Tag: ಮೂರ್ತಿ

  • ಕೊಟ್ಟಿಗೆಯಲ್ಲಿ ಸಿಕ್ತು ದೇವಿ ಮೂರ್ತಿ – ದೇವಸ್ಥಾನ ಕಟ್ಟಿಸಿದ ಭಕ್ತರು

    ಕೊಟ್ಟಿಗೆಯಲ್ಲಿ ಸಿಕ್ತು ದೇವಿ ಮೂರ್ತಿ – ದೇವಸ್ಥಾನ ಕಟ್ಟಿಸಿದ ಭಕ್ತರು

    ಧಾರವಾಡ: ಇದು ಜನ ಮರಳೋ ಜಾತ್ರೆ ಮರಳೋ ಎಂಬಂತಿದೆ. ಯಾಕೆಂದರೆ ಧಾರವಾಡದ ದುಂಡಿ ಓಣಿಯಲ್ಲಿ ದೇವಿ ಉದ್ಭವವಾಗಿದ್ದಾಳೆ ಎಂದು ಅಲ್ಲಿನ ಜನ ಹೇಳುತಿದ್ದಾರೆ. ಹೌದು, ಧಾರವಾಡ ನಗರದ ಹೊಸಯಲ್ಲಾಪೂರದ ದುಂಡಿ ಓಣಿಯಲ್ಲಿರುವ ಯಲ್ಲನಗೌಡ ಪಾಟೀಲರ ಮನೆಯಲ್ಲಿ ಈ ಪವಾಡ ನಡೆದಿದೆ.

    ದೀಪಾವಳಿ ಪಾಂಡ್ಯಮಿಯ ದಿನ ಮನೆಗೆ ಬಂದ ಅಪರಿಚಿತ ಮಹಿಳೆಯೋರ್ವಳು ದನದ ಕೊಟ್ಟಿಗೆ ಹತ್ತಿರ ಇರುವ ಜಾಗದಲ್ಲಿ ನಿಂತು, ಇಲ್ಲಿ ಗೋಡೆಯ ಮೇಲೆ ದ್ಯಾಮವ್ವ ದೇವಿ ಇದ್ದಾಳೆ ಎಂದು ಹೇಳಿದ್ದಳಂತೆ. ಇದನ್ನು ನಂಬಿದ ಆ ಮನೆಯವರು ದನದ ಕೊಟ್ಟಿಗೆಯನ್ನು ತೆಗದು ತೆಗೆದು ನೋಡಿದರೆ ಅಲ್ಲಿ ದೇವಿಯ ಪಾದಗಳು ಅವರಿಗೆ ಸಿಕ್ಕಿವೆ.

    ನಂತರ ಕಲ್ಲಿನ ಮೇಲೆ ಮೂರ್ತಿ ಕೆತ್ತನೆ ಮಾಡಿದ್ದು ಸಿಕ್ಕಿದೆ. ಇದು ಸಿಕ್ಕಿದ್ದೇ ತಡ ಎಲ್ಲ ಜನರು ಹಾಗೂ ಮನೆಯವರು ಇದೊಂದು ಪವಾಡ ಎಂದು ತಿಳಿದು ಮನೆಯಲ್ಲಿ ದೇವಿ ನೋಡಲು ಈಗ ಜನಸಾಗರವೇ ಹರಿದು ಬರುತ್ತಿದ್ದು, ಪ್ರತಿ ದಿನ ಪೂಜೆ ಪುನಸ್ಕಾರ ಆರಂಭವಾಗಿದೆ. ಈ ಮನೆಯವರು ದೇವಿ ಸಿಕ್ಕ ಜಾಗದಲ್ಲಿ ಸಣ್ಣ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ.

  • ಬರೋಬ್ಬರಿ 65 ಕೆ.ಜಿ ಚಾಕಲೇಟ್‍ನಲ್ಲಿ ಮೂಡಿದ ಗಣೇಶ

    ಬರೋಬ್ಬರಿ 65 ಕೆ.ಜಿ ಚಾಕಲೇಟ್‍ನಲ್ಲಿ ಮೂಡಿದ ಗಣೇಶ

    ಲುದಿಯಾನಾ: ಗಣೇಶ ಚತುರ್ಥಿಯಂದು ಹಲವು ಕಡೆ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಯಿತು. ಆದರೆ ಪಂಜಾಬ್‍ನ ಲೂದಿಯಾನಾದಲ್ಲಿ ಬರೋಬ್ಬರಿ 65 ಕೆ.ಜಿ ಚಾಕಲೇಟ್ ಬಳಸಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಯಿತ್ತು.

    ಹರ್‍ಜಿಂದರ್ ಸಿಂಗ್ ಕುಕ್ರೇಜಾ ಅವರು ಬರೋಬ್ಬರಿ 65 ಕೆ.ಜಿ ಚಾಕಲೇಟ್ ಬಳಸಿ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. ಸತತವಾಗಿ ಮೂರನೇ ವರ್ಷ ಚಾಕಲೇಟ್ ಗಣೇಶನನ್ನು ಮಾಡಿ ಪ್ರತಿಷ್ಠಾಪಿಸಿದ್ದಾರೆ. ಈ ಗಣೇಶ ಮೂರ್ತಿಯನ್ನು 20 ಶೇಫ್‍ಗಳು 10 ದಿನದಲ್ಲಿ ತಯಾರಿಸಿದ್ದಾರೆ.

    ಸದ್ಯ ಹರ್‍ಜಿಂದರ್ ಈ ಫೋಟೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ಸತತವಾಗಿ ಮೂರನೇ ವರ್ಷ ಚಾಕಲೇಟ್ ಗಣೇಶನನ್ನು ತಯಾರಿಸಿದ್ದೇವೆ. ಈ ಗಣೇಶ ಮೂರ್ತಿಯನ್ನು 20 ಶೇಫ್‍ಗಳು 10 ದಿನದಲ್ಲಿ ತಯಾರಿಸಿದ್ದಾರೆ. ಜನರಿಗೆ ಗಣೇಶ ಚತುರ್ಥಿಯಂದು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಲು ಸ್ಫೂರ್ತಿ ನೀಡುವ ಉದ್ದೇಶದಿಂದ ಈ ಚಾಕಲೇಟ್ ಗಣೇಶನನ್ನು ತಯಾರಿಸಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.

    ಈ ಚಾಕಲೇಟ್ ಗಣೇಶ ಪರಿಸರ ಸ್ನೇಹಿ ಗಣೇಶ ಅಲ್ಲದೇ ಬೇರೆ ಒಂದು ಮಹತ್ವದ ಉದ್ದೇಶಕ್ಕಾಗಿಯೂ ಮಾಡಲಾಗಿದೆ. ಈ ಗಣೇಶನನ್ನು ನೀರಿನಲ್ಲಿ ವಿಸರ್ಜನೆ ಮಾಡುವ ಬದಲು ಹಾಲಿನಲ್ಲಿ ವಿಸರ್ಜನೆ ಮಾಡಿ ಅದನ್ನು ಬಡಮಕ್ಕಳಿಗೆ ಹಂಚಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

    ಸದ್ಯ ಹರ್‍ಜಿಂದರ್ ಟ್ವೀಟ್ ಮಾಡಿದ 1 ಗಂಟೆಯಲ್ಲಿ ಸಾಕಷ್ಟು ಕಮೆಂಟ್ಸ್ ಬಂದಿತ್ತು. ಕೆಲವರು ಚಾಕಲೇಟ್ ಗಣೇಶನನ್ನು ನೋಡಿ ಗಣೇಶ ಮೊದಲೇ ಫುಡೀ. ನೀವು ಮುಂದಿನ ಬಾರಿ ಲಡ್ಡು ಗಣೇಶ ಮಾಡಲು ಪ್ರಯತ್ನಿಸಿ ಎಂದು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ನೀವು ಮಾಡಿದ ಚಾಕಲೇಟ್ ಗಣೇಶ ಚೆನ್ನಾಗಿದೆ ಹಾಗೂ ಅದರ ಹಿಂದಿನ ಉದ್ದೇಶ ಕೂಡ ಚೆನ್ನಾಗಿದೆ ಎಂದು ರೀ-ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪುರಾತನ ಮೂರ್ತಿಗಳೆಂದು ನಂಬಿಸಿ ವಂಚಿಸುತ್ತಿದ್ದ ಆರೋಪಿಗಳ ಬಂಧನ!

    ಪುರಾತನ ಮೂರ್ತಿಗಳೆಂದು ನಂಬಿಸಿ ವಂಚಿಸುತ್ತಿದ್ದ ಆರೋಪಿಗಳ ಬಂಧನ!

    ಹುಬ್ಬಳ್ಳಿ: ಪುರಾತನ ಮೂರ್ತಿಗಳನ್ನು ಮನೆಯಲ್ಲಿಟ್ಟು ಪೂಜೆ ಮಾಡಿದರೆ ಐಶ್ವರ್ಯ ದೊರೆಯುತ್ತದೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ನಗರದ ನಿವಾಸಿಗಳಾದ ನಿರುಪಾದಿ ಸಮಳಾಪೂರ, ಕುಂದಗೋಳದ ಹೈದರ್ ಅಲಿ ಭಾವಿಕಟ್ಟಿ ಹಾಗೂ ರಸೂಲ್ ಮಿಯಾ ಮುಲ್ಲಾ ಬಂಧಿತ ಆರೋಪಿಗಳು. ಇವರು ನಮ್ಮಲ್ಲಿ ಪುರಾತನ ಕಾಲದ ಮೂರ್ತಿಗಳು ಇವೆ. ಇವನ್ನು ಮನೆಯಲ್ಲಿಟ್ಟುಕೊಂಡು ಪೂಜೆ ಮಾಡಿದರೆ ನಿಮಗೆ ಇಷ್ಟಾರ್ಥ ಸಿದ್ಧಿ ಹಾಗೂ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಗ್ರಾಹಕರನ್ನು ನಂಬಿಸಿ ವಂಚಿಸುತ್ತಿದ್ದರು. ಇವರ ಮಾತಿಗೆ ಗ್ರಾಹಕರು ಮರುಳಾಗಿ ಲಕ್ಷಾಂತರ ರೂಪಾಯಿ ನೀಡಿ ಕಂಚಿನ ಮೂರ್ತಿಗಳನ್ನು ಪಡೆದುಕೊಂಡಿದ್ದಾರೆ.

    ಆರೋಪಿಗಳು ಮಾರುತ್ತಿದ್ದ ಮೂರ್ತಿಗಳು ಕಂಚಿನ ಮೂರ್ತಿಗಳಾಗಿದ್ದು, ಯಾವುದು ಪುರಾತನ ಮೂರ್ತಿಗಳಲ್ಲ ಎಂದು ವಂಚನೆಗೊಳಗಾದ ಜನರು ಪೊಲೀಸರಿಗೆ ದೂರು ನೀಡಿದ್ದರು. ನಗರದಲ್ಲಿ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ದೂರು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಹಳೆ ಹುಬ್ಬಳ್ಳಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಒಂದು ಆಟೋ ಮತ್ತು ಎರಡು ಕಂಚಿನ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

  • ಕಲಬುರಗಿಯಲ್ಲಿ ಬಿರುಗಾಳಿಗೆ ಜನ ತತ್ತರ- ಧರೆಗುರುಳಿದ ರೇವಣ ಸಿದ್ದೇಶ್ವರ ಮೂರ್ತಿ

    ಕಲಬುರಗಿಯಲ್ಲಿ ಬಿರುಗಾಳಿಗೆ ಜನ ತತ್ತರ- ಧರೆಗುರುಳಿದ ರೇವಣ ಸಿದ್ದೇಶ್ವರ ಮೂರ್ತಿ

    ಕಲಬುರಗಿ: ನಗರದಲ್ಲಿ ಶನಿವಾರ ಸಂಜೆ ಸುಮಾರಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಬೀಸಿದ ಬಿರುಗಾಳಿಗೆ ಜನ ಭಯಭೀತರಾಗಿದ್ದಾರೆ.

    ಕಲಬುರಗಿಯ ರಟಕಲ್ ದೇವಸ್ಥಾನದಲ್ಲಿರುವ 56 ಅಡಿಯ ರೇವಣ್ಣ ಸಿದ್ದೇಶ್ವರ ಮೂರ್ತಿ ಧರೆಗುಳಿದಿದೆ. ಅದೃಷ್ಟವಶಾತ್ ಮಳೆಯ ಹಿನ್ನೆಲೆಯಿಂದಾಗಿ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಸಾವು-ನೋವು ಸಂಭವಿಸಿಲ್ಲ.

    ನಗರದ ಸೇಡಂ ರಸ್ತೆಯ ಇಎಸ್ ಐ ಆಸ್ಪತ್ರೆ ಸುತ್ತಮುತ್ತ ಬೀಸಿದ ಭಾರೀ ಬಿರುಗಾಳಿ ಭಯಂಕರ ಧೂಳೆಬ್ಬಿಸಿದ್ದು, ಸ್ಥಳೀಯರು ಈ ಭಯಂಕರ ಬಿರುಗಾಳಿ ಬೀಸುವ ದೃಶ್ಯ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಯೆಮೆನ್ ದೇಶದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಮೆಕ್ನು ಚಂಡಮಾರುತ ಎಫೆಕ್ಟ್ ರಾಜ್ಯದ ಕರಾವಳಿಗೂ ಹಬ್ಬಿದ್ದು, ಕಡಲತಡಿಯ ನಿವಾಸಿಗಳು ಆತಂಕದಲ್ಲಿದ್ದಾರೆ. 2 ದಿನಗಳಿಂದ ಕಡಲ ಅಲೆಗಳ ಅಬ್ಬರ ಜೋರಾಗಿದೆ. ಕರಾವಳಿಗೆ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

  • ಹಿಂದೂ ಮಹಾಸಭಾ ಕಚೇರಿಯಲ್ಲಿರೋ ಗೋಡ್ಸೆ ಮೂರ್ತಿಯನ್ನು ತೆಗೆದುಹಾಕಿ: ಡಿಸಿ ಆದೇಶ

    ಹಿಂದೂ ಮಹಾಸಭಾ ಕಚೇರಿಯಲ್ಲಿರೋ ಗೋಡ್ಸೆ ಮೂರ್ತಿಯನ್ನು ತೆಗೆದುಹಾಕಿ: ಡಿಸಿ ಆದೇಶ

    ಗ್ವಾಲಿಯರ್: ಅಖಿಲ ಭಾರತೀಯ ಹಿಂದೂ ಮಹಾಸಭಾ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ನಾಥೂರಾಮ್ ಗೋಡ್ಸೆ ಮೂರ್ತಿಯನ್ನು ತೆಗೆದು ಹಾಕುವಂತೆ ಗ್ವಾಲಿಯರ್ ನ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

    ಗೋಡ್ಸೆ ಮೂರ್ತಿ ಸ್ಥಾಪನೆಗೆ ರಾಜ್ಯದ ಹಲವು ಸಂಘಟನೆಗಳು ಮತ್ತು ಕಾಂಗ್ರೆಸ್ ಭಾರೀ ವಿರೋಧವನ್ನು ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಮೂರ್ತಿಯನ್ನು ತೆರವುಗೊಳಿಸುವಂತೆ ಡಿಸಿ ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದನ್ವಯ ಸ್ಥಳೀಯ ಪೊಲೀಸರು ಗೋಡ್ಸೆ ಮೂರ್ತಿಯನ್ನು ವಶಕ್ಕೆ ಪಡೆದುಕೊಂಡು, ಕೋಣೆಯನ್ನು ಸೀಜ್ ಮಾಡಿದ್ದಾರೆ. ಇದಕ್ಕೆ ಬಲ ಪಂಥೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ಹಿಂದೂ ಮಹಾಸಭಾ ಕಚೇರಿಯಲ್ಲಿ ಬಲಪಂಥಿಯ ನಾಯಕರ ನೇತೃತ್ವದಲ್ಲಿ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿತ್ತು. ಈ ಹಿಂದೆ ಗೋಡ್ಸೆ ಹೆಸರಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದ ಹಿಂದೂ ಮಹಾಸಭಾ ಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಕಚೇರಿಯಲ್ಲಿ ಮೂರ್ತಿ ಸ್ಥಾಪನೆ ಬಳಿಕ ನಾಯಕರು ನವೆಂಬರ್ 15ರಂದು ನಾಥೂರಾಮ್ ಗೋಡ್ಸೆ ಪುಣ್ಯಸ್ಮರಣೆಯನ್ನು ಆಚರಣೆ ಮಾಡಿದ್ದರು.

    ನವೆಂಬರ್ 9ರಂದು ಗೋಡ್ಸೆ ದೇವಾಲಯ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮತಿ ನಿರಾಕರಣೆಯಾದ ನಂತರ ಕಚೇರಿಯಲ್ಲಿ 32 ಇಂಚು ಎತ್ತರದ ಮೂರ್ತಿಯನ್ನ ರಾಷ್ಟ್ರೀಯ ಹಿಂದೂ ಮಹಾಸಭಾದ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಸ್ಥಾಪನೆ ಮಾಡಿದ್ದರು. ಈ ಮೂಲಕ ಗೋಡ್ಸೆಗೆ ದೇವಸ್ಥಾನ ನಿರ್ಮಿಸಿದಂತೆ ಆಗಿದೆ ಎಂದು ಹೇಳಿದ್ದರು.

    ನಾವು ನಮ್ಮ ಸ್ವಂತ ಜಾಗದಲ್ಲೇ ದೇವಸ್ಥಾನ ನಿರ್ಮಿಸಿರೋದ್ರಿಂದ ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವಂತಿಲ್ಲ. ಇದು ಮಹಾಸಭಾದ ಸ್ವಂತ ಆಸ್ತಿ ಎಂದು ಭಾರದ್ವಾಜ್ ಹೇಳಿದ್ದರು.

    ನಾಥೂರಾಮ್ ಗೋಡ್ಸೆ ದೇವಸ್ಥಾನ ಕಟ್ಟಿದರೆ ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ಅವರಿಗೆ ಅಗೌರವ ತೋರಿಸದಂತಾಗುತ್ತದೆ. ದೇವಾಲಯ ನಿರ್ಮಾಣಕ್ಕೆ ಮುಂದಾಗಿರುವ ಎಲ್ಲ ನಾಯಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಕೊಳ್ಳಬೇಕು ಎಂದು ಮಧ್ಯಪ್ರದೇಶದ ವಿಪಕ್ಷ ನಾಯಕ ಅಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಾಪೂಜಿಯನ್ನು ಕೊಲೆ ಮಾಡಿದ ವ್ಯಕ್ತಿಯ ದೇವಸ್ಥಾನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಗಾಂಧೀಜಿ ಹೆಸರಲ್ಲಿ ಉಪವಾಸ ಮಾಡುವ ನಾಟಕವನ್ನು ಬಿಡಬೇಕು. ಇದೊಂದು ನಾಚಿಕೆಗೇಡಿನ ಕೆಲಸ. ಇದನ್ನು ನಾವು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಹಾತ್ಮ ಗಾಂಧೀಜಿಯ ಪರಂಪರೆಗೆ ತಾವೊಬ್ಬರೇ ಮಾಲೀಕರು ಎಂಬಂತೆ ಕಾಂಗ್ರೆಸ್ ವರ್ತಿಸೋದನ್ನ ಬಿಡಬೇಕು. ಮಹಾತ್ಮಾ ಗಾಂಧೀಜಿಯ ಪರಂಪರೆ ಇಡೀ ದೇಶದ ಪರಂಪರೆ, ಯಾರದರೂ ಕಾನೂನು ಮತ್ತು ಸಂವಿಧಾನವನ್ನು ಉಲ್ಲಂಘಿಸಿದರೆ ಅಂತಹ ಚಟುವಟಿಕೆಗಳು ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ರಾಜ್ಯ ಬಿಜೆಪಿ ವಕ್ತಾರ ರಜನಿಶ್ ಜೈನ್ ತಿಳಿಸಿದ್ದಾರೆ.

    https://twitter.com/JM_Scindia/status/930740615704223745