Tag: ಮೈಕಲ್‌ ಅಜಯ್‌

  • Bigg Boss: ವಿನಯ್‌ಗೆ ಚಪ್ಪಲಿ ಏಟು ಬಿದ್ದಿಲ್ಲ-  ಕಾರ್ತಿಕ್ ಪರ‌ ನಿಂತ ಮೈಕಲ್

    Bigg Boss: ವಿನಯ್‌ಗೆ ಚಪ್ಪಲಿ ಏಟು ಬಿದ್ದಿಲ್ಲ- ಕಾರ್ತಿಕ್ ಪರ‌ ನಿಂತ ಮೈಕಲ್

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಈ ವಾರ ಮಹಾಯುದ್ಧವೇ ನಡೆದಿದೆ. ವಿನಯ್ (Vinay Gowda) ಮತ್ತು ಕಾರ್ತಿಕ್ (Karthik Mahesh) ಜಗಳ ಮೀತಿ ಮೀರಿದೆ. ಇದೀಗ ಕಾರ್ತಿಕ್ ತನಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ, ನಾನು ಈ ಮನೆಯಲ್ಲಿ ಇರಬೇಕಾ? ಎಂದು ವಿನಯ್ ಗುಡುಗಿದ್ದಾರೆ. ಕಾರ್ತಿಕ್ ಯಾವ ತಪ್ಪು ಮಾಡಿಲ್ಲ, ಚಪ್ಪಲಿ ಏಟು ಬಿದ್ದಿಲ್ಲ ಎಂದು ಮೈಕಲ್ ಎದುರಾಳಿ ಪರ ವಹಿಸಿದ್ದಾರೆ. ಮೈಕಲ್ ನಡೆ ಇದೀಗ ವಿನಯ್ ಕೆಂಗಣ್ಣಿಗೆ ಗುರಿಯಾಗಿದೆ.

    ಈ ವಾರ ಬಿಗ್ ಬಾಸ್ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ತಂಡಗಳಾಗಿ ಮಾಡಿದ್ದು, ಕಾರ್ತಿಕ್ ಮತ್ತು ವಿನಯ್ ಬೇರೆ ಬೇರೆ ತಂಡದಲ್ಲಿ ಇದ್ದರು. ರಾಕ್ಷಸ ತಂಡದ ವಿನಯ್, ಗಂಧರ್ವ ತಂಡದ ಕಾರ್ತಿಕ್‌ಗೆ ಟಾಸ್ಕ್ ಕೊಡುವಾಗ ಜಟಾಪಟಿ ಶುರುವಾಗಿದೆ. ವಿನಯ್ & ಟೀಮ್ ಈ ಟಾಸ್ಕ್ನ ಪರ್ಸನಲ್ ದ್ವೇಷಕ್ಕೆ ಬಳಸಿಕೊಂಡು ಕಾರ್ತಿಕ್‌ಗೆ ಟಾರ್ಗೆಟ್ ಮಾಡಿದ್ದಾರೆ. ಮುಖಕ್ಕೆ ನೊರೆ ಹಾಕಿದ್ದು, ಚಪಾತಿ ಹಿಟ್ಟಿನಲ್ಲಿ ಮುಖಕ್ಕೆ ಹೊಡೆದಿರೋದು ಹೀಗೆ ನಾನಾ ರೀತಿಯಲ್ಲಿ ಕಾರ್ತಿಕ್‌ಗೆ ಟಾರ್ಚರ್ ಕೊಟ್ಟಿದ್ದಾರೆ ವಿನಯ್.

    ಸಂಗೀತಾ- ಕಾರ್ತಿಕ್ ಟೀಮ್ ಕೂಡ ಸ್ಮಾರ್ಟ್ ಆಗಿ ಆಟ ಆಡಿಸಿ, ಎದುರಾಳಿ ತಂಡಕ್ಕೆ ಹತಾಶರಾಗುವಂತೆ ಮಾಡಿದ್ದಾರೆ. ಹೀಗೆ ಟಾಸ್ಕ್ ಕೊಡುವಾಗ ‘ಹೇ ಬಾರೋ ಲೋ ಗುಲಾಮ’ ಎಂದು ಕಾರ್ತಿಕ್‌ಗೆ ಕಿರಿಕಿರಿ ಮಾಡಿದ್ದಾರೆ ವಿನಯ್. ಚಪಾತಿ ಹಿಟ್ಟಿನಲ್ಲಿ ಕಾರ್ತಿಕ್ ಮುಖಕ್ಕೆ ಹೊಡೆದು ಇನ್‌ಸಲ್ಟ್ ಮಾಡಿದ ಮೇಲೆ ಇಬ್ಬರ ನಡುವೆಯೂ ವಾಕ್ಸಮರ ನಡೆದಿದೆ. ಆಗ ಕಾರ್ತಿಕ್ ಕೋಪಕ್ಕೆ ಚಪ್ಪಲಿ ತೆಗೆದು ನೆಲಕ್ಕೆ ಹೊಡೆದಿದ್ದಾರೆ. ಅದು ಬೌನ್ಸ್ ಆಗಿ ವಿನಯ್‌ಗೆ ತಾಗಿದೆ. ನನಗೆ ಚಪ್ಪಲಿಯಲ್ಲಿ ಕಾರ್ತಿಕ್ ಹೊಡೆದ ಅಂತ ವಿನಯ್ ರಂಪಾಟ ಮಾಡಿದ್ದಾರೆ.

    ಆಗ ಮೈಕಲ್, ಕಾರ್ತಿಕ್ ಚಪ್ಪಲಿಯನ್ನ ನೆಲಕ್ಕೆ ಹೊಡೆದಿದ್ದಾರೆ. ಅದು ಬೌನ್ಸ್ ಆಗಿ ನಿಮಗೆ ಬಿದ್ದಿದೆ ಅಷ್ಟೇ. ಇದರಲ್ಲಿ ಕಾರ್ತಿಕ್ ಏನೂ ತಪ್ಪು ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದ್ದರು. ಮೈಕಲ್ ಈ ಮಾತು ವಿನಯ್‌ಗೆ ಮತ್ತಷ್ಟು ಸಿಟ್ಟು ತರಿಸಿದೆ. ಇದನ್ನೂ ಓದಿ:‘ಟಾಕ್ಸಿಕ್’ ಚಿತ್ರದ ಮೂಲಕ ನಿರ್ಮಾಪಕ ಆದ ಯಶ್

    ಮೈಕಲ್ ಯಾವಾಗಲೂ ತಪ್ಪನ್ನು ತಪ್ಪು ಎನ್ನುತ್ತಾರೆ. ಅದು ತಮ್ಮ ತಂಡದವರೇ ಆಗಲಿ, ಎದುರಾಳಿ ತಂಡವೇ ಆಗಿರಲಿ. ಸರಿ ಎಲ್ಲಿದ್ಯೋ ಅಲ್ಲಿ ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರೆ. ವಿನಯ್ ಮುಂದೆಯೇ ಕಾರ್ತಿಕ್ ಪರ ತಮ್ಮ ತಂಡದ ಮೈಕಲ್ (Michael Ajay) ಮಾತನಾಡಿರೋದು ಬೇಸರ ಮೂಡಿಸಿದೆ.

  • ನಮ್ರತಾ ಜೊತೆಗಿನ ಫ್ಲರ್ಟ್ ಬಗ್ಗೆ ಸ್ನೇಹಿತ್‌ಗೆ ಕುಟುಕಿದ ಮೈಕಲ್

    ನಮ್ರತಾ ಜೊತೆಗಿನ ಫ್ಲರ್ಟ್ ಬಗ್ಗೆ ಸ್ನೇಹಿತ್‌ಗೆ ಕುಟುಕಿದ ಮೈಕಲ್

    ಬಿಗ್ ಬಾಸ್ ಮನೆಗೆ (Bigg Boss Kannada 10) ಮೊದಲು ಬಂದಾಗ ಸ್ನೇಹಿತ್ ಗೌಡ (Snehith Gowda) ಸಖತ್ ಸ್ಟ್ರಾಂಗ್ ಆಗಿ ಆಟ ಆಡುತ್ತಿದ್ದರು. ನಂತರದ ದಿನಗಳಲ್ಲಿ ನಮ್ರತಾ ಜೊತೆ ಜೋಡಿಯಾಗಿ ಹೈಲೆಟ್ ಆಗೋದು ಬಿಟ್ರೆ, ಟಾಸ್ಕ್‌ನಿಂದ ಸ್ನೇಹಿತ್ ಮುಂದೆ ಬರಲೇ ಇಲ್ಲ. ನೀನು, ನಮ್ರತಾ (Namratha Gowda) ಸುತ್ತಾಡಿಕೊಂಡಿದ್ದೀರಿ ಅಷ್ಟೇ. ಅದನ್ನು ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ ಎಂದು ನೇರವಾಗಿ ಮೈಕಲ್ ಹೇಳಿದ್ದಾರೆ.

    ದೊಡ್ಮನೆ ಆಟ ಶುರುವಾದಾಗ ಮೊದಲ ವಾರದ ಕ್ಯಾಪ್ಟನ್ ಆಗಿ ಸ್ನೇಹಿತ್ ಗೌಡ, ಸಹ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟಿದ್ದರು. ಸಂಗೀತಾ-ಕಾರ್ತಿಕ್ ಅವರಂತೆಯೇ ಸ್ನೇಹಿತ್-ನಮ್ರತಾ ಪ್ರೇಮ ಪಕ್ಷಿಗಳಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ:ಒಟಿಟಿಯತ್ತ ಮುಖ ಮಾಡಿದ ಕೀರ್ತಿ ಸುರೇಶ್

    ನಮ್ರತಾಗೆ (Namratha Gowda) ಪ್ರೇಮ ನಿವೇದನೆ ಮಾಡುವುದು. ಫ್ಲರ್ಟ್ ಮಾಡೋದು ಬಿಟ್ಟರೇ ಸ್ನೇಹಿತ್ ಆಟ ಎಲ್ಲೂ ಹೈಲೆಟ್ ಆಗಲೇ ಇಲ್ಲ. ಇದನ್ನೇ ಈಗ ಕ್ಯಾಪ್ಟನ್ ಮೈಕಲ್, ಸ್ನೇಹಿತ್‌ಗೆ ಕಿವಿ ಹಿಂಡಿದ್ದಾರೆ. ನೀನು, ನಮ್ರತಾ ಓಡಾಡಿಕೊಂಡಿದ್ದಿರಿ, ಅದನ್ನೇ ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ ಎಂದು ನೇರವಾಗಿ ಸ್ನೇಹಿತ್‌ಗೆ ಮೈಕಲ್ ಹೇಳಿದ್ದಾರೆ. ಇದೀಗ ನಾನು ಆಡಲೇ ಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.

    ಈ ಘಟನೆ ನಡೆಯುವ ಮುನ್ನವೇ ಸ್ನೇಹಿತ್ ಗೌಡ, ನಮ್ರತಾ ಎದುರು ಕಣ್ಣೀರು ಹಾಕಿದ್ದಾರೆ. ಈ ವಾರ ಮನೆಯಿಂದ ನಾನೇ ಔಟ್ ಆಗೋದು ಎಂದು ಕಣ್ಣೀರಿಟ್ಟಿದ್ದಾರೆ. ಕಳೆದ ವಾರ ಬಾಟಮ್ ಲೈನ್‌ನಲ್ಲಿದ್ದರು. ಅತೀ ಕಡಿಮೆ ವೋಟ್ ಪಡೆದು ಸೇವ್ ಆಗಿದ್ದರು. ಹಾಗಾಗಿ ಈಗ ನೀತು ಎಲಿಮಿನೇಷನ್ ನಂತರ ತನ್ನ ಆಟ ಕೊನೆಗೊಳ್ಳಲಿದೆ ಎಂದು ಸ್ನೇಹಿತ್‌ಗೂ ಅನಿಸಿದೆ.

  • Bigg Boss: ‘ಗೆಲ್ಲೋ ಕುದುರೆ’ ವಿನಯ್ ಎಂದ ನೀತುಗೆ ಮೈಕಲ್ ಠಕ್ಕರ್

    Bigg Boss: ‘ಗೆಲ್ಲೋ ಕುದುರೆ’ ವಿನಯ್ ಎಂದ ನೀತುಗೆ ಮೈಕಲ್ ಠಕ್ಕರ್

    ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಕಿಚ್ಚನ ಕ್ಲಾಸ್ ಬಳಿಕ ಎಲ್ಲಾ ಸ್ಪರ್ಧಿಗಳು ಎಚ್ಚೆತ್ತು ಆಟವಾಡುತ್ತಿದ್ದಾರೆ. ಇದೀಗ ಗೆಲ್ಲೋ ಕುದುರೆ ವಿನಯ್ ಎಂದು ಬೆಟ್ಟು ತೋರಿಸಿದ ನೀತುಗೆ (Neethu Vanajakshi) ಮೈಕಲ್ ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಾಂಗ್ ಲೀಕ್: ಕೇಡಿಗಳ ಅರೆಸ್ಟ್

    ಟಾಸ್ಕ್‌ವೊಂದರಲ್ಲಿ ಒಂದಿಷ್ಟು ಪದಗಳನ್ನ ಸ್ಪರ್ಧಿಗಳಿಗೆ ನೀಡಿದ್ದರು. ಆ ಪದದ ಅನುಸಾರ ಸ್ಪರ್ಧಿಗಳನ್ನ ಅತೀ ಹೆಚ್ಚು ಮತ್ತು ಅತೀ ಕಡಿಮೆ ಅದನ್ನ ಹೈಲೆಟ್ ಮಾಡಿ ನಿಲ್ಲಿಸಬೇಕಿತ್ತು. ಅದರಂತೆ ನೀತು ವನಜಾಕ್ಷಿ ಅವರಿಗೆ ‘ಗೆಲ್ಲೋ ಕುದುರೆ’ ಎಂಬ ಪದ ಸಿಕ್ಕಿತ್ತು. ಈ ಅನುಸಾರ ನೀತು, ಮೊದಲ ಸ್ಥಾನದಲ್ಲಿ ವಿನಯ್ (Vinay Gowda) ನಿಲ್ಲಿಸಿದ್ದರೆ, ಕಡೆಯ ಸ್ಥಾನದಲ್ಲಿ ಇಶಾನಿಯನ್ನು ನಿಲ್ಲಿಸಿದ್ದರು.

    ನೀತು ನಿರ್ಣಯಕ್ಕೆ ಮೈಕಲ್, ಕಾರ್ತಿಕ್ (Karthika Mahesh) ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಗೆಲ್ಲೋ ಕುದುರೆ ಪಟ್ಟಿಯಲ್ಲಿ ವಿನಯ್ ಗೌಡ ಒಬ್ಬರೇ ಓಡ್ತಿರೋದು ಅಂತ ಹೇಳಿದ್ದಕ್ಕಾಗಿ ನೀತುಗೆ ಠಕ್ಕರ್ ನೀಡಿದ ಮೈಕೆಲ್, ನೀವೀಗ ಹೇಳಿದ್ದೀರಿ, ಒಂದೇ ಒಂದು ಗೆಲ್ಲೋ ಕುದುರೆ ಆಟ ಆಡ್ತಾ ಇದೆ ಅಂತ. ಹಾಗಾದರೆ, ನೀವು ನಿಮ್ಮನ್ನೇ ಕನ್ಸಿಡರ್ ಮಾಡಿಕೊಂಡಿಲ್ಲ ಅಂತ ಅರ್ಥ. ಅಂದರೆ ನೀವಿಲ್ಲಿ ಸುಮ್ನೇ ಇದ್ದೀರಿ. ಸುಮ್ನೇ ಇರೋದಾದ್ರೆ ನೀವ್ಯಾಕೆ ಬಿಗ್ ಬಾಸ್‌ನಲ್ಲಿ ಯಾಕೆ ಇದ್ದೀರಾ? ಗೊಂದಲದಲ್ಲಿ ಇದ್ದೀರಾ ಅಂತೆಲ್ಲ ಕೇಳಿದರು. ಈ ಮಾತು ಕೇಳಿದ ನೀತು, ಸಮರ್ಥನೆ ಕೊಡೋದ್ರಲ್ಲಿ ಸೋತರು. ಮೈಕೆಲ್ ಮಾತಿಗೆ ಬೆಂಬಲಿಸುತ್ತ ಮನೆಮಂದಿ ನಕ್ಕರು. ಸದಾ ಕನ್ಫೂಷನ್‌ನಲ್ಲಿರೋ ನೀತು, ಮೈಕಲ್ ಈ ಮೂಲಕ ಕ್ಲಾಸ್ ತೆಗೆದುಕೊಂಡರು.

    ಸ್ನೇಕ್ ಶ್ಯಾಮ್, ಗೌರೀಶ್, ರಕ್ಷಕ್ ಬುಲೆಟ್ ಅವರು ಎಲಿಮಿನೇಟ್ ಆಗಿ ಈಗಾಗಲೇ ಬಿಗ್ ಬಾಸ್ ಮನೆಯಿಂದ (Bigg Boss House) ಹೊರಬಂದಿದ್ದಾರೆ. 5ನೇ ವಾರಕ್ಕೆ ಯಾರು ಎಲಿಮಿನೇಟ್ ಆಗುತ್ತಾರೆ ಕಾದುನೋಡಬೇಕಿದೆ.