Tag: ಮಾರಿ 2

  • ತಮಿಳು ನಿರ್ದೇಶಕನ ಜೊತೆ ಸದ್ದಿಲ್ಲದೇ ಮದುವೆಯಾದ ಕನ್ನಡದ ನಟಿ ಧನ್ಯಾ ಬಾಲಕೃಷ್ಣ

    ತಮಿಳು ನಿರ್ದೇಶಕನ ಜೊತೆ ಸದ್ದಿಲ್ಲದೇ ಮದುವೆಯಾದ ಕನ್ನಡದ ನಟಿ ಧನ್ಯಾ ಬಾಲಕೃಷ್ಣ

    ನ್ನಡದ `ನೋಡಿ ಸ್ವಾಮಿ ನಾವಿರೋದೆ ಹೀಗೆ’, `ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಧನ್ಯಾ ಬಾಲಕೃಷ್ಣ (Dhanya Balakrishna) ಸದ್ದಿಲ್ಲದೇ ತಮಿಳು ನಿರ್ದೇಶಕ ಬಾಲಾಜಿ ಮೋಹನ್ (Balaji Mohan) ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಕುರಿತು ಇದೀಗ ಮಾಹಿತಿ ಹೊರಬಿದ್ದಿದೆ.

    ನಟಿ ಧನ್ಯಾ ಮೂಲತಃ ಬೆಂಗಳೂರಿನವರಾಗಿದ್ದು, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಈ ವರ್ಷದ ಆರಂಭದಲ್ಲೇ ತಮಿಳಿನ ʻಮಾರಿʼ, ʻಮಾರಿ 2ʼ ಖ್ಯಾತಿಯ ನಿರ್ದೇಶಕ ಬಾಲಾಜಿ ಜೊತೆ ಧನ್ಯಾ ಮದುವೆ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಬಾಲಾಜಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್

    ಇನ್ನೂ 2023ರಲ್ಲಿ ಅರುಣಾ (Aruna) ಎಂಬುವವರ ಜೊತೆ ಬಾಲಾಜಿ ಮದುವೆ ಆಗಿತ್ತು. ಆದರೆ ಮದುವೆ ಆಗಿ ಒಂದೇ ವರ್ಷಕ್ಕೆ ಈ ಸಂಬಂಧ ಮುರಿದು ಬಿತ್ತು. ಇಬ್ಬರು ಡಿವೋರ್ಸ್ ಪಡೆದರು. ಜನವರಿ 23ರಂದು ಈ ವರ್ಷ ಧನ್ಯಾ ಜೊತೆ ಬಾಲಾಜಿ ಎರಡನೇ ಮದುವೆ ಆಗಿದ್ದಾರೆ. ಇಲ್ಲಿಯವರೆಗೆ ರಿವೀಲ್ ಆಗದ ಈ ಮದುವೆ ಸುದ್ದಿ ಚರ್ಚೆಗೆ ಬಂದಿರುವುದಕ್ಕೆ ಕಾರಣ ನಟಿ ಕಲ್ಪಿಕಾ ಗಣೇಶ್.

    ಇತ್ತೀಚೆಗೆ ನಟಿ ಕಲ್ಪಿಕಾ (Kalpika Ganesh) ತಮ್ಮ ಯೂಟ್ಯೂಬ್‌ನಲ್ಲಿ ಧನ್ಯಾ ಮತ್ತು ಬಾಲಾಜಿ ಮದುವೆ ಆಗಿರುವ ಬಗ್ಗೆ ಮಾತನಾಡಿದ್ದರು. ಬಳಿಕ ಈ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಯಿತು. ಇದನ್ನ ಗಂಭೀರವಾಗಿ ಪರಿಗಣಿಸಿ, ಬಾಲಾಜಿ ಮೋಹನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿ ಕಲ್ಪಿಕಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

    ಈ ಬಗ್ಗೆ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ನ್ಯಾಯಾಧೀಶ ಸೆಂಥಿಲ್ ಕುಮಾರ್ ರಾಮಮೂರ್ತಿ, ನಿರ್ದೇಶಕ ಬಾಲಾಜಿ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡುವುದನ್ನು ಕಲ್ಪಿಕಾ ನಿಲ್ಲಿಸಬೇಕು ಎಂದು ಆದೇಶ ನೀಡಿದ್ದಾರೆ. ಈ ಜೊತೆಗೆ ಈ ಪ್ರಕರಣದ ತೀರ್ಪನ್ನು 2023ರ ಜನವರಿ 23ಕ್ಕೆ ನೀಡುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಾಖಲೆ ಬರೆದ ರೌಡಿ ಬೇಬಿ ಹಾಡು- ಸಾಯಿ ಪಲ್ಲವಿ ಅಭಿಮಾನಿಗಳು ಗರಂ

    ದಾಖಲೆ ಬರೆದ ರೌಡಿ ಬೇಬಿ ಹಾಡು- ಸಾಯಿ ಪಲ್ಲವಿ ಅಭಿಮಾನಿಗಳು ಗರಂ

    ಚೆನ್ನೈ: ಧನಷ್ ಹಾಗೂ ಸಾಯಿ ಪಲ್ಲವಿ ಅಭಿನಯದ ಮಾರಿ 2 ಸಿನಿಮಾ ಅಷ್ಟೇನು ಯಶಸ್ಸು ಕಾಣದಿದ್ದರೂ ರೌಡಿ ಬೇಬಿ ಹಾಡು ಮಾತ್ರ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ಹೀಗಾಗಿ 100 ಕೋಟಿ ವ್ಯೂ ಪಡೆದಿದ್ದು, ಚಿತ್ರತಂಡ ಸಂಭ್ರಮಿಸುತ್ತಿದೆ. ಆದರೆ ಸಾಯಿ ಪಲ್ಲವಿ ಅಭಿಮಾನಿಗಳು ಮಾತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಾಲಾಜಿ ಮೋಹನ್ ನಿರ್ದೇಶನದ ಮಾರಿ 2 ಸಿನಿಮಾದ ರೌಡಿ ಬೇಬಿ ಹಾಡನ್ನು ಯುವನ್ ಶಂಕರ್ ರಾಜಾ ಕಂಪೋಸ್ ಮಾಡಿದ್ದು, ಸಖತ್ ಹಿಟ್ ಆಗಿದೆ. ಇದೀಗ ಯೂಟ್ಯೂಬ್‍ನಲ್ಲಿ 1 ಬಿಲಿಯನ್ ವ್ಯೂವ್ಸ್ ಸಹ ಪಡೆದಿದೆ. ಚಿತ್ರತಂಡ ಇದರ ಸಂಭ್ರಮಾಚರಣೆ ಮಾಡಿದೆ. ಅಲ್ಲದೆ ಧನುಶ್ ಅವರ ವಂಡರ್‍ಬಾರ್ ಫಿಲಂಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಸಂತಸ ವ್ಯಕ್ತಪಡಿಸಿದೆ.

    ಕಾಮನ್ ಡಿಪಿ(ಸಿಡಿಪಿ) ಮೂಲಕ ರೌಡಿಬೇಬಿಹಿಟ್ಸ್1ಬಿಲಿಯನ್‍ವ್ಯೂವ್ಸ್ ಹ್ಯಾಷ್ ಟ್ಯಾಗ್‍ನೊಂದಿಗೆ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಕೇವಲ ಧನುಷ್ ಫೋಟೋ ಮಾತ್ರವಿದ್ದು, ಸಾಯಿಪಲ್ಲವಿ ಅವರನ್ನು ಸೈಡ್‍ಲೈನ್ ಮಾಡಲಾಗಿದೆ. ಹೀಗಾಗಿ ಅವರ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧನುಷ್ ಉತ್ತಮ ಡ್ಯಾನ್ಸರ್ ಆಗಿರಬಹುದು ಆದರೆ ಸಾಯಿ ಪಲ್ಲವಿ ಹಾಗೂ ಯುವನ್ ಅವರ ಸಂಗೀತದಿಂದ ಹಾಡು ಹಿಟ್ ಆಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

    ಇನ್ನೂ ಕೆಲ ಅಭಿಮಾನಿಗಳು ಸಾಯಿ ಪಲ್ಲವಿ ಮಾತ್ರ ಇರುವ ಸಿಡಿಪಿಯನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

    ರೌಡಿ ಬೇಬಿ ಹಾಡಿನಲ್ಲಿ ಧನುಷ್ ಜೊತೆಗೆ ಸಾಯಿಪಲ್ಲವಿ ಸಹ ಅಷ್ಟೇ ಪವರ್‍ಫುಲ್ ಸ್ಟೆಪ್ ಹಾಕಿದ್ದು, ಭರ್ಜರಿ ಡ್ಯಾನ್ಸ್ ಮಾಡಿದ್ದರು. ಇಬ್ಬರ ಕಾಂಬಿನೇಶನ್ ಹಾಗೂ ಯುವನ್ ಶಂಕರ್ ಅವರ ಕಂಪೋಸ್, ಪ್ರಭುದೇವ್ ಹಾಗೂ ಜಾನಿ ಕೋರಿಯೋಗ್ರಫಿಯಲ್ಲಿ ಸಾಂಗ್ ಮೂಡಿಬಂದಿತ್ತು. ಈಗ ಸಂಭ್ರಮದ ವೇಳೆ ಇವರ್ಯಾರ ಚಿತ್ರ ಹಾಕದೇ, ಕೇವಲ ಧನುಷ್ ಫೊಟೋ ಹಾಕಿದ್ದಕ್ಕೆ ಸಾಯಿ ಪಲ್ಲವಿ ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ.

    2015ರಲ್ಲಿ ಬಿಡುಗಡೆಯಾದ ಮಾರಿ ಸಿನಿಮಾ ಸಖತ್ ಹಿಟ್ ಆಗಿತ್ತು. ಹೀಗಾಗಿ ಈ ಸಿನಿಮಾದ ಸೀಕ್ವೆಲ್ ಎಂಬಂತೆ ಮಾರಿ 2 ಸಿನಿಮಾ ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರವನ್ನು ಸ್ವತಃ ಧನುಷ್ ಅವರು ತಮ್ಮ ಸ್ವಂತ ಬ್ಯಾನರ್‍ನಲ್ಲಿ ವಂಡರ್‍ಬಾರ್ ಫಿಲಂಸ್ ಅಡಿ ನಿರ್ಮಿಸಿದ್ದರು. ಆದರೆ ಚಿತ್ರ ಅಷ್ಟೇನು ಯಶಸ್ಸು ಕಾಣಲಿಲ್ಲ. ಆದರೆ ರೌಡಿ ಬೇಬಿ ಹಾಡು ಮಾತ್ರ ಭರ್ಜರಿ ಸದ್ದು ಮಾಡಿತ್ತು.

  • ಮಾರಿ-2 ಚಿತ್ರ ಶೂಟಿಂಗ್ ವೇಳೆ ಧನುಷ್‍ಗೆ ಗಾಯ – ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

    ಮಾರಿ-2 ಚಿತ್ರ ಶೂಟಿಂಗ್ ವೇಳೆ ಧನುಷ್‍ಗೆ ಗಾಯ – ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

    ಚೆನ್ನೈ: ಮಾರಿ-1 ಚಿತ್ರ ಬಿಡುಗಡೆಗೊಂಡು ಯಶಸ್ವಿಗೊಂಡಿದ್ದು, ಮಾರಿ-2 ತಯಾರಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ವೇಳೆಯಲ್ಲಿ ಧನುಷ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರದ ಚಿತ್ರೀಕರಣಲ್ಲಿ ಧನುಷ್ ಹಾಗೂ ಖಳನಟನಾಗಿ ನಟಿಸುತ್ತಿರುವ ಟೊವಿನೊ ಥಾಮಸ್ ಫೈಟಿಂಗ್ ಸೀನ್ ವೊಂದರಲ್ಲಿ ನಟಿಸುತ್ತಿರುವಾಗ ಈ ಅವಘಡ ಸಂಭವಿಸಿದೆ.

    ಈ ಫೈಟಿಂಗ್ ಸೀನ್ ಚಿತ್ರೀಕರಣದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಧನುಷ್‍ಗೆ ಎಡಮೊಣಕಾಲಿಗೆ ಗಾಯವಾಗಿದೆ. ಇದರಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಚಿಕಿತ್ಸೆಯ ನಂತರ ಧನುಷ್ ಚೇತರಿಸಿಕೊಂಡಿದ್ದಾರೆಂದು ಚಿತ್ರತಂಡ ಹೇಳಿಕೆ ನೀಡಿದೆ. ಧನುಷ್ ಗಾಯಗೊಂಡ ವಿಷಯ ತಿಳಿದು ರಜನಿಕಾಂತ್ ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿ ಧನುಷ್‍ಗೆ ಧೈರ್ಯ ತುಂಬಿದ್ದಾರೆ.

    ಈ ಸಮಯದಲ್ಲಿ ರಜನಿಕಾತ್ ಶೂಟಿಂಗ್‍ಗಾಗಿ ಡೆಹ್ರಾಡೂನ್‍ನಲ್ಲಿ ಇದ್ದುದರಿಂದ ಅವರಿಗೆ ಆಸ್ಪತ್ರೆಗೆ ಬರಲು ಸಾಧ್ಯವಾಗಿಲ್ಲ. ಮೊಬೈಲ್ ಮೂಲಕ ಅವರು ಆರೋಗ್ಯದ ಬಗ್ಗೆ ಮಾತನಾಡಿದ್ದಾರಂತೆ.

    ‘ನನ್ನ ನಂಬಿಕೆಯ ಅಭಿಮಾನಿಗಳೇ, ನನಗೆ ಹೆಚ್ಚಿನ ಗಾಯಗಳೇನೂ ಆಗಿಲ್ಲ. ನಾನು ಕ್ಷೇಮವಾಗಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆಗೆ ನಾನು ಆಭಾರಿಯಾಗಿದ್ದೇನೆ. ನಿಮ್ಮನ್ನು ಮತ್ತಷ್ಟು ಪ್ರೀತಿಸುತ್ತೇನೆ’ ಎಂದು ಟ್ವಿಟ್ಟರ್ ಮೂಲಕ ಧನುಷ್ ಹೇಳಿಕೆ ನೀಡಿದ್ದಾರೆ.

    2015ರಲ್ಲಿ ತೆರೆಕಂಡ ಚಿತ್ರ ಮಾರಿ-1. ಬಾಲಾಜಿ ಮೋಹನ್ ಈ ಚಿತ್ರಕಥೆ ಹಾಗೂ ನಿರ್ದೇಶನವನ್ನು ಮಾಡಿದ್ದರು. ಧನುಷ್, ಕಾಜಲ್ ಅಗರ್‍ವಾಲ್, ವಿಜಯ್ ಏಸುದಾಸ್, ರೊಬೊ ಶಂಕರ್ ಮತ್ತಿತರ ಈ ಚಿತ್ರದ ತಾರಾಗಣದಲ್ಲಿದ್ದರು. ಮಾರಿ ಚಿತ್ರದ 2ನೇ ಭಾಗವಾಗಿ ಮಾರಿ-2 ಚಿತ್ರ ತಯಾರಾಗುತ್ತಿದೆ. ಮೊದಲನೇ ಭಾಗದ ನಿರ್ದೇಶಕ ಬಾಲಾಜಿ ಮೋಹನ್‍ರವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ.

    ಪ್ರೇಮಂ ಚಿತ್ರದ ನಾಯಕಿ ಸಾಯಿಪಲ್ಲವಿ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಾಯಿ ಪಲ್ಲವಿ ಆಟೋರೈಡ್ ಮಾಡಲು ತರಬೇತಿ ಪಡೆದಿದ್ದಾರೆ. ಈ ಚಿತ್ರದಲ್ಲಿ ನಾಯಕಿಗೆ ಎಲ್ಲರನ್ನೂ ಕಿಂಡಲ್ ಮಾಡಿ ಜಾಲಿಯಾಗಿರುವಂತಹ ಕಥಾಪಾತ್ರವಿದೆ. ಚಿತ್ರದಲ್ಲಿ ಶರತ್ ಕುಮಾರ್ ಹಾಗೂ ಅವರ ಮಗಳು ವರಲಕ್ಷ್ಮಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಧನುಷ್ ಸ್ವಂತದ್ದೇ ಆದ ವಂಡರ್‍ಬಾರ್ ಫಿಲ್ಮ್ ತಯಾರಿಸುತ್ತಿರುವ ಈ ಚಿತ್ರದಲ್ಲಿ ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ.