Tag: ಮೇಘನಾ ಸರ್ಜಾ

  • ಅಭಿಮಾನಿಗಳಿಗೆ ಹಲೋ ಹೇಳಿದ ಜ್ಯೂನಿಯರ್‌ ಚಿರು

    ಅಭಿಮಾನಿಗಳಿಗೆ ಹಲೋ ಹೇಳಿದ ಜ್ಯೂನಿಯರ್‌ ಚಿರು

    ಬೆಂಗಳೂರು: ಜ್ಯೂನಿಯರ್‌ ಚಿರು ಹೇಗಿದ್ದಾನೆ ಎಂಬ ಅಭಿಮಾನಿಗಳ ಕಾತರದ ಪ್ರಶ್ನೆಗೆ ಪ್ರೇಮಿಗಳ ದಿನಾಚರಣೆಯಂದು ನಟಿ ಮೇಘನಾ ಸರ್ಜಾ ಫೋಟೋ ಬಿಡುಗಡೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

    ಪ್ರೇಮಿಗಳ ದಿನದಂದೇ ಸ್ಯಾಂಡಲ್‍ವುಡ್ ನಟ ದಿ. ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಿನ ಪುತ್ರ ತಮ್ಮ ಅಭಿಮಾನಿಗಳಿಗೆ ‘ಹಲೋ’ ಹೇಳಿದ್ದಾನೆ.

    ಈ ಸಂಬಂಧ ನಟಿ ಮೇಘನಾ ಅವರು ಇನ್‌ಸ್ಟಾಗ್ರಾಮನ್‌ನಲ್ಲಿ ಕಿರು ವಿಡಿಯೋ ಅಪ್ಲೋಡ್‌ ಮಾಡಿ ಜ್ಯೂನಿಯರ್‌ ಚಿರು ಮುಖವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. 2017ರ ಅಕ್ಟೋಬರ್‌ 22 ರಂದು ಚಿರು ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಡಿಯೋದ ಜೊತೆ ಮಗುವಿನ ವಿಡಿಯೋವನ್ನು ಮೇಘನಾ ತೋರಿಸಿದ್ದಾರೆ. ಜ್ಯೂನಿಯರ್‌ ಚಿರು ಮಲಗಿಕೊಂಡು ನಗುತ್ತಿರುವ ಫೋಟೋ ಮತ್ತು ಚಿರಂಜೀವಿ ಸರ್ಜಾಗೆ ಮಗುವನ್ನು ತೋರಿಸುವ ಫೋಟೋ ಈ ವಿಡಿಯೋದಲ್ಲಿದೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಮೇಘನಾ, ಫೆಬ್ರವರಿ 12ರಂದು ರೋಮಾಂಚನಕಾರಿ ಸುದ್ದಿಯೊಂದು ಹೊರ ಬೀಳಲಿದೆ. ಆ ದಿನಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಆದರೆ ಸಮಯ ತಿಳಿಸಿರಲಿಲ್ಲ. ಬಳಿಕ ಫೆ.13 ರಂದು ಮತ್ತೊಂದು ಪೋಸ್ಟ್ ಹಾಕಿ ರಾತ್ರಿ 12 ಗಂಟೆಗೆ ಜ್ಯೂನಿಯರ್‌ ಚಿರುವನ್ನು ನಿಮಗೆ ಪರಿಚಯ ಮಾಡುತ್ತೇನೆ ಎಂದು ಮತ್ತೊಂದು ಪೋಸ್ಟ್‌ ಹಾಕಿದ್ದರು. ಇಂದು ರಾತ್ರಿ 12 ಗಂಟೆಗೆ ನಮ್ಮ ಪ್ರೀತಿಯ ಸಂಕೇತವಾಗಿರುವ ನನ್ನ ಮಗನನ್ನು ಪರಿಚಯಿಸಲು ಚಿರು ಮತ್ತು ನಾನು ಹೆಮ್ಮೆ ಪಡುತ್ತೇವೆ ಎಂದು ಬರೆದಿದ್ದರು.

    2018ರ ಮೇ 26 ರಂದು ಚಿರು ಮತ್ತು ಮೇಘನಾ ಸರ್ಜಾ ಪ್ರೀತಿಸಿ ಮದುವೆಯಾಗಿದ್ದರು. 2020 ಅಕ್ಟೋಬರ್‌ 22 ರಂದು ಮೇಘನಾ ಸರ್ಜಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.

     

     

    View this post on Instagram

     

    A post shared by Meghana Raj Sarja (@megsraj)

  • ಟ್ವಿನ್ಸ್ ಮಕ್ಕಳೇ ನನಗೆ ಬೇಕಿತ್ತು: ಮೇಘನಾ ರಾಜ್

    ಟ್ವಿನ್ಸ್ ಮಕ್ಕಳೇ ನನಗೆ ಬೇಕಿತ್ತು: ಮೇಘನಾ ರಾಜ್

    ಬೆಂಗಳೂರು: ಟ್ವಿನ್ಸ್ ಮಗು ಎಂದರೆ ನನಗೆ ಇಷ್ಟ. ನನಗೆ ಅವಳಿ ಮಕ್ಕಳೆ ಬೇಕಿತ್ತು. ಆದರೆ ಟ್ವಿನ್ಸ್ ಗಿಂತ ಹೆಚ್ಚಾಗಿ ಇವನು ಹುಟ್ಟಿದ್ದಾನೆ ಎಂದು ಮೇಘನಾ ಸರ್ಜಾ ಖುಷಿ ಹಂಚಿಕೊಂಡರು.

    ಇಂದು ನಡೆದ ತೊಟ್ಟಿಲು ಶಾಶ್ತ್ರದ ಸಂಭ್ರಮದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮೇಘನಾ, ಒಂದೇ ಮಗು ಎಂದು ಹೇಳಿ ಅವಳಿ ಮಕ್ಕಳು ಹುಟ್ಟಿರುವುದನ್ನು ಕೇಳಿದ್ದೆನೆ. ನಾನು ಕೂಡಾ ನನಗೆ ಅವಳಿ ಮಕ್ಕಳು ಹುಟ್ಟುತ್ತಾರೆ ಎಂದುಕೊಂಡಿದ್ದೆ. ನಾನು ಡಾಕ್ಟರ್ ಬಳಿ ನನಗೆ ಅವಳಿ ಮಕ್ಕಳು ಆಗುತ್ತಾ ಎಂದು ವಿಚಾರಿಸಿದ್ದೆ ಎಂದಿದ್ದಾರೆ.

    ಮಗು ವಿಚಾರವಾಗಿ ಚಿರು ಮತ್ತು ನನ್ನ ನಡುವೆ ಮಾತುಕತೆ ನಡೆಯುತ್ತಲೆ ಇರುತ್ತಿತ್ತು. ನನಗೆ ಹೆಣ್ಣು ಮಗು ಬೇಕು ಅಂತಾ. ಚಿರು ಇಲ್ಲಾ ನಮಗೆ ಗಂಡು ಮಗುನೇ ಆಗೋದು ಅಂತಾ ಹೇಳುತ್ತಿದ್ದರು. ಚಿರುಗೆ ಮುಂದಾಲೋಚನೆ ಇತ್ತು ಅನ್ನಿಸುತ್ತೆ. ಈಗ ಯೋಚನೆ ಮಾಡಿದ್ರೆ ಅವರ ಇಷ್ಟದಂತೆ ನಮಗೆ ಗಂಡು ಮಗ ಹುಟ್ಟಿದ್ದಾನೆ ಅಂತಾ ಸಂತೋಷ ವ್ಯಕ್ತಪಡಿಸಿದರು.

    ಚಿರುನ ಕಳೆದುಕೊಂಡ ಮೇಲೆ ನಾನು ಸ್ಟ್ರಾಂಗ್ ಇದ್ದಿನಾ ಇಲ್ಲವೋ ಗೊತ್ತಿಲ್ಲ. ನಾನು ಇನ್ನು ಬ್ಲ್ಯಾಂಕ್ ಆಗಿಯೆ ಇದ್ದೇನೆ. ಚಿರು ಫ್ಯಾಮಿಲಿ, ಸರ್ಜಾ ಫ್ಯಾಮಿಲಿ ಮತ್ತು ನನ್ನ ಮಗನೆ ನನಗೆ ಧೈರ್ಯವಾಗಿದ್ದಾರೆ. ಚಿರು ಇದ್ರೆ ಏನೆಲ್ಲಾ ಮಾಡಿಸ್ತಾ ಇದ್ದರು ನನ್ನ ಮಗನಿಗೆ ಅದಲ್ಲಾ ನನ್ನ ಕೈಯಿಂದ ಸಾಧ್ಯವಾದಷ್ಟು ನಾನು ಮಾಡುತ್ತಾ ಇದ್ದೇನೆ. ಜೀವನ ಇದೆ ಮುಂದೆ ಸಾಗಲೇ ಬೇಕಾಗಿದೆ. ಮಗನ ಮುಖ ನೋಡಿ ಧೈರ್ಯ ತೆಗೆದುಕೊಂಡಿದ್ದೇನೆ ಎಂದರು.

  • ನನ್ನ ಮಗುವೇ ನನ್ನ ಶಕ್ತಿ, ಮಗನನ್ನು ನೋಡಿದಾಗ ಚಿರು ಕಾಣಿಸ್ತಾರೆ – ಮೇಘನಾ

    ನನ್ನ ಮಗುವೇ ನನ್ನ ಶಕ್ತಿ, ಮಗನನ್ನು ನೋಡಿದಾಗ ಚಿರು ಕಾಣಿಸ್ತಾರೆ – ಮೇಘನಾ

    ಬೆಂಗಳೂರು: ನನ್ನ ಮಗುವೇ ನನ್ನ ಶಕ್ತಿ ಆಗಿದ್ದು ಚಿರು ಎಲ್ಲ ನನ್ನ ಕೈಯಿಂದ ಮಾಡಿಸಿದ್ದಾರೆ. ಅಗಲಿಕೆಯ ನೋವು ಮರೆಯೋದು ಅಸಾಧ್ಯ. ಆದರೆ ನನ್ನ ಮಗುವನ್ನು ನೋಡಿದಾಗ ಚಿರು ಕಾಣಿಸ್ತಾರೆ ಎಂದು ಹೇಳಿ ಮೇಘನಾ ಸರ್ಜಾ ಕಣ್ಣೀರು ಹಾಕಿದ್ದಾರೆ.

    ಇಂದು ಚಿರು ಮಗುವಿನ ತೊಟ್ಟಿಲ ಶಾಸ್ತ್ರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ದಿನಗಳ ಬಳಿಕ ಮಧ್ಯಮಗಳ ಜೊತೆ ಮಾತನಾಡಿದ ಮೇಘನಾ ಸರ್ಜಾ, ಕಷ್ಟದ ಸಮಯವನ್ನು ಫೇಸ್ ಮಾಡುವುದನ್ನು ನಾನು ಚಿರುನಿಂದ ಕಲಿತೆ. ಚಿರು ಅಂದ್ರೆ ನನ್ನ ಹ್ಯಾಪಿನೆಸ್. ಮಗ ಬಂದಿರೋದು ಡಬಲ್ ಸಂಭ್ರಮ ಬಂದಿದೆ ಎಂದು  ಅಗಲಿಕೆಯ ನೋವಿನಲ್ಲೂ ಸಂತಸ ವ್ಯಕ್ತಪಡಿಸಿದರು.

     

    ಚಿರು ಬೂದಿ ಮುಚ್ಚಿದ ಕೆಂಡದಂತೆ. ಆದರೆ ಈ ರೀತಿ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಇಂದು ಮಗನ ತೊಟ್ಟಿಲಶಾಸ್ತ್ರ. ಇದು ನನ್ನ ಪಾಲಿಗೆ ಮರೆಯಲಾಗದ್ದು ಎಂದು ಹೇಳಿದರು.

    ಬಹಳ ದಿನಗಳ ಬಳಿಕ ನಾನು ಮಾಧ್ಯಮದ ಮುಂದೆ ಬಂದಿದ್ದೇನೆ. ನೀವು ನನ್ನನ್ನ ಮನೆ ಮಗಳಾಗಿ ನೋಡಿದ್ದೀರಿ. ನಿಮಗೆ ಎಷ್ಟು ಸಮಯ ಕೊಟ್ಟರೂ ಸಾಲುವುದಿಲ್ಲ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಮೇಘನಾ ತಿಳಿಸಿದರು.

  • ಜೂ. ಚಿರುವನ್ನು ಎತ್ತಿ ಮುದ್ದಾಡಿದ ಧ್ರುವ ಸರ್ಜಾ

    ಜೂ. ಚಿರುವನ್ನು ಎತ್ತಿ ಮುದ್ದಾಡಿದ ಧ್ರುವ ಸರ್ಜಾ

    ಬೆಂಗಳೂರು: ಮೇಘನಾ ರಾಜ್‌ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಧ್ರುವ ಸರ್ಜಾ ಜೂನಿಯರ್‌ ಚಿರಂಜೀವಿಯನ್ನು ಎತ್ತಿ ಮುದ್ದಾಡಿದ್ದಾರೆ.

    ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಮೇಘನಾ ರಾಜ್‌ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಮಗು ಜನಿಸಿದ ವಿಚಾರ  ತಿಳಿದು ಕೂಡಲೇ ಧ್ರುವ ಸರ್ಜಾ ಖಾಸಗಿ ಆಸ್ಪತ್ರೆಗೆ ಆಗಮಿಸಿ  ಮಗುವನ್ನು ಎತ್ತಿ ಸಂಭ್ರಮಿಸಿದ್ದಾರೆ.

    ಇನ್‌ಸ್ಟಾದಲ್ಲಿ ಧ್ರುವ ಅವರು ಬಾಯ್ ಬೇಬಿ‌ ಎಂದು ಬರೆದರೆ ಪತ್ನಿ ಪ್ರೇರಣಾ ಅವರು ಮೇಘನಾ ಚಿರು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

    ಸುಂದರ್ ರಾಜ್, ಪ್ರಮೀಳಾ , ಪನ್ನಗಾಭರಣ ಹಾಗೂ ಮೇಘನಾ ಸ್ನೇಹಿತರು ಖಾಸಗಿ ಆಸ್ಪತ್ರೆಯ ಬಳಿಯೇ ಇದ್ದು ಮೇಘನಾ ಆರೈಕೆ ಮಾಡುತ್ತಿದ್ದಾರೆ. ಗಂಡು ಮಗು ಜನನವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ಅಕ್ಟೋಬರ್‌ ತಿಂಗಳಲ್ಲಿ ಸರ್ಜಾ ಕುಟುಂಬಕ್ಕೆ ವಿಶೇಷ ತಿಂಗಳು. ಇದರ ಜೊತೆ ಮೇಘನಾ ರಾಜ್‌ ಹಾಗೂ ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ಮಾಡಿಕೊಂಡ ದಿನವೇ ಮಗು ಜನಿಸಿದ್ದು ವಿಶೇಷ. ಅಕ್ಟೋಬರ್‌ 17 ರಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ ಆಗಿದ್ದರೆ ಅಕ್ಟೋಬರ್ 4ರಂದು ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿತ್ತು.

    ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿತ್ತು. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು. ಈಗ ಆಸ್ಪತ್ರೆಯಲ್ಲೂ ಮೇಘನಾ ವಿಶ್ರಾಂತಿ ಪಡೆಯುತ್ತಿರುವ ವಾರ್ಡ್‌ನಲ್ಲಿ ಚಿರಂಜೀವಿ ಜೊತೆಗಿರುವ ಫೋಟೋಗಳನ್ನು ಹಾಕಲಾಗಿತ್ತು.

    ಬೆಳ್ಳಿ ತೊಟ್ಟಿಲು ಖರೀದಿ: ಮನೆಗೆ ಮುದ್ದಾದ ಮಗು ಬರುವ ಮುನ್ನವೇ ಧ್ರುವ ಸರ್ಜಾ ಅವರು ಬೆಳ್ಳಿ ತೊಟ್ಟಿಲು ಖರೀದಿಸಿದ್ದರು. ನವರತ್ನ ಜ್ಯೂವೆಲರ್ಸ್ ನಲ್ಲಿ ಸುಮಾರು 10 ಲಕ್ಷ ರೂ.ನೀಡಿ ಬೆಳ್ಳಿಯ ತೊಟ್ಟಿಲು ಜೊತೆಗೆ ಚಿನ್ನದ ಬಟ್ಟಲನ್ನು ಖರೀದಿ ಮಾಡಿದ್ದರು.

    ಅಕ್ಟೋಬರ್ 17 ರಂದು ಚಿರು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿಡಿಯೋ ಪೋಸ್ಟ್ ಮಾಡಿ ಶುಭ ಕೋರಿದ್ದ ಧ್ರುವ ಸರ್ಜಾ, ಹ್ಯಾಪಿ ಬರ್ತ್ ಡೇ ಚಿರು ಎಂದು ಬರೆದು ಹಾರ್ಟ್ ಸಿಂಬಲ್ ಹಾಕಿದ್ದರು. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದರು.

  • ಆಸ್ಪತ್ರೆಗೆ ದಾಖಲಾದ ಮೇಘನಾ ಸರ್ಜಾಗಾಗಿ ವಿಶೇಷ ವಾರ್ಡ್

    ಆಸ್ಪತ್ರೆಗೆ ದಾಖಲಾದ ಮೇಘನಾ ಸರ್ಜಾಗಾಗಿ ವಿಶೇಷ ವಾರ್ಡ್

    ಬೆಂಗಳೂರು: ನಟಿ ಮೇಘನಾ ಸರ್ಜಾ ಇಂದು ಬೆಳಗ್ಗೆ ಬೆಂಗಳೂರಿನ ಕೆ.ಆರ್.ರಸ್ತೆಯ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮೇಘನಾರಿಗಾಗಿ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ. ಮೇಘನಾ ಅವರಿಗಾಗಿ ಸಿದ್ಧಪಡಿಸಲಾಗಿರುವ ವಿಶೇಷ ವಾರ್ಡ್ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನಾಳೆ ಮೇಘನಾ ಸರ್ಜಾರಿಗೆ ಡೆಲಿಬರಿ ಆಗುವ ಸಾಧ್ಯತೆಗಳಿವೆ. ಹಾಗಾಗಿ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಮೇಘನಾ ಅವರು ದಾಖಲಾಗುವ ವಾರ್ಡಿನಲ್ಲಿ ಫೋಟೋಗಳನ್ನ ಹಾಕಿಸಿದ್ದಾರೆ. ಮದುವೆಯಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ತೆಗೆಸಿಕೊಂಡಿರುವ ಒಂದು ಫೋಟೋ ಸಹ ಇದೆ.

    ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಹಿನ್ನೆಲೆ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಮೇಘನಾ ಸರ್ಜಾ, ಖಂಡಿತವಾಗಿ ಚಿರು ಮತ್ತೆ ಮಗುವಿನ ರೂಪದಲ್ಲಿ ಜನ್ಮ ತಾಳುತ್ತಾರೆ. ಆದರೆ ತಾನು ಯಾವಾಗ ಭೂಮಿಗೆ ಬರಬೇಕು ಎಂದು ಚಿರು ಅವರೇ ಇಚ್ಛಿಸಬೇಕು. ನಾನೇನೂ ಹೇಳಕ್ಕಾಗಲ್ಲ ಎಂದರು. ಚಿರು ಜನ್ಮದಿನದಂದ್ಲೇ ಭೂಮಿಗೆ ಬರಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ, ಆದರೂ ಆಗಬಹುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.

    ಅವಳಿ ಮಕ್ಕಳಾಗುತ್ತವೆ ಎಂಬ ಸುದ್ದಿ ಇದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮೇಘನಾ, ನೋಡೋಣ.. ಆದರೂ ಆಗಬಹುದು ಎಂದು ನಕ್ಕರು. ಚಿರು ಕನಸಿನಂತೆ ಸೀಮಂತ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ, ಚಿರು ಅವರ ಕನಸಿನಂತೆ ಧ್ರುವ ಹಾಗೂ ನಮ್ಮ ತಂದೆ-ತಾಯಿ ಒಟ್ಟಾರೆ ನಮ್ಮ ಕುಟುಂಬ ಅದನ್ನು ನನಸು ಮಾಡಿದೆ. ನನಗೆ ತುಂಬಾ ಖುಷಿಯಾಗಿದೆ. ಈ ಬಗ್ಗೆ ಚಿರುಗಂತೂ ಸಿಕ್ಕಾಪಟ್ಟೆನೆ ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.

  • ಚಿರು ಕುಟುಂಬದ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ ಇಂದ್ರಜಿತ್‌

    ಚಿರು ಕುಟುಂಬದ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ ಇಂದ್ರಜಿತ್‌

    ಬೆಂಗಳೂರು: ಡ್ರಗ್ ಮಾಫಿಯಾಗೂ ಚಿರಂಜೀವಿ ಸರ್ಜಾ ಸಾವಿಗೆ ಸಂಬಂಧ ಕಲ್ಪಿಸಿದ್ದಕ್ಕೆ ನಿರ್ಮಾಪಕ, ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಬಹಿರಂಗವಾಗಿ ಚಿರು ಕುಟುಂಬದವರಲ್ಲಿ ಕ್ಷಮೆ ಕೇಳಿದ್ದಾರೆ.

    ಫಿಲ್ಮ್‌ ಚೇಂಬರ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿರಂಜೀವಿ ಸರ್ಜಾ ಒಬ್ಬ ಯುವ ಪ್ರತಿಭಾವಂತ ಕಲಾವಿದ. ನನ್ನ ಹೇಳಿಕೆಯಿಂದ ಕುಟುಂಬದವರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

    ಸಾರಾ ಗೋವಿಂದ್, ಉಮೇಶ್ ಬಣಕಾರ್ ಕಾಲ್‌ ಮಾಡಿದ್ದರು. ಇವರಿಗೆ ಗೌರವ ನೀಡುವುದು ನನ್ನ ಕರ್ತವ್ಯ. ಮೇಘನಾರಾಜ್ ಅವರು ಪತ್ರ ಬರೆದು ತುಂಬಾ ನೋವಾಗಿದೆ ಅಂತಾ ಹೇಳಿದ್ದಾರೆ. ಸುಂದರ್ ರಾಜ್ ಮತ್ತೆ ಅವರ ಪತ್ನಿ ನಾನು ಚಿಕ್ಕಮಗು ಇದ್ದಾಗ ಆಟ ಆಡಿಸಿದ್ದಾರೆ. ಅವರ ಮೇಲೆ ನನಗೆ ಗೌರವವಿದೆ. ಚಿರಂಜೀವಿ ಸರ್ಜಾ ಯುವ ನಟನಾಗಿದ್ದು ಉತ್ತಮ ಭವಿಷ್ಯ ಇತ್ತು. ಸಾವಿನ ಬಗ್ಗೆ ಸಂಶಯ ಬಂದ ಕಾರಣಕ್ಕೆ ನಾನು ಹೀಗೆ ಹೇಳಿದೆ. ಆದರೆ ಈಗ ಈ ಹೇಳಿಕೆಯನ್ನು ವಾಪಸ್‌ ಪಡೆಯುತ್ತೇನೆ ಎಂದು ತಿಳಿಸಿದರು.

    ಕೆಲವರು ಬಂದು ಚಿತ್ರರಂಗವನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ಚಿತ್ರರಂಗದ ಒಬ್ಬರು ಅರೆಸ್ಟ್ ಆಗಿರುವುದು ನನಗೆ ನೋವಿದೆ. ಡ್ರಗ್ಸ್‌ ಮಾಫಿಯಾ ವಿರುದ್ಧ ಕೆಲಸ ಮಾಡುತ್ತಿರುವ ಪೊಲೀಸರಿಗೆ ಸೆಲ್ಯೂಟ್ ಹೊಡೆಯಬೇಕು. ನನ್ನ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಇಂದ್ರಜಿತ್‌ ಲಂಕೇಶ್‌ ಹೇಳಿದರು.

    ಸಾ.ರಾ ಗೋವಿಂದ್ ಮಾತನಾಡಿ, ಚಿತ್ರರಂಗದ ಕೊಳೆಯನ್ನು ತೊಳೆಯುವಂತಹ ಕೆಲಸ ಮಾಡಿದ್ದಕ್ಕೆ ಇಂದ್ರಜಿತ್ ಲಂಕೇಶ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

    ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ನನಗೆ ನೋವಾಗಿದ್ದು, ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ನಟಿ ಮೇಘನಾರಾಜ್ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಇಂದು ಫಿಲ್ಮ್‌ ಚೇಂಬರ್ ನಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ ಎನ್.ಎಮ್ ಸುರೇಶ್ ಅವರು ಈ ಬಗ್ಗೆ ಪ್ರಸ್ತಾಪ ಮಾಡಿದ್ದರು.

    ಪತ್ರದಲ್ಲಿ ಇಂದ್ರಜಿತ್ ಮಾತುಗಳ ನನಗೆ ಮಾನಸಿಕ ತೊಳಲಾಟಕ್ಕೆ ತಳ್ಳಿವೆ. ಗರ್ಭಿಣಿ ಆಗಿರುವ ನಾನು ಮಾನಸಿಕ ತೊಳಲಾಟದಲ್ಲಿದ್ದೇನೆ. ನನ್ನ ದಿವಂಗತ ಪತಿ ಮೇಲೆ ಇಂದ್ರಜಿತ್ ಆರೋಪ ಮಾಡಿದ್ದಾರೆ. ಇಂದ್ರಜಿತ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಲಿ ಎಂದು ಪತ್ರದ ಮೂಲಕ ಒತ್ತಾಯಿಸಿದ್ದರು.