Tag: ಮೈದಾನ

  • ಗೇಟ್‌ ಬಿದ್ದು ಬಾಲಕ ಸಾವು – ವಾರ್ಡ್‌ ಸಹಾಯಕ ಎಂಜಿನಿಯರ್‌ ಅಮಾನತು

    ಗೇಟ್‌ ಬಿದ್ದು ಬಾಲಕ ಸಾವು – ವಾರ್ಡ್‌ ಸಹಾಯಕ ಎಂಜಿನಿಯರ್‌ ಅಮಾನತು

    ಬೆಂಗಳೂರು: ಗೇಟ್ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತಾತ್ರೇಯ ವಾರ್ಡ್‌ನ (Dattatreya Ward) ಸಹಾಯಕ ಎಂಜಿನಿಯರ್‌ ಟಿ .ಶ್ರೀನಿವಾಸ ರಾಜು ಅವರನ್ನು ಅಮಾನತುಗೊಳಿಸಲಾಗಿದೆ.

    ಪಾಲಿಕೆ ಉಪಯುಕ್ತ ಅಡಳಿತ ವಿಭಾಗ ತಕ್ಷಣವೇ ಜಾರಿಗೆ ಬರುವಂತೆ ಅದೇಶ ಹೊರಡಿಸಿದೆ. ಕರ್ತವ್ಯ ನಿರ್ಲಕ್ಷ್ಯ, ಗೇಟ್ ಸಾಮರ್ಥ್ಯಕ್ಕೆ ತಕ್ಕಂತೆ ಕೀಲುಗಳನ್ನು ಅಳವಡಿಸಿಲ್ಲ, ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡದ್ದಕ್ಕೆ ಬಿಬಿಎಂಪಿ (BBMP) ಅಡಳಿತ ವಿಭಾಗದ ಉಪ ಅಯುಕ್ತರು ಅಮಾನತು ಮಾಡಿ ಅದೇಶ ಪ್ರಕಟಿಸಿದ್ದಾರೆ.

    ಘಟನೆ ಬಗ್ಗೆ ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್ ಅವರಿಗೆ ನೋಟಿಸ್‌ ನೀಡಲಾಗಿದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ತುಪ್ಪ ಪೂರೈಸುತ್ತಿದ್ದ ಎಆರ್ ಡೈರಿಗೆ ನೋಟಿಸ್

    ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾದ ಘಟನೆ ಮಲ್ಲೇಶ್ವರಂ ಬಿಬಿಎಂಪಿ ಗ್ರೌಂಡ್‌ನಲ್ಲಿ ಭಾನುವಾರ ನಡೆದಿತ್ತು. ಘಟನೆಯಲ್ಲಿ ನಿರಂಜನ್ (10) ಮೃತಪಟ್ಟಿದ್ದ. ಆಟ ಆಡಲು ನಿರಂಜನ್‌ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ (Gate) ಬಳಿಯೇ ನಿಂತಿದ್ದ. ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿತ್ತು. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಮೃತಪಟ್ಟಿದ್ದ.

     

  • ಅಜಯ್ ದೇವಗನ್ ನಟಿಸಿರುವ ‘ಮೈದಾನ’ ಚಿತ್ರಕ್ಕೆ ತಡೆಯಾಜ್ಞೆ ತಂದ ಮೈಸೂರಿನ ಅನಿಲ್ ಕುಮಾರ್

    ಅಜಯ್ ದೇವಗನ್ ನಟಿಸಿರುವ ‘ಮೈದಾನ’ ಚಿತ್ರಕ್ಕೆ ತಡೆಯಾಜ್ಞೆ ತಂದ ಮೈಸೂರಿನ ಅನಿಲ್ ಕುಮಾರ್

    ಜಯ್ ದೇವಗನ್ (Ajay Devgan) ನಟಿಸಿರುವ ಮೈದಾನ (Maidan) ಸಿನಿಮಾ ಏಪ್ರಿಲ್ 11 ರಂದು ದೇಶಾದ್ಯಂತ ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈಗಾಗಲೇ ದೇಶದ ನಾನಾ ರಾಜ್ಯಗಳಲ್ಲಿ ಅಜಯ್ ದೇವಗನ್ ಅಭಿಮಾನಿಗಳು ಚಿತ್ರ ನೋಡಲು ಕಾತರದಿಂದ ಕಾಯುತ್ತಿದ್ದರು. ಇದೀಗ ಚಿತ್ರಕ್ಕೆ ತಡೆಯಾಜ್ಞೆ ತರಲಾಗಿದೆ. ಮೈಸೂರಿನ (Mysore) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಡೆಯಾಜ್ಞೆಯ (Injunction) ಆದೇಶ ನೀಡಿದ್ದಾರೆ.

    ಅಮಿತ್ ಶರ್ಮಾ ನಿರ್ದೇಶನದ ಈ ಚಿತ್ರವನ್ನು ಬೋನಿ ಕಪೂರ್ ಮತ್ತು ಜೀ ಸ್ಟುಡಿಯೋ ಜಂಟಿಯಾಗಿ ನಿರ್ಮಾಣ ಮಾಡಿದೆ. ಚಿತ್ರಕ್ಕಾಗಿ ಸೈವಾನ್ ಖದ್ರಾಸ್, ಆಕಾಶ್ ಜಾವ್ಲಾ ಮತ್ತು ಅರುಣವಾ ಜಾಯ್ ಸೇನ್ ಗುಪ್ತಾ ಕಥೆ ಬರೆದಿದ್ದಾರೆ. ಆದರೆ, ಆ ಕಥೆ ತಮ್ಮದು ಎಂದು  ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ (Anil Kumar) ಎಂಬುವರು ಕೋರ್ಟ್ ಮೆಟ್ಟಿಲು ಏರಿದ್ದರು. ಅವರು ನೀಡಿರುವ ದೂರಿನ ಆಧಾರದ ಮೇಲೆ ಚಿತ್ರ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ  ಆದೇಶ ನೀಡಿದ ಮೈಸೂರಿನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ.

    ತಮ್ಮ ಚಿತ್ರದ ಮೂಲ ಕಥೆಯನ್ನು ಚಿತ್ರತಂಡ ಕದಿದ್ದೆ. 2019 ರ ಫೆಬ್ರವರಿಯಲ್ಲಿ ಸ್ಕ್ರೀನ್ ರೈಟ್ ಅಸೋಸಿಯೇಷನ್ ನಲ್ಲಿ ಚಿತ್ರದ ಹೆಸರನ್ನು ರಿಜಿಸ್ಟರ್ ಮಾಡಿಸಿದ್ದೇನೆ. 2018ರಲ್ಲಿ ಚಿತ್ರ ಕಥೆಯನ್ನ ಲಿಂಕ್ ಡಿನ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಕಥೆಯನ್ನ ಗಮನಿಸಿದ  ಸುಕ್ ದಾಸ್ ಸೂರ್ಯವಂಶಿ ನನ್ನ ಜೊತೆ ಮಾತು ಕತೆ ನಡೆಸಿದರು. 1950 ರಲ್ಲಿ ಫೀಫಾ ವಿಶ್ವಕಪ್ ಟೂರ್ನಮೆಂಟ್ ನಿಂದ ಭಾರತ ತಂಡವನ್ನ ಹೊರಹಾಕಲಾಗಿತ್ತು. ಈ ಬಗ್ಗೆ ಚಿತ್ರ ಕಥೆಯನ್ನ ಸಿದ್ದಪಡಿಸಿದೆ. ಶಾರುಕ್ ಖಾನ್, ಸಲ್ಮಾನ್ ಖಾನ್, ಅಮಿರ್ ಖಾನ್, ಅಜಯ ದೇವಗನ್, ಅಕ್ಷರ್ ಕುಮಾರ್ ಎಲ್ಲರನ್ನ ಸೇರಿಸಿ ಚಿತ್ರ ಮಾಡಲು ನಾನೇ ಐಡಿಯಾ ಕೊಟ್ಟಿದ್ದೆ. ಪಾದ ಖಂಡುಕ ಎಂದು ಹೆಸರಿಟ್ಟಿದೆ. Players with out shoe ಎಂದು ಇಂಗ್ಲೀಷ್ ನಲ್ಲಿ ಕರೆಯುತ್ತಾರೆ. ನನ್ನ ಮೂಲ ಕಥೆಯನ್ನು ಕದ್ದು ಮೈದಾನ ಎಂದು ಹೆಸರಿಟ್ಟಿದ್ದಾರೆ. ನನಗೆ ಮೈಸೂರು ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ ಎನ್ನುತ್ತಾರೆ ರೈಟರ್ ಅನಿಲ್ ಕುಮಾರ್.

    ಮೈದಾನ ಚಿತ್ರಕ್ಕೆ ಮಧ್ಯಂತರ ತಡೆಯಾಜ್ಞೆ ಸಿಕ್ಕಿದೆ. ಈ ವಿಷಯ ಸಿನಿಮಾ ತಂಡದ ಗಮನಕ್ಕೆ ತಲುಪು, ಈ ಸಿನಿಮಾ ಅಂದುಕೊಂಡ ದಿನಾಂಕದಂದು ಬಿಡುಗಡೆ ಆಗತ್ತಾ? ಅಥವಾ ಬೇರೆ ಏನಾದರೂ ಉಪಾಯ ನಡೆಯತ್ತಾ ಕಾದು ನೋಡಬೇಕು.

  • ಅಜಯ್ ದೇವಗನ್ ಹುಟ್ಟುಹಬ್ಬಕ್ಕೆ ‘ಮೈದಾನ್’ ಗಿಫ್ಟ್

    ಅಜಯ್ ದೇವಗನ್ ಹುಟ್ಟುಹಬ್ಬಕ್ಕೆ ‘ಮೈದಾನ್’ ಗಿಫ್ಟ್

    ಜಯ್ ದೇವಗನ್ (Ajay Devgan) ನಟನೆಯ  ಮೈದಾನ್ ಸಿನಿಮಾದ ಟ್ರೈಲರ್ ಅನ್ನು ಅವರ ಹುಟ್ಟು ಹಬ್ಬದ (Birthday) ದಿನದಂದ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ಗೆ ದಿ ಫೈನಲ್ ಟ್ರೈಲರ್ ಎಂದು ಕರೆದಿದ್ದಾರೆ. ಮೈದಾನ ಸಿನಿಮಾದ ಟ್ರೈಲರ್ ಅನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡು ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

    ಈ ನಡುವೆ ಮೈದಾನ್ ಸಿನಿಮಾ ಮತ್ತೊಂದು ಭಾರೀ ಬಜೆಟ್ ಚಿತ್ರದೊಂದಿಗೆ ಪೈಪೋಟಿ ನೀಡಬೇಕಾಗಿದೆ. ಈ ಬಾರಿ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಮತ್ತೆ ಮುಖಾಮುಖಿ ಆಗುತ್ತಿದ್ದಾರೆ. ಏಪ್ರಿಲ್ 10ರಂದು ಅಕ್ಷಯ್ ಕುಮಾರ್ ನಟನೆಯ ಬಡೆ ಮಿಯಾ ಚೋಟೆ ಮಿಯಾ ಹಾಗೂ ಅಜಯ್ ದೇವಗನ್ ಅವರ ಮೈದಾನ (Maidan) ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಹೀಗೆ ಈ ಕಲಾವಿದರ ಚಿತ್ರಗಳು ಒಂದೇ ದಿನಾಂಕದಂದು ರಿಲೀಸ್ ಆಗುತ್ತಿರುವುದು 9ನೇ ಬಾರಿ ಎನ್ನುವುದು ವಿಶೇಷ.

    ಮೊನ್ನೆಯಷ್ಟೇ ಅಕ್ಷಯ್ ಕುಮಾರ್ (Akshay Kumar) ಹಾಗೂ ಟೈಗರ್ ಶ್ರಾಫ್ (Tiger Shroff) ನಟನೆಯ ಬಡೆ ಮಿಯಾ ಚೋಟೆ ಮಿಯಾ (bade miyan chote miyan)  ಸಿನಿಮಾದ ಟ್ರೈಲರ್ (Trailer) ರಿಲೀಸ್ ಆಗಿದೆ. ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಮೊದಲ ನೋಟ ಅನಾವರಣಗೊಂಡಿದೆ. 3 ನಿಮಿಷ 3 ಸೆಕೆಂಡ್ ಇರುವ ಪವರ್ ಪ್ಯಾಕ್ಡ್ ಟ್ರೈಲರ್ ನಲ್ಲಿ ಅಕ್ಷಯ್ ಹಾಗೂ ಟೈಗರ್ ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿದ್ದಾರೆ.

     

    ಬಡೆ ಮಿಯಾ ಚೋಟೆ ಮಿಯಾ ಟ್ರೈಲರ್ ನಲ್ಲಿ ಮೈ ಜುಮ್ ಎನಿಸುವ ಹೈ ಆಕ್ಷನ್ ಸೀಕ್ವೆನ್ಸ್ ಹೈಲೆಟ್ ಆಗಿವೆ. ದೇಶಭಕ್ತಿ ಉಕ್ಕಿಸುವ ಈ ಝಲಕ್ ನಲ್ಲಿ ಕಿಲಾಡಿ ಟೈಗರ್ ಜುಗಲ್ ಬಂಧಿ ನೋಡುಗರಿಗೆ ಸಖತ್ ಕಿಕ್ ಕೊಡಲಿದೆ. ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದು, ಆದ್ರೆ ಟ್ರೇಲರ್ ನಲ್ಲಿ ಅವರ ಮುಖವನ್ನೇ ರಿವೀಲ್ ಮಾಡದೇ ಚಿತ್ರತಂಡ ಸೀಕ್ರೆಟ್ ಕಾಯ್ದುಗೊಂಡಿದೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

  • ಬಾಕ್ಸ್ ಆಫೀಸ್ ಸ್ಟಾರ್ ವಾರ್ : 9ನೇ ಬಾರಿ ಈ ಸ್ಟಾರ್ ನಟರು ಮುಖಾಮುಖಿ

    ಬಾಕ್ಸ್ ಆಫೀಸ್ ಸ್ಟಾರ್ ವಾರ್ : 9ನೇ ಬಾರಿ ಈ ಸ್ಟಾರ್ ನಟರು ಮುಖಾಮುಖಿ

    ಬಾಲಿವುಡ್ ನಲ್ಲಿ ಸ್ಟಾರ್ ವಾರ್ ಹೊಸದೇನೂ ಅಲ್ಲ. ಆದರೂ, ಹೊಂದಾಣಿಕೆಯ ಮೇಲೆ ಸಿನಿಮಾಗಳನ್ನು ರಿಲೀಸ್ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಈ ಬಾರಿ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಮತ್ತೆ ಮುಖಾಮುಖಿ ಆಗುತ್ತಿದ್ದಾರೆ. ಏಪ್ರಿಲ್ 10ರಂದು ಅಕ್ಷಯ್ ಕುಮಾರ್ ನಟನೆಯ ಬಡೆ ಮಿಯಾ ಚೋಟೆ ಮಿಯಾ ಹಾಗೂ ಅಜಯ್ ದೇವಗನ್ ಅವರ ಮೈದಾನ (Maidan) ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಹೀಗೆ ಈ ಕಲಾವಿದರ ಚಿತ್ರಗಳು ಒಂದೇ ದಿನಾಂಕದಂದು ರಿಲೀಸ್ ಆಗುತ್ತಿರುವುದು 9ನೇ ಬಾರಿ ಎನ್ನುವುದು ವಿಶೇಷ.

    ಮೊನ್ನೆಯಷ್ಟೇ ಅಕ್ಷಯ್ ಕುಮಾರ್ (Akshay Kumar) ಹಾಗೂ ಟೈಗರ್ ಶ್ರಾಫ್ (Tiger Shroff) ನಟನೆಯ ಬಡೆ ಮಿಯಾ ಚೋಟೆ ಮಿಯಾ (bade miyan chote miyan)  ಸಿನಿಮಾದ ಟ್ರೈಲರ್ (Trailer) ರಿಲೀಸ್ ಆಗಿದೆ. ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಮೊದಲ ನೋಟ ಅನಾವರಣಗೊಂಡಿದೆ. 3 ನಿಮಿಷ 3 ಸೆಕೆಂಡ್ ಇರುವ ಪವರ್ ಪ್ಯಾಕ್ಡ್ ಟ್ರೈಲರ್ ನಲ್ಲಿ ಅಕ್ಷಯ್ ಹಾಗೂ ಟೈಗರ್ ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿದ್ದಾರೆ.

    ಬಡೆ ಮಿಯಾ ಚೋಟೆ ಮಿಯಾ ಟ್ರೈಲರ್ ನಲ್ಲಿ ಮೈ ಜುಮ್ ಎನಿಸುವ ಹೈ ಆಕ್ಷನ್ ಸೀಕ್ವೆನ್ಸ್ ಹೈಲೆಟ್ ಆಗಿವೆ. ದೇಶಭಕ್ತಿ ಉಕ್ಕಿಸುವ ಈ ಝಲಕ್ ನಲ್ಲಿ ಕಿಲಾಡಿ ಟೈಗರ್ ಜುಗಲ್ ಬಂಧಿ ನೋಡುಗರಿಗೆ ಸಖತ್ ಕಿಕ್ ಕೊಡಲಿದೆ. ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದು, ಆದ್ರೆ ಟ್ರೇಲರ್ ನಲ್ಲಿ ಅವರ ಮುಖವನ್ನೇ ರಿವೀಲ್ ಮಾಡದೇ ಚಿತ್ರತಂಡ ಸೀಕ್ರೆಟ್ ಕಾಯ್ದುಗೊಂಡಿದೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಲಿವುಡ್ ರೇಂಜ್ಗೆ ಬಿಗ್ ಬಜೆಟ್ನಲ್ಲಿ ‘ಬಡೇ ಮಿಯಾನ್ ಚೋಟೆ ಮಿಯಾನ್’ ಅನ್ನು ನಿರ್ಮಿಸಲಾಗಿದೆ. ಟೈಗರ್ ಜಿಂದಾ ಹೈ, ಸುಲ್ತಾನ್ ಸಿನಿಮಾಗಳನ್ನು ನಿರ್ದೇಶಿಸಿರುವ ಅಲಿ ಅಬ್ಬಾಸ್ ಜಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

     

    ವಶು ಭಗ್ನಾನಿ, ದೀಪಿಕ್ಷಾ ದೇಶ್ಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ವಶು ಭಗ್ನಾನಿ ಮತ್ತು ಪೂಜಾ ಎಂಟರ್ಟೈನ್ಮೆಂಟ್ ಎಎಝೆಡ್ ಫಿಲ್ಮ್ಸ್ ಸಹಯೋಗದಡಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. 2024ರ ಏಪ್ರಿಲ್ – ಈದ್ ಸಂದರ್ಭ ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

  • ನಾನು ಕಬಡ್ಡಿಯಾಡಿದ್ದನ್ನು ರಾವಣರು ವೀಡಿಯೋ ಮಾಡಿದ್ದಾರೆ: ಪ್ರಜ್ಞಾ ಠಾಕೂರ್

    ನಾನು ಕಬಡ್ಡಿಯಾಡಿದ್ದನ್ನು ರಾವಣರು ವೀಡಿಯೋ ಮಾಡಿದ್ದಾರೆ: ಪ್ರಜ್ಞಾ ಠಾಕೂರ್

    ಭೋಪಾಲ್: ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಮೈದಾನದಲ್ಲಿ ಕಬಡ್ಡಿ ಆಡುತ್ತಿರುವ ವೀಡಿಯೊವೊಂದು ವೈರಲ್ ಆಗಿತ್ತು. ಈ ವೀಡಿಯೋ ಮೂಲಕವಾಗಿ ಇದೀಗ ಪ್ರಜ್ಞಾ ಸಿಂಗ್ ಠಾಕೂರ್ ಸುದ್ದಿಯಾಗುತ್ತಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಬಡ್ಡಿ ಆಡಿರುವ ವೀಡಿಯೋ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದವರು ರಾವಣರು. ದುರ್ಗಾ ಪೂಜೆಯ ವೇಳೆ ಆರತಿ ಬೆಳಗಲು ಹೋಗಿದ್ದೆ. ಮೈದಾನದಲ್ಲಿ ಆಟವಾಡುತ್ತಿದ್ದ ಕೆಲವು ಕ್ರೀಡಾಪಟುಗಳು ನನಗೆ ಕಬಡ್ಡಿ ಆಡುವಂತೆ ಕೇಳಿಕೊಂಡರು. ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಸಿಂಧಿಗಳಲ್ಲಿ ಯಾರೋ ರಾವಣನ ವ್ಯಕ್ತಿತ್ವದವರು ಇದ್ದಾರೆ. ಅವರು ನನ್ನನ್ನು ದೊಡ್ಡ ಶತ್ರುವಿನಂತೆ ನೋಡುತ್ತಿದ್ದಾರೆ. ದೇಶಭಕ್ತರು, ಕ್ರಾಂತಿಕಾರಿಗಳು, ನನ್ನ ರೀತಿಯ ಸಂತರೊಡನೆ ಸಂಘರ್ಷಕ್ಕಿಳಿದರೆ ನಿಮ್ಮ ವೃದ್ಧಾಪ್ಯ ಮತ್ತು ಮುಂದಿನ ಜನ್ಮವೂ ಹಾಳಾಗಿ ಹೋಗುತ್ತದೆ ಎಂದು ಪ್ರಜ್ಞಾ ಸಿಂಗ್ ಠಾಕೂರ್ ಕಿಡಿ ಕಾರಿದ್ದಾರೆ. ಇದನ್ನೂ ಓದಿ:  ಗೋಮೂತ್ರದಿಂದ ನನ್ನ ಸ್ತನಕ್ಯಾನ್ಸರ್ ವಾಸಿಯಾಯ್ತು- ಸಾಧ್ವಿ ಪ್ರಜ್ಞಾಸಿಂಗ್

    ಪ್ರಜ್ಞಾ ಸಿಂಗ್  ಮಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಆದರೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡಲಾಗಿತ್ತು. ಸಾಕಷ್ಟು ಸಮಯದಿಂದ ವ್ಹೀಲ್ ಚೇರ್ ಮೇಲೆ ಕುಳಿತೇ ಸಂಚರಿಸುತ್ತಿದ್ದರು. ಆದರೆ ಮೈದಾನದಲ್ಲಿ ಅವರು ಕಬಡ್ಡಿ ಆಡುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ. ಠಾಕೂರ್ ಕಬಡ್ಡಿ ಆಡುತ್ತಿರುವ ವೀಡಿಯೋ ನೋಡಿದವರು ಆಶ್ಚರ್ಯ ಹೊರಹಾಕಿದ್ದಾರೆ. ಜೈಲು ವಾಸದಿಂದ ತಪ್ಪಿಸಿಕೊಳ್ಳಲು ಅವರು ಅನಾರೋಗ್ಯದ ಕಾರಣವೊಡ್ಡಿದ್ದಾರೆ. ವೈದ್ಯಕೀಯ ಕಾರಣ ನೀಡಿ ಜಾಮೀನು ಪಡೆದಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಕಬಡ್ಡಿ ಆಡುವಷ್ಟು ದೈಹಿಕವಾಗಿ ಫಿಟ್ ಇದ್ದಾರೆ ಎಂದ ಮೇಲೆ ಜಾಮೀನು ಪಡೆದಿದ್ದೇಕೆ? ಎಂದು ನೆಟ್ಟಿಗರು ಟೀಕಿಸಿದ್ದಾರೆ. ಇದನ್ನೂ ಓದಿ:   EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

  • ಟೀಂ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್ ಬಳಿ ವಿಮಾನ ಪತನ

    ಟೀಂ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್ ಬಳಿ ವಿಮಾನ ಪತನ

    – ಮೈದಾನದಿಂದ ಒಳಗೆ ಓಡಿದ ಕ್ರಿಕೆಟ್, ಫುಟ್‍ಬಾಲ್ ಆಟಗಾರರು

    ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಆಟಗಾರು ತಂಗಿರುವ ಹೋಟಿಲಿನಿಂದ 30 ಕಿಲೋ ಮೀಟರ್ ದೂರದಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿದೆ.

    ಸದ್ಯ ಭಾರತ ಕ್ರಿಕೆಟ್ ತಂಡ ಮೂರು ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲು ಆಸ್ಟ್ರೇಲಿಯಾಗೆ ಹೋಗಿದೆ. ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಸದ್ಯ ಅಭ್ಯಾಸ ಮಾಡುತ್ತಿದ್ದಾರೆ. ಇಂಡಿಯಾ ಆಟಗಾರರು ತಂಗಿರುವ ಸಿಡ್ನಿ ಒಲಿಂಪಿಕ್ ಪಾರ್ಕಿನಿಂದ 30 ಕಿಲೋ ಮೀಟರ್ ದೂರದ ಮೈದಾನವೊಂದರಲ್ಲಿ ವಿಮಾನ ಪತನವಾಗಿದೆ.

    ಕ್ರೋಮರ್ ಪಾರ್ಕ್ ಮೈದಾನದಲ್ಲಿ ಲಘು ವಿಮಾನವೊಂದು ನೆಲಕ್ಕಪ್ಪಳಿಸಿದ್ದು, ಆ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದ ಸ್ಥಳೀಯ ಕ್ರಿಕೆಟ್ ಆಟಗಾರರು ಮತ್ತು ಫುಟ್‍ಬಾಲ್ ಪ್ಲೇಯರ್ಸ್ ವಿಮಾನ ಬಿದ್ದ ರಭಸಕ್ಕೆ ಹೆದರಿ ಮೈದಾನದಿಂದ ಓಡಿ ಹೋಗಿದ್ದಾರೆ. ಲಘು ವಿಮಾನವಾದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಮಾನದಲ್ಲಿ ಇದ್ದ ಇಬ್ಬರು ತರಬೇತಿ ಪೈಲೆಟ್‍ಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.

    ವಿಮಾನ ಪತನವಾದಾಗ ಸ್ಥಳದಲ್ಲಿ ಫುಟ್‍ಬಾಲ್ ಮ್ಯಾಚ್ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ವಿಮಾನ ಬೀಳುವುದನ್ನು ಗಮನಿಸಿದ ಆಟಗಾರರು ಒಳಗೆ ಓಡಿ ಹೋಗಿದ್ದಾರೆ. ಈ ಕಾರಣದಿಂದ ಯಾವುದೇ ಸಾವು ಸಂಭವಿಸಿಲ್ಲ. ಅಪಘಾತವಾದ ವಿಮಾನ ಟ್ರೈನಿಂಗ್ ಸ್ಕೂಲ್‍ಗೆ ಸೇರಿದ್ದಾಗಿದ್ದು, ವಿದ್ಯಾರ್ಥಿಗಳಿಗೆ ಟ್ರೈನಿಂಗ್ ನೀಡುವಾಗ ವಿಮಾನ ಎಂಜಿನ್ ಕೈಕೊಟ್ಟು ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

    ಭಾರತ-ಆಸ್ಟ್ರೇಲಿಯಾ ಸರಣಿಯು ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ.

  • ಮಳೆ ನೀರಿನಲ್ಲಿ ಮುಳುಗಿ ಮೂವರ ಬಾಲಕರು ಸಾವು

    ಮಳೆ ನೀರಿನಲ್ಲಿ ಮುಳುಗಿ ಮೂವರ ಬಾಲಕರು ಸಾವು

    ಹಾವೇರಿ: ಶಾಲಾ ಕೊಠಡಿ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಯಲ್ಲಿ ಬಿದ್ದು ಮೂವರು ಬಾಲಕರ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಎರಡನೇ ನಂಬರ್ ಶಾಲೆಯಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಾಲಾ ಕೊಠಡಿ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಗಳು ತುಂಬಿದ್ದವು. ಈ ಗುಂಡಿಗೆ ಬಿದ್ದು ಬಾಲಕರಾದ ಅಜ್ಮಲ್ (8) ಅಕ್ಮಲ್ (9) ಮತ್ತು ಜಾಫರ್ (12) ಮೃತಪಟ್ಟಿದ್ದಾರೆ.

    ಈ ಮೂವರ ಮಕ್ಕಳು ಶಾಲೆಯ ಮೈದಾನದಲ್ಲಿ ಆಡಲು ಹೋಗಿದ್ದಾರೆ. ಮಳೆಗೆ ಗುಂಡಿ ತುಂಬಿದ್ದ ಕಾರಣ ಮಕ್ಕಳ ಕಾಣಿಸಿಲ್ಲ. ಆಡುತ್ತಲೇ ಮಕ್ಕಳು 10 ಅಡಿ ಆಳದ ಗುಂಡಿಗೆ ಬಿದ್ದಿದ್ದಾರೆ. ಮಕ್ಕಳ ಬಿದ್ದ ಸಮಯದಲ್ಲಿ ಯಾರೂ ಸ್ಥಳದಲ್ಲಿ ಇಲ್ಲದ ಕಾರಣ ಮಕ್ಕಳನ್ನು ಬದುಕಿಸಲು ಆಗಿಲ್ಲ. ಹೀಗಾಗಿ ಮೂವರು ಬಾಲಕರು ಮೃತಪಟ್ಟಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.

    ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಭಿಮಾನಿಗಳಂತೆ ಮೈದಾನದಲ್ಲಿ ಕಣ್ಣೀರಿಟ್ಟ ಸ್ಟಾರ್ ಕ್ರಿಕೆಟ್ ಆಟಗಾರರು

    ಅಭಿಮಾನಿಗಳಂತೆ ಮೈದಾನದಲ್ಲಿ ಕಣ್ಣೀರಿಟ್ಟ ಸ್ಟಾರ್ ಕ್ರಿಕೆಟ್ ಆಟಗಾರರು

    ನವದೆಹಲಿ: ಕ್ರಿಕೆಟ್ ಆಟವನ್ನು ಕೆಲ ಅಭಿಮಾನಿಗಳು ಜೀವನದ ಒಂದು ಭಾಗದಂತೆ ನೋಡುತ್ತಾರೆ. ನೆಚ್ಚಿನ ತಂಡ ಸೋತರೇ ಕಣ್ಣೀರು ಹಾಕುತ್ತಾರೆ. ಗೆಲ್ಲಲಿ ಎಂದು ದೇವರ ಮೊರೆ ಹೋಗುತ್ತಾರೆ. ಅಂತೆಯೇ ಸ್ಟಾರ್ ಕ್ರಿಕೆಟಿಗರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿರುವ ಪ್ರಸಂಗಗಳು ನಡೆದಿವೆ.

    ಕ್ರಿಕೆಟ್ ಆಟದಲ್ಲಿ ಒಂದು ಪಂದ್ಯ ಎಂದರೆ ಸೋಲು ಗೆಲವು ಕಾಮನ್ ಇದನ್ನೂ ಆಟಗಾರರೂ ಕ್ರೀಡಾಮನೋಭಾವದಿಂದ ನೋಡಿ ಸುಮ್ಮನಗುತ್ತಾರೆ. ಆದರೆ ಕೆಲ ಆಟಗಾರರು ಪಂದ್ಯಗಳನ್ನು ಸೋತಾಗ ಮೈದಾನದಲ್ಲೇ ಕಣ್ಣೀರು ಹಾಕಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್, ಸಚಿನ್, ಯುವರಾಜ್ ಸಿಂಗ್ ಹೀಗೆ ಕ್ರಿಕೆಟ್ ದಿಗ್ಗಜರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿದ್ದಾರೆ.

    ಇದರಲ್ಲಿ ನಮಗೆ ಮೊದಲಿಗೆ ನೆನಪಿಗೆ ಬರುವುದು ಯುವರಾಜ್ ಸಿಂಗ್ ಅವರು, 2011ರಲ್ಲಿ 28 ವರ್ಷದ ಬಳಿಕ ಭಾರತ ವಿಶ್ವಕಪ್ ಗೆದ್ದು ಬೀಗಿತ್ತು. ಈ ಟೂರ್ನಿಯಲ್ಲಿ ಕ್ಯಾನ್ಸರ್ ಇದ್ದರೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯುವಿ ಭಾರತ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೊನೆಗೆ ಫೈನಲ್‍ನಲ್ಲಿ ಭಾರತ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದಾಗ ಮೈದಾನದಲ್ಲಿ ಇದ್ದ ಯುವರಾಜ್ ಕಣ್ಣೀರು ಹಾಕಿದ್ದರು.

    ಇದಾದ ನಂತರ 2015ರ ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿಡಿ ವಿಲಿಯರ್ಸ್ ಕೂಡ ಕಣ್ಣೀರು ಹಾಕಿದ್ದರು. 2015ರ ವಿಶ್ವಕಪ್‍ನಲ್ಲಿ ಎಬಿಡಿ ನೇತೃತ್ವದ ತಂಡ ಬಹಳ ಚೆನ್ನಾಗಿ ಆಡಿತ್ತು. ಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಸೆಮಿಫೈನಲ್ ತಲುಪಿದ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಸೋತಿತ್ತು. ಈ ಸಮಯದಲ್ಲಿ ತಂಡದ ನಾಯಕ ಡಿವಿಲಿಯರ್ಸ್ ಮೈದಾನದಲ್ಲೇ ಬೇಸರಗೊಂಡು ಕಣ್ಣೀರು ಹಾಕಿದ್ದರು. ಅಂದು ಸೌತ್ ಆಫ್ರಿಕಾದ ಹಲವು ಆಟಗಾರರು ಮೈದಾನದಲ್ಲೇ ಕುಳಿತುಕೊಂಡು ಅತ್ತಿದ್ದರು.

    ಮೈದಾನದಲ್ಲಿ ಅಕ್ರಮಣಕಾರಿಯಾಗಿ ಕಾಣಿಸಿಕೊಳ್ಳುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಮೈದಾನದಲ್ಲಿ ಭಾವುಕರಾಗಿದ್ದಾರೆ. 2012ರ ಟಿ-20 ವಿಶ್ವಕಪ್ ವೇಳೆ ಭಾರತ ಬಹಳ ಚೆನ್ನಾಗಿ ಆಡಿತ್ತು. ಅಂದು ಉತ್ತಮ ಲಯದಲ್ಲಿ ಇದ್ದ ಕೊಹ್ಲಿ ಟೂರ್ನಿಯುದ್ದಕ್ಕೂ ಸಖತ್ ಆಗಿ ಬ್ಯಾಟ್ ಬೀಸಿದ್ದರು. ಆದರೆ ಸೆಮಿಫೈನಲ್ ತಲುಪುವಲ್ಲಿ ಭಾರತ ಎಡವಿತ್ತು. ಈ ಸಮಯದಲ್ಲಿ ಕೊಹ್ಲಿ ಅವರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿದ್ದರು.

    ಕ್ರಿಕೆಟ್‍ನಲ್ಲಿ ಹಲವಾರು ದಾಖಲೆಗಳನ್ನು ಮಾಡಿರುವ ಕ್ರಿಕೆಟ್ ದೇವರು ಸಚಿನ್ ಅವರು ಕೂಡ ಮೈದಾನಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ತನ್ನ ವೃತ್ತಿ ಜೀವನದ 100ನೇ ಶತಕದ ಸನಿಹದಲ್ಲಿ ಇದ್ದ ಸಚಿನ್ 2011ರ ವಿಶ್ವಕಪ್ ವೇಳೆ 100ನೇ ಶತಕವನ್ನು ಗಳಿಸಲು ವಿಫಲರಾಗಿದ್ದರು. ಆದರೆ 2012ರಲ್ಲಿ ನಡೆದ ಏಷ್ಯಾ ಕಪ್‍ನ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ತನ್ನ ನೂರನೇ ಶತಕ ಸಿಡಿಸಿ ಅಂದು ಮೈದಾನದಲ್ಲಿ ಭಾವುಕರಾಗಿದ್ದರು.

    ಬಾಂಗ್ಲಾದೇಶದ ಸ್ಟಾರ್ ಆಟಗಾರ ಶಕಿಬ್-ಅಲ್-ಹಸನ್ ಕೂಡ ಮೈದಾನದಲ್ಲಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. 2012 ಏಷ್ಯಾ ಕಪ್‍ನಲ್ಲಿ ಉತ್ತಮವಾಗಿ ಆಡಿದ್ದ ಬಾಂಗ್ಲಾ ದೇಶ ಫೈನಲ್ ತಲುಪಿತ್ತು. ಶ್ರೀಲಂಕಾ ಮತ್ತು ಇಂಡಿಯಾದಂತಹ ಪ್ರಬಲ ತಂಡಗಳಿಗೆ ಸೋಲುಣಿಸಿ ಫೈನಲ್‍ಗೇರಿದ್ದ ಬಾಂಗ್ಲಾ, ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯವನ್ನು ಸೋತಿತ್ತು. ಈ ವೇಳೆ ಟೂರ್ನಿಯುದ್ದಕ್ಕೂ ಸೂಪರ್ ಆಗಿ ಆಡಿದ್ದ ಶಕಿಬ್ ಮೈದಾನದಲ್ಲಿ ಅತ್ತಿದ್ದರು. ಜೊತೆಗೆ ಬಾಂಗ್ಲಾದ ಇತರ ಆಟಗಾರರು ಕೂಡ ತಬ್ಬಿಕೊಂಡು ದುಃಖ ಪಟ್ಟಿದ್ದರು.

  • ಕ್ಯಾಪ್ಟನ್ ರಾಹುಲ್.. ವೈಸ್ ಕ್ಯಾಪ್ಟನ್ ಕೊಹ್ಲಿ..!

    ಕ್ಯಾಪ್ಟನ್ ರಾಹುಲ್.. ವೈಸ್ ಕ್ಯಾಪ್ಟನ್ ಕೊಹ್ಲಿ..!

    ನು? ಕ್ಯಾಪ್ಟನ್ ಕೆಎಲ್ ರಾಹುಲ್ಲಾ? ವೈಸ್ ಕ್ಯಾಪ್ಟನ್ ವಿರಾಟ್ ಕೊಹ್ಲಿನಾ? ಟೈಟಲ್ ನೋಡಿದ ಕೂಡ್ಲೇ ಎಲ್ಲರಿಗೂ ಬರೋ ಡೌಟ್ ಇದು. ಹೌದು ಸಾರಥಿ ರಾಹುಲ್ ಅವ್ರೇ. ರಾಹುಲ್‍ನನ್ನು ಕ್ಯಾಪ್ಟನ್ ಆಗಿ ನೇಮಕ ಮಾಡಿದ್ದು ಮಾತ್ರ ಬಿಸಿಸಿಐ ಅಲ್ಲ. ಆ ತಂಡ ಟೀಂ ಇಂಡಿಯಾ ಕೂಡ ಅಲ್ಲ. ತಂಡದಲ್ಲಿರುವ ಎಲ್ಲಾ ಆಟಗಾರರು ಭಾರತೀಯರು ಕೂಡ ಅಲ್ಲ.. ಹಾ. ಗೊತ್ತಾಯ್ತು. ಗೊತ್ತಾಯ್ತು. ಐಪಿಎಲ್‍ನ ಪಂಜಾಬ್ ಕಿಂಗ್ಸ್ ಇಲೆವನ್ ಟೀಂ ಬಗ್ಗೆ ಹೇಳ್ತಿದ್ದೀವಿ. ಅಂದ್ಕೊಂಡ್ರಾ.? ಹಾಗಾದ್ರೆ, ಆರ್‌ಸಿಬಿಯ ವಿರಾಟ್ ಕೊಹ್ಲಿ, ಪಂಜಾಬ್ ಕಿಂಗ್ಸ್ ಎಲೆವೆನ್‍ಗೆ ಹೋದ್ರು ಅನ್ನೋ ಪ್ರಶ್ನೆ ಏಳುತ್ತೆ ಅಲ್ವಾ? ಒಂದು ಕ್ಷಣ ನಿಲ್ಲಿ. ನಿಮ್ಮೆಲ್ಲಾ ಅನುಮಾನಗಳನ್ನು ಪಕ್ಕಕ್ಕೆ ಇಡಿ. ನಿಮ್ಮ ಕುತೂಹಲ ತಣಿಯಲು ನೀವು ಈ ಸ್ಟೋರಿ ಓದಲೇಬೇಕು.

    ಐಪಿಎಲ್ ಹರಾಜು ಮುಗಿದ ಕೂಡ್ಲೇ ಕೆಎಲ್ ರಾಹುಲ್‍ರನ್ನು ಕ್ಯಾಪ್ಟನ್ ಮಾಡ್ತೀವಿ ಅಂತಾ ಕಿಂಗ್ಸ್ ಇಲೆವೆನ್ ಘೋಷಿಸಿತ್ತು. ಆದ್ರೆ, ಐಪಿಎಲ್ ಶುರುವಾಗೋದವರೆಗೂ ರಾಹುಲ್ ಕ್ಯಾಪ್ಟೆನ್ಸಿಯನ್ನು ನೋಡೋಕೆ ಆಗಲ್ಲ. ಮತ್ತೆ ಈ ಕನ್ನಡಿಗ ದಾಂಡಿಗನನ್ನು ಕ್ಯಾಪ್ಟನ್ ಆಗಿಸಿದ್ದು ಯಾರಪ್ಪಾ? ಯಾವ ತಂಡಕ್ಕೆ ? ಅನ್ನೋ ಸಂದೇಹ ಬರುತ್ತೆ. ಇದು ಬೇರೆಲ್ಲೂ ಅಲ್ಲ. ಇಂಟರ್ನೆಟ್‍ನಲ್ಲಿ ನಡೆಯೋ ಫ್ಯಾಂಟಸಿ ಕ್ರಿಕೆಟ್‍ನಲ್ಲಿ. ನೂರು ರೂ. ಖರ್ಚು ಮಾಡಿದ್ರೆ ಸಾವಿರದಿಂದ ಲಕ್ಷ ರೂಪಾಯಿವರೆಗೂ ಜಾಕ್‍ಪಾಟ್ ಹೊಡೆಯೋ ಚಾನ್ಸ್ ಇರೋದ್ರಿಂದ ಹೆಚ್ಚಿನ ಯುವಕರು ಫ್ಯಾಂಟಸಿ ಕ್ರಿಕೆಟ್ ಮೊರೆ ಹೋಗ್ತಿದ್ದಾರೆ. ತಮ್ಮ ಬುದ್ಧಿಮತ್ತೆ ಪ್ರದರ್ಶಿಸಿಕೊಳ್ತಿದ್ದಾರೆ. ಇಎಸ್‍ಪಿಎನ್ ಕ್ರಿಕ್‍ಇನ್ಫೋ, ಸ್ಟಾರ್ ಇಂಡಿಯಾದಿಂದ ಹಿಡಿದು ಎನ್‍ಡಿಟಿವಿವರೆಗೂ ಹಲವು ಸಂಸ್ಥೆಗಳು ಫ್ಯಾಂಟಸಿ ಕ್ರಿಕೆಟ್‍ನ್ನು ನಿರ್ವಹಿಸ್ತಿವೆ.

    ಡ್ರೀಮ್ 11, ಮೈಟೀಂ 11, ಹಾಲ್ ಪ್ಲೇ, ಪ್ಲೇಯರ್ಸ್‍ಸ್ಪಾಟ್, ಭಲ್ಲೆಬಾಜಿ, ಫ್ಯಾನ್ ಮಾಜಾ, 11 ವಿಕೆಟ್ಸ್, ಫ್ಯಾನ್ ಫೈಟ್‍ನಂತಹ ಹಲವು ಫ್ಯಾಂಟಸಿ ಕ್ರಿಕೆಟ್ ಆ್ಯಪ್‍ಗಳನ್ನು, ವೆಬ್‍ಸೈಟ್‍ಗಳನ್ನು ಕ್ರಿಕೆಟ್ ಪ್ರಿಯರು ಬಳಸುತ್ತಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್, ವಿಶ್ವಕಪ್ ಸಿಕ್ಸರ್ ಹೀರೋ ಯುವರಾಜ್ ಸಿಂಗ್, ಮಾಜಿ ನಾಯಕ ಮಿಸ್ಟರ್ ಕೂಲ್ ಮಹೇಂದ್ರ ಸಿಂಗ್ ಧೋನಿ ಸೇರಿ ಹಲವು ಖ್ಯಾತನಾಮರು ಇವುಗಳ ಪೈಕಿ ಕೆಲವೊಂದಕ್ಕೆ ಪ್ರಚಾರ ರಾಯಭಾರಿಗಳಾಗಿದ್ದಾರೆ. ಫ್ಯಾಂಟಸಿ ಕ್ರಿಕೆಟ್ ಜನಪ್ರಿಯ ಆಗಲು ಇವರ ಪ್ರಚಾರ ತುಂಬಾನೆ ಕೆಲಸ ಮಾಡಿದೆ. ಹೀಗಾಗಿಯೇ ಈ ಸಂಸ್ಥೆಗಳ ಆದಾಯ ಕೋಟಿಗಳಲ್ಲಿದೆ.

    ಮೈದಾನದಲ್ಲಿ ಎರಡು ತಂಡಗಳ ನಡ್ವೆ ಮಾತ್ರ ಫೈಟ್ ನಡೆಯುತ್ತೆ. ಆದ್ರೆ ಈ ಫ್ಯಾಂಟಸಿ ಕ್ರಿಕೆಟ್‍ನಲ್ಲಿ ಫೈಟ್ ಮಾಡೋ ತಂಡಗಳ ಸಂಖ್ಯೆ ಲಕ್ಷ, ಕೋಟಿಗಳಲ್ಲಿ ಇರುತ್ತದೆ. ಕ್ರಿಕೆಟ್ ಟೂರ್ನಿಗಳ ಸಂದರ್ಭದಲ್ಲಿ ಈ ಕ್ರಿಕೆಟ್ ಆ್ಯಪ್‍ಗಳನ್ನು ಬಳಸಿ ಕ್ರಿಕೆಟ್ ಅಭಿಮಾನಿಗಳು ತುಂಬಾ ಎಚ್ಚರಿಕೆಯಿಂದ ತಮ್ಮ ಸ್ವಂತ ತಂಡಗಳನ್ನು ಪ್ರಕಟಿಸುತ್ತಾರೆ. ಕ್ಯಾಪ್ಟನ್, ವೈಸ್ ಕ್ಯಾಪ್ಟನ್, ವಿಕೆಟ್ ಕೀಪರ್, ಓಪನರ್ಸ್, ಬ್ಯಾಟ್ಸ್‍ಮನ್, ಬೌಲರ್, ಆಲ್‍ರೌಂಡರ್ಸ್ ವಿಭಾಗದಲ್ಲಿ ಒಟ್ಟು 11 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಮೊದಲು ನಿಮ್ಮ ಹಣಕ್ಕೆ ಪ್ರತಿಯಾಗಿ ನೀಡಲಾಗುವ ಇಂತಿಷ್ಟು ಪಾಯಿಂಟ್‍ಗಳನ್ನು ವಿನಿಯೋಗಿಸಿಕೊಳ್ಳಬೇಕು. ಒಬ್ಬೊಬ್ಬ ಆಟಗಾರರನಿಗೆ ಆತನ ಸಾಮರ್ಥ್ಯವನ್ನು ಆಧರಿಸಿ ಪಾಯಿಂಟ್‍ಗಳನ್ನು ಫಿಕ್ಸ್ ಮಾಡಲಾಗಿರುತ್ತದೆ. ಒಂದ್ವೇಳೆ ಹಣ ಮುಗಿದ್ರೆ, ಮತ್ತೆ ಹಣ ಖರ್ಚು ಮಾಡಿ ಪಾಯಿಂಟ್‍ಗಳನ್ನು ಖರೀದಿ ಮಾಡಬಹುದು.

    ಆಟಗಾರನ ದಾಖಲೆ, ರನ್‍ಗಳು, ಈ ಮೈದಾನದಲ್ಲಿ ಆ ಯುವ ಕ್ರಿಕೆಟಿಗನ ಸರಾಸರಿ ಎಷ್ಟು ಹೀಗೆ ಎಲ್ಲವನ್ನು ವಿಶ್ಲೇಷಿಸಿ ತಂಡಗಳನ್ನು ರಚಿಸಿ ಬಂಡವಾಳ ಹೂಡುತ್ತಾರೆ. ಇತ್ತೀಚಿಗೆ ನಡೆದ ನ್ಯೂಜಿಲೆಂಡ್ ವರ್ಸಸ್ ಇಂಡಿಯಾ ನಡುವಿನ ಟಿ-20 ಮತ್ತು ಏಕದಿನ ಸರಣಿಗಳಲ್ಲಿ ಶೇಕಡಾ 95ರಷ್ಟು ಮಂದಿ ಫುಲ್ ಫಾರ್ಮ್‍ನಲ್ಲಿದ್ದ ಕೆಎಲ್ ರಾಹುಲ್‍ರನ್ನು ಕ್ಯಾಪ್ಟನ್ ಆಗಿ, ವೈಸ್ ಕ್ಯಾಪ್ಟನ್ ಆಗಿ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಕ್ರಿಕೆಟ್ ಅಭಿಮಾನಿಗಳು ಆಯ್ಕೆ ಮಾಡಿದ ತಂಡದಲ್ಲಿನ ಆಟಗಾರರು ಆನ್ ಫೀಲ್ಡ್‌ನಲ್ಲಿ ಮಿಂಚಿದಷ್ಟು ಲಾಭ ಹರಿದುಬರುತ್ತದೆ. ಕೆಲವರಿಗೆ ಲಕ್ಷಗಳಲ್ಲಿ ಜಾಕ್‍ಪಾಟ್ ಹೊಡೆಯುತ್ತೆ. ತುಂಬಾ ಮಂದಿ ಹಣ ಕಳೆದುಕೊಳ್ತಾರೆ.

    ರಾಹುಲ್ ನಾಮ ಸಂವತ್ಸರ:
    ಫೆಬ್ರವರಿ ತಿಂಗಳು ಇನ್ನೂ ಮುಗಿದಿಲ್ಲ. ಆಗಲೇ 2020ನ್ನು ರಾಹುಲ್ ನಾಮ ಸಂವತ್ಸರ ಎಂದು ಕ್ರಿಕೆಟ್ ಅಭಿಮಾನಿಗಳು ಕರೆಯಲು ಶುರು ಮಾಡಿದ್ದಾರೆ. ಕನ್ನಡಿಗ ರಾಹುಲ್ ಆರ್ಭಟಿಸುವ ರೀತಿ ಹಾಗಿದೆ. ಬ್ಯಾಟಿಂಗ್ ಆರ್ಡರ್, ಪಿಚ್, ದೇಶ.. ಹೀಗೆ ಯಾವುದನ್ನು ನೋಡದೇ ರನ್ ಹೊಳೆ ಹರಿಸ್ತಿದ್ದಾರೆ. ಈ ಸ್ಪೀಡ್ ನೋಡಿಯೇ ಫ್ಯಾಂಟಸಿ ಕ್ರಿಕೆಟ್‍ನಲ್ಲಿ ಎಲ್ಲರೂ ರಾಹುಲ್‍ರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿಕೊಳ್ತಿದ್ದಾರೆ. ಈ ಎರಡು ತಿಂಗಳಲ್ಲಿ 6 ಏಕದಿನ ಪಂದ್ಯ ಆಡಿರುವ ರಾಹುಲ್ ಶೇಕಡಾ 70ರ ಸರಾಸರಿಯಲ್ಲಿ 350 ರನ್ ಗಳಿಸಿದ್ದಾರೆ. ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದಿದ್ದಾರೆ.

    ಸ್ಥಿರ ಆಟಕ್ಕೆ ಹೆಸರಾದ ಕೊಹ್ಲಿ, ಆರು ಏಕದಿನ ಪಂದ್ಯಗಳಿಂದ ಶೇಕಡಾ 43ರ ಸರಾಸರಿಯಲ್ಲಿ 258 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿ ಇದ್ದಾರೆ. ಇನ್ನು 7 ಟಿ-20 ಇನ್ನಿಂಗ್ಸ್ ಆಡಿರುವ ರಾಹುಲ್ ಶೇಕಡಾ 54ರ ಸರಾಸರಿಯಲ್ಲಿ 323 ರನ್ ಗಳಿಸಿದ್ದಾರೆ. ರನ್ ಗಳಿಸಿದವರ ಲಿಸ್ಟ್‌ನಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ವಿರಾಟ್ ಕೊಹ್ಲಿ 6 ಇನ್ನಿಂಗ್ಸ್ ಆಡಿದ್ದು, ಶೇಕಡಾ 32ರ ಸರಾಸರಿಯಲ್ಲಿ 166 ರನ್ ಗಳಿಸಿದ್ದಾರೆ. ಇದು ಕ್ಯಾಪ್ಟನ್ ರಾಹುಲ್, ವೈಸ್ ಕ್ಯಾಪ್ಟನ್ ಕೊಹ್ಲಿ ಕಹಾನಿ! ಅಂದ ಹಾಗೇ, ಕ್ರಿಕೆಟ್ ಫ್ಯಾಂಟಸಿ ಕೂಡ ಒಂದರ್ಥದಲ್ಲಿ ಜೂಜೇ.
    – ಶ್ರೀನಿವಾಸ್ ಪೊನ್ನಸಮುದ್ರ

  • ಮೈದಾನದಲ್ಲಿ ಹಾವು – ರಣಜಿ ಕ್ರಿಕೆಟ್ ಪಂದ್ಯ ವಿಳಂಬ

    ಮೈದಾನದಲ್ಲಿ ಹಾವು – ರಣಜಿ ಕ್ರಿಕೆಟ್ ಪಂದ್ಯ ವಿಳಂಬ

    ಹೈದರಾಬಾದ್: ಅಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಮೊದಲ ದಿನದ ಅಂಧ್ರ ಪ್ರದೇಶದ ಮತ್ತು ವಿದರ್ಭ ನಡುವಿನ ಪಂದ್ಯದಲ್ಲಿ ಮೈದಾನಕ್ಕೆ ಹಾವು ಬಂದ ಕಾರಣ ಆಟಕ್ಕೆ ವಿಳಂಬವಾಗಿದೆ.

    ಇಂದು ಅಂಧ್ರಪ್ರದೇಶ ಮತ್ತು ವಿದರ್ಭ ತಂಡದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಮೊದಲ ದಿನದ ಪಂದ್ಯದ ವೇಳೆ ಹಾವೊಂದು ಕ್ರಿಕೆಟ್ ಮೈದಾನಕ್ಕೆ ಬಂದಿದೆ. ಹಾವು ಕ್ರಿಕೆಟ್ ಮೈದಾನದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು, ಈ ವಿಡಿಯೋದಲ್ಲಿ ಹಾವು ಹರಿಯುತ್ತಿರುವುದನ್ನು ಆಟಗಾರರು ದಿಗ್ಭ್ರಮೆಯಿಂದ ನೋಡುತ್ತಿರುವುದನ್ನು ನಾವು ಕಾಣಬಹುದು.

    ರಣಜಿ ಟ್ರೋಫಿ ವೇಳೆ ಮೈದಾನಕ್ಕೆ ಹಾವು ನುಗ್ಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2015 ರಲ್ಲಿ ಸಾಲ್ಟ್ ಲೇಕ್‍ನ ಜೆಯೂ ಕ್ಯಾಂಪಸ್‍ನಲ್ಲಿ ನಡೆಯುತ್ತಿದ್ದ ಬಂಗಾಳ ಮತ್ತು ವಿದರ್ಭ ನಡುವಿನ ಪಂದ್ಯದಲ್ಲೂ ಹಾವೊಂದು ಮೈದಾನಕ್ಕೆ ಬಂದು ಪಂದ್ಯಕ್ಕೆ ಅಡ್ಡಿ ಮಾಡಿತ್ತು. ಈಗ ಮತ್ತೆ ಇದೇ ರೀತಿ ಹಾವೊಂದು ಬಂದಿದ್ದು ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಸಿಸಿಐ ಹಾವು ಪಂದ್ಯವನ್ನು ನಿಲ್ಲಿಸಿದೆ. ಪಂದ್ಯ ಆರಂಭವಾಗುವುದನ್ನು ವಿಳಂಬ ಮಾಡಲು ಮೈದಾನಕ್ಕೆ ಅತಿಥಿಯೊಬ್ಬರು ಬಂದಿದ್ದರು ಎಂದು ಬರೆದುಕೊಂಡಿದೆ.

    2015ರ ನಂತರ ಮತ್ತೆ ಇದೇ ವಿದರ್ಭ ತಂಡ ಆಡುವ ಪಂದ್ಯದಲ್ಲಿ ಹಾವು ಕಾಣಿಸಿಕೊಂಡಿದ್ದು, ಹಾವನ್ನು ಅಲ್ಲಿನ ಸಿಬ್ಬಂದಿ ಹಿಡಿದು ತೆಗೆದುಕೊಂಡು ಹೋಗಿದ್ದಾರೆ. ನಂತರ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ವಿದರ್ಭ ನಾಯಕ ಫೈಜ್ ಫೈಜಾಲ್ ಆಂಧ್ರ ಪ್ರದೇಶದ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತ ಅಂಧ್ರಪ್ರದೇಶ ತಂಡವನ್ನು ಹನುಮಾ ವಿಹಾರಿ ಮುನ್ನಡೆಸುತ್ತಿದ್ದಾರೆ.

    ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಅಂಧ್ರ ಆರಂಭಿಕ ಕುಸಿತ ಕಂಡಿದ್ದು, ಊಟದ ಸಮಯಕ್ಕೆ ಆರಂಭಿಕ ಮೂರು ವಿಕೆಟ್‍ಗಳನ್ನು ಕಳೆದುಕೊಂಡು 87 ರನ್ ಸಿಡಿಸಿ ಸಂಕಷ್ಟಕ್ಕೆ ಸಿಲುಕಿದೆ. ಆದರೆ ನಾಯಕ ಹನುಮ ವಿವಾರಿ ತಾಳ್ಮೆಯ ಆಟವಾಡುತ್ತಿದ್ದು, 89 ಎಸೆತದಲ್ಲಿ 6 ಬೌಂಡರಿಯೊಂದಿಗೆ 43 ರನ್ ಸಿಡಿಸಿ ಆಡುತ್ತಿದ್ದಾರೆ.