Tag: ಮಾಧವನ್

  • ಬೆಚ್ಚಿ ಬೀಳಿಸುವ ಜ್ಯೋತಿಕಾ ನಟನೆಯ ‘ಶೈತಾನ್’ ಚಿತ್ರದ ಟ್ರೈಲರ್

    ಬೆಚ್ಚಿ ಬೀಳಿಸುವ ಜ್ಯೋತಿಕಾ ನಟನೆಯ ‘ಶೈತಾನ್’ ಚಿತ್ರದ ಟ್ರೈಲರ್

    ಕ್ಷಿಣ ಭಾರತದ ಹೆಸರಾಂತ ನಟಿ, ನಿರ್ಮಾಪಕಿ ಜ್ಯೋತಿಕಾ (Jyothika) ಬರೋಬ್ಬರಿ 25 ವರ್ಷಗಳ ಬಳಿಕ ಬಾಲಿವುಡ್ ಗೆ ಮರಳಿದ್ದಾರೆ. ಶೈತಾನ್ (Shaitan) ಸಿನಿಮಾದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಿದ್ದು, ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಹಾರರ್ ಕಥಾನಕ ಹೊಂದಿರುವ ಈ ಸಿನಿಮಾದ ದೃಶ್ಯಗಳು ಬೆಚ್ಚಿ ಬೀಳಿಸುತ್ತಿವೆ. ವಶೀಕರಣದ ವಿಷಯವನ್ನೂ ಈ ಸಿನಿಮಾ ಒಳಗೊಂಡಿದೆ.

    ಜ್ಯೋತಿಕಾ ಈ ಹಿಂದೆ ಹಿಂದಿ, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ, ಆನಂತರ ಚಿತ್ರೋದ್ಯಮದಿಂದಲೇ ದೂರವಾಗಿದ್ದರು. ಇದೀಗ ಬಾಲಿವುಡ್ (Bollywood) ಶೈತಾನ್ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗುತ್ತಿದ್ದಾರೆ.

    ಅಜಯ್ ದೇವಗನ್ (Ajay Devgn) ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಜ್ಯೋತಿಕಾ ಇವರ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾರರ್ ಚಿತ್ರವಾಗಿದ್ದು, ಆರ್. ಮಧುವನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

     

    ಜ್ಯೋತಿಕಾ ಮತ್ತು ಪತಿ ಕಂ ನಟ ಸೂರ್ಯ ತಮಿಳಿನಲ್ಲಿ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜ್ಯೋತಿಕಾ ಬಹುತೇಕ ನಿರ್ಮಾಣದಲ್ಲೇ ಬ್ಯುಸಿಯಾಗಿದ್ದರು. ಅಭಿಮಾನಿಗಳ ಒತ್ತಾಸೆಯಂತೆ ಬಾಲಿವುಡ್ ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಸಿನಿಮಾ ಸಾಕಷ್ಟು ಕುತೂಹಲವನ್ನಂತೂ ಮೂಡಿಸಿದೆ.

  • ಮಾಧವನ್ ಜೊತೆಗಿನ ಸಿನಿಮಾ: ಶೀಘ್ರದಲ್ಲೇ ಮಾಹಿತಿ ನೀಡ್ತಾರಂತೆ ಕಂಗನಾ

    ಮಾಧವನ್ ಜೊತೆಗಿನ ಸಿನಿಮಾ: ಶೀಘ್ರದಲ್ಲೇ ಮಾಹಿತಿ ನೀಡ್ತಾರಂತೆ ಕಂಗನಾ

    ರಡು ದಿನಗಳ ಹಿಂದೆಯಷ್ಟೇ ತಮ್ಮ ಅಭಿಮಾನಿಗಳಿಗೆ ಹೊಸ ಸಿನಿಮಾದ ಸುಳಿವು ನೀಡಿದ್ದರು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut). ಒಂಬತ್ತು ವರ್ಷಗಳ ನಂತರ ಮಾಧವನ್ ಜೊತೆ ನಟಿಸುತ್ತಿರುವ ವಿಷಯವನ್ನು ಪರೋಕ್ಷವಾಗಿ ಅವರು ಹಂಚಿಕೊಂಡಿದ್ದರು. ಈ ಕುರಿತಂತೆ ಅಭಿಮಾನಿಗಳು ಅನೇಕ ಪ್ರಶ್ನೆಗಳನ್ನು ಕಂಗನಾಗೆ ಕೇಳಿದ್ದರು.

    ಈ ಕುರಿತಂತೆ ಅವರು ಪ್ರತಿಕ್ರಿಯೆ ನೀಡಿದ್ದು, ಮಾಧವನ್ ಜೊತೆಗಿನ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯು ಸೂಕ್ತ ಸಮಯದಲ್ಲಿ ದೊರೆಯಲಿದೆ ಎಂದು ಹೇಳಿದ್ದಾರೆ. ಈ ಸಿನಿಮಾ ಕುರಿತಂತೆ ಇತರ ವಿಷಯಗಳನ್ನು ಅವರು ಹೇಳಿಕೊಂಡಿಲ್ಲ. ಬಹುಶಃ ಅವರು ತಮ್ಮ ಎಮರ್ಜನ್ಸಿ ಸಿನಿಮಾದಲ್ಲಿ ಬ್ಯುಸಿ ಆಗಿರುವುದರಿಂದ ಹೇಳಿಕೊಳ್ಳಲು ಹೋಗಿಲ್ಲ ಎನ್ನಬಹುದು.

    ಬಾಲಿವುಡ್ (Bollywood) ನ ತನು ಮತ್ತು ಮನು ಜೋಡಿ ಎಂದೇ ಖ್ಯಾತರಾದವರು ಕಂಗನಾ ರಣಾವತ್ ಮತ್ತು ದಕ್ಷಿಣದ ಖ್ಯಾತ ನಟ ಮಾಧವನ್. ತನು ವೆಡ್ಸ್ ಮನು ಸಿನಿಮಾ ಮೂಲಕ ಈ ಜೋಡಿ ಬಿಟೌನ್ ನಲ್ಲಿ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಈ ಸಿನಿಮಾದ ನಂತರ ತನು ವೆಡ್ಸ್ ಮನು ರಿಟರ್ನ್ಸ್ ಅನ್ನೋ ಮತ್ತೊಂದು ಸಿನಿಮಾ ಕೂಡ ಮಾಡಿತ್ತು. ಅದೇ ಈ ಜೋಡಿಯ ಕೊನೆ ಸಿನಿಮಾ ಕೂಡ ಆಗಿತ್ತು.

    ಎರಡೂ ಚಿತ್ರಗಳೂ ಸೂಪರ್ ಹಿಟ್ ಆದರೂ, ಗಲ್ಲಾ ಪೆಟ್ಟಿಗೆಯಲ್ಲೂ ಕೋಟಿ ಕೋಟಿ ಬಾಚಿದರೂ, ಮತ್ತೆ ಈ ಜೋಡಿಯನ್ನು ಒಂದಾಗಿಸುವ ಪ್ರಯತ್ನವನ್ನು ಯಾರೂ ಮಾಡಲಿಲ್ಲವೋ ಅಥವಾ ಈ ಜೋಡಿಯೇ ಒಪ್ಪಿಕೊಳ್ಳಲಿಲ್ಲವೋ ಗೊತ್ತಿಲ್ಲ. ಮತ್ತೆ ಈ ಕಾಂಬಿನೇಷನ್ ನಲ್ಲಿ ಚಿತ್ರ ಬರಲಿಲ್ಲ.

    ತನು ವೆಡ್ಸ್ ಮನು ಸಿನಿಮಾ ರಿಲೀಸ್ ಆಗಿ ಒಂಬತ್ತು ವರ್ಷಗಳೇ ಕಳೆದಿವೆ. ಒಂಬತ್ತು ವರ್ಷಗಳ ನಂತರ ಮತ್ತೆ ಈ ಜೋಡಿ ತೆರೆಯ ಮೇಲೆ ಬರೋಕೆ ರೆಡಿ ಆಗುತ್ತಿದೆ. ಈ ಮಾಹಿತಿಯನ್ನು ಸ್ವತಃ ಕಂಗನಾ ಅವರೇ ಬಹಿರಂಗ ಪಡಿಸಿದ್ದರು. ಆದಷ್ಟು ಬೇಗ ಒಟ್ಟಿಗೆ ಕೆಲಸ ಮಾಡುವ ಕುರಿತು ಹೇಳಿದ್ದರು.

     

    ಮಾಧವನ್ ಜೊತೆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಂಗನಾ, ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದರು. ಮಾಧವನ್ ಕೂಡ ಕಾಯುತ್ತಿರುವ ಕುರಿತು ರಿಯ್ಯಾಕ್ಟ್ ಮಾಡಿದ್ದರು. ಈ ಕುರಿತಂತೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಸಿಗುವ ನಿರೀಕ್ಷೆ ಇದೆ.

  • ಮತ್ತೆ ಒಂದಾಗಲಿದೆ ‘ತನು ಮತ್ತು ಮನು’ ಜೋಡಿ

    ಮತ್ತೆ ಒಂದಾಗಲಿದೆ ‘ತನು ಮತ್ತು ಮನು’ ಜೋಡಿ

    ಬಾಲಿವುಡ್ ನ ತನು ಮತ್ತು ಮನು ಜೋಡಿ ಎಂದೇ ಖ್ಯಾತರಾದವರು ಕಂಗನಾ ರಣಾವತ್ ಮತ್ತು ದಕ್ಷಿಣದ ಖ್ಯಾತ ನಟ ಮಾಧವನ್. ತನು ವೆಡ್ಸ್ ಮನು ಸಿನಿಮಾ ಮೂಲಕ ಈ ಜೋಡಿ ಬಿಟೌನ್ ನಲ್ಲಿ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಈ ಸಿನಿಮಾದ ನಂತರ ತನು ವೆಡ್ಸ್ ಮನು ರಿಟರ್ನ್ಸ್ ಅನ್ನೋ ಮತ್ತೊಂದು ಸಿನಿಮಾ ಕೂಡ ಮಾಡಿತ್ತು. ಅದೇ ಈ ಜೋಡಿಯ ಕೊನೆ ಸಿನಿಮಾ ಕೂಡ ಆಗಿತ್ತು.

    ಎರಡೂ ಚಿತ್ರಗಳೂ ಸೂಪರ್ ಹಿಟ್ ಆದರೂ, ಗಲ್ಲಾ ಪೆಟ್ಟಿಗೆಯಲ್ಲೂ ಕೋಟಿ ಕೋಟಿ ಬಾಚಿದರೂ, ಮತ್ತೆ ಈ ಜೋಡಿಯನ್ನು ಒಂದಾಗಿಸುವ ಪ್ರಯತ್ನವನ್ನು ಯಾರೂ ಮಾಡಲಿಲ್ಲವೋ ಅಥವಾ ಈ ಜೋಡಿಯೇ ಒಪ್ಪಿಕೊಳ್ಳಲಿಲ್ಲವೋ ಗೊತ್ತಿಲ್ಲ. ಮತ್ತೆ ಈ ಕಾಂಬಿನೇಷನ್ ನಲ್ಲಿ ಚಿತ್ರ ಬರಲಿಲ್ಲ.

    ತನು ವೆಡ್ಸ್ ಮನು ಸಿನಿಮಾ ರಿಲೀಸ್ ಆಗಿ ಒಂಬತ್ತು ವರ್ಷಗಳೇ ಕಳೆದಿವೆ. ಒಂಬತ್ತು ವರ್ಷಗಳ ನಂತರ ಮತ್ತೆ ಈ ಜೋಡಿ ತೆರೆಯ ಮೇಲೆ ಬರೋಕೆ ರೆಡಿ ಆಗುತ್ತಿದೆ. ಈ ಮಾಹಿತಿಯನ್ನು ಸ್ವತಃ ಕಂಗನಾ ಅವರೇ ಬಹಿರಂಗ ಪಡಿಸಿದ್ದಾರೆ. ಆದಷ್ಟು ಬೇಗ ಒಟ್ಟಿಗೆ ಕೆಲಸ ಮಾಡುವ ಕುರಿತು ಹೇಳಿದ್ದಾರೆ.

     

    ಮಾಧವನ್ ಜೊತೆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಂಗನಾ, ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಮಾಧವನ್ ಕೂಡ ಕಾಯುತ್ತಿರುವ ಕುರಿತು ರಿಯ್ಯಾಕ್ಟ್ ಮಾಡಿದ್ದಾರೆ.

  • ಪಿಎಂ ನರೇಂದ್ರ ಮೋದಿ- ಫ್ರೆಂಚ್ ಪ್ರೆಸಿಡೆಂಟ್ ಜೊತೆ ಮ್ಯಾಡಿ ಊಟ

    ಪಿಎಂ ನರೇಂದ್ರ ಮೋದಿ- ಫ್ರೆಂಚ್ ಪ್ರೆಸಿಡೆಂಟ್ ಜೊತೆ ಮ್ಯಾಡಿ ಊಟ

    ಸೌತ್‌ನ ಹೆಸರಾಂತ ನಟ ಮಾಧವನ್ (Actor Madhavan) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ತಮ್ಮ ಸಿನಿಮಾಗಿಂತ ಇತರೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಫ್ರೆಂಚ್ ಪ್ರೆಸಿಡೆಂಟ್ (French President) ಇಮ್ಯಾನುಯೆಲ್-ಮ್ಯಾಕ್ರಾನ್ ಜೊತೆ ಒಂದೊಳ್ಳೆ ಊಟವನ್ನ (Lunch) ನಟ ಮ್ಯಾಡಿ ಸವಿದಿದ್ದಾರೆ. ಅವರ ಜೊತೆ ಕಳೆದಂತಹ ಸುಂದರ ಕ್ಷಣಗಳನ್ನ ನಟ ಮ್ಯಾಡಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ತಮಿಳು, ಬಾಲಿವುಡ್ ರಂಗದಲ್ಲಿ ಗುರುತಿಸಿಕೊಂಡಿರುವ ಹೆಸರಾಂತ ನಟ ಮಾಧವನ್ ಅವರು 1998ರಲ್ಲಿ ಕನ್ನಡದ ʼಶಾಂತಿ ಶಾಂತಿ ಶಾಂತಿʼ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಹಿಂದಿ, ತಮಿಳು ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ನಟಿ- ಕಣ್ಣೀರಿಟ್ಟ ನಿತ್ಯಾ ಮೆನನ್

    ಆರ್. ಮಾಧವನ್ ಅವರು ಫ್ರೆಂಚ್ ಪ್ರೆಸಿಡೆಂಟ್ ಇಮ್ಯಾನುಯೆಲ್-ಮ್ಯಾಕ್ರಾನ್ ಅವರು ಆಯೋಜಿಸಿದ ಡಿನ್ನರ್‌ನಲ್ಲಿ ಭಾಗಿಯಾದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವಾರ್ಥವಾಗಿ ಲೌರೆ ಮ್ಯೂಸಿಯಂನಲ್ಲಿ ಆಯೋಜಿಸಿದ್ದ ಡಿನ್ನರ್‌ನಲ್ಲಿ ಮೋದಿ ಜೊತೆ ಮಾಧವನ್ ಕೂಡಾ ಭಾಗಿಯಾಗಿದ್ದರು. ಮಾಧವನ್ ಅವರು ಮೋದಿಯವರ ಕೈ ಹಿಡಿದು ಆಪ್ತತೆಯಿಂದ ಮಾತನಾಡುತ್ತಿರುವುದು ಫೋಟೋದಲ್ಲಿ ನೋಡಬಹುದಾಗಿದೆ. ಈ ಪೋಸ್ಟ್‌ಗೆ ಶಿಲ್ಪಾ ಶೆಟ್ಟಿ( Shilpa Shetty), ಅನುಪಮ್ ಖೇರ್ ಸೇರಿದಂತೆ ಹಲವು ಮೆಚ್ಚುಗೆ ಸೂಚಿಸಿದ್ದಾರೆ.

    ನಟ ಮಾಧವನ್ ಸಿನಿಮಾಗಳಲ್ಲಿ ಮಿಂಚುತ್ತಿದ್ದರೆ. ಅವರ ಮಗ ವೇದಾಂತ್ ಕ್ರೀಡೆಯಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ಈಜು ಕ್ರೀಡೆಯಲ್ಲಿ ಈಗಾಗಲೇ ವೇದಾಂತ್ ಮಾಧವನ್ ಹಲವು ಬಾರಿ ಪದಕಗಳನ್ನು ಗೆದ್ದಿದ್ದಾರೆ. 17ನೇ ವಯಸ್ಸಿನಲ್ಲಿ, ಅವರು ಈಜು ಸ್ಪರ್ಧೆಗಳಲ್ಲಿ ಅನೇಕ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಜೊತೆಗೆ ಭಾರತದ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಕ್ಷಯ್‌ ಕುಮಾರ್‌ ನಟನೆಯ ಸಿನಿಮಾಗೆ ನಟ ಮಾಧವನ್‌ ಎಂಟ್ರಿ

    ಅಕ್ಷಯ್‌ ಕುಮಾರ್‌ ನಟನೆಯ ಸಿನಿಮಾಗೆ ನಟ ಮಾಧವನ್‌ ಎಂಟ್ರಿ

    ಕಾಲಿವುಡ್ ಸೂಪರ್ ಸ್ಟಾರ್ ಆರ್.ಮಾಧವನ್‌ಗೆ (Madhavan) ಮತ್ತೆ ಬಾಲಿವುಡ್‌ನಿಂದ ಬಂಪರ್ ಆಫರ್ ಬರುತ್ತಿದೆ. `ರಾಕೆಟ್ರಿ- ದಿ ನಂಬಿ ಎಫೆಕ್ಟ್’ (Rocketary-The Nambi Effect) ಚಿತ್ರದ ಮತ್ತಷ್ಟು ಆಫರ್‌ಗಳು ಮಾಧವನ್‌ಗೆ ಅರಸಿ ಬರುತ್ತಿದೆ. ಈ ಹಿಂದೆನೇ ಬಾಲಿವುಡ್‌ನ (Bollywood) ಸಾಕಷ್ಟು ಸಿನಿಮಾಗೆ ಬಣ್ಣ ಹಚ್ಚಿರುವ ನಟ ಈಗ ನಟ ಅಕ್ಷಯ್‌ ಕುಮಾರ್‌ ನಟನೆಯ ಚಿತ್ರಕ್ಕೆ ಮಾಧವನ್ ಓಕೆ ಅಂದಿದ್ದಾರೆ.

    ಸೌತ್ ಸಿನಿಮಾಗಳನ್ನ ಕಡೆಗಣಿಸುವ ಕಾಲ ಈಗ ಬದಲಾಗಿದೆ. ಬಾಲಿವುಡ್ ಈಗ ದಕ್ಷಿಣ ಸಿನಿಮಾರಂಗ ಕಲಾವಿದರಿಗೆ ಮಣೆ ಹಾಕ್ತಿದ್ದಾರೆ. ಸದ್ಯ ತಮಿಳಿನ ನಟ ಮಾಧವನ್‌ಗೆ ಹಿಂದಿ ಸಿನಿಮಾರಂಗದಿಂದ ಬುಲಾವ್ ಬರುತ್ತಿದೆ. ʻತ್ರಿ ಈಡಿಯಟ್ಸ್ʼ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಮಾಧವನ್ ಮತ್ತೆ ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಬಿಟೌನ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಜೊತೆ ಮಾಧವನ್ ಕೂಡ ಅಬ್ಬರಿಸುತ್ತಿದ್ದಾರೆ.

    ಬ್ರಿಟಿಷರ (British) ವಿರುದ್ಧ ತೊಡೆ ತಟ್ಟಿದ ಸಿ. ಶಂಕರನ್ ನಾಯರ್ (C.Shankaran Nair) ಎಂಬ ಜನಪ್ರಿಯ ವಕೀಲರ ಕುರಿತು ಬಾಲಿವುಡ್‌ನಲ್ಲಿ ಬಯೋಪಿಕ್ ಮಾಡಲು ತಯಾರಿ ನಡೆಯುತ್ತಿದೆ. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಶಂಕರನ್ ನಾಯರ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಬಂದ ತಮಿಳಿನ ಖ್ಯಾತ ನಟ ಯೋಗಿ ಬಾಬು

    ಈಗ ಈ ಚಿತ್ರತಂಡಕ್ಕೆ ಮಾಧವನ್ ಕೂಡ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ವಕೀಲರಾಗಿ ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ. ಜಲಯನ್‌ವಾಲಾ ಬಾಗ್ ಹತ್ಯಾಕಾಂಡದ ಕುರಿತು ತೆರೆಯ ಮೇಲೆ ಸಿನಿಮಾ ತೋರಿಸಲು ರೆಡಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಮಿಳಿನ ಸ್ಟಾರ್ ನಟನಿಗಾಗಿ ಸಂಭಾವನೆ ಪಡೆಯದೆ ನಟಿಸಿದ ಶಾರುಖ್ ಖಾನ್

    ತಮಿಳಿನ ಸ್ಟಾರ್ ನಟನಿಗಾಗಿ ಸಂಭಾವನೆ ಪಡೆಯದೆ ನಟಿಸಿದ ಶಾರುಖ್ ಖಾನ್

    ಬಿಟೌನ್ ಸ್ಟಾರ್ ಶಾರುಖ್ ಖಾನ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಈ ಮಧ್ಯೆ ತಮಿಳಿನ ಸೂಪರ್ ಸ್ಟಾರ್ ಒಬ್ಬರ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಂಭಾವನೆ ಡಿಮ್ಯಾಂಡ್ ಮಾಡದೇ ನಟಿಸಿ ಬಂದಿದ್ದಾರೆ. ಈ ಕುರಿತು ಫಿಲ್ಮಿಂ ನಗರಿಯಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

    ಶಾರುಖ್ ಖಾನ್ ಬತ್ತಳಿಕೆಯಲ್ಲಿ ಬಿಗ್ ಬಜೆಟ್ ಸಿನಿಮಾಗಳಿರುವಾಗ ಕೊಂಚ ಬಿಡುವು ಮಾಡಿಕೊಂಡು ಸ್ನೇಹಿತನ ಸಿನಿಮಾಗೆ ಸಾಥ್ ನೀಡಿದ್ದಾರೆ. ಕಾಲಿವುಡ್ ಸ್ಟಾರ್ ಮಾಧವನ್ ನಟನೆಯ ನಿರೀಕ್ಷಿತ ರಾಕೆಟ್ರಿ ಚಿತ್ರದಲ್ಲಿ ಹಣ ಪಡೆಯದೇ ನಟಿಸಿ ಬಂದಿದ್ದಾರೆ. ಈ ಕುರಿತು ನಟ ಮಾಧವನ್ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ

    ತಮಿಳಿನ ನಟ ಆರ್.ಮಾಧವನ್ ಅವರ `ರಾಕೆಟ್ರಿ’ ಸಿನಿಮಾ ಮುಂದಿನ ವಾರ ಬಿಡುಗಡೆ ಆಗುತ್ತಿದ್ದು, ಸಿನಿಮಾದಲ್ಲಿ ಶಾರುಖ್ ಖಾನ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಅವರು ಸಂಭಾವನೆ ಪಡೆದಿಲ್ಲವಂತೆ. ಅಲ್ಲದೆ ಆ ಸಿನಿಮಾದಲ್ಲಿ ತಾವು ನಟಿಸಲೇ ಬೇಕು ಎಂದು ಪಟ್ಟು ಹಿಡಿದು ಕೇಳಿದರಂತೆ ಶಾರುಖ್ ಖಾನ್. ಈ ಬಗ್ಗೆ ಆರ್.ಮಾಧವನ್ ಸಂದರ್ಶನದಲ್ಲಿ ಹೇಳಿದ್ದಾರೆ.

    ಈ ಹಿಂದೆ ಶಾರುಖ್ ಖಾನ್ ಜೊತೆಗೆ `ಜೀರೋ’ ಸಿನಿಮಾ ಚಿತ್ರೀಕರಣ ಮಾಡುವಾಗ ನಾನು ಅದರಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆಗ ನಾನು ಶಾರುಖ್ ಖಾನ್‌ಗೆ `ರಾಕೆಟ್ರಿ’ ಸಿನಿಮಾದ ಕತೆ ಹೇಳಿದ್ದೆ. ಅಂದು ಅವರಿಗೆ ಈ ಕಥೆ ಇಷ್ಟವಾಗಿತ್ತು.ನಂತರ ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಹೋದಾಗ ಮ್ಯಾಡಿ, ನಾನು ನಿನ್ನ ಸಿನಿಮಾದಲ್ಲಿ ನಟಿಸುತ್ತೇನೆ. ನನಗೆ ಒಂದು ಸಣ್ಣ ಪಾತ್ರ ಕೊಡು ಸಾಕು ಎಂದಿದ್ದರು. ನನ್ನ ಮೇಲಿನ ಪ್ರೀತಿಗೆ ಹೇಳುತ್ತಿದ್ದಾರೆ ಎಂದುಕೊಂಡು ಥ್ಯಾಂಕ್ಸ್ ಹೇಳಿದೆ, ಆಗ ಶಾರುಖ್ ಖಾನ್ ಇಲ್ಲ ನಾನು ಸೀರಿಯಸ್ ಆಗಿದ್ದೇನೆ ಎಂದರು ಎಂದು ಮಾಧವನ್ ನೆನಪು ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by R. Madhavan (@actormaddy)

    ಬಳಿಕ ಶಾರುಖ್ ಮ್ಯಾನೇಜರ್ ನನಗೆ ಕರೆ ಮಾಡಿ, `ರಾಕೆಟ್ರಿ’ ಚಿತ್ರಕ್ಕೆ ಯಾವಾಗ ಡೇಟ್ಸ್ ಬೇಕು ಎಂದು ಕೇಳಿದಾಗ ಶಾರುಖ್ ಬೆಂಬಲಕ್ಕೆ ಖುಷಿಯಾದೆ. ರಾಕೆಟ್ರಿ ಚಿತ್ರದಲ್ಲಿ ಶಾರುಖ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಈ ವೇಳೆ ಮಾಧವನ್ ರಿವೀಲ್ ಮಾಡಿದ್ದಾರೆ. ಒಟ್ನಲ್ಲಿ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿದ್ದರು. ಭಾಷೆಗೂ ಮೀರಿದ ಸ್ನೇಹ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    Live Tv

  • ಮಹಿಳೆ ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥಮಾಡಿಕೊಳ್ಳಬೇಕು: ಮಾಧವನ್

    ಮಹಿಳೆ ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥಮಾಡಿಕೊಳ್ಳಬೇಕು: ಮಾಧವನ್

    ಮುಂಬೈ:  ಮಹಿಳೆಯರು ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು ಎಂದು ಬಾಲಿವುಡ್ ನಟ ಮಾಧವನ್ ಹೇಳಿದ್ದಾರೆ.

    ಲಿಂಗ ತಾರತಮ್ಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಸಕ್ರಿಯವಾಗಿ ಏನನ್ನೂ ಮಾಡದಿದ್ದರೂ, ತಮ್ಮ ನಿಯಮಗಳನ್ನು ತೊಡೆದುಹಾಕುವುದು ಅತ್ಯಂತ ಮುಖ್ಯವಾದ ವಿಷಯ ಎಂದು ನಾನು ಭಾವಿಸುತ್ತೇನೆ. ಆದರೆ ಎಲ್ಲದಕ್ಕೂ ಪುರುಷರನ್ನು ದೂಷಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಈ ನಿಯಮಗಳಲ್ಲಿ ಬೆಳೆದು ಬಂದಿದ್ದಾರೆ ಎಂದು ವಿವರಿಸಿದ ಅವರು, ಪುರುಷ ಮತ್ತು ಮಹಿಳೆಯರ ಕೆಲಸ ಹೇಗೆ ಹಂಚಿಕೆಯಾಗಿದೆ ಎಂಬುದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!
    ಮಹಿಳೆಯರು ಮತ್ತು ಪುರುಷರು ಬೆಳೆದು ಬರುವ ವಾತಾವರಣದಿಂದ ವ್ಯಕ್ತಿತ್ವ ನಿರ್ಧಾರವಾಗುತ್ತೆ. ಇದರಲ್ಲಿ ಜನರದ್ದು ಏನೂ ತಪ್ಪಿಲ್ಲ. ಕುಟುಂಬವೂ ಮೊದಲು ಶಿಕ್ಷಣ ಕೊಡಬೇಕು. ಕುಟುಂಬವೇ ಮಹಿಳೆಯರನ್ನು ಕೆಲವೊಮ್ಮೆ ನಿರ್ಬಂಧಿಸುವ ವಿಷಯಗಳು ಇವೆ ಎಂಬುದು ನನ್ನ ಭಾವನೆ ಎಂದು ಹೇಳಿದ್ದಾರೆ.

    ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಬಲಶಾಲಿಗಳು. ಪುರುಷರಿಗೆ ಈ ವಿಷಯವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತೆ. ಆದರೆ ಇದು ಸತ್ಯ. ಮಹಿಳೆಯರು ಬೆಳೆದಂತೆ ಅವರ ಬುದ್ದಿಶಕ್ತಿ ಹೆಚ್ಚಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

    Actor Madhavan Family Members Wife, Son, Father, Mother Photos & Biography - YouTube

    ನನ್ನ ಮನೆಯಲ್ಲಿ ಎಲ್ಲ ಮಹಿಳೆಯರು ಪವರ್‌ಫುಲ್ ಆಗಿದ್ದಾರೆ. ನನ್ನ ತಾಯಿ, ಅಜ್ಜಿ ಎಲ್ಲರು ಮಾತೃಪ್ರಧಾನವಾಗಿ ಮನೆಯನ್ನು ನಡೆಸುತ್ತಾರೆ. ಇದರಿಂದ ನಮ್ಮ ಮನೆಯಲ್ಲಿ ಪುರುಷರು ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತ ಸಂತೋಷವಾಗಿದ್ದಾರೆ. ಅವರು ಕಾಳಜಿ ವಹಿಸುವುದು, ನಮ್ಮನ್ನು ನೋಡಿಕೊಳ್ಳುವ ರೀತಿ ನೋಡಿದರೆ ಸಂತೋಷವಾಗುತ್ತೆ ಎಂದು ತಿಳಿಸಿದ್ದಾರೆ.

  • ದುಬೈನಲ್ಲಿ ಫ್ಯಾಮಿಲಿ ಜೊತೆ ಮಾಧವನ್ ಎಂಜಾಯ್

    ದುಬೈನಲ್ಲಿ ಫ್ಯಾಮಿಲಿ ಜೊತೆ ಮಾಧವನ್ ಎಂಜಾಯ್

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಮಾಧವನ್ ಕುಟುಂಬದ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದು, ಫೊಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮಾಧವನ್, ಭಾಗ್ಯಶ್ರೀ ಮತ್ತು ರೋಹಿತ್ ರಾಯ್ ದುಬೈಗೆ ಹೋಗಿದ್ದಾರೆ. ದುಬೈಗೆ ಭಾಗ್ಯಶ್ರೀ ತನ್ನ ಪತಿ ಹಿಮಾಲಯ ದಾಸನಿಯೊಂದಿಗೆ ಬಂದಿದ್ದು, ಮಾಧವನ್ ಅವರ ಪತ್ನಿ ಸರಿತಾ ಬಿರ್ಜೆ ಜೊತೆಗೆ ಬಂದಿದ್ದರು. ಎಲ್ಲರೂ ಸೇರಿ ದುಬೈನಲ್ಲಿ ‘ನೈಟ್ ಔಟ್’ ಮಾಡಿದ್ದು, ಆ ಚಿತ್ರಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಭಾಗ್ಯ ಬಿಳಿ ಟಪ್ ಮತ್ತು ಕಪ್ಪು ಶಾರ್ಟ್ಸ್ ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಇದನ್ನೂ ಓದಿ: ರಾಯನ್‍ಗೆ 11 ತಿಂಗಳು- ಕ್ಯೂಟ್ ವೀಡಿಯೋ ಹಂಚಿಕೊಂಡ ಮೇಘನಾ

     

    View this post on Instagram

     

    A post shared by Bhagyashree (@bhagyashree.online)

    ಮಾಧವನ್ ಕಪ್ಪು ಟೀ ಶರ್ಟ್ ಮತ್ತು ಬ್ರೌನ್ ಪ್ಯಾಂಟ್ ನಲ್ಲಿ ಮತ್ತು ನಟ ರೋಹಿತ್ ರಾಯ್ ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದು, ಇಬ್ಬರು ಹ್ಯಾಂಡ್ಸಮ್ ಆಗಿ ಕಾಣಿಸುತ್ತಿದ್ದಾರೆ.

    ಈ ಫೊಟೋಗಳನ್ನು ಭಾಗ್ಯ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ‘ದುಬೈ ಡೈರೀಸ್’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Rohit Bose Roy (@rohitboseroy)

    ನಟ ರೋಹಿತ್ ರಾಯ್ ಅವರು ಕೂಡ ಇನ್‍ಸ್ಟಾದಲ್ಲಿ, ಸಹೋದರರು ಮರಳಿದ್ದಾರೆ. ಒಂದು ವರ್ಷದ ನಂತರ ಅದೇ ಸ್ಥಳದಲ್ಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:   ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿಗೆ ಸಹಾಯ ಕೋರಿದ ಮಂಜು

    ಮಾಧವನ್ ಹಿಂದಿ, ತಮಿಳು, ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಾಲಿವುಡ್ ಚಿತ್ರಗಳಲ್ಲಿ 3 ಈಡಿಯಟ್ಸ್, ರಂಗ್ ದೇ ಬಸಂತಿ, 13 ಬಿ, ತನು ವೆಡ್ಸ್ ಮನು, ಗುರು, ರೆಹನಾ ಹೈ ಟೆರ್ರೆ ದಿಲ್ ಮೇ ಮತ್ತು ಜೀರೋ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳು. ಪ್ರಸ್ತುತ ಮಾಧವನ್ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ.