Tag: ಮಿ ಟೂ

  • #MeToo ಅಭಿಯಾನಕ್ಕೆ ಜೈ ಅಂದ್ರು ಕಬಾಲಿ ಬೆಡಗಿ ಧನ್ಸಿಕಾ

    #MeToo ಅಭಿಯಾನಕ್ಕೆ ಜೈ ಅಂದ್ರು ಕಬಾಲಿ ಬೆಡಗಿ ಧನ್ಸಿಕಾ

    #MeToo ಅಭಿಯಾನವೀಗ ಕನ್ನಡ ಚಿತ್ರರಂಗದಲ್ಲಿಯೂ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ನಡುವೆಯೂ ಹಲವಾರು ನಟ ನಟಿಯರು ಇದರ ಪರ ಮತ್ತು ವಿರುದ್ಧವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಉದ್ಘರ್ಷ ಚಿತ್ರದ ಮೂಲಕ ಕನ್ನಡಕ್ಕೆ ಬಂದಿರೋ ತಮಿಳು ಹುಡುಗಿ ಧನ್ಸಿಕಾ ಮಿ ಟೂ ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

    ಮಿ ಟೂ ಎಂಬುದು ಮಹಿಳೆಯರ ಆತ್ಮಗೌರವ ಕಾಪಾಡಿಕೊಳ್ಳಲಾಗಿಯೇ ಹುಟ್ಟಿಕೊಂಡಿರೋ ಅಭಿಯಾನ. ಜನ್ಮ ನೀಡೋ ಹೆಣ್ಣನ್ನು ಗೌರವಿಸೋದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಹುಟ್ಟಿಕೊಂಡಿರೋ ಮಿ ಟೂ ಅಭಿಯಾನ ಒಳ್ಳೆಯ ಉದ್ದೇಶ ಹೊಂದಿದೆ. ಲೈಂಗಿಕ ಕಿರುಕುಳ ಅನುಭವಿಸಿದ ಹೆಣ್ಣುಮಕ್ಕಳೆಲ್ಲ ಈ ಮೂಲಕ ತಮ್ಮ ಯಾತನೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಬೆಂಬಲ ಸೂಚಿಸುತ್ತೇನೆ ಅಂತ ಧನ್ಸಿಕಾ ಹೇಳಿಕೊಂಡಿದ್ದಾರೆ.

    ಧನ್ಸಿಕಾ ತಮಿಳು ಚಿತ್ರರಂಗದಲ್ಲಿ ಬೇಡಿಕೆ ಹೊಂದಿರೋ ನಟಿ. ಈಕೆ ಕಬಾಲಿ ಚಿತ್ರದಲ್ಲಿ ರಜನೀಕಾಂತ್ ಅವರ ಪುತ್ರಿಯಾಗಿಯೂ ಅಭಿನಯಿಸಿದ್ದರು. ಇದೀಗ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರದ ಮೂಲಕ ಕನ್ನಡದಲ್ಲಿಯೂ ಅಭಿನಯಿಸುತ್ತಿದ್ದಾರೆ. ಥ್ರಿಲ್ಲರ್ ಕಥೆ ಹೊಂದಿರೋ ಈ ಚಿತ್ರದ ಪಾತ್ರದ ಮೂಲಕ ಕನ್ನಡದಲ್ಲಿ ಮತ್ತೊಂದಷ್ಟು ಅವಕಾಶದ ನಿರೀಕ್ಷೆಯನ್ನೂ ಹೊಂದಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • #MeToo ಮಾತು: ಕೊಡಗು ಸುಂದರಿ ಹರ್ಷಿಕಾ ಪೂಣಚ್ಚ ಫ್ಯಾನ್ ಆಗ್ಬಿಟ್ರಂತೆ ಪ್ರಥಮ್!

    #MeToo ಮಾತು: ಕೊಡಗು ಸುಂದರಿ ಹರ್ಷಿಕಾ ಪೂಣಚ್ಚ ಫ್ಯಾನ್ ಆಗ್ಬಿಟ್ರಂತೆ ಪ್ರಥಮ್!

    ನಟಿ ಹರ್ಷಿಕಾ ಪೂಣಚ್ಚ ಇತ್ತೀಚೆಗೆ ಮಿ ಟೂ ಅಭಿಯಾನದ ಬಗ್ಗೆ ನೇರಾನೇರ ಅಭಿಪ್ರಾಯ ಹಂಚಿಕೊಂಡು ಸುದ್ದಿ ಮಾಡಿದ್ದರು. ಕೆಲ ನಟಿಯರು ಮಿ ಟೂ ಅಭಿಯಾನಕ್ಕೆ ಬೆಂಬಲ ನೀಡುತ್ತಿದ್ದರೆ ಹರ್ಷಿಕಾ ಮಾತ್ರ ಈ ಅಭಿಯಾನವನ್ನು ಕೆಲ ನಟಿಯರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು.

    ಒಂದೆಡೆ ಹರ್ಷಿಕಾರ ಈ ಅಭಿಪ್ರಾಯದ ಪರ ಮತ್ತು ವಿರುದ್ಧವಾಗಿ ಅನಿಸಿಕೆಗಳು ಕೇಳಿ ಬರುತ್ತಿರುವಾಗಲೇ ಪ್ರಥಮ್ ಹರ್ಷಿಕಾ ಪರವಾಗಿ ಮಾತಾಡಿದ್ದಾರೆ. ಇದ್ದುದನ್ನು ಇದ್ದ ಹಾಗೆ ಹೇಳಿರೋ ಹರ್ಷಿಕಾ ಪೂಣಚ್ಚಾ ಅಭಿಮಾನಿಯಾಗಿರೋದಾಗಿಯೂ ಹೇಳಿಕೊಂಡಿದ್ದಾರೆ.

    ಪ್ರಥಮ್ ತಮಗೆ ಹರ್ಷಿಕಾ ಅವರ ಪ್ರಾಮಾಣಿಕ ನಿಲುವು ಇಷ್ಟವಾಗಿದೆ ಅಂತ ಹೇಳಿಕೊಂಡಿದ್ದಾರಲ್ಲದೇ, ಈಗ ನಡೆಯುತ್ತಿರೋ ಅಸಲಿ ವಿಚಾರವನ್ನು ಪ್ರಾಮಾಣಿಕವಾಗಿ ಹೇಳಿಕೊಂಡಿರುವ ಹರ್ಷಿಕಾ ಮೇಲೆ ತಮಗೆ ಅಭಿಮಾನ ಉಕ್ಕಿರೋದಾಗಿಯೂ ಹೇಳಿಕೊಂಡಿದ್ದಾರೆ. ಹೀಗೆ ಹರ್ಷಿಕಾ ಪರವಾಗಿ ಮಾತಾಡೋ ಮೂಲಕ ಪ್ರಥಮ್ ಕೂಡಾ ಮಿ ಟೂ ಅಭಿಯಾನದ ಅಖಾಡಕ್ಕಿಳಿದಂತಾಗಿದೆ!

    ಹರ್ಷಿಕಾ ಏನ್ ಹೇಳಿದ್ದರು?
    ನಾನು ಈಗ ನಡೆಯುತ್ತಿರುವ ಮೀಟೂ ಅಭಿಯಾನದ ಬಗ್ಗೆ ನೋಡುತ್ತಿದ್ದೇನೆ. ನಾನು ಒಂದು ಸದೃಢ ಮಹಿಳೆಯಾಗಿ ನಾನು ಚಿತ್ರರಂಗವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಮಹಿಳೆಯರನ್ನು ಗೌರವ ನೀಡುವುದು ಸರಿ ಆದರೆ ಕೆಲವು ನಟಿಯರು ತಮ್ಮ ಫೆಮಿನಿಟಿ ಬಳಸಿ ಪಬ್ಲಿಸಿಟಿ ಪಡೆಯುತ್ತಿದ್ದಾರೆ. ಪಬ್ಲಿಸಿಟಿ ಪಡೆಯುವುದು ಒಳ್ಳೆಯದು. ಆದರೆ ಅದಕ್ಕೆ ಒಂದು ಮಿತಿ ಇರುತ್ತದೆ. ಒಬ್ಬರ ಕುಟುಂಬ ಒಡೆದು, ಅವರ ಪತ್ನಿ, ಮಕ್ಕಳಿಗೆ ನಾಚಿಕೆಯಾಗುವಂತೆ ಮಾಡುತ್ತಾರೆ. ನಂತರ 15-20 ವರ್ಷದಿಂದ ಚಿತ್ರರಂಗದಲ್ಲಿ ಹೆಸರು ಮಾಡಿದ ನಟರ ಹೆಸರನ್ನು ಒಂದು ಹೇಳಿಕೆ ಮೂಲಕ ಅದನ್ನು ಹಾಳು ಮಾಡುತ್ತಾರೆ ಅಂತ ಹರ್ಷಿಕಾ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದರು.

    https://www.facebook.com/harshika.poonacha/posts/10156288695679902

    ನಾನು 10 ವರ್ಷದಿಂದ ಇಂಡಸ್ಟ್ರಿಯಲ್ಲಿದ್ದೀನಿ. ನನ್ನ ಕಣ್ಣಿನಿಂದ ನಾನು ಎಲ್ಲವನ್ನೂ ನೋಡಿದ್ದೇನೆ. ಸಾಕಷ್ಟು ನಟಿಯರು ಚಿತ್ರರಂಗದಲ್ಲಿ ಮೇಲೆ ಬರಲು ಏನು ಬೇಕಾದರು ಮಾಡುತ್ತಾರೆ. ಪುರುಷರಿಗೆ ಎಲ್ಲ ಸ್ವಾತ್ರಂತ್ಯ ಕೊಟ್ಟು ಅವರ ಜೊತೆ ನಗುತ್ತಾ, ಸಲುಗೆಯಿಂದ ತಿರುಗಾಡುತ್ತಾರೆ. ನಂತರ ಪಬ್ಲಿಸಿಟಿಗಾಗಿ ಅವರ ಮೇಲೆ ಆರೋಪ ಮಾಡುತ್ತಾರೆ. ಆರೋಪ ಮಾಡುವ ನಟಿಯರು ಈ ಹಿಂದೆ ಗಾಂಜಾ ಸೇವಿಸಿ, ವಿದೇಶದಲ್ಲಿ ಹಾಡಿನ ಶೂಟಿಂಗ್ ಇದ್ದಾಗ ನಟ ಅಥವಾ ಖ್ಯಾತ ವ್ಯಕ್ತಿ ಮೈಮೇಲೆ ಬೀಳುವುದ್ದನ್ನು ನಾನು ಸ್ವತಃ ನೋಡಿದ್ದೇನೆ. ಕೆಲವು ವಿಷಯಗಳನ್ನು ನಾನು ಹೇಳುವುದನ್ನು ಇಷ್ಟಪಡುವುದಿಲ್ಲ.

    ಚಿತ್ರರಂಗದಲ್ಲಿ ಹೆಸರು ಮಾಡುವವರೆಗೂ ಅವರು ಏನೂ ಮಾಡಿದರು ನಿಮಗೆ ಸರಿ ಎಂದು ಎನಿಸುತಿತ್ತು. ಚಿತ್ರರಂಗದಲ್ಲಿ ಹೆಸರು ಮಾಡಿದ ಮೇಲೆ ಇನ್ನಷ್ಟು ಯಶಸ್ಸಿಗಾಗಿ ನೀವು ಅವರ ಮೇಲೆ ಆರೋಪ ಮಾಡುತ್ತೀರಿ. 10, 5, 2 ವರ್ಷಗಳ ಹಿಂದೆ ಈ ರೀತಿ ನಡೆಯುವಾಗ ನಿಮಗೆ ಮೀಟೂ ಏನಾಗಿತ್ತು. ಆ ಸಮಯದಲ್ಲಿ ನಿಮಗೆ ಇದೆಲ್ಲ ಸರಿ ಅನ್ನಿಸಿತ್ತು. ಆದರೆ ಈಗ ನಿಮಗೆ ಮಹಿಳೆಯರನ್ನು ಈ ಪುರುಷರಿಂದ ರಕ್ಷಿಸಬೇಕು ಎಂದು ಅನಿಸುತ್ತಿದ್ದೆ ಅಲ್ವಾ. ನಾನ್ಸೆನ್ಸ್, ಇದು ಅಟ್ಟರ್ ನಾನ್ಸೆನ್ಸ್ ಎಂದು ಪೋಸ್ಟ್ ಮಾಡಿದ್ದಾರೆ.

    ಹೆಸರಾಂತ ನಿರ್ಮಾಪಕರೊಬ್ಬರು ನನಗೆ ಒಂದು ವಿಡಿಯೋವನ್ನು ತೋರಿಸಿದ್ದರು. ಆ ವಿಡಿಯೋದಲ್ಲಿ ಈಗ ಮೀಟೂ ಎಂದು ಅಭಿಯಾನ ಮಾಡುತ್ತಿರುವ ನಟಿಯರು ಖ್ಯಾತ ವ್ಯಕ್ತಿ ಭುಜದ ಮೇಲೆ ಮಲಗಿ ಖುಷಿಯಾಗಿ ಗಾಂಜಾ ಹೊಡೆಯುತ್ತಾ ಇನ್ನೊಬ್ಬರ ಹೆಸರನ್ನು ಹೇಗೆ ಹಾಳು ಮಾಡಬೇಕೆಂದು ಮಾತನಾಡಿರುವುದನ್ನು ನೋಡಿದ್ದೇನೆ. ಅಲ್ಲದೇ ಮತ್ತೊಂದು ವಿಡಿಯೋದಲ್ಲಿ ಆ ಖ್ಯಾತ ನಟನೇ ಅರ್ಧ ನಗ್ನಳಾಗಿರುವ ನಟಿಯ ವಿಡಿಯೋ ಮಾಡುತ್ತಿರುತ್ತಾರೆ. ಆ ವಿಡಿಯೋದಲ್ಲಿ ನಟಿಯೊಬ್ಬಳು ನಗುತ್ತಾ ನಿನ್ನ ಮುಂದಿನ ಚಿತ್ರದಲ್ಲೂ ನಾನೇ ನಟಿ ಓಕೆನಾ ಎಂದು ಹೇಳುತ್ತಾಳೆ.

    ನಾನು ಒಬ್ಬಳು ನಟಿಯಾಗಿ ನಾನು ಈ ರೀತಿಯ ಪ್ರಕರಣಗಳು ನಡೆದಿದೆ. ಆದರೆ ನಾನು ಅದನ್ನು ನಿರಾಕರಿಸಿದ್ದೇನೆ. ನಾನು 10 ವರ್ಷದಿಂದ ಚಿತ್ರರಂಗದಲ್ಲಿ ಇದ್ದೇನೆ. ಇದೂವರೆಗೂ ಯಾರೂ ನನ್ನನ್ನು ಬೆರಳು ಮಾಡಿ ತೋರಿಸಲಿಲ್ಲ. ನಾನು ಈಗಲೂ ಕ್ಲೀನ್ ಹಾಗೂ ಪ್ಯೂರ್ ಆಗಿದ್ದೀನಿ. ನಾನು ದೊಡ್ಡ ನಟರ ಜೊತೆ ಹಲವು ಚಿತ್ರಗಳನ್ನು ಮಿಸ್ ಮಾಡಿಕೊಂಡೆ. ಆದರೆ ನಾನು ಈಗ ಖುಷಿಯಾಗಿದ್ದೇನೆ. ಅಲ್ಲದೇ ಎಲ್ಲ ಚಿತ್ರರಂಗದ ಕಲಾವಿದರ ಜೊತೆ ನನ್ನ ಬಾಂಧವ್ಯ ಚೆನ್ನಾಗಿದೆ.

    ನಾನು ಈಗ ಹೇಳಿರುವುದನ್ನು ಕೆಲವರು ವಿರೋಧಿಸಬಹುದು. ಆದರೆ ಇದು ನಿಜ. ಕೆಲವು ಪುರುಷರು ಕೆಟ್ಟವರು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅವರು ನಿಮ್ಮನ್ನು ರೇಪ್ ಮಾಡುವುದಿಲ್ಲ. ನೀವು ಧೈರ್ಯವಾಗಿ ಇಲ್ಲ ಎಂದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗುತ್ತದೆ. ಈಗ ಪುರುಷರು ವಿಟೂ ಮಾಡುವ ಸಮಯ. ಏಕೆಂದರೆ ಸಾಕಷ್ಟು ನಟಿಯರು ಹೆಸರು ಪಡೆಯಲು ಖ್ಯಾತ ವ್ಯಕ್ತಿಗಳನ್ನು ಬಳಸಿಕೊಂಡಿದ್ದಾರೆ. ಅವರಿಗೆ ಬೇಕಾಗಿದ್ದು ಸಿಕ್ಕಿದ ನಂತರ ಅವರನ್ನು ದೂರ ತಳ್ಳಿ ಅವರ ಮೇಲೆಯೇ ಆರೋಪ ಮಾಡುತ್ತಾರೆ ಅಂತ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5JRSNBMt95Q

    https://www.youtube.com/watch?v=U2km30FcBdY

  • #MeToo ಅಭಿಯಾನ – ರವಿಚಂದ್ರನ್ ಬಗ್ಗೆ ಸತ್ಯ ಬಿಚ್ಚಿಟ್ಟ ಖುಷ್ಬೂ

    #MeToo ಅಭಿಯಾನ – ರವಿಚಂದ್ರನ್ ಬಗ್ಗೆ ಸತ್ಯ ಬಿಚ್ಚಿಟ್ಟ ಖುಷ್ಬೂ

    ಬೆಂಗಳೂರು: ಕಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಸಿನಿಮಾರಂಗದಲ್ಲಿ ‘ಮಿ ಟೂ’ ಅಭಿಯಾನ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಆಂದೋಲನಕ್ಕೆ ನಟಿ ಖುಷ್ಬೂ ಬೆಂಬಲಿಸಿದ್ದು, ಈ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಬಗ್ಗೆ ಕೇಳಿದ ಪ್ರಶ್ನೆಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

    ನಟಿ ಖುಷ್ಬೂ ಅವರು, “ನನ್ನ 40 ವರ್ಷಗಳ ಸಿನಿಮಾ ಜೀವನದಲ್ಲಿ ಅಂತಹ ಸಂದರ್ಭ ಎದುರಾಗಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ಖುಷ್ಬು ಟ್ವೀಟ್ ಮಾಡಿದ ತಕ್ಷಣ ಅನೇಕರು ರೀಟ್ವೀಟ್ ಮಾಡಿದ್ದಾರೆ.

    ಆದರೆ ಅವರಲ್ಲಿ ಲಕ್ಷ್ಮೀ ಎಂಬವರು ನಟ ರವಿಚಂದ್ರನ್ ಹೆಸರು ಹೇಳಿ, “ನೀವು ಸುಳ್ಳು ಹೇಳುತ್ತಿದ್ದೀರಾ ರವಿಚಂದ್ರನ್ ಅವರ ಜೊತೆ ಅಭಿನಯಿಸಿದ್ದೀರಾ, ಅವರು ಅಂದಿನ ಕಾಲದಲ್ಲಿ ಹೇಗಿದ್ದರು ಎಂದು ನಾನು ಊಹಿಸಬಲ್ಲೆ” ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಖುಷ್ಬೂ “ರವಿಚಂದ್ರನ್ ಎಂತಹ ವ್ಯಕ್ತಿ ಅನ್ನೋದು ಗೊತ್ತಿಲ್ಲದೇ ಪಬ್ಲಿಸಿಟಿಗಾಗಿ ಏನೇನೊ ಮಾತಾಡಬೇಡಿ. ನೀವು ಸಂತ್ರಸ್ತೆ ಅಲ್ಲ, ನಿಮ್ಮ ಬಳಿ ಯಾವುದೇ ಸಾಕ್ಷಿ ಇಲ್ಲದೇ ಈ ರೀತಿ ಮಾತಾಡುವು ತಪ್ಪು. ರವಿಚಂದ್ರನ್ ಎಂತಹವರು ಅಂತ ನನಗೆ ಗೊತ್ತು. ಇಂದು ನಮ್ಮ ತಾಯಿ ಬದುಕಿದರೆ ಅದಕ್ಕೆ ಅವರೇ ಕಾರಣ. ರವಿಚಂದ್ರನ್, ಅವರ ತಂದೆ ಎನ್. ವೀರಾಸ್ವಾಮಿ ಬಗ್ಗೆ ನಿನಗೆ ಗೊತ್ತಾ? ರವಿಚಂದ್ರನ್ ಬಹಳ ಒಳ್ಳೆ ಗುಣದವರು. ಎಲ್ಲರಿಗೂ ಒಳ್ಳೆ ಸ್ನೇಹಿತರಾಗಿದ್ದರು. ಅಂತಹವರ ಕುರಿತು ಬಾಯಿಗೆ ಬಂದಂತೆ ಮಾತಾಡಬೇಡ” ಅಂತ ಖುಷ್ಬೂ ಗರಂ ಆಗಿ ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ನಟಿ ಖುಷ್ಬೂ ಸ್ಯಾಂಡಲ್‍ವುಡ್ ನಲ್ಲಿ ರವಿಚಂದ್ರನ್, ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದಾರೆ. ರಣಧೀರ, ಅಂಜದ ಗಂಡು ಸೇರಿ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • #MeToo  ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

    #MeToo ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

    ಬೆಂಗಳೂರು: ಬಾಲಿವುಡ್‍ನಿಂದ ಹಿಡಿದು ಸ್ಯಾಂಡಲ್‍ವುಡ್ ವರೆಗೂ `ಮಿ ಟೂ’ದೇ ಸಿಕ್ಕಾ ಪಟ್ಟೆ ಸದ್ದು, ಈಗ ಇದೇ ಟಾಪಿಕ್ ಬಗ್ಗೆ ಚಂದನವನದ ಟಗರು ಪುಟ್ಟಿ ಮಾನ್ವಿತಾ ಖಡಕ್ ಆಗಿ ಮಾತನಾಡಿದ್ದಾರೆ.

    ಕೆಂಡಸಂಪಿಗೆ ಬೆಡಗಿ ಮಾನ್ವಿತಾ ಅವರು ಸಿನಿರಂಗದಲ್ಲಿ ನಡೆಯುತ್ತಿದ್ದ ‘ಮಿ ಟೂ’ ಬಗ್ಗೆ `ತಾರಕಾಸುರ’ ಸಿನಿಮಾದ ಆಡಿಯೋ ಲಾಂಚ್ ನಲ್ಲಿ ಮಾತನಾಡಿದ್ದಾರೆ. ಹುಡುಗ ನೋಡಿದ ತಕ್ಷಣ, ರೇಗಿಸಿದ ತಕ್ಷಣ ಅದನ್ನು ಲೈಂಗಿಕ ಕಿರುಕುಳ ಅಂತ ಹೇಳಬೇಡಿ. ಕೆಲವರು ಸುಮ್ಮನೆ ಪ್ರಚಾರಕ್ಕೋಸರ ಆರೋಪ ಮಾಡಬಾರದು ಎಂದು ಹುಡುಗಿಯರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ನಾನು ಹೃದಯ ಪೂರ್ವಕವಾಗಿ ಹೇಳುತ್ತೇನೆ. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದ ಗಂಡು ಮಕ್ಕಳಿಗೆ ಶಿಕ್ಷೆ ಆಗಬೇಕು. ಆದರೆ ಗಂಡಸರ ಬಗ್ಗೆ ಯಾರೂ ಸುಮ್ಮಸುಮ್ಮನೆ ಆರೋಪ ಮಾಡಬಾರದು ಎಂದು ಮಾನ್ವಿತಾ ಅವರು ಹೇಳಿದ್ದಾರೆ.

    ಸದ್ಯಕ್ಕೆ ಮಾನ್ವಿತಾ ನಟಿಯಾಗಿ ‘ತಾರಕಾಸುರ’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಸಂಗೀತ ನಿರ್ದೇಶಕ ಧರ್ಮ ವಿಶ್ ಮತ್ತು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಕಾಂಬಿನೇಷನ್‍ನ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ರಥಾವರ ಸಿನಿಮಾದಲ್ಲಿ `ಹುಡುಗಿ ಕಣ್ಣು ಲೋಡೆಡ್ ಗನ್ನು’ ಹಾಡಿನ ಈ ಜೋಡಿ ಮತ್ತೆ ಮೋಡಿ ಮಾಡುವುದಕ್ಕೆ ನಾಲ್ಕು ಹಾಡುಗಳನ್ನ ರೆಡಿ ಮಾಡಿಕೊಂಡಿದೆ.

    ವಿ. ನಾಗೇಂದ್ರ ಪ್ರಸಾದ್, ಬಹುದ್ಧೂರ್ ಚೇತನ್, ನಾಗತಿಹಳ್ಳಿ ಚಂದ್ರ ಶೇಖರ್, ಕವಿರಾಜ್ ತಾರಕಾಸುರನಿಗೆ ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ಶಿವಣ್ಣ ಹಾಡಿರುವ ಕನ್ನಡ ಕಲಿಯೋ ಸಾಂಗ್ ಯುಟ್ಯೂಬ್‍ನಲ್ಲಿ ಒಳ್ಳೆ ಸೌಂಡ್ ಮಾಡುತ್ತಿದೆ. ಈಗ ಸಾಧು ಕೋಕಿಲಾ ಕಂಠಸಿರಿಯಲ್ಲಿ ಮೂಡಿ ಬಂದಿರುವ ಮತ್ತೊಂದು ಹಾಡು ಸದ್ದು ಮಾಡುವ ಕ್ಲೂ ಕೊಟ್ಟಿದೆ. ಇನ್ನು ನವೀನ್ ಸಜ್ಜು ಮತ್ತು ಕೈಲಾಶ್ ಖೇರ್ ಕೂಡ ಅಷ್ಟೇ ಖಡಕ್ ಆಗಿ ಹಾಡಿದ್ದಾರೆ.

    ಅಳಿವಿನ ಅಂಚಿನಲ್ಲಿರುವ ಒಂದು ಜನಪದ ಕಲೆಗೆ ಸಿನಿಮಾ ಟಚ್ ಕೊಟ್ಟು ಥೇಟರ್ ಗೆ ಎಂಟ್ರಿ ಕೊಡುವುದಕ್ಕೆ ‘ತಾರಕಾಸುರ’ ಸಿನಿಮಾ ರೆಡಿಯಾಗಿದೆ. ಹಾಲಿವುಡ್‍ನ ಡ್ಯಾನಿ ಕೂಡ ಈ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿರುವುದು ಮತ್ತೊಂದು ಸ್ಪೆಷಲ್ ಆಗಿದೆ. ಸದ್ಯದಲ್ಲೇ ಟ್ರೇಲರ್ ಕೂಡ ರಿಲೀಸ್ ಮಾಡುವ ಪ್ಲಾನ್‍ ನಲ್ಲಿ ಚಿತ್ರತಂಡ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಿ ಟೂ ಅಭಿಯಾನದ ಬಗ್ಗೆ ಶ್ರುತಿ ಹರಿಹರನ್ ನಿಖರ ಅಭಿಪ್ರಾಯ!

    ಮಿ ಟೂ ಅಭಿಯಾನದ ಬಗ್ಗೆ ಶ್ರುತಿ ಹರಿಹರನ್ ನಿಖರ ಅಭಿಪ್ರಾಯ!

    ದೀಗ ಭಾರತದಾದ್ಯಂತ ಮಿ ಟೂ ಎಂಬ ಅಭಿಯಾನದ ಮೂಲಕ ಚಿತ್ರರಂಗದ ಅತಿರಥ ಮಹಾರಥರ ಮಾನ ಹರಾಜಾಗುತ್ತಿದೆ. ಹೇಳಿ ಕೇಳಿ ಸಿನಿಮಾ ಜಗತ್ತೆಂದರೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಇಂಥ ಲಕಲಕಿಸೋ ಲೋಕದಲ್ಲಿ ಹೆಣ್ಣುಗಳನ್ನು ಕಾಡಿಸಿ ವಿಕೃತಾನಂದ ಪಡೆಯಲೆಂದೇ ಅನೇಕರು ಹೊಂಚು ಹಾಕಿ ಕೂತಿದ್ದಾರೆ. ಇಂಥವರನ್ನೆಲ್ಲ ನಾನಾ ಮುಲಾಜಿನಿಂದ ಸಹಿಸಿಕೊಂಡಿದ್ದ ನಟಿಯರು, ಗಾಯಕಿಯರು ಸೇರಿದಂತೆ ಬೇರೆ ಬೇರೆ ವಿಭಾಗಗಳವರು ಹಲವರನ್ನು ಬೆತ್ತಲು ಮಾಡುತ್ತಿದ್ದಾರೆ. ಇದೀಗ ಈ ಅಭಿಯಾನದ ಬಗ್ಗೆ ನಟಿ ಶ್ರುತಿ ಹರಿಹರನ್ ಮನ ಬಿಚ್ಚಿ ಮಾತಾಡಿದ್ದಾರೆ!

    ಹುಬ್ಬಳ್ಳಿಯಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಶ್ರುತಿ ಹರಿಹರನ್ ಮಾಧ್ಯಮದ ಮಂದಿ ಕೇಳಿದಾಗ ಮಿ ಟೂ ಅಭಿಯಾನದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಿ ಟೂ ಎಂಬುದೊಂದು ಗೇಮ್ ಚೇಂಜರ್ ಅಂತ ಅಭಿಪ್ರಾಯ ಪಟ್ಟಿದ್ದಾರೆ. ಈ ಅಭಿಯಾನದ ಮೂಲಕವಾದರೂ ಚಿತ್ರರಂಗವೂ ಸೇರಿದಂತೆ ವಿವಿಧ ವಲಯಗಳ ಮಹಿಳೆಯರು ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುತ್ತಿರೋದು ಸಕಾರಾತ್ಮಕ ಬೆಳವಣಿಗೆ. ಈ ಮೂಲಕ ಕೆಲವರ ಮತ್ತೊಂದು ಮುಖ ಅನಾವರಣವಾಗುತ್ತಿದೆ. ಇಂಥವರಲ್ಲಿ ಎಲ್ಲರಿಗೂ ಶಿಕ್ಷೆಯಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಎಲ್ಲರಿಗೂ ಆಗುವಂತಾಗಲಿ ಎಂಬುದು ಆಶಯ ಅಂದಿದ್ದಾರೆ.

    ಅಧಿಕಾರ ಮತ್ತು ಹಣ ಬಲದಿಂದಲೇ ಇಂಥಾ ಲೈಂಗಿಕ ದೌರ್ಜನ್ಯಗಳು ನಡೆದುಕೊಂಡು ಬಂದಿದ್ದವು. ಆದರೆ ಇನ್ನು ಮುಂದೆ ಮಹಿಳೆಯರನ್ನು ಭೋಗದ ವಸ್ತುವಂತೆ ಕಾಣುವ ಮಂದಿ ಮಾಧ್ಯಮಗಳ ಮೂಲಕ ಮಾನ ಹರಾಜಾಗೋದರಿಂದ ಹಿಂಜರಿದಾದರೂ ಮಹಿಳೆಯರನ್ನು ನೆಮ್ಮದಿಯಾಗಿರುವಂತೆ ಮಾಡುವಂತಾಗಲಿ ಅಂತ ಶ್ರುತಿ ಹರಿಹರನ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv