Tag: ಮಾನಸಿಕ ಕಿರುಕುಳ

  • ಯುವತಿಯನ್ನು ಮದುವೆಯಾಗುವಂತೆ ಬೆದರಿಕೆ – ವಿಷಸೇವಿಸಿ ಯುವಕ ಆತ್ಮಹತ್ಯೆ

    ಯುವತಿಯನ್ನು ಮದುವೆಯಾಗುವಂತೆ ಬೆದರಿಕೆ – ವಿಷಸೇವಿಸಿ ಯುವಕ ಆತ್ಮಹತ್ಯೆ

    ಹಾವೇರಿ: ಯುವತಿ ಮನೆಯವರಿಂದ ಮಾನಸಿಕ ಕಿರುಕುಳದ ಹಿನ್ನೆಲೆ ಯುವಕನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿ ತಾಂಡಾದಲ್ಲಿ ನಡೆದಿದೆ.

    ಪ್ರಸನ್ನ ಲಮಾಣಿ 20 ವರ್ಷ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ. ಕಳೆದ ಒಂದು ವರ್ಷದ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಯುವತಿಯನ್ನ ಮದುವೆ ಆಗುವಂತೆ ಯುವತಿ ಮನೆಯವರು ಮಾನಸಿಕ ಕಿರುಕುಳ ನೀಡಿದ್ದಾರೆ. ಮದುವೆಯಾಗಿ ಆಕೆಯನ್ನು ಕರೆದುಕೊಂಡು ಹೋಗದಿದ್ದರೆ ಜೀವಸಹಿತ ಬಿಡೋದಿಲ್ಲ ಅಂತಾ ಯುವತಿ ಮನೆಯವರು ಜೀವಬೆದರಿಕೆ ಹಾಕುತ್ತಿದ್ದರು. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

    whatsapp

    ಪ್ರಸನ್ನ ತನ್ನ ಸಾವಿಗೆ ಯುವತಿಯೇ ವಾಟ್ಸಪ್ ಸ್ಟೇಟಸ್ ನಲ್ಲಿ ಯುವತಿಯ ಹೆಸರು ಮತ್ತು ಆಕೆಯೊಂದಿಗೆ ಓಡಾಡಿದ್ದ ಫೋಟೋಗಳನ್ನಿಟ್ಟು ಆತ್ಮಹತ್ಯೆ ಮಾಡುಕೊಂಡಿದ್ದಾನೆ. ಯುವತಿಯು ಫೋಕ್ಸೋ ಪ್ರಕರಣ ದಾಖಲಾದಾಗ ಅಪ್ರಾಪ್ತಳಾಗಿದ್ದಳು. ಯುವಕನು ಒಂದೂವರೆ ತಿಂಗಳು ಜೈಲಿನಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಈತ ಗ್ರಾಮದಲ್ಲಿ ವಾಟರಮನ್ ಆಗಿ ಕೆಲಸ ಮಾಡುತ್ತಿದ್ದನು. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ

    ಯುವಕನು ನಿನ್ನೆ ಸಂಜೆ ಮನೆಯಲ್ಲಿ ವಿಷಸೇವಿಸಿ ಮಾಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದಾನೆ. ಯುವತಿ ಸೇರಿ ಯುವತಿ ಮನೆಯ ವಿಜಯ ದೀವಿಗಿಹಳ್ಳಿ, ಮಂಜು ದೀವಿಗಿಹಳ್ಳಿ ಎಂಬುವರ ವಿರುದ್ಧ ಮೃತನ ತಂದೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಶಿವಮೊಗ್ಗ ಉಪವಿಭಾಗಾಧಿಕಾರಿ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ಶಿವಮೊಗ್ಗ ಉಪವಿಭಾಗಾಧಿಕಾರಿ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    – ಲಾಸ್ಟ್ ಕಾಲ್ ರೆಕಾರ್ಡಿಂಗ್‍ನಲ್ಲಿತ್ತು ಸಾವಿನ ಸೀಕ್ರೆಟ್!

    ಶಿವಮೊಗ್ಗ: ಜಿಲ್ಲೆಯ ಉಪವಿಭಾಗಾಧಿಕಾರಿ ಪತ್ನಿ, ಶಾಲಾ ಶಿಕ್ಷಕಿ ಸುಮಾ ಅವರ ಸಾವಿನ ಪ್ರಕರಣಕ್ಕೆ ಇದೀಗ ಮಹತ್ವದ ಟ್ವಿಸ್ಟ್ ದೊರೆತಿದೆ. ಸಾವಿಗೂ ಮುನ್ನ ಅವರು ಕರೆ ಮಾಡಿದ್ದ ಆಡಿಯೋ ಕಾಲ್ ರೆಕಾರ್ಡಿಂಗ್ ನಿಂದ ಅವರ ಆತ್ಮಹತ್ಯೆ ಹಿಂದಿನ ಕಾರಣ ಬೆಳಕಿಗೆ ಬಂದಿದೆ.

    ಶಿಕ್ಷಕಿ ಸುಮಾ (40) ಆತ್ಮಹತ್ಯೆಗೆ ಅವರು ಕಾರ್ಯನಿರ್ವಹಿಸುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕಿಯ ಕಿರುಕುಳವೇ ಕಾರಣ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಉಪವಿಭಾಗಾಧಿಕಾರಿ ಪ್ರಕಾಶ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ಪತ್ನಿಗೆ ಇಲ್ಲ ಸಲ್ಲದ ಕೆಲಸ ಹೇಳಿ ಶಾಲೆಯ ಮುಖ್ಯ ಶಿಕ್ಷಕಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಡಿ.24 ರಂದು ಶಿವಮೊಗ್ಗ ನಗರ ಕ್ರಿಸ್ಮಸ್ ಹಬ್ಬದ ತಯಾರಿಯಲ್ಲಿತ್ತು. ಶಾಲೆಗೆ ರಜೆ ಇದೆ ಎಂದು ಮಕ್ಕಳು ಕೂಡ ರಜೆಯ ಮಜಾದಲ್ಲಿದ್ದರು. ಆದರೆ ಶಾಲೆಯ ಶಿಕ್ಷಕಿ ಮಾತ್ರ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದು ಎಲ್ಲರಿಗೂ ಶಾಕ್ ನೀಡಿತ್ತು.

    ಶಿವಮೊಗ್ಗ ಉಪವಿಭಾಗಾಧಿಕಾರಿ ಪ್ರಕಾಶ್ ಅವರ ಪತ್ನಿ ಸುಮಾ ಅವರು ನೇಣಿಗೆ ಶರಣಾಗಿದ್ದಾರೆ ಎಂದ ಕೂಡಲೇ ಇಡೀ ನಗರದ ಸರ್ಕಾರಿ ಅಧಿಕಾರಿಗಳಲ್ಲಿ, ಸರ್ಕಾರಿ ನೌಕರರಲ್ಲಿ ತಲ್ಲಣ ಉಂಟಾಗಿತ್ತು. ಅಷ್ಟೇ ಅಲ್ಲದೇ ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿಯೂ ಕೂಡ ಆತಂಕ ಉಂಟಾಗಿತ್ತು.

    ಅಂದು ಸುಮಾ ಅವರ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ದಂಪತಿಗೆ ವಿವಾಹವಾಗಿ 12 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ ಎಂಬುದೇ ಕಾರಣ ಎನ್ನಲಾಗಿತ್ತು. ಈ ಕಾರಣಕ್ಕಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗಿತ್ತು. ಮೃತ ಸುಮಾ ಅವರ ತಾಯಿ ಅವರು ಕೂಡ, ನನ್ನ ಮಗಳ ಸಾವಿಗೆ ದಂಪತಿಗೆ ಮಕ್ಕಳಾಗದಿರುವುದು ಕಾರಣ ಎಂದು ಪೊಲೀಸರಿಗೆ ತಿಳಿಸಿದ್ದರು.

    ಘಟನೆ ನಡೆದು ಸುಮಾರು 10 ದಿನಗಳಾದ ಬಳಿಕ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾ ಅವರಿಗೆ ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ ಅವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಆಡಿಯೋವೊಂದು ಬೆಳಕಿಗೆ ಬಂದಿದೆ. ಸುಮಾ ಅವರು ಆತ್ಮಹತ್ಯೆಗೂ ಮುನ್ನ ತಮ್ಮ ಸಹೋದ್ಯೋಗಿ ಕೆ.ಜಿ.ಎಸ್ ಎಂಬುವವರಿಗೆ ಕರೆ ಮಾಡಿ, ಮುಖ್ಯ ಶಿಕ್ಷಕಿ ಸರಸ್ವತಿ ಅವರು ನನಗೆ ಇಲ್ಲ ಸಲ್ಲದ ಕೆಲಸ ಹೇಳಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ ಎನ್ನಲಾಗಿದೆ.

    ಸುಮಾ ಅವರ ದೂರವಾಣಿ ಕರೆಯನ್ನು ಶಿಕ್ಷಕಿಯಾಗಿರುವ ಕೆ.ಜಿ.ಎಸ್. ಅವರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡಿಕೊಂಡಿದ್ದು, ಈ ಆಡಿಯೋ ಪ್ರಕರಣಕ್ಕೆ ತಿರುವು ನೀಡಿದೆ. ಶಾಲಾ ಮುಖ್ಯಶಿಕ್ಷಕಿ ಸರಸ್ವತಿಯ ಕಿರುಕುಳವೇ ಎಸಿ ಪತ್ನಿ ನೇಣಿಗೆ ಶರಣಾಗಲೂ ಕಾರಣ ಎಂಬ ಆರೋಪಕ್ಕೆ ಆಡಿಯೋ ರೆಕಾರ್ಡ್ ಪ್ರಮುಖ ಆಧಾರವಾಗಿದೆ. ಈ ಆಧಾರವನ್ನಿಟ್ಟುಕೊಂಡು ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಿ ವಿರುದ್ಧ ಇದೀಗ ಉಪವಿಭಾಗಾಧಿಕಾರಿ ಪ್ರಕಾಶ್ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಭದ್ರಾವತಿಯ ಸಂಚಿ ಹೊನ್ನಮ್ಮ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸುಮಾ ಅವರು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದರು. ಈ ಶಾಲೆಗೆ ಬಂದಾಗಿನಿಂದಲೂ ಇಲ್ಲಿನ ಮುಖ್ಯ ಶಿಕ್ಷಕಿ ಸರಸ್ವತಿ ಇವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರೆಂದು ಹೇಳಲಾಗಿದೆ. ಈ ಬಗ್ಗೆ ಸುಮಾ ಅವರು ತಮ್ಮ ಸಹೋದ್ಯೋಗಿ ಬಳಿ ಬೇಸರ ಹೇಳಿಕೊಂಡಿದ್ದು ಶಾಲೆಯಲ್ಲಿ ಇನ್ನಿತರರಿಗೂ ಈ ರೀತಿ ಮಾಡುತ್ತಿದ್ದರೆಂದು ಹೇಳಲಾಗುತ್ತಿದೆ.

    ಜಿಲ್ಲೆಯ ಪ್ರಮುಖ ಹುದ್ದೆಯಾಗಿರುವ ಉಪವಿಭಾಗಾಧಿಕಾರಿಯೊಬ್ಬರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಸಂಶಯಗಳನ್ನು ಮೂಡಿಸಿತ್ತು. ಆದರೆ ಅವರ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುವುದು ತಿಳಿದು ಬಂದಿರಲಿಲ್ಲ. ಸದ್ಯ ಸೋಮವಾರ ಸಂಜೆ ಪ್ರಕರಣದ ಆಡಿಯೋ ದೊರೆತಿರುವುದರಿಂದ ದೂರು ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣದ ಕುರಿತಂತೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

  • Exclusive: ಮಹಿಳಾ ಅಧಿಕಾರಿಗೆ ಚಾಮರಾಜನಗರ ಕಾಂಗ್ರೆಸ್ ಶಾಸಕನಿಂದ ಮಾನಸಿಕ ಕಿರುಕುಳ!

    Exclusive: ಮಹಿಳಾ ಅಧಿಕಾರಿಗೆ ಚಾಮರಾಜನಗರ ಕಾಂಗ್ರೆಸ್ ಶಾಸಕನಿಂದ ಮಾನಸಿಕ ಕಿರುಕುಳ!

    ಚಾಮರಾಜನಗರ: ಸಿಎಂ ಸಂಸದೀಯ ಕಾರ್ಯದರ್ಶಿ ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಮಹಿಳಾ ಅಧಿಕಾರಿಯೊಬ್ಬರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಶಾಸಕರು ಸಣ್ಣ ಸಣ್ಣ ವಿಚಾರಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿಯಾಗಿರುವ ಸರಸ್ವತಿ ಆರೋಪಿಸಿದ್ದಾರೆ.

    ಶಾಸಕ ಪುಟ್ಟರಂಗೇಗೌಡ ಅಧಿಕಾರಿಯನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದು, ಇದಕ್ಕೆ ನಾನು ನಿರಾಕರಿಸಿದ್ದಕ್ಕೆ ಪ್ರತಿನಿತ್ಯವೂ ಒಂದೆಲ್ಲಾ ಒಂದು ಕಾರಣ ಇಟ್ಟುಕೊಂಡು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಸರಸ್ವತಿ ಹೇಳಿದ್ದಾರೆ.

    ವರ್ಗಾವಣೆಗೆ ಒತ್ತಡ: ಮಹಿಳಾ ಅಧಿಕಾರಿಯನ್ನು ಜಿಲ್ಲೆಯಿಂದ ವರ್ಗಾಯಿಸಲು ಶಾಸಕ ಪುಟ್ಟರಂಗಶೆಟ್ಟಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರಿ ಯೋಜನೆಯನ್ನು ತಿರುಚುವಂತೆ ಒತ್ತಡ ಹೇರುತ್ತಿರುವ ಶಾಸಕ, ಕಾರಣವಿಲ್ಲದೇ ಮಹಿಳಾ ಅಧಿಕಾರಿ ವಿರುದ್ಧ ಕ್ಯಾತೆ ತೆಗೆಯುತ್ತಿದ್ದಾರಂತೆ. ಇದರಿಂದ ಕಾಂಗ್ರೆಸ್ ಶಾಸಕರು ಅಧಿಕಾರಿಗಳು ಮೇಲೆ ಹೇರುತ್ತಿರುವ ಕಿರುಕುಳ ಮತ್ತಷ್ಟು ಹೆಚ್ಚುತ್ತಿದೆ.

    ಧ್ವನಿ ಎತ್ತಲು ಆಗುತ್ತಿಲ್ಲ: ಶಾಸಕರ ಕಿರುಕುಳದಿಂದ ರೋಸಿ ಹೋಗಿರುವ ಅಧಿಕಾರಿ ಶಾಸಕರ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ. ಒಂದು ಹಂತದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರನ್ನು ನೀಡಲು ಮುಂದಾಗಿದ್ದರು. ಆದರೆ ಮಹಿಳಾ ಅಧಿಕಾರಿ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದೆ ದೂರನ್ನು ನೀಡದೆ ಅಸಹಾಯಕಿಯಾಗಿ ಈಗ ನಿಂತಿದ್ದಾರೆ.

    “ಮೆಂಟಲಿ ತುಂಬಾ ಟಾರ್ಚರ್ ಆಗ್ತಿದೆ. ಅವರು ಯಾರು ಹೇಳಿದ್ರೂ ಕೇಳುತ್ತಿಲ್ಲ. ನಾನು ಟ್ರಾನ್ಫರ್ ತಗೊಂಡು 2 ವರ್ಷ ಆಯ್ತು. ಈಗ ನನನ್ನು ಟ್ರಾನ್ಫರ್ ಮಾಡ್ತಾರೆ. ಮಧ್ಯದಲ್ಲೇ ನಾವು ಕೇಳಿದ್ರೆ ಟ್ರಾನ್ಫರ್ ಸಿಗಲ್ಲ. ಅವರು ಮಿನಿಸ್ಟರ್‍ಗೆ ಲೆಟರ್ ಕೊಟ್ಟಿದ್ದಾರೆ. ಖಾದರ್ ಸರ್‍ಗೆ ಲೆಟರ್ ಕೊಟ್ಟಿದ್ದಾರೆ. ಎಲ್ಲರಿಗೂ ಲೆಟರ್ ಕೊಟ್ಟು ನನ್ನನ್ನು ಟ್ರಾನ್ಫರ್ ಮಾಡಿಸ್ಬೇಕು ಅಂತ ಹೇಳಿದ್ದಾರೆ. ತುಂಬಾ ಟಾರ್ಚರ್ ಆಗ್ತಿದೆ. ಇದು ಈಗಿನದ್ದಲ್ಲ, ಕಳೆದ 7 ತಿಂಗಳಿಂದ ನಡೆಯುತ್ತಿದೆ”
    ಸರಸ್ವತಿ, ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿ

     

    https://youtu.be/685txtxb4Bc