Tag: ಮೊಮ್ಮಟ್ಟಿ

  • ಕನ್ನಡದಲ್ಲೂ ಬಂತು ಮಮ್ಮೂಟ್ಟಿ ಅಭಿನಯದ ‘ಶೈಲಾಕ್’ ಸಿನಿಮಾ

    ಕನ್ನಡದಲ್ಲೂ ಬಂತು ಮಮ್ಮೂಟ್ಟಿ ಅಭಿನಯದ ‘ಶೈಲಾಕ್’ ಸಿನಿಮಾ

    ಲಯಾಳಂನ ಸೂಪರ್​ಸ್ಟಾರ್​ ಮಮ್ಮೂಟ್ಟಿ ಅಭಿನಯದ ‘ಶೈಲಾಕ್​’ (Shylock) ಚಿತ್ರವು ಇತ್ತೀಚೆಗಷ್ಟೇ ಕೇರಳದಲ್ಲಿ ಬಿಡುಗಡೆಯಾಗಿ ಜಯಭೇರಿ ಬಾರಿಸಿದೆ. ಈಗ ಈ ಚಿತ್ರವು ಕನ್ನಡಕ್ಕೆ ಡಬ್​ ಆಗಿರುವುದಷ್ಟೇ ಅಲ್ಲ, ಆ ಕನ್ನಡ ಅವತರಣಿಕೆಯು ಅಮೇಜಾನ್​ ಪ್ರೈಮ್​ನಲ್ಲಿ ಲಭ್ಯವಿದೆ.

    ಗುಡ್​ವಿಲ್​ ಎಂಟರ್​ಟೈನ್​ಮೆಂಟ್ಸ್​ನಡಿ ಜೋಬಿ ಜಾರ್ಜ್​ ನಿರ್ಮಿಸಿ, ಅಜಯ್​ ವಾಸುದೇವ್ (Vijay Vasudev) ನಿರ್ದೇಶಿಸಿರುವ  ‘ಶೈಲಾಕ್​’ ಚಿತ್ರವು ಕೇರಳದಲ್ಲಿ 80 ಕೋಟಿ ರೂ.ಗಳಳೀಗೂ ಹೆಚ್ಚು ಗಳಿಕೆ ಮಾಡಿ ಬ್ಲಾಕ್​ಬಸ್ಟರ್​ ಎಂದನಿಸಿಕೊಂಡಿತ್ತು. ಈ ಚಿತ್ರವು ತೆಲುಗು ಮತ್ತು ತಮಿಳಿಗೆ ಡಬ್​ ಆಗಿ ಆಹಾ ಓಟಿಟಿಯಲ್ಲಿ ಸ್ಟ್ರೀಮ್​ ಆಗುತ್ತಿದೆ. ಇದೀಗ ಚಿತ್ರವು ಕನ್ನಡಕ್ಕೆ ಡಬ್​ ಆಗಿದ್ದು, ಅಮೇಜಾನ್​ ಪ್ರೈಮ್​ನಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್

    ಇದೊಂದು ಆಕ್ಷನ್​ ಥ್ರಿಲ್ಲರ್​ ಚಿತ್ರವಾಗಿದ್ದು, ಮಮ್ಮೂಟ್ಟಿ (Mommatti) ಅವರು ಬಾಸ್ ಎಂಬ ಫೈನಾನ್ಶಿಯರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಜಾನರ್​ಗಳಿಗೆ ಸಲ್ಲುವ ಚಿತ್ರ ಇದ್ದಾಗಿದ್ದು, ಮೊದಲು ಕಾಮಿಡಿಯಿಂದ ಪ್ರಾರಂಭವಾಗಿ, ಥ್ರಿಲ್ಲರ್​ ಆಗಿ ಮುಂದುವರೆದು, ಸೇಡಿನ ಕಥೆಯಾಗಿ ಮುಗಿಯುತ್ತದೆ. ಪಕ್ಕಾ ಮಾಸ್​ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರ ಬಿಡುಗಡೆಯಾದ ಕಡೆಯೆಲ್ಲ ಮೆಚ್ಚುಗೆಗೆ ಪಾತ್ರವಾಗಿದೆ. ‘ಶೈಲಾಕ್​’ ಚಿತ್ರದಲ್ಲಿ ಮಮ್ಮೂಟ್ಟಿ ಜತೆಗೆ ರಾಜ್​ಕಿರಣ್ (Raj Kiran)​, ಮೀನಾ, ಸಿದ್ದೀಖ್​, ಬಿಬಿನ್​ ಜಾರ್ಜ್​, ಬೈಜು ಸಂತೋಷ್​, ಕಲಾಭವನ್​ ಶಾಜೋನ್​ ಮುಂತಾದವರು ನಟಿಸಿದ್ದು, ಗೋಪಿಸುಂದರ್​ ಸಂಗೀತ ಸಂಯೋಜಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ‘ಸೆಪ್ಟೆಂಬರ್ 13′ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಸ್ಟಾರ್ ನಟ ಮಮ್ಮುಟ್ಟಿ

    ಕನ್ನಡದ ‘ಸೆಪ್ಟೆಂಬರ್ 13′ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಸ್ಟಾರ್ ನಟ ಮಮ್ಮುಟ್ಟಿ

    ಕೊರೋನಾ ಸಂದಿಗ್ದ ಪರಿಸ್ಥಿತಿಯಲ್ಲಿ ದಾದಿಯರ ಸೇವೆ, ತ್ಯಾಗವನ್ನು ಬಿಂಬಿಸುವ ಸೆಪ್ಟೆಂಬರ್ 13 ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಶೀಘ್ರದಲ್ಲಿಯೇ ತೆರೆಗೆ ಬರಲಿರುವ ಈ ಚಿತ್ರದ ಹೊಸ ಪೋಸ್ಟರ್ ನ್ನು ಮಾಲಿವುಡ್ ಚಿತ್ರರಂಗದ ಖ್ಯಾತ ನಟ ಮಮ್ಮುಟ್ಟಿ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ರುಬಿ ಫಿಲ್ಮಂಸ್ ನಡಿ ಮಾಜಿ ಶಾಸಕ ಇವಾನ್ ನಿಗ್ಲಿ ಕಥೆ ಬರೆದು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೆಸರಾಂತ ನಿರ್ಮಾಪಕ ಡಾ.ರಾಜ ಬಾಲಕೃಷ್ಣನ್ ಈ ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಂಕಲನ, ಛಾಯಾಗ್ರಾಹಣ ಜವಾಬ್ದಾರಿಯನ್ನೂ ನಿಭಾಯಿಸಿ ಸಿನಿಮಾದಲ್ಲಿ ಖಳನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ‘ಸೆಪ್ಟಂಬರ್ 13′ ಸಿನಿಮಾದಲ್ಲಿ ಹಿರಿಯ ಕಲಾವಿದರಾದ ವಿನಯ ಪ್ರಸಾದ್, ಜೈ ಜಗದೀಶ್, ಯಮುನಾ ಶ್ರೀನಿಧಿ ನಟಿಸಿದ್ದು, ಶ್ರೀಯಾರಿಧಿಬನ್ ನಾಯಕಿಯಾಗಿ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಪಾದಾರ್ಪಣೆ ಮಾಡಿದ್ದಾರೆ. ಉಳಿದಂತೆ ಒಂದಷ್ಟು ಯುವ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಶೀರ್ಘದಲ್ಲಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ.

    Live Tv
    [brid partner=56869869 player=32851 video=960834 autoplay=true]