Tag: ಮೇಘನಾ ರಾಜ್ ಸರ್ಜಾ

  • ಸ್ಯಾಂಡಲ್ ವುಡ್ ನಲ್ಲೂ ರಂಗೇರಿದ ಚುನಾವಣೆ ಚಟುವಟಿಕೆ: ಯಾರು, ಯಾವ ಕ್ಷೇತ್ರ?

    ಸ್ಯಾಂಡಲ್ ವುಡ್ ನಲ್ಲೂ ರಂಗೇರಿದ ಚುನಾವಣೆ ಚಟುವಟಿಕೆ: ಯಾರು, ಯಾವ ಕ್ಷೇತ್ರ?

    ವಿಧಾನಸಭಾ (Assembly) ಚುನಾವಣೆ (Election) ಘೋಷಣೆಯಾದ ಬೆನ್ನಲ್ಲೇ ಚಿತ್ರರಂಗದಲ್ಲೂ ಅದರ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ನಾನಾ ರೀತಿಯ ಚಟುವಟಿಕೆಗಳು ಕೂಡ ಗರಿಗೆದರಿವೆ. ಈಗಾಗಲೇ ಸುಮಲತಾ ಅಂಬರೀಶ್, ತಾರಾ, ಜಗ್ಗೇಶ್, ಬಿ.ಸಿ.ಪಾಟೀಲ್, ಕುಮಾರ ಬಂಗಾರಪ್ಪ, ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ಶ್ರುತಿ, ಜಯಮಾಲಾ, ಉಮಾಶ್ರೀ, ಸಾಯಿಕುಮಾರ್, ಅನಂತ್ ನಾಗ್, ನಿಖಿಲ್ ಕುಮಾರಸ್ವಾಮಿ, ಪೂಜಾ ಗಾಂಧಿ ನೇರವಾಗಿ ನಾನಾ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದರೆ, ಇನ್ನೂ ಅಚ್ಚರಿಯ ಹೆಸರುಗಳು ಪಕ್ಷಕ್ಕೆ ಆಗಮಿಸುತ್ತಿರುವ ಕುರಿತು ಮಾಹಿತಿಗಳು ಹೊರಬೀಳುತ್ತಿವೆ.

    ಎರಡ್ಮೂರು ವಾರಗಳ ಹಿಂದೆಯಷ್ಟೇ ಅನಂತ್ ನಾಗ್ (Anant Nag) ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಈ ಕುರಿತು ಬಿಜೆಪಿ ಮುಖಂಡರು ಕೂಡ ಮಾಹಿತಿ ಹಂಚಿಕೊಂಡಿದ್ದರು. ಕೊನೆ ಕ್ಷಣದಲ್ಲಿ ಅನಂತ್ ನಾಗ್ ಬಿಜೆಪಿ ಸೇರಿಕೊಳ್ಳಲೇ ಇಲ್ಲ. ನಡೆಯಬೇಕಿದ್ದ ಕಾರ್ಯಕ್ರಮ ಅವರ ಅನುಪಸ್ಥಿತಿಯಲ್ಲಿ  ನೆರವೇರಿತು. ಆದರೆ, ಅವರು ಗೈರಿಗೆ ಕಾರಣವನ್ನು ಯಾರೂ ನೀಡಲಿಲ್ಲ. ಸ್ವತಃ ಅನಂತ್ ನಾಗ್ ಅವರೇ ಈ ಕುರಿತು ಮಾತನಾಡಲಿಲ್ಲ. ಇದನ್ನೂ ಓದಿ: ಐಟಂ ಸಾಂಗ್ ಒಪ್ಪಿಕೊಂಡಿದ್ದಕ್ಕೆ ಕಾರಣವಿದೆ : ಸಮಂತಾ ಸಿಡಿಸಿಸ ಹೊಸ ಬಾಂಬ್

    ಈಗ ಮತ್ತೊಂದು ಅಚ್ಚರಿಯ ಹೆಸರು ಕೇಳಿ ಬಂದಿದೆ. ನಟ ಮೇಘನಾ ರಾಜ್ ಸರ್ಜಾ (Meghana Raj Sarja) ಬಿಜೆಪಿಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಈ ಕುರಿತು ಅವರು ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎನ್ನುವ ಸುದ್ದಿಯೂ ಬಲವಾಗಿ ಕೇಳಿ ಬರುತ್ತಿದೆ. ಮೇಘನಾ ತಂದೆ ತಾಯಿ ಒಪ್ಪಿದ್ದಾರೆ ಎಂದು, ಸರ್ಜಾ ಕುಟುಂಬ ಒಪ್ಪಿಲ್ಲ ಎನ್ನುವ ಸುದ್ದಿಗಳು ರೆಕ್ಕೆಪುಕ್ಕದೊಂದಿಗೆ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿವೆ. ಆದರೆ, ಮೇಘನಾ ಈ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹಾಗಾಗಿ ಅವರೇ ಈ ಕುರಿತು ಅಧಿಕೃತ ಮಾಹಿತಿ ಕೊಡಬೇಕು.

    ಈ ನಡುವೆ ನಟಿ ರಮ್ಯಾ (Ramya) ಅವರ ಹೆಸರು ಆಗಾಗ್ಗೆ ಕೇಳಿ ಬರುತ್ತಿದೆ. ಈ ಬಾರಿ ಕಾಂಗ್ರೆಸ್ ನಿಂದ ರಮ್ಯಾ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಪದ್ಮನಾಭ ನಗರ, ಮಂಡ್ಯ ಹಾಗೂ ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ರಮ್ಯಾ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಕೂಡ ಅಧಿಕೃತವಾಗಬೇಕು.

    ನಾನು ರಾಜಕಾರಣದಲ್ಲಿ ಇರುವತನಕ ನನ್ನ ಪುತ್ರ ಅಭಿಷೇಕ್ (Abhishek Ambarish) ಚುನಾವಣೆ ಕಣದಲ್ಲಿ ಇರುವುದಿಲ್ಲ ಎಂದು ಸ್ವತಃ ಸುಮಲತಾ ಅಂಬರೀಶ್ ಅವರೇ ಹೇಳಿದ್ದರೂ, ಆಗಾಗ್ಗೆ ಅಭಿಷೇಕ್ ಹೆಸರು ಚುನಾವಣೆಯ ಅಖಾಡದಲ್ಲಿ ಕೇಳಿ ಬರುತ್ತಿದೆ. ಮಂಡ್ಯ ಜಿಲ್ಲೆಯಲ್ಲೇ ಒಂದು ಕ್ಷೇತ್ರವನ್ನು ಅಭಿಷೇಕ್ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಮಂಡ್ಯ ರಾಜಕೀಯ ವಲಯದ ಮಾತು. ಆದರೆ, ಅಭಿಷೇಕ್ ಚುನಾವಣೆಗೆ ನಿಲ್ಲಲಾರರು ಎನ್ನುವುದು ಅವರ ಆಪ್ತರು ಪ್ರತಿಕ್ರಿಯೆ.

    ಈ ಹಿಂದೆ ರಾಜಕಾರಣ ಪ್ರವೇಶಿಸಿರುವ ನಿರ್ಮಾಪಕ ಕೆ.ಮಂಜು ಈ ಬಾರಿ ಪದ್ಮನಾಭ ನಗರದಿಂದ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವ ಪಕ್ಷದಿಂದ ಅವರು ಸ್ಪರ್ಧಿಸುತ್ತಾರೆ ಎನ್ನುವುದು ಇನ್ನೂ ಅಧಿಕೃತವಾಗಿಲ್ಲವಾದ್ದರೂ, ಈ ಸುದ್ದಿಯಂತೂ ಬಲವಾಗಿ ಕೇಳಿ ಬರುತ್ತಿದೆ. ಯಾವ ಪಕ್ಷದಿಂದ ಇವರು ಸ್ಪರ್ಧಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    ಈಗಾಗಲೇ ಆಮ್ ಆದ್ಮಿ ಪಾರ್ಟಿ ಕನ್ನಡದ ನಟ ಟೆನ್ನಿಸ್ ಕೃಷ್ಣ ಮತ್ತು ನಿರ್ದೇಶಕ ಸ್ಮೈಲ್ ಶ್ರೀನು ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಟೆನ್ನಿಸ್ ಕೃಷ್ಣ ಅವರು ತುರುವೇಕೆರೆಯಿಂದ ಸ್ಪರ್ಧಿಸುತ್ತಿದ್ದರೆ, ಸ್ಮೈಲ್ ಶ್ರೀನು ಅವರಿಗೆ (ಶ್ರೀನಿವಾಸ್ ಎನ್) ಕೂಡ್ಲಿಗಿ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆಗಿದೆ. ಇಬ್ಬರೂ ಹಲವಾರು ದಿನಗಳಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕೂಡ ಆರಂಭಿಸಿದ್ದಾರೆ.

  • ಸೂಪರ್ ಮ್ಯಾನ್ ಆದ ರಾಯನ್

    ಸೂಪರ್ ಮ್ಯಾನ್ ಆದ ರಾಯನ್

    ಬೆಂಗಳೂರು: ಮೇಘನಾ ರಾಜ್ ಸರ್ಜಾ ಪುತ್ರ, ಜೂನಿಯರ್ ಚಿರು ಎಂದೇ ಜನಪ್ರಿಯವಾಗಿರುವ ರಾಯನ್ ರಾಜ್ ಸರ್ಜಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈ ಮೂಲಕ ಅಭಿಮಾನಿಗಳಿಗೆ ಅಪ್‍ಡೇಟ್ಸ್ ನೀಡುತ್ತಿರುತ್ತಾರೆ. ಅದೇ ರೀತಿ ಇದೀಗ ಸೂಪರ್ ಮ್ಯಾನ್ ಬ್ಯಾಂಡ್ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಈ ಕುರಿತು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅವರು, ದಿಸ್ ಈಸ್ ಫನ್, ವೇರಿಂಗ್ ಮೈ ಫುಲ್ ಟೈಮ್ ಜಾಬ್ ಟ್ಯಾಗ್. ಮಾಮ್ ಆ್ಯಂಡ್ ಮೈ ಲಿಟಲ್ ಸೂಪರ್ ಮ್ಯಾನ್ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ನಾಮಕರಣ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಸೂಪರ್ ಮ್ಯಾನ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋಗಳನ್ನು ಮೇಘನಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಫೋಟೋ ಚೆನ್ನಾಗಿ ಬಂದಿದ್ಯಾ ಅಂತ ಚೆಕ್ ಮಾಡ್ತಿದ್ದಾನೆ ರಾಯನ್: ಸುಧಾರಾಣಿ

     

    View this post on Instagram

     

    A post shared by Meghana Raj Sarja (@megsraj)

    ಇತ್ತೀಚೆಗಷ್ಟೇ ರಾಯನ್ ರಾಜ್ ನಾಮಕರಣವನ್ನು ಅದ್ಧೂರಿಯಾಗಿ ಮಾಡಲಾಗಿದ್ದು, ಸಿನಿ ತಾರೆಯರು, ಗಣ್ಯರು, ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ಅಲ್ಲದೆ ಈ ಹಿಂದೆ ಸಂಸದೆ ಸುಮಲತಾ, ಅಭಿಷೇಕ್ ಅಂಬರೀಶ್, ಸುಂದರ್ ರಾಜ್, ಧ್ರುವ ಸರ್ಜಾ ಭಾಗಿಯಾಗಿದ್ದರು. ಅಲ್ಲದೆ ಪುಟ್ಟ ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ ಎಂದು ಬರೆದುಕೊಂಡಿದ್ದರು.

    ಹೀಗೆ ಮೇಘನಾ ರಾಜ್ ಸರ್ಜಾ ಮಗನ ನಾಮಕರಣ ಕಾರ್ಯಕ್ರಮ ಇತ್ತೀಚೆಗೆ ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟ- ನಟಿಯರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ರಾಯನ್ ರಾಜ್ ಸರ್ಜಾ ಎಂಬ ಹೆಸರಿನ ಬಗ್ಗೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಇದಕ್ಕೆ ಖುದ್ದು ಮೇಘನಾ ಸ್ಪಷ್ಟನೆ ನೀಡಿದ್ದರು.

  • ಬ್ಯಾಕ್ ಟು ಬೇಸಿಕ್ಸ್ – ಮೇಘನಾ ಪೋಸ್ಟ್​ಗೆ ಹಿರಿ ಹಿರಿ ಹಿಗ್ಗಿದ ಫ್ಯಾನ್ಸ್

    ಬ್ಯಾಕ್ ಟು ಬೇಸಿಕ್ಸ್ – ಮೇಘನಾ ಪೋಸ್ಟ್​ಗೆ ಹಿರಿ ಹಿರಿ ಹಿಗ್ಗಿದ ಫ್ಯಾನ್ಸ್

    ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ತಾಯಿಯಾದ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ಫೇಸ್ ಮಾಡಿರುವ ಸಂತಸದ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕ್ಯಾಮೆರಾ ಮುಂದೆ ಸ್ಕ್ರಿಪ್ಟ್ ಓದುತ್ತಿರುವ ಫೋಟೋ ಶೇರ್ ಮಾಡಿಕೊಂಡಿರುವ ಮೇಘನಾ ಸರ್ಜಾಗೆ ಆಪ್ತರು ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

    ಮೇಘನಾ ಸರ್ಜಾ ತಾಯಿಯಾದ ಬಳಿಕ ಶೀಘ್ರದಲ್ಲೇ ಬಣ್ಣದ ಲೋಕಕ್ಕೆ ಹಿಂದಿರುಗುವ ಸುಳಿವನ್ನು ಕೆಲ ದಿನಗಳ ಹಿಂದೆಯೇ ನೀಡಿದ್ದರು. ಇದೀಗ ಕ್ಯಾಮೆರಾ ಫೇಸ್ ಮಾಡಿ, ಮತ್ತೆ ಹಳೆಯ ಜೀವನದ ಲಯಕ್ಕೆ ಮರಳುತ್ತಿದ್ದಾರೆ. ಇವತ್ತು ಜೂನಿಯರ್ ಚಿರುಗೆ ಒಂಬತ್ತು ತಿಂಗಳು. ವರ್ಷದ ಬಳಿಕ ಕ್ಯಾಮೆರಾ ಫೇಸ್ ಮಾಡುತ್ತಿದ್ದೇನೆ ಎಂದು ಬರೆದು ಹಾರ್ಟ್ ಎಮೋಜಿ ಹಾಕಿ, ಬ್ಯಾಕ್ ಟು ಬೇಸಿಕ್ಸ್ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಇದನ್ನೂ ಓದಿ: ಅಪ್ಪ ಚಿರುವನ್ನು ಗುರುತಿಸುತ್ತಿರೋ ನನ್ನ ಮಗನನ್ನು ನೋಡಲು ಹೆಮ್ಮೆಯಾಗ್ತಿದೆ: ಮೇಘನಾ

     

    View this post on Instagram

     

    A post shared by Meghana Raj Sarja (@megsraj)

    ಇನ್ನು ಮೇಘನಾ ಸರ್ಜಾ ಪೋಸ್ಟ್ ಗೆ ರಾಗಿಣಿ ಪ್ರಜ್ವಲ್, ಸಂಯುಕ್ತಾ ಹೊರನಾಡ, ಸಿಂಪಲ್ ಸುನಿ ಸೇರಿದಂತೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್ ಮೊಗದಲ್ಲಿ ಜೂನಿಯರ್ ಚಿರು ಮಂದಹಾಸ ತಂದಿದ್ದಾನೆ. ಇದನ್ನೂ ಓದಿ: ಮೇಘನಾ, ಜೂ. ಚಿರುವಿಗೆ ಆಂಜನೇಯನ ದರ್ಶನ ಮಾಡಿಸಿದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ!

  • ನೀನು ದೇವರಮನೆಗೆ ಹೋಗಿ ವರುಷವಾಯ್ತು: ಮೇಘನಾ ರಾಜ್ ಸರ್ಜಾ

    ನೀನು ದೇವರಮನೆಗೆ ಹೋಗಿ ವರುಷವಾಯ್ತು: ಮೇಘನಾ ರಾಜ್ ಸರ್ಜಾ

    – 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ನಿಧನರಾಗಿ ಜೂನ್ ಏಳಕ್ಕೆ ವರ್ಷವಾಗುತ್ತೆ. ಪತ್ನಿ ಮೇಘನಾ ರಾಜ್ ಸರ್ಜಾ, ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ನೀನು ದೇವರ ಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರುಷ! ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ, ಉದಾರಗುಣ ಮತ್ತು ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದಿರಬೇಕು. ಆ ಪ್ರಾರ್ಥನೆಯಲ್ಲೇ, ಎಂದೆಂದೂ ನಿನ್ನ ನೆನೆಪಿನಲ್ಲೇ, ನಿನ್ನ ಪ್ರೀತಿಯ ನಿನ್ನ ಕುಟುಂಬ ಎಂದು ಬರೆದು ಚಿರು ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಮ್ಮ ನೋವು ದೂರ ಮಾಡಲು ಮಗು ರೂಪದಲ್ಲಿ ಚಿರು ಬಂದಿದ್ದಾನೆ – ಅರ್ಜುನ್ ಸರ್ಜಾ

    ಇಂದು ಬೆಳಗ್ಗೆ ಪತಿಯ ಜೊತೆಗಿನ ಫೋಟೋ ಹಂಚಿಕೊಂಡು ಚಿರುನನ್ನ ನೆನಪು ಮಾಡಿಕೊಂಡಿದ್ದರು. ಸಂದರ್ಶನದಲ್ಲಿ ಚಿರಂಜೀವಿ ಸರ್ಜಾ ನಿಧನದ ಕೊನೆ ಕ್ಷಣಗಳನ್ನು ಹೇಳಿದ್ದರು. 2020 ರ ಆರಂಭದಲ್ಲಿ ನಾನು ಮತ್ತು ಚಿರಂಜೀವಿ ಸರ್ಜಾ ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷೆಯಲ್ಲಿದ್ದೆವು. ನನಗೆ ಐದು ತಿಂಗಳು ಪೂರ್ಣಗೊಂಡ ನಂತರ ಅಭಿಮಾನಿಗಳಿಗೆ ಈ ಸಿಹಿ ಸುದ್ದಿಯನ್ನು ತಿಳಿಸಬೇಕು ಅಂದುಕೊಂಡಿದ್ದೆವು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಚಿರಂಜೀವಿ ಸರ್ಜಾ ಮನೆಯಲ್ಲಿ ಕುಸಿದುಬಿದ್ದಾಗ ನನಗೆ ದೊಡ್ಡ ಆಘಾತವಾಗಿತ್ತು. ನಾವು ಚಿರುನನ್ನು ಹಾಗೆ ನೋಡಿರಲಿಲ್ಲ. ಅವನು ಪ್ರಜ್ಞೆ ಕಳೆದುಕೊಂಡು ಸ್ವಲ್ಪ ಸಮಯದ ನಂತರ ಮತ್ತೆ ಪ್ರಜ್ಞೆ ಬಂದಿತ್ತು. ಆದರೆ ನಾವು ಅಂಬುಲೆನ್ಸ್ ಗಾಗಿ ಕಾಯುವ ಬದಲು, ಕುಟುಂಬ ಸದಸ್ಯರು ಎಲ್ಲರೂ ಸೇರಿ ಹತ್ತಿರದ ಆಸ್ಪತ್ರೆಗೆ ಹೋಗಲು ನಿರ್ಧರಿಸಿದೇವು.  ಇದನ್ನೂ ಓದಿ: ಚಿರು ಮಗನನ್ನ 20 ವರ್ಷದ ನಂತ್ರ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

    ವೈದ್ಯರು ಅವನನ್ನು ಎಮರ್ಜೆನ್ಸಿ ಕೋಣೆಗೆ ಕರೆದೊಯ್ದುರು. ಹೃದಯಘಾತವಾಗಿದೆ ಎಂದು ಹೇಳಿದರು. ಇದೆಲ್ಲವೂ ಇಷ್ಟು ಬೇಗ ಸಂಭವಿಸಿತು. ಅವರು ಆಸ್ಪತ್ರೆ ಹೊರಡುವ ಮೊದಲು ನೀನು ಏನು ಟೆನ್ಶನ್ ತಗೋಬೇಡಾ ನನಗೆ ಏನು ಆಗುವುದಿಲ್ಲ ಎಂದು ಅವರು ನನಗೆ ಹೇಳಿರುವ ಕೊನೆಯ ಮಾತಾಗಿದೆ ಎಂದು ಹೇಳುವಾಗ ಮೇಘನಾ ಅವರ ಕಣ್ಣಲ್ಲಿ ನೀರು ಜಾರಿತ್ತು. ಇದನ್ನೂ ಓದಿ: ಚಿರುವಿನ ಕೊನೆಯ ದಿನ ನಡೆದಿದ್ದು ಏನು? – ಬಹಿರಂಗ ಪಡಿಸಿದ ಮೇಘನಾ

    ಕಳೆದ ವರ್ಷ ಜೂನ್ 7 ರಂದು ಭಾರೀ ಹೃದಯಾಘಾತದಿಂದ ಬಳಲುತ್ತಿದ್ದ ಚಿರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 39 ವರ್ಷದ ಚಿರಂಜೀವಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಸ್ಯಾಂಡಲ್‍ವುಡ್, ಅಭಿಮಾನಿಗಳು, ಕುಟುಂಬಸ್ಢರಲ್ಲಿ ನಂಬಲು ಅಸಾಧ್ಯವಾಗದ ಸುದ್ದಿಯಾಗಿತ್ತು. ಆದರೆ ಈ ಸುದ್ದಿ ತುಂಬಾ ಕಷ್ಟಕರವಾಗಿದ್ದರೂ ನಂಬಲೇ ಬೇಕಾದ ಸತ್ಯವಾಗಿತ್ತು. ಇದನ್ನೂ ಓದಿ: ಚಿರುವನ್ನು ನೆನಪಿಸಿಕೊಂಡ ಮೇಘನಾ ರಾಜ್

  • ಜೂನಿಯರ್ ಚಿರುಗೆ ಆರು ತಿಂಗಳ ಸಂಭ್ರಮ

    ಜೂನಿಯರ್ ಚಿರುಗೆ ಆರು ತಿಂಗಳ ಸಂಭ್ರಮ

    ಬೆಂಗಳೂರು: ಜೂನಿಯರ್ ಚಿರು ಆರು ತಿಂಗಳ ಸಂಭ್ರಮದಲ್ಲಿದ್ದು, ಸರ್ಜಾ ಕುಟುಂಬ ಸುಂದರ ಫೋಟೋಶೂಟ್ ಮಾಡಿಸಿದೆ. ಸದ್ಯ ಆರರ ಸಂಭ್ರಮದಲ್ಲಿ ಪುಟ್ಟ ಚಿರು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ಮೇಘನಾ ರಾಜ್ ಸರ್ಜಾ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಮಗನ ಫೋಟೋಗಳು ಶೇರ್ ಮಾಡಿಕೊಂಡಿದ್ದಾರೆ. ಮಗ ಆರು ತಿಂಗಳನವನಾದ. ನಾನು ಮತ್ತು ತಂದೆ ಇಬ್ಬರು ಆತನನ್ನು ತುಂಬಾ ಪ್ರೀತಿಸುತ್ತೇವೆ ಎಂದು ಬರೆದು ಆರರ ಸಂಭ್ರಮ ಆಯೋಜಿಸಿದ ಎಲ್ಲರಿಗೂ ಮೇಘನಾ ರಾಜ್ ಧನ್ಯವಾದ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಮ್ಮನ ಮಗ ಅಂತ ಬರೆದುಕೊಂಡು ಮುದ್ದಾದ ಫೋಟೋವನ್ನ ಮೇಘನಾ ಹಂಚಿಕೊಂಡಿದ್ದರು.

     

    View this post on Instagram

     

    A post shared by Meghana Raj Sarja (@megsraj)

    ಮಗುವಿಗೇ ಮೇಘನಾಳೇ ತಂದೆ-ತಾಯಿಯಾಗಿದ್ದಾಳೆ. ನಾನು ಪ್ರೀತಿಯಿಂದ ಮಗುವಿಗೆ ಚಿಂಟೂ ಎಂದು ಕರೆಯಬೇಕೆಂದುಕೊಂಡಿದ್ದೇನೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ ಆ ಹೆಸರು ಆಯ್ಕೆ ಮಾಡಿದ್ದೇನೆ. ಆದ್ರೆ ಮೇಘನಾ ಮಗುವನ್ನ ಪಾಪು ಅಂತ ಕರೆಯುತ್ತಾಳೆ ಎಂದು ತಂದೆ ಸುಂದರ್ ರಾಜ್ ಹೇಳಿದ್ದರು. ಅಕ್ಟೋಬರ್ 22ರಂದು ಜೂನಿಯರ್ ಹುಟ್ಟಿದ ಕೂಡಲೇ ಮೇಘನಾ ಅವರ ಆಸೆಯಂತೆ ಮಗುವನ್ನ ಚಿರಂಜೀವಿ ಫೋಟೋ ಮುಂದೆ ಹಿಡಿದು ತೋರಿಸಲಾಗಿತ್ತು.

  • ಅಮ್ಮನ ಕಿರುಬೆರಳು ಹಿಡಿದ ಜೂನಿಯರ್ ಚಿರು

    ಅಮ್ಮನ ಕಿರುಬೆರಳು ಹಿಡಿದ ಜೂನಿಯರ್ ಚಿರು

    ಬೆಂಗಳೂರು: ಜೂನಿಯರ್ ಚಿರು ಅಮ್ಮನ ಕಿರುಬೆರಳು ಹಿಡಿದಿರುವ ಮುದ್ದಾದ ಫೋಟೋವನ್ನ ಮೇಘನಾ ರಾಜ್ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹಾಲಿನಲ್ಲಿ ಅದ್ದಿದಂತೆ ಕಾಣುವ ಪುಟ್ಟ ಕಂದನ ಕೋಮಲ ಕರಗಳಿಗೆ ನೋಡುಗರ ದೃಷ್ಟಿ ತಾಕುವಂತಿದೆ.

    ಮಹಿಳೆಗೆ ಅಮ್ಮನ ಪದವಿಯೇ ಅತ್ಯುನ್ನತ ಸ್ಥಾನ ಅನ್ನೋ ಮಾತಿದೆ. ಮಗುವಿನ ಆಗಮನದ ಜೊತೆಯಲ್ಲಿ ಅಮ್ಮನ ಜನ್ಮವೂ ಆಗುತ್ತೆ. ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತವನ್ನ ತಾಯಿ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಅದು ಕಿರುಬೆರಳು ಹಿಡಿದು, ಅಮ್ಮ ಎಂದು ಕರೆಯುವರೆಗೂ ಪ್ರತಿ ಹಂತದಲ್ಲಿಯೂ ತಾಯಿ ಜೊತೆಯಲ್ಲಿರುತ್ತಾಳೆ. ಕಂದನ ಪ್ರತಿ ಬೆಳವಣಿಗೆ ಹಂತಗಳು ತಾಯಿಯನ್ನ ಪುಳುಕವನ್ನುಂಟು ಮಾಡುತ್ತೇವೆ.

     

    View this post on Instagram

     

    A post shared by Meghana Raj Sarja (@megsraj)

    ಹಳದಿ ಮತ್ತು ಕಪ್ಪು ಬಣ್ಣದ ಶ್ವೆಟರ್ ತೊಟ್ಟು ಕೈಗೊಂದು ಕೆಂಪು ಲೇಸ್ ಕಟ್ಟಿಕೊಂಡ ಜೂನಿಯರ್ ಚಿರು, ತಾಯಿ ಮೇಘಾನ ಕಿರುಬೆರಳನ್ನ ತನ್ನ ಇಡೀ ಕೈಯಿಂದ ಹಿಡಿಯುವ ಪ್ರಯತ್ನದಲ್ಲಿದ್ದಾನೆ. ಇದೊಂದು ಮಿರಾಕಲ್. ನನ್ನ ಪುಟ್ಟ ಕಂದ ತನ್ನ ಪುಷ್ಪ ದಳದಂತಹ ಕೈಗಳಿಂದ ನನ್ನನ್ನ ಬೆರಳು ಹಿಡಿಯಲು ಪಯತ್ನಿಸುತ್ತಿದೆ. ಇದು ದೇವರು ನೀಡಿದ ಅಮೂಲ್ಯ ಉಡುಗೊರೆ ಎಂದು ಮೇಘನಾ ರಾಜ್ ತಾಯಿಯ ಅನುಭವವನ್ನ ಕೆಲ ಸಾಲುಗಳಲ್ಲಿ ಬರೆದುಕೊಂಡಿದ್ದಾರೆ.

  • ತಂಗಿಗೆ ಭಾವನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಮೇಘನಾ

    ತಂಗಿಗೆ ಭಾವನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಮೇಘನಾ

    ಬೆಂಗಳೂರು: ಧ್ರುವ ಸರ್ಜಾ ಪತ್ನಿ ಪ್ರೇರಣಾ ಹುಟ್ಟುಹಬ್ಬದ ಸಂಭ್ರದಲ್ಲಿದ್ದು, ಧ್ರುವ ಸರ್ಜಾ ಪತ್ನಿಗೆ ಸರ್ಪ್ರೈಸ್ ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ. ಅದೇ ರೀತಿ ಚಿರು ಪತ್ನಿ ಮೇಘನಾ ರಾಜ್ ಸರ್ಜಾ ಭಾವನಾತ್ಮಕವಾಗಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಮಡಿರುವ ಮೇಘನಾ, ಹ್ಯಾಪಿ ಬರ್ತ್‍ಡೇ ಸಿಲ್ ಅದ್ಭುತವಾಗಿ ಬದುಕಿ. ನೀನೊಂದು ಸುಂದರ ಆತ್ಮ ಎಂದು ಬರೆಯುವ ಮೂಲಕ ಶುಭ ಕೋರಿದ್ದಾರೆ. ಇದಕ್ಕೆ ಪ್ರೇರಣಾ ಅವರು ಪ್ರತಿಕ್ರಿಯಿಸಿದ್ದು, ಥ್ಯಾಂಕ್ಯೂ ಸೋ ಮಚ್ ಸಿಲ್‍ಮಾ ಎಂದಿದ್ದಾರೆ.

    ಧ್ರುವ ಸರ್ಜಾ ಪತ್ನಿ ಜೊತೆ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿದ್ದು, ಬೀಚ್‍ನ ಹೋಟೆಲ್‍ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಸುಂದರವಾದ ಲೈಟಿಂಗ್ಸ್, ಸಿಡಿ ಮದ್ದು ಸೇರಿದಂತೆ ಸಮುದ್ರ ತೀರದಲ್ಲಿ ಫುಲ್ ಎಂಜಾಯ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಈ ಕುರಿತು ಒಂದೂವರೆ ನಿಮಿಷದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಧ್ರುವ ಸರ್ಜಾ ಪತ್ನಿಗೆ ಶುಭಾಶಯ ತಿಳಿಸಿದ್ದಾರೆ. ಹ್ಯಾಪಿ ಬರ್ತ್‍ಡೇ ಮೈ ಫ್ರಂಡ್, ಮೈ ವೈಫ್ ಆ್ಯಂಡ್ ಮೈ ಲವ್ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Dhruva Sarja (@dhruva_sarjaa)

    ಸದ್ಯ ಮೇಘನಾ ರಾಜ್ ಸರ್ಜಾ ಮತ್ತು ಅವರ ಮಗನಿಗೂ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಮೇಘಾನ ಅವರ ತಾಯಿ ಪ್ರಮಿಳಾ ಜೋಷಾಯ್ ಮತ್ತು ತಂದೆ ಸುಂದರ್ ರಾಜ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಎಲ್ಲರೂ ಐಸೋಲೇಟ್ ಆಗಿದ್ದು, ಚಿಕಿತ್ಸೆ ಪಡೆಯುತ್ತುದ್ದಾರೆ. ಹೀಗಾಗಿ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಹೋಟೆಲ್‍ನಲ್ಲಿ ಆಚರಿಸಿದ್ದಾರೆ.

  • ಶೀಘ್ರದಲ್ಲೇ ನಟನೆಗೆ ಮರಳುತ್ತೇನೆ: ಮೇಘನಾ ರಾಜ್ ಸರ್ಜಾ

    ಶೀಘ್ರದಲ್ಲೇ ನಟನೆಗೆ ಮರಳುತ್ತೇನೆ: ಮೇಘನಾ ರಾಜ್ ಸರ್ಜಾ

    ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಮತ್ತೆ ನಟನೆಗೆ ಹಿಂದಿರುಗುವದಾಗಿ ಹೇಳಿದ್ದಾರೆ. ಇದಕ್ಕೆ ತಮ್ಮ ಪತಿ ಚಿರಂಜೀವಿ ಸರ್ಜಾ ಕಾರಣ ಎಂದಿದ್ದಾರೆ.

    ನಟನೆ ನನ್ನ ಬದುಕಾಗಿದ್ದು, ಅದು ನನ್ನ ರಕ್ತದಲ್ಲಿ ಇದೆ. ಪತಿ ಚಿರಂಜೀವಿ ಸರ್ಜಾ, ಇಷ್ಟಪಡುವ ವಸ್ತು ಅಥವಾ ಕೆಲಸದಿಂದ ಎಂದೂ ಹಿಂದೆ ಸರಿಯಕೂಡದು ಅಂತ ಹೇಳುತ್ತಿದ್ದರು. ಹಾಗಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತೇನೆ. ನನ್ನಿಂದ ಎಲ್ಲಿಯವರೆಗೂ ಸಾಧ್ಯವೂ ಅಲ್ಲಿಯವರೆಗೂ ಕಲಾ ವೃತ್ತಿಯಲ್ಲಿ ತೊಡಗಿಕೊಂಡಿರುತ್ತೇನೆ. ಶೀಘ್ರದಲ್ಲೇ ಖಂಡಿತವಾಗಿ ನಟನೆಗೆ ಮರಳುತ್ತೇನೆ ಎಂದು ಮೇಘನಾ ಹೇಳಿಕೊಂಡಿದ್ದಾರೆ.

    ಸದ್ಯ ಮೇಘನಾ ಸರ್ಜಾ ಮತ್ತು ಅವರ ಮಗನಿಗೂ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಮೇಘಾನ ಅವರ ತಾಯಿ ಪ್ರಮಿಳಾ ಜೋಷಾಯ್ ಮತ್ತು ತಂದೆ ಸುಂದರ್ ರಾಜ್ ಕೊರೊನಾ ಸೋಂಕು ತಗುಲಿತ್ತು. ಜೋಕುಮಾರಸ್ವಾಮಿ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಮೇಘನಾ ರಾಜ್ ಬಣ್ಣದ ಲೋಕ ಪ್ರವೇಶಿಸಿದ್ದರು.

  • ಮೂರು ತಿಂಗಳ ನಂತರ ಅದ್ಧೂರಿ ನಾಮಕರಣ – ಜೂನಿಯರ್ ಚಿರುಗೆ ಎರಡು ನಿಕ್ ನೇಮ್

    ಮೂರು ತಿಂಗಳ ನಂತರ ಅದ್ಧೂರಿ ನಾಮಕರಣ – ಜೂನಿಯರ್ ಚಿರುಗೆ ಎರಡು ನಿಕ್ ನೇಮ್

    ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೂರು ತಿಂಗಳ ನಂತರ ಅದ್ಧೂರಿಯಾಗಿ ನಾಮಕರಣ ಮಾಡಲಾಗುವುದು ಎಂದು ಮೇಘನಾ ತಂದೆ ಸುಂದರ್ ರಾಜ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸುಂದರ್ ರಾಜ್, ತಿರುಪತಿ ತಿಮ್ಮಪ್ಪನ ಹರಕೆಯಿಂದ ನನ್ನ ಮೊಮ್ಮಗ ಹುಟ್ಟಿದ್ದಾನೆ. ಕನ್ನಡದ ನೆಲದಲ್ಲಿ ದಸರಾ ಹಬ್ಬದ ವೇಳೆ ಮೊಮ್ಮಗು ಹುಟ್ಟಿರೋದು ಶುಭ ಸೂಚಕ. ನವೆಂಬರ್ 1 ರಂದು ಮೇಘನಾ ರಾಜ್ ಎಲ್ಲರ ಜೊತೆ ಮಾತನಾಡುತ್ತಾರೆ. ಕೊರೊನಾ ಕಾಲದಿಂದಾಗಿ ಮೇಘನಾ ರಾಜ್ ಹೊರಗೆ ಬರುವಂತಿಲ್ಲ ಎಂದರು. ಇದನ್ನೂ ಓದಿ: ಜೂನಿಯರ್ ಚಿರುಗೆ ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು ಖರೀದಿಸಿದ ಧ್ರುವ ಸರ್ಜಾ

    ಅರ್ಜುನ್ ಸರ್ಜಾ ಫೋನ್ ಮಾಡಿ ಮಗುವನ್ನ ಬರಮಾಡಿಕೊಳ್ಳುವದರ ಕುರಿತು ಮಾತಾನಾಡಿದ್ರು. ಅರ್ಜುನ್ ಸರ್ಜಾ ಜೆಂಟಲ್‍ಮ್ಯಾನ್, ಧೃವ ಸರ್ಜಾ ಸೂಪರ್ ಶೋ ಮ್ಯಾನ್. ಮಗು ಹುಟ್ಟಿದ ತಕ್ಷಣ ಎಲ್ಲರಿಗೂ ತೋರಿಸಿ ಸಂಭ್ರಮಿಸಿದರು. ಆದ್ರೆ ತಂದೆ ಮಗಳನ್ನು ನೋಡಿಕೊಳ್ಳುವವನು ವಾಚ್ ಮ್ಯಾನ್. ಆ ಕೆಲಸವನ್ನ ಕೊನೆಯವರೆಗೂ ನಾನು ನಿರ್ವಹಿಸುತ್ತೇನೆ. ಚಿರಂಜೀವಿ ಸರ್ಜಾ ಇಲ್ಲ ಅನ್ನೋದನ್ನ ನಂಬಲು ಆಗುತ್ತಿಲ್ಲ. ಮದುವೆಯಾದ ಎರಡೇ ವರ್ಷದಲ್ಲಿ ಚಿರಂಜೀವಿ ನಮ್ಮನ್ನ ಅಗಲಿ ಹೋದ ಎಂದು ಹೇಳುತ್ತಾ ಭಾವುಕರಾದರು. ಇದನ್ನೂ ಓದಿ: ಮೇಘನಾ, ಜ್ಯೂನಿಯರ್ ಚಿರು ನೋಡಲು ಆಸ್ಪತ್ರೆಗೆ ಬಂದ ಮಲಯಾಳಂ ಸ್ಟಾರ್ ಜೋಡಿ

    ಮಗಳನ್ನ ಕೊಟ್ಟು ಮದುವೆ ಮಾಡಿ ಜವಾಬ್ದಾರಿ ಮುಗಿತು ಅಂದುಕೊಳ್ಳವಾಗಲೇ ಚಿರು ಹೋಗಿ ಬಿಟ್ಟ. ಮದ್ವೆ ಆಗದೆ ಇದ್ರೆ ಯೋಚನೆ ಇರ್ತಾಯಿರಲಿಲ್ಲ. ಈ ರೀತಿಯಾಗಿ ಮಗಳನ್ನು ನೋಡೋಕೆ ಕಷ್ಟ ಆಗುತ್ತದೆ. ಆ ಕುಟುಂಬಕ್ಕೆ ಮಗನ ಕಳೆದುಕೊಂಡ ನೋವಿದೆ, ನಮಗೆ ಅಳಿಯನ ಕಳೆದುಕೊಂಡ ದುಃಖವಿದೆ. ದೇವರು ಸುಂದರವಾದ ಮಗಳನ್ನ ಕೊಟ್ಟ. ಆದ್ರೆ ಆಕೆಗೆ ಸುಂದರವಾದ ಜೀವನ ಕೊಡಲಿಲ್ಲ. ಮಗು ಬೆಳೆಯುವವರೆಗೂ ನನಗೆ ಆಯಸ್ಸು ಕೊಡು ಅಂತ ಕೇಳುತ್ತೇನೆ ಎಂದು ದೇವರಲ್ಲಿ ಪ್ರಾರ್ಥಿಸಿದರು. ಇದನ್ನೂ ಓದಿ: ಥೇಟ್ ಚಿರು ಮೂಗಿನಂತೆ ಮಗುವಿನ ಮೂಗಿದೆ: ಐಶ್ವರ್ಯಾ ಸರ್ಜಾ

    ಎರಡು ನಿಕ್‍ನೇಮ್: ಮಗುವಿಗೇ ಮೇಘನಾಳೇ ತಂದೆ-ತಾಯಿಯಾಗಿದ್ದಾಳೆ. ನಾನು ಪ್ರೀತಿಯಿಂದ ಮಗುವಿಗೆ ಚಿಂಟೂ ಎಂದು ಕರೆಯಬೇಕೆಂದುಕೊಂಡಿದ್ದೇನೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ ಆ ಹೆಸರು ಆಯ್ಕೆ ಮಾಡಿದ್ದೇನೆ. ಆದ್ರೆ ಮೇಘನಾ ಮಗುವನ್ನ ಪಾಪು ಎಂದು ಕರೆಯುತ್ತಾಳೆ ಎಂದು ಹೇಳಿದರು. ಇದನ್ನೂ ಓದಿ: ಮೇಘನಾ ಆಸೆಯಂತೆ ಹುಟ್ಟಿದ ತಕ್ಷಣ ಚಿರುಗೆ ಮಗು ತೋರ್ಸಿದ್ದೇವೆ: ಲಕ್ಷ್ಮಿ ಅಮ್ಮ

    ಚಿರು ಪರವಾಗಿ ಮನೆಗೆ ಬಂದ ಅವನ ಮಗನನ್ನ ಗೋದೂಳಿ ಮುಹೂರ್ತದಲ್ಲಿ ಮನೆಗೆ ಕರೆದುಕೊಂಡು ಬಂದಿದ್ದೇವೆ. ನಾವು ಈ ಮಹೂರ್ತವನ್ನ ನೋಡಿ ಮಗುವನ್ನು ತೋರಿಸಿಬೇಕು ಅಂದು ಕೊಂಡಿದ್ದೇವೆ. ಮೊದಲಿಗೆ ಮಗುವನ್ನ ಪತ್ನಿ ಪರಿಮಳ ಅವರು ನೋಡಿದ್ರು. ಆ ನಂತರ ನಮಗೆ ಮಗು ತೋರಿಸಲಾಯ್ತು. ಆಸ್ಪತ್ರೆಗೆ ಬಂದ ವೀರಾಂಜನೇಯ ಧ್ರುವ ಸರ್ಜಾ, ಸಂಜೀವಿನಿ ಬೆಟ್ಟ ಹಿಡಿದಂತೆ ಮಗು ಹಿಡಿದು ಎಲ್ಲರಿಗೂ ತೋರಿಸಿದನು. ಇದನ್ನೂ ಓದಿ: ಚಿರು ಮಗನನ್ನ 20 ವರ್ಷದ ನಂತ್ರ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

    ಈ ಮಗು ಸರ್ಜಾ ಕುಟುಂಬದ ಕುಡಿ. ಚಿರು ಅನುಪಸ್ಥಿತಿಯಲ್ಲಿಯೇ ಮಗುವನ್ನ ನೋಡಿಕೊಳ್ಳುವುದು ತಾಯಿಯ ಕರ್ತವ್ಯ. ಈ ಸ್ಥಿತಿಯಲ್ಲಿ ಮಗಳನ್ನ ಆರೈಕೆ ಮಾಡೋದು ನಮ್ಮ ಕರ್ತವ್ಯ. ಹಾಗಾಗಿ ಜೂನಿಯರ್ ಚಿರು ನಮ್ಮ ಮನೆಯಲ್ಲಿಯೇ ಬೆಳೆಯಲಿದ್ದಾನೆ. ಮಗು ಇಲ್ಲಿಯೂ ಇರುತ್ತೆ, ಅಲ್ಲಿಯೂ ಇರಬೇಕು. ಎರಡೂ ಕುಟುಂಬಗಳ ಆರೈಕೆಯಲ್ಲಿ ಮಗು ಬೆಳೆಯಲಿದೆ. ಮಗುವಿನ ಮೂಗು ತುಂಬಾನೇ ಚೆನ್ನಾಗಿದೆ. ಅದುವೇ ಮಗುವಿನ ಟ್ರೇಡ್ ಮಾರ್ಕ್ ಎಂದರು.

  • ಚಿರು ಮತ್ತೆ ಹುಟ್ಟಿ ಬರ್ತಾನೆಂದು ಅಂದೇ ಹೇಳಿದ್ದೆ, ಆ ಮಾತು ನಿಜವಾಗಿದೆ: ತಾರಾ

    ಚಿರು ಮತ್ತೆ ಹುಟ್ಟಿ ಬರ್ತಾನೆಂದು ಅಂದೇ ಹೇಳಿದ್ದೆ, ಆ ಮಾತು ನಿಜವಾಗಿದೆ: ತಾರಾ

    ಬೆಂಗಳೂರು: ಮೇಘನಾ ರಾಜ್ ಸರ್ಜಾಗೆ ಗಂಡು ಮಗು ಜನಿಸಿರುವುದು ಇಡೀ ಸ್ಯಾಂಡಲ್‍ವುಡ್‍ನಲ್ಲಿ ಸಂತಸವನ್ನುಂಟು ಮಾಡಿದ್ದು, ಈ ಕುರಿತು ನಟಿ ತಾರಾ ಅನುರಾಧಾ ಸಹ ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚಿರು ಮತ್ತೆ ಹುಟ್ಟಿಬರ್ತಾನೆ ಎಂದು ಚಿರು ಸಾವಿನ ದಿನವೇ ನಾನು ಹೇಳಿದ್ದೆ. ಇವತ್ತು ಆ ಮಾತು ನಿಜವಾಗಿದೆ. ಚಿರು ಇದ್ದಿದ್ದರೆ ಅವನ ಖುಷಿಯನ್ನು ಹೇಳೋದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಆ ಮಟ್ಟಿಗೆ ಸಂತಸ ಪಡುತ್ತಿದ್ದ ಎಂದರು.

    ಮೇಘನಾ ಧೈರ್ಯವಂತೆ, ಚಿರು ಇಲ್ಲದ ದಿನಗಳು ಆಕೆಗೆ ಅದೆಷ್ಟು ಕಷ್ಟವಾಗಿತ್ತು ಎನ್ನುವುದನ್ನು ಹೇಳಲು ಸಾಧ್ಯವೇ ಇಲ್ಲ. ಈಗ ಮತ್ತೆ ಚಿರು ಬಂದಿದ್ದಾನೆ, ಮತ್ತೆ ಅವರ ಕುಟುಂಬದಲ್ಲಿ ನಗು ಬಂದಿದೆ. ನನಗೂ ತುಂಬಾ ಖುಷಿಯಾಗಿದೆ ಎಂದು ತಿಳಿಸಿದರು.

    ಚಿರು ಸ್ನೇಹಿತ ಪನ್ನಗಾಭರಣ ಮಾತನಾಡಿ, ಚಿರು ಮತ್ತೆ ಹುಟ್ಟಿ ಬರುತ್ತಾನೆ ಎಂಬ ನಿರೀಕ್ಷೆ ಇತ್ತು. ವಿಶೇಷ ಎಂದರೆ ಚಿರಂಜೀವಿ ಹಾಗೂ ಮೇಘನಾ ನಿಶ್ಚಿತಾರ್ಥದ ದಿನವೇ ಮಗು ಹುಟ್ಟಿರುವುದು ತುಂಬಾನೇ ಸಂತೋಷ ಆಯಿತು. ಚಿರು ಮತ್ತೆ ನಮಗೆಲ್ಲ ಸಿಕ್ಕ ಎಂದು ಖುಷಿಯಾಯಿತು. ಈ ತಿಂಗಳಲ್ಲೇ ಚಿರು ಸಹ ಹುಟ್ಟಿದ್ದು, ಅವನು ಅಂದುಕೊಂಡತೆಯೇ ಎಲ್ಲ ನೆರವೇರಿದೆ. ಮಗು ಮೇಲೆ ಅವನು ಏನೆಲ್ಲ ಕನಸು ಇಟ್ಟುಕೊಂಡಿದ್ದ ಅದನ್ನೆಲ್ಲ ನಾವು ಈಡೇರಿಸುತ್ತೇವೆ ಎಂದು ಖುಷಿಪಟ್ಟಿದ್ದಾರೆ.