Tag: ಮಾನ್ವಿತಾ

  • ರೈತ ಸಂಘ ಕಡೆಯಿಂದ ದರ್ಶನ್‌ಗೆ ‘ಭೂಮಿ ಪುತ್ರ’ ಬಿರುದು

    ರೈತ ಸಂಘ ಕಡೆಯಿಂದ ದರ್ಶನ್‌ಗೆ ‘ಭೂಮಿ ಪುತ್ರ’ ಬಿರುದು

    ರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಸಕ್ಸಸ್ ಕಂಡಿದೆ. ಇದೇ ಖುಷಿಯಲ್ಲಿ ಪಾಂಡವಪುರದಲ್ಲಿ ‘ಕಾಟೇರ’ ಚಿತ್ರದ ಸಕ್ಸಸ್ ಕಾರ್ಯಕ್ರಮ ನಡೆದಿದೆ. ರೈತರ ಕುರಿತು ‘ಕಾಟೇರ’ ಚಿತ್ರದ ಮೂಲಕ ತಿಳಿಸಿದಕ್ಕೆ ದರ್ಶನ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ‘ಭೂಮಿ ಪುತ್ರ’ ಎಂದು ಬಿರುದು ನೀಡಿದ್ದಾರೆ. ಇದನ್ನೂ ಓದಿ:ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ, ಗಾಯಕಿ ವಿಧಿವಶ

    ದರ್ಶನ್, ಆರಾಧನಾ ರಾಮ್ ನಟನೆಯ ‘ಕಾಟೇರ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪಾಂಡವಪುರದಲ್ಲಿ ಕಾಟೇರ ಸಿನಿಮಾ ಸಕ್ಸಸ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಆಚರಿಸಿದೆ. ಈ ಚಿತ್ರದಲ್ಲಿ ರೈತರ ಬಗ್ಗೆ ಹಲವು ವಿಚಾರಗಳನ್ನು ದರ್ಶನ್ ಮಾತನಾಡಿದ್ದಾರೆ.

    ರೈತರ ಕುರಿತು ಜನರಿಗೆ ಹಲವು ವಿಷಯಗಳನ್ನು ತಲುಪಿಸಿದಕ್ಕೆ ಮತ್ತು ನಟನೆಗೆ ದರ್ಶನ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ‘ಭೂಮಿ ಪುತ್ರ’ ಎಂದು ಬಿರುದು ನೀಡಿ ಸನ್ಮಾನ ಮಾಡಲಾಗಿದೆ.

    ಈ ಸಮಾರಂಭದಲ್ಲಿ ದರ್ಶನ್ ಜೊತೆ ರೈತ ಮುಖಂಡ ಕೆ.ಎಸ್ ಪುಟ್ಟಣ್ಣಯ್ಯ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟಿ ಆರಾಧನಾ ರಾಮ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತುಂಬಿದ್ದು, `ಬಿಗ್ ಬಾಸ್’ ಖ್ಯಾತಿಯ ನಮ್ರತಾ ಗೌಡ, ಮಾನ್ವಿತಾ ಕಾಮತ್ (Manvitha Kamath), ಹರ್ಷಿಕಾ ಪೂಣಚ್ಚ ಭಾಗಿಯಾಗಿ ತಮ್ಮ ನೃತ್ಯದ ಮೂಲಕ ಮನರಂಜನೆ ನೀಡಿದ್ದರು.

  • ಸಹ್ಯಾದ್ರಿ ಉತ್ಸವದಲ್ಲಿ ಮಾನ್ವಿತಾ ಸಖತ್ ಡ್ಯಾನ್ಸ್: ವಿಡಿಯೋ ವೈರಲ್

    ಸಹ್ಯಾದ್ರಿ ಉತ್ಸವದಲ್ಲಿ ಮಾನ್ವಿತಾ ಸಖತ್ ಡ್ಯಾನ್ಸ್: ವಿಡಿಯೋ ವೈರಲ್

    ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ಸಹ್ಯಾದ್ರಿ ಉತ್ಸವದಲ್ಲಿ ಮಾನ್ವಿತಾ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಉತ್ಸವಕ್ಕೆ ಅಕ್ಟೋಬರ್ 3ರಂದು ಟಗರು ಸಿನಿಮಾ ನಾಯಕಿ ಮಾನ್ವಿತಾ ಚಾಲನೆ ನೀಡಿದ್ದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರನ್ನು ಡಾನ್ಸ್ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು. ವಿದ್ಯಾರ್ಥಿಗಳ ಮನವಿಗೆ ಒಪ್ಪಿದ ಮಾನ್ವಿತಾ, ಟಗರು ಸಿನಿಮಾದ ಟಗರು ಬಂತು ಟಗರು ಹಾಡಿಗೆ ವೇದಿಕೆ ಮೇಲೆ ಸ್ಟೆಪ್ ಹಾಕಿದ್ದಾರೆ. ಇದನ್ನೂ ಓದಿ: ಫೋಟೋಶೂಟ್ ಮಾಡಿಸಿ ಮಾನ್ವಿತಾ ಬಾಲಿವುಡ್‍ಗೆ ಎಂಟ್ರಿ!

    ಮಾನ್ವಿತಾ ನೃತ್ಯಕ್ಕೆ ಫಿದಾ ಆದ ವಿದ್ಯಾರ್ಥಿಗಳು, ನಿಮ್ಮೊಂದಿಗೆ ನಾವು ವೇದಿಕೆ ಮೇಲೆ ಹೆಜ್ಜೆ ಹಾಕಬಹುದಾ ಎಂದು ಕೇಳಿದರು. ಆಗ ಮಾನ್ವಿತಾ ನೃತ್ಯ ಮಾಡುತ್ತ ಬನ್ನಿ ಎಂದು ಕರೆದರು. ಮಾನ್ವಿತಾ ಕರೆದಿದ್ದೇ ತಡ ಕೆಲ ವಿದ್ಯಾರ್ಥಿಗಳು ವೇದಿಕೆಗೆ ಎಂಟ್ರಿ ಕೊಟ್ಟು ಸ್ಟೆಪ್ ಹಾಕಿದ್ದಾರೆ.

    ವೇದಿಕೆ ಮೇಲೆ ಹೆಚ್ಚಿನ ವಿದ್ಯಾರ್ಥಿಗಳು ಸೇರುತ್ತಿದ್ದಂತೆ ಉಪನ್ಯಾಸಕರು ಯಾವುದೇ ತೊಂದರೆ ಆಗದಂತೆ ಎಚ್ಚರವಹಿಸಿದರು. ಮಾನ್ವಿತಾ ಡ್ಯಾನ್ಸ್ ವಿಡಿಯೋ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಖತ್ ವೈರಲ್ ಆಗಿದೆ.

  • ಐವತ್ತನೇ ದಿನದಾಚೆಗೆ ಮುನ್ನುಗ್ಗಿದ ತಾರಕಾಸುರ!

    ಐವತ್ತನೇ ದಿನದಾಚೆಗೆ ಮುನ್ನುಗ್ಗಿದ ತಾರಕಾಸುರ!

    ಬೆಂಗಳೂರು: ನಮ್ಮ ನಡುವಿದ್ದೂ ನಾವ್ಯಾರೂ ಗಮನಿಸದ ರೋಚಕ ಕಥಾನಕ ಹೊಂದಿದ್ದ ಚಿತ್ರ ತಾರಕಾಸುರ. ಭರ್ಜರಿಯಾಗಿಯೇ ಓಪನಿಂಗ್ ಪಡೆದುಕೊಂಡು ಪ್ರೇಕ್ಷಕರನ್ನ ಆವರಿಸಿಕೊಂಡಿದ್ದ ಈ ಸಿನಿಮಾ ಈಗ ಐವತ್ತನೇ ದಿನ ಪೂರೈಸಿಕೊಂಡು ಯಶಸ್ಸಿನ ಓಟವನ್ನ ಮುಂದುವರೆಸಿದೆ. ಈ ಮೂಲಕ ಭರಪೂರವಾದ ಗೆಲುವೊಂದನ್ನು ತನ್ನದಾಗಿಸಿಕೊಂಡಿದೆ.

    ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಯಾರೂ ಮುಟ್ಟದ ಕಥಾವಸ್ತು `ತಾರಕಾಸುರ’ ಚಿತ್ರದ್ದು. ಈ ಹಿಂದೆ ಇದೇ ನಿರ್ದೇಶಕ ಬಂಡಿಯಪ್ಪ `ರಥಾವರ’ದಲ್ಲಿ ಮಂಗಳಮುಖಿಯರ ವಿಚಿತ್ರ ಜಗತ್ತನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದರು. ಈ ಬಾರಿ ಬುಡಬುಡಕೆ ಜನಾಂಗದವರ ವಿಚಾರವನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಇತಿಹಾಸವನ್ನು ಹೇಳುತ್ತಲೇ ವಾಸ್ತವದ ಜೊತೆಗೆ ಕಮರ್ಷಿಯಲ್ ಕತೆಯನ್ನು ಬೆರೆಸಿರುವುದು ಬಂಡಿಯಪ್ಪನವರ ಜಾಣ್ಮೆ. ಈ ಚಿತ್ರದ ಹೀರೋ ವೈಭವ್ ಹೊಸಬನಾದರೂ ಸಾಹಸ ದೃಶ್ಯಗಳಲ್ಲಿ ರೋಚಕವಾಗಿ ಅಭಿನಯಿಸಿದ್ದಾರೆ. ನಾಯಕಿ ಮಾನ್ವಿತಾ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ನರಸಿಂಹಲು ನಿರ್ದೇಶನದ ಈ ಚಿತ್ರದಲ್ಲಿ ಅವರ ಪುತ್ರ ವೈಭವ್ ನಾಯಕನಾಗಿ ಎಂಟ್ರಿ ಕೊಟ್ಟು ಗೆದ್ದಿದ್ದಾರೆ. ಡ್ಯಾನಿ ಸಫಾನಿಯಂಥಾ ರಾಕ್ಷಸ ಪ್ರತಿಭೆಯ ಮುಂದೆ ನಟಿಸಿ, ಥರ ಥರದ ಶೇಡುಗಳನ್ನು ಆವಾಹಿಸಿಕೊಂಡಿರೋ ವೈಭವ್ ಪಾಲಿಗೂ ಇದು ಮಹಾ ಗೆಲುವು. ಪ್ರತಿ ಸೀನುಗಳಲ್ಲಿಯೂ ಅಚ್ಚರಿಗಳನ್ನೇ ತೆರೆದಿಡುವ ಈ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಆದ್ದರಿಂದಲೇ ತಾರಕಾಸುರ ಐವತ್ತನೇ ದಿನದಾಚೆಗೂ ಗೆಲುವಿನ ಪಯಣ ಮುಂದುವರೆಸಿದ್ದಾನೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟಿ ಮಾನ್ವಿತಾ ಟ್ವೀಟ್ ಗೆ ಕಿಚ್ಚ ಸುದೀಪ್ ಕನ್ಫ್ಯೂಸ್

    ನಟಿ ಮಾನ್ವಿತಾ ಟ್ವೀಟ್ ಗೆ ಕಿಚ್ಚ ಸುದೀಪ್ ಕನ್ಫ್ಯೂಸ್

    ಬೆಂಗಳೂರು: ನಟಿ ಮಾನ್ವಿತಾ ಮಾಡಿದ್ದ ಟ್ವೀಟ್ ಅರ್ಥವೇನೆಂದು ತಿಳಯದೆ ಕನ್ಫ್ಯೂಸ್ ಆದ ಕಿಚ್ಚ ಸುದೀಪ್, ನೀವೇ ಅರ್ಥ ತಿಳಿಸಿ ಎಂದು ಕೇಳಿದ್ದಾರೆ.

    ನಿರ್ದೇಶಕ ಅನೂಪ್ ಭಂಡಾರಿ ಅವರು, ” ಕಿಚ್ಚ ಸುದೀಪ್ ಅವರು ‘ಬಿಲ್ಲ ರಂಗ ಬಾಷಾ’ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾವನ್ನು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮತ್ತು ಕೆಆರ್ ಕೆ ಶೋರೀಲ್ ನಿರ್ಮಾಣ ಮಾಡುತ್ತಿದೆ. ಇದಕ್ಕೆ ನಿಮ್ಮ ಆಶೀರ್ವಾದ ಮತ್ತು ಬೆಂಬಲ ಬೇಕು” ಎಂದು ಟ್ವೀಟ್ ಮಾಡಿದ್ದರು.

    ಅನೂಪ್ ಭಂಡಾರಿ ಮಾಡಿದ್ದ ಟ್ವೀಟ್ ಗೆ ನಟಿ ಮಾನ್ವಿತಾ ಅವರು, “ಸೂಪರ್-ಇನ್-ದಿ-ಮಾರ್ಕೆಟ್-ಇನ್-ದಿ-ಮೆಜೆಸ್ಟಿಕ್”ಎಂದು ರೀಟ್ವೀಟ್ ಮಾಡಿದ್ದರು. ಆದರೆ ಮಾನ್ವಿತಾ ಅವರು ಮಾಡಿದ್ದ ಟ್ವೀಟ್ ಸುದೀಪ್ ಅವರಿಗೆ ಅರ್ಥವಾಗಿಲ್ಲ. ಹೀಗಾಗಿ ಮಾನ್ವಿತಾ ಅವರಿಗೆ ಟ್ವೀಟ್ ಮಾಡಿ ಅದರ ಅರ್ಥವನ್ನು ತಿಳಿಸಿ ಎಂದು ಸುದೀಪ್ ಅವರು ಕೇಳಿದ್ದಾರೆ.

    ನಟಿ ಮಾನ್ವಿತಾ ಅವರು ಮಾಡಿದ್ದ ಟ್ವೀಟ್ ಅನ್ನು ಅವರಿಗೆ ಟ್ಯಾಗ್ ಮಾಡಿ ನಟ ಸುದೀಪ್ ಅವರು, Oxford dictionary ಬಿಟ್ಟು ಇಂಗ್ಲೀಷ್ ನಲ್ಲಿ ದಯವಿಟ್ಟು ಇದರ ಅರ್ಥವನ್ನು ವಿವರಿಸಿ” ಎಂದು ಫನ್ನಿಯಾಗಿ ರೀಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • #MeToo  ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

    #MeToo ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

    ಬೆಂಗಳೂರು: ಬಾಲಿವುಡ್‍ನಿಂದ ಹಿಡಿದು ಸ್ಯಾಂಡಲ್‍ವುಡ್ ವರೆಗೂ `ಮಿ ಟೂ’ದೇ ಸಿಕ್ಕಾ ಪಟ್ಟೆ ಸದ್ದು, ಈಗ ಇದೇ ಟಾಪಿಕ್ ಬಗ್ಗೆ ಚಂದನವನದ ಟಗರು ಪುಟ್ಟಿ ಮಾನ್ವಿತಾ ಖಡಕ್ ಆಗಿ ಮಾತನಾಡಿದ್ದಾರೆ.

    ಕೆಂಡಸಂಪಿಗೆ ಬೆಡಗಿ ಮಾನ್ವಿತಾ ಅವರು ಸಿನಿರಂಗದಲ್ಲಿ ನಡೆಯುತ್ತಿದ್ದ ‘ಮಿ ಟೂ’ ಬಗ್ಗೆ `ತಾರಕಾಸುರ’ ಸಿನಿಮಾದ ಆಡಿಯೋ ಲಾಂಚ್ ನಲ್ಲಿ ಮಾತನಾಡಿದ್ದಾರೆ. ಹುಡುಗ ನೋಡಿದ ತಕ್ಷಣ, ರೇಗಿಸಿದ ತಕ್ಷಣ ಅದನ್ನು ಲೈಂಗಿಕ ಕಿರುಕುಳ ಅಂತ ಹೇಳಬೇಡಿ. ಕೆಲವರು ಸುಮ್ಮನೆ ಪ್ರಚಾರಕ್ಕೋಸರ ಆರೋಪ ಮಾಡಬಾರದು ಎಂದು ಹುಡುಗಿಯರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ನಾನು ಹೃದಯ ಪೂರ್ವಕವಾಗಿ ಹೇಳುತ್ತೇನೆ. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದ ಗಂಡು ಮಕ್ಕಳಿಗೆ ಶಿಕ್ಷೆ ಆಗಬೇಕು. ಆದರೆ ಗಂಡಸರ ಬಗ್ಗೆ ಯಾರೂ ಸುಮ್ಮಸುಮ್ಮನೆ ಆರೋಪ ಮಾಡಬಾರದು ಎಂದು ಮಾನ್ವಿತಾ ಅವರು ಹೇಳಿದ್ದಾರೆ.

    ಸದ್ಯಕ್ಕೆ ಮಾನ್ವಿತಾ ನಟಿಯಾಗಿ ‘ತಾರಕಾಸುರ’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಸಂಗೀತ ನಿರ್ದೇಶಕ ಧರ್ಮ ವಿಶ್ ಮತ್ತು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಕಾಂಬಿನೇಷನ್‍ನ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ರಥಾವರ ಸಿನಿಮಾದಲ್ಲಿ `ಹುಡುಗಿ ಕಣ್ಣು ಲೋಡೆಡ್ ಗನ್ನು’ ಹಾಡಿನ ಈ ಜೋಡಿ ಮತ್ತೆ ಮೋಡಿ ಮಾಡುವುದಕ್ಕೆ ನಾಲ್ಕು ಹಾಡುಗಳನ್ನ ರೆಡಿ ಮಾಡಿಕೊಂಡಿದೆ.

    ವಿ. ನಾಗೇಂದ್ರ ಪ್ರಸಾದ್, ಬಹುದ್ಧೂರ್ ಚೇತನ್, ನಾಗತಿಹಳ್ಳಿ ಚಂದ್ರ ಶೇಖರ್, ಕವಿರಾಜ್ ತಾರಕಾಸುರನಿಗೆ ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ಶಿವಣ್ಣ ಹಾಡಿರುವ ಕನ್ನಡ ಕಲಿಯೋ ಸಾಂಗ್ ಯುಟ್ಯೂಬ್‍ನಲ್ಲಿ ಒಳ್ಳೆ ಸೌಂಡ್ ಮಾಡುತ್ತಿದೆ. ಈಗ ಸಾಧು ಕೋಕಿಲಾ ಕಂಠಸಿರಿಯಲ್ಲಿ ಮೂಡಿ ಬಂದಿರುವ ಮತ್ತೊಂದು ಹಾಡು ಸದ್ದು ಮಾಡುವ ಕ್ಲೂ ಕೊಟ್ಟಿದೆ. ಇನ್ನು ನವೀನ್ ಸಜ್ಜು ಮತ್ತು ಕೈಲಾಶ್ ಖೇರ್ ಕೂಡ ಅಷ್ಟೇ ಖಡಕ್ ಆಗಿ ಹಾಡಿದ್ದಾರೆ.

    ಅಳಿವಿನ ಅಂಚಿನಲ್ಲಿರುವ ಒಂದು ಜನಪದ ಕಲೆಗೆ ಸಿನಿಮಾ ಟಚ್ ಕೊಟ್ಟು ಥೇಟರ್ ಗೆ ಎಂಟ್ರಿ ಕೊಡುವುದಕ್ಕೆ ‘ತಾರಕಾಸುರ’ ಸಿನಿಮಾ ರೆಡಿಯಾಗಿದೆ. ಹಾಲಿವುಡ್‍ನ ಡ್ಯಾನಿ ಕೂಡ ಈ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿರುವುದು ಮತ್ತೊಂದು ಸ್ಪೆಷಲ್ ಆಗಿದೆ. ಸದ್ಯದಲ್ಲೇ ಟ್ರೇಲರ್ ಕೂಡ ರಿಲೀಸ್ ಮಾಡುವ ಪ್ಲಾನ್‍ ನಲ್ಲಿ ಚಿತ್ರತಂಡ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟಗರು ಸಿನಿಮಾ ವೀಕ್ಷಿಸಿ ಮಾನ್ವಿತಾರನ್ನು ಬುಕ್ ಮಾಡಿದ ರಾಮ್ ಗೋಪಾಲ್‍ವರ್ಮ!

    ಟಗರು ಸಿನಿಮಾ ವೀಕ್ಷಿಸಿ ಮಾನ್ವಿತಾರನ್ನು ಬುಕ್ ಮಾಡಿದ ರಾಮ್ ಗೋಪಾಲ್‍ವರ್ಮ!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಟಗರು ಚಿತ್ರವನ್ನು ಖ್ಯಾತ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ವೀಕ್ಷಿಸಿದ್ದಾರೆ.

    ಖಾಸಗಿ ಮಾಲ್‍ವೊಂದರಲ್ಲಿ ನಿರ್ದೇಶಕ ಸೂರಿ, ನಟ ಧನಂಜಯ್, ನಟಿ ಮಾನ್ವಿತಾ ಜೊತೆ ಚಿತ್ರ ನೋಡಿದ್ದರು. ಬಹುಭಾಷಾ ನಿರ್ದೇಶಕ ಆರ್‍ಜಿವಿ `ಟಗರು’ ಚಿತ್ರ ನೋಡೋದಕ್ಕಾಗಿಯೇ ಬೆಂಗಳೂರಿಗೆ ಆಗಮಿಸಿದ್ದರು.

    ಟಗರು ಸಿನಿಮಾ ನೋಡಿದ ನಂತರ ಆರ್‍ಜಿವಿ ಇದೀಗ ಸುಕ್ಕಾ ಸ್ಕ್ರೀನ್‍ಪ್ಲೇ ಖ್ಯಾತಿಯ ಸೂರಿ ನಿರ್ದೇಶನವನ್ನು ಕೊಂಡಾಡಿದ್ದಾರೆ. ಈ ರೀತಿ ಸ್ಕ್ರೀನ್‍ಪ್ಲೇ ಇರೋ ಚಿತ್ರವನ್ನು ಇದುವರೆಗೂ ನನ್ನ ಜೀವನದಲ್ಲಿ ನೋಡೇ ಇಲ್ಲ ಎಂದು ತಿಳಿಸಿದ್ದಾರೆ.

    ಸಿನಿಮಾ ವೀಕ್ಷಿಸಿದ ನಂತರ “ಈಗ ತಾನೇ ನಿರ್ದೇಶಕ ಸೂರಿ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಕನ್ನಡ ಚಿತ್ರ ಟಗರು ಸಿನಿಮಾವನ್ನು ವೀಕ್ಷಿಸಿದೆ. ಮಾನ್ವಿತಾ ಹರೀಶ್ ಒಬ್ಬ ನಟಿಯಲ್ಲ. ಆಕೆ ಎಲೆಕ್ಟ್ರಿಸಿಟಿ ಇದ್ದಂತೆ. ತನ್ನ ಸಾಮಥ್ರ್ಯದಿಂದಲೇ ಎಲ್ಲರಿಗೂ ಶಾಕ್ ನೀಡುತ್ತಾರೆ. ಇನ್ನೂ ಧನಂನಜಯ್ ನಟನೆ ಎಲ್ಲರನ್ನೂ ಬೆದರಿಸುವಂತಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಟಗರು ಸಿನಿಮಾ ವೀಕ್ಷಿಸಿದ ನಂತರ ನಾನು ಮಾನ್ವಿತಾ ಹರೀಶ್ ಅವರಿಗೆ ಮೊದಲೇ ಟೋಕನ್ ಅಡ್ವಾನ್ಸ್ ನೀಡಿ ಸಿನಿಮಾಗೆ ಸೈನ್ ಮಾಡಿಸಿಕೊಂಡಿದ್ದೇನೆ. ಆ ಕಮಿಂಟ್‍ಮೆಂಟ್‍ಯಿಂದ ನಾನು ಅವರಿಗೆ 10 ಲಕ್ಷ ರೂ. ನೀಡುತ್ತೇನೆ. ಇಲ್ಲವೆಂದರೆ ಅವರು ಕೇಳಿದಷ್ಟು ಕೊಡುತ್ತೇನೆ. ಅಷ್ಟೇ ಅಲ್ಲದೇ ನಿರ್ದೇಶಕ ಸೂರಿ ಅವರನ್ನು ನಾನು ನಿರ್ಮಿಸುವ ಚಿತ್ರವನ್ನು ನಿರ್ದೇಶನ ಮಾಡಬೇಕಾಗಿ ಕೇಳಿಕೊಂಡಿದ್ದೇನೆ ಎಂದು ರಾಮ್‍ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

  • ಅಭಿಮಾನಿ `ಕನಕ’ನ ಜೊತೆ ಅಣ್ಣಾವ್ರ ಕಟೌಟ್ ರೆಡಿ!

    ಅಭಿಮಾನಿ `ಕನಕ’ನ ಜೊತೆ ಅಣ್ಣಾವ್ರ ಕಟೌಟ್ ರೆಡಿ!

    ಬೆಂಗಳೂರು: ಕರುನಾಡಲ್ಲಿ ಯಾವ ಊರಿಗೆ ಹೋದರೂ ದೇವಸ್ಥಾನ ತರಹ ಡಾ. ರಾಜ್‍ಕುಮಾರ್ ಪ್ರತಿಮೆ ಇರುತ್ತೆ. ರಾಜ್ ಕುಮಾರ್ ಪ್ರತಿಮೆ ಫೋಟೋ ಅಥವಾ ಕಟೌಟ್ ಕಂಡರೆ ಸಾಕು ಜನ ನಿಂತು ಕೈಮುಗಿಯುತ್ತಾರೆ. ಇದೀಗ ಅಂಥಹ ಅಭಿಮಾನಿ ದೇವರುಗಳಿಗೆ ಇಲ್ಲಿದೆ ಒಂದು ಖುಷಿ ವಿಷಯ. ಇದೇ ಶುಕ್ರವಾರ ನಗರದ ಮುಖ್ಯ ಚಿತ್ರಮಂದಿರಗಳಲ್ಲಿ ರಾಜ್ ಕಟೌಟ್ ರಾರಾಜಿಸಲಿದೆ.

    ರಾಜ್‍ಕುಮಾರ್ ಆದರ್ಶಗಳನ್ನು ಇಟ್ಟುಕೊಂಡು ಅನೇಕ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಹಾಗೆಯೇ ಈ ವಾರ ರಾಜ್ ನೆರಳಿನ ಕನಕ ಚಿತ್ರ ತೆರೆ ಮೇಲೆ ಬರುವುದಕ್ಕೆ ಸಿದ್ಧವಾಗಿದೆ. ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಆಟೋ ಚಾಲಕ ಕನಕ ಪಾತ್ರದಲ್ಲಿ ಮಿಂಚಿರುವ ಚಿತ್ರವಿದು.

    ಚಿತ್ರದಲ್ಲಿ ನಾಯಕ ದುನಿಯಾ ವಿಜಿ ಅಣ್ಣಾವ್ರ ಅಭಿಮಾನಿಯಾಗಿರುತ್ತಾರೆ. ಅವರ ಕನ್ನಡ ಪ್ರೀತಿ ಆದರ್ಶವನ್ನು ಪಾಲಿಸುತ್ತಾರೆ. ಹೀಗಾಗಿ ಅಣ್ಣಾವ್ರ ಬೃಹತ್ ಕಟೌಟ್ ಅನ್ನು ರಿಲೀಸ್ ಆಗುವ ಮುಖ್ಯ ಚಿತ್ರಮಂದಿರಗಳಲ್ಲಿ ನಿಲ್ಲಿಸಲಾಗುತ್ತೆ. ಕನಕ ಚಿತ್ರ ಹೆಸರಾಂತ ನಿರ್ದೇಶಕ ಆರ್. ಚಂದ್ರು ಕಲ್ಪನೆಯಲ್ಲಿ ಮೂಡಿ ಬಂದಿದೆ.

    ಅಣ್ಣಾವ್ರ ಅಭಿಮಾನಿಯಾಗಿ ವಿಜಯ್ ಅಭಿನಯಿಸಿದ್ದರೆ, ನಾಯಕಿಯರಾಗಿ ಹರಿಪ್ರಿಯಾ ಮತ್ತು ಮಾನ್ವಿತಾ ಹರೀಶ್ ನಟಿಸಿದ್ದಾರೆ. ನವೀನ್ ಸಜ್ಜು ಸಂಗೀತ ಈ ಚಿತ್ರದಲ್ಲಿದೆ. ಗುರುಕಿರಣ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನೀಡಿದ್ದಾರೆ. ಎಲ್ಲಾ ವರ್ಗಗಳಿಗೂ ಹಿಡಿಸುವ ಒಂದು ಆದರ್ಶಮಯಿ ಕಥೆ ಚಿತ್ರದಲ್ಲಿದೆ.

    https://www.youtube.com/watch?v=VGOrvWbcMZU

     

  • ಬಳ್ಳಾರಿಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ ಟಗರು ಸಿನಿಮಾದ ಶೂಟಿಂಗ್- ಫೋಟೋಗಳಲ್ಲಿ ನೋಡಿ

    ಬಳ್ಳಾರಿಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ ಟಗರು ಸಿನಿಮಾದ ಶೂಟಿಂಗ್- ಫೋಟೋಗಳಲ್ಲಿ ನೋಡಿ

    ಬಳ್ಳಾರಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ `ಟಗರು’ ಸಿನಿಮಾದ ಒಂದು ಹಾಡಿನ ಚಿತ್ರೀಕರಣದ ಶೂಟಿಂಗ್ ಹೊಸಪೇಟೆಯ ನಗರದ ಜೋಳದ ರಾಶಿ ಗುಡ್ಡದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

    ಶಿವರಾಜ್‍ಕುಮಾರ್ ಹಾಗೂ ಕೆಂಡಸಂಪಿಗೆ ನಟಿ ಮಾನ್ವಿತಾ `ಟಗರು’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನೃತ್ಯ ಸಂಯೋಜಕ ಎ. ಹರ್ಷರ ಕೊರಿಯೋಗ್ರಫಿ ಮಾಡಿರುವ `ವೋಲ್ಡಾನ್ ವೋಲ್ಡಾನ್’ ಹಾಡಿಗೆ ಶಿವಣ್ಣ ಹಾಗೂ ಮಾನ್ವಿತಾ ಅವರು ಹೆಜ್ಜೆ ಹಾಕಿದ್ದಾರೆ. ಮಾನ್ವಿತಾ ಲಂಬಾಣಿ ವಸ್ತ್ರವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದು, ಲಂಬಾಣಿ ಮಹಿಳೆಯರೊಂದಿಗೆ ನೃತ್ಯ ಮಾಡುವ ದೃಶ್ಯವನ್ನು ಚಿತ್ರೀಕರಣ ಮಾಡಲಾಯಿತು.

    ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ, ಸುಶೀಲ ನಗರ ಮತ್ತು ಮರಿಯಮ್ಮನಹಳ್ಳಿ ಸೇರಿದಂತೆ ಕೆಲವು ತಾಂಡಾದಲ್ಲಿ ಸುಮಾರು 150 ಕ್ಕೂ ಹೆಚ್ಚು ಲಂಬಾಣಿ ಮಹಿಳೆಯರು ತಮ್ಮ ಸಂಪ್ರದಾಯದ ಉಡುಪುಗಳನ್ನು ಧರಿಸಿಕೊಂಡು ವೋಲ್ಡಾನ್ ವೋಲ್ಡಾನ್ ಹಾಡಿಗೆ ನೃತ್ಯ ಮಾಡುವಂತಹ ಸನ್ನಿವೇಶಗಳ ಚಿತ್ರೀಕರಣ ನಡೆಯಿತು. ಬೆಂಗಳೂರಿನಿಂದ ಸುಮಾರು 15-20 ಜನ ಸಹ ನೃತ್ಯ ಕಲಾವಿದೆಯರು ಒಂದೇ ಮಾದರಿಯ ಉಡುಪುಗಳನ್ನು ಧರಿಸಿ ಹಾಡಿನಲ್ಲಿ ನೃತ್ಯ ಮಾಡುವ ಸನ್ನಿವೇಶಗಳು ಸಹ ಇಲ್ಲಿ ಚಿತ್ರೀಕರಿಸಲಾಗಿದೆ.

    ಗುರುವಾರ ನಗರದ ಉಕ್ಕಡಕೇರಿಯ ಗರಡಿ ಮನೆಯಲ್ಲಿ ಚಿತ್ರದಲ್ಲಿ ಖಳನಾಯಕರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧನಂಜಯ ಮತ್ತು ವಶಿಷ್ಟ ಸಿಂಹ ಅವರ ನಡುವಿನ ಸಂಭಾಷಣೆಯ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಕಾಕ್ರೋಚ್ ಎಂಬ ಖಳನಟನನ್ನು ಎನ್‍ಕೌಂಟರ್‍ನಲ್ಲಿ ಹತ್ಯೆ ಮಾಡಿದ ವಿಷಯ ತಿಳಿದ ಖಳನಾಯಕ ಧನಂಜಯ ಹಾಗೂ ವಶಿಷ್ಟ ಸಿಂಹ ಮೃತದೇಹಗಳನ್ನು ನೋಡಲು ಬರುವಂತಹ ದೃಶ್ಯಗಳನ್ನು ನಗರದ ಉಕ್ಕಡಕೇರಿ ಗರಡಿ ಮನೆಯ ಸಮೀಪದಲ್ಲಿ ಮತ್ತು ನಗರದ ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಚಿತ್ರೀಕರಿಸಲಾಯಿತು.

    ಆಸ್ಪತ್ರೆಯಲ್ಲಿ ಖಳನಾಯಕರಾದ ಧನಂಜಯ, ವಶಿಷ್ಟ ಸಿಂಹ ಅವರೊಂದಿಗೆ ನಟಿಯರಾದ ಮಾನ್ವಿತಾ ಮತ್ತು ಅರ್ಪಿತಾ ಜೊತೆಗೆ ನಡೆಯುವ ಕೆಲ ಸಂಭಾಷಣೆಗಳ ತುಣುಕುಗಳ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಚಿತ್ರೀಕರಣವನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದಾರೆ.

    ಇದನ್ನು ಓದಿ: ಉಡುಪಿಯಲ್ಲಿ ಶಿವರಾಜ್ ಕುಮಾರ್ ಟೈಗರ್ ಡಾನ್ಸ್: ವಿಡಿಯೋ ನೋಡಿ