Tag: ಮೆಲ್ಬರ್ನ್

  • ಕೊನೆಯ ಓವರಿನಲ್ಲಿ 3 ರನ್‍ಗಳ ರೋಚಕ ಜಯ- ಹ್ಯಾಟ್ರಿಕ್ ಗೆಲುವು, ಸೆಮಿಗೆ ಟೀಂ ಇಂಡಿಯಾ

    ಕೊನೆಯ ಓವರಿನಲ್ಲಿ 3 ರನ್‍ಗಳ ರೋಚಕ ಜಯ- ಹ್ಯಾಟ್ರಿಕ್ ಗೆಲುವು, ಸೆಮಿಗೆ ಟೀಂ ಇಂಡಿಯಾ

    – ಕೊನೆಯ 3 ಓವರಿನಲ್ಲಿ 5 ಬೌಂಡರಿ ಸೇರಿ 25 ರನ್ ಸಿಡಿಸಿದ ಕೆರ್
    – ಎ ಗುಂಪಿನಲ್ಲಿ ಭಾರತಕ್ಕೆ ಆಗ್ರಸ್ಥಾನ

    ಮೆಲ್ಬರ್ನ್: ನ್ಯೂಜಿಲೆಂಡ್ ತಂಡವನ್ನು 3 ರನ್‍ಗಳಿಂದ ಸೋಲಿಸಿದ ಭಾರತವು ಹ್ಯಾಟ್ರಿಕ್ ಗೆಲುವಿನೊಂದಿಗೆ ಮಹಿಳೆಯರ ಟಿ20 ವಿಶ್ವಕಪ್ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

    ಮೆಲ್ಬರ್ನ್ ನಲ್ಲಿ ಮಹಿಳೆಯರ ಟಿ20 ವಿಶ್ವಕಪ್ ಭಾಗವಾಗಿ ನ್ಯೂಜಿಲೆಂಡ್ ವಿರುದ್ಧ ಗುರುವಾರ ನಡೆದ ನಡೆದ ಪಂದ್ಯದಲ್ಲಿ ಭಾರತದ ಕೊನೆಯ ಓವರಿನಲ್ಲಿ ಗೆದ್ದು ಬೀಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 8 ವಿಕೆಟ್‍ಗೆ 133 ರನ್ ಗಳಿಸಿತ್ತು. ಆದರೆ ನ್ಯೂಜಿಲೆಂಡ್ ತಂಡವು 6 ವಿಕೆಟ್‍ಗೆ 130 ರನ್ ಗಳಿಸಿ ಸೋಲು ಕಂಡಿತು.

    ಕೊನೆಯ ಮೂರು ಓವರ್ ಗಳಲ್ಲಿ 40 ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾಗ ನ್ಯೂಜಿಲೆಂಡ್ 18ನೇ ಓವರಿನಲ್ಲಿ 6 ರನ್ ಗಳಿಸಿದರೆ 19ನೇ ಓವರಿನಲ್ಲಿ 18 ರನ್ ಗಳಿಸಿತ್ತು. ಪೂನಂ ಯಾದವ್ ಎಸೆದ ಈ ಓವರಿನಲ್ಲಿ ಕೇರ್ 4 ಬೌಂಡರಿ, 2 ರನ್ ಹೊಡೆದ ಪರಿಣಾಮ 18 ರನ್ ಬಂದಿತ್ತು. ಕೊನೆಯ ಓವರಿನಲ್ಲಿ 16 ರನ್ ಬೇಕಿತ್ತು. ಪಾಂಡೆ 20ನೇ ಓವರಿನಲ್ಲಿ 2 ಬೌಂಡರಿ ಮತ್ತು 3 ಸಿಂಗಲ್ ರನ್ ಬಿಟ್ಟುಕೊಟ್ಟು ರನ್ ನಿಯಂತ್ರಿಸಿದ ಪರಿಣಾಮ ಭಾರತ ರೋಚಕವಾಗಿ ಪಂದ್ಯ ಗೆದ್ದುಕೊಂಡಿತು.

    ಅಮೆಲಿಯಾ ಕೆರ್ ಹಾಗೂ ಹೇಲಿ ಜೆನ್ಸನ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು. ಕೊನೆಯ ಮೂರು ಓವರಿನಲ್ಲಿ ಅಮೆಲಿಯಾ ಕೆರ್ 5 ಬೌಂಡರಿ ಸೇರಿ 25 ರನ್ ಸಿಡಿಸಿದರು. ಜೆನ್ಸನ್ ಕೂಡ 1 ಬೌಂಡರಿ ಸೇರಿ 10 ರನ್ ಪೇರಿಸಿದರು. ಆದರೆ ನಿಗದಿತ 20 ಓವರ್ ಗಳ ಮುಕ್ತಾಯಕ್ಕೆ ಕಿವೀಸ್ 130 ರನ್ ಗಳಿಸಲು ಶಕ್ತವಾಯಿತು.

    ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡಕ್ಕೆ ಇದು ಸತತ ಮೂರನೇ ಜಯವಾಗಿದೆ. ಭಾರತವು ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 17 ರನ್‍ಗಳಿಂದ ಮತ್ತು ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 18 ರನ್‍ಗಳಿಂದ ಮಣಿಸಿತ್ತು.

    ಭಾರತದ ಪರ ಶೆಫಾಲಿ ವರ್ಮಾ ಅತಿ ಹೆಚ್ಚು 46 ರನ್ (34 ಎಸೆತ, 4 ಬೌಂಡರಿ, 3 ಸಿಕ್ಸರ್) ಗಳಿಸಿದರೆ, ತಾನಿಯಾ ಭಾಟಿಯಾ 23 ರನ್ (25 ಎಸೆತ, 3 ಬೌಂಡರಿ) ದಾಖಲಿಸಿದರು. ಶೆಫಾಲಿ ವರ್ಮಾ ಪಂದ್ಯ ಶ್ರೇಷ್ಠಕ್ಕೆ ಭಾಜನರಾಗಿದ್ದಾರೆ. ಅದೇ ಸಮಯದಲ್ಲಿ, ನ್ಯೂಜಿಲೆಂಡ್ ಪರ ಅಮೆಲಿಯಾ ಕೆರ್ ಮತ್ತು ರೋಸ್ಮರಿ ಮಾರ್ ತಲಾ 2 ವಿಕೆಟ್ ಪಡೆದರು. ಕ್ಯಾಪ್ಟನ್ ಸೋಫಿ ಡಿವೈನ್, ಲೀ ತಹುಹು ಮತ್ತು ಲಾಗ್ ಕಾಸ್ಪೆರೆಕ್ ತಲಾ ಒಂದು ವಿಕೆಟ್ ಕಿತ್ತರು.

    ಎರಡಂಕಿ ರನ್ ದಾಟದ ಮೂವರು ಭಾರತೀಯರು:
    ಪಂದ್ಯದಲ್ಲಿ ಭಾರತದ ಮೂವರು ಆಟಗಾರರಾದ ನಾಯಕಿ ಹರ್ಮನ್‍ಪ್ರೀತ್ ಕೌರ್, ದೀಪ್ತಿ ಶರ್ಮಾ ಮತ್ತು ವೇದಾ ಕೃಷ್ಣಮೂರ್ತಿ ಅವರು ಎರಡಂಕಿ ರನ್ ದಾಟಲು ವಿಫಲರಾದರು. ಇತ್ತ ಸ್ಮೃತಿ ಮಂದನಾ 11 ರನ್ (8 ಎಸೆತ, 2 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ನ್ಯೂಜಿಲೆಂಡ್ ಪರ ಅಮೆಲಿಯಾ ಕೆರ್ ಅತ್ಯಧಿಕ 34 ರನ್ (19 ಎಸೆತ, 6 ಬೌಂಡರಿ), ಕೇಟೀ ಮಾರ್ಟಿನ್ 25 ರನ್ (28 ಎಸೆತ, 3 ಬೌಂಡರಿ), ಮ್ಯಾಡಿ ಗ್ರೀನ್ 24 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್) ಗಳಿಸಿದರು. ಇದೇ ಸಮಯದಲ್ಲಿ ಭಾರತದ ದೀಪ್ತಿ ಶರ್ಮಾ, ಶಿಖಾ ಪಾಂಡೆ, ರಾಜೇಶ್ವರಿ ಗೈಕ್ವಾಡ್, ಪೂನಂ ಯಾದವ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು. ಕಳೆದೆರಡು ಪಂದ್ಯಗಳಲ್ಲಿ ಮಿಂಚಿದ್ದ ಪೂನಂ ಪಾಂಡೆ ಈ ಬಾರಿ ದುಬಾರಿಯಾದರು. ಈ ಪಂದ್ಯದಲ್ಲಿ ಪೂನಂ 4 ಓವರ್ ಬೌಲಿಂಗ್ ಮಾಡಿ, ಅತ್ಯಧಿಕ 32 ರನ್ ನೀಡಿ 1 ವಿಕೆಟ್ ಪಡೆದರು. ಶಿಖಾ ಪಾಂಡೆ ಅತ್ಯಂತ ಕಡಿಮೆ 21 ರನ್ ನೀಡಿ ತಂಡಕ್ಕೆ ಆಸರೆಯಾದರು.

    ಹರ್ಮನ್‍ಪ್ರೀತ್ ವೈಫಲ್ಯ:
    ಈ ಟೂರ್ನಿಯಲ್ಲಿ ಹರ್ಮನ್‍ಪ್ರೀತ್ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಎರಡಂಕಿ ಅಂಕಿ ರನ್ ದಾಟುವಲ್ಲಿ ಹರ್ಮನ್‍ಪ್ರೀತ್ ವಿಫಲರಾಗಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 2 ರನ್ ಗಳಿಸಿದೆ, ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ 8 ರನ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಇಂದಿನ ಪಂದ್ಯದಲ್ಲಿ 1 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಎ ಗುಂಪಿನಲ್ಲಿ ಭಾರತಕ್ಕೆ ಅಗ್ರಸ್ಥಾನ:
    ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ 6 ಅಂಕಗಳೊಂದಿಗೆ ಗ್ರೂಪ್-ಎ ಯಲ್ಲಿ ಅಗ್ರಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯವನ್ನು 7 ವಿಕೆಟ್‍ಗಳಿಂದ ಗೆದ್ದಿದ್ದ ನ್ಯೂಜಿಲೆಂಡ್, ಭಾರತದ ವಿರುದ್ಧದ ಎರಡದಲ್ಲಿ ಸೋಲು ಕಂಡು 2 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ.

  • ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಮಾಹಿತಿ

    ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಮಾಹಿತಿ

    – ಟ್ರಂಪ್ ಸಮ್ಮುಖದಲ್ಲಿ ಅಹಮದಾಬಾದ್ ಸ್ಟೇಡಿಯಂ ಉದ್ಘಾಟನೆ

    ಗಾಂಧಿನಗರ: ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ಪ್ರತಿಮೆಯಿಂದ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದ ಗುಜರಾತ್ ಇದೀಗ ಕ್ರಿಕೆಟ್ ಸ್ಟೇಡಿಯಂ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಗುಜರಾತ್‍ನ ಅಹಮದಾಬಾದ್‍ದಿಂದ ಸ್ವಲ್ಪ ದೂರದ ಮೊಟೆರಾದಲ್ಲಿರುವ ಸರ್ದಾರ್ ಪಟೇಲ್ ಕ್ರೀಡಾಂಗಣ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿ ಹೊರ ಹೊಮ್ಮಲಿದೆ.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಫೆಬ್ರವರಿ 24ರಂದು ಸರ್ದಾರ್ ಪಟೇಲ್ ಸ್ಟೇಡಿಯಂ ಉದ್ಘಾಟನೆಯಾಗಲಿದೆ. ಜೊತೆಗೆ ಇಲ್ಲಿಯೇ ಟ್ರಂಪ್ ಅವರು ಸಾರ್ಜಜನಿಕ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರುವ ಸಾಧ್ಯತೆ ಇದೆ.

    ಸ್ಟೇಡಿಯಂ ವಿಶೇಷತೆ:
    ಅಹಮದಾಬಾದ್ ಸ್ಟೇಡಿಯಂನಲ್ಲಿ 1982ರಿಂದ 2015ರ ವರೆಗೂ 49,000 ಆಸನಗಳ ವ್ಯವಸ್ಥೆ ಇತ್ತು. 2016ರ ಡಿಸೆಂಬರ್ ನಿಂದ ಕಾಮಗಾರಿ ಆರಂಭಗೊಂಡು ಸುಮರು 700 ಕೋಟಿ ರೂ. ವೆಚ್ಚದಲ್ಲಿ ಎಲ್ ಆಂಡ್ ಟಿ ಕಂಪನಿ ಗುತ್ತಿಗೆ ಪಡೆದು ಸ್ಟೇಡಿಯಂ ನಿರ್ಮಿಸಿದೆ. 1.10 ಲಕ್ಷ ಆಸನಗಳ ವ್ಯವಸ್ಥೆ ಕಲ್ಪಿಸುವ ಮೂಲಕ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಇರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ಮೆಲ್ಬರ್ನ್ ಸ್ಟೇಡಿಯಂನಲ್ಲಿ 1.04 ಲಕ್ಷ ಆಸನಗಳ ವ್ಯವಸ್ಥೆಯಿದೆ. ಈ ದಾಖಲೆಯನ್ನು ಗುಜರಾತ್ ಕ್ರಿಕೆಟ್ ಮಂಡಳಿ ಮುರಿಯುವ ನಿಟ್ಟಿನಲ್ಲಿ ಹಳೆಯ ಮೊಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸಿ 1.10 ಲಕ್ಷ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

    ಸರ್ದಾರ್ ಪಟೇಲ್ ಕ್ರೀಡಾಂಗಣ ಕೇವಲ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಷ್ಟೇ ಅಲ್ಲದೆ ವಿಶ್ವದ ಎರಡನೇ ದೊಡ್ಡ ಮೈದಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಉತ್ತರ ಕೊರಿಯಾದ ರುಂಗ್ರಾಡೊ ಮೆ ಡೆ ಸ್ಟೇಡಿಯಂ ಜಗತ್ತಿನ ಅತಿ ದೊಡ್ಡ ಮೈದಾನ ಎಂಬ ಖ್ಯಾತಿ ಹೊಂದಿದ್ದು, ಈ ಕ್ರೀಡಾಂಗಣದಲ್ಲಿ 1.50 ಲಕ್ಷ ಪ್ರೇಕ್ಷಕರು ಕುಳಿತುಕೊಂಡು ಪಂದ್ಯ ನೋಡಬಹುದು.

    ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ಅನ್ನು ವಿನ್ಯಾಸಗೊಳಿಸಿದ ತಂಡವೇ ಈ ಸ್ಟೇಡಿಯಂ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದೆ. 64 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ 1.10 ಲಕ್ಷ ಜನರು ಕುಳಿತು ಕ್ರಿಕೆಟ್ ಪಂದ್ಯ ವೀಕ್ಷಿಸಬಹುದು. ಜೊತೆಗೆ ಕ್ರೀಡಾಂಗಣದಲ್ಲಿ 76 ಕಾರ್ಪೊರೇಟ್ ಬಾಕ್ಸ್ ಗಳು, ನಾಲ್ಕು ಡ್ರೆಸ್ಸಿಂಗ್ ರೂಮ್‍ಗಳು ಮತ್ತು ಮೂರು ಅಭ್ಯಾಸ ಮೈದಾನಗಳಿವೆ.

    ಮೂರು ಮಾದರಿಯ ಪಿಚ್:
    ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಕೆಂಪು ಮತ್ತು ಕಪ್ಪು ಮಣ್ಣು ಬಳಸಿ ಮೂರು ಮಾದರಿಯ ಪಿಚ್‍ಗಳನ್ನು ಸಿದ್ಧಗೊಳಿಸಲಾಗಿದೆ. ಅವುಗಳ ಪೈಕಿ ಕೆಲವನ್ನು ಸಂಪೂರ್ಣ ಕಪ್ಪು ಮಣ್ಣಿನಿಂದ, ಇನ್ನೂ ಕೆಲವನ್ನು ಕೆಂಪು ಮಣ್ಣಿನಿಂದ ಹಾಗೂ ಮತ್ತೆ ಕೆಲವನ್ನು ಎರಡೂ ಮಣ್ಣುಗಳ ಮಿಶ್ರಣದಿಂದ ಸಿದ್ಧಪಡಿಸಲಾಗಿದೆ. ಸಾಧಾರಣವಾಗಿ ಮೈದಾನದ ನಾಲ್ಕು ಭಾಗಗಳಲ್ಲಿ ಫ್ಲಡ್ ಲೈಟ್ ಹಾಕಲಾಗುತ್ತದೆ, ಆದರೆ ಈ ಸ್ಟೇಡಿಯಂನಲ್ಲಿ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಸ್ಟೇಡಿಯಂಗೆ ಎಲ್‍ಇಡಿ ದೀಪಗಳನ್ನು ಹಾಕಲಾಗಿದ್ದು 30 ಮೀಟರ್ ದೂರದವರೆಗಿನ ಪ್ರದೇಶಗಳನ್ನು ದೀಪಗಳು ಕವರ್ ಮಾಡಲಿದೆ.

    ಸಬ್ ಏರ್ ಸಿಸ್ಟಂ:
    ಮಳೆ ಬಂದು ಸ್ಟೇಡಿಯಂನಲ್ಲಿ ನೀರು ನಿಂತು ಪಂದ್ಯ ರದ್ದಾಗುವ ಸಾಧ್ಯತೆ ಇರುತ್ತದೆ. ಆದರೆ ಇಂತಹ ಸಮಸ್ಯೆಗೆ ಸರ್ದಾರ್ ಪಟೇಲ್ ಮೈದಾನಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮೈದಾನವನ್ನು ಒಣಗಿಸುವ ಸಬ್ ಏರ್ ಸಿಸ್ಟಂ ತಂತ್ರಜ್ಞಾನ ಅಳವಡಿಸಲಾಗಿದೆ. ಮಳೆ ನಿಂತ ಅರ್ಧ ಗಂಟೆಗೆ ಮೈದಾನ ಒಣಗುತ್ತದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಸಬ್ ಏರ್ ಸಿಸ್ಟಂ ಅಳವಡಿಸಲಾಗಿದೆ.

    ಒಳಾಂಗಣ ಕ್ರಿಕೆಟ್ ಅಕಾಡೆಮಿ ಮತ್ತು ಒಲಿಂಪಿಕ್ ಮಾನದಂಡಗಳ ಪ್ರಕಾರ ಈಜುಕೊಳ, ಸ್ಕ್ವ್ಯಾಷ್ ಏರಿಯಾ ಹಾಗೂ ಟೇಬಲ್ ಟೆನಿಸ್ ಏರಿಯಾಗಳು ಕೂಡ ಸರ್ದಾರ್ ಪಟೇಲ್ ಮೈದಾನದಲ್ಲಿವೆ. ಜೊತೆಗೆ ಮೈದಾನದಲ್ಲಿ 3 ಡಿ ಥಿಯೇಟರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಅದರೊಂದಿಗೆ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ.

    ಪಾರ್ಕಿಂಗ್ ವ್ಯವಸ್ಥೆ:
    ಪಂದ್ಯ ವೀಕ್ಷಣೆಗೆ ಬರುವ ಜನರ ಬೈಕ್ ಹಾಗೂ ಕಾರ್ ಪಾರ್ಕಿಂಗ್ ವಿಶಾಲ ಜಾಗ ಒದಗಿಸಲಾಗಿದೆ. ಇಲ್ಲಿ 3,000 ಕಾರು ಹಾಗೂ 10,000 ಬೈಕ್‍ಗಳ ಪಾರ್ಕಿಂಗ್ ವ್ಯವಸ್ಥೆ ಇದೆ. ಜೊತೆಗೆ ಮೈದಾನಕ್ಕೆ ಸಂಪರ್ಕ ಕಲ್ಪಿಸಲು 300 ಮೀಟರ್ ದೂರದಲ್ಲೇ ಮೆಟ್ರೋ ನಿಲ್ದಾಣವನ್ನು ಸಹ ನಿರ್ಮಿಸಲಾಗುತ್ತಿದೆ. ಮೆಟ್ರೋ ನಿಲ್ದಾಣದಿಂದ ನೇರವಾಗಿ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸಲು ಸ್ಕೈವಾಕ್ ನಿರ್ಮಾಣವಾಗಲಿದೆ.

    ಅಷ್ಟೇ ಅಲ್ಲದೆ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯೋಜನೆ ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಐತಿಹಾಸಿಕ ಡೇ-ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಆದರೆ ಯಾವ ದೇಶದ ಜೊತೆಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದಕ್ಕೂ ಮುನ್ನವೇ ಐಪಿಎಲ್ ಪಂದ್ಯದೊಂದಿಗೆ ಸರ್ದಾರ್ ಪಟೇಲ್ ಸ್ಟೇಡಿಯಂ ಲೋಕಾರ್ಪಣೆಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ಐಪಿಎಲ್‍ನಲ್ಲಿ ನೌಕೌಟ್ ಪಂದ್ಯಗಳು ಬಿಸಿಸಿಐ ಲೆಕ್ಕಚಾರದಂತೆ ನಡೆಯುತ್ತದೆ. ಈ ಪಂದ್ಯಗಳ ಟಿಕೆಟ್ ಮೂಲಕ ಬರುವ ಹಣ ಕೂಡ ಭಾರತೀಯ ಕ್ರಿಕೆಟ್ ಮಂಡಳಿಗೆ ಸೇರುತ್ತದೆ. ಹೀಗಾಗಿ ಫೈನಲ್ ಬಿಸಿಸಿಐ ಸೂಚನೆಯಂತೆ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಶೇ.90 ರಷ್ಟು ಕೆಲಸಗಳು ಮುಗಿದಿದ್ದು ಮಾರ್ಚ್ ಕೊನೆಯ ವೇಳೆಗೆ ಬಾ ಎಲ್ಲ ಕೆಲಸ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.

    ವಿಶ್ವದ 5 ದೊಡ್ಡ ಕ್ರಿಕೆಟ್ ಸ್ಟೇಡಿಯಂಗಳು:
    ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
    ದೇಶ- ಆಸ್ಟ್ರೇಲಿಯಾ
    ಆಸನಗಳು- 1,00,024

    ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ

    ಈಡನ್ ಗಾರ್ಡನ್ಸ್
    ದೇಶ- ಭಾರತ (ಕೊಲ್ಕತ್ತಾ)
    ಆಸನಗಳು- 66,349
    ಭಾರತದ ಅತಿ ದೊಡ್ಡ ಕ್ರಿಕೆಟ್ ಮೈದಾನ

    ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
    ದೇಶ- ಭಾರತ (ಚತ್ತೀಸ್‍ಗಢ್)
    ಆಸನಗಳು- 65,000

    ಈಡನ್ ಗಾರ್ಡನ್ಸ್

    ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
    ದೇಶ- ಭಾರತ (ಹೈದರಾಬಾದ್),
    ಆಸನಗಳು- 60,000

    ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂ
    ದೇಶ- ಭಾರತ (ತಿರುವನಂತಪುರಂ)
    ಆಸನಗಳು- 55,000.
    ವಿಶೇಷತೆ: ಕ್ರಿಕೆಟ್ ಪಂದ್ಯಗಳನ್ನು ಹೊರತುಪಡಿಸಿ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

    ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂ
  • ಐದೂವರೆ ವರ್ಷದ ಬಳಿಕ ಬ್ಯಾಟ್ ಹಿಡಿದು ಮಹಿಳಾ ಬೌಲರ್‌ನನ್ನು ಎದುರಿಸಿದ ಸಚಿನ್- ವಿಡಿಯೋ

    ಐದೂವರೆ ವರ್ಷದ ಬಳಿಕ ಬ್ಯಾಟ್ ಹಿಡಿದು ಮಹಿಳಾ ಬೌಲರ್‌ನನ್ನು ಎದುರಿಸಿದ ಸಚಿನ್- ವಿಡಿಯೋ

    ಮೆಲ್ಬರ್ನ್: ಇಲ್ಲಿನ ಜಂಕ್ಷನ್ ಓವಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾದ ಬುಷ್‍ಫೈರ್ ಪರಿಹಾರಕ್ಕೆ ನೆರವಾಗಲು ಸಚಿನ್ ತೆಂಡೂಲ್ಕರ್ ಅವರು ನಿವೃತ್ತಿಯಿಂದ ಹೊರಬಂದು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

    ಟೀಂ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರು ಆಸ್ಟ್ರೇಲಿಯಾದ ಮಹಿಳಾ ವೇಗದ ಬೌಲರ್ ಎಲಿಸ್ ಪೆರ್ರಿ ಎಸೆದ ವಿಶೇಷ ಓವರ್‌ನಲ್ಲಿ ಭರ್ಜರಿ ಬ್ಯಾಟ್ ಬೀಸಿದ್ದಾರೆ. ಐದೂವರಿ ವರ್ಷಗಳ ಬಳಿಕ ಸಚಿನ್ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು.

    ಸಚಿನ್ ತೆಂಡೂಲ್ಕರ್ ಅವರು ಎಲಿಸ್ ಪೆರ್ರಿ ಎಸೆದ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದರು. ಬಳಿಕ ನಿಧಾನಗತಿಯ ಬ್ಯಾಟಿಂಗ್ ಮಾಡಿದರು. ಎಲಿಸ್ ಪೆರ್ರಿ ಬಳಿಕ ಆಸ್ಟ್ರೇಲಿಯಾ ಮಹಿಳಾ ತಂಡದ ಮತ್ತೋರ್ವ ಮಹಿಳಾ ಬೌಲರ್ ಎಸೆತಗಳನ್ನು ಸಚಿನ್ ಎದುರಿಸಿದರು.

    ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಆಲ್‍ರೌಂಡರ್ ಎಲಿಸ್ ಪೆರ್ರಿ ಅವರ ವಿಡಿಯೋವನ್ನು ಟ್ವೀಟ್ ಮಾಡಿತ್ತು. ಈ ವಿಡಿಯೋದಲ್ಲಿ ಎಲಿಸ್ ಪೆರ್ರಿ, ಹಾಯ್ ಸಚಿನ್. ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದಗಳು. ನೀವು ರಿಕ್ಕಿ ಪಾಂಟಿಂಗ್ ತಂಡಕ್ಕೆ ಕೋಚ್ ಆಗಿರುವುದು ನನಗೆ ಗೊತ್ತಿದೆ. ಪಂದ್ಯದ ವಿಶ್ರಾಂತಿ ವೇಳೆ ಒಂದು ಓವರ್ ಆಡಲು ನೀವು ನಿವೃತ್ತಿಯಿಂದ ಹೊರಬಂದರೆ ನಾವು ಹೆಚ್ಚು ಖುಷಿ ಪಡುತ್ತೇವೆ ಎಂದು ಕೇಳಿಕೊಡಿದ್ದರು.

    https://www.facebook.com/cricketcomau/videos/2552024751723036/?t=157&v=2552024751723036

    ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಸಚಿನ್, ಉತ್ತಮ ಮನವಿ ಎಲಿಸ್. ನಾನು ಒಂದು ಓವರ್ ಬ್ಯಾಟ್ ಮಾಡಲು ಇಷ್ಟಪಡುತ್ತೇನೆ. ನನ್ನ ಭುಜದ ಗಾಯದಿಂದಾಗಿ ವೈದ್ಯರು ಆಡದಂತೆ ಸಲಹೆ ನೀಡಿದ್ದಾರೆ. ಈಗ ನಾನು ಆಡುವುದು ಅವರ ಸಲಹೆಗೆ ವಿರುದ್ಧವಾಗಿರುತ್ತದೆ. ಆದರೂ ಮೈದಾಕ್ಕಿಳಿಯುತ್ತೇನೆ ಎಂದು ತಿಳಿಸಿದ್ದರು.

    ಅಷ್ಟೇ ಅಲ್ಲದೆ ಸಚಿನ್ ಎಲಿಸ್ ಪೆರ್ರಿ ಅವರಿಗೆ ಸವಾಲೊಂದನ್ನು ಹಾಕಿದ್ದರು. ಭಾನುವಾರ ನಡೆಯುವ ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಸಾಕಷ್ಟು ಹಣ ಬರುತ್ತದೆ. ಆ ಒಂದು ಓವರಿನಲ್ಲಿ ನನ್ನನ್ನು ಔಟ್ ಮಾಡಿ ಎಂದು ಎಲಿಸ್ ಪೆರ್ರಿ ಅವರಿಗೆ ಹೇಳಿದ್ದರು.

    ಜಂಕ್ಷನ್ ಓವಲ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಪಾಂಟಿಂಗ್ ನಾಯಕತ್ವದ ತಂಡ ಬ್ರಿಯಾನ್ ಲಾರಾ 30 ರನ್ (11 ಎಸೆತ), ರಿಕ್ಕಿ ಪಾಂಟಿಂಗ್ 26 ರನ್ (14 ಎಸೆತ), ಮ್ಯಾಥ್ಯೂ ಹೇಡನ್ 16 ರನ್ (14 ಎಸೆತ), ಲ್ಯೂಕ್ ಹಾಡ್ಜ್ ಔಟಾಗದೆ 11 ರನ್ (4 ಎಸೆತ) ಸೇರಿ ನಿಗದಿತ 10 ಓವರಿಗೆ 5 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತ್ತು. ಇದೇ ಸಮಯದಲ್ಲಿ ಗಿಲ್‍ಕ್ರಿಸ್ಟ್ ತಂಡದ ಯುವರಾಜ್ ಸಿಂಗ್, ಆ್ಯಡ್ರ್ಯೂ ಸೈಮಂಡ್ಸ್ ಹಾಗೂ ಕಟ್ರ್ನಿ ವಾಲ್ಷ್ ತಲಾ ಒಂದು ವಿಕೆಟ್ ಪಡೆದರು. ಆದರೆ ಪಾಂಟಿಂಗ್ ತಂಡ ನೀಡಿದ್ದ 105 ರನ್‍ಗಳ ಗುರಿ ಬೆನ್ನಟ್ಟಿದ ಆ್ಯಡಮ್ ಗಿಲ್‍ಕ್ರಿಸ್ಟ್ ತಂಡವು ಒಂದು ರನ್‍ನಿಂದ ಸೋಲು ಒಪ್ಪಿಕೊಂಡಿತು.

  • ಬೌಲರ್ ಎಸೆದ ಬಾಲ್ ಹಿಂದೆ ಓಡಿದ ಬ್ಯಾಟ್ಸ್‌ಮನ್ ಪಾಂಟಿಂಗ್- ವಿಡಿಯೋ

    ಬೌಲರ್ ಎಸೆದ ಬಾಲ್ ಹಿಂದೆ ಓಡಿದ ಬ್ಯಾಟ್ಸ್‌ಮನ್ ಪಾಂಟಿಂಗ್- ವಿಡಿಯೋ

    ಮೆಲ್ಬರ್ನ್: ಬೌಲರ್ ಎಸೆದ ಬಾಲ್ ಹಿಂದೆ ಸ್ಟ್ರೈಕ್‍ನಲ್ಲಿದ್ದ ಬ್ಯಾಟ್ಸ್‌ಮನ್ ರಿಕ್ಕಿ ಪಾಂಟಿಂಗ್ ಓಡಿದ ಪ್ರಸಂಗವೊಂದು ಇಂದು ಬುಷ್‍ಫೈರ್ ಪಂದ್ಯದಲ್ಲಿ ನಡೆದಿದೆ.

    ಮೆಲ್ಬರ್ನ್ ನ ಜಂಕ್ಷನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಬುಷ್‍ಫೈರ್ ಪಂದ್ಯದ ಪಾಂಟಿಂಗ್ ಇಲೆವೆನ್ ತಂಡದ ಇನ್ನಿಂಗ್ಸ್ ನಲ್ಲಿ ಗ್ರಿಲ್‍ಕ್ರಿಸ್ಟ್ ತಂಡದ ಬೌಲರ್, ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ಕರ್ಟ್ನಿ ವಾಲ್ಷ್ ಎರಡನೇ ಓವರ್ ಬೌಲಿಂಗ್ ಮಾಡಿದರು. ಎಡರನೇ ಎಸೆತದಲ್ಲಿ ಜಸ್ಟಿನ್ ಲ್ಯಾಂಗರ್ ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು. ಲ್ಯಾಂಗರ್ 3 ಎಸೆತಗಳಲ್ಲಿ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    ಲ್ಯಾಂಗರ್ ಬಳಿಕ ಮೈದಾನಕ್ಕಿಳಿಸಿ ರಿಕ್ಕಿ ಪಾಂಟಿಂಗ್ ಕರ್ಟ್ನಿ ವಾಲ್ಷ್ ಎಸೆತವನ್ನು ಎದುರಿಸಲು ಸಜ್ಜಾಗಿದ್ದರು. ಆದರೆ ಕರ್ಟ್ನಿ ವಾಲ್ಷ್ ಅವರು ಬಿಗ್ ವೈಡ್ ಎಸೆಯುತ್ತಿದ್ದಂತೆ ಸ್ಟ್ರೈಕ್‍ನಲ್ಲಿದ್ದ ರಿಕ್ಕಿ ಪಾಂಟಿಂಗ್ ಬಾಲ್ ತರಲು ಸ್ಕ್ರೀಜ್ ಬಿಟ್ಟು ಓಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಪಂದ್ಯದಲ್ಲಿ ಪಾಂಟಿಂಗ್ ನಾಯಕತ್ವದ ತಂಡ ಬ್ರಿಯಾನ್ ಲಾರಾ 30 ರನ್ (11 ಎಸೆತ), ರಿಕ್ಕಿ ಪಾಂಟಿಂಗ್ 26 ರನ್ (14 ಎಸೆತ), ಮ್ಯಾಥ್ಯೂ ಹೇಡನ್ 16 ರನ್ (14 ಎಸೆತ), ಲ್ಯೂಕ್ ಹಾಡ್ಜ್ ಔಟಾಗದೆ 11 ರನ್ (4 ಎಸೆತ) ಸೇರಿ ನಿಗದಿತ 10 ಓವರಿಗೆ 5 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತು. ಇದೇ ಸಮಯದಲ್ಲಿ ಗಿಲ್‍ಕ್ರಿಸ್ಟ್ ತಂಡದ ಯುವರಾಜ್ ಸಿಂಗ್, ಆ್ಯಡ್ರ್ಯೂ ಸೈಮಂಡ್ಸ್ ಹಾಗೂ ಕಟ್ರ್ನಿ ವಾಲ್ಷ್ ತಲಾ ಒಂದು ವಿಕೆಟ್ ಪಡೆದರು. ಪಾಂಟಿಂಗ್ ತಂಡ ನೀಡಿದ್ದ 105 ರನ್‍ಗಳ ಗುರಿ ಬೆನ್ನಟ್ಟಿದ ಗಿಲ್‍ಕ್ರಿಸ್ಟ್ ತಂಡವು ಒಂದು ರನ್‍ನಿಂದ ಸೋಲು ಒಪ್ಪಿಕೊಂಡಿತು.

    ತಂಡ ಹೀಗಿತ್ತು:
    ಪಾಂಟಿಂಗ್ ಟೀಂ:
    ಮ್ಯಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್, ರಿಕಿ ಪಾಂಟಿಂಗ್ (ಸಿ), ಎಲಿಸ್ ವಿಲ್ಲಾನಿ, ಬ್ರಿಯಾನ್ ಲಾರಾ, ಲಿಚ್‍ಫೀಲ್ಡ್, ಬ್ರಾಡ್ ಹ್ಯಾಡಿನ್ (ವಿಕೆ), ಬ್ರೆಟ್ ಲೀ, ವಾಸಿಮ್ ಅಕ್ರಮ್, ಡಾನ್ ಕ್ರಿಶ್ಚಿಯನ್, ಲ್ಯೂಕ್ ಹಾಡ್ಜ್. ಕೋಚ್: ಸಚಿನ್ ತೆಂಡೂಲ್ಕರ್.

    ಗಿಲ್‍ಕ್ರಿಸ್ಟ್ ಟೀಂ:
    ಆ್ಯಡಮ್ ಗಿಲ್‍ಕ್ರಿಸ್ಟ್ (ಸಿ & ವಿಕೆ), ಶೇನ್ ವ್ಯಾಟ್ಸನ್, ಬ್ರಾಡ್ ಹಾಡ್ಜ್, ಯುವರಾಜ್ ಸಿಂಗ್, ಅಲೆಕ್ಸ್ ಬ್ಲ್ಯಾಕ್‍ವೆಲ್, ಆಂಡ್ರ್ಯೂ ಸೈಮಂಡ್ಸ್, ಕಟ್ರ್ನಿ ವಾಲ್ಷ್, ನಿಕ್ ರಿಯೊವಾಲ್ಡ್, ಪೀಟರ್ ಸಿಡಲ್, ಫವಾದ್ ಅಹ್ಮದ್ . ಕೋಚ್: ಟಿಮ್ ಪೈನೆ.

  • 37 ಸಾವಿರ ಅಡಿ ಎತ್ತರದಲ್ಲಿ ವಿವಾಹವಾದ ಪ್ರೇಮಿಗಳು

    37 ಸಾವಿರ ಅಡಿ ಎತ್ತರದಲ್ಲಿ ವಿವಾಹವಾದ ಪ್ರೇಮಿಗಳು

    ಮೆಲ್ಬರ್ನ್: ನ್ಯೂಜಿಲೆಂಡ್ ಮಹಿಳೆ ಹಾಗೂ ಆಸ್ಟ್ರೇಲಿಯಾದ ವ್ಯಕ್ತಿ ವಿಮಾನದಲ್ಲಿ ಪ್ರಯಾಣಿಸುತ್ತ 37 ಸಾವಿರ ಅಡಿ ಎತ್ತರದಲ್ಲಿ ವಿವಾಹವಾಗಿದ್ದಾರೆ.

    ಕಮರ್ಷಿಯಲ್ ಜೆಟ್‍ಸ್ಟಾರ್ ಫ್ಲೈಟ್ 201ನಲ್ಲಿ ಪ್ರೇಮಿಗಳಾದ ನ್ಯೂಜಿಲೆಂಡ್‍ನ ಡೇವಿಡ್ ವ್ಯಾಲಿಯಂಟ್ ಹಾಗೂ ಆಸ್ಟ್ರೇಲಿಯಾದ ವ್ಯಕ್ತಿ ಕ್ಯಾಥೆ ವಿವಾಹವಾಗಿದ್ದಾರೆ. ವಿಶೇಷ ಸಂಭ್ರಮಕ್ಕೆ ಸಹ ಪ್ರಯಾಣಿಕರು ಕೂಡ ಸಾಕ್ಷಿಯಾದರು. ಅಷ್ಟೇ ಅಲ್ಲದೆ ಈ ಮದುವೆಗೆ ವಿಮಾನಯಾನ ಕಂಪನಿ ದಂಪತಿಗಳಿಂದ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸಲಿಲ್ಲ. ಆದರೆ ಅವರ ಇಚ್ಛೆಗೆ ಸಂಪೂರ್ಣ ಬೆಂಬಲ ನೀಡಿದೆ. ಇದನ್ನೂ ಓದಿ: ಶವಪೆಟ್ಟಿಗೆಯಲ್ಲಿ ಮದುವೆ ಹಾಲ್‍ಗೆ ಬಂದ ವಧು: ವಿಡಿಯೋ

    ವಿಮಾನವು ಸಿಡ್ನಿಯಿಂದ ಹೊರಟ ತಕ್ಷಣ, ವಧು-ವರರು ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಬಳಿಕ ಒಟ್ಟಿಗೆ ಜೀವನ ನಡೆಸುವ ಭರವಸೆ ನೀಡಿದರು. ಹೀಗಾಗಿ ಪ್ರಯಾಣದ ಅರ್ಧ ದಾರಿಯಲ್ಲಿ ವಿವಾಹ ಸಮಾರಂಭವನ್ನು ನಡೆಸಲಾಯಿತು.

    ಮದುವೆಯ ನಂತರ ವಧು ಕ್ಯಾಥಿ ಮಾತನಾಡಿ, ಇದು ಅತ್ಯಂತ ಅದ್ಭುತ ಅನುಭವ. ನನ್ನ ಜೀವನದುದ್ದಕ್ಕೂ ನಾವು ಅದನ್ನು ನೆನಪಿಸಿಕೊಳ್ಳುತ್ತೇವೆ. 2011ರಲ್ಲಿ ಡೇವಿಸ್ ಪರಿಚಯವಾಗಿದ್ದರು. ಎರಡು ವರ್ಷಗಳ ನಂತರ ಅಂದ್ರೆ 2013ರಲ್ಲಿ ನಾನು ಸಿಡ್ನಿ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿಯಾದೆ. ವಿಮಾನ ಪ್ರಯಾಣದ ಮೇಲಿನ ನಮ್ಮ ಪ್ರೀತಿ ನಮ್ಮನ್ನು ಈ ಹಂತಕ್ಕೆ ಕರೆತಂದಿತು ಎಂದು ಹೇಳಿಕೊಂಡಿದ್ದಾರೆ.

    ನನ್ನ ಮದುವೆಯಲ್ಲಿ ಸ್ಮರಣೀಯವಾದದ್ದನ್ನು ಮಾಡಲು ಬಯಸಿದ್ದೆ. ನನ್ನ ಕಲ್ಪನೆಯನ್ನು ಜೆಟ್‍ಸ್ಟಾರ್ ನ ಫೇಸ್‍ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದೆ. ಇದಕ್ಕೆ ಜೆಟ್‍ಸ್ಟಾರ್ ಒಪ್ಪಿಕೊಂಡರು ಮತ್ತು ಹಣವಿಲ್ಲದೆ ಎಲ್ಲಾ ವ್ಯವಸ್ಥೆ ಮಾಡಿದರು ಎಂದು ಕ್ಯಾಥಿ ತಿಳಿಸಿದ್ದಾರೆ.

    ಈ ಕುರಿತು ಜೆಟ್‍ಸ್ಟಾರ್ ಸಿಬ್ಬಂದಿ ರಾಬಿನ್ ಹಾಲ್ಟ್ ಮಾತನಾಡಿ, ಪ್ರಯಾಣಿಕರು ಡೇವಿಡ್ ಮತ್ತು ಕ್ಯಾಥಿ ಅವರ ಮದುವೆಯನ್ನು ಆನಂದಿಸಿದ್ದಾರೆ. ಈ ವಿವಾಹದ ಮಾಹಿತಿಯನ್ನು ಪ್ರಯಾಣಿಕರಿಗೆ ಇ-ಮೇಲ್ ಮೂಲಕ ಮೊದಲೇ ನೀಡಲಾಗಿತ್ತು. ಒಂದು ವೇಳೆ ಅವರು ಬಯಸಿದರೆ ವಿಮಾನವನ್ನು ಬದಲಾಯಿಸಲು ಸಹ ಅವಕಾಶ ಕಲ್ಪಿಸಲಾಗಿತ್ತು. ವಿವಾಹಕ್ಕಾಗಿ ದಂಪತಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.

  • ಧೋನಿ, ಜಾಧವ್ ಫಿಫ್ಟಿ – ಸರಣಿ ಗೆದ್ದು ದಾಖಲೆ ಬರೆದ ಬ್ಲೂ ಬಾಯ್ಸ್!

    ಧೋನಿ, ಜಾಧವ್ ಫಿಫ್ಟಿ – ಸರಣಿ ಗೆದ್ದು ದಾಖಲೆ ಬರೆದ ಬ್ಲೂ ಬಾಯ್ಸ್!

    – ಟೆಸ್ಟ್, ಏಕದಿನ ಎರಡರಲ್ಲೂ ಟೀಂ ಇಂಡಿಯಾಗೆ ಸರಣಿ
    – ಮತ್ತೊಮ್ಮೆ ತಂಡಕ್ಕೆ ಆಸರೆಯಾದ ಧೋನಿ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆದ್ದು ದಾಖಲೆ ನಿರ್ಮಿಸಿದ್ದ ಟೀಂ ಇಂಡಿಯಾ ಏಕದಿನ ಟೂರ್ನಿಯನ್ನು 2-1 ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಮೂಲಕ ಮೊದಲ ಬಾರಿಗೆ ಆಸೀಸ್ ನೆಲದಲ್ಲಿ ದ್ವೀಪಕ್ಷಿಯ ಸರಣಿ ಗೆದ್ದು ಸಂಭ್ರಮಿಸಿದೆ.

    231 ರನ್‍ಗಳ ಗುರಿಯನ್ನು ಪಡೆದ ಭಾರತ ಧೋನಿ, ಮತ್ತು ಕೇದಾರ್ ಜಾಧವ್ ಅವರ ಸಮಯೋಚಿತ ಅರ್ಧಶತಕದಿಂದಾಗಿ 49.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 234 ರನ್ ಹೊಡೆದು 7 ವಿಕೆಟ್ ಗಳ ಜಯವನ್ನು ಸಂಪಾದಿಸಿತು.

    ಲಾಸ್ಟ್ ಆ 5 ಓವರ್: ಕೊನೆಯ 30 ಎಸೆತಗಳಿಗೆ 44 ರನ್ ಬೇಕಿತ್ತು. 46 ನೇ ಓವರ್ ನಲ್ಲಿ 11 ರನ್, 47 ನೇ ಓವರ್ ನಲ್ಲಿ 6 ರನ್, 48ನೇ ಓವರ್ ನಲ್ಲಿ 13 ರನ್ ಬಂತು. 48ನೇ ಓವರ್ ಮೊದಲ ಎಸೆತದಲ್ಲಿ ಧೋನಿ ಕ್ಯಾಚ್ ಡ್ರಾಪ್ ಆಗಿತ್ತು. ಈ ವೇಳೆ ಎರಡು ರನ್ ಕದಿಯಲು ಹೋಗಿ ಜಾಧವ್ ರನ್ ಔಟ್ ಆಗುವ ಸಾಧ್ಯತೆ ಇತ್ತು. ಈ ವೇಳೆ ಕೂದಲೆಳೆಯ ಅಂತರದಿಂದ ಪಾರಾಗಿದ್ದರು. 49ನೇ ಓವರ್ ನಲ್ಲಿ ಜಾಧವ್ ಮತ್ತು ಧೋನಿ ಬೌಂಡರಿ ಸೇರಿದಂತೆ ಒಟ್ಟು 13 ರನ್ ಹೊಡೆದ ಕಾರಣ ಭಾರತಕ್ಕೆ ಗೆಲುವು ಖಚಿತವಾಯಿತು. ಕೊನೆಯ ಓವರ್ ನಲ್ಲಿ ಜಾಧವ್ ಬೌಂಡರಿ ಚಚ್ಚಿ ಭಾರತಕ್ಕೆ ಜಯವನ್ನು ತಂದಿಟ್ಟರು.

    ಆಸ್ಟ್ರೇಲಿಯಾ ನೀಡಿದ 230 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. 9 ರನ್ ಗಳಿಸಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ಕೊಹ್ಲಿ, ಧವನ್ ಅವರೊಂದಿಗೆ ಸೇರಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಆದರೆ 23 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಧವನ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

    ಈ ಹಂತದಲ್ಲಿ ಬ್ಯಾಟಿಂಗ್ ಆಗಮಿಸಿದ ಮಾಜಿ ನಾಯಕ ಧೋನಿ ಕೂಡ ತಾಳ್ಮೆ ಆಟಕ್ಕೆ ಮುಂದಾದರು. ಈ ಜೋಡಿ 3ನೇ ವಿಕೆಟ್‍ಗೆ 54 ರನ್ ಗಳ ಕಾಣಿಕೆ ನೀಡಿತು. ಕೊಹ್ಲಿ 32 ರನ್ ಗಳಿಸಿದ್ದ ವೇಳೆ ರನೌಟ್ ನಿಂದ ತಪ್ಪಿಸಿಕೊಂಡು ಜೀವದಾನ ಪಡೆದರೂ ಕೂಡ 46 ರನ್ ಗಳಿಸಿದ್ದ ವೇಳೆ ರಿಚರ್ಡ್ ಸನ್‍ಗೆ ವಿಕೆಟ್ ಒಪ್ಪಿಸಿದರು. ವಿಶೇಷವೆಂದರೆ ಸರಣಿಯಲ್ಲಿ 3ನೇ ಬಾರಿಗೆ ರಿಚರ್ಡ್ ಸನ್ ಕೊಹ್ಲಿ ವಿಕೆಟ್ ಪಡೆದರು. ಕೊಹ್ಲಿ 62 ಎಸೆತಗಳಲ್ಲಿ 3 ಬೌಂಡರಿಗಳ ಸಹಾಯದಿಂದ 46 ರನ್ ಗಳಿಸಿದರು. ಇದನ್ನು ಓದಿ: ರವಿಶಾಸ್ತ್ರಿ ದಾಖಲೆ ಮುರಿದು, ಅಗರ್ಕರ್ ದಾಖಲೆ ಸರಿಗಟ್ಟಿದ ಚಹಲ್!

    ಕೊಹ್ಲಿ ಔಟಾಗುತ್ತಿದಂತೆ ಧೋನಿ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಅಲ್ಲದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಉನ್ನತಿ ಪಡೆದಿದ್ದ ಧೋನಿ ತಾಳ್ಮೆಯಿಂದಲೇ ರನ್ ಪೇರಿಸಿ ವೃತ್ತಿ ಜೀವನದ 70ನೇ ಅರ್ಧ ಶತಕ ಪೂರೈಸಿದರು. ಅಲ್ಲದೇ ತಂಡದವನ್ನು ಗೆಲುವಿನ ದಡ ಸೇರಿಸಿದರು. ತಂಡ ಒತ್ತಡದ ಸಮಯದಲ್ಲಿ ಧೋನಿಗೆ ಸಾಥ್ ನೀಡಿದ ಜಾದವ್ ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು. ಅಂತಿಮವಾಗಿ ಧೋನಿ ಔಟಾಗದೇ 87 ರನ್(114 ಎಸೆತ, 6 ಬೌಂಡರಿ) ಜಾಧವ್ ಔಟಾಗದೇ 61 ರನ್ (57 ಎಸೆತ, 7 ಬೌಂಡರಿ) ಹೊಡೆದರು. ಇವರಿಬ್ಬರು ಮುರಿಯದ ನಾಲ್ಕನೇ ವಿಕೆಟ್ ಗೆ 121 ರನ್ ಜೊತೆಯಾಟವಾಡಿ ಭಾರತ ಸರಣಿ ಗೆಲ್ಲುವಂತೆ ಮಾಡಿದರು.

    ಧೋನಿಗೆ ಜೀವದಾನ: ಪಂದ್ಯದಲ್ಲಿ 3 ಬಾರಿ ಜೀವದಾನ ಪಡೆದ ಧೋನಿ ಆಸೀಸ್‍ಗೆ ಮಾರಕವಾದರು. ಧವನ್ ಔಟಾಗುತ್ತಿದಂತೆ ಬ್ಯಾಟಿಂಗ್ ಇಳಿದ ಧೋನಿ 0 ಹಾಗೂ 70 ರನ್ ಗಳಿಸಿದ್ದ ವೇಳೆ ಕ್ಯಾಚ್ ನೀಡಿದ್ದರು. ಆದರೆ ಆಸೀಸ್ ಆಟಗಾರರು 2 ಬಾರಿಯೂ ಕ್ಯಾಚ್ ಚೆಲ್ಲಿದ್ದರು. ಬಳಿಕ 13 ರನ್ ಗಳಿಸಿದ್ದ ವೇಳೆ ರನೌಟ್ ಹಾಗೂ ತಂಡ 109 ರನ್ ಗಳಿಸಿದ್ದ ವೇಳೆ ಧೋನಿ ಕ್ಯಾಚ್ ಪಡೆದಿದ್ದರೂ ಕೂಡ ಅಂಪೈರ್ ಗೆ ಉತ್ತಮವಾಗಿ ಮನವಿ ಸಲ್ಲಿಸದ ಕಾರಣ ಪಾರಾಗಿದ್ದರು. ಇದನ್ನು ಓದಿ: ಕ್ಷಣಾರ್ಧದಲ್ಲಿ ಸ್ಟಂಪಿಂಗ್ – ಧೋನಿ ಕೀಪಿಂಗ್ ನೋಡಿ ಅಚ್ಚರಿಗೊಂಡ ಕೊಹ್ಲಿ

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಚಹಲ್ ಬೌಲಿಂಗ್ ದಾಳಿಗೆ ತತ್ತರಿಸಿ 230 ರನ್ ಗಳಿಗೆ ಅಲೌಟ್ ಆಯ್ತು. ಭಾರತದ ಪರ ಚಹಲ್ 6 ವಿಕೆಟ್ ಪಡೆದು ದಾಖಲೆ ನಿರ್ಮಿಸಿದರೆ, ಭುವನೇಶ್ವರ್ ಕುಮಾರ್ ಹಾಗೂ ಶಮಿ ತಲಾ ವಿಕೆಟ್ ಪಡೆದು ಮಿಂಚಿದರು.

    ಮೂರು ಪಂದ್ಯಗಳ ಟಿ 20 ಪಂದ್ಯ 1-1 ರಲ್ಲಿ ಸಮಬಲಗೊಂಡಿತ್ತು. ಎರಡನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಟೆಸ್ಟ್ ಸರಣಿ 2-1 ರಿಂದ ಗೆದ್ದಿದ್ದ ಭಾರತ ಈಗ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಟಿ-20 ಪಂದ್ಯದಲ್ಲಿ ಮಳೆಯಿಂದಾಗಿ ಡಕ್‍ವರ್ಥ್ ಲೂಯಿಸ್ ನಿಯಮದಿಂದ ಪರಿಷ್ಕೃತ ರನ್ ನೀಡಿದ ಪರಿಣಾಮ ಭಾರತ ಗೆಲುವಿನ ಸಮೀಪ ಬಂದು ಸೋತಿತ್ತು. ಆಸ್ಟ್ರೇಲಿಯಾ 4 ರನ್ ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಷಣಾರ್ಧದಲ್ಲಿ ಸ್ಟಂಪಿಂಗ್ – ಧೋನಿ ಕೀಪಿಂಗ್ ನೋಡಿ ಅಚ್ಚರಿಗೊಂಡ ಕೊಹ್ಲಿ

    ಕ್ಷಣಾರ್ಧದಲ್ಲಿ ಸ್ಟಂಪಿಂಗ್ – ಧೋನಿ ಕೀಪಿಂಗ್ ನೋಡಿ ಅಚ್ಚರಿಗೊಂಡ ಕೊಹ್ಲಿ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಮತ್ತೊಮ್ಮೆ ಮಿಂಚು ಹರಿಸಿದ್ದು, ಕ್ಷಣಾರ್ಧದಲ್ಲಿ ಸ್ಟಂಪ್ ಔಟ್ ಮಾಡಿದ್ದಾರೆ.

    ವರ್ಷದ ಆರಂಭದ ಬಳಿಕ ನಡೆದ 2 ಏಕದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದ್ದ ಧೋನಿ ಈ ಪಂದ್ಯದಲ್ಲಿ ತಮ್ಮ ಚಾಣಾಕ್ಷತೆ ತೋರಿ ಕಳೆದ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದ್ದ ಮಾರ್ಷ್ ವಿಕೆಟ್ ಪಡೆದು ಮಿಂಚಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://twitter.com/UB399/status/1086140484152635392?

    ಪಂದ್ಯದಲ್ಲಿ 3 ಬೌಂಡರಿ ಸಿಡಿಸಿ 39 ರನ್ ಗಳಿಸಿದ್ದ ಮಾರ್ಷ್ ಚಹಲ್ ಬೌಲಿಂಗ್ ನಲ್ಲಿ ಬ್ಯಾಟ್ ಬೀಸಲು ಯತ್ನಿಸಿ ವಿಫಲರಾಗಿದ್ರು. ಈ ವೇಳೆ ಚೆಂಡು ಧೋನಿ ಕೈ ಸೇರುತ್ತಿದಂತೆ ವಿಕೆಟ್ ಗೆ ಮುಟ್ಟಿಸಿದರು. ಇತ್ತ ಧೋನಿ ಸ್ಟಂಪ್ ಮಾಡುತ್ತಿದಂತೆ ನಾಯಕ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿ ಅಂಪೈರ್ ಔಟ್ ಎಂದು ತೀರ್ಪು ನೀಡುವ ಮೂಲಕವೇ ಆತ್ಮವಿಶ್ವಾಸದಿಂದ ಸಂಭ್ರಮಿಸಿದರು.

    ಸದ್ಯ ಸರಣಿಯಲ್ಲಿ 1-1ರ ಮೂಲಕ ಸಮಬಲ ಸಾಧಿಸಿರುವ ಟೀಂ ಇಂಡಿಯಾ ಅಂತಿಮ ಪಂದ್ಯ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಮಾಡುವ ವಿಶ್ವಾಸದಲ್ಲಿದೆ. ಟೀಂ ಇಂಡಿಯಾ ಪಂದ್ಯದಲ್ಲಿ ಜಯಗಳಿಸಿದರೆ ಆಸೀಸ್ ನೆಲದಲ್ಲಿ ನಡೆದ ದ್ವೀಪಕ್ಷಿಯ ಸರಣಿಯಲ್ಲಿ ಮೊದಲ ಬಾರಿಗೆ ಗೆಲುವು ಪಡೆದ ದಾಖಲೆ ನಿರ್ಮಿಸಲಿದೆ. ಅಲ್ಲದೇ ಆಸೀಸ್ ಪ್ರವಾಸದಲ್ಲಿ ಸರಣಿ ಸೋಲದೇ ಅಜೇಯರಾಗಿ ಉಳಿದ ಹೆಗ್ಗಳಿಕೆ ಪಡೆಯಲಿದೆ. ಇದನ್ನು ಓದಿ: ಧೋನಿಯ ಶರವೇಗದ ಸ್ಟಂಪಿಂಗ್ – ವೈರಲ್ ಆಗಿದೆ ವಿಡಿಯೋ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡೆಡ್ ಬಾಲ್ ಎಸೆದು ಫಿಂಚ್‍ಗೆ ಅಚ್ಚರಿ ನೀಡಿದ ಭುವಿ – ವಿಡಿಯೋ ನೋಡಿ

    ಡೆಡ್ ಬಾಲ್ ಎಸೆದು ಫಿಂಚ್‍ಗೆ ಅಚ್ಚರಿ ನೀಡಿದ ಭುವಿ – ವಿಡಿಯೋ ನೋಡಿ

    ಮೆಲ್ಬರ್ನ್: ಇಲ್ಲಿನ ಎಂಸಿಜೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ಬೌಲರ್ ಭುವನೇಶ್ವರ್ ಕುಮಾರ್ ಡೆಡ್ ಬಾಲ್ ಎಸೆದು ಎದುರಾಳಿ ಬ್ಯಾಟ್ಸ್ ಮನ್ ಫಿಂಚ್‍ಗೆ ಶಾಕ್ ನೀಡಿದ ಘಟನೆ ನಡೆದಿದೆ.

    ಪಂದ್ಯದ 9ನೇ ಓವರ್ ಬೌಲ್ ಮಾಡಿದ ಭುವನೇಶ್ವರ್ ಕುಮಾರ್, ಓವರಿನ ಅಂತಿಮ ಎಸೆತವನ್ನು ಅಂಪೈರ್ ಹಿಂದಿನಿಂದಲೇ ಎಸೆದಿದ್ದರು. ಈ ವೇಳೆ ಸ್ಟ್ರೈಕ್ ನಲ್ಲಿದ್ದ ಫಿಂಚ್ ಕ್ಷಣ ಕಾಲ ಶಾಕ್‍ಗೆ ಒಳಗಾಗಿದ್ದರು. ಆದರೆ ಈ ಎಸೆತವನ್ನು ಅಂಪೈರ್ ಡೆಡ್ ಬಾಲ್ ಎಂದು ಪರಿಗಣಿಸಿದರು. ಪರಿಣಾಮ ಭುವಿ ಮತ್ತೊಂದು ಎಸೆತ ಬೌಲ್ ಮಾಡಿದರು. ಅಚ್ಚರಿ ಎಂಬಂತೆ ಈ ಎಸೆತದಲ್ಲಿ ಫಿಂಚ್ ಎಲ್‍ಬಿಡಬ್ಲೂ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿದರು.

    ಸರಣಿಯಲ್ಲಿ ಭುವನೇಶ್ವರ್ ಕುಮಾರ್ 3ನೇ ಭಾರಿಗೆ ಫಿಂಚ್ ವಿಕೆಟ್ ಪಡೆದ ಸಾಧನೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭುವನೇಶ್ವರ್ ಕುಮಾರ್ ಡೆಡ್ ಬೌಲಿಂಗ್ ಮಾಡುತ್ತಿರುವ ಜಿಫ್ ವಿಡಿಯೋ ಚರ್ಚೆಯಾಗುತ್ತಿದೆ. ಪಂದ್ಯದಲ್ಲಿ ಭುವಿ 8 ಓವರ್ ಗಳಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್ ನಾಯಕ ಪೈನೆ ಚಾಲೆಂಜ್ ಸ್ವೀಕರಿಸಿದ ರಿಷಬ್ ಪಂತ್

    ಆಸೀಸ್ ನಾಯಕ ಪೈನೆ ಚಾಲೆಂಜ್ ಸ್ವೀಕರಿಸಿದ ರಿಷಬ್ ಪಂತ್

    ಮೆಲ್ಬರ್ನ್: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಆಸೀಸ್ ತಂಡ ನಾಯಕ ಟಿಮ್ ಪೈನೆ ಮನೆಗೆ ಭೇಟಿ ನೀಡಿದ್ದು, ಪೈನೆ ಹಾಗೂ ಬೋನಿ ದಂಪತಿಯ ಮಕ್ಕಳನ್ನು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಈ ಮೂಲಕ ಪೈನೆ ಚಾಲೆಂಜ್ ಸ್ವೀಕರಿಸಿದ್ದಾರೆ.

    ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ವೇಳೆ ಪರಸ್ಪರ ಕಾಲೆಳೆದುಕೊಂಡಿದ್ದ ಪೈನೆ ಹಾಗೂ ರಿಷಬ್ ಪಂತ್ ಕ್ರೀಡಾಂಗಣದಲ್ಲಿ ಆಟದ ಹೊರತಾಗಿಯೂ ತಮ್ಮ ಸ್ಲೆಡ್ಜಿಂಗ್ ಮೂಲಕವೂ ಎಲ್ಲರ ಗಮನ ಸೆಳೆದಿದ್ದರು.

    ಮೆಲ್ಬರ್ನ್ ಪಂದ್ಯದ 3ನೇ ದಿನದಾಟದ ವೇಳೆ ಧೋನಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿರುವುದನ್ನು ಪ್ರಸ್ತಾಪಿಸಿ ಕಾಲೆಳೆದಿದ್ದ ಪೈನೆ, ಬಿಗ್ ಬ್ಯಾಷ್ ಲೀಗ್ ಆಡುವಂತೆ ಸಲಹೆ ನೀಡಿದ್ದರು. ಅಲ್ಲದೇ ನಾನು ಪತ್ನಿಯೊಂದಿಗೆ ಸಿನಿಮಾಗೆ ತೆರಳಿದ ವೇಳೆ ತನ್ನ ಮಕ್ಕಳನ್ನು ನೋಡಿಕೋ ಎಂದು ಹೇಳಿ ಸ್ಲೆಡ್ಜಿಂಗ್ ಮಾಡಿದ್ದರು. ಬಳಿಕ ಪೈನೆಗೆ ತಿರುಗೇಟು ನೀಡಿದ್ದ ರಿಷಬ್ ಪಂತ್, ಪೈನೆಗೆ ತಾತ್ಕಾಲಿಕ ನಾಯಕ ಎಂದು ಕಾಲೆಳೆದಿದ್ದರು.

    ಸದ್ಯ ಈ ಇಬ್ಬರ ಒಡನಾಟ ಕ್ರೀಡಾಂಗಣದ ಆಚೆಗೂ ಮುಂದುವರೆದಿದ್ದು, ಸದ್ಯ ರಿಷಬ್ ಪಂತ್ ಪೈನೆರ ಕುಟುಂಬವನ್ನ ಭೇಟಿ ಮಾಡಿದ್ದಾರೆ. ಅಲ್ಲದೇ ಪೈನೆ ಮಕ್ಕಳನ್ನು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಪೈನೆ ಪತ್ನಿ ಬೋನಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಪಂತ್ ಒಬ್ಬ ಉತ್ತಮ ಮಕ್ಕಳ ಪಾಲಕ ಎಂದು ಬರೆದುಕೊಂಡಿದ್ದಾರೆ. ಇದೇ ಚಿತ್ರವನ್ನ ಐಸಿಸಿ ಕೂಡ ಟ್ವೀಟ್ ಮಾಡಿ ಚಾಲೆಂಜ್ ಸ್ವೀಕರಿಸಿದ ರಿಷಬ್ ಪಂತ್ ಎಂದು ಬರೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೆಲುವಿನ ಮತ್ತಲ್ಲಿ ಬಿಯರ್ ಕುಡಿಯುತ್ತಾ ಎಂಟ್ರಿ ಕೊಟ್ಟ ರವಿಶಾಸ್ತ್ರಿ – ವೈರಲ್ ವಿಡಿಯೋ

    ಗೆಲುವಿನ ಮತ್ತಲ್ಲಿ ಬಿಯರ್ ಕುಡಿಯುತ್ತಾ ಎಂಟ್ರಿ ಕೊಟ್ಟ ರವಿಶಾಸ್ತ್ರಿ – ವೈರಲ್ ವಿಡಿಯೋ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದ ಟೀಂ ಇಂಡಿಯಾ ಸಂಭ್ರಮದಲ್ಲಿ ತೊಡಗಿದ್ದು, ಈ ವೇಳೆ ಕೋಚ್ ರವಿಶಾಸ್ತ್ರಿ ಬಿಯರ್ ಕುಡಿಯುತ್ತಾ ಬಸ್ಸಿನಿಂದ ಕೆಳಗಿಳಿದು ತೆರಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರವಿಶಾಸ್ತ್ರಿ ಬಿಯರ್ ಕೂಡಿಯುತ್ತಿರುವ ಫೋಟೋ ಹಾಗೂ ವಿಡಿಯೋಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ.

    ಗೆಲುವಿನ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು ಮೆಲ್ಬರ್ನ್ ಕ್ರೀಡಾಂಗಣದ ಕೊಠಡಿಯಲ್ಲಿ ಫೋಟೋಗೆ ಪೋಸ್ ನೀಡಿದ ಸಂದರ್ಭದಲ್ಲೂ ಕೋಚ್ ರವಿಶಾಸ್ತ್ರಿ ಬಿಯರ್ ಬಾಟಲಿಯೊಂದಿಗೆ ಗೆಲುವಿನ ನಗೆ ತೋರಿದ್ದಾರೆ. ಬಳಿಕ ಹೋಟೆಲ್ ಕೊಠಡಿಗೆ ತೆರಳುವ ವೇಳೆ ಬಸ್ಸಿನಿಂದ ಕೆಳಗಿಳಿದ ರವಿಶಾಸ್ತ್ರಿ ಮಾಧ್ಯಮಗಳು ಇರುವುದನ್ನು ಲೆಕ್ಕಿಸದೇ ಬಿಯರ್ ಕುಡಿಯುತ್ತಾ ಮುಂದೇ ಸಾಗಿದ್ದಾರೆ. ಈ ದೃಶ್ಯ ತಮ್ಮ ವಿರುದ್ಧ ಟೀಕೆ ಮಾಡಿದ್ದ ವ್ಯಕ್ತಿಗಳಿಗೆ ಟಾಂಗ್ ಕೊಟ್ಟಂತೆ ಕಂಡು ಬಂದಿತ್ತು.

    ರವಿಶಾಸ್ತ್ರಿ ಅವರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಕೋಚ್ ಟೀಂ ಇಂಡಿಯಾಗೆ ಅಗತ್ಯವಿಲ್ಲ. ರವಿಶಾಸ್ತ್ರಿಗಿಂತ ಅತ್ಯುತ್ತಮ ಕೋಚ್ ಆಯ್ಕೆಗಳು ನಮ್ಮ ಮುಂದಿದೆ. ನೀವು ಗ್ರೇಟ್ ಟೀಂ ಇಂಡಿಯಾದ ಕೋಚ್ ಎಂಬುವುದನ್ನು ಮರೆಯಬಾರದು ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    https://twitter.com/msd_junior/status/1079408029089509376?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv