Tag: ಮೆದುಳು ನಿಷ್ಕ್ರಿಯ

  • ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದ ರೈತ – ಯುವಕನ ಆಸೆಯಂತೆ ಅಂಗಾಂಗ ದಾನ

    ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದ ರೈತ – ಯುವಕನ ಆಸೆಯಂತೆ ಅಂಗಾಂಗ ದಾನ

    ಬೆಂಗಳೂರು: ರಕ್ತ ಹೆಪ್ಪುಗಟ್ಟಿ ಯುವ ರೈತ ಮೃತಪಟ್ಟಿದ್ದು, ಅವರ ಆಸೆಯಂತೆ ಅಂಗಾಂಗ ದಾನ ಮಾಡಲಾಗಿದೆ.

    ವಿಕಾಶ್ ಎಚ್.ಪಿ ಸಕಲೇಶಪುರದ ಹೆತ್ತೂರು ಹೋಬಳಿಯ ಹೊಸಹಳ್ಳಿಯವರಾಗಿದ್ದು, ಪದವಿ ಮುಗಿಸಿ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರು. ಪುಟ್ಟಸ್ವಾಮಿ ಗೌಡ ಹಾಗೂ ದಿ.ಶಶಿಕಲಾ ಅವರ ಮೂವರ ಮಕ್ಕಳಲ್ಲಿ ವಿಕಾಸ್ ಮೊದಲನೇ ಮಗ. ಬದುಕು ಕಟ್ಟಿಕೊಳ್ಳಲು ಹಳ್ಳಿಗಳಿಂದ ಪಟ್ಟಣಕ್ಕೆ ಹೋಗುವ ಯುವಕರೇ ಹೆಚ್ಚಿರುವಾಗ ವಿಕಾಸ್ ಹಳ್ಳಿಯಲ್ಲೇ ಉಳಿದುಕೊಂಡು ಕೃಷಿ ಮಾಡುತ್ತಿದ್ದರು. ಇದನ್ನೂ ಓದಿ:  ತರಗತಿಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು – ಪೋಷಕರಿಂದ ಅಂಗಾಂಗ ದಾನ

    ಆಗಾಗ ತಲೆ ನೋವು ಎನ್ನುತ್ತಿದ್ದ ರೈತ ವಿಕಾಸ್ ಕಳೆದ ಶುಕ್ರವಾರ ವಿಪರೀತ ತಲೆ ನೋವು ಬಂದಿತ್ತು. ಸಕಲೇಶಪುರ ಹಾಗೂ ಮಂಗಳೂರಿನ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬ್ಲಡ್ ಕ್ಲಾಟ್ ಆಗಿರುವುದು ತಿಳಿಯಿತು. ಚಿಕಿತ್ಸೆಯಲ್ಲಿರುವಾಗ್ಲೇ ಕೋಮಾಗೆ ಜಾರಿದ ವಿಕಾಸ್ ಮೆದುಳು ನಿಷ್ಕ್ರಿಯವಾಗಿತ್ತು. ಶುಕ್ರವಾರ ಬೆಂಗಳೂರಿನ ಗೊರಗುಂಟೆಪಾಳ್ಯ ಬಳಿಯ ಸ್ಪರ್ಶ ಆಸ್ಪತ್ರೆಯಲ್ಲಿ ಯುವಕ ವಿಕಾಸ್ ಮೃತಪಟ್ಟಿದ್ದಾರೆ. ಆದರೆ ಸಾವಿನ ನಂತರವೂ ವಿಕಾಸ್ ಹಲವರ ಬಾಳಿಗೆ ಬೆಳಕಾಗಿದ್ದಾರೆ.

    ಬದುಕಿದ್ದಾಗ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ ರೈತ ವಿಕಾಸ್ ಗೆಳೆಯರ ಬಳಿ ಅಂಗಾಂಗ ದಾನದ ಬಗ್ಗೆ ಮಾತನಾಡುತ್ತಿದ್ದರು. ಈ ವಿಷಯವನ್ನು ಅವರ ಸ್ನೇಹಿತರು ವಿಕಾಸ್ ಪೋಷಕರಿಗೆ ತಿಳಿಸಿದರು. ಮಗನ ಸಾವಿನ ನಂತರ ವಿಕಾಸ್ ಕುಟುಂಬ ಸಾರ್ಥಕತೆ ಮೆರೆದಿದೆ. ರೈತ ವಿಕಾಸ್ ಸಾವಿನ ನಂತರವೂ ಎಂಟು ಮಂದಿಗೆ ಬದುಕಿದ್ದಾರೆ. ವಿಕಾಸ್ ಅಂಗಾಂಗಗಳನ್ನು ಬಿಜಿಎಸ್ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ.

    ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ‘ಜೀವ ಸಾರ್ಥಕತೆ’ ಅಡಿಯಲ್ಲಿ ಅಂಗಾಂಗ ದಾನ ಮಾಡಲಾಗಿದೆ. ಇಂದು ವಿಕಾಸ್ ಅವರ ಅಂತ್ಯಕ್ರಿಯೆ ಹುಟ್ಟೂರಲ್ಲಿ ನೆರವೇರಲಿದೆ. ರೈತ ಯುವಕ ವಿಕಾಸ್ ನಮ್ಮೊಂದಿಗೆ ಇಲ್ಲ ಎಂದರು ಅವನ ಜೀವನ ಸಾರ್ಥಕವಾಗಿದೆ ಎನ್ನುವ ಮನೋಭಾವದಲ್ಲಿ ಅವರ ಕುಟುಂಬವಿದೆ.

  • 14 ತಿಂಗಳ ಬಾಲಕನ ಹೃದಯ ದಾನದಿಂದ 3ರ ಬಾಲಕಿಗೆ ಮರುಜೀವ ಸಿಕ್ತು

    14 ತಿಂಗಳ ಬಾಲಕನ ಹೃದಯ ದಾನದಿಂದ 3ರ ಬಾಲಕಿಗೆ ಮರುಜೀವ ಸಿಕ್ತು

    ಅಹಮದಾಬಾದ್: ಮೆದುಳು ನಿಷ್ಕ್ರಿಯುಗೊಂಡಿದ್ದ 14 ತಿಂಗಳ ಪುಟ್ಟ ಮಗುವಿನ ಹೃದಯ ಹಾಗೂ ಕಿಡ್ನಿ ದಾನದಿಂದ ಎರಡು ಜೀವಗಳಿಗೆ ಮರುಜೀವ ಸಿಕ್ಕಂತಾಗಿದೆ. ಈ ಮೂಲಕ ಬಾಲಕ ಸೋಮನಾಥ್ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದ್ದಾನೆ.

    ಮಂಗಳವಾರದಂದು ಸೋಮನಾಥ್‍ನ ಹೃದಯವನ್ನು ಮೂರುವರೆ ವರ್ಷದ ಬಾಲಕಿ ಆರಾಧ್ಯ ಮೂಲೆಗೆ ಜೋಡಿಸಲಾಗಿದೆ. ಆರಾಧ್ಯಗಾಗಿ ನಡೆದ ಸೇವ್ ಆರಾಧ್ಯ ಅಭಿಯಾನ ಇದೇ ವರ್ಷ ಮುಂಬೈ ಹಾಗೂ ಪುಣೆಯಲ್ಲಿ ಜನಪ್ರಿಯತೆ ಗಳಿಸಿತ್ತು.

    ಸೋಮನಾಥ್ ಮೂಲತಃ ಬಿಹಾರದ ಸಿಸ್ವಾನ್ ಜಿಲ್ಲೆಯ ಮುಬಾರಕ್‍ಪುರ್ ಗ್ರಾಮದವನು. ಕೆಲವು ತಿಂಗಳ ಹಿಂದಷ್ಟೇ ತಂದೆ ಸುನಿಲ್ ಸೂರತ್‍ಗೆ ಬಂದು ನೆಲೆಸಿದ್ದು, ಪವರ್‍ಲೂಮ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡ್ತಿದ್ರು.

    ಸೆಪ್ಟೆಂಬರ್ 2ರಂದು ಸಂಜೆ 7 ಗಂಟೆ ವೇಳೆಯಲ್ಲಿ ಸೋಮನಾಥ್ ತನ್ನ ಅಕ್ಕ ಕುಸುಮ್ ಜೊತೆ ಮನೆಯ ಬಳಿ ಆಟವಾಡುವಾಗ ಮಹಡಿಯಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿತ್ತು. ಸೋಮನಾಥ್‍ಗೆ ಪ್ರಜ್ಞೆ ಹೋಗಿತ್ತು. ಪೋಷಕರು ಕೂಡಲೇ ಆತನನ್ನು ವೈದ್ಯರೊಬ್ಬರ ಬಳಿ ಕೊಂಡೊಯ್ದಿದ್ದರು. ವೈದ್ಯರ ಸೂಚನೆಯಂತೆ ಸೂರತ್‍ನ ನ್ಯೂ ಸಿವಿಲ್ ಆಸ್ಪತ್ರೆಗೆ ಬಾಲಕನನ್ನು ಕರೆದುಕೊಂಡು ಹೋಗಿದ್ದರು.

    ಬಾಲಕನ ಮೆದುಳಲ್ಲಿ ತೀವ್ರ ರಕ್ತಸ್ರಾವವಾಗಿದ್ದು, ತಲೆಬುರುಡೆಯ ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದ್ರು. ಸಮನಾಥ್‍ಗೆ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಭಾನುವಾರ ರಾತ್ರಿ ವೈದ್ಯರು ತಿಳಿಸಿದ್ರು. ನಂತರ ನಾವು ಆಸ್ಪತ್ರೆಗೆ ಹೋಗಿ ಪೋಷಕರಿಗೆ ಅಂಗಾಂಗ ದಾನದ ಬಗ್ಗೆ ವಿವರಿಸಿದೆವು ಎಂದು ಸೂರತ್‍ನ ಅಂಗಾಂಗ ದಾನ ಸಂಸ್ಥೆ ಡೊನೇಟ್ ಲೈಫ್‍ನ ಅಧ್ಯಕ್ಷ ನೀಲೇಶ್ ಹೇಳಿದ್ದಾರೆ.

    ಕುಟುಂಬಸ್ಥರೊಂದಿಗೆ ಮಾತನಾಡಿದ ನಂತರ ಅವರು ಸೆಪ್ಟೆಂಬರ್ 4ರ ಸಂಜೆ ಅಂಗಾಂಗ ದಾನಕ್ಕೆ ಒಪ್ಪಿದ್ರು. ನಂತರ ನಾವು ಅಂಗಾಂಗ ಸ್ವೀಕರಿಸುವವರಿಗಾಗಿ ಹುಡುಕುವ ಪ್ರಕ್ರಿಯೆ ಶುರು ಮಾಡಿದೆವು ಎಂದು ಅವರು ಹೇಳಿದ್ರು.

    ನಮ್ಮ ಮಗ ಮನೆಯ ವರಾಂಡಾದಲ್ಲಿ ಆಟವಾಡ್ತಿದ್ದ. ಮೆಟ್ಟಿಲಿನ ಮೇಲೆ ಹೋಗಿ ಅಲ್ಲಿಂದ ಕೆಳಗೆ ಬಿದ್ದ. ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿದಾಗ ಮೆದುಳು ನಿಷ್ಕ್ರಿಯಯಗೊಂಡಿರುವುದು ಗೊತ್ತಾಯಿತು. ನಮ್ಮ ಒಬ್ಬನೇ ಮಗ ಸೋಮನಾಥ್‍ನನ್ನು ಕಳೆದುಕೊಂಡು ನೋವಾಗಿದೆ. ಕೌನ್ಸೆಲರ್‍ಗಳು ನಮಗೆ ಅಂಗಾಗ ದಾನದ ಮಹತ್ವದ ಬಗ್ಗೆ ಹೇಳಿದ ಬಳಿಕ ಒಪ್ಪಿಕೊಂಡೆವು. ನಮ್ಮ ನಿರ್ಧಾರದ ಬಗ್ಗೆ ಹೆಮ್ಮೆಯಿದೆ. ನಮ್ಮ ಮಗುವಿನಿಂದಾಗಿ ಮತ್ತೊಂದು ಮಗುವಿನ ಜೀವ ಉಳಿಯುತ್ತೆ ಅಂದ್ರೆ ಅದಕ್ಕಿಂತ ದೊಡ್ಡದು ಮತ್ತೊಂದಿಲ್ಲ ಅಂತ ಸೋಮನಾಥ್ ತಂದೆ ಸುನಿಲ್ ಹೇಳಿದ್ದಾರೆ.

    ಸೋಮನಾಥ್ ಕಿಡ್ನಿಯನ್ನು ಅಹಮದಾಬಾದ್‍ನ ಇನ್ಸ್ ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸಸ್ ಅಂಡ್ ರಿಸರ್ಚ್ ಸೆಂಟರ್ (ಐಕೆಡಿಆರ್‍ಸಿ)ನಲ್ಲಿ ರೋಗಿಗೆ ಜೋಡಿಸಲಾಗುತ್ತದೆ.

    ಸೋಮನಾಥ್ ಕಿಡ್ನಿ ಐಕೆಡಿಆರ್‍ಸಿ ತಲುಪಿದೆ. ನಾವು ಕಿಡ್ನಿಗೆ ಹೊಂದುವ ರೋಗಿಯನ್ನ ಹುಡುಕುತ್ತಿದ್ದೇವೆ. ಮಗುವಿನದ್ದು ತುಂಬಾ ಚಿಕ್ಕ ಕಿಡ್ನಿಗಳಾಗಿರುವುದರಿಂದ ಎರಡೂ ಕಿಡ್ನಿಯನ್ನ ಒಂದೇ ಮಗುವಿಗೆ ಜೋಡಿಸಬೇಕೆಂದಿದ್ದೇವೆ. ಕೂಡಲೇ ಈ ಪ್ರಕ್ರಿಯೆ ಆರಂಭಿಸುತ್ತೇವೆ. ನನಗೆ ಗೊತ್ತಿರುವ ಪ್ರಕಾರ ಸೋಮನಾಥ್ ನಮ್ಮ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂದು ಐಕೆಡಿಆರ್‍ಸಿಯ ಡಾ ಜಮಲ್ ರಿಸ್ವಿ ಹೇಳಿದ್ದಾರೆ.