Tag: ಮೊಸರು

  • ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು ದರ ಏರಿಕೆ – ಸರ್ಕಾರದಿಂದ ಸುಳಿವು

    ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು ದರ ಏರಿಕೆ – ಸರ್ಕಾರದಿಂದ ಸುಳಿವು

    ಬೆಳಗಾವಿ: ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು (Nandini Milk, Curd) ದರ ಹೆಚ್ಚಾಗುವ ಸಾಧ್ಯತೆಯಿದೆ.

    ಈ ಸಂಬಂಧ ಅಧಿವೇಶನದಲ್ಲಿ (Belagavi Session) ಸರ್ಕಾರ ದರ ಏರಿಸುವ ಸುಳಿವು ನೀಡಿದೆ. ಹಾಲಿನ ದರ ಏರಿಕೆ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಸರ್ಕಾರ (Karnataka Government) ಹೇಳಿದೆ.

    ದರ ಹೆಚ್ಚಳ ಕುರಿತು ಮಾಲೂರು ಶಾಸಕ ಕೆ ವೈ ನಂಜೇಗೌಡ ಪ್ರಶ್ನೆಗೆ ಪಶು ಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್ ಉತ್ತರ ನೀಡಿದ್ದಾರೆ. ಇತರೇ ಖಾಸಗಿ ಬ್ರ್ಯಾಂಡ್‌ಗಳ ದರಕ್ಕಿಂತ ನಂದಿನಿ ಬ್ರ್ಯಾಂಡ್‌ಗಳ ದರ 10-12 ರೂ. ಕಡಿಮೆ ಇದೆ. ಹಾಲು ಉತ್ಪಾದಕರು, ಒಕ್ಕೂಟಗಳು ನಷ್ಟದಲ್ಲಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸುವುದಾಗಿ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!

     

    ಒಂದು ವೇಳೆ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡರೆ ನಾಲ್ಕೇ ತಿಂಗಳ ಒಳಗಡೆ ಮತ್ತೊಮ್ಮೆ ಹಾಲಿನ ದರ ಏರಿಕೆಯಾಗಲಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆ – ಬ್ರಿಗೇಡ್‌ ರಸ್ತೆಯಲ್ಲಿ ಜೋಡಿಗಳಿಗೆ ಪ್ರತ್ಯೇಕ ಮಾರ್ಗ

    ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಈಗಾಗಲೇ ಚಿಂತನೆ ನಡೆಸಿದೆ. ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.

     
    ಬೆಲೆ ಏರಿಕೆ ಯಾಕೆ?
    ಆರ್ಥಿಕ ನಷ್ಟದ (Economic Loss) ಹಿನ್ನೆಲೆ ಈ ಹಿಂದೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್‌ ಮನವಿ ಮಾಡಿತ್ತು. ಆದರೆ ಸರ್ಕಾರ ಅಕ್ಟೋಬರ್‌ನಲ್ಲಿ ಕೇವಲ 3 ರೂಪಾಯಿ ಮಾತ್ರ ಏರಿಕೆ ಮಾಡಿತ್ತು. ಈಗ 14 ಹಾಲು ಒಕ್ಕೂಟಗಳಿಂದ ಮನವಿ ಬಂದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ತಯಾರಿ ನಡೆಸುತ್ತಿದೆ.

    ಕಳೆದ ಬಾರಿ 3 ರೂ. ನೇರವಾಗಿ ರೈತರಿಗೆ ನೀಡಿದ ಹಿನ್ನೆಲೆ ಒಕ್ಕೂಟಗಳಿಗೆ ನಷ್ಟದ ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎನ್ನುತ್ತಿದ್ದಾರೆ ಕೆಎಂಎಫ್ ಅಧಿಕಾರಿಗಳು. ಸದ್ಯ ಜನವರಿಯಲ್ಲಿ ಒಕ್ಕೂಟಗಳ ಸಭೆ ಕರೆದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ಚಿಂತನೆ ನಡೆಸಿದೆ.

     

  • ಕ್ಲಾಸಿಕ್ ಬೆಂಗಾಲಿ ಮೀನು ಸಾರು – ಹೆಚ್ಚು ಮಸಾಲೆ ಇಲ್ಲದಿದ್ರೂ ಸೂಪರ್ ಸ್ವಾದ

    ಕ್ಲಾಸಿಕ್ ಬೆಂಗಾಲಿ ಮೀನು ಸಾರು – ಹೆಚ್ಚು ಮಸಾಲೆ ಇಲ್ಲದಿದ್ರೂ ಸೂಪರ್ ಸ್ವಾದ

    ಹೆಚ್ಚು ಖಾರ ಹಾಗೂ ಮಸಾಲೆ ಪದಾರ್ಥಗಳನ್ನು ಇಷ್ಟಪಡದವರು ಹೆಚ್ಚಾಗಿ ನಾನ್‌ವೆಜ್ ಖಾದ್ಯವನ್ನು ದೂರವಿಡುತ್ತಾರೆ. ಏಕೆಂದರೆ ನಾನ್‌ವೆಜ್ ಖಾದ್ಯವನ್ನು ಹೆಚ್ಚು ಮಸಾಲೆಯುಕ್ತವಾಗಿಯೇ ಮಾಡಲಾಗುತ್ತದೆ. ಆದರೆ ಬಂಗಾಳದ ಫೇಮಸ್ ಡೋಯಿ ಮಾಚ್ (Doi Maach) ಹಾಗಲ್ಲ. ಕನಿಷ್ಠ ಮಸಾಲೆ ಪದಾರ್ಥಗಳನ್ನು ಬಳಸಿ ಈ ಮೀನು ಸಾರನ್ನು ಮಾಡಲಾಗುತ್ತದೆ. ಡೋಯಿ ಎಂದರೆ ಮೊಸರು ಹಾಗೂ ಮಾಚ್ ಎಂದರೆ ಮೀನು. ಹೆಸರೇ ಹೇಳಿದಂತೆ ಈ ಮೀನು ಸಾರಿಗೆ ಬೇಕಾದ ಮುಖ್ಯ ಪದಾರ್ಥವೇ ಮೊಸರು. ಹಾಗಿದ್ದರೆ ಬೆಂಗಾಲಿ ಸ್ಟೈಲ್‌ನ ಮೀನು ಸಾರು ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮ್ಯಾರಿನೇಷನ್‌ಗೆ:
    ಉಪ್ಪು – ಕಾಲು ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಮೀನು – 4-5 ತುಂಡುಗಳು
    ಮೊಸರು ಮಿಶ್ರಣಕ್ಕೆ:
    ಮೊಸರು – 2 ಕಪ್
    ಕಡಲೆ ಹಿಟ್ಟು – ಅರ್ಧ ಟೀಸ್ಪೂನ್
    ಈರುಳ್ಳಿ ರಸ – ಅರ್ಧ
    ಕರಿ ತಯಾರಿಸಲು:
    ಸಾಸಿವೆ ಎಣ್ಣೆ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಗರಂ ಮಸಾಲೆ ಪುಡಿ – ಕಾಲು ಟೀಸ್ಪೂನ್
    ತುಪ್ಪ – 1 ಟೀಸ್ಪೂನ್
    ಕರಿಬೇವಿನ ಎಲೆ – ಕೆಲವು
    ಲವಂಗ -2
    ಏಲಕ್ಕಿ – 2
    ಹಸಿರು ಮೆಣಸಿನಕಾಯಿ – 3
    ದಾಲ್ಚಿನಿ – 1 ಇಂಚು ಇದನ್ನೂ ಓದಿ: ಬರೀ 15 ನಿಮಿಷ – ಎಗ್ ಡ್ರಾಪ್ ಸೂಪ್ ಮನೆಯಲ್ಲೇ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಮೀನಿನ ತುಂಡುಗಳಿಗೆ ಅರಿಶಿನ ಹಾಗೂ ಉಪ್ಪು ಹಚ್ಚಿ ಮ್ಯಾರಿನೇಟ್ ಮಾಡಿ.
    * ಬಾಣಲೆ ಬಿಸಿ ಮಾಡಿ ಸಾಸಿವೆ ಎಣ್ಣೆ ಸೇರಿಸಿ ಅದರಲ್ಲಿ ಮೀನಿನ ತುಂಡುಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎರಡೂ ಬದಿ ಫ್ರೈ ಮಾಡಿಕೊಳ್ಳಿ.
    * ಈಗ ಬಾಣಲೆಯನ್ನು ತೆಗೆದು ಹೆಚ್ಚುವರಿ ಎಣ್ಣೆಯನ್ನು ಪೇಪರ್ ಟವಲ್‌ಗೆ ಹರಿಸಿ, ಪಕ್ಕಕ್ಕಿಡಿ.
    * ಒಂದು ಬಟ್ಟಲು ತೆಗೆದುಕೊಂಡು, ಅದಕ್ಕೆ ಮೊಸರು ಹಾಕಿ ಕಡಲೆ ಹಿಟ್ಟು ಹಾಗೂ ಈರುಳ್ಳಿ ರಸ ಸೇರಿಸಿ ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಈಗ ಮೀನು ಹುರಿದಿಟ್ಟಿದ್ದ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಏಲಕ್ಕಿ, ಕರಿಬೇವಿನ ಎಲೆ, ಲವಂಗ ಹಾಗೂ ದಾಲ್ಚಿನಿ ಸೇರಿಸಿ.
    * ಬಳಿಕ ಮೊಸರನ್ನು ಸೇರಿಸಿ, ಮಿಶ್ರಣ ಮಾಡಿ, 1 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
    * ರುಚಿಗೆ ತಕ್ಕಷ್ಟು ಉಪ್ಪು ಹಸಿರು ಮೆಣಸಿನಕಾಯಿ ಹಾಗೂ ಗರಂ ಮಸಾಲೆ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ.
    * ಮೀನನ್ನು ಹೆಚ್ಚು ಬೆರೆಸಬೇಡಿ, ಇದರಿಂದ ಮೀನಿನ ತುಂಡು ಮುರಿಯುವ ಸಾಧ್ಯತೆಯಿರುತ್ತದೆ. ಉರಿಯನ್ನು ಹೆಚ್ಚು ಮಾಡಿ ಮತ್ತೆ 1 ನಿಮಿಷ ಬೇಯಿಸಿಕೊಳ್ಳಿ.
    * ಇದೀಗ ಬೆಂಗಾಲಿ ಸ್ಟೈಲ್ ಮೊಸರಿನ ಮೀನು ಸಾರು ತಯಾರಾಗಿದ್ದು, ಬಿಸಿಬಿಸಿ ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ದಕ್ಷಿಣ ಭಾರತದ ರುಚಿಕರ ಏಡಿ ಕರಿ ರೆಸಿಪಿ

  • ಹಿಜಬ್ ಧರಿಸಿಲ್ಲ ಅಂತ ಮಹಿಳೆಯರ ತಲೆ ಮೇಲೆ ಮೊಸರು ಸುರಿದು ಹಲ್ಲೆ

    ಹಿಜಬ್ ಧರಿಸಿಲ್ಲ ಅಂತ ಮಹಿಳೆಯರ ತಲೆ ಮೇಲೆ ಮೊಸರು ಸುರಿದು ಹಲ್ಲೆ

    ಟೆಹ್ರಾನ್: ಮಹಿಳೆಯರಿಬ್ಬರು (Women) ಸಾರ್ವಜನಿಕ ಸ್ಥಳದಲ್ಲಿ ಹಿಜಬ್ (Hijab) ಧರಿಸದ್ದಕ್ಕೆ ಮೊಸರು ಸುರಿದು (Yoghurt) ಹಲ್ಲೆ ನಡೆಸಿದ ಘಟನೆ ಇರಾನಿನಲ್ಲಿ (Iran) ನಡೆದಿದೆ.

    ಇರಾನಿನ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ವೀಡಿಯೋ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋವು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಏನಿದೆ?: ಇಬ್ಬರು ಮಹಿಳೆಯರು ಅಂಗಡಿಯೊಂದಕ್ಕೆ ಹಿಜಬ್ ಧರಿಸದೇ ಬಂದಿದ್ದಾರೆ. ಅದೇ ಸಂದರ್ಭದಲ್ಲಿ ಬಂದ ವ್ಯಕ್ತಿಯೊಬ್ಬ ಆ ಇಬ್ಬರು ಮಹಿಳೆಯರ ಮೇಲೆ ಕೂಗಾಡಿದ್ದಾನೆ. ನಂತರ ಆತ ಹತ್ತಿರ ಕಪಾಟಿನಲ್ಲಿದ್ದ ಮೊಸರಿನ ಪ್ಯಾಕೆಟ್‍ನ್ನು ತೆಗೆದುಕೊಂಡು ಕೋಪದಿಂದ ಇಬ್ಬರು ಮಹಿಳೆಯರ ತಲೆ ಮೇಲೆ ಎಸೆದಿದ್ದಾನೆ. ನಂತರ ಅಂಗಡಿಯಿಂದ ಹೊರಗೆ ಓಡಿ ಹೋಗಿದ್ದಾನೆ.

    ಘಟನೆಯ ನಂತರ ಇರಾನ್ ಪೊಲೀಸರು ಹಿಜಬ್ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಜೊತೆಗೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಕ್ಕೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಅಂಗಡಿಯ ಮಾಲೀಕರಿಗೆ ನೋಟೀಸ್ ನೀಡಲಾಗಿದೆ.

    ಇರಾನ್‍ನಲ್ಲಿ ಮಹಿಳೆಯರೂ ಹಿಜಬ್ ಧರಿಸುವುದು ಕಡ್ಡಾಯವಾಗಿದ್ದು, 7 ವರ್ಷದ ಹುಡುಗಿಯಿಂದ ಹಿಡಿದು ಪ್ರತಿಯೊಬ್ಬ ಮಹಿಳೆಯು ಹಿಜಬ್ ಧರಿಸಬೇಕು ಎಂದು ಕಾನೂನು ಇದೆ. ಆದರೆ ಕಳೆದ ವರ್ಷದಿಂದ ಹಲವೆಡೆ ಹಿಜಬ್ ವಿರೋಧಿಸಿ ಇರಾನ್‍ನ ನಾನಾ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಕ್ಕೆ ಅಮೆರಿಕ, ಜರ್ಮನಿ ಸ್ಪಂದನೆ ಅನಗತ್ಯ: ಕೇಂದ್ರ ಸಚಿವ ಜೈಶಂಕರ್

    ಹಿಜಬ್ ವಿರೋಧಿ ಹೋರಾಟ?: ಕಳೆದ ವರ್ಷ ಮಹ್ಸಾ ಅಮಿನಿ ಎಂಬ ಯುವತಿಯನ್ನು ಹಿಜಬ್ ಧರಿಸಿಲ್ಲ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು. ನೈತಿಕ ಪೊಲೀಸ್‍ಗಿರಿಗೆ ಆಕೆ ಬಲಿಯಾಗಿದ್ದಳು. ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆ ಇರಾನ್‍ನಲ್ಲಿ ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಯುವತಿ ಸಾವಿನ ಬಳಿಕ ಇರಾನ್‍ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಸುಮಾರು 14,000 ಮಂದಿಯನ್ನು ಆಗ ಬಂಧಿಸಲಾಗಿತ್ತು. ಅವರಲ್ಲಿ ಸಾವಿರಾರು ಪುರುಷರು, ಮಹಿಳೆಯರು, ಮಕ್ಕಳೂ ಸೇರಿದ್ದರು. ಮಾತ್ರವಲ್ಲದೇ ಹಿಜಬ್ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿ ಹಲವರು ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿಕೊಂಡು, ನಡುರಸ್ತೆಯಲ್ಲೇ ಹಿಜಬ್ ಸುಟ್ಟು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ:  ಬೆಂಗಳೂರಿನಲ್ಲಿ ಬೈಕ್‌ಗೆ ಲಾರಿ ಡಿಕ್ಕಿ- ಮಹಿಳೆ ಸಾವು

  • ರುಚಿಕರವಾದ ದಹಿ ವಡಾ ಮಾಡುವುದು ಹೇಗೆ ಗೊತ್ತಾ?

    ರುಚಿಕರವಾದ ದಹಿ ವಡಾ ಮಾಡುವುದು ಹೇಗೆ ಗೊತ್ತಾ?

    ಹಿ ವಡಾ (Dahi Vada) ಭಾರತದಾದ್ಯಂತ ಜನಪ್ರಿಯವಾದ ಸಿಹಿ ತಿಂಡಿ. ಇದು ಉತ್ತರ ಭಾರತದಲ್ಲಿ ವಿಭಿನ್ನ ಪಾಕವಿಧಾನವನ್ನು ಹೊಂದಿದೆ. ಇದು ಚಾಟ್ ಅಥವಾ ಸ್ಟ್ರೀಟ್ ಫುಡ್ ಸ್ನ್ಯಾಕ್ಸ್ ರೆಸಿಪಿಯಾಗಿದೆ. ಸಾಮಾನ್ಯವಾಗಿ ಇದನ್ನು ಬೆಳಗಿನ ಉಪಾಹಾರಕ್ಕೆ ತಯಾರಿಸಲಾಗುತ್ತದೆ. ಆದರೆ ಈಗ ಇದನ್ನು ಸ್ನ್ಯಾಕ್ಸ್ ಆಗಿಯೂ ಸವಿಯಬಹುದು. ನೀವು ಕೂಡಾ ದಹಿ ವಡಾವನ್ನು ಮನೆಯಲ್ಲಿ ಮಾಡಿ ಸವಿಯಿರಿ.

    ಬೇಕಾಗುವ ಪದಾರ್ಥಗಳು:
    ವಡೆ ತಯಾರಿಸಲು:
    * ಉದ್ದಿನ ಬೇಳೆ – 1 ಕಪ್
    * ಕತ್ತರಿಸಿದ ಮೆಣಸಿನಕಾಯಿ – 1
    * ಜಜ್ಜಿದ ಶುಂಠಿ – 1 ಟೀಸ್ಪೂನ್
    * ಕರಿಬೇವಿನ ಎಲೆ – ಅರ್ಧ ಕಪ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ಕರಿಮೆಣಸು – 1 ಟೀಸ್ಪೂನ್
    * ಒಣ ತೆಂಗಿನಕಾಯಿ ತುರಿ – 2 ಟೀಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಎಣ್ಣೆ – ಕರಿಯಲು
    * ಕಾರಾ ಬೂಂದಿ – 1 ಕಪ್

    ಮೊಸರು ಮಿಶ್ರಣಕ್ಕೆ:
    * ಮೊಸರು- 3 ಕಪ್
    * ನೀರು – ಅರ್ಧ ಕಪ್
    * ಸಕ್ಕರೆ – 2 ಟೀಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಎಣ್ಣೆ – 3 ಟೀಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಉದ್ದಿನ ಬೇಳೆ – 1 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಒಣಗಿದ ಕೆಂಪು ಮೆಣಸಿನಕಾಯಿ – 1
    * ಕರಿಬೇವಿನ ಎಲೆಗಳು – ಸ್ವಲ್ಪ
    * ಕತ್ತರಿಸಿದ ಮೆಣಸಿನಕಾಯಿ – 2

    ಮಾಡುವ ವಿಧಾನ:
    * ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ 1 ಕಪ್ ಉದ್ದಿನ ಬೇಳೆ ಹಾಕಿ ನೀರಿನಲ್ಲಿ ನೆನೆಸಿಡಿ. 2 ಗಂಟೆಗಳ ನಂತರ ನೀರನ್ನು ತೆಗೆದು ಮತ್ತು ಮಿಕ್ಸರ್ ಹಾಕಿ ರುಬ್ಬಿಕೊಳ್ಳಿ.
    * ಉದ್ದಿನ ಬೇಳೆ ಹಿಟ್ಟನ್ನು ಪಾತ್ರೆಗೆ ವರ್ಗಾಯಿಸಿ. 2 ನಿಮಿಷಗಳ ಕಾಲ ಹಿಟ್ಟನ್ನು ಹಾಗೆ ಇಟ್ಟು ಅದಕ್ಕೆ ಮೆಣಸಿನಕಾಯಿ, ಶುಂಠಿ, ಕೆಲವು ಕರಿಬೇವಿನ ಎಲೆಗಳು, ಕೊತ್ತಂಬರಿ, ಮೆಣಸು, ಒಣ ತೆಂಗಿನಕಾಯಿ ತುರಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಫಿಕ್ಸ್ ಮಾಡಿ. ಒಂದು ನಿಮಿಷ ಹಾಗೆ ಬಿಡಿ.
    * ಖಾಲಿ ಬಾಣಲಿಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ವಡ್ಡೆ ಮಿಶ್ರಣವನ್ನು ಹಾಕಿ. ಎರಡುಕಡೆ ಕಂದು ಬಣ್ಣ ಮತ್ತು ಗರಿಗರಿಯಾಗುವವರೆಗೆ ವಡಾವನ್ನು ಫ್ರೈ ಮಾಡಿ.
    * ಎಣ್ಣೆಯನ್ನು ಹೀರಿಕೊಳ್ಳಲು ವಡಾವನ್ನು ಪೇಪರ್ ಅಥವಾ ಟವೆಲ್ ಮೇಲೆ ಹಾಕಿ.
    * ದೊಡ್ಡ ಬಟ್ಟಲಿನಲ್ಲಿ ವಡಾವನ್ನು ಹಾಕಿ 4 ಕಪ್ ಬಿಸಿ ನೀರನ್ನು ಸುರಿಯಿರಿ. ನೀರಿನಲ್ಲಿ ಅದ್ದಿ ಮತ್ತು 5-10 ನಿಮಿಷಗಳ ಕಾಲ ಹಾಗೆ ಇಡಿ. ಇದು ವಡಾವನ್ನು ಮೃದು ಮತ್ತು ರಸಭರಿತವಾಗಿಸಲು ಸಹಾಯ ಮಾಡುತ್ತದೆ.
    * ವಡಾವನ್ನು ಚೆನ್ನಾಗಿ ನೆನೆಸಿದ ನಂತರ, ನಿಧಾನವಾಗಿ ನೀರನ್ನು ಪೂರ್ತಿಯಾಗಿ ಸೋಸಿ.

    ಮೊಸರು ಮಿಶ್ರಣ ತಯಾರಿಸಲು:
    * ದೊಡ್ಡ ಬಟ್ಟಲಿನಲ್ಲಿ ಮೊಸರು ಮತ್ತು ನೀರು ಹಾಕಿ. ಅದಕ್ಕೆ ಸಕ್ಕರೆ ಮತ್ತು ಉಪ್ಪು ಹಾಕಿ ಕಲಕಿ. ಅಗತ್ಯವಿದ್ದರೆ ಹೆಚ್ಚಿನ ನೀರು ಸೇರಿಸಿ.
    * ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ನಂತರ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಹಿಂಗ್, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಮೆಣಸಿನಕಾಯಿ ಮತ್ತು ಶುಂಠಿ ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಿ.
    * ಈ ಒಗ್ಗರಣೆಯನ್ನು ಮೊಸರು ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿ.
    * ಈ ಮಸಾಲಾ ಮೊಸರಿಗೆ ವಡಾ ಹಾಕಿ 2 ಗಂಟೆಗಳ ಕಾಲ ಮೊಸರು ಚೆನ್ನಾಗಿ ಹೀರಿಕೊಳ್ಳುವವರೆಗೆ ಮುಚ್ಚಿ.

    – ನಂತರ ಸಣ್ಣ ತಟ್ಟೆಯಲ್ಲಿ ದಹಿ ವಡಾ ಇರಿಸಿ ಅದಕ್ಕೆ ಸ್ವಲ್ಪ ಮೆಣಸಿನ ಪುಡಿ ಮತ್ತು 2 ಟೀಸ್ಪೂನ್ ಬೂಂಡಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಬಡಿಸಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಳೆಯಿಂದ ಹಾಲು, ಮೊಸರಿನ ದರ 2 ರೂ. ಏರಿಕೆ

    ನಾಳೆಯಿಂದ ಹಾಲು, ಮೊಸರಿನ ದರ 2 ರೂ. ಏರಿಕೆ

    ಬೆಂಗಳೂರು: ನಂದಿನಿ ಹಾಲು(Nandini Milk), ಮೊಸರಿನ (Yoghurt) ದರದಲ್ಲಿ 2 ರೂ. ಏರಿಕೆ ಮಾಡಿದ್ದು, ನಾಳೆಯಿಂದ ಅನ್ವಯವಾಗಲಿದೆ ಎಂದು ಕೆಎಂಎಫ್‌ (KMF) ತಿಳಿಸಿದೆ.

    ಕೆಎಂಎಫ್ ಸಭೆ ಮುಕ್ತಾಯದ ಬಳಿಕ ಇಂದು ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಹಾಲು, ಮೊಸರಿನ ದರ ಏರಿಕೆಯ ಕುರಿತು ತಿಳಿಸಿದ್ದಾರೆ. ಈ ದರವನ್ನು ನೇರವಾಗಿ ರೈತರಿಗೆ ನೀಡಲಿದ್ದೇವೆ. ಸೌತ್‌ನಲ್ಲಿ ಮಳೆ ಹೆಚ್ಚಾಗಿ ರೋಗ ಬಂದು ದನ ಸಾಯುತ್ತಿದ್ದವು, ಹಾಗಾಗಿ ಗಮನದಲ್ಲಿಟ್ಟುಕೊಂಡು ಏರಿಕೆ ಮಾಡಿದ್ದೇವೆ. ಕ್ಷೀರ ಭಾಗ್ಯ ಯೋಜನೆಯಿಂದ 10 ಕೋಟಿ ನಷ್ಟವಾಗುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇವೆ. ಅದಷ್ಟು ಬೇಗ ಈ ಬಗ್ಗೆ ನಿರ್ಧಾರ ಮಾಡಿದರೆ ರೈತರಿಗೆ ತಲುಪಿಸಲು ಅನುಕೂಲವಾಗಲಿದೆ. ನಾಳೆ ಬೆಳಗ್ಗೆ 11 ಗಂಟೆ ಮೂಲಕ ಮಾರುಕಟ್ಟೆಗೆ ಬರುವ ಹಾಲಿನ ಪ್ಯಾಕೆಟ್‌ಗಳ ಮೇಲೆ ಹೊಸ ದರ ಪ್ರಿಂಟ್ ಆಗಿ ಬರಲಿದೆ ಎಂದು ತಿಳಿಸಿದರು.

    ಹಳೆಯ ದರ – ಹೊಸ‌ ದರ:
    ಟೋನ್ಡ್ ಹಾಲಿನ ದರ ಈ ಮೊದಲು 37 ರೂ. ಇತ್ತು, ನಾಳೆಯಿಂದ 39 ರೂ. ಆಗಲಿದೆ. ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ಹಳೆಯ ದರ 38 ರೂ. ಇದ್ದು, ಹೊಸ ದರ 40 ರೂ.ಆಗಲಿದ್ದು, ಹೋಮೋಜಿನೈಸ್ಡ್ ಹಸುವಿನ ಹಾಲು 42 ರೂ. ಇದ್ದು, 44 ರೂ. ಆಗಲಿದೆ. ಇನ್ನೂ ಸ್ಪೆಷಲ್‌ ಹಾಲು ಹಾಗೂ ಶುಭಂ ಹಾಲಿನ ಹಳೆಯ ದರ 43 ರೂ. ಇದ್ದು, ಹೊಸ ದರ 45 ರೂ. ಆಗಲಿದೆ. ಹೋಮೋಜಿನೈಸ್ಡ್ ಸ್ಟ್ಯಾಂಡರ್ಡೈಸರ್ ಹಾಲಿನ ದರ ಈ ಮೊದಲು 44 ರೂ. ಇದ್ದು, ನಾಳೆಯಿಂದ 46 ಆಗಲಿದೆ. ಸಮೃದ್ಧಿ ಹಾಲಿನ ದರ 48 ರೂ. ಇದ್ದು, ನಾಳೆಯಿಂದ 50 ರೂ. ಆಗಲಿದೆ. ಸಂತೃಪ್ತಿ ಹಾಲಿನ 50 ರೂ. ಇದ್ದು, ನಾಳೆಯಿಂದ 52 ರೂ. ಆಗಲಿದೆ. ಡಬ್ಬಲ್‌ ಟೋನ್ಡ್ ಹಾಲಿನ ದರ 36 ರೂ. ಇದ್ದು, ನಾಳೆಯಿಂದ 38 ರೂ ಆಗಲಿದೆ. ಜೊತೆಗೆ ಮೊಸರು ಪ್ರತಿ ಕೆಜಿಗೆ ಈಗ 45 ರೂ. ಇದ್ದು ನಾಳೆಯಿಂದ 47 ರೂ. ಆಗಲಿದೆ. ಇದನ್ನೂ ಓದಿ: ವಿರೋಧಪಕ್ಷ ಮತಕ್ಕೋಸ್ಕರ ಭಯೋತ್ಪಾದನೆಗೆ ಸಪೋರ್ಟ್ ಮಾಡ್ತಿದೆ: ಪ್ರಮೋದ್ ಮುತಾಲಿಕ್

    ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಲೆ ಏರಿಕೆ ವಿಚಾರ ಚರ್ಚೆಗೆ ಬಂದಿತ್ತು. ಮೊನ್ನೆ ನಂದಿನಿ ಹಾಲಿನ ಬೆಲೆ ಹೆಚ್ಚಳವನ್ನು ತಡೆದಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ಗ್ರಾಹಕರಿಗೆ ಹೊರೆ ಆಗದ ರೀತಿ, ರೈತರಿಗೂ ತೊಂದರೆ ಆಗದ ರೀತಿಯಲ್ಲಿ ಇನ್ನೆರಡು ದಿನದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಕೆಎಂಎಫ್‍ಗೆ ಸೂಚನೆ ನೀಡಿದ್ದರು. ಹಿಂದೆ ನಿರ್ಧರಿಸಿದ್ದ ದರ ಹೆಚ್ಚಳ ಬೇಡ. ಕಡಿಮೆ ಮಾಡಿ ಎಂದು ಕೆಎಂಎಫ್‍ಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಬೆಲೆ ಏರಿಕೆ ಆಗಿದೆ. ಇದನ್ನೂ ಓದಿ: ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ – ಸಿಎಂ ಸಭೆಯಲ್ಲಿ ಏನಾಯ್ತು?

    Live Tv
    [brid partner=56869869 player=32851 video=960834 autoplay=true]

  • ನ.20ರ ನಂತರ ಹಾಲಿನ ಬೆಲೆ ಏರಿಕೆ ನಿರ್ಧಾರ: ಸಿಎಂ ಬೊಮ್ಮಾಯಿ

    ನ.20ರ ನಂತರ ಹಾಲಿನ ಬೆಲೆ ಏರಿಕೆ ನಿರ್ಧಾರ: ಸಿಎಂ ಬೊಮ್ಮಾಯಿ

    ಕಲಬುರಗಿ: ನಂದಿನಿ ಹಾಲು ಮತ್ತು ಮೊಸರಿನ(Milk and Curd) ದರ ಏರಿಕೆಯ ಬಗ್ಗೆ ನ.20ರ ನಂತರ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

    ಹಾಲಿನ ದರ 3 ರೂಪಾಯಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನ.20 ರ ನಂತರ ಹಾಲು ಒಕ್ಕೂಟದ ಮಹಾಮಂಡಳ ಅಧ್ಯಕ್ಷರು ಮತ್ತು ಅಧಿಕಾರಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುತ್ತದೆ. ಜನರಿಗೆ ಭಾರ ಆಗದಂತೆ, ರೈತರಿಗೆ ಅನುಕೂಲವಾಗುವಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

    ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ ನಂದಿನಿ ಹಾಲು ಮತ್ತು ಮೊಸರಿನ ದರ 3 ರೂ. ಏರಿಕೆ ಮಾಡಲು ಕೆಎಂಎಫ್‌ ಮುಂದಾಗಿತ್ತು.  ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ಸದ್ಯ ರೈತರಿಂದ ಪ್ರತಿ ಲೀಟರ್ ಹಾಲನ್ನು ಕೆಎಂಎಫ್‌(KMF) ಸರಾಸರಿ 29 ರೂ.ಗೆ ಖರೀದಿ ಮಾಡುತ್ತಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ‌ ಪ್ರತಿ ಲೀಟರ್‌ಗೆ 5 ರೂ. ಸಹಾಯಧನ ಕೂಡ ರೈತರಿಗೆ ನೀಡಲಾಗುತ್ತಿದೆ. ಈಗ ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡುವ ಪ್ಲ್ಯಾನ್‌ ಮಾಡಲಾಗಿದೆ.

    ಹವಾಮಾನ ವೈಪರೀತ್ಯ ಕಾರಣದಿಂದ ಮೇವು ಸಿಗುತ್ತಿಲ್ಲ. ಮೇವಿನ ಬೆಲೆ ಭಾರೀ ಏರಿಕೆಯಾಗಿದೆ. ಇದರ ಜೊತೆ ಹಸುವಿಗೆ ಚರ್ಮ ಗಂಟು ರೋಗ ಬಾಧಿಸುತ್ತಿದೆ. ಅಷ್ಟೇ ಅಲ್ಲದೇ ಸಾಗಾಣಿಕೆ, ವಿದ್ಯುತ್, ಪ್ಯಾಕಿಂಗ್ ಇತ್ಯಾದಿ ವೆಚ್ಚ ಶೇ.25 – 35 ರಷ್ಟು ಹೆಚ್ಚಳವಾಗಿದೆ. ಈ ಕಾರಣಕ್ಕೆ ಹಾಲು ಮತ್ತು ಮೊಸರಿನ ಬೆಲೆಯನ್ನು ಏರಿಕೆ ಮಾಡಲು ಕೆಎಂಎಫ್‌ ಮುಂದಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ನಂದಿನಿ ಹಾಲು, ಮೊಸರಿನ ದರ 3 ರೂ. ಏರಿಕೆ

    ನಂದಿನಿ ಹಾಲು, ಮೊಸರಿನ ದರ 3 ರೂ. ಏರಿಕೆ

    ಬೆಂಗಳೂರು: ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ ನಂದಿನಿ(Nandini) ಹಾಲು ಮತ್ತು ಮೊಸರಿನ(Milk and Curd) ದರ 3 ರೂ. ಏರಿಕೆಯಾಗಲಿದೆ

    ಸದ್ಯ ರೈತರಿಂದ ಪ್ರತಿ ಲೀಟರ್ ಹಾಲನ್ನು ಕೆಎಂಎಫ್‌(KMF) ಸರಾಸರಿ 29 ರೂ.ಗೆ ಖರೀದಿ ಮಾಡುತ್ತಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ‌ ಪ್ರತಿ ಲೀಟರ್ ಗೆ 5 ರೂ ಸಹಾಯಧನ ಕೂಡ ರೈತರಿಗೆ ನೀಡಲಾಗುತ್ತಿದೆ. ಈಗ ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡುವ ಪ್ಲಾನ್ ಮಾಡಲಾಗಿದೆ. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!


    ಬೆಲೆ ಏರಿಕೆಗೆ ಕಾರಣ?
    ಹವಾಮಾನ ವೈಪರೀತ್ಯ ಕಾರಣದಿಂದ ಮೇವು ಸಿಗುತ್ತಿಲ್ಲ. ಮೇವಿನ ಬೆಲೆ ಭಾರೀ ಏರಿಕೆಯಾಗಿದೆ. ಇದರ ಜೊತೆ ಹಸುವಿಗೆ ಚರ್ಮ ಗಂಟು ರೋಗ ಬಾಧಿಸುತ್ತಿದೆ. ಅಷ್ಟೇ ಅಲ್ಲದೇ ಸಾಗಾಣಿಕೆ , ವಿದ್ಯುತ್ , ಪ್ಯಾಕಿಂಗ್ ಇತ್ಯಾದಿ ವೆಚ್ಚ ಶೇ.25 – 35 ರಷ್ಟು ಹೆಚ್ಚಾಳವಾಗಿದೆ. ಈ ಕಾರಣಕ್ಕೆ ಹಾಲು ಮತ್ತು ಮೊಸರಿನ ಬೆಲೆಯನ್ನು ಏರಿಕೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶಿವನಿಗೆ ಇಷ್ಟವಾದ ‘ರಾಗಿ ಅಂಬಲಿ’ ಮಾಡಿ ಸವಿಯಿರಿ

    ಶಿವನಿಗೆ ಇಷ್ಟವಾದ ‘ರಾಗಿ ಅಂಬಲಿ’ ಮಾಡಿ ಸವಿಯಿರಿ

    ರಾಗಿ ಅಂಬಲಿ ದೇಹಕ್ಕೆ ತಂಪು ಮತ್ತು ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೇ ಅಂಬಲಿ ಸಖತ್ ಟೇಸ್ಟಿಯಾಗಿದ್ದು, ಎಲ್ಲರಿಗೂ ಇಷ್ಟವಾಗುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ದಿನನಿತ್ಯ ಕಾಫಿ, ಟೀ ಬದಲು ‘ರಾಗಿ ಅಂಬಲಿ’ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಆರೋಗ್ಯಕರ ಮತ್ತು ಟೇಸ್ಟಿ ಇರುವ ರಾಗಿ ಅಂಬಲಿ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ.

    ಬೇಕಾಗಿರುವ ಪದಾರ್ಥಗಳು:
    * ನೀರು – 2 ದೊಡ್ಡ ಲೋಟ
    * ಹಸಿಶುಂಠಿ – 1 ಇಂಚು
    * ಹಸಿ ಮೆಣಸಿನಕಾಯಿ – 1
    * ಉಪ್ಪು – ಅರ್ಧ ಚಮಚ


    * ರಾಗಿ ಹಿಟ್ಟು – ಎರಡೂವರೆ ಕಪ್
    * ನೀರು – ಅರ್ಧ ಕಪ್
    * ಮಜ್ಜಿಗೆ – ಮುಕ್ಕಾಲು ಲೋಟ
    * ಕಟ್‌ ಮಾಡಿದ ಕೊತ್ತಂಬರಿ ಸೊಪ್ಪು – 1/2 ಕಪ್‌
    * ಕಟ್‌ ಮಾಡಿದ ಈರುಳ್ಳಿ – 1 ಕಪ್‌

    ಮಾಡುವ ವಿಧಾನ:
    * ಮೊದಲು ಒಂದು ಪಾತ್ರೆಯಲ್ಲಿ 2 ದೊಡ್ಡ ಲೋಟ ನೀರನ್ನು ಕುದಿಯಲು ಇಡಿ. ಒಂದು ಕುಟ್ಟಾಣಿಯಲ್ಲಿ 1 ಇಂಚು ಹಸಿಶುಂಠಿ ಮತ್ತು 1 ಹಸಿ ಮೆಣಸಿನಕಾಯಿ ಹಾಕಿ ಕುಟ್ಟಿ.
    * ಒಂದು ಬಟ್ಟಲಿಗೆ ಎರಡೂವರೆ ಕಪ್ ರಾಗಿ ಹಿಟ್ಟು ಹಾಕಿ ಅದಕ್ಕೆ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಕಲಕಿ.
    * ಕುದಿಯುತ್ತಿರುವ ನೀರಿಗೆ, ಕುಟ್ಟಿರುವ ಹಸಿ ಶುಂಠಿ ಮತ್ತು ಹಸಿ ಮೆಣಸಿನಕಾಯಿ ಹಾಕಿ. ನಂತರ ಇದಕ್ಕೆ ಅರ್ಧ ಚಮಚ ಉಪ್ಪು ಮತ್ತು ಕಲಸಿದ ರಾಗಿ ಹಿಟ್ಟನ್ನು ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ.


    * ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಿ.
    * ನಂತರ ಅದಕ್ಕೆ ಮುಕ್ಕಾಲು ಲೋಟ ಮಜ್ಜಿಗೆ ಹಾಕಿ ಕಲಕಿ.
    * ಒಂದು ಲೋಟಕ್ಕೆ ಅಂಬಲಿ ಹಾಕಿ ಅದಕ್ಕೆ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ.
    * ಈ ರೀತಿಯಾಗಿ ರಾಗಿ ಅಂಬಲಿಯನ್ನು ಮಾಡಿ ಮನೆಯವರಿಗೆ ನೀಡಿ.

  • ಬಾಯಿಯಲ್ಲಿ ನೀರು ಬರಿಸುವ ‘ಚಾಕೊಲೇಟ್ ಲಸ್ಸಿ’ ಮಾಡಿ

    ಬಾಯಿಯಲ್ಲಿ ನೀರು ಬರಿಸುವ ‘ಚಾಕೊಲೇಟ್ ಲಸ್ಸಿ’ ಮಾಡಿ

    ಚಾಕೊಲೇಟ್‍ನಲ್ಲಿ ಮಾಡುವ ಯಾವುದೇ ರೀತಿಯ ತಿಂಡಿ ಮತ್ತು ಪಾನೀಯಾಗಳನ್ನು ಎಲ್ಲ ವಯಸ್ಸಿನವರು ಚಪ್ಪರಿಸಿಕೊಂಡು ಸವಿಯುತ್ತಾರೆ. ಅದರಲ್ಲಿ ಲಸ್ಸಿ ಎಂದರೂ ಎಲ್ಲರಿಗೂ ಇಷ್ಟ. ಚಾಕೊಲೇಟ್ ಮತ್ತು ಲಸ್ಸಿ ಎಂದು ಮಿಕ್ಸ್ ಮಾಡಿ ಒಂದು ರೆಸಿಪಿ ಮಾಡಿದ್ರೆ ಹೇಗಿರುತ್ತೆ ಯೋಚಿಸಿ. ಈ ರೆಸಿಪಿಯನ್ನು ಸರಳವಾಗಿ ನಿಮ್ಮ ಮನೆಯಲ್ಲಿ ಟ್ರೈ ಮಾಡಿ.

    ಬೇಕಾಗಿರುವ ಸಾಮಾಗ್ರಿಗಳು:
    * ಮೊಸರು – 4 ಕಪ್
    * ಚಾಕೊಲೇಟ್ – 10
    * ಸಕ್ಕರೆ – 3/4 ಕಪ್
    * ಚಾಕೊಲೇಟ್ ಸಿರಪ್ – 4 ಟೇಬಲ್‍ಸ್ಪೂನ್
    * ಡಾರ್ಕ್ ಚಾಕೊಲೇಟ್ ಬಿಸ್ಕತ್ತುಗಳನ್ನು ಅಲಂಕರಿಸಲು ಪುಡಿಮಾಡಿಕೊಳ್ಳಿ.

    ಮಾಡುವ ವಿಧಾನ:
    * ಮಿಕ್ಸರ್ ಜಾರ್‌ನಲ್ಲಿ ಮೊಸರನ್ನು ಹಾಕಿ. ಅದಕ್ಕೆ ಚಾಕೊಲೇಟ್, ಸಕ್ಕರೆ ಸೇರಿಸಿ ರುಬ್ಬಿಕೊಳ್ಳಿ.
    * ಇಂದು ಖಾಲಿ ಗ್ಲಾಸ್‍ಗೆ 1 ಟೀಸ್ಪೂನ್ ಡಾರ್ಕ್ ಚಾಕೊಲೇಟ್ ಸಿರಪ್ ಅನ್ನು ಹರಡಿ. ನಂತರ ಅದಕ್ಕೆ ರುಬ್ಬಿದ ಚಾಕೊಲೇಟ್ ಮಿಶ್ರಣವನ್ನು ಹಾಕಿ. ಇದನ್ನೂ ಓದಿ:‘ಟೊಮೆಟೊ ತಿಳಿಸಾರು’ ಮಾಡುವ ಸಿಂಪಲ್ ವಿಧಾನ

    * ನಂತರ ಚಾಕೊಲೇಟ್ ಲಸ್ಸಿ ಮೇಲೆ ಪುಡಿಮಾಡಿದ ಡಾರ್ಕ್ ಚಾಕೊಲೇಟ್ ಬಿಸ್ಕತ್ತುಗಳು ಮತ್ತು ಕೆಲವು ಪುಡಿಮಾಡಿದ ಚಾಕೊಲೇಟ್‍ಗಳನ್ನು ಅಲಂಕರಿಸಿ. ತಣ್ಣಗಾದ ನಂತರ ಬಡಿಸಿ. ಇದನ್ನೂ ಓದಿ: ಆರೋಗ್ಯಕರವಾದ ‘ಗೋಧಿ ನುಚ್ಚಿನಿಂದ ಪಡ್ಡು’ ಮಾಡಿ ಸವಿಯಿರಿ

  • ರುಚಿಯಾದ ‘ಮ್ಯಾಂಗೋ ಲಸ್ಸಿ’ ಟ್ರೈ ಮಾಡಿ

    ರುಚಿಯಾದ ‘ಮ್ಯಾಂಗೋ ಲಸ್ಸಿ’ ಟ್ರೈ ಮಾಡಿ

    ದು ಹಣ್ಣುಗಳ ರಾಜ ಮಾವಿನಹಣ್ಣಿನ ಕಾಲ. ಕಿರಿಯರಿಂದ ಹಿರಿಯರವರೆಗೂ ಮಾವು ಕಂಡರೆ ಎಲ್ಲರಿಗೂ ಇಷ್ಟ. ಮಾವಿನಿಂದ ಮಾಡುವ ಎಲ್ಲ ತಿಂಡಿ, ಜ್ಯೂಸ್‍ಗಳು ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ. ಅದಕ್ಕೆ ಇಂದು ಸಿಂಪಲ್ ಮತ್ತು ರುಚಿಯಾದ ‘ಮ್ಯಾಂಗೋ ಲಸ್ಸಿ’ ಮಾಡುವ ವಿಧಾನ ಇಲ್ಲಿದೆ.

    ಬೇಕಾಗಿರುವ ಪದಾರ್ಥಗಳು:
    * ಮ್ಯಾಂಗೋ – 4
    * ಮೊಸರು – 2 ಕಪ್
    * ಸಕ್ಕರೆ – 5 ಟೀಸ್ಪೂನ್


    * ಏಲಕ್ಕಿ ಪುಡಿ – 1/4 ಟೀಸ್ಪೂನ್
    * ಪುದೀನ ಎಲೆಗಳು – 3-4

    ಮಾಡುವ ವಿಧಾನ:
    * ಮೊದಲು ಮಾವಿನ ಹಣ್ಣಗಳ ಸಿಪ್ಪೆ ಸುಲಿದು ತಿರುಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ.
    * ತಿರುಳು ಮತ್ತು ಮೊಸರನ್ನು ಮಿಕ್ಸಿಗೆ ಹಾಕಿ. ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ. ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ ಚೆನ್ನಾಗಿ ಗ್ರೈಡ್ ಮಾಡಿ. ಮೂರು ಅಥವಾ ನಾಲ್ಕು ಬಾರಿ ಗ್ರೈಡ್ ಮಾಡಿ.
    * ನಂತರ ಮಿಕ್ಸಿಯಿಂದ ಲಸ್ಸಿ ತೆಗೆದು ಅದನ್ನು ಸರ್ವಿಂಗ್ ಬೌಲ್‍ಗೆ ಮ್ಯಾಂಗೋ ಲಸ್ಸಿ ಹಾಕಿ ಅದಕ್ಕೆ ಒಂದೆರೆಡು ಐಸ್‍ಕ್ಯೂಬ್ ಹಾಕಿ. ಪುದೀನ ಎಲೆಗಳಿಂದ ಅಲಂಕರಿಸಿ.