜೆಕ್ಟ್ ಇಂದ ಬಂದಿದ್ದು ಕೇವಲ ಹದಿನೈದು ಸಾವಿರ ರೂಪಾಯಿ ಮಾತ್ರ’ ಎಂದಿದ್ದರು. ಈಗ ವಿಜೇತ್ ಮಾತಿಗೆ ಪ್ರತಿಕ್ರಿಯಿಸಿರುವ ಚಂದನ್ ಶೆಟ್ಟಿ `ನಾವು ಅವರ ಹೆಸರನ್ನು ಟೈಟಲ್ ಕಾರ್ಡ್ ನಲ್ಲಿ ಹಾಕಿದ್ದೆವು. ಇನ್ನು ಹಣ ಬರೀ ಹದಿನೈದು ಸಾವಿರ ಅನ್ನೋದು ಸುಳ್ಳು. ನಿಖರವಾಗಿ ಇಷ್ಟೇ ಅಂತಾ ಹೇಳಲು ನನಗೆ ಇಷ್ಟ ಇಲ್ಲ. ಆದರೆ ಹದಿನೈದು ಸಾವಿರಕ್ಕಿಂತಾ ಹೆಚ್ಚು ಹಣ ವಿಜೇತ್ ಗೆ ಸಂದಾಯವಾಗಿದೆ. ಇನ್ನು ಅವರ ಹೆಸರು ಯಾಕೆ ಹೆಚ್ಚು ಪ್ರಸ್ತಾಪವಾಗಲಿಲ್ಲ ಅನ್ನೋದಕ್ಕೆ ನನ್ನ ಬಳಿ ಉತ್ತರವಿಲ್ಲ. ನಾನು ಥ್ರೀ ಪೆಗ್ ಹಾಡನ್ನು ರೆಡಿ ಮಾಡಿಟ್ಟುಕೊಂಡು ಅದನ್ನು ಶೂಟ್ ಮಾಡಲು ಎಷ್ಟೆಲ್ಲಾ ಕಷ್ಟ ಪಟ್ಟಿದ್ದೀನಿ. ಎಷ್ಟೋ ವರ್ಷದ ನಂತರ ಕಡೆಗೆ ನಿರ್ಮಾಪಕರು ಸಿಕ್ಕ ಮೇಲೆ ನನ್ನ ಕನಸು ಕೈಗೂಡಿತು. ನಾನು ಕಷ್ಟದಲ್ಲಿದ್ದಾಗ ಯಾರೂ ಬರಲಿಲ್ಲ. ಮೇಲಾಗಿ ಆ ಆಲ್ಬಂ ಹಾಡಿಗೆ ನಿರ್ಮಾಪಕರಾದ ದಿನೇಶ್ ಅವರೂ ಇದ್ದಾರೆ. ಎಲ್ಲದಕ್ಕೂ ನಾನೊಬ್ಬನೇ ಪ್ರತಿಕ್ರಿಯಿಸೋದು ಅಷ್ಟು ಸರಿ ಹೊಂದುವುದಿಲ್ಲ’ ಎಂಬುದಾಗಿ ಹೇಳಿದ್ದಾರೆ.

    ಚಂದನ್ ಶೆಟ್ಟಿಗೆ ತೀರಾ ಅಹಂ ಬಂದಿದೆ. ಮಾಧ್ಯಮದವರ ಕರೆಯನ್ನೂ ಸ್ವೀಕರಿಸೋದಿಲ್ಲ. ಅವರ ತಮ್ಮ ಫೋನ್ ತೆಗೆದು ‘ಅವರು ಬ್ಯುಸಿ ಇದ್ದಾರೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಅನ್ನೋ ಆರೋಪವಿದೆ. ಆದರೆ ಅದಕ್ಕೂ ಉತ್ತರಿಸಿರುವ ಚಂದನ್ ನಾನು ಬ್ಯುಸಿ ಇದ್ದೀನಿ ಅಂತಾ ಮೀಡಿಯಾದವರಿಗೇ ಹೇಳುವಷ್ಟು ಬ್ಯುಸಿಯಾಗಿಲ್ಲ. ನಾನು ಬಿಗ್ ಬಾಸ್ ನಿಂದ ಬಂದ ನಂತರ ಸಾಕಷ್ಟು ಸಮಯ ಟ್ರಾವಲಿಂಗಲ್ಲೇ ಇದ್ದೆ. ಅಲ್ಲಿ ಫೋನ್ ರಿಸೀವ್ ಮಾಡದೇ ಇದ್ದದ್ದು ಇಷ್ಟೆಲ್ಲಾ ಅಪಾರ್ಥಕ್ಕೆ ಕಾರಣವಾಗಿದೆ ಎಂದು ಹೇಳಿ ಸದ್ಯ ಅವರ ಮೇಲಿರುವ ಆರೋಪಗಳನ್ನು ಡಬ್ಬ ಬಡಿದಷ್ಟೇ ಸಲೀಸಾಗಿ ತಳ್ಳಿಹಾಕಿದ್ದಾರೆ!