Tag: ಮೂಕಾಂಭಿಕೆ

  • ಕೊಲ್ಲೂರು ಮೂಕಾಂಬಿಕೆಗೆ ಒಂದು ಕೆ.ಜಿ ಚಿನ್ನದ ಖಡ್ಗ ನೀಡಿದ ತಮಿಳುನಾಡು ಭಕ್ತ!

    ಕೊಲ್ಲೂರು ಮೂಕಾಂಬಿಕೆಗೆ ಒಂದು ಕೆ.ಜಿ ಚಿನ್ನದ ಖಡ್ಗ ನೀಡಿದ ತಮಿಳುನಾಡು ಭಕ್ತ!

    ಉಡುಪಿ: ತಮಿಳುನಾಡು ಮೂಲದ ಭಕ್ತರೊಬ್ಬರು ಕೊಲ್ಲೂರು ಮೂಕಾಂಬಿಕೆ ಒಂದು ಕೆ.ಜಿ ಚಿನ್ನದ ಖಡ್ಗ ಸಮರ್ಪಿಸಿ ಹರಕೆ ತೀರಿಸಿದ್ದಾರೆ. ಜಿಲ್ಲೆ ಬೈಂದೂರಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರೊಬ್ಬರು ಖಡ್ಗವನ್ನು ನೀಡಿದ್ದಾರೆ.

    ತಮ್ಮ ಮನದ ಇಚ್ಛೆ ಪ್ರಾಪ್ತಿಯಾದರೆ ಕೊಲ್ಲೂರು ತಾಯಿಗೆ ಖಡ್ಗ ನೀಡುತ್ತೇನೆ ಅಂತಾ ಕೊಯಮತ್ತೂರು ಮೂಲದ ಡಾ. ನಳಿನ್ ವಿಮಲ್ ಕುಮಾರ್ ಹರಕೆ ಹೊತ್ತುಕೊಂಡಿದ್ದರು. ಹರಕೆ ಫಲಿಸಿದ ಕೂಡಲೇ ಡಾ.ನಳೀನ್ ವಿಮಲ್ ಕುಮಾರ್ ಅವರು, ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನದ ಖಡ್ಗವನ್ನು ತಂದು ದೇವಸ್ಥಾನಕ್ಕೆ ಒಪ್ಪಿಸಿದ್ದಾರೆ.

    ಈ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಎಂಜಿ ರಾಮಚಂದ್ರನ್ ಅವರು ನೀಡಿದ್ದ ಚಿನ್ನದ ಕತ್ತಿಯನ್ನು ದೇವಿಯ ಅಲಂಕಾರ ಸಂದರ್ಭ ಪ್ರತಿನಿತ್ಯ ಬಳಸಲಾಗುತ್ತಿದೆ. ದೇಗುಲದ ಕಾರ್ಯ ನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ ಚಿನ್ನದ ಖಡ್ಗವನ್ನು ತಮಿಳುನಾಡಿನ ಭಕ್ತರು ಹಸ್ತಾಂತರಿಸಿದ್ದು, ಸದ್ಯ ಖಡ್ಗ ದೇವಾಲಯದ ಲಾಕರ್ ಸೇರಿದೆ.

    ತಮ್ಮ ಜನ್ಮದಿನದಂದು ಖಡ್ಗವನ್ನು ದೇವಿಯ ಬಳಿ ಇರಿಸುವಂತೆ ಡಾ.ನಳೀನ್ ವಿಮಲ್ ಕುಮಾರ್ ಅವರು, ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಕುರಿತು ದೇವಸ್ಥಾನದಲ್ಲಿ ಸಭೆ ನಡೆಸಿ, ಮನವಿಗೆ ಒಪ್ಪಿಗೆ ನೀಡಲಾಗಿದೆ. ಕೊಲ್ಲೂರಮ್ಮನಿಗೆ ಈವರೆಗೆ ಐದಕ್ಕೂ ಹೆಚ್ಚು ಚಿನ್ನದ ದೊಡ್ಡ ಖಡ್ಗ, ಹತ್ತಾರು ಚಿನ್ನದ ಸಣ್ಣ ಖಡಗ, 200ಕ್ಕೂ ಹೆಚ್ಚು ಬೆಳ್ಳಿ ಖಡ್ಗಗಳು ಹರಕೆ ರೂಪದಲ್ಲಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv