Tag: ಮುದಗಲ್

  • ದನಗಳು ಜಮೀನಿನಲ್ಲಿ ಮೇಯ್ದಿದ್ದಕ್ಕೆ ಜಗಳ- ಕಬ್ಬಿನ ಗದ್ದೆ ಮಾಲೀಕನ ಕೊಲೆ

    ದನಗಳು ಜಮೀನಿನಲ್ಲಿ ಮೇಯ್ದಿದ್ದಕ್ಕೆ ಜಗಳ- ಕಬ್ಬಿನ ಗದ್ದೆ ಮಾಲೀಕನ ಕೊಲೆ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ತೊಂಡಿಹಾಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಜಮೀನಿನಲ್ಲಿ ದನಗಳನ್ನು ಮೇಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಜಮೀನಿನ ಮಾಲೀಕನನ್ನೇ ಕೊಲೆ ಮಾಡಲಾಗಿದೆ. 45 ವರ್ಷದ ಯಂಕಪ್ಪ ಕೊಲೆಯಾದ ವ್ಯಕ್ತಿ.

    ರಾಡ್, ಕಲ್ಲು, ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಮೂರು ದಿನಗಳ ಹಿಂದೆ ಯಂಕಪ್ಪನ ಕಬ್ಬಿನ ಗದ್ದೆಯಲ್ಲಿ ಗ್ರಾಮದ ನಿಂಗಪ್ಪ ದನಗಳನ್ನು ಮೇಯಿಸಿದ್ದಕ್ಕೆ ಜಗಳವಾಗಿತ್ತು. ಯಂಕಪ್ಪ ನಿಂಗಪ್ಪನಿಗೆ ಹೊಡೆದಿದ್ದ, ಇದಕ್ಕೆ ಪ್ರತಿಯಾಗಿ ನಿಂಗಪ್ಪ ನಾಲ್ಕೈದು ಜನರೊಂದಿಗೆ ಮನೆಗೆ ಬಂದು ಯಂಕಪ್ಪನಿಗೆ ಥಳಿಸಿ ಹೋಗಿದ್ದನು.

    ಸಾಂದರ್ಭಿಕ ಚಿತ್ರ

    ಇದಾದ ಬಳಿಕ ಜಗಳ ಬೂದಿ ಮುಚ್ಚಿದ ಕೆಂಡದಂತಿತ್ತು. ಆದ್ರೆ ನಿನ್ನೆ ಯಂಕಪ್ಪನನ್ನ ಜಮೀನಿನಲ್ಲಿ ಹೊಡೆದು ಕೊಲೆ ಮಾಡಲಾಗಿದೆ. ಗ್ರಾಮದ ನಿಂಗಪ್ಪ, ಆದನಗೌಡ, ಶರಣಗೌಡ, ಮಹಾಂತಗೌಡ, ಹನುಮಂತ, ಭೀಮನಗೌಡ ಕೊಲೆ ಮಾಡಿದ್ದಾರೆ ಅಂತ ಮೃತ ಯಂಕಪ್ಪನ ಕುಟುಂಬದವರು ಆರೋಪಿಸಿದ್ದಾರೆ.

    ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

  • ಉಗ್ರರ ಪರ ಸಂಭ್ರಮಾಚರಣೆ ಖಂಡಿಸಿ ಮುದಗಲ್ ಬಂದ್

    ಉಗ್ರರ ಪರ ಸಂಭ್ರಮಾಚರಣೆ ಖಂಡಿಸಿ ಮುದಗಲ್ ಬಂದ್

    ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ತಲೇಖಾನ್ ಗ್ರ್ರಾಮದಲ್ಲಿ ಉಗ್ರರ ಪರ ಸಂಭ್ರಮಾಚರಣೆ ಮಾಡಿದ ಘಟನೆ ಖಂಡಿಸಿ ಲಿಂಗಸುಗೂರಿನ ಮುದಗಲ್ ಪಟ್ಟಣ ಬಂದ್ ಮಾಡಲಾಗಿದೆ. ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.

    ಶನಿವಾರ ರಜೆ ಮಾಡಿ ಭಾನುವಾರ ಜೋರು ವ್ಯಾಪಾರ ನಡೆಯುತ್ತಿದ್ದ ಪಟ್ಟಣ ಇಂದು ಸಂಪೂರ್ಣ ಬಂದ್ ಆಗಿದೆ. ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗ್ಗಟ್ಟುಗಳನ್ನ ಮುಚ್ಚಿದ್ದು ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ. ಹಿಂದೂಪರ ಸಂಘಟನೆಗಳು ಪಟ್ಟಣದಲ್ಲಿ ಮೆರವಣಿಗೆ, ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

    ಸಂಭ್ರಮಾಚರಣೆ ಮಾಡಿದ್ದ ಘಟನೆ ಹಿನ್ನೆಲೆಯಲ್ಲಿ ತಲೇಖಾನ್ ಗ್ರಾಮದ ಐದು ಜನ ಆರೋಪಿಗಳನ್ನ ಈಗಾಗಲೇ ಮಸ್ಕಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಭದ್ರತೆ ಮುಂದುವರಿದಿದೆ.

    ಏನಿದು ಘಟನೆ?
    ಪುಲ್ವಾಮಾದಲ್ಲಿ ನಡೆದ ಸೈನಿಕರ ಹತ್ಯೆಯನ್ನ ಸಂಭ್ರಮಿಸಿ ಕೆಲ ಕಿಡಿಗೇಡಿ ಮುಸ್ಲಿಂ ಯುವಕರು ತಲೇಖಾನ್ ಗ್ರಾಮದಲ್ಲಿ ತಡರಾತ್ರಿ ಪರಸ್ಪರ ಹಸಿರು ಬಣ್ಣ ಎರಚಾಡಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ವಿಚಾರ ಗ್ರಾಮಸ್ಥರಿಗೆ ತಿಳಿದು ಸ್ಥಳಕ್ಕೆ ಬರುವಷ್ಟರಲ್ಲಿ ಯುವಕರು ಅಲ್ಲಿಂದ ಪರಾರಿಯಾಗಿದ್ದರು. ಅಂದು ಘಟನೆ ಖಂಡಿಸಿ ಗ್ರಾಮಸ್ಥರು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಘಟನೆಯನ್ನು ಖಂಡಿಸಿ ಮಸ್ಕಿಯಲ್ಲಿ ವಿವಿಧ ಸಂಘಟನೆಗಳಿಂದ ಬೈಕ್ ರ್ಯಾಲಿ ಸಹ ನಡೆಸಲಾಗಿತ್ತು.

    ಯುವಕರು ಸಂಭ್ರಮಾಚರಣೆ ನಡೆಸಿರುವ ಗುರುತಾಗಿ ಸ್ಥಳದಲ್ಲಿ ಹಸಿರು ಬಣ್ಣ ಮತ್ತು ಪಟಾಕಿ ಬಾಕ್ಸ್ ಕೂಡ ಪತ್ತೆಯಾಗಿತ್ತು. ವಿಜಯೋತ್ಸವ ಆಚರಣೆ ಮಾಡಿ ಸಮಾಜದಲ್ಲಿ ಕೋಮುಗಲಭೆ ಉಂಟಾಗುವಂತೆ ಮಾಡುವ ಕಾರ್ಯ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv