Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬೆಂಗಳೂರು: ಹೆಣ್ಣೂರಿನ ಎಚ್ಬಿಆರ್ ಲೇಔಟ್ (HBR Lay Out) ಬಳಿ ಮಂಗಳವಾರ ಮೆಟ್ರೋ ಪಿಲ್ಲರ್ ಬಿದ್ದು (Namma Metro Pillar Collapse) ಎರಡು ಅಮಾಯಕ ಜೀವಗಳು ಹೋದ ಬೆನ್ನಲ್ಲೇ ಪೊಲೀಸ್ ಇಲಾಖೆಯಿಂದ ತಪ್ಪಿತಸ್ಥರಿಗೆ ಬುಲಾವ್ ನೀಡಲಾಗಿದೆ.

ಸಮನ್ಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಮೃತ ತೇಜಸ್ವಿನಿ ಪತಿ ಲೋಹಿತ್ (Lohith) ಕೊಟ್ಟ ದೂರಿನ ಮೇಲೆ ಐವರ ಮೇಲೆ ಗೋವಿಂದಪುರ ಠಾಣೆ ಪೊಲೀಸರು (Govindapura Police Station) ಎಫ್ಐಆರ್ (FIR) ದಾಖಲಿಸಿದ್ದಾರೆ. ಇದನ್ನೂ ಓದಿ: ಪತ್ನಿ, ಮಗನ ಸಾವಿಗೆ ಕಾರಣರಾದವ್ರ ವಿರುದ್ಧ ಕ್ರಮಕ್ಕೆ ಲೋಹಿತ್ ದೂರು- ಎಫ್ಐಆರ್
ಎ1 ಆರೋಪಿ ಸೈಟ್ ಎಂಜಿನಿಯರ್, ಎ2 ಆರೋಪಿ ಮೆಟ್ರೋ ಗುತ್ತಿಗೆದಾರರು, ಎ3 ಆರೋಪಿ ಸೈಟ್ ಇನ್ಚಾರ್ಜ್ ಅಧಿಕಾರಿ, ಎ4 ಆರೋಪಿ ಬಿಎಂಆರ್ಸಿಎಲ್ ಅಧಿಕಾರಿಗಳು, ಎ5 ಇತರರ ಮೇಲೆ ಐಪಿಸಿ ಸೆಕ್ಷನ್ 336, 337, 304ಎ, 427, 34 ಅಡಿಯಲ್ಲಿ ಕೇಸ್ ದಾಖಲಾಗಿದೆ. ಸದ್ಯ ಎಲ್ಲಾ ಆರೋಪಿಗಳಿಗೂ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಬಿಎಂಆರ್ಸಿಎಲ್ ಹಾಗೂ ಗುತ್ತಿಗೆದಾರರಿಂದ ನಡೆದಿರುವ ಕೊಲೆ ಎಂದು ಮೃತರ ಕುಟುಂಬ ಆಕ್ರೋಶ ಹೊರಹಾಕಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಸಸ್ಪೆಂಡ್ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ (Basavarj Bommai) ಕೂಡ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಡೆಡ್ಲಿ ಮೆಟ್ರೋಗೆ ಇಬ್ಬರು ಬಲಿ – ಪಿಲ್ಲರ್ ದುರಂತಕ್ಕೆ ಕಾರಣಗಳೇನು?
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬೆಂಗಳೂರು: ಹೆಣ್ಣೂರಿನ ಎಚ್ಬಿಆರ್ ಲೇಔಟ್ (HBR Lay Out) ಬಳಿ ಮಂಗಳವಾರ ನಡೆದ ಮೆಟ್ರೋ ಪಿಲ್ಲರ್ ದುರಂತಕ್ಕೆ ಸಂಬಂಧಿಸಿದಂತೆ ಪತ್ನಿ, ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಪತಿ ಲೋಹಿತ್ (Lohith) ದೂರು ನೀಡಿದ್ದಾರೆ. ಕಿಲ್ಲರ್ ಪಿಲ್ಲರ್ ಮಹಾದುರಂತದ ಬಗ್ಗೆ ವಿವರಣಾತ್ಮಕ ದೂರು ನೀಡಿದ್ದು, ಗೋವಿಂದಪುರ ಠಾಣೆ (Govindapura Police Station) ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಲೋಹಿತ್ ಪೊಲೀಸರಿಗೆ ಕೊಟ್ಟಿರೋ ದೂರಿನ ಸಾರಾಂಶ: ನನಗೆ ಇಬ್ಬರು ಮಕ್ಕಳಿದ್ದು ಹೆಂತಿ ಮಕ್ಕಳ ಜೊತೆ ಹೊರ ಮಾವು ಕಲ್ಕರೆಯಲ್ಲಿರೋ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದೀನಿ. ವೃತ್ತಿಯಲ್ಲಿ ನಾನು ನನ್ನ ಹೆಂಡತಿ ಸಿವಿಲ್ ಎಂಜಿನಿಯರಿಂಗ್ ಆಗಿ ಕೆಲಸ ಮಾಡಿಕೊಂಡಿರುತ್ತೇವೆ. ನಮಗೆ 2 ವರ್ಷ ಆರು ತಿಂಗಳ ಸುಶ್ಮಿತಾ ಹಾಗೂ ವಿಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಕೆಲಸಕ್ಕೆ ಹೋಗುವ ಮುನ್ನ ಇಬ್ಬರು ಮಕ್ಕಳನ್ನು ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗ್ತಾ ಇರುತ್ತೇವೆ.

ಪ್ರತಿ ದಿನದಂತೆ ಮಂಗಳವಾರವೂ ಹೀರೋ ಹೊಂಡಾ ಗ್ಲಾಮರ್ ಗಾಡಿಯಲ್ಲಿ ಬೇಬಿ ಸಿಟ್ಟಿಂಗ್ ಗೆ ಮಕ್ಕಳನ್ನ ಬಿಟ್ಟು ಪತ್ನಿ ತೇಜಸ್ವಿನಿಯನ್ನು ಅಲ್ಲಿಯೇ ಕೆಲಸಕ್ಕೆ ಬಿಟ್ಟು ಹೋಗಲಿಕ್ಕೆ ಹೋಗುತ್ತಾ ಇದ್ದೆ. ಬೆಳಗ್ಗೆ 10 ಗಂಟೆಗೆ ಮನೆ ಬಿಟ್ಟು ಹೆಣ್ಣೂರು ಕ್ರಾಸ್ ಕಡೆಯಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆ ಹೋಗುತ್ತಿದ್ದೆ. ನಾನು ವಾಹನ ಚಾಲನೆ ಮಾಡುತ್ತಿದ್ದರಿಂದ ಹಿಂದೆ ಮಗಳು, ಮಗ ಹಾಗೂ ಪತ್ನಿ ಕುತಿರುತ್ತಾರೆ. ಇದನ್ನೂ ಓದಿ: ದಾವಣಗೆರೆಗೆ ಬಂದ ಮೃತ ತೇಜಸ್ವಿನಿ, ಪುತ್ರನ ಶವ- ತಾಯಿ, ಮಗುವಿನ ಪ್ರತ್ಯೇಕ ಅಂತ್ಯಸಂಸ್ಕಾರ

ಹೆಚ್ ಬಿ ಆರ್ ಲೇಔಟ್ ಆಕ್ಸಿಸ್ ಬ್ಯಾಂಕ್ ಬಳಿ ನಾವು ಬಂದಾಗ ಮೆಟ್ರೋ ಪಿಲ್ಲರ್ (Metro Pillar) ಒಮ್ಮೆಲೆ ನಮ್ಮ ಮೇಲೆ ಬಿದ್ದಿದೆ. ಘಟನೆಯಲ್ಲಿ ನನ್ನ ಪತ್ನಿ ತೇಜಸ್ವಿನಿ ಹಾಗೂ ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರ ಸಾಹದಿಂದ ಪಕ್ಕದಲ್ಲಿದ್ದ ಆಸ್ಪತ್ರೆ ದಾಖಲಿಸಲಾಯ್ತು. ಮಗ ಮತ್ತು ಪತ್ನಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಹಾಗಾಗಿ ಘಟನೆಗೆ ಕಾರಣರಾದ ಸೈಟ್ ಎಂಜಿನಿಯರ್ಸ್ ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳು, ಮೆಟ್ರೋ ಕಾಮಾಗಾರಿಯ ಗುತ್ತಿಗೆದಾರರ ವಿರುದ್ಧ ಕ್ರಮ ಜರಗಿಸುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k