Tag: ಮಾರ್ಕೆಟ್

  • ನಾಯಿಯ ಪುಣ್ಯತಿಥಿ ಮಾಡಿ ಬಾಡೂಟ ಹಾಕಿದ ಹಾಸನದ ಹೂವಿನ ವ್ಯಾಪಾರಿಗಳು

    ನಾಯಿಯ ಪುಣ್ಯತಿಥಿ ಮಾಡಿ ಬಾಡೂಟ ಹಾಕಿದ ಹಾಸನದ ಹೂವಿನ ವ್ಯಾಪಾರಿಗಳು

    ಹಾಸನ: ಮನುಷ್ಯರು ಸತ್ತರೆ ಅವರ ಪುಣ್ಯತಿಥಿ ಕಾರ್ಯ ಹಾಗಿರಲಿ, ಅಂತ್ಯ ಸಂಸ್ಕಾರವನ್ನೂ ವಿಧಿ ಬದ್ಧವಾಗಿ ಮಾಡದ ಎಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಆದರೆ ಹಾಸನ ಜಿಲ್ಲೆ ಹೊಳೆನರಸೀಪುರದ ಹೂವಿನ ವ್ಯಾಪಾರಿಗಳು ಮನೆ ಮಗನಿಗಿಂತ ಹೆಚ್ಚಾಗಿ ತಮ್ಮ ಬಗ್ಗೆ ನಿಷ್ಟೆ ತೋರಿದ ನಾಯಿ ಬಗ್ಗೆ ವಿಶಿಷ್ಟ ಪ್ರೀತಿ ತೋರಿದ್ದಾರೆ.

    ಪ್ರೀತಿಯ ನಾಯಿ ಧರ್ಮ ಸತ್ತ ನಂತರ 11ನೇ ದಿನದ ತಿಥಿ ಕಾರ್ಯವನ್ನು ಅರ್ಥಪೂರ್ಣವಾಗಿ ನೆರವೇರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ನಾಯಿಯ ಪುಣ್ಯತಿಥಿಯ ಬಾಡೂಟದಲ್ಲಿ ನೂರಾರು ಮಂದಿ ಭಾಗಿಯಾಗುವ ಮೂಲಕ ನಿಯತ್ತಿನ ಪ್ರಾಣಿಯೇ ನಿನಗೊಂದು ಸಲಾಂ, ಮತ್ತೆ ಹುಟ್ಟಿಬಾ ಎಂದು ಸ್ಮರಿಸಿಕೊಂಡರು.

    ಹೌದು. ಈ ನಾಯಿಯ ಹೆಸರು ಧರ್ಮ. ಧರ್ಮವಾಗಿ ಎಲ್ಲರೊಂದಿಗೆ ನಡೆದುಕೊಳ್ಳುತಿದ್ದ ಶ್ವಾನದ ಹೆಸರು ‘ಧರ್ಮ’. ಕಳೆದ 8 ವರ್ಷಗಳಿಂದ ಹೊಳೆನರಸೀಪುರದ ಹೂವಿನ ಮಾರುಕಟ್ಟೆಯಲ್ಲಿ ಈತನದ್ದೇ ದರ್ಬಾರ್ ನಡೆಯುತಿತ್ತು. ಧರ್ಮನ ಹುಟ್ಟು ಎಲ್ಲೋ? ಹಿನ್ನೆಲೆ ಎಲ್ಲೋ?. ಆದರೆ ನೂರಾರು ಮಂದಿ ಹೂವಿನ ವ್ಯಾಪಾರಿಗಳಿಗೆ ಪ್ರೀತಿ ಪಾತ್ರವಾಗಿತ್ತು ಈ ನಿಯತ್ತಿನ ಪ್ರಾಣಿ.

    ಪ್ರತಿಯೊಬ್ಬ ಹೂ ವ್ಯಾಪಾರಿ ಇವರೇ ಎಂದು ಗುರುತಿಸುತ್ತಿದ್ದ ಧರ್ಮ, ಯಾರೊಂದಿಗೂ ದುವರ್ತನೆ ತೋರಿದವನಲ್ಲ. ಕೊಟ್ಟ ಆಹಾರವನ್ನು ತಿಂದು ಒಂದು ರೀತಿಯಲ್ಲಿ ಇಡೀ ಮಾರುಕಟ್ಟೆಗೆ ಕಣ್ಗಾವಲಾಗಿದ್ದ. ಒಳ್ಳೆತನದಿಂದಲೇ ನಾಯಿಗೆ ಧರ್ಮ ಎಂದು ಹೆಸರಿಡಲಾಗಿತ್ತು.

    ಹೀಗಿದ್ದ ಧರ್ಮ ಕಳೆದ ಅಕ್ಟೋಬರ್ 14 ರಂದು ಅನಾರೋಗ್ಯದಿಂದ ಸಾವನ್ನಪ್ಪಿದ. ಅಂದು ಹೂವಿನ ಮಾರುಕಟ್ಟೆಯಲ್ಲಿ ನೀರವ ಮೌನ ಮನೆ ಮಾಡಿತ್ತು. ನೂರಾರು ಮಂದಿ ಅಗಲಿದ ಧರ್ಮನಿಗೆ ಕಂಬನಿ ಮಿಡಿದಿದ್ದರು. ಧರ್ಮನ ಸಾವಿನಿಂದ ಹೊರ ಬರದ ಜನರು, ಇಂದು 11ನೇ ದಿನ ಪುಣ್ಯತಿಥಿ ಕಾರ್ಯವನ್ನು ಅರ್ಥಪೂರ್ಣವಾಗಿ ನೆರವೇರಿಸುವ ಮೂಲಕ ಮಾನವೀಯತೆ ತೋರಿಸಿದ್ದಾರೆ. ಮರಿ ಊಟ, ಬೋಟಿ, ಅನ್ನ, ಸೌತೇಕಾಯಿ ಹೀಗೆ ಮನುಷ್ಯರ ತಿಥಿಯನ್ನು ಹೇಗೆ ಮಾಡುತ್ತಾರೋ ಹಾಗೆಯೇ ನಾಯಿಗೂ ಬೊಂಬಾಟ್ ಬಾಡೂಟ ಮಾಡಿದ್ದು ವಿಶೇಷವಾಗಿತ್ತು.

    ಧರ್ಮ ಸ್ಥಳೀಯರೊಂದಿಗೆ ಯಾವ ಅನೋನ್ಯವಾಗಿದ್ದ ಎಂದರೆ ವರ್ತಕರು ತಮ್ಮ ಅಂಗಡಿ ಬಳಿ ಇಲ್ಲದೇ ಹೋದರೂ ಹಗಲು-ರಾತ್ರಿ ಧರ್ಮನೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದ. ಧರ್ಮ ಇದ್ದ ಎಂದರೆ ಅಲ್ಲಿ ಯಾವುದೇ ಕಳ್ಳತನ ಇತ್ಯಾದಿ ಯಾವುದೇ ಕೃತ್ಯಗಳಿಗೆ ಅವಕಾಶ ಇರಲಿಲ್ಲ. ಇದೇ ಕಾರಣಕ್ಕೆ ನಾಯಿ ಸಮಾಧಿಗೆ ಹಾಲು ತುಪ್ಪ ಎರೆದು ಪೂಜೆ ಸಲ್ಲಿಸಿದರು.

    ಧರ್ಮನಿಗೆ ಇಷ್ಟವಾಗಿದ್ದ ಸಿಹಿ ಹಾಗೂ ಖಾರ ತಿಂಡಿಯನ್ನೂ ಸಿದ್ಧಪಡಿಸಲಾಗಿತ್ತು. ಇದಕ್ಕಾಗಿ ಸ್ಥಳೀಯರೇ ಹಣ ಹೊಂದಿಸಿ ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದರು. ಈ ಕಾರ್ಯಕ್ಕೆ ಮಾರುಕಟ್ಟೆಯ ಪ್ರತಿಯೊಬ್ಬರೂ ಕೈ ಜೋಡಿಸಿದ್ದು ವಿಶೇಷವಾಗಿತ್ತು.

    ಬದುಕಿದ್ದಾಗ ಧರ್ಮ ಮಾಡುತ್ತಿದ್ದ ಒಳ್ಳೇ ಕೆಲಸ ಒಂದಲ್ಲ ಎರಡಲ್ಲ. ಅಕಸ್ಮಾತ್ ಯಾರಿಗಾದರೂ ತನಗೆ ಪರಿಚಿತರ ಮನೆ ವಿಳಾಸ ಗೊತ್ತಿಲ್ಲದೇ ಹೋದರೆ ತಾನೆ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದನಂತೆ. ಪರಿಚಿತರು ಬಸ್ ಗೆ ಹೋದರೆ ಅವರನ್ನು ಕಳಿಸಿ, ನೇರವಾಗಿ ಮಾರುಕಟ್ಟೆಗೆ ಬಂದು ಬಿಡುತ್ತಿದ್ದ. 8 ವರ್ಷಗಳ ಅವಧಿಯಲ್ಲಿ ಯಾರಿಗೂ ಕಚ್ಚಿಲ್ಲ. ಯಾರಿಂದಲೂ ಕೆಟ್ಟವನು ಎನಿಸಿಕೊಂಡಿಲ್ಲ.

    ಹೀಗಾಗಿಯೇ ಅಗಲಿದ ಧರ್ಮನಿಗೆ ಗೌರವಯುತವಾಗಿ ತಿಥಿ ಕಾರ್ಯ ಮಾಡಿ ಮಾದರಿ ಮೆರೆದಿದ್ದಾರೆ. ಧರ್ಮನ ಮೇಲಿನ ಪ್ರೀತಿಗೆ ಇಷ್ಟಕ್ಕೇ ನಿಂತಿಲ್ಲ. ಜನವರಿಯಲ್ಲಿ ಧರ್ಮನ ಸಮಾಧಿ ಸ್ಥಳದಲ್ಲಿ ಸ್ಮಾರಕ ಮಾಡಲೂ ನಿರ್ಧಾರ ಮಾಡಿದ್ದಾರೆ. ಒಟ್ಟಿನಲ್ಲಿ ಮನುಷ್ಯ-ಮನುಷ್ಯ ನಡುವೆ ಮೂಗು ಮುರಿಯುವ ಮಂದಿ ಇರುವ ಈ ಕಾಲದಲ್ಲಿ ಮೂಕ ಪ್ರಾಣಿಯ ಅಂತ್ಯ ಸಂಸ್ಕಾರದ ಜೊತೆಗೆ ಅದರ ಪುಣ್ಯತಿಥಿಯನ್ನೂ ಮಾಡಿದ್ದು ನಿಜಕ್ಕೂ ವಿಶೇಷವೇ ಸರಿ.

     

  • ಮಾರ್ಕೆಟ್ ನಲ್ಲಿ ಆಕಸ್ಮಿಕ ಬೆಂಕಿ- 2 ತರಕಾರಿ ಅಂಗಡಿಗಳು ಸುಟ್ಟು ಭಸ್ಮ

    ಮಾರ್ಕೆಟ್ ನಲ್ಲಿ ಆಕಸ್ಮಿಕ ಬೆಂಕಿ- 2 ತರಕಾರಿ ಅಂಗಡಿಗಳು ಸುಟ್ಟು ಭಸ್ಮ

    ಮೈಸೂರು: ಅಗ್ರಹಾರ ವೃತ್ತದಲ್ಲಿನ ಚಿಕ್ಕ ಮಾರ್ಕೆಟ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಾರುಕಟ್ಟೆಯಲ್ಲಿನ ಎರಡು ತರಕಾರಿ ಅಂಗಡಿಗಳು ಸುಟ್ಟು ಭಸ್ಮವಾಗಿವೆ.

    ಪ್ರಮೋದ್ ಎಂಬವರಿಗೆ ಸೇರಿದ್ದ ಈ ಎರಡು ತರಕಾರಿ ಅಂಗಡಿಯಲ್ಲಿ ಒಂದು ಲಕ್ಷ ರೂ. ಮೌಲ್ಯದ ತರಕಾರಿ ಹಾಗೂ ತರಕಾರಿ ತೂಗುವ ಎಲೆಕ್ಟ್ರಾನಿಕ್ ಯಂತ್ರ ಇದ್ದುವು. ಇದೆಲ್ಲಾ ಸುಟ್ಟು ಕರಕಲಾಗಿದೆ.

    ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಕೆನ್ನಾಲಿಗೆ ಪಕ್ಕದ ಅಂಗಡಿಗಳಿಗೆ ಹರಡದಂತೆ ಯಶಸ್ವಿಯಾಗಿ ತಡೆದಿದ್ದಾರೆ. ಇದರಿಂದ ನಷ್ಟದ ಪ್ರಮಾಣ ಹೆಚ್ಚಾಗುವುದು ತಪ್ಪಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

  • ವಿಡಿಯೋ: ಮಾರ್ಕೆಟ್‍ನಲ್ಲಿ ತರಕಾರಿ ವಿಂಗಡಿಸುತ್ತಿದ್ದ ಯುವಕನ ಮೇಲರಗಿ ಬಂತು ಪಿಕ್‍ಅಪ್ ಟ್ರಕ್

    ವಿಡಿಯೋ: ಮಾರ್ಕೆಟ್‍ನಲ್ಲಿ ತರಕಾರಿ ವಿಂಗಡಿಸುತ್ತಿದ್ದ ಯುವಕನ ಮೇಲರಗಿ ಬಂತು ಪಿಕ್‍ಅಪ್ ಟ್ರಕ್

    ಮಂಗಳೂರು: ನಿಂತಿದ್ದ ಪಿಕ್ ಅಪ್ ಟೆಂಪೋವೊಂದು ಚಾಲಕನ ಅವಂತರದಿಂದ ಯುವಕನಿಗೆ ಗುದ್ದಿದ ಪರಿಣಾಮ ಆತ ಕೆಳಗೆ ಬಿದ್ದ ಘಟನೆ ನಗರದ ಸೆಂಟ್ರಲ್ ಮಾರ್ಕೆಟ್‍ನಲ್ಲಿ ನಡೆದಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸೆಂಟ್ರಲ್ ಮಾರ್ಕೆಟ್‍ನಲ್ಲಿ ಸೋಮವಾರ ಬೆಳಗ್ಗೆ ಸುಮಾರು 7.52ಕ್ಕೆ ತರಕಾರಿಗಳನ್ನು ವಿಂಗಡನೆ ಮಾಡುತ್ತಿದ್ದ ಕಾರ್ಮಿಕ ಯುವಕನ ಮೇಲೆ ಅಲ್ಲೇ ನಿಲ್ಲಿಸಿದ್ದ ಪಿಕ್‍ಅಪ್ ಟ್ರಕ್ ಹರಿದಿದೆ. ನಿಂತಿದ್ದ ಪಿಕ್‍ಅಪ್ ಟ್ರಕ್ ಚಲಾಯಿಸಲು ಆರಂಭಿಸಿದ ವೇಳೆ ಚಾಲಕ ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದು ಯುವಕನಿದ್ದ ಕಡೆಗೆ ಬಂದಿದೆ. ಇದನ್ನ ನೋಡಿದ ಯುವಕ ಪಕ್ಕಕ್ಕೆ ಸರಿಯಬೇಕು ಎನ್ನುವಷ್ಟರಲ್ಲಿ ವಾಹನ ಆತನನ್ನೇ ಎಳೆದುಕೊಂಡು ಮುಂದೆ ಹೋಗಿದೆ. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಬಳಿಕ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಈ ಘಟನೆಯಲ್ಲಿ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯಾದಿಂದ ಪಾರಾಗಿದ್ದಾನೆ.

    https://www.youtube.com/watch?v=kSUHsKocWfc

     

     

  • ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆಗೆ 5 ಬೈಕ್‍ಗಳು ಜಖಂ- ಮೂವರಿಗೆ ಗಾಯ

    ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆಗೆ 5 ಬೈಕ್‍ಗಳು ಜಖಂ- ಮೂವರಿಗೆ ಗಾಯ

    – ಕೆಆರ್ ರೋಡ್‍ನಲ್ಲಿ ಲಾರಿ ಪಲ್ಟಿ

    ಬೆಂಗಳೂರು: ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಐದು ಬೈಕ್‍ಗಳು ಜಖಂ ಆಗಿದ್ದು, ಮೂವರಿಗೆ ಗಾಯವಾಗಿರುವ ಘಟನೆ ಬೆಂಗಳೂರಿನ ಕೆಆರ್ ಮಾರ್ಕೆಟ್ ಬಳಿ ನಡೆದಿದೆ.

    ಮಾರ್ಕೆಟ್ ಬಳಿಯ ಮಿನರ್ವ ಸರ್ಕಲ್ ಬಳಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಕಾರು ಡಿಕ್ಕಿ ಹೊಡೆದು ಅವಘಡ ಸಂಭವಿಸುತ್ತಿದ್ದಂತೆಯೇ ಚಾಲಕ ಕಾರು ಸಮೇತ ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳೀಯರು ಆತನನ್ನು ಬೆನ್ನಟ್ಟಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

    `ಅತೀ ವೇಗದಿಂದ ಬಂದ ಕಾರು ಮಗುವಗೆ ಡಿಕ್ಕಿ ಹೊಡೆದಿದೆ. ಮಾತ್ರವ್ಲಲದೇ ಪಕ್ಕದಲ್ಲೆ ನಿಂತಿದ್ದ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯೊಬ್ಬರ ಕಾಲಿಗೆ ಗಂಭೀರ ಗಾಯಗಳಾಗಿದೆ. ಇಷ್ಟು ಮಾತ್ರವಲ್ಲದೇ ಜಯನಗರದಲ್ಲೂ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲಿಯೂ ಆತನನ್ನು ಹಿಡಿದಿಲ್ಲ. ಸದ್ಯ 4ನೇ ಬ್ಲಾಕ್‍ನಲ್ಲಿ ಸಿಕ್ಕಿಬಿದ್ದಿದ್ದಾನಂತೆ ಏನಾಗತ್ತೋ ನೋಡ್ಬೇಕಷ್ಟೇ’ ಅಂತಾ ಪ್ರತ್ಯಕ್ಷದರ್ಶಿಯೊಬ್ಬರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಲಾರಿ ಪಲ್ಟಿ: ಇದೇ ವೇಳೆ ಕೆಆರ್ ರೋಡ್‍ನಲ್ಲಿ ಲಾರಿಯೊಂದು ಪಲ್ಟಿಯಾಗಿದ್ದು ಡ್ರೈವರ್ ಮತ್ತು ಕ್ಲೀನರ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಎರಡೂ ಪ್ರಕರಣಗಳ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಆರ್ ಮಾರ್ಕೆಟ್ ಟ್ರಾಫಿಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.