Tag: ಮುಜಾಹೀದ್ದಿನ್ ಪಾಷ

  • ಎಲ್ಲೇ ಸಿಎಎ ವಿರುದ್ಧ ಗಲಾಟೆಯಾದ್ರೂ ಎಸ್‍ಡಿಪಿಐ ಹೆಸರು ಹೇಳ್ತಾರೆ: ಮುಜಾಹೀದ್ದಿನ್ ಪಾಷ

    ಎಲ್ಲೇ ಸಿಎಎ ವಿರುದ್ಧ ಗಲಾಟೆಯಾದ್ರೂ ಎಸ್‍ಡಿಪಿಐ ಹೆಸರು ಹೇಳ್ತಾರೆ: ಮುಜಾಹೀದ್ದಿನ್ ಪಾಷ

    ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು ಎಸ್‍ಡಿಪಿಐ ಕಾರ್ಯಕರ್ತರು ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅವರು ಯಾರಾದರೂ ಕಾನೂನಿನ ರೀತಿಯ ಕ್ರಮ ಕೈಗೊಳ್ಳಬೇಕು. ಆದರೆ ಸಿಎಎ ಹಾಗೂ ಎನ್.ಸಿ.ಆರ್ ವಿಚಾರವಾಗಿ ಎಲ್ಲೇ ಗಲಾಟೆ ನಡೆದರೂ ಅದು ಎಸ್‍ಡಿಪಿಐ ಅವರು ಮಾಡಿದ್ದು ಎಂದು ಹೇಳುತ್ತಾರೆ ಎಂದು ಎಸ್‍ಡಿಪಿಐ ಪಕ್ಷದ ಬಿಬಿಎಂಪಿ ಸದಸ್ಯ ಮುಜಾಹೀದ್ದಿನ್ ಪಾಷ ಬೇಸರ ವ್ಯಕ್ತಪಡಿಸಿದ್ದಾರೆ.

    ಇದು ರಾಜಕೀಯ, ನಮ್ಮ ಪಕ್ಷದವರು, ಸಂಘಟನೆಯವರು ಈ ರೀತಿ ಯಾವುದೇ ಕೆಲಸದಲ್ಲಿ ಭಾಗಿಯಾಗಿಲ್ಲ. ವರುಣ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿರುವುದು ಯಾರು ಎಂದು ನಮಗೆ ಗೊತ್ತಿಲ್ಲ. ಈಗಾಗಲೇ ನಾನು ಅವರು ನಮ್ಮ ಸಂಘಟನೆಯ ಕಾರ್ಯಕರ್ತರಾ, ಅಲ್ವಾ ಎಂದು ಹೇಳಲು ಆಗುವುದಿಲ್ಲ. ನನಗೆ ಅವರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಬಿಜೆಪಿ ಮತ್ತು ಆರ್.ಎಸ್.ಎಸ್ ಅವರು ಸ್ವಾತಂತ್ರ್ಯ ಬಂದಾಗಿನಿಂದ ಯಾವೆಲ್ಲಾ ಒಳ್ಳೆಯ ಕೆಲಸ ಮಾಡಿದ್ದಾರೆ ಎಂಬುವುದು ಜನರಿಗೆ ತಿಳಿದಿದೆ ಎಂದು ಹೇಳಿದರು.

    ನಮ್ಮ ಪಕ್ಷದ ಮೇಲೆ ಬೇಕು ಎಂದೇ ಷಡ್ಯಂತ್ರ ಮಾಡುತ್ತಿದ್ದಾರೆ. ನಾವೂ ಯಾರಿಗೂ ಸಮಾಜ ದ್ರೋಹಿ ಕೆಲಸಕ್ಕೆ ತರಬೇತಿ ನೀಡಿಲ್ಲ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು ಎಂದರು. ಇದನ್ನು ಓದಿ: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ