Tag: ಮೊಯ್ದೀನ್ ಬಾವಾ

  • ಮಂಗ್ಳೂರಲ್ಲಿ ದೈವಸ್ಥಾನಕ್ಕೆ ಹೋಗಿ ನಿಂದನೆಗೊಳಗಾದ ಶಾಸಕ ಮೊಯ್ದೀನ್ ಬಾವಾ

    ಮಂಗ್ಳೂರಲ್ಲಿ ದೈವಸ್ಥಾನಕ್ಕೆ ಹೋಗಿ ನಿಂದನೆಗೊಳಗಾದ ಶಾಸಕ ಮೊಯ್ದೀನ್ ಬಾವಾ

    ಮಂಗಳೂರು: ವಿಧಾನಸಭಾ ಚುನಾವಣೆ ಘೋಷಣೆ ಮಧ್ಯೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ದೈವಸ್ಥಾನಕ್ಕೆ ಭೇಟಿ ನೀಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

    ಇತ್ತೀಚೆಗೆ ಸುರತ್ಕಲ್ ಬಳಿಯ ಹೊಸಬೆಟ್ಟು ಎಂಬಲ್ಲಿರುವ ಕೋರ್ದಬ್ಬು ದೈವಸ್ಥಾನಕ್ಕೆ ಮೊಯ್ದೀನ್ ಬಾವಾ ಭೇಟಿ ನೀಡಿದ್ದರು. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ದೈವಸ್ಥಾನದವರ ಆಮಂತ್ರಣದ ಮೇರೆಗೆ ಶಾಸಕರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಚುನಾವಣೆ ಸಂದರ್ಭದಲ್ಲಿ ಶಾಸಕ ಮೊಯ್ದೀನ್ ಬಾವ, ಹಿಂದೂಗಳ ಮತ ಸೆಳೆಯಲು ದೈವಸ್ಥಾನಕ್ಕೆ ಭೇಟಿ ನೀಡಿದ್ದಾಗಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ. ಆದರೆ ವಿಡಿಯೋದಲ್ಲಿ ಮೊಯ್ದೀನ್ ಬಾವಾ ಎಂದಿನಂತೆ ದೇವಸ್ಥಾನಕ್ಕೆ ತೆರಳಿ ಹಿಂದಿರುಗಿದ್ದಾರೆ.

    ಓಲೈಕೆಯ ರಾಜಕಾರಣವೇ ಆಗಿದ್ದರೂ, ಮೂಲಭೂತವಾದಿ ಮುಸ್ಲಿಮರು ಮಾತ್ರ ಈ ವಿಡಿಯೋವನ್ನು ವೈರಲ್ ಮಾಡಿದ್ದಲ್ಲದೆ, ಶಾಸಕರ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ಹಿಂದೂ ಮತಗಳನ್ನು ಪಡೆಯಲು ಶಾಸಕ ಬಾವಾ ಈ ರೀತಿಯ ನಾಟಕವಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿದೆ. ಆದರೆ ಶಾಸಕ ಬಾವಾ ಮಾತ್ರ, ಪ್ರತೀವರ್ಷದಂತೆ ಈ ಬಾರಿಯೂ ಭೇಟಿ ನೀಡಿದ್ದೇನೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯವಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

  • ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳ

    ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಸರತ್ಕಲ್ ನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ದೀಪಕ್ ರಾವ್ ಮನೆಗೆ ಇಂದು ದ.ಕ ಜಿಲ್ಲೆಯ ಸುರತ್ಕಲ್ ಶಾಸಕ ಮೊಯ್ದೀನ್ ಬಾವಾ ಭೇಟಿ ನೀಟಿದ್ರು.

    ಬಾವಾ ಅವರು ದೀಪಕ್ ಮನೆಗೆ ಭೇಟಿ ನೀಡುತ್ತಿದ್ದಂತೆಯೇ ಮೃತನ ಕುಟುಂಬಸ್ಥರು, ನಿನ್ನೆ, ಮೊನ್ನೆ ಎಲ್ಲಿದ್ರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ದೀಪಕ್ ಅವರ ತಾಯಿ ಪ್ರೇಮಾ ರಾವ್, ಮಗನನ್ನು ಕೊಂದವರಿಗೆ ಹೀಗೆಯೇ ಶಿಕ್ಷೆಯಾಗಬೇಕು. ಅವರಿಗೆ ಯಾರೂ ರಕ್ಷಣೆ ಕೊಡಬಾರದು ಅಂತ ಒತ್ತಾಯಿಸಿ ಶಾಸಕರ ಎದುರು ಕಣ್ಣೀರು ಹಾಕಿದ್ರು. ಈ ವೇಳೆ ದೀಪಕ್ ತಾಯಿಗೆ ಸಾಂತ್ವಾನ ಹೇಳಿದ ಬಾವಾ, ಭಗವಂತನಲ್ಲಿ ನಿಮ್ಮ ಕುಟಂಬಕ್ಕೆ ಪ್ರಾರ್ಥನೆ ಮಾಡುತ್ತೇನೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ನಾನು ಮಸೀದಿಯಲ್ಲಿ ನಮಾಜ್ ಸಂದರ್ಭ ಬೇಡುತ್ತೇನೆ. ದೀಪಕ್ ಕೊಲೆಯ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಅಂದ್ರು.

    ಚೆಕ್ ನಿರಾಕರಣೆ: ಸಾಂತ್ವಾನ ಹೇಳಿದ ಬಳಿಕ ಬಾವಾ ಅವರು ದೀಪಕ್ ತಾಯಿಗೆ ಒತ್ತಾಯಪೂರ್ವಕವಾಗಿ ಚೆಕ್ ನೀಡಲು ಮುಂದಾದ್ರು. ಈ ವೇಳೆ ಪ್ರೇಮಾ ಅವರು ಚೆಕ್ ಬೇಡವೇ ಬೇಡ ಎಂದು ದೂರ ತಳ್ಳಿದ್ರು.

    ಈ ಸಂದರ್ಭದಲ್ಲಿ ನೆರೆದಿದ್ದ ದೀಪಕ್ ಕುಟುಂಬಸ್ಥರು ಹಾಗೂ ಸ್ಥಳೀಯರು ಶಾಸಕ ಅವರಿಗೆ ಬೈಗುಳದ ಸುರಿಮಳೆಗೈದ್ರು. ಅಲ್ಲದೇ ನಂತ್ರ ಮನೆಯಿಂದ ಹೊರ ಕಳುಹಿಸಿದ್ರು. ಶಾಸಕರ ಜೊತೆ ದಕ್ಷಿಣ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕೂಡ ಆಗಮಿಸಿದ್ದರು.

    https://www.youtube.com/watch?v=TmFE1kqWa2w