Tag: ಮೆಸೆಂಜರ್

  • ಹಾರ್ಟ್ ಇಮೋಜಿ ಕಳುಹಿಸಿದ್ರೆ 20 ಲಕ್ಷ ದಂಡ

    ಹಾರ್ಟ್ ಇಮೋಜಿ ಕಳುಹಿಸಿದ್ರೆ 20 ಲಕ್ಷ ದಂಡ

    ರಿಯಾದ್: ಇಂದು ಹೆಚ್ಚಿನ ಸಂವಹನ ಇಮೋಜಿಗಳಲ್ಲಿಯೇ ಮುಗಿದು ಹೋಗುತ್ತದೆ.  ಕುಟುಂಬಸ್ಥರು ಕುಳಿತು ಹರಟೆ ಹೊಡೆಯುವ ಕಾಲ ಬದಲಾಗಿದೆ. ಸೋಶಿಯಲ್ ಮೀಡಿಯಾ ಮೂಲಕವಾಗಿಯೇ ಇಂದು ಹೆಚ್ಚಿನ ಸಂವಹನ ನಡೆಯುತ್ತದೆ. ವಾಟ್ಸಪ್‌, ಮೆಸೆಂಜರ್ ಆ್ಯಪ್‍ನಲ್ಲಿ ಹಾರ್ಟ್ ಇಮೋಜಿಗಳನ್ನು ಕಳುಹಿಸಿದರೆ ಜೈಲು ಶಿಕ್ಷೆ, 20 ಲಕ್ಷ ದಂಡವನ್ನು ಹಾಕಿರುವುದು ಸೌದಿ ಅರೇಬಿಯಾದಲ್ಲಿ ಸುದ್ದಿಯಾಗಿದೆ.

    ಇಂಥಹದ್ದೊಂದು ವಿಚಿತ್ರ ಕಾನೂನು ಜಾರಿ ಮಾಡಿರುವುದು ಸೌದಿ ಅರೇಬಿಯಾದಲ್ಲಿ. ಯಾರಿಗಾದರೂ ಕೆಂಪು ಬಣ್ಣದ ಹೃದಯದ ಇಮೋಜಿ ಕಳುಹಿಸಿ ತಪ್ಪಿತಸ್ಥರೆಂದು ಸಾಬೀತಾದರೆ 2ರಿಂದ 5 ವರ್ಷಗಳ ಕಾಲ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಕಳುಹಿಸುವವರಿಗೆ 20 ಲಕ್ಷ ದಂಡವನ್ನು ವಿಧಿಸಬಹುದಾಗಿದೆ. ಸೌದಿ ಅರೇಬಿಯಾದ ಆ್ಯಂಟಿ ಫ್ರಾಡ್ ಅಸೋಸಿಯೇಶನ್ ಈ ಕುರಿತು ಆದೇಶ ಹೊರಡಿಸಿದೆ.

    ಕೆಂಪು ಹೃದಯದ ಇಮೋಜಿಯನ್ನು ಕಳುಹಿಸುವುದು ಅಪರಾಧವಾಗಿದೆ. ಆನ್‍ಲೈನ್ ಚಾಟಿಂಗ್ ಸಮಯದಲ್ಲಿ ಸ್ವೀಕರಿಸುವವರು ಪ್ರಕರಣ ದಾಖಲಿಸಿದರೆ, ಈ ಕಿರುಕುಳವು ಅಪರಾಧದ ವರ್ಗಕ್ಕೆ ಬರುತ್ತದೆ. ಸಂದೇಶವನ್ನು ಸ್ವೀಕರಿಸಿದವರು ದೂರು ಸಲ್ಲಿಸಿದರೆ ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದರೆ, ಶಿಕ್ಷೆ, ದಂಡ ವಿಧಿಸಲಾಗುತ್ತದೆ. ಇದನ್ನೂ ಓದಿ: ವಿರಾಟ್ ಅಭಿಮಾನಿಗಳಿಗಿಲ್ಲ ಗಡಿರೇಖೆ – ಪಾಕ್ ಕ್ರಿಕೆಟ್ ಲೀಗ್‍ನಲ್ಲಿ ರಾರಾಜಿಸಿದ ಕೊಹ್ಲಿ ಪೋಸ್ಟರ್

  • ಮೆಸೆಂಜರ್ ನಿಂದಲೇ ಆವಾಜ್ ಹಾಕಿದ ರೌಡಿಶೀಟರ್!

    ಮೆಸೆಂಜರ್ ನಿಂದಲೇ ಆವಾಜ್ ಹಾಕಿದ ರೌಡಿಶೀಟರ್!

    ಬೆಂಗಳೂರು: ನಗರದ ಜೈಲಿನಲ್ಲಿ ಇತ್ತೀಚೆಗೆ ಗಾಂಜಾ, ಮೊಬೈಲ್ ಯಾವುದು ಇಲ್ಲ. ಅಷ್ಟರ ಮಟ್ಟಿಗೆ ಸ್ಟ್ರಿಕ್ಟ್ ಮಾಡಲಾಗಿದೆ. ಅದರ ನಡುವೆಯೂ ರೌಡಿಯೊಬ್ಬ ಫೇಸ್‍ಬುಕ್‍ನಿಂದಲೇ ಆವಾಜ್ ಹಾಕಿದ್ದಾನೆ

    ನಟೋರಿಯಸ್ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ರಾಬರಿ ಕಿಟ್ಟಿ ಎಂಬಾತ ಮೆಸೇಂಜರ್ ನಿಂದಲೇ ಆವಾಜ್ ಹಾಕಿದ್ದಾನೆ. 2016ರಲ್ಲಿ ಕೆಂಗೇರಿ ಉಪನಗರ ಬಳಿ ಮಾರ ಹನುಮ ಎಂಬಾತನನ್ನ ಕ್ವಾಲೀಸ್‍ನಲ್ಲಿ ಬರುವಾಗ ಕೊಚ್ಚಿ ಕೊಲ್ಲಲಾಗಿತ್ತು. ಕೇಸ್‍ನ ಪ್ರಮುಖ ಆರೋಪಿ ಶ್ರೀನಿವಾಸ್ ಅಲಿಯಾಸ್ ರಾಬರಿ ಕಿಟ್ಟಿ, ಕಿರಣ್ ಅಲಿಯಾಸ್ ತಮಟೆ, ಸುನಿಲ್ ಅಲಿಯಾಸ್ ಸಿಲಿಂಡರ್ ಎಂಬವರು ಸೇರಿ 6 ಜನ ಜೈಲು ಸೇರಿದ್ರು. ಬೇಲ್ ಕೂಡ ಸಿಕ್ಕಿರಲಿಲ್ಲ.

    ಈ ಕೇಸ್‍ಗೆ ಮೃತ ಮಾರಹನುಮನ ಮಗ ವಿಜಯ್ ಕುಮಾರ್ ಪ್ರಮುಖ ಸಾಕ್ಷಿ. ಹೀಗಾಗಿ ಆತ ಏನಾದ್ರೂ ಸಾಕ್ಷಿ ಹೇಳಿಬಿಟ್ರೆ ಎಡವಟ್ಟಾಗುತ್ತೆ ಅಂತಾ ಜೈಲಿನಲ್ಲಿ ಇದ್ದುಕೊಂಡೇ ಶ್ರೀನಿವಾಸ ಒತ್ತಡ ಹಾಕ್ತಿದ್ದ. ಇಷ್ಟು ಸಾಲದು ಅಂತ ಪರಪ್ಪನ ಅಗ್ರಹಾರದಲ್ಲೇ ಕೂತು ಫೇಸ್‍ಬುಕ್ ಮೆಸೆಂಜರ್‍ನಿಂದ ಆಡಿಯೋ ಸೆಂಡ್ ಮಾಡಿ, ರಾಜಿ ಮಾಡ್ಕೋ ಅಂತ ಧಮ್ಕಿ ಹಾಕಿದ್ದಾನೆ. ಇದರಿಂದ ಬೆಚ್ಚಿರುವ ಮಾರಹನುಮ ಅವರ ಪುತ್ರ ವಿಜಯ್ ಈಗ ಪೊಲೀಸರಿಗೆ ದೂರು ನೀಡಿದ್ದಾರೆ.