Tag: ಮೈಸೂರು ದಸರಾ 2018

  • ರಾಜಮಾತೆಗೆ ಮಾತೃವಿಯೋಗ- ಇದು ಯಾವುದರ ಸಂಕೇತ…? ಶ್ರೀ ರೇಣುಕಾರಾಧ್ಯ ಗುರೂಜಿ ಸ್ಪಷ್ಟನೆ

    ರಾಜಮಾತೆಗೆ ಮಾತೃವಿಯೋಗ- ಇದು ಯಾವುದರ ಸಂಕೇತ…? ಶ್ರೀ ರೇಣುಕಾರಾಧ್ಯ ಗುರೂಜಿ ಸ್ಪಷ್ಟನೆ

    ಬೆಂಗಳೂರು: ಇಂದು ನಾಡಿನಾದ್ಯಂತ ವಿಜಯ ದಶಮಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಆದ್ರೆ ಇಂದೇ ರಾಜಮಾತೆ ಪ್ರಮೋದಾದೇವಿ ಅವರ ತಾಯಿ 98 ವರ್ಷದ ಪುಟ್ಟ ಚಿನ್ನಮ್ಮಣ್ಣಿ ವಿಧಿವಶರಾಗಿದ್ದಾರೆ. ಜಂಬೂ ಸವಾರಿ ದಿನವೇ ರಾಜಮಾತೆಯ ತಾಯಿಯವರು ವಿಧಿವಶವಾಗಿದ್ದರಿಂದ ಅಪಶಕುನನಾ? ಅರಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣ ಆಗುತ್ತಾ..? ಜಂಬೂ ಸವಾರಿ ನಡೆಯುತ್ತಾ? ಎಂಬಿತ್ಯಾದಿ ಪ್ರಶ್ನೆಗಳು ನಾಡಿನ ಜನರಲ್ಲಿ ಹುಟ್ಟಿಕೊಂಡಿವೆ.

    ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಖ್ಯಾತ ಜ್ಯೋತಿಷಿ ರೇಣುಕಾರಾಧ್ಯ ಗುರೂಜಿ, ಪುಟ್ಟ ಚಿನ್ನಮ್ಮಣ್ಣಿ ನಿಧನದಿಂದ ಅರಮನೆಯಲ್ಲಿ ಸೂತಕವಾದ ವಾತಾವರಣ ನಿರ್ಮಾಣ ಆಗಲ್ಲ. ಪ್ರಮೋದಾದೇವಿಯವರ ತವರು ಮನೆ ಆಗಿದ್ದರಿಂದ ಅರಮನೆಗೆ ಸೂತಕ ಎಂಬ ಮಾತು ಬರಲ್ಲ. ಮೃತ ದೇಹದ ದರ್ಶನ ಪಡೆಯುವ ಮೊದಲು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ ಆಗಬಹುದು. ಆದ್ರೆ ದರ್ಶನ ಪಡೆದ ನಂತರ 5 ಅಥವಾ 11 ಅಥವಾ 13 ದಿನ ಜನರು ದೇವತಾ ದರ್ಶನ ಮತ್ತು ದೇವತಾ ಕಾರ್ಯ ಮಾಡಬಾರದು ಎಂಬುದು ನಮ್ಮ ಸಂಸ್ಕಾರಗಳಲ್ಲಿದೆ. ಜಂಬೂ ಸವಾರಿಯ ನಂತರ ದರ್ಶನ ಪಡೆತಯುತ್ತಾರಾ..? ಅಥವಾ ಧಾರ್ಮಿಕ ವಿಧಿ ವಿಧಾನಗಳಿಂದ ದೂರು ಉಳಿಯುತ್ತಾರಾ? ಎಂಬುದನ್ನು ಪ್ರಮೋದಾ ದೇವಿ ಅವರು ನಿರ್ಧರಿಸಬೇಕಿದೆ.

     

    ಪುಟ್ಟಚಿನ್ನಮ್ಮಣಿ ವಯೋಸಹಜ, ಪ್ರಕೃತ್ತಿದತ್ತವಾಗಿ ವಿಧಿವಶವಾಗಿದ್ದರಿಂದ ಅರಮನೆಗೆ ಸೂತಕದ ಛಾಯೆ ಬರೋದಿಲ್ಲ. ನಾಡ ಹಬ್ಬ ದಸರಾ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಾಡಿಗೆ ಕೆಡುಕು, ಒಳ್ಳೆಯದಾಗಲ್ಲ, ಅಪಶುಕನ ಎಂಬಿತ್ಯಾದಿ ಸುಳ್ಳು. ನಾಡಿನ ಜನರು ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ. ವಿಜಯದಶಮಿ ದಿನದಂದು ದೈವಾಧೀನರಾದ್ರೆ, ಆತ್ಮ ನೇರವಾಗಿ ಭಗವಂತನ ಪಾದಕ್ಕೆ ಸೇರುವ ಮೂಲಕ ಮೋಕ್ಷ ಸಿಗುತ್ತೆ ಎಂಬ ಧರ್ಮದಲ್ಲಿ ನಂಬಿಕೆ ಇದೆ. ಅರಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆದ್ರೆ, ಒಂದು ಕಡೆ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳು ನಡೆಯಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದರ್ಗಾದಲ್ಲಿ ಗಜಪಡೆಗೆ ವಿಶೇಷ ಪೂಜೆ- 460 ಕೆ.ಜಿ ತೂಕ ಹೆಚ್ಚಿಸಿಕೊಂಡ ಅರ್ಜುನ

    ದರ್ಗಾದಲ್ಲಿ ಗಜಪಡೆಗೆ ವಿಶೇಷ ಪೂಜೆ- 460 ಕೆ.ಜಿ ತೂಕ ಹೆಚ್ಚಿಸಿಕೊಂಡ ಅರ್ಜುನ

    ಮೈಸೂರು: 2018 ನೇ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂಸವಾರಿಯ ಹಿಂದಿನ ದಿನವಾದ ಗುರುವಾರ ರಾತ್ರಿ ದರ್ಗಾದಲ್ಲಿ ಗಜಪಡೆಗೆ ಪೂಜೆ ನಡೆಯಿತು. ಇದನ್ನೂ ಓದಿ: ರಾಜಬೀದಿಯಲ್ಲಿ ತಾಲೀಮು ಆರಂಭ: ದಸರಾ ಆನೆಗಳ ತೂಕ 1 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಕೆವಿ ರಸ್ತೆಯಲ್ಲಿರುವ ಹಿಮಾಂಶ ವಾಲಿ ದರ್ಗಾದಲ್ಲಿ ಅರ್ಜುನ ಸೇರಿದಂತೆ 12 ಆನೆಗಳು ಪೂಜೆಯಲ್ಲಿ ಭಾಗಿಯಾಗಿದ್ದವು. ದುಷ್ಟ ಶಕ್ತಿಯ ನಿವಾರಣೆಗಾಗಿ ಪೂಜೆ ಮಾಡಲಾಗಿದ್ದು, ಜಂಬೂಸವಾರಿಗೆ ಸಜ್ಜಾದ ಗಜಪಡೆಗಳಿಗೆ ಧರ್ಮ ಗುರು ನಕೀಬ್ ಅವರು ಆಶೀರ್ವಾದ ಮಾಡಿದ್ರು. ಅಲ್ಲದೇ ದಸರಾ ಗಜಪಡೆಗೆ ಎರಡನೇ ಬಾರಿ ತೂಕ ಪರೀಕ್ಷೆ ಮಾಡಲಾಯ್ತು. ಇದನ್ನೂ ಓದಿ: ಸೌಹಾರ್ದದ ಮೈಸೂರು ಜಂಬೂಸವಾರಿ – ಆನೆಗೆ ಅಂಬಾರಿ ಕಟ್ತಾರೆ ಮುಸ್ಲಿಮರು!

    45 ದಿನಗಳಲ್ಲಿ ಹೊಸ ಆನೆ ಧನಂಜಯ ಬರೋಬ್ಬರಿ 530 ಕೆಜಿ ತೂಕ ಏರಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಧನಂಜಯ ಆನೆ ದಸರಾದಲ್ಲಿ ಭಾಗಿಯಾಗಲಿದ್ದಾನೆ. ಇನ್ನು ತೂಕ ಹೆಚ್ಚಿಸಿಕೊಂಡ ಆನೆಗಳ ಪೈಕಿ 2ನೇ ಸ್ಥಾನದಲ್ಲಿ 480 ಕೆಜಿ ತೂಕ ಹೆಚ್ಚಿಸಿಕೊಂಡಿರುವ ಬಲರಾಮ ಆನೆ ಇದ್ದು, ಕೇವಲ 460 ಕೆಜಿ ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್ ಅರ್ಜುನ ಆನೆ ಮೂರನೇ ಸ್ಥಾನದಲ್ಲಿದೆ.ಇದನ್ನೂ ಓದಿ: ಚಿನ್ನದ ಅಂಬಾರಿ ಮೈಸೂರಿಗೆ ಬಂದಿದ್ದು ಹೇಗೆ? `ಮೈಸೂರು ದಸರಾ’ವಾಗಿ ವಿಶ್ವವಿಖ್ಯಾತಿ ಪಡೆದ ಕಥೆ ಓದಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಇದನ್ನೂ ಓದಿ: ಗಜಪಡೆಯ ತಾಲೀಮು ಹಾದಿಯಲ್ಲಿ ಮ್ಯಾಗ್ನೆಟಿಕ್ ರೋಲರ್ ಬಳಕೆ- ಯಾಕೆ?

  • ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    ನ್ನೇನು ಗೊಂಬೆಗಳ ಹಬ್ಬ ಬಂದೇ ಬಿಡ್ತು. ಗೊಂಬೆ ಕೂರಿಸುವವರು ಈಗಾಗಲೇ ಎಲ್ಲಾ ಪ್ರೀಪರೇಷನ್ ಮಾಡಿಕೊಳ್ಳುತ್ತಿದ್ದಾರೆ. ನಾವು ಈ ಸಲ ಲಾಸ್ಟ್ ಟೈಂಗಿಂತ ಚೆನ್ನಾಗಿ ಹಬ್ಬ ಮಾಡಬೇಕು. ಆ ರೀತಿ ಗೊಂಬೆ ತರಬೇಕು, ಈ ರೀತಿ ಗೊಂಬೆ ಡೆಕೊರೇಷನ್ ಮಾಡಬೇಕು. ಎಲ್ಲರೂ ಮಾಡುವಂತೆ ನಾವು ಹಬ್ಬ ಮಾಡಿದ್ರೆ ಮಜಾ ಇರಲ್ಲ ಅನ್ನೋರು ಇರ್ತಾರೆ. ಅವರಿಗೆಲ್ಲಾ ಸೇರಿ ನೆಚ್ಚಿನ ಗೊಂಬೆಗಳನ್ನು ಹೇಗೆ ಕೂರಿಸಿದ್ರೆ ಚೆಂದ. ಹೇಗೆ ಅಲಂಕರಿಸಿದ್ರೆ ಅಂದ ಅನ್ನೋದನ್ನ ನೋಡೋಣ..

    ಈ ಹಿಂದೆ ಗೊಂಬೆಗಳ ಹಬ್ಬ ಅಂದರೆ ಮನೆಯಲ್ಲಿ ಎಲ್ಲಿಲ್ಲದ ಸಡಗರ, ಸಂಭ್ರಮ ಮನೆ ಮಾಡಿರುತ್ತಿತ್ತು.. ಮನೆಯ ಅಟ್ಟದಲ್ಲಿ ಜೋಡಿಸಿಟ್ಟಿದ್ದ ಮಣ್ಣಿನ ಗೊಂಬೆಗಳನ್ನು ಕೆಳಗಿಳಿಸಿ, ಶುದ್ಧಗೊಳಿಸುವುದಕ್ಕೆ ವಾರವಾದರೂ ಬೇಕಾಗಿತ್ತು. ಸದ್ಯದ ಪೀಳಿಗೆಯವರಿಗೆ ಎಲ್ಲಿದೆ? ಇಷ್ಟೊಂದು ಟೈಮ್. ಕೆಲವರು ಹಬ್ಬದ ದಿನ ಹಬ್ಬದೂಟ ಮಾಡಿ ತಿಂದರೆ ಸಾಕು ಅಂತಿರುತ್ತಾರೆ. ಇನ್ನೂ ಕೆಲವರು ಯಾರಾದ್ರೂ ಫ್ರೆಂಡ್ಸ್, ಸಂಬಂಧಿಕರು ಕರೆದರೆ ಸಾಕಾಪ್ಪ ಅಂತಿರುತ್ತಾರೆ. ಹೀಗಿರುವಾಗ ಗೊಂಬೆ ಕೂರಿಸಲು ಸಾಕಷ್ಟು ಸಮಯ ವ್ಯಯಿಸಲು ಆಗುವುದಿಲ್ಲ. ಗೊಂಬೆ ಜೋಡಿಸುವುದು, ಕೂರಿಸುವುದು ಒಂದು ಕಲೆ. ಅದು ಎಲ್ಲರಿಗೂ ಒಲಿದಿರುವುದಿಲ್ಲ. ಹಾಗಾಗಿ ಈ ಒಂದು ಸಿಂಪಲ್ ಟಿಪ್ಸ್ ಗಳನ್ನು ಒಮ್ಮೆ ಕಣ್ಣಾಡಿಸಿ. ಗೊಂಬೆ ಕೂರಿಸಿ ನೋಡಿ.

    * ನಿಮ್ಮ ಮನೆಯಲ್ಲಿ ಮೊದಲಿನಿಂದಲೂ ಗೊಂಬೆ ಕೂರಿಸುವ ರೂಡಿ ಇದ್ದರೆ ಚೆಂದ.
    * ಎತ್ತಿಟ್ಟಿದ್ದ ಮಣ್ಣಿನ ಗೊಂಬೆಗಳನ್ನೆಲ್ಲ ಒಣಗಿದ ಕಾಟನ್ ಬಟ್ಟೆಯಲ್ಲಿ ಒರೆಸಿ ಇಡಿ.
    * ಗೊಂಬೆ ಕೂರಿಸುವ ಮೊದಲು ಯಾವ ಥೀಮ್‍ನಲ್ಲಿ ಕೂರಿಸಬೇಕೆಂದು ಪ್ಲಾನ್ ಮಾಡಿ.
    (ಪೌರಾಣಿಕ, ಐತಿಹಾಸಿಕ, ಸಣ್ಣ ಕಥೆಯಾಧಾರಿತ, ನೀತಿ ಕಥೆ, ಜೀವನಶೈಲಿ, ಆಧುನಿಕ ವಿಷಯಗಳು. ಹೀಗೆ ಯಾವುದು ಇಷ್ಟವೋ ಅದನ್ನ ಸೆಲೆಕ್ಟ್ ಮಾಡಿ)

    ಸೀತೆ ಸ್ವಯಂವರ, ಸೀತೆ ವನವಾಸ, ಶ್ರೀನಿವಾಸ ಕಲ್ಯಾಣ, ಕೃಷ್ಣನ ಆಟ-ತುಂಟಾಟ, ಗಣೇಶನಿಗೆ ಆನೆ ಮುಖ ಬಂದಿದ್ದು, ಕ್ರಿಸ್ತನ ಹುಟ್ಟು ಈ ಪೌರಾಣಿಕ ರೀತಿಯಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ. ಇತಿಹಾಸದ ಒಲವು ಹೊಂದಿರುವವರು ವಿಜಯನಗರ ಆಡಳಿತ, ಮೈಸೂರು ಒಡೆಯರ್ ಆಡಳಿತ, ವಂಶಾವೃಕ್ಷ, ಕದಂಬ ಸಾಮ್ರಾಜ್ಯ ಎಂಬುದರ ಬಗ್ಗೆಯೂ ಚಿಂತಿಸುತ್ತಾರೆ. ಜೀವನದಲ್ಲಿ ಅಳವಡಿಸಿಕೊಳ್ಳುವ ನೀತಿ ಪಾಠ, ಐತಿಹಾಸಿಕ ಪುರುಷರ ಜೀವನಗಾಥೆ, ಪ್ರೇರಣೆ ನೀಡಬಲ್ಲಂತಹ ಗಣ್ಣರ ಜೀವನ ಶೈಲಿ ತೋರಿಸುವ ರೀತಿಯಲ್ಲಿ ಗೊಂಬೆಗಳನ್ನು ಅಲಂಕರಿಸಬಹುದು. ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ? ಯಾವುದು ನಿಮಗೆ ಹೆಚ್ಚು ತಿಳಿದಿದೆಯೋ ಅಂತಹ ಥೀಮ್ ಸೆಲೆಕ್ಟ್ ಮಾಡಿಕೊಳ್ಳಬೇಕು.

    * ಅವರು ಹೇಳಿದ್ರು ಅಂತಾಗಲಿ.. ಅವರು ಮಾಡಿದ್ದಾರೆ ನಾವು ಮಾಡಬೇಕು ಎಂದು ಗೊತ್ತಿಲ್ಲದ, ಮಾಹಿತಿ ಇಲ್ಲದೇ ಗೊಂಬೆ ಕೂರಿಸಿ ಆಭಾಸಕ್ಕೊಳಗಾಗಬೇಡಿ.
    * ಗೊಂಬೆ ಕೂರಿಸಲು ಸ್ಥಳದ ಆಯ್ಕೆ ಸೂಕ್ತವಾಗಿರಲಿ. ಗೊಂಬೆಯನ್ನು ಒಮ್ಮೆ ಕೂರಿಸಿದರೆ 9 ದಿನಗಳ ಕಾಲ ಅದೇ ಸ್ಥಳದಲ್ಲಿರುತ್ತದೆ. ಹೀಗಾಗಿ ಗೊಂಬೆಯನ್ನು ಮೆಟ್ಟಿಲುಗಳ ರೀತಿಯೂ ಕೂರಿಸಬಹುದು. ಇಲ್ಲವಾದಲ್ಲಿ ಒಂದು ವಿಶಾಲವಾದ ಸ್ಥಳದಲ್ಲಿ ಕೂರಿಸಬಹುದು.

    * ಗೊಂಬೆಗಳಿಗೆ ಹೆಚ್ಚಿನ ಹೂವಿನ ಅಲಂಕಾರ ಬೇಡ. 9 ದಿನಗಳವರೆಗೆ ಹೂವು ತಾಜಾವಾಗಿರುವುದಿಲ್ಲ. ಕ್ಲೀನ್ ಮಾಡುವಾಗ ಗೊಂಬೆಗಳು ಡ್ಯಾಮೇಜ್ ಆದ್ರೆ ಕಷ್ಟ.
    * ಹೆಚ್ಚಿನ ಸೀರಿಯಲ್ ಸೆಟ್ ಲೈಟ್‍ಗಳು, ಕಣ್ಣಿಗೆ ರಾಚುವಂತಹ ಲೈಟ್ ಬಳಸಬೇಡಿ.
    * ಸಣ್ಣದಾಗಿದ್ರೂ ಸಿಂಪಲ್ ಆಗಿದ್ರೆ ಗೊಂಬೆಗಳನ್ನು ನೋಡಲು ಚೆಂದ.
    * ಎಷ್ಟೊಂದು ಗೊಂಬೆಗಳಿದೆ ಎಂದು ಎಲ್ಲಾವನ್ನು ತುಂಬಬೇಡಿ. ಅಗತ್ಯಕ್ಕನುಗುಣವಾಗಿ ಜೋಡಿಸಿ.
    * ಚಿಕ್ಕದಾಗಿದ್ರೂ ಚೊಕ್ಕವಾಗಿದ್ರೆ ಎಲ್ಲರನ್ನೂ ಆಕರ್ಷಿಸಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ