Tag: ಮ್ಯಾಚ್ ಫಿಕ್ಸಿಂಗ್

  • ‘ನನ್ನ ಮಗುವಿನ ಮೇಲಾಣೆ ತಪ್ಪು ಮಾಡಿಲ್ಲ’: ಶ್ರೀಶಾಂತ್

    ‘ನನ್ನ ಮಗುವಿನ ಮೇಲಾಣೆ ತಪ್ಪು ಮಾಡಿಲ್ಲ’: ಶ್ರೀಶಾಂತ್

    ನವದೆಹಲಿ: ಕಳೆದ ತಿಂಗಳು ಭಾತದ ವೇಗಿ ಶ್ರೀಶಾಂತ್ ಮೇಲಿನ ನಿಷೇಧವನ್ನು ಕಡಿಮೆ ಮಾಡಿ ಬಿಸಿಸಿಐ ಸಮಿತಿ ನಿರ್ಣಯ ತೆಗೆದುಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಕುರಿತು ಇತ್ತೀಚೆಗೆ ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್, ‘ನನ್ನ ಮಗುವಿನ ಮೇಲಾಣೆ ನಾನು ಆ ತಪ್ಪು ಮಾಡಿಲ್ಲ’ ಎಂದು ಭಾವುಕರಾಗಿದ್ದಾರೆ.

    ನನ್ನ ತಂದೆ, ಮಗುವಿನ ಮೇಲಾಣೆ, ನಾನು ಯಾವುದೇ ರೀತಿಯ ಫಿಕ್ಸಿಂಗ್ ಮಾಡಿಲ್ಲ. ಅಂತಹ ಯೋಚನೆಯೇ ನನಗೆ ಬಂದಿಲ್ಲ. ಇಂದು ನನ್ನ ತಂದೆ, ತಾಯಿ ಅನಾರೋಗ್ಯದಿಂದ ಬಳುತ್ತಿದ್ದಾರೆ. ಕಳೆದ 5 ವರ್ಷಗಳಿಂದಲೂ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದು, ಇಂದು ನಾನು ಆಡುವ ಪಂದ್ಯವನ್ನು ಅವರು ನೋಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ. 100 ಕೋಟಿ ರೂ. ಕೊಟ್ಟರೂ ನಾನು ಅಂತಹ ಕೆಲಸ ಮಾಡುವುದಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.

    ಮುಂದಿನ ವರ್ಷದ ಆಗಸ್ಟ್ ವೇಳೆಗೆ ಶ್ರೀಶಾಂತ್ ಮೇಲಿನ ನಿಷೇಧದ ಅವಧಿ ಪೂರ್ಣಗೊಳ್ಳಲಿದ್ದು, 7 ವರ್ಷದ ನಿಷೇಧದ ಅವಧಿ ಅಂತ್ಯವಾಗಲಿದೆ. ನಿಷೇಧ ತೆರವಾದ ಬಳಿಕ ಮತ್ತೆ ತಾವು ಕ್ರಿಕೆಟ್ ಆಡಬೇಕು ಎಂದು ಶ್ರೀಶಾಂತ್ ಹೇಳಿದ್ದು, ವಿಶ್ವ ಕ್ರಿಕೆಟ್‍ನಲ್ಲಿ ಹಲವು ಲೀಗ್ ಆಡುತ್ತಿದ್ದಾರೆ. ನನ್ನ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳಲು ನಾನು ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡಬೇಕಿದೆ ಎಂದು ಹೇಳಿದ್ದಾರೆ.

  • ಮಹಿಳಾ ಕ್ರಿಕೆಟ್‍ನಲ್ಲೂ ಫಿಕ್ಸಿಂಗ್ ಭೂತ – ಬೆಂಗ್ಳೂರಿನಲ್ಲಿ ದೂರು ದಾಖಲು

    ಮಹಿಳಾ ಕ್ರಿಕೆಟ್‍ನಲ್ಲೂ ಫಿಕ್ಸಿಂಗ್ ಭೂತ – ಬೆಂಗ್ಳೂರಿನಲ್ಲಿ ದೂರು ದಾಖಲು

    ಬೆಂಗಳೂರು: ಪುರುಷರ ಕ್ರಿಕೆಟ್‍ನಲ್ಲಿ ಕೇಳಿ ಬರುತ್ತಿದ್ದ ಮ್ಯಾಚ್ ಫಿಕ್ಸಿಂಗ್ ಭೂತ ಮೊದಲ ಬಾರಿ ಎಂಬಂತೆ ಮಹಿಳಾ ಕ್ರಿಕೆಟ್‍ನಲ್ಲೂ ಕೇಳಿ ಬಂದಿದ್ದು, ಈ ಸಂಬಂಧ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ಸಂಪರ್ಕ ಮಾಡಿದ ಆರೋಪ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ನಗರದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ (ಎಸಿಯು) ವಿಚಾರಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ಮ್ಯಾಚ್ ಫಿಕ್ಸಿಂಗ್ ಮಾಡುವ ಉದ್ದೇಶದಿಂದ ಬುಕ್ಕಿಯೊಬ್ಬ ಸಂಪರ್ಕ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ತಮ್ಮನ್ನು ಬುಕ್ಕಿ ಸಂಪರ್ಕ ಮಾಡಿದ್ದ ಬಗ್ಗೆ ಮಹಿಳಾ ಕ್ರಿಕೆಟ್ ಆಟಗಾರ್ತಿಯೇ ಬಿಸಿಸಿಐಗೆ ಮಾಹಿತಿ ನೀಡಿದ್ದಾಗಿ ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಈ ಸಂಬಂಧ ಜಿತೇಂದ್ರ ಕೊಠಾರಿ ಹಾಗೂ ರಾಕೇಶ್ ಬಫ್ನಾ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಬಫ್ನಾ ವರ್ಷದ ಆರಂಭದಲ್ಲಿ ಆಟಗಾರ್ತಿಯನ್ನು ಭೇಟಿಯಾಗಿದ್ದು, ತಮ್ಮೊಂದಿಗೆ ಕೈಜೋಡಿಸಿದರೆ ದೊಡ್ಡ ಪ್ರಮಾಣದಲ್ಲಿ ಹಣ ನೀಡುವುದಾಗಿ ಆಫರ್ ನೀಡಿದ್ದ ಎನ್ನುವ ವಿಚಾರ ದೂರಿನಲ್ಲಿ ಉಲ್ಲೇಖವಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾಗವಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದೆ.

    ಸಾಮಾಜಿಕ ಜಾಲತಾಣ ಮೂಲಕ ತಮ್ಮನ್ನು ಕ್ರೀಡಾ ಸಂಸ್ಥೆಯೊಂದರ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದ ಕೊಠಾರಿ, ಆಟಗಾರ್ತಿಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಮೊದಲು ಪ್ರಯತ್ನಿಸಿದ್ದು, ಆ ಬಳಿಕ ರಾಕೇಶ್ ಬಫ್ನಾನನ್ನು ಪರಿಚಯ ಮಾಡಿಸಿದ್ದ. ಬಫ್ನಾ ಆಟಗಾರ್ತಿಯ ಎದುರು ಮೊದಲು ಫಿಕ್ಸಿಂಗ್ ಕುರಿತು ಮಾತನಾಡಿದ್ದು, ಹಣ ನೀಡುವುದಾಗಿ ಹೇಳಿದ್ದ ಎಂಬ ಮಾಹಿತಿ ಲಭಿಸಿದೆ. ಆದರೆ ಫಿಕ್ಸಿಂಗ್ ಆಫರ್ ಪಡೆದಿದ್ದ ಮಹಿಳಾ ಆಟಗಾರ್ತಿಯ ಹೆಸರನ್ನು ರಿವೀಲ್ ಮಾಡಿಲ್ಲ.

  • ಕೊಲೆ ಮಾಡುವುದಕ್ಕಿಂತಲೂ ಮ್ಯಾಚ್ ಫಿಕ್ಸಿಂಗ್ ಘೋರ ಅಪರಾಧ: ಧೋನಿ

    ಕೊಲೆ ಮಾಡುವುದಕ್ಕಿಂತಲೂ ಮ್ಯಾಚ್ ಫಿಕ್ಸಿಂಗ್ ಘೋರ ಅಪರಾಧ: ಧೋನಿ

    ಬೆಂಗಳೂರು: ಐಪಿಎಲ್ 2019ರ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತಂಡದ ಮೇಲೆ ವಿಧಿಸಿದ್ದ ಬ್ಯಾನ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

    ಸಾಕ್ಷ್ಯ ಚಿತ್ರವೊಂದರ ಶೂಟಿಂಗ್ ವೇಳೆ ಧೋನಿ ಈ ಬಗ್ಗೆ ಮಾತನಾಡಿದ್ದು, ನನ್ನ ಪಾಲಿಗೆ ಕೊಲೆ ಮಾಡುವುದಕ್ಕಿಂತ ಮ್ಯಾಚ್ ಫಿಕ್ಸಿಂಗ್ ಬಹುದೊಡ್ಡ ಅಪರಾಧ ಎಂದಿದ್ದಾರೆ.

    ತಂಡವೇ ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿದ್ದ ಪರಿಣಾಮ ನನ್ನ ಹೆಸರು ಕೂಡ ಅದರಲ್ಲಿ ಕೇಳಿ ಬಂದಿತ್ತು. ಆ ಸಂದರ್ಭ ನಮಗೆ ಕಠಿಣವಾಗಿತ್ತು. ಅಭಿಮಾನಿಗಳು ಕೂಡ ತಂಡಕ್ಕೆ ನೀಡಿದ್ದ ಶಿಕ್ಷೆ ಕಠಿಣ ಎಂದೇ ಭಾವಿಸಿದ್ದರು. ಆದರೆ ನಮ್ಮ ಕಮ್ ಬ್ಯಾಕ್ ಸಮಯ ತುಂಬಾ ಭಾವನಾತ್ಮಕವಾಗಿತ್ತು. ನಾನು ಯಾವಾಗಲು ಹೇಳಿದಂತೆ ನಮ್ಮನ್ನು ಯಾವುದು ಕೊಲ್ಲುತ್ತದೋ ಅದರಿಂದ ನಾವು ಮತ್ತಷ್ಟು ಗಟ್ಟಿಯಾಗುತ್ತೇವೆ ಎಂದು ಧೋನಿ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಧೋನಿ ಅವರ ಸಾಕ್ಷ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದುವರೆಗೂ ಟ್ವಿಟ್ಟರಿನಲ್ಲಿ 54 ಸಾವಿರ ವ್ಯೂ ಕಂಡಿದೆ. ಅಲ್ಲದೇ 1,543 ಮಂದಿ ವಿಡಿಯೋವನ್ನು ರೀ ಟ್ವೀಟ್ ಮಾಡಿದ್ದಾರೆ. ಈ ಸಾಕ್ಷ್ಯ ಚಿತ್ರದ ಟ್ರೈಲರ್ ಧೋನಿ ಅವರದೊಂದಿಗೆ ಸಿಎಸ್‍ಕೆ ತಂಡದ ಸುರೇಶ್ ರೈನಾ, ರವೀಂದ್ರ ಜಡೇಜಾ ಸೇರಿದಂತೆ ಶೇನ್ ವಾಟ್ಸಾನ್ ಕೂಡ ಕಾಣಿಸಿಕೊಂಡಿದ್ದಾರೆ.

    ಎರಡು ವರ್ಷಗಳ ಬ್ಯಾನ್ ಬಳಿಕ ಕಳೆದ ಐಪಿಎಲ್‍ಗೆ ಕಮ್ ಬ್ಯಾಕ್ ಮಾಡಿದ್ದ ತಂಡದ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದು, ಪ್ರಸಕ್ತ ವರ್ಷದ ಟೂರ್ನಿಯ ಮೊದಲ ಪಂದ್ಯದಲ್ಲಿ ಸಿಎಸ್‍ಕೆ, ಬೆಂಗಳೂರು ತಂಡವನ್ನು ಎದುರಿಸಲಿದೆ. ಮಾಚ್ 23 ರಿಂದ ಟೂರ್ನಿ ಆರಂಭಗೊಳ್ಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 3 ಸ್ಟಂಪ್, 5 ಸಿಲ್ಲಿ ರನೌಟ್: ಕ್ರಿಕೆಟ್ ಇತಿಹಾಸದಲ್ಲಿ ಕಂಡು ಕೇಳರಿಯದ ಔಟ್! ವೈರಲ್ ವಿಡಿಯೋ

    3 ಸ್ಟಂಪ್, 5 ಸಿಲ್ಲಿ ರನೌಟ್: ಕ್ರಿಕೆಟ್ ಇತಿಹಾಸದಲ್ಲಿ ಕಂಡು ಕೇಳರಿಯದ ಔಟ್! ವೈರಲ್ ವಿಡಿಯೋ

    ದುಬೈ: ಯನೈಟೆಡ್ ಅರಬ್ ಎಮಿರೆಟ್ಸ್ ಅಜ್ಮನ್ ಆಲ್ ಸ್ಟಾರ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.

    ಜನವರಿ 24 ರಂದು ಶಾರ್ಜಾ ವಾರಿಯರ್ಸ್ ಮತ್ತು ದುಬೈ ಸ್ಟಾರ್ಸ್ ನಡುವೆ ಟಿ 20 ಕ್ರಿಕೆಟ್ ಪಂದ್ಯ ನಡೆದಿತ್ತು. 136 ರನ್ ಗಳ ಗುರಿಯನ್ನು ಪಡೆದ ಶಾರ್ಜಾ ವಾರಿಯರ್ಸ್ 46 ರನ್ ಗಳಿಗೆ ಆಲೌಟ್ ಆಗಿತ್ತು.

    ಕಡಿಮೆ ರನ್ ಗಳಿಗೆ ತಂಡ ಆಲೌಟ್ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಆದರೆ ಈ ಪಂದ್ಯದಲ್ಲಿ 5 ಮಂದಿ ರನೌಟ್ ಆಗಿದ್ದರೆ, ಮೂರು ಮಂದಿ ಸ್ಟಂಪ್ ಔಟ್ ಆಗಿದ್ದರು. ಕ್ರಿಕೆಟ್ ಗೊತ್ತಿಲ್ಲದವರಂತೆ ಓಡಿ ಸಿಲ್ಲಿ ಸಿಲ್ಲಿಯಾಗಿ ರನೌಟ್  ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಯುಎಇ ಕ್ರಿಕೆಟ್ ಬೋರ್ಡ್ ಈ ಟೂರ್ನಿಯನ್ನೇ ಸ್ಥಗಿತಗೊಳಿಸಿದೆ. ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ ಈಗ ಈ ಪಂದ್ಯದಲ್ಲಿ ಭಾಗವಹಿಸಿದ್ದ ಆಟಗಾರರನ್ನು ತನಿಖೆ ನಡೆಸಲು ಮುಂದಾಗಿದೆ.

    ಆಟಗಾರರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೇ ಈ ರೀತಿಯಾಗಿ ಟೂರ್ನಿಯೊಂದರಲ್ಲಿ ಆಟಗಾರರು ಔಟಾದ ಉದಾಹರಣೆಯೇ ಇಲ್ಲ ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ.

    https://twitter.com/TheCricketPaper/status/958409362804019200?

    https://twitter.com/KP24/status/958558388186767360?