Tag: ಮಾಲೀಕ

  • ಸಂಚಾರಿ ನಿಯಮ ಉಲ್ಲಂಘನೆ – 2 ಲಕ್ಷ ದಂಡ ಕಟ್ಟಿದ ಟ್ರಕ್ ಮಾಲೀಕ

    ಸಂಚಾರಿ ನಿಯಮ ಉಲ್ಲಂಘನೆ – 2 ಲಕ್ಷ ದಂಡ ಕಟ್ಟಿದ ಟ್ರಕ್ ಮಾಲೀಕ

    ನವದೆಹಲಿ: ಲಾರಿಯಲ್ಲಿ ಓವರ್ ಲೋಡ್ ಹಾಕಿದ್ದಕ್ಕೆ ದೆಹಲಿಯ ಸಂಚಾರಿ ಪೊಲೀಸರು ಲಾರಿ ಚಾಲಕನಿಗೆ ಬರೋಬ್ಬರಿ 2,00,500 ರೂ ದಂಡ ಹಾಕಿರುವ ಘಟನೆ ಮುಕರ್ಬಾ ಚೌಕ್‍ನಲ್ಲಿ ನಡೆದಿದೆ.

    ದುಬಾರಿ ದಂಡವನ್ನು ಹಾಕಿಸಿಕೊಂಡ ಟ್ರಕ್ ಚಾಲಕನನ್ನು ರಾಮ್ ಕಿಶನ್ ಎಂದು ಗುರುತಿಸಲಾಗಿದೆ. ಹೊಸ ತಿದ್ದುಪಡಿ ನಿಯಮದ ಪ್ರಕಾರ ಓವರ್ ಲೋಡ್ ಸಾಗಿಸುವ ಲಾರಿಗಳಿಗೆ ಇದ್ದ ದಂಡವನ್ನು 2,000 ರೂ.ಗಳಿಂದ 20,000 ರೂ.ಗೆ ಹೆಚ್ಚಿಸಲಾಗಿದೆ ಮತ್ತು ಹೆಚ್ಚುವರಿ ತೂಕದ ಶುಲ್ಕವನ್ನು ಪ್ರತಿ ಟನ್‍ಗೆ 1,000 ರೂ.ಗಳಿಂದ 2,000 ಟನ್‍ಗೆ ಹೆಚ್ಚಿಸಲಾಗಿದೆ.

    ಲಾರಿಯಲ್ಲಿ ಓವರ್ ಲೋಡಿಂಗ್ ಹಾಕಿದ್ದಕ್ಕೆ ಟ್ರಕ್ ಚಾಲಕ ರಾಮ್ ಕಿಶನ್‍ಗೆ 56,000 ರೂ. ಮತ್ತು ಈ ಹಿಂದೆ ಇತರ ಸಂಚಾರಿ ನಿಯಮ ಉಲ್ಲಂಘನೆಗಾಗಿ 70,000 ರೂ. ದಂಡ ವಿಧಿಸಲಾಗಿದೆ. ಇದರ ಜೊತೆಗೆ ವಿವಿಧ ಉಲ್ಲಂಘನೆಗಳಿಗಾಗಿ ಟ್ರಕ್‍ನ ಮಾಲೀಕರಿಗೆ 74,500 ರೂ.ಗಳ ದಂಡ ವಿಧಿಸಲಾಗಿದ್ದು, ಒಟ್ಟು 2,00,500 ರೂ. ಮೊತ್ತವನ್ನು ಟ್ರಕ್‍ನ ಮಾಲೀಕರು ಈಗ ಪಾವತಿಸಿದ್ದಾರೆ.

    ಈ ಹಿಂದೆ ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ತಿದ್ದುಪಡಿಯಾದ ಮೋಟಾರು ವಾಹನ ಕಾಯ್ದೆಯಡಿ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನದ ವ್ಯಕ್ತಿಯೊಬ್ಬನಿಗೆ 1.41 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದಕ್ಕೂ ಮೊದಲು ಸೆಪ್ಟೆಂಬರ್ 3 ರಂದು ಹಲವಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಡಿಶಾದ ಸಂಬಲ್ಪುರ ಜಿಲ್ಲೆಯ ಟ್ರಕ್ ಚಾಲಕನಿಗೆ 86,500 ರೂ. ದಂಡ ವಿಧಿಸಲಾಗಿತ್ತು.

  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ – ಭೂಮಿಯೊಳಗಿನ ಶಬ್ದಕ್ಕೆ ಹೆದರಿ ಮನೆ ಬಿಟ್ಟ ಮಾಲೀಕ

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ – ಭೂಮಿಯೊಳಗಿನ ಶಬ್ದಕ್ಕೆ ಹೆದರಿ ಮನೆ ಬಿಟ್ಟ ಮಾಲೀಕ

    ಚಿಕ್ಕಮಗಳೂರು: ಮೂರು ದಿನಗಳಿಂದ ದಿನ ಕಳೆದಂತೆ ಮಳೆ ಪ್ರಮಾಣ ಜಾಸ್ತಿ ಆಗುತ್ತಿದೆ. ಭಾರೀ ಮಳೆ-ಗಾಳಿಯಿಂದ ಮಲೆನಾಡಿಗರ ಆತಂಕ ಹೆಚ್ಚಾಗಿದ್ದು, ಶಬ್ದಕ್ಕೆ ಹೆದರಿ ಮಾಲೀಕ ಮನೆ ಖಾಲಿ ಮಾಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕಮಕಿ ಗ್ರಾಮದ ಪ್ರಶಾಂತ್ ಎಂಬವರು ಭೂಮಿಯೊಳಗಿನ ಕೇಳಿ ಬಂದ ಶಬ್ದಕ್ಕೆ ಹೆದರಿ ಮನೆ ಖಾಲಿ ಮಾಡಿದ್ದಾರೆ. ಇಂದು ಬೆಳಗ್ಗೆ ಸುಮಾರು 4.45ಕ್ಕೆ 2-3 ಸೆಕೆಂಡ್ ಭೂಮಿಯೊಳಗಿಂದ ಭಾರೀ ಶಬ್ದ ಕೇಳಿ ಬಂದಿದೆ. ಈ ಶಬ್ದಕ್ಕೆ ಹೆದರಿದ ಮಾಲೀಕ ಪ್ರಶಾಂತ್ ಅವರು ತಮ್ಮ ಕುಟುಂಬದ ಜೊತೆ ಮನೆ ಖಾಲಿ ಮಾಡಿ ಮೂಡಿಗೆರೆಗೆ ಬಂದಿದ್ದಾರೆ.

    ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬೀಸುತ್ತಿರುವ ರಣಗಾಳಿಗೆ ಮಲೆನಾಡಿಗರು ಊರು ಬೀಡುವಂತೆ ಮಾಡುತ್ತಿದೆ. ಮೂಡಿಗೆರೆ ತಾಳೂಕಿನ ಚನ್ನಹಡ್ಲು, ಬಾಳೂರು, ಸುಂದರಬೈಲು, ಆಲೇಖಾನ್ ಹೊರಟ್ಟಿ, ಚಕ್ಕಮಕ್ಕಿ ಗ್ರಾಮಗಳಲ್ಲಿ ಭೂಮಿಯೊಳಗಿಂದ ನಾಲ್ಕೈದು ಸೆಕೆಂಡ್ ಭಾರೀ ಶಬ್ದ ಕೇಳಿ ಬರುತ್ತಿದ್ದು, ಜನ ರಾತ್ರೋರಾತ್ರಿ ಮನೆ ಬಿಟ್ಟು ಬರುತ್ತಿದ್ದಾರೆ.

    ಕಳೆದ ತಿಂಗಳ ಮಳೆಗೆ ಮನೆಯ ಮೇಲ್ಛಾವಣೆ ಕುಸಿಯುತ್ತಿತ್ತು. ಆದರೆ ಎರಡನೇ ರೌಂಡಿನ ಮಳೆರಾಯನ ಅಬ್ಬರಕ್ಕೆ ಮನೆಯ ತಳಪಾಯವೇ ಕುಸಿಯುವಂತಾಗಿದೆ. ಆಗಸ್ಟ್ ತಿಂಗಳ ಮಳೆಯಿಂದ ಕುಸಿದಿದ್ದ ಬೆಟ್ಟಗುಡ್ಡಗಳ ಹಾಸುಪಾಸಿನಲ್ಲೇ ಮತ್ತೆ ಕುಸಿತ ಉಂಟಾ ಆಗುತ್ತಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ದಾರಿ ಕಾಣದಂತಾಗಿದೆ. ಮೂಡಿಗೆರೆಯ ಕೊಟ್ಟಿಗೆಹಾರ, ದುರ್ಗದಹಳ್ಳಿ, ಮಲೆಮನೆ, ಹಿರೇಬೈಲು, ಜಾವಳಿ, ಬಣಕಲ್ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

  • ವಾರದ ಬಳಿಕ ಸಿಕ್ಕ ಮಾಲೀಕ- ಒಂದೇ ಸಮನೆ ಶ್ವಾನ ರೋಧನೆ

    ವಾರದ ಬಳಿಕ ಸಿಕ್ಕ ಮಾಲೀಕ- ಒಂದೇ ಸಮನೆ ಶ್ವಾನ ರೋಧನೆ

    – ಕಣ್ಣೀರು ಹಾಕುತ್ತಲೇ ಬಿಟ್ಟೋದ್ರು
    – ಗಾಯವಾದ್ರೂ ಕುಂಟುತ್ತಾ ಹಿಂಬಾಲಿಸಿದ ಶ್ವಾನ

    ಬೆಳಗಾವಿ: ಪ್ರವಾಹದ ಅಬ್ಬರಕ್ಕೆ ಮಾಲೀಕನನ್ನು ಕಳೆದುಕೊಂಡು ಅಲೆದಾಡುತ್ತಿದ್ದ ಶ್ವಾನಕ್ಕೆ ಒಂದು ವಾರದ ಬಳಿಕ ಮಾಲೀಕ ಸಿಕ್ಕಿದ್ದಾರೆ. ಒಂದೆಡೆ ಪ್ರವಾಹದ ಭೀತಿ, ಇನ್ನೊಂದೆಡೆ ಮಾಲೀಕ ಸಿಕ್ಕ ಖುಷಿಗೆ ಶ್ವಾನ ಸುಮಾರು ಅರ್ಧ ಗಂಟೆ ಒಂದೇ ಸಮನೆ ರೋಧಿಸಿ, ಮಾಲೀಕನ ಮಡಿಲಲ್ಲಿ ಹೊರಳಾಡಿ ನೋವು ವ್ಯಕ್ತಪಡಿಸಿದ ಮನಕಲಕುವ ಘಟನೆ ಗೋಕಾಕ್‍ನಲ್ಲಿ ನಡೆದಿದೆ.

    ಪ್ರವಾಹದ ಬಳಿಕ ಸಾಕು ನಾಯಿ ತನ್ನ ಮಾಲೀಕನನ್ನು ಕಂಡು ಖುಷಿ ವ್ಯಕ್ತಪಡಿಸಿದೆ. ಆದರೆ ರಸ್ತೆಯಲ್ಲಿ ಮುಳುಗುವಷ್ಟು ನೀರಿದ್ದ ಕಾರಣ ಮಾಲೀಕ ಬೇಸರದಿಂದಲೇ ಶ್ವಾನವನ್ನು ಕರೆದುಕೊಂಡು ಹೋಗಲಾಗದೇ ಮತ್ತೆ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

    ನಾಯಿ ಪ್ರವಾಹದಲ್ಲಿ ಸಿಲುಕಿದ್ದರಿಂದ ಕಾಲಿಗೆ ಗಾಯವಾಗಿದೆ. ಹೀಗಿದ್ದರೂ ತನ್ನನ್ನು ಕರೆದುಕೊಂಡು ಹೋಗುತ್ತಿಲ್ಲ ಎಂದು ಒಂಟಿ ಕಾಲಲ್ಲಿ ಕುಂಟುತ್ತಾ ಆಳದ ನೀರಿನಲ್ಲಿ ರೋಧಿಸಿ ತನ್ನ ಮಾಲೀಕನ ಹಿಂದೆ ಬಿಟ್ಟು ಹೋಗಬೇಡ ಎಂಬಂತೆ ನಾಯಿ ಓಡುತ್ತಾ ಹೋಗುವ ದೃಶ್ಯ ಎಂತವರನ್ನೂ ಕಣ್ಣೀರು ತರಿಸುವಂತಿತ್ತು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಲೀಕ, ನಾಯಿಗೆ ತನ್ನ ಮನೆ ಸಿಗುತ್ತಿಲ್ಲ. ಪ್ರವಾಹಕ್ಕೆ ಪ್ರಾಣಿಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ನಾವು ಬೋಟ್‍ನಲ್ಲಿ ಹೇಗೋ ಹೋಗುತ್ತೇವೆ. ಆದರೆ ನಾಯಿಯನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಮನೆ ಕೊಚ್ಚಿ ಹೋಗುವಂತಾಗಿದ್ದು, ನಮಗೆ ಭಯ ಶುರುವಾಗಿದೆ. ನಾಯಿಗೆ ಎಲ್ಲಿಯೂ ಹೋಗಿ ಅಭ್ಯಾಸ ಇಲ್ಲ. ಅಲ್ಲದೆ ಅದಕ್ಕೆ ಈಜುವುದಕ್ಕೂ ಬರಲ್ಲ. ಹೀಗಾಗಿ ನಾಯಿಯನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದೇವೆ ಎಂದು ಕಣ್ಣೀರು ಹಾಕಿದ್ದಾರೆ.

  • ಶ್ವಾನ ಕೊಂದಿದ್ದಕ್ಕೆ ಸಿಟ್ಟು – ವಿಷ ಹಾಕಿ ಮೂರು ಚಿರತೆಗಳನ್ನು ಕೊಂದ ಮಾಲೀಕ

    ಶ್ವಾನ ಕೊಂದಿದ್ದಕ್ಕೆ ಸಿಟ್ಟು – ವಿಷ ಹಾಕಿ ಮೂರು ಚಿರತೆಗಳನ್ನು ಕೊಂದ ಮಾಲೀಕ

    ಹರಿದ್ವಾರ: ತಾನು ಪ್ರೀತಿಯಿಂದ ಸಾಕಿದ್ದ ನಾಯಿಯನ್ನು ಕೊಂದು ಹಾಕಿವೆ ಎಂಬ ಕಾರಣಕ್ಕೆ ಮಾಲೀಕ ವಿಷ ಹಾಕಿ ಮೂರು ಚಿರತೆಗಳನ್ನು ಕೊಂದಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ.

    ನಾಯಿಯ ಮಾಲೀಕನನ್ನು ಸುಖ್‍ಪಾಲ್ ಎಂದು ಗುರುತಿಸಿದ್ದು, ಆರೋಪಿಯು ನಾನು ಚಿರತೆಗಳಿಗೆ ವಿಷಪ್ರಾಶನ ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ನನ್ನ ಮೂರು ನಾಯಿ ಮರಿಗಳನ್ನು ಹೊತ್ತುಕೊಂಡು ಹೋಗಿದ್ದ ಚಿರತೆ ಒಂದನ್ನು ಸಾಯಿಸಿ ಇನ್ನೆರೆಡು ಮರಿಗಳನ್ನು ತೀವ್ರವಾಗಿ ಗಾಯಗೊಳಿಸಿದ್ದವು. ಈ ಕಾರಣದಿಂದ ನಾನು ಚಿರತೆಗಳಿಗೆ ವಿಷ ಹಾಕಿದ್ದೆ ಎಂದು ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

    ಈ ಘಟನೆ ರಾಜಾಜಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದ್ದು, ಆರೋಪಿ ಸುಖ್‍ಪಾಲ್ ಕೀಟನಾಶಕವನ್ನು ಸತ್ತ ನಾಯಿಯ ಶವದ ಮೇಲೆ ಅಪಾರ ಪ್ರಮಾಣದಲ್ಲಿ ಸಿಂಪಡಿಸಿ ನಂತರ ಮೃತ ದೇಹವನ್ನು ಕಾಡಿನೊಳಗೆ ಎಸೆದಿದ್ದಾನೆ. ನಾಯಿಯ ಮಾಂಸವನ್ನು ತಿಂದ ಮೂರು ಚಿರತೆಗಳು ಸಾವನ್ನಪ್ಪಿವೆ.

    ಆಗಸ್ಟ್ 5 ರಂದು ಉದ್ಯಾನವನದ ವಿವಿಧ ಭಾಗಗಳಲ್ಲಿ ಮೂರು ಚಿರತೆಯ ಶವಗಳು ಪತ್ತೆಯಾದ ಕಾರಣ ಅಲ್ಲಿನ ಅಧಿಕಾರಿಗಳು ಚಿರತೆಗಳ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಮೂರು ಚಿರತೆಗಳು ಒಂದೇ ನಾಯಿಯ ಮಾಂಸವನ್ನು ಸೇವಿಸಿ ಮೃತ ಪಟ್ಟಿವೆ, ಅ ಮಾಂಸದಲ್ಲಿ ಅಪಾರ ಪ್ರಮಾಣದ ವಿಷ ಇದೆ ಎಂದು ವಿಧಿವಿಜ್ಞಾನ ತಜ್ಞರು ತಿಳಿಸಿದ್ದರು.

    ಮರಣೋತ್ತರ ಪರೀಕ್ಷೆ ಮಾಹಿತಿ ಪಡೆದ ಅಧಿಕಾರಿಗಳು ತನಿಖೆ ಮಾಡಿದಾಗ, ಅರಣ್ಯದ ನರ್ಸರಿಯಲ್ಲಿ ಬಳಸುವ ಕೀಟನಾಶಕದಿಂದ ಚಿರತೆಗಳು ಸಾವನ್ನಪಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಅಧಿಕಾರಿಗಳಿಗೆ ಸುಖ್‍ಪಾಲ್ ಚಿರತೆಗಳಿಗೆ ವಿಷ ಹಾಕಿರುವುದು ತಿಳಿದು ಬಂದಿದೆ. ಆರೋಪಿ ಸುಖ್‍ಪಾಲ್‍ನ ಹೆಂಡತಿ ಅರಣ್ಯದ ನರ್ಸರಿಯಲ್ಲಿ ಗುತ್ತಿಗೆ ಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದು, ಅವಳ ಕಡೆಯಿಂದ ಸತ್ತ ನಾಯಿಯ ದೇಹಕ್ಕೆ ಕೀಟನಾಶಕವನ್ನು ಹಾಕಿ ಚಿರತೆಗಳನ್ನು ಕೊಂದೆ ಎಂದು ಸುಖ್‍ಪಾಲ್ ಒಪ್ಪಿಕೊಂಡಿದ್ದಾನೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಅಪಾರ ಪ್ರಮಾಣದ ಕೀಟನಾಶಕವನ್ನು ನಾಯಿಯ ದೇಹದ ಮೇಲೆ ಹಾಕಿದ ಕಾರಣ ಅದನ್ನು ಸೇವಿಸಿದ ಮೂರು ಚಿರತೆ ಮರಿಗಳು ಸಾವನ್ನಪ್ಪಿವೆ. ಸುಖ್‍ಪಾಲ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆತನನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ತಿಳಿಸಿದ್ದಾರೆ.

  • ಅನೈತಿಕ ಸಂಬಂಧ ಹೊಂದಿದ್ದ ಶ್ವಾನವನ್ನು ಮನೆಯಿಂದ ಹೊರಹಾಕಿದ ಮಾಲೀಕ

    ಅನೈತಿಕ ಸಂಬಂಧ ಹೊಂದಿದ್ದ ಶ್ವಾನವನ್ನು ಮನೆಯಿಂದ ಹೊರಹಾಕಿದ ಮಾಲೀಕ

    ತಿರುವನಂತಪುರಂ: ನೆರೆ ಮನೆಯ ನಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪಮೋರಿಯನ್ ನಾಯಿಯೊಂದನ್ನು ಮಾಲೀಕ ಮನೆಯಿಂದ ಹೊರಹಾಕಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.

    ಹೌದು, ವಿಚಿತ್ರ ಎನಿಸಿದರು ಇದು ಸತ್ಯ. ಮನುಷ್ಯರು ಅನೈತಿಕ ಸಂಬಂಧ ಹೊಂದಿರುವುದು ಬಯಲಾದರೆ. ಅವರನ್ನು ಕುಟುಂಬಸ್ಥರು ಮನೆಯಿಂದ ಹೊರಹಾಕುವುದು, ಹಲ್ಲೆ ಮಾಡುವ ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಆದ್ರೆ ಅನೈತಿಕ ಸಂಬಂಧ ಹೊಂದಿದೆ ಎಂದು ನಾಯಿಯನ್ನು ಮನೆಯಿಂದ ಹೊರಹಾಕಿರುವುದು ಇದೇ ಮೊದಲ ಪ್ರಕರಣ ಎಂದು ವರದಿಯಾಗಿದೆ.

    ಈ ನಾಯಿಗೆ ಸುಮಾರು ಮೂರು ವರ್ಷ ವಯಸ್ಸಾಗಿದ್ದು, ತಿರುವನಂತಪುರದ ಚೆಕಾಯ್ ಮಾರುಕಟ್ಟೆಯಲ್ಲಿ ಅನಾಥವಾಗಿ ಈ ನಾಯಿ ನಿಂತಿತ್ತು. ಈ ವೇಳೆ ಪೀಪಲ್ ಫಾರ್ ಎನಿಮಲ್ಸ್(ಪಿಎಫ್‍ಎ) ಸ್ವಯಂ ಸೇವಕ ಶಮೀಮ್ ಅವರು ನಾಯಿಯನ್ನು ಕಂಡು ಅದರ ಬಳಿ ಹೋಗಿ ನೋಡಿದಾಗ, ಅದರ ಕೊರಳಿಗೆ ಒಂದು ಚೀಟಿಯನ್ನು ಕಟ್ಟಲಾಗಿತ್ತು. ಅದನ್ನು ತೆರೆದು ನೋಡಿದಾಗ ನಾಯಿ ಬಗ್ಗೆ ಶಮೀಮ್ ಅವರಿಗೆ ತಿಳಿದಿದೆ.

    ಚೀಟಿಯಲ್ಲಿ ಏನಿದೆ?
    ಇದು ಆತ್ಯುತ್ತಮ ತಳಿಯ ನಾಯಿ, ಒಳ್ಳೆ ನಡವಳಿಕೆ ಹೊಂದಿದೆ. ಇದಕ್ಕೆ ಯಾವುದೇ ಕಾಯಿಲೆಗಳಿಲ್ಲ. ಇದಕ್ಕೆ ಸಾಮಾನ್ಯವಾಗಿ ಐದು ದಿನಗಳಿಗೆ ಒಮ್ಮೆ ಸ್ನಾನ ಮಾಡಿಸಲಾಗುತಿತ್ತು. ಇದು ಕೇವಲ ಬೊಗಳುತ್ತದೆ, ಕಚ್ಚುವುದಿಲ್ಲ. ಮೂರು ವರ್ಷದಲ್ಲಿ ಯಾರನ್ನೂ ಕಡಿದಿಲ್ಲ. ಹಾಲು, ಬಿಸ್ಕೆಟ್ ಮತ್ತು ಮೊಟ್ಟೆಯನ್ನು ಹೆಚ್ಚು ತಿನ್ನಲು ಇಷ್ಟ ಪಡುತ್ತದೆ. ನೆರೆಮನೆಯ ನಾಯಿ ಜೊತೆಗೆ ಇದು ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ತಿಳಿದಿದ್ದಕ್ಕೆ ಇದನ್ನು ಮನೆಯಿಂದ ಹೊರ ಹಾಕಲಾಗಿದೆ ಎಂದು ಬರೆಯಲಾಗಿದೆ.

    https://www.facebook.com/sreedevi.s.kartha/posts/10156939196634300

    ಅಲ್ಲದೆ ಈ ಬಗ್ಗೆ ತಿಳಿದ ಬಳಿಕ, ಪ್ರಾಣಿ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಕಾರ್ಯಕರ್ತೆ ಶ್ರೀದೇವಿ ಎಸ್. ಕರ್ಥ ಅವರು ಪೊಮೇರಿಯನ್ ನಾಯಿಯ ಫೋಟೋ ಹಾಗೂ ಅದರ ಕೊರಳಿನಲ್ಲಿದ್ದ ಚೀಟಿಯ ಫೋಟೋವನ್ನು ತಮ್ಮ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಪ್ರಾಣಿಪ್ರಿಯರು ನಾಯಿಯ ಮಾಲೀಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 3 ವರ್ಷದ ಬಾಲಕಿ ನಾಪತ್ತೆ- ಮನೆ ಮಾಲೀಕನ ವಿರುದ್ಧ ಕಿಡ್ನಾಪ್ ಆರೋಪ

    3 ವರ್ಷದ ಬಾಲಕಿ ನಾಪತ್ತೆ- ಮನೆ ಮಾಲೀಕನ ವಿರುದ್ಧ ಕಿಡ್ನಾಪ್ ಆರೋಪ

    ಬಾಗಲಕೋಟೆ: ಜಿಲ್ಲೆಯ ಕೌಲ್ ಬಜಾರ್ ನಲ್ಲಿ ಬಾಡಿಗೆದಾರನ ಮಗುವನ್ನು ಅಪಹರಿಸಿರುವ ಆರೋಪವೊಂದು ಮನೆ ಮಾಲೀಕನ ವಿರುದ್ಧ ಕೇಳಿ ಬಂದಿದೆ.

    3 ವರ್ಷದ ರಿತಿಕಾ ಹಾಳಕೇರಿ ನಾಪತ್ತೆಯಾದ ಬಾಲಕಿ. ಈಕೆಯನ್ನು 50 ವರ್ಷದ ಶರಣಬಸಪ್ಪ ಎಂಬ ಮನೆ ಮಾಲೀಕನೇ ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

    ಶುಕ್ರವಾರ ಸಂಜೆ ಆಟ ಆಡಿಸುವ ನೆಪದಲ್ಲಿ ಬಾಲಕಿ ರಿತಿಕಾಳನ್ನು ಶರಣಬಸಪ್ಪ ಕಿಡ್ನಾಪ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಶರಣಬಸಪ್ಪ ಬಾಗಲಕೋಟೆಯ ಹಳೆ ಬಸ್ ನಿಲ್ದಾಣದಲ್ಲಿ ತನ್ನ ಬೈಕ್ ಇಟ್ಟು ಎಸ್ಕೇಪ್ ಆಗಿದ್ದಾಗಿ ತಿಳಿದುಬಂದಿದೆ.

    ಸುದ್ದಿ ತಿಳಿದ ಬಾಗಲಕೋಟೆ ನಗರಠಾಣೆ ಪೊಲೀಸರು ತಡರಾತ್ರಿಯಿಂದ ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದು, ಹುಡುಕಾಟ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಇತ್ತ ಬಾಲಕಿ ರಿತಿಕಾ ಕಿಡ್ನಾಪ್ ಆದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

    ರಿತಿಕಾಳ ತಾಯಿ ದೀಪಾ ಹಾಲಕೇರಿ ತಮ್ಮ ಒಂದು ತಿಂಗಳ ಹಸುಗೂಸನ್ನು ಮಡಿಲಲ್ಲಿ ಇಟ್ಟುಕೊಂಡು ಮೊದಲನೇ ಮಗು ರಿತಿಕಾಗಾಗಿ ಕಾಯುತ್ತಿದ್ದಾರೆ. ಈ ಸಂಬಂಧ ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 18 ತಿಂಗ್ಳ ಹಿಂದೆ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಡಲು ನಾಯಿ ನಿರಾಕರಣೆ: ವಿಡಿಯೋ

    18 ತಿಂಗ್ಳ ಹಿಂದೆ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಡಲು ನಾಯಿ ನಿರಾಕರಣೆ: ವಿಡಿಯೋ

    ಅಥೆನ್ಸ್: 18 ತಿಂಗಳ ಹಿಂದೆ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಡಲು ನಾಯಿ ನಿರಾಕರಿಸುತ್ತಿರುವ ಘಟನೆ ಗ್ರೀಕ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    40 ವರ್ಷದ ಮಾಲೀಕ ನವೆಂಬರ್ 9, 2017ರಂದು ಕಾರಿನಲ್ಲಿ ಹೋಗುತ್ತಿದ್ದಾಗ ಸಿಮೆಂಟ್ ಮಿಕ್ಸರ್ ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಮಾಲೀಕ ಮೃತಪಟ್ಟ ಸ್ಥಳದಿಂದ ಅವರ ಮನೆಗೆ 12 ಕಿ.ಮೀ ದೂರವಿದ್ದು, ಆ ನಾಯಿ ಇಲ್ಲಿಯವರೆಗೆ ಹೇಗೆ ಪ್ರಯಾಣಿಸಿತು ಎಂದು ಸಾರ್ವಜನಿಕರು ಹಾಗೂ ಪ್ರಾಣಿ ಸಂರಕ್ಷಣಾ ತಜ್ಞರು ಗೊಂದಲಕ್ಕೊಳಗಾಗಿದ್ದಾರೆ.

    ನಾಯಿ ತನ್ನ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಟ್ಟು ಬರಲು ನಿರಾಕರಿಸುತ್ತಿದೆ. ಈ ಕಾರಣದಿಂದಾಗಿ ಸ್ಥಳೀಯರು ನಾಯಿಗಾಗಿ ಮನೆ ನಿರ್ಮಿಸಿದ್ದಾರೆ. ಅಲ್ಲದೆ ಆ ನಾಯಿಗಾಗಿ ಕಂಬಳಿ ನೀಡಿ ಪ್ರತಿನಿತ್ಯ ನೀರು ಹಾಗೂ ಆಹಾರವನ್ನು ನೀಡುತ್ತಿದ್ದಾರೆ.

    ಮಾಲೀಕ ಮೃತಪಟ್ಟ ಸ್ಥಳದಲ್ಲಿ ಕೆಲ ಕುಟುಂಬದವರು ನಾಯಿಯನ್ನು ದತ್ತು ಪಡೆಯಲು ಮುಂದಾದರು. ಆದರೆ ಆ ನಾಯಿ ಬಿಸಿಲು – ಚಳಿ ಏನೇ ಇದ್ದರೂ ಸಹ ಆ ಜಾಗವನ್ನು ಬಿಡಲು ನಿರಾಕರಿಸುತ್ತಿದೆ. ಸ್ಥಳೀಯರು ಆ ನಾಯಿಯನ್ನು ‘ಗ್ರೀಕ್ ಹಚಿಕೋ’ ಎಂದು ಕರೆಯಲು ಪ್ರಾರಂಭಿಸಿದ್ದಾರೆ.

    https://www.youtube.com/watch?time_continue=79&v=UMu_XL8Mhbg

  • 1 ಗಂಟೆ ಕಾರ್ಯಚರಣೆ ನಡೆಸಿ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    1 ಗಂಟೆ ಕಾರ್ಯಚರಣೆ ನಡೆಸಿ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    ಚಿಕ್ಕಮಗಳೂರು: ತೋಟದಲ್ಲಿದ್ದ ಹಂಚಿನ ರಾಶಿಯಲ್ಲಿ ಆಶ್ರಯ ಪಡೆದಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಒಂದು ಗಂಟೆಯ ಕಾರ್ಯಚರಣೆ ಬಳಿಕ ಸೆರೆ ಹಿಡಿಯಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು.

    ಥಾಮಸ್ ಎಂಬವರ ತೋಟದ ಮನೆಯ ಹಂಚಿನ ರಾಶಿಯಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ಕಾಳಿಂಗ ಸರ್ಪ ವಾಸವಿತ್ತು. ತೋಟದ ಮಾಲೀಕರು ಹಾಗೂ ಕೂಲಿ ಕಾರ್ಮಿಕರು ಕಾಳಿಂಗ ಸರ್ಪವನ್ನು ನೋಡುತ್ತಿದ್ದರು.

    ಆಗಾಗ ಹೊರ ಬರುತ್ತಿದ್ದ ಕಾಳಿಂಗ ಸರ್ಪವನ್ನು ಕಂಡು ಕೆಲಸಗಾರರು ಗಾಬರಿಗೊಂಡಿದ್ದರು. ಅಲ್ಲದೆ ತೋಟದಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದರು. ಹಾಗಾಗಿ ತೋಟದ ಮಾಲೀಕ ಸ್ನೇಕ್ ಹರೀಂದ್ರಾಗೆ ವಿಷಯ ತಿಳಿಸಿದ್ದರು.

    ಈ ವಿಷಯ ತಿಳಿದ ಸ್ಥಳಕ್ಕೆ ಬಂದ ಹರೀಂದ್ರ, ಸುಮಾರು ಒಂದು ಗಂಟೆಯ ಕಾರ್ಯಚರಣೆ ನಡೆಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಹಕಾರದಲ್ಲಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು, ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

  • ಮಾಲೀಕನ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಮಹಿಳೆ

    ಮಾಲೀಕನ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಮಹಿಳೆ

    ಬೆಂಗಳೂರು: ಮಾಲೀಕರ ನಿರ್ಲಕ್ಷ್ಯದಿಂದ ಹೌಸ್ ಕೀಪಿಂಗ್ ಮಹಿಳೆಯೊಬ್ಬರು ತನ್ನ ಕೈ ಕಳೆದುಕೊಂಡ ಘಟನೆ ನಗರದ ಕೋಣನಕುಂಟೆಯಲ್ಲಿ ನಡೆದಿದೆ.

    ಶಾರದಮ್ಮ (39) ಕೈಕಳೆದುಕೊಂಡ ಮಹಿಳೆ. ಶಾರದಮ್ಮ ದೊಡ್ಡ ಲಕ್ಕಸಂದ್ರ ವಿಲ್ಲಾಸ್ ಪ್ರೈಡ್ ಅಪಾರ್ಟ್‍ಮೆಂಟ್‍ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕಸವನ್ನು ಮೆಷಿನ್‍ಗೆ ಹಾಕುತ್ತಿದ್ದಾಗ ಈ ಅವಘಡ ನಡೆದಿದ್ದು, ಬಲಗೈ ತುಂಡಾಗಿದೆ.

    ಶಾರದಮ್ಮ ಅಪಾರ್ಟ್‍ಮೆಂಟ್ ಸುತ್ತ ಮುತ್ತಲಿನ ಕಸವನ್ನು ಗುಡಿಸಿ ರಾಶಿ ಹಾಕಿದ್ದರು. ಕಸವನ್ನು ಮಷಿನ್‍ಗೆ ಹೇಗೆ ಹಾಕುವುದೆಂದು ಅಪಾರ್ಟ್ ಮೆಂಟ್ ಮಾಲೀಕ ಕುಮಾರ್ ಶಾರದಮ್ಮಗೆ ಹೇಳಿಕೊಟ್ಟಿರಲಿಲ್ಲ. ಆದರೂ ಕಸವನ್ನು ಮಷಿನ್‍ಗೆ ಹಾಕುವಂತೆ ಕುಮಾರ್ ಹೇಳಿದ್ದರು. ಇದರಿಂದಾಗಿ ಶಾರದಮ್ಮ ಮೆಷಿನ್‍ನಲ್ಲಿ ಕಸ ಹಾಕಿ ಕಡ್ಡಿಯಿಂದ ದೂಡುತ್ತಿದ್ದರು. ಈ ವೇಳೆ ಕಡ್ಡಿ ಮೆಷಿನಿನೊಳಗೆ ಬಿದ್ದಿದೆ. ತಕ್ಷಣವೇ ಕಡ್ಡಿಯನ್ನು ತೆಗೆಯಲು ಮುಂದಾದ ಶಾರದಮ್ಮ, ಆಯ ತಪ್ಪಿ ಮೆಷಿನ್‍ನಲ್ಲಿ ಬಲಗೈ ಇಟ್ಟಿದ್ದಾರೆ. ಪರಿಣಾಮ ಮೆಷಿನಿಗೆ ಸಿಲುಕಿದ ಶಾರದಮ್ಮಳ ಬಲಗೈ ತುಂಡಾಗಿದೆ.

    ಶಾರದಮ್ಮ ನೋವಿನಿಂದ ಅಳುತ್ತಿದ್ದ ಧ್ವನಿ ಕೇಳಿ ಸ್ಥಳಕ್ಕೆ ಆಗಮಿಸಿದ ಸಹೋದ್ಯೋಗಿಳು ಕಣ್ಣೀರು ಹಾಕಿದರು. ಗಂಭೀರವಾಗಿ ಗಾಯಗೊಂಡಿದ್ದ ಶಾರದಮ್ಮ ಅವರಿಗೆ ನೀರು ಕುಡಿಸಿ, ಕೈಗೆ ಬಟ್ಟೆ ಕಟ್ಟಿ ರಕ್ತಸ್ರಾವ ತಡೆಯಲು ಪ್ರಯತ್ನಿಸಿದರು. ಸ್ಥಳದಲ್ಲಿದ್ದ ಕೆಲವರು ಅಂಬುಲೆನ್ಸ್ ಗೆ ಕರೆ ಮಾಡಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ.

    ತರಬೇತಿ ಹಾಗೂ ಸುರಕ್ಷತೆ ನೀಡದೆ ಕೆಲಸ ಮಾಡುವಂತೆ ಹೇಳಿದ ಅಪಾರ್ಟ್‍ಮೆಂಟ್ ಮಾಲೀಕ ಕುಮಾರ್ ವಿರುದ್ಧ ಕೊಣನಕುಂಟೆ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಕಿಡ್ನಿ ಮಾರಿ 3 ಲಕ್ಷ ರೂ. ಹೂಡಿದ್ರು- ಮಗ್ಳ ಮದ್ವೆಗೆ ಹಣವಿಲ್ಲದೆ ಮಹಿಳೆ ಕಣ್ಣೀರು

    ಕಿಡ್ನಿ ಮಾರಿ 3 ಲಕ್ಷ ರೂ. ಹೂಡಿದ್ರು- ಮಗ್ಳ ಮದ್ವೆಗೆ ಹಣವಿಲ್ಲದೆ ಮಹಿಳೆ ಕಣ್ಣೀರು

    ಬೆಂಗಳೂರು: ಸಾವಿರಾರು ಮಂದಿ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಮನ್ಸೂರ್ ಖಾನ್ ಸಾಹುಕಾರ ಆಗಿದ್ದಾನೆ. ಐಎಂಎನಲ್ಲಿ ಹೂಡಿಕೆ ಮಾಡಿದ ಬಹುತೇಕ ಮಂದಿಯದು ಒಂದೊಂದು ರೀತಿಯ ಕರುಣಾಜನಕ ಕಥೆಯಿದ್ದು ಈಗ ಹಣವನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

    ಆರ್.ಟಿ ನಗರದ 49 ವರ್ಷದ ಫರೀದಾ ಬೇಗ್ ಎಂಬವರು ತಮ್ಮ ಕಿಡ್ನಿ ಮಾರಿ, ಸಂಪಾದಿಸಿದ್ದ 3 ಲಕ್ಷ ಹಣ ಮನ್ಸೂರ್ ಖಾನ್ ಕಂಪನಿಯಲ್ಲಿ ಹೂಡಿದ್ದರು. ಫರೀದಾ ಬೇಗ್ ಮೂರು ವರ್ಷದ ಹಿಂದೆ ಸಂಬಂಧಿಕರೊಬ್ಬರಿಗೆ ಕಿಡ್ನಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮೂರು ಲಕ್ಷ ಹಣ ಪಡೆದಿದ್ದರು.

    ಫರೀದಾ ಬೇಗ್ ಆ ಹಣವನ್ನು ಇಬ್ಬರು ಪುತ್ರಿಯರ ಹೆಸರಿನಲ್ಲಿ ಠೇವಣಿ ಇಟ್ಟಿದ್ದರು. ಒಂದೂವರೆ ವರ್ಷದ ಹಿಂದೆ ಪರಿಚಿತ ವ್ಯಕ್ತಿಯೊಬ್ಬ ಐಎಂಎ ಕಂಪನಿಯ ಬಗ್ಗೆ ಹೇಳಿ, ಮಾಸಿಕ 10 ಸಾವಿರ ಬರುತ್ತೆ ಎಂದಿದ್ದರು.

    ನಾನು ಹಣವನ್ನು ಹಣವನ್ನು ಐಎಂಇನಲ್ಲಿ ಹಾಕುವ ವೇಳೆ ಕಿಡ್ನಿ ಪಡೆದ ಮಹಿಳೆ, ಈ ರೀತಿ ದುಡ್ಡು ಹಾಕಿ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದರು. ಆದರೆ, ಮಗಳ ಮದುವೆ ಖರ್ಚಿಗಾಗಿ ಹೆಚ್ಚಿನ ಹಣದ ಆಸೆಗೆ ಬಿದ್ದು, ಈಗ ಪರದಾಡ್ತಿದ್ದೇನೆ ಎಂದು ಫರೀದಾ ಬೇಗ್ ಕಣ್ಣೀರು ಹಾಕುತ್ತಿದ್ದಾರೆ.