Tag: ಮಾರಿಗುಡ್ಡದ ಗಡ್ಡಧಾರಿಗಳು

  • ‘ಮಾರಿಗುಡ್ಡದ ಗಡ್ಡಧಾರಿಗಳಿ’ಗಾಗಿ ಹಾಡಿದ ಬಿ.ಜಯಶ್ರೀ

    ‘ಮಾರಿಗುಡ್ಡದ ಗಡ್ಡಧಾರಿಗಳಿ’ಗಾಗಿ ಹಾಡಿದ ಬಿ.ಜಯಶ್ರೀ

    ರಾಜೀವ್‌ ಚಂದ್ರಕಾಂತ್ ಈ ಹಿಂದೆ ನಾಗಾಭರಣ ಅವರಲ್ಲಿ ಕೆಲಸ ಕಲಿತುಕೊಂಡು, ನಂತರ 75ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್ ಡಿಸೈನ್ ಮಾಡಿದ ಅನುಭವ ಇದೆ. ಇದರಿಂದಲೇ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಲ್ಲರೂ ನಾಯಕನಿಗೆ ಕಥೆ ಬರೆದರೆ, ಇವರು ಖಳನಾಯಕನ ಮೇಲೆ ಕಥೆಯನ್ನು ಬರೆದಿರುವುದು ವಿಶೇಷ. ’ಸಲಗ’ದಲ್ಲಿ ಸೂರಿಯಣ್ಣ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದ ದಿನೇಶ್‌ಕುಮಾರ್.ಡಿ ಖತರ್‌ನಾಕ್ ಖಳನಾಯಕನಾಗಿ ಹುಲಿಯಾ ಹೆಸರಿನಲ್ಲಿ ಕಾಣಿಸಿಕೊಳ್ಳುವ ಜತೆಗೆ ಡಿಜೆ ಪ್ರಕಾಶ್ ಸಿನಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

    ಒಂದು ವಿಶೇಷ ಸನ್ನಿವೇಶದಲ್ಲಿ ಬರುವ ’ಸಂಜೇಲಿ ಹೊಯ್ದಾವೋ ಮಂಜಿನ ಚಿತ್ತಾರ, ಗಾಟಿಯ ಏರಿಳಿದು ಹೋಯ್ತಾವೋ ನೇಸಾರ’ ಸಾಲಿನ ಗೀತೆಗೆ ನಟಿ, ಪದ್ಮಶ್ರೀ ಬಿ.ಜಯಶ್ರೀ ಹಾಡುವ ಗೀತೆಯನ್ನು ನಾದಬ್ರಹ್ಮ ಹಂಸಲೇಖಾ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಕಾರ್ಯ ನಡೆಸಲಾಯಿತು.  ಸಂಗೀತ ಕೆ.ಎಂ.ಇಂದ್ರ ಅವರದಾಗಿದೆ. ರಾಮಾಪುರ ಎಂಬ ಊರು, ಮಜ್ಜೇನಹಳ್ಳಿ ಎನ್ನುವ ಪಟ್ಟಣದಲ್ಲಿ 1990ರಂದು ನಡೆಯುವ ಕಾಲ್ಪನಿಕ ಘಟನೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಎಂಟು ಗಡ್ಡಧಾರಿಗಳ ಸುತ್ತ ಸಾಗುವ ಪಯಣದಲ್ಲಿ ಏರುಪೇರು ಉಂಟಾಗುತ್ತದೆ. ಅದು ಏನೆಂಬುದನ್ನು ಕುತೂಹಲದ ಮೂಲಕ ತೋರಿಸಲಾಗುವುದು. ಇದನ್ನೂ ಓದಿ:ಕಿಚ್ಚ ಸುದೀಪ್- ರಕ್ಷಿತ್ ಶೆಟ್ಟಿ ನಡುವೆ ಏನಿದು ಕೋಲ್ಡ್ ವಾರ್!

    ತಾರಗಣದಲ್ಲಿ ಪ್ರವೀಣ್, ನಮ್ರತಾ, ಗಣೇಶ್‌ರಾವ್, ಅವಿನಾಶ್, ರಮೇಶ್‌ಭಟ್, ಬೆನಕನಂಜಪ್ಪ, ಪ್ರಶಾಂತ್‌ಸಿದ್ದಿ,ನಂಜುಂಡ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ವೀರೇಶ್, ಸಾಹಸ ಪಳನಿ-ಜಾಗ್ವಾರ್‌ಸಣ್ಣಪ್ಪ ಅವರದಾಗಿದೆ. ಕೆ.ಜಿ.ಎಫ್, ಕೋಲಾರ ಕಡೆಗಳಲ್ಲಿ 45 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚನ ಬರ್ತ್‍ಡೇಗೆ ವಿಶ್ ಮಾಡಿದ ‘ಮಾರಿಗುಡ್ಡದ ಗಡ್ಡಧಾರಿಗಳು’

    ಕಿಚ್ಚನ ಬರ್ತ್‍ಡೇಗೆ ವಿಶ್ ಮಾಡಿದ ‘ಮಾರಿಗುಡ್ಡದ ಗಡ್ಡಧಾರಿಗಳು’

    ಇಂದು ಕಿಚ್ಚ ಸುದೀಪ್ ಅವರು ಹುಟ್ಟಿದ ದಿನ. ಅಭಿಮಾನಿಗಳ ಕಡೆಯಿಂದ, ನಾನಾ ದಿಕ್ಕುಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅದೇ ಖುಷಿಯಲ್ಲಿ ಅವರು ನಟಿಸಿರೋ ಫ್ಯಾಂಟಮ್ ಚಿತ್ರವೂ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಕಿಚ್ಚನಿಗೆ ‘ಮಾರಿಗುಡ್ಡದ ಗಡ್ಡಧಾರಿಗಳು’ ಡಿಫರೆಂಟಾಗೊಂದು ವಿಶ್ ಮಾಡಿದ್ದಾರೆ!

    ಅಂದಹಾಗೆ ಮಾರಿಗುಡ್ಡದ ಗಡ್ಡಧಾರಿಗಳು ಅನ್ನೋದು ಸಿನಿಮಾವೊಂದರ ಟೈಟಲ್ಲು. ಕೇಳಿದಾಕ್ಷಣವೇ ನಿಗೂಢ ಕಂಟೆಂಟಿನ ಸುಳಿವು ಕೊಡುವಂತಿರೋ ಈ ಸಿನಿಮಾ ಪೋಸ್ಟರ್ ಡಿಸೈನರ್ ಆಗಿ ಹೆಸರು ಮಾಡಿರುವ ರಾಜೀವ್ ಚಂದ್ರಕಾಂತ್ ನಾಯ್ಕರ್ ಅವರ ಮೊದಲ ಕನಸು. ವಿಶೇಷ ಅಂದ್ರೆ ಕಿಚ್ಚನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಲೇ ಅವರು ಟೈಟಲ್ ಅನಾವರಣಗೊಳಿಸಿದ್ದಾರೆ. ಇದನ್ನೂ ಓದಿ: ಕಾಮಿಡಿ ಕಚಗುಳಿಯಲ್ಲಿ ಕೋಟಿಗೊಬ್ಬನ ಟೀಸರ್ ಔಟ್

    ರಾಜೀವ್ ಚಂದ್ರಕಾಂತ್ ನಾಯ್ಕರ್ ಕ್ರಿಯೇಟಿವ್ ಪೋಸ್ಟರ್ ಡಿಸೈನರ್ ಆಗಿ ಚಿರಪರಿಚಿತರು. ಈ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ಪ್ರಧಾನ ಆಸಕ್ತಿಯಾಗಿರೋದು ಸಿನಿಮಾ ನಿರ್ದೇಶನ. ಹಲವಾರು ಪ್ರಸಿದ್ಧ ಧಾರಾವಾಹಿಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ರಾಜೀವ್ ಅನಿವಾರ್ಯತೆಗೆ ಬಿದ್ದು ಪೋಸ್ಟರ್ ಡಿಸೈನರ್ ಆಗಿದ್ದರು.

    ಈ ಕ್ಷೇತ್ರದಲ್ಲಿಯೇ ಹೆಸರು ಮಾಡಿ ಸಾಕಷ್ಟು ಅವಕಾಶಗಳಿದ್ದಾಗಲೂ ಸಿನಿಮಾ ನಿರ್ದೇಶನ ಮಾಡಬೇಕೆಂಬ ಕನಸು ಮಾತ್ರ ಧುಮುಗುಡುತ್ತಲೇ ಇತ್ತು. ಅದಕ್ಕಾಗಿ ಅವರು ಕೊರೊನಾ ಕಾಲವನ್ನು ಸರಿಕಟ್ಟಾಗಿಯೇ ಬಳಸಿಕೊಂಡಿದ್ದಾರೆ. ಈ ಕಾಲಾವಧಿಯಲ್ಲಿ ಪಟ್ಟಾಗಿ ಕೂತು ಚೆಂದದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನ ಸಿದ್ಧಪಡಿಸಿಕೊಂಡಿದ್ದಾರೆ. ಇದೀಗ ಅದಕ್ಕೆ ಮಾರಿ ಗುಡ್ಡದ ಗಡ್ಡಧಾರಿಗಳು ಎಂಬ ಆಕರ್ಷಕ ಶೀರ್ಷಿಕೆಯೂ ನಿಕ್ಕಿಯಾಗಿದೆ.

    ಈ ಹಿಂದೆ ಅಯ್ಯೋ ರಾಮ ಅಂತೊಂದು ಚಿತ್ರ ನಿರ್ಮಾಣ ಮಾಡಿದ್ದ ತ್ರಿವಿಕ್ರಮ ರಘು ಈ ಸಿನಿಮಾಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರೆ. ಅವರಿಗೆ ಅಶೋಕ್ ಇಳಂತಿಲ ಮತ್ತು ಪ್ರಸನ್ನ ಪಾಟೀಲ್ ಸಾಥ್ ಕೊಟ್ಟಿದ್ದಾರೆ. ಇನ್ನುಳಿದಂತೆ ಮುಖ್ಯ ಪಾತ್ರಕ್ಕೆ ಹೊಸ ಹುಡುಗ ದಿಲೀಪ್ ಕುಮಾರ್ ಆಯ್ಕೆಯಾಗಿದ್ದಾರೆ. ಇನ್ನುಳಿದ ತಾರಾಗಣ, ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ಚಾಲ್ತಿಯಲ್ಲಿದೆ.

    ಕಾದಂಬರಿ, ಕನ್ನಡಿ, ಗಾಳಿಪಟ ಮುಂತಾದ ಸೀರಿಯಲ್‍ಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ರಾಜೀವ್, ನಾಗಾಭರಣ ಅವರ ಗರಡಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಆ ಅನುಭವಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಚೆಂದದ ಕಥೆಯನ್ನ ರೆಡಿ ಮಾಡಿಕೊಂಡಿದ್ದಾರಂತೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕೂಡಾ ಮುಗಿಸಿದೆ. ಇದೇ ಡಿಸೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾರಿಗುಡ್ಡದ ಗಡ್ಡಧಾರಿಗಳ ಬಗ್ಗೆ ಇನ್ನಷ್ಟು ರೋಚಕ ಸಂಗತಿಗಳು ಹೊರಬೀಳಲಿವೆ.