Tag: ಮುಂಡರಗಿ

  • ಕಟಾವ್ ಮಾಡಿದ್ದ ಕಬ್ಬು ನಿರಾಕರಿಸಿದ್ದಕ್ಕೆ ಫ್ಯಾಕ್ಟರಿಯಲ್ಲೇ ರೈತ ಆತ್ಮಹತ್ಯೆ!

    ಕಟಾವ್ ಮಾಡಿದ್ದ ಕಬ್ಬು ನಿರಾಕರಿಸಿದ್ದಕ್ಕೆ ಫ್ಯಾಕ್ಟರಿಯಲ್ಲೇ ರೈತ ಆತ್ಮಹತ್ಯೆ!

    ಗದಗ: ಕಟಾವ್ ಮಾಡಿ ಫ್ಯಾಕ್ಟರಿಗೆ ತಂದಿದ್ದ ಕಬ್ಬನ್ನು ಖರೀದಿ ಮಾಡುವುದಿಲ್ಲ ಎಂದು ಹೇಳಿದ್ದಕ್ಕೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮನಕಲುಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ತಿಗರಿ ಗ್ರಾಮದ ಸಣ್ಣಹನುಮಪ್ಪ ತಿಗರಿ(55) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. ಮುಂಡರಗಿ ತಾಲೂಕಿನ ಗಂಗಾಪುರ ವಿಜಯನಗರ ಶುಗರ್ ಫ್ಯಾಕ್ಟರಿ ಆವರಣದಲ್ಲಿ ಸಣ್ಣಹನುಮಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಘಟನೆಯ ವಿವರ:
    ತಿಗರಿ ಗ್ರಾಮದ ಸಣ್ಣಹನುಮಪ್ಪ ಅವರು ಕಬ್ಬು ಬೆಳೆದಿದ್ದರು. ಬೆಳೆ ಕಟಾವ್‍ಗೆ ಬಂದಿದ್ದರಿಂದ ಹಾಗೂ ಸಾಲದ ಹಣ ಪಾವತಿ ಮಾಡುವ ಉದ್ದೇಶದಿಂದ ಫ್ಯಾಕ್ಟರಿ ಮಾಲೀಕರಿಗೆ ಕಟಾವ್ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಮಾಲೀಕರು ವಿಳಂಬ ಮಾಡಿದ್ದರಿಂದ ಸಣ್ಣಹನುಮಪ್ಪ ಅವರು ತಮ್ಮ ಕಾರ್ಮಿಕರನ್ನು ಬಳಸಿಕೊಂಡು ಕಬ್ಬು ಕಟಾವ್ ಮಾಡಿದ್ದರು. ಬಳಿಕ ಲೋಡ್ ಮಾಡಿಕೊಂಡು ಗಂಗಾಪುರ ವಿಜಯನಗರ ಶುಗರ್ ಫ್ಯಾಕ್ಟರಿ ತಂದಿದ್ದಾರೆ.

    ನಾವೇ ಕಬ್ಬು ಕಟಾವ್ ಮಾಡುತ್ತಿದ್ದೇವು. ಹೀಗಾಗಿ ನೀವು ಕಟಾವ್ ಮಾಡಿಕೊಂಡು ತಂದ ಕಬ್ಬನ್ನು ತೆಗೆದುಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಮನನೊಂದ ಸಣ್ಣಹುನುಮಪ್ಪ ಕಾರ್ಖಾನೆಯ ಆವರಣದಲ್ಲಿ ವಿಷ ಸೇವಿಸಿ, ಪ್ರಾಣ ಬಿಟ್ಟಿದ್ದಾರೆ ಎಂದು ಸಣ್ಣಹನುಮಪ್ಪ ಮಗ ವಿರೇಶ್ ಹಾಗೂ ಮುಂಡರಗಿ ರೈತ ಮುಖಂಡ ವೀರಣ್ಣಗೌಡ ದೂರಿದ್ದಾರೆ.

    ಈ ಘಟನೆಯಿಂದಾಗಿ ವಿಜಯನಗರ ಶುಗರ್ ಫ್ಯಾಕ್ಟರಿ ಅಧಿಕಾರಿಗಳ ವಿರುದ್ಧ ರೈತರು ಕಿಡಿಕಾರಿದ್ದಾರೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಮುಂಡರಗಿ ಠಾಣಾ ಪೊಲೀಸರು, ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಭ್ರಷ್ಟರ ವಿರುದ್ಧ ಬಾಲ್ಯದಿಂದಲೂ ಹೋರಾಟ- ಶೋಷಿತರ ಪಾಲಿಗೆ ಆಶಾಕಿರಣ ನಮ್ಮ ಪಬ್ಲಿಕ್ ಹೀರೋ

    ಭ್ರಷ್ಟರ ವಿರುದ್ಧ ಬಾಲ್ಯದಿಂದಲೂ ಹೋರಾಟ- ಶೋಷಿತರ ಪಾಲಿಗೆ ಆಶಾಕಿರಣ ನಮ್ಮ ಪಬ್ಲಿಕ್ ಹೀರೋ

    ಗದಗ: ರಾಜಕಾರಣಿಯೊಬ್ಬರ ನಡತೆ ವಿರುದ್ಧ ಬಾಲ್ಯದಿಂದಲೇ ಸೆಟೆದು ನಿಂತ ನಮ್ಮ ಈ ಪಬ್ಲಿಕ್ ಹೀರೋ ಇವತ್ತು ಬಡವರ, ಶೋಷಿತರ, ವಯೋವೃದ್ಧರ ಸಹಾಯಕ್ಕೆ ನಿಂತಿದ್ದಾರೆ.

    ಗದಗ ಜಿಲ್ಲೆ ಮುಂಡರಗಿ ಪಟ್ಟಣದ ನಿವಾಸಿ ಯಲ್ಲನಗೌಡ ನಿಂಗನಗೌಡ ಗೌಡರ್ ನಮ್ಮ ಪಬ್ಲಿಕ್ ಹೀರೋ. ಸಮಾಜ ಸೇವಕ, ಹೋರಾಟಗಾರ, ಪರಿಸರ ಪ್ರೇಮಿ, ಕೃಷಿಕ, ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಬಡಕುಟುಂಬದ ಯಲ್ಲನಗೌಡ ಎಸ್‍ಎಸ್‍ಎಲ್‍ಸಿ ಮುಗಿಸಿದಾಗ ಕೆಲಸ ಕೊಡಿಸುವಂತೆ ಕಾಲಿಗೆ ಬಿದ್ದಿದ್ದ ತಂದೆಯನ್ನ ರಾಜಕಾರಣಿಯೊಬ್ರು ಒದ್ದು ಹೋಗಿದ್ರಂತೆ. ಅಂದಿನಿಂದಲೇ ಸ್ವಾಭಿಮಾನ ಬೆಳೆಸಿಕೊಂಡು, ಭ್ರಷ್ಟರ ವಿರುದ್ಧ ಸಿಡಿದೆದ್ದು ದೀನರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ.

    ಇವರ ಜನೋಪಕಾರಿ ಕಾರ್ಯದಿಂದಾಗಿ 1990ರಲ್ಲಿ ಮುಂಡರಗಿ ನಗರಸಭೆ ಸದಸ್ಯ, ಅಧ್ಯಕ್ಷರಾಗಿ ಜನಮೆಚ್ಚುವಂತಹ ಕಾರ್ಯ ಮಾಡಿದ್ದಾರೆ. ಸರ್ಕಾರದಿಂದ ಅನುದಾನ ಸಿಗದಿದ್ದಾಗ ಹವ್ಯಾಸಿ ಕಲಾವೃಂದದ ಸಂಘ ಸ್ಥಾಪಿಸಿ ನಾಟಕವಾಡಿ ಹಣ ಸಂಗ್ರಹ್ರಿಸಿ ತಮ್ಮ ವ್ಯಾಪ್ತಿಯ ಶಿರೊಳ, ರಾಮೇನಹಳ್ಳಿ, ಬ್ಯಾಲಡಗಿಯಲ್ಲಿ ಎರಡು ಉರ್ದು ಹಾಗೂ ಎಂಟು ಪ್ರಾಥಮಿಕ ಶಾಲಾ ಕೊಠಡಿಗಳನ್ನ ನಿರ್ಮಿಸಿದ್ದಾರೆ.

    ಜಾತಿ, ಪಕ್ಷ ಭೇದ ಮರೆತು ಪೊಸ್ಕೊ, ಕಪ್ಪತ್ತಗುಡ್ಡ ಸಂರಕ್ಷಣೆ, ತಾಲೂಕು ಅಭಿವೃದ್ಧಿ, ಏತನೀರಾವರಿ, ಸಾಲ ಸೌಲಭ್ಯ, ಮರಳುನಿಂದ ನದಿಗಳ ರಕ್ಷಣೆ ಹೀಗೆ ಅನೇಕ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದಾರೆ.

    https://www.youtube.com/watch?v=z5HNG4II_Rs

  • ಬೆಂಕಿಯ ಕೆನ್ನಾಲಿಗೆಗೆ ಧಗ-ಧಗಿಸಿದ ಸಸ್ಯಕಾಶಿ ಕಪ್ಪತ್ತಗುಡ್ಡ

    ಬೆಂಕಿಯ ಕೆನ್ನಾಲಿಗೆಗೆ ಧಗ-ಧಗಿಸಿದ ಸಸ್ಯಕಾಶಿ ಕಪ್ಪತ್ತಗುಡ್ಡ

    ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಔಷಧಿಯ ಸಸ್ಯಕಾಶಿ ಕಪ್ಪತ್ತಗುಡ್ಡ ಬೆಂಕಿಯ ಕೆನ್ನಾಲಿಗೆಯಿಂದ ಧಗ ಧಗಿಸಿದೆ.

    ಮುಂಡರಗಿ ತಾಲೂಕಿನ ಕಲಕೇರಿ ಹಾಗೂ ವಿರುಪಾಪೂರ ಗ್ರಾಮದ ಬಳಿ ಬುಧವಾರ ರಾತ್ರಿ ಸುಮಾರು 8 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಒಂದು ಹೆಕ್ಟರ್‍ಗೂ ಅಧಿಕ ಪ್ರದೇಶದವರೆಗೆ ಬೆಂಕಿ ವ್ಯಾಪಿಸಿದೆ. ಇದರಿಂದ ಅಪಾರ ಪ್ರಮಾಣದ ಆಯುರ್ವೇದ ಔಷಧಿಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ.

    ಇತ್ತೀಚೆಗಷ್ಟೇ ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಎಂಬುವುದಾಗಿ ಘೋಷಣೆಯಾಗಿದೆ. ಘೋಷಣೆಯಾದ ಬಳಿಕ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಈ ಭಾಗದ ಜನರಲ್ಲಿ ಆತಂಕ ಶುರುವಾಗಿದೆ. ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ರೂ, ಇಲಾಖೆಯ ಸಿಬ್ಬಂದಿ ತಡವಾಗಿ ಬಂದಿದ್ದಾರೆ. ಇದು ಸ್ಥಳೀಯರ ಕೋಪಕ್ಕೆ ಕಾರಣವಾಯಿತು.

    ಸ್ಥಳಕ್ಕೆ ಬಂದ ಅಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಕಪ್ಪತಗುಡ್ಡದಲ್ಲಿ ಪದೇ ಪದೇ ಬೆಂಕಿ ಕಾಣಿಸುಕೊಳ್ಳುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.