Tag: ಮಾಟ ಮಂತ್ರ

  • ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯ ಶಿರಶ್ಛೇದನ – ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟ ಆರೋಪಿಗಳು

    ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯ ಶಿರಶ್ಛೇದನ – ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟ ಆರೋಪಿಗಳು

    ಪಾಟ್ನಾ: ಮಾಟಮಂತ್ರದ (Black magic) ಹೆಸರಿನಲ್ಲಿ ವ್ಯಕ್ತಿಯೊಬ್ಬರ ಶಿರಶ್ಛೇದನ ಮಾಡಿ ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟು ಹಾಕಿರುವ ಘಟನೆ ಬಿಹಾರದ (Bihar) ಔರಂಗಾಬಾದ್‌ನಲ್ಲಿ (Aurangabad) ನಡೆದಿದೆ.

    ಮೃತ ವ್ಯಕ್ತಿಯನ್ನು ಯುಗುಲ್ ಯಾದಲ್(65) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಗಳಾದ ಮಾಂತ್ರಿಕನ ಸಂಬಂಧಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿ ರಾಮಶಿಶ್ ರಿಕ್ಯಾಸನ್ ಎಂಬ ಮಾಂತ್ರಿಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಡ್‌ರೂಮ್ ಫೋಟೋ ಹಂಚಿಕೊಂಡ ‘ಗಿಲ್ಲಿ’ ನಟಿ ರಕುಲ್

    ಮಾ.13ರಂದು ಗುಲಾಬ್ ಬಿಘಾ ಗ್ರಾಮದ ನಿವಾಸಿ ಯುಗುಲ್ ಯಾದವ್ ನಾಪತ್ತೆಯಾಗಿದ್ದಾರೆ ಎಂದು ದೂರು ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ಅವರನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ತನಿಖೆಯ ಸಮಯದಲ್ಲಿ, ಬಂಗೇರ್ ಗ್ರಾಮದಲ್ಲಿ ಹೋಳಿಕಾ ದಹನ ಬೆಂಕಿಯ ಚಿತಾಭಸ್ಮದಿಂದ ಮಾನವ ಮೂಳೆಗಳು ಪತ್ತೆಯಾಗಿವೆ ಎಂದು ಔರಂಗಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಅಂಬರೀಶ್ ರಾಹುಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಭರ್ಜರಿ ಜಯಗಳಿಸಿದ ಆರ್‌ಸಿಬಿ ಹಾಡಿಹೊಗಳಿದ ಡಿವಿಲಿಯರ್ಸ್‌

    ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿದಾಗ ಸುಟ್ಟ ಮಾನವ ಮೂಳೆಗಳು ಮತ್ತು ಯುಗುಲ್ ಅವರ ಚಪ್ಪಲಿಗಳು ಕಂಡುಬಂದಿವೆ. ತಕ್ಷಣವೇ ಶ್ವಾನ ದಳವನ್ನು ನಿಯೋಜಿಸಲಾಯಿತು. ಶ್ವಾನವು ತನಿಖಾಧಿಕಾರಿಗಳನ್ನು ಮಾಂತ್ರಿಕ ರಾಮಶಿಶ್ ರಿಕ್ಯಾಸನ್ ಮನೆಗೆ ಕರೆದೊಯ್ಯಿತು. ರಾಮಶಿಶ್ ಮನೆಯಲ್ಲಿ ಇಲ್ಲದಿದ್ದಾಗ, ಈ ಕೃತ್ಯದಲ್ಲಿ ಆತನ ಸಂಬಂಧಿ ಧರ್ಮೇಂದ್ರ ಭಾಗಿಯಾಗಿರುವ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ಇದನ್ನೂ ಓದಿ: ಸಿಎಸ್‌ಕೆ ಸೋಲಿಸಿ ಬೆಂಗಳೂರಿಗೆ ಆರ್‌ಸಿಬಿ ಟೀಂ ಗ್ರ್ಯಾಂಡ್‌ ಎಂಟ್ರಿ – ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಜಯಘೋಷ

    ವಿಚಾರಣೆಯ ಸಮಯದಲ್ಲಿ, ಧರ್ಮೇಂದ್ರ ತಾನು ಮತ್ತು ಇತರರು ಮಾಟಮಂತ್ರದ ಭಾಗವಾಗಿ ಯುಗಲ್‌ನನ್ನು ಅಪಹರಿಸಿ ಶಿರಚ್ಛೇದ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಹೋಳಿಕಾ ದಹನ್ ಬೆಂಕಿಯಲ್ಲಿ ಯುಗಲ್ ಮುಂಡವನ್ನು ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಹಣಗಳಿಸಲು ಇಬ್ಬರು ಮಹಿಳೆಯರ ನರಬಲಿ ಕೊಟ್ಟ ಪಾಪಿಗಳು

    ಹಣಗಳಿಸಲು ಇಬ್ಬರು ಮಹಿಳೆಯರ ನರಬಲಿ ಕೊಟ್ಟ ಪಾಪಿಗಳು

    ತಿರುವನಂತಪುರಂ: ನಾಪತ್ತೆಯಾಗಿದ್ದ ಮಹಿಳೆಯರಿಬ್ಬರು ಕತ್ತು ಸೀಳಿ ದೇಹಗಳ ಭಾಗವೆಲ್ಲವೂ ಬೇರೆ ಬೇರೆಯಾಗಿ ಹೂತಿದ್ದ ರೀತಿಯಲ್ಲಿ ಪತ್ತೆಯಾಗಿದ್ದು, ಹಣಕ್ಕಾಗಿ ಅವರಿಬ್ಬರನ್ನು ನರಬಲಿ (Human Sacrifice) ಕೊಟ್ಟಿರುವ ಘಟನೆ ಕೇರಳದಲ್ಲಿ (Kerala) ನಡೆದಿದೆ.

    ಪದ್ಮಾ (52) ಮತ್ತು ರೋಸ್ಲಿನ್ (50) ಮೃತ ಮಹಿಳೆಯರು. ಎರ್ಬಾಕುಲಂ ಜಿಲ್ಲೆಯ ಪ್ರತ್ಯೇಕ ಊರಿನವರಾಗಿದ್ದ ರೋಸ್ಲಿನ್ ಹಾಗೂ ಪದ್ಮಾರನ್ನು ಮಾಂತ್ರಿಕ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಸೇರಿ ಹೆಚ್ಚು ಹಣ ಗಳಿಸಲು (Financial Troubles)  ನರಬಲಿ ನೀಡಿದ್ದಾರೆ. ಇದಕ್ಕಾಗಿ ಶಿಹಾಬ್ ಎಂಬಾತನ ಸಹಾಯ ಪಡೆದು ಅವನಿಗೂ ಕೆಲ ಆಮಿಷವೊಡ್ಡಿ ನಂಬಿಸಿದ್ದರು. ಇವರು ಹೇಳಿದ್ದ ಆಮಿಷಕ್ಕೆ ಬಲಿಯಾದ ಶಿಹಾಬ್ ಪದ್ಮಾ ಹಾಗೂ ರೋಸ್ಲಿನ್‍ನ್ನು ಅಪಹರಿಸಿದ್ದ.

    ಘಟನೆಗೆ ಸಂಬಂಧಿಸಿ ಸೆ. 26ರಂದು ಕಡವಂತ್ರದಿಂದ ಪದ್ಮಾ ನಾಪತ್ತೆಯಾಗಿದ್ದ ಸಂದರ್ಭದಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಕಾಲಡಿಯಿಂದ ರೋಸ್ಲಿನ್ ಇದೇ ರೀತಿ ನಾಪತ್ತೆ ಆಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಪದ್ಮಾ ಅವರ ಮೊಬೈಲ್ ಸಿಗ್ನಲ್ ತಿರುವಲ್ಲಾನಲ್ಲಿ ಟ್ರ್ಯಾಕ್ ಮಾಡಿದ್ದಾರೆ. ಇದಾದ ಬಳಿಕ ಹೆಚ್ಚಿನ ತನಿಖೆ ಕೈಗೊಂಡ ಪೊಲೀಸರಿಗೆ ತಿರುವಲ್ಲಾದಲ್ಲಿ ಇಬ್ಬರು ಮಹಿಳೆಯರ ದೇಹಗಳು ಕತ್ತು ಸೀಳಿ, ತುಂಡು ತುಂಡಾಗಿ ಕತ್ತರಿಸಿ ಹೂಳಲಾದ ಶವವಾಗಿ ಪತ್ತೆಯಾಗಿದೆ.

    ಘಟನೆಗೆ ಸಂಬಂಧಿಸಿ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಮತ್ತು ಏಜೆಂಟ್ ಶಿಹಾಬ್‍ನನ್ನು ಬಂಧಿಸಿದ್ದಾರೆ. ಈ ಬಗ್ಗೆ ಕೊಚ್ಚಿ ನಗರ ಪೊಲೀಸ್ ಆಯಕ್ತರು ಮಾತನಾಡಿ, ಇಬ್ಬರು ಮಹಿಳೆಯರನ್ನು ಕೊಂದು ಅವರ ಮನೆಯ ಸಮೀಪ ಹೂಳಲಾಗಿದೆ. ಈ ಕೊಲೆಯು ನರಬಲಿಯ ಭಾಗವಾಗಿತ್ತು. ಇದೇ ರೀತಿ ಮತ್ತೂ ಒಂದು ಪ್ರಕರಣವು ವರದಿಯಾಗಿದೆ. ಅದನ್ನು ಖಚಿತ ಪಡಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: BJP ಸರ್ಕಾರವನ್ನು ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ: ಸಿದ್ದರಾಮಯ್ಯ

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಡಬಲ್ ಮರ್ಡರ್ ಎಂಬುದು ಮಾನವನ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಆತ್ಮ ಸಾಕ್ಷಿ ಇರುವವರು ಇಂತಹ ಕೃತ್ಯದಲ್ಲಿ ಭಾಗಿಯಾಗಿರಬಾರದು. ಮೂಢನಂಬಿಕೆಗಾಗಿ ಜನರನ್ನು ಕೊಲ್ಲುವುದು ಕೇರಳದಲ್ಲಿ ಯೋಚಿಸಲಾಗದ ಅಪರಾಧವಾಗಿದೆ ಎಂದರು. ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತೆಗೆ ಬೆಂಕಿಯಿಟ್ಟ ಆರೋಪಿ ತಾಯಿ, ಸಹೋದರಿ

    Live Tv
    [brid partner=56869869 player=32851 video=960834 autoplay=true]

  • ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

    ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

    ಮುಂಬೈ: ಮಗನ ಅಂಗವೈಕಲ್ಯವನ್ನು ಗುಣಪಡಿಸುತ್ತೇನೆ ಅಂತ 36 ವರ್ಷದ ಮಹಿಳೆಯ ಮೇಲೆ 60 ವರ್ಷದ ಸ್ವಯಂಘೋಷಿತ ದೇವಮಾನವ ಅತ್ಯಾಚಾರವೆಸಗಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಆರೋಪಿ ದೇವಮಾನವನನ್ನು ಮಾಟಮಂತ್ರ ಮಾಡುವ ಧನಂಜಯ್ ಗೋಹದ್ ಅಲಿಯಾಸ್ ನಾನಾ (60) ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಆತನ ಸಹಚರ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಮಾನ ಪತನದ ಸ್ಥಳದಲ್ಲಿ 16 ಮೃತದೇಹ ಪತ್ತೆ- ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ

    RAPE CASE

    ಶನಿವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ತನ್ನ ಅಂಗವಿಕಲ ಮಗನಿಗೆ ಚಿಕಿತ್ಸೆ ಕೊಡಿಸಲು ಹುಡುಕಾಟ ನಡೆಸುತ್ತಿದ್ದ ವೇಳೆ 2021ರ ಜನವರಿಯಂದು ಮಹಿಳೆಗೆ ಆರೋಪಿಯ ಪರಿಚಯವಾಗಿದೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ‘ಮಂತ್ರ ಮಾಂಗಲ್ಯ’ ಮದುವೆ ಮೂಲಕ ಮಾದರಿಯಾದ ನಿರ್ದೇಶಕ ಕೆ.ಎಂ. ರಘು

    ಏಪ್ರಿಲ್ ತಿಂಗಳಿನಲ್ಲಿ ಧನಂಜಯ್ ಗೊಹಾದ್ ಋಣಾತ್ಮಕ ಶಕ್ತಿಗಳನ್ನು ತೆಗೆದುಹಾಕುವ ನೆಪದಲ್ಲಿ ತನ್ನ ನಿವಾಸಕ್ಕೆ ಬಂದು ಬಟ್ಟೆ ಬಿಚ್ಚುವಂತೆ ಕೇಳಿಕೊಂಡನು. ನಂತರ ಗೋಹಾದ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಈ ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ತನ್ನ ಪತಿ ಮತ್ತು ಸಹೋದರ ಅಪಘಾತದಲ್ಲಿ ಸಾಯುತ್ತಾರೆ. ಅಲ್ಲದೆ ಜನಿಸುವ ಎರಡನೇ ಮಗು ಅಂಗವಿಕಲತೆಯಿಂದ ಹುಟ್ಟುತ್ತದೆ ಎಂದು ಬೆದರಿಕೆಯೊಡ್ಡಿದ್ದಾನೆ. ಆರೋಪಿ ತನ್ನ ಮಗನನ್ನು ಗುಣಪಡಿಸಲು ಮಾಟಮಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.

    ಮೇ 27 ರಂದು ಘಟನೆ ಸಂಬಂಧ ಮಹಿಳೆ ಹದಾಸ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಪ್ರಕರಣ ದಾಖಲಿಸಿದ್ದಾರೆ

  • ಮಾಟಕ್ಕೆ ಒಳಗಾದ ಮಹಿಳೆಗೆ ಚಾಟಿಯಿಂದ ಹೊಡೆದ ಪೂಜಾರಿ

    ಮಾಟಕ್ಕೆ ಒಳಗಾದ ಮಹಿಳೆಗೆ ಚಾಟಿಯಿಂದ ಹೊಡೆದ ಪೂಜಾರಿ

    ಚೆನ್ನೈ: ಮಾಟಕ್ಕೆ ಒಳಗಾಗಿದ್ದಾಳೆ ಎಂದು ಶಂಕಿಸಲಾದ ಮಹಿಳೆಯರಿಗೆ ಪೂಜಾರಿಯೊಬ್ಬರು ಚಾಟಿಯಿಂದ ಹೊಡೆಯುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಜಿಲ್ಲೆಯ ರಾಸಿಪುರಂ ಬಳಿಯ ನರೈಕಿನಾರ್ ಗ್ರಾಮದಲ್ಲಿ ನಡೆಸಲಾದ ಈ ಧಾರ್ಮಿಕ ಆಚರಣೆಯಲ್ಲಿ, ಪೂಜಾರಿ ಕಾಟೇರಿ (ಕೆಟ್ಟದ್ದನ್ನು ದೂರವಿಡಲು ಗ್ರಾಮಸ್ಥರು ಪ್ರಾರ್ಥಿಸುವ ದೇವತೆಯ ರೂಪ) ವೇಷಭೂಷಣವನ್ನು ಧರಿಸಿ ಹಲವಾರು ಮಹಿಳೆಯರಿಗೆ ಚಾಟಿಯಿಂದ ಹೊಡೆಯುತ್ತಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ

    ಈ ಆಚರಣೆಯು 20 ವರ್ಷಗಳ ನಂತರ ನಡೆಯುತ್ತಿದ್ದು, ಮಾಟ ಮಂತ್ರಕ್ಕೆ ಒಳಗಾದ ಮಹಿಳೆಯರನ್ನು ಪೂಜಾರಿ ಹೊಡೆದರೆ ಅವರು ಶಾಪ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ

    ವೀಡಿಯೋದಲ್ಲಿ, ಕಪ್ಪು ವಸ್ತ್ರವನ್ನು ಧರಿಸಿರುವ ಪೂಜಾರಿ ಚಾಟಿಯನ್ನು ಹಿಡಿದು ಮಾಟ ಮಂತ್ರಕ್ಕೆ ಒಳಗಾಗಿರುವ ಮಹಿಳೆಯರಿಗೆ ಹೊಡೆಯುವುದನ್ನು ಕಾಣಬಹುದು. ಪೂಜಾರಿ ಮಹಿಳೆಯರಿಗೆ ಹೊಡೆಯಲು ಹೊರಟಾಗ ಅದನ್ನು ನೋಡುತ್ತಿರುವ ಸ್ಥಳೀಯ ಜನರು ಉತ್ಸಾಹದಿಂದ ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ.

    ಈ ಕಾರ್ಯಕ್ರಮವನ್ನು ಕುತೂಹಲದಿಂದ ನೋಡುತ್ತಿದ್ದ ಜನಸಮೂಹವು ತಮಿಳು ಭಾಷೆಯಲ್ಲಿ ಪೋಡು.. ಪೋಡು.. (ಥಳಿಸು.. ಥಳಿಸು..) ಎಂದು ಕೂಗುತ್ತಿರುತ್ತಾರೆ. ನಂತರ ಪೂಜಾರಿ ತನ್ನ ಚಾಟಿ ಎತ್ತಲು ಪ್ರಾರಂಭಿಸುತ್ತಾರೆ. ಈ ವೇಳೆ ಮಹಿಳೆ ಗೌರವದಿಂದ ತನ್ನ ಎರಡು ಕೈಗಳನ್ನು ಮಡಚಿ ನಮಸ್ಕರಿಸುತ್ತಾರೆ. ಮಡಚಿದ ಕೈಗಳನ್ನು ಮೇಲಕ್ಕೆತ್ತಿದ ನಂತರ ಪೂಜಾರಿ ಅವರನ್ನು ಚಾಟಿಯಿಂದ ಹೊಡೆಯಲು ಮುಂದಾಗುತ್ತಾರೆ.

    ಈ ಒಂದು ವಿಚಿತ್ರ ಆಚರಣೆಯನ್ನು ನೋಡಲು ಅಕ್ಕಪಕ್ಕದ 18 ಗ್ರಾಮಗಳ ಜನರು ಪಾಲ್ಗೊಂಡಿದ್ದರು. 20 ವರ್ಷಗಳ ನಂತರ ನಡೆದ ಕಾರಣ ಈ ಆಚರಣೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು. ಎರಡು ಗುಂಪುಗಳ ನಡುವಿನ ಘರ್ಷಣೆಯಿಂದ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಈ ಆಚರಣೆ ನಡೆದಿರಲಿಲ್ಲ.

    ನಾಮಕ್ಕಲ್ ಜಿಲ್ಲೆಯ ವರದರಾಜಪೆರುಮಾಳ್ ಚೆಲ್ಲಿಯಮ್ಮನ್ ಮಾರಿಯಮ್ಮನ್ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ದೇವಸ್ಥಾನದ ಉತ್ಸವಗಳು ಒಂದು ತಿಂಗಳ ಕಾಲ ನಡೆಯುತ್ತವೆ. ಇದು ಏಪ್ರಿಲ್ 29 ರಂದು ಪ್ರಾರಂಭವಾಗಿದ್ದು, ಮೇ 30 ರಂದು ಕೊನೆಗೊಳ್ಳಲಿದೆ.

  • ಎಮ್ಮೆಗಾಗಿ ಪಕ್ಕದ ಮನೆಯ ಬಾಲಕನನ್ನು ಕೊಂದ ದಂಪತಿ

    ಎಮ್ಮೆಗಾಗಿ ಪಕ್ಕದ ಮನೆಯ ಬಾಲಕನನ್ನು ಕೊಂದ ದಂಪತಿ

    – ದ್ವೇಷ ಸಾಧನೆಗೆ ಕಂಡಿದ್ದು 6ರ ಹುಡುಗ

    ಮುಂಬೈ: ಮನೆಯಲ್ಲಿ ಎಮ್ಮೆ ಸತ್ತಿದ್ದಕ್ಕೆ ಪಕ್ಕದ ಮನೆಯ ಬಾಲಕನನ್ನು ಹೊಡೆದು ಕೊಂದಿರುವ ದಂಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನ ಬೀಡ್ ಜಿಲ್ಲೆಯಲ್ಲಿ ನಡೆದಿದೆ.

    ರೋಹಿದಾಸ್ ಸಪ್ಕಲ್ ಮತ್ತು ಆತನ ಪತ್ನಿ ದೇವೀಬಾಯಿಯನ್ನು ಬಂಧಿಸಲಾಗಿದೆ. ಈ ದಂಪತಿ ಸಾಕಿದ್ದ ಎಮ್ಮೆ ಸಾವನ್ನಪ್ಪಿತ್ತು. ಈ ವಿಚಾರದಿಂದ ಮನನೊಂದ ದಂಪತಿ ನಮ್ಮ ಎಮ್ಮೆಯನ್ನು ಪಕ್ಕದ ಮನೆಯವರು ಮಾಟ ಮಂತ್ರ ಮಾಡಿಕೊಂದಿದ್ದಾರೆ ಎಂದು ಅವರ ಮನೆಯ ಬಾಲಕನನ್ನು ಕೊಲೆ ಮಾಡಿದ್ದಾರೆ.

    ಮನೆಯಲ್ಲಿ ಸಾಕಿದ್ದ ಎಮ್ಮೆ ಯಾವುದೋ ಕಾಯಿಲೆಯಿಂದ ಸಾವನ್ನಪ್ಪಿದೆ. ಆಗ ಎಮ್ಮೆ ಮಾಲೀಕರು ಎಮ್ಮೆಗೆ ಮಾಟ ಮಂತ್ರ ಮಾಡಿದ್ದರಿಂದಲೇ ಸಾವನ್ನಪ್ಪಿದೆ ಎಂದು ಭಾವಿಸಿದ್ದಾರೆ. ಎಮ್ಮೆ ಸಾಕಿದ್ದ ಮಾಲೀಕರಿಗೆ ಊರಲ್ಲಿ ಇರುವ ಒಂದು ಕುಟುಂಬಕ್ಕೆ ಮೊದಲಿನಿಂದಲು ಆಗುತ್ತಿರಲ್ಲಿಲ್ಲ. ಅವರೇ ಮಾಟ ಮಂತ್ರ ಮಾಡಿ ನಮ್ಮ ಎಮ್ಮೆಯನ್ನು ಕೊಂದಿದ್ದಾರೆ ಎಂದು ದ್ವೇಷ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಪಕ್ಕದ ಮನೆಯವರ ಮೇಲೆ ದ್ವೇಷ ಸಾಧನೆಗಾಗಿ ಕಾದಿದ್ದ ದಂಪತಿಗಳ ಕಣ್ಣಿಗೆ ಬಿದ್ದಿದ್ದು ಆ ಮನೆಯ 6 ವರ್ಷದ ಬಾಲಕ.

    ಒಂದು ದಿನ ಅಪ್ರಾಪ್ತ ಬಾಲಕ ಬೀದಿಯಲ್ಲಿ ಆಟವಾಡುತ್ತಿದ್ದನು. ಎಮ್ಮ ಮಾಲೀಕರಾದ ದಂಪತಿ ಬಾಲಕನನ್ನು ಅಪಹರಿಸಿ ಬಾಲಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಈ ಕೊಲೆ ಯಾರಿಗೂ ತಿಳಿಯಬಾರದು ಎಂದು ನಿರ್ಜನ ಪ್ರದೇಶದಲ್ಲಿ ಬಾಲಕನ ಶವವನ್ನು ಎಸೆದು ಮುಗ್ಧರಂತೆ ಊರಲ್ಲಿ ಓಡಾಡಿಕೊಂಡು ಇದ್ದರು. ಬಾಲಕನ ಶವ ಪೊಲೀಸರಿಗೆ ಸಿಕ್ಕ ಬಳಿಕ ತನಿಖೆಯನ್ನು ಚುರುಕುಗೊಳಿಸಲಾಗಿತ್ತು. ತನಿಖೆ ವೇಳೆ ದಂಪತಿ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

  • ಮಾಟ-ಮಂತ್ರದ ನೆಪದಲ್ಲಿ ಹಣ ದೋಚಲು ಯತ್ನಿಸಿದ ಮಂತ್ರವಾದಿ ಅರೆಸ್ಟ್

    ಮಾಟ-ಮಂತ್ರದ ನೆಪದಲ್ಲಿ ಹಣ ದೋಚಲು ಯತ್ನಿಸಿದ ಮಂತ್ರವಾದಿ ಅರೆಸ್ಟ್

    ಕೋಲಾರ: ಮಾಟ-ಮಂತ್ರ ಮಾಡಿಸುವ ನೆಪದಲ್ಲಿ ಹಣ ದೋಚಲು ಯತ್ನಿಸಿದ್ದ ಮಂತ್ರವಾದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಆಂಧ್ರಪ್ರದೇಶದ ಅನಂತಪುರ ಮೂಲದ ನೀಲಾದ್ರಿ ಬಂಧಿತ ಮಂತ್ರವಾದಿ. ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಗ್ರಾಮದ ರಾಘವೇಂದ್ರ ಎಂಬವರು ಮಂತ್ರವಾದಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

    ನಿಮ್ಮ ಮನೆಯಲ್ಲಿ ಸಮಸ್ಯೆಯಿದೆ, ಪೂಜೆ ಮಾಡಿಸಬೇಕು ಎಂದು ಮಂತ್ರವಾದಿ ನೀಲಾದ್ರಿ, ರಾಘವೇಂದ್ರ ಅವರಿಗೆ ಭಯ ಮೂಡಿಸಿದ್ದ. ಇದರಿಂದಾಗಿ ರಾಘವೇಂದ್ರ ಅವರು ಪೂಜೆ ಮಾಡಿಸಲು ಒಪ್ಪಿದ್ದರು. ಈ ಮೂಲಕ ನೀಲಾದ್ರಿ ಮನೆಗೆ ಬಂದು 40,000 ರೂ. ದೋಚಲು ಯತ್ನಿಸಿದ್ದ.

    ನೀಲಾದ್ರಿ ನಡೆಯಿಂದ ಅನುಮಾನ ವ್ಯಕ್ತಪಡಿಸಿದ ರಾಘವೇಂದ್ರ ಹಾಗೂ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರು. ತಕ್ಷಣವೇ ಗ್ರಾಮಕ್ಕೆ ಆಗಮಿಸಿದ ಪೊಲೀಸರು ನೀಲಾದ್ರಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

  • ಮಾಟ ಮಂತ್ರ ಮಾಡಿದ್ರೆ ನಮಗೆ ತಟ್ಟಲ್ಲ, ಮಾಡಿದವರಿಗೆ ಅದು ರಿವರ್ಸ್ ಆಗುತ್ತೆ- ರೇವಣ್ಣ

    ಮಾಟ ಮಂತ್ರ ಮಾಡಿದ್ರೆ ನಮಗೆ ತಟ್ಟಲ್ಲ, ಮಾಡಿದವರಿಗೆ ಅದು ರಿವರ್ಸ್ ಆಗುತ್ತೆ- ರೇವಣ್ಣ

    ಹಾಸನ: ನಮ್ಮ ಸರ್ಕಾರಕ್ಕೆ ಯಾರೇ ಮಾಟ ಮಂತ್ರ ಮಾಡಿದರೂ ತಟ್ಟಲ್ಲ, ಯಾರು ಮಾಡಿಸುತ್ತಾರೋ ಅವರಿಗೆ ಅದು ರಿವರ್ಸ್ ಆಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

    ಯಡಿಯೂರಪ್ಪ ಅವರು ಕೇರಳಕ್ಕೆ ಮಾಟ ಮಂತ್ರ ಮಾಡಿಸಿಕೊಂಡು ಬರಲು ಹೋಗಿದ್ದಾರೆ ಎನ್ನುವ ಸುದ್ದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾರೇ ಮಾಟ ಮಂತ್ರ ಮಾಡಿದರೂ ನಮಗೇನೂ ತಟ್ಟಲ್ಲ, ಯಾರು ಮಾಡಿಸುತ್ತಾರೋ ಅವರಿಗೆ ಅದು ರಿವರ್ಸ್ ಆಗುತ್ತದೆ ಎಂದು ಹೇಳಿದರು.

    ಹಾಸನ ಕ್ಷೇತ್ರಕ್ಕೆ ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳ ಆದೇಶದ ಪ್ರತಿ ತೋರಿಸಲಿ. ನಾವು ಕೇಂದ್ರದ ಜೊತೆ ಸತತ ಪ್ರಯತ್ನ ಮಾಡಿ ರಾಜ್ಯದಲ್ಲಿ ಹೆದ್ದಾರಿ ಯೋಜನೆಗಳನ್ನು ತಂದಿದ್ದೇವೆ. ರಾಜ್ಯ ಸರ್ಕಾರ 10 ರೂಪಾಯಿ ಕೂಡ ಕೊಟ್ಟಿಲ್ಲ. ವಿಷಯ ಗೊತ್ತಿದ್ದರೆ ಮಾತಾಡಲಿ ಇಲ್ಲವಾದರೆ ಸುಮ್ಮನಿರಲಿ ಎಂದು ಮಾಜಿ ಸಚಿವ ಶಿವರಾಂ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಯಡಿಯೂರಪ್ಪ ತಮ್ಮ ಅವಧಿಯಲ್ಲಿ ಹಾಸನಕ್ಕೆ ಏನು ಕಡಿದು ಕಟ್ಟೆ ಹಾಕಿದ್ದಾರೆ. ಬಿಜೆಪಿ-ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಏನು ಮಾಡಿದೆ ಎನ್ನುವುದನ್ನು ಹೇಳಲಿ ಎಂದು ಅವರು ಸವಾಲ್ ಹಾಕಿದ್ದಾರೆ.

    ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಚಾಲನೆ ನೀಡಿದ ಯೋಜನೆಗಳು ನಮ್ಮ ಅವಧಿಯಲ್ಲಿ ಮಾಡಿದ್ದು ಎಂದು ಶಿವರಾಂ ಹೇಳಿಕೊಂಡಿದ್ದಾರೆ. ನನ್ನ ಕಡೆಯಿಂದ ಕಾಂಗ್ರೆಸ್ ಸದಸ್ಯರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಸೇರಿ ಯಾವುದೇ ನಾಯಕರು ನನ್ನನ್ನು ಪ್ರಶ್ನಿಸಿದರೇ ಉತ್ತರ ಕೊಡಲು ಸಿದ್ಧ. ನಾನು ಸಮ್ಮಿಶ್ರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ವರ್ಗಾವಣೆ ಸೇರಿ ಯಾವುದೇ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಬೇಕಾದರೆ ಸಮನ್ವಯ ಸಮಿತಿ ಸಭೆಯಲ್ಲೇ ವಿವರಿಸಿ ಹೇಳುವೆ ಎಂದು ಹೇಳಿದ್ದಾರೆ.

    ಬದುಕಿರುವವರೆಗೂ ನಾನು, ಕುಮಾರಸ್ವಾಮಿ ಹೊಡೆದಾಡಲ್ಲ. ಸಹೋದರರು ಕಚ್ಚಾಡುತ್ತಾರೆ ಎಂದುಕೊಂಡಿದ್ದರೆ ಅದು ಭ್ರಮೆ. ನಾನು ಸಿಎಂ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು. ಹಾಗೆಯೆ ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿರಲಿದೆ ಎಂದು ವಿಶ್ವಾಸವಿದೆ.

    ಕುಲದೇವರು ಈಶ್ವರ, ಶೃಂಗೇರಿ ಶಾರದೆ ಆಶೀರ್ವಾದ ಇರೋವರೆಗೂ ಸರಕಾರಕ್ಕೆ ಏನೂ ಆಗಲ್ಲ. ಸಿದ್ದರಾಮಯ್ಯ ಹಾಗೂ ನನ್ನ ನಡುವೆ ರಾಜಕೀಯಕ್ಕೂ ಮೀರಿದ ಸಂಬಂಧವಿದೆ. ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವ ಕಾಡಾನೆ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಆನೆ ಕಾರಿಡಾರ್ ನಿರ್ಮಾಣ ಮಾಡಲು ಅಧಿವೇಶನದ ನಂತರ ಸಿಎಂ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಹೋಗಿ ಹಾಸನ ಸೇರಿ ರಾಜ್ಯದಲ್ಲಿರುವ ಆನೆ ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ರೇವಣ್ಣ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಟಮಂತ್ರಕ್ಕೆ ಹೆದರಿ, 33 ತೊಲ ಚಿನ್ನ ಕದ್ದ ಕಳ್ಳಿಯರನ್ನ ಬಂಧಿಸಲು ಹಿಂದೇಟು ಹಾಕ್ತಿರೋ ಪೊಲೀಸರು!

    ಮಾಟಮಂತ್ರಕ್ಕೆ ಹೆದರಿ, 33 ತೊಲ ಚಿನ್ನ ಕದ್ದ ಕಳ್ಳಿಯರನ್ನ ಬಂಧಿಸಲು ಹಿಂದೇಟು ಹಾಕ್ತಿರೋ ಪೊಲೀಸರು!

    ಹೈದರಾಬಾದ್: ಇಬ್ಬರು ಕಳ್ಳಿಯರನ್ನು ಬಂಧಿಸುವ ಬಗ್ಗೆ ಪೊಲೀಸರು ಹಿಂದೇಟು ಹಾಕುತ್ತಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಮಲ್ಕಾಜಿಗಿರಿಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿ ಜಿ. ರಾಘವಲು ಅವರ ಮನೆಯಲ್ಲಿ ಬಾಡಿಗೆಗಿದ್ದ ಹರಿಯಾಣ ಮೂಲದ ಇಬ್ಬರು ಮಹಿಳೆಯರು ಕಳ್ಳತನ ಮಾಡಿದ್ದರು. ಕುಟುಂಬದ ಸದಸ್ಯರಿಗೆ ಡ್ರಗ್ಸ್ ನೀಡಿ 2013ರ ನವೆಂಬರ್ ನಲ್ಲಿ ಮನೆಯಿಂದ 33 ತೊಲ ಚಿನ್ನವನ್ನು ಲೂಟಿ ಮಾಡಿ ಪರಾರಿಯಾಗಿದ್ದರು.

    ಈ ಘಟನೆ ಸಂಬಂಧ ಮಲ್ಕಾಜಿಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಘವುಲು ಅವರ ಪತ್ನಿ ಜಿ. ಅಂಜಮ್ಮ ಅವರು ಆರೋಪಿಗಳಾದ ಗಿನ್ನಿ ಮತ್ತು ಜ್ಯೋತಿಯ ವಿಳಾಸ ಮತ್ತು ವಿವರಗಳನ್ನು ನೀಡಿದ್ದರೂ, ಇಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ಬಂಧಿಸಲು ಪೊಲೀಸರು ಭಯಪಡುತ್ತಿದ್ದಾರೆ.

    ಆರೋಪಿಗಳಲ್ಲೊಬ್ಬಳು ಮಾಟ ಮಂತ್ರದಲ್ಲಿ ಪರಿಣಿತಳಾಗಿದ್ದು, ಅನೇಕ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ರು. ಆರೋಪಿಗಳನ್ನು ಬಂಧಿಸಿದ್ರೆ ಆಕೆ ಪೊಲೀಸರ ಮೇಲೆ ಮಾಟಮಂತ್ರ ಮಾಡಿ ಅವರಿಗೆ ಹಾನಿ ಉಂಟುಮಾಡಬಹುದು ಎಂದು ಭಯಪಡ್ತಿದ್ದಾರೆ ಅಂತ ಅಂಜಮ್ಮ ಹೇಳಿದ್ದಾರೆ.

    ಪೋಲಿಸರ ಸುಳ್ಳು ಭರವಸೆಗಳಿಂದ ಬೇಸತ್ತ ಅಂಜಮ್ಮ ರಾಚಕೊಂಡ ಕಮಿಷನರ್ ಮಹೇಶ್ ಭಾಗವತಮ್ ಬಳಿ ಹೋಗಿ ಶೀಘ್ರವಾಗಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಕೂಡ ಶೀಘ್ರ ತನಿಖೆಯ ಭರವಸೆ ನೀಡಿದ್ದಾರೆ.

    ಒಂದು ರಾತ್ರಿ ಗಿನ್ನಿ ಮತ್ತು ಜ್ಯೋತಿ ಬಂದು ನಮ್ಮ ಕುಟುಂಬದವರಿಗೆ ವಿಶೇಷ ಊಟವನ್ನು ನೀಡಿ ತಿನ್ನಲು ಒತ್ತಾಯಿಸಿದರು. ಅದನ್ನು ತಿಂದ ತಕ್ಷಣ ಕುಟುಂಬದ ಸದಸ್ಯರು ನಿದ್ದೆ ಮಾಡಿದೆವು. ಸ್ವಲ್ಪ ಸಮಯದ ನಂತರ ಎಚ್ಚರಗೊಂಡಾಗ ಚಿನ್ನದ ಆಭರಣಗಳ ಜೊತೆಗೆ ಮಹಿಳೆಯರು ಪರಾರಿಯಾಗಿದ್ದರು. ಪೊಲೀಸರು ಅನೇಕ ಬಾರಿ ಹರಿಯಾಣಕ್ಕೆ ಹೋಗಿದ್ದಾರೆ. ಆದರೆ ಅವರನ್ನು ಬಂಧಿಸದೆ ವಾಪಸ್ ಆಗಿದ್ದಾರೆ ಎಂದು ಅಂಜಮ್ಮ ತಿಳಿಸಿದ್ದಾರೆ.

  • ನಾನು ತೋರಿಸಿದ ವ್ಯಕ್ತಿಯ ಜೊತೆ ಹಾಸಿಗೆ ಹಂಚಿಕೊಂಡರೆ ಸಮಸ್ಯೆ ಬಗೆಹರಿಯುತ್ತೆ ಎಂದು ಅಮಾಯಕ ಮಹಿಳೆಯರಿಗೆ ಮೋಸ

    ನಾನು ತೋರಿಸಿದ ವ್ಯಕ್ತಿಯ ಜೊತೆ ಹಾಸಿಗೆ ಹಂಚಿಕೊಂಡರೆ ಸಮಸ್ಯೆ ಬಗೆಹರಿಯುತ್ತೆ ಎಂದು ಅಮಾಯಕ ಮಹಿಳೆಯರಿಗೆ ಮೋಸ

    ಬೆಳಗಾವಿ: ನೀಚ ಸ್ವಾಮಿಯಯೊಬ್ಬ ನಾನು ದೇವ ಮಾನವ. ಮೈಯಲ್ಲಿ ಸಾಕ್ಷಾತ್ ಆಂಜನೇಯ ದೇವ ಬರುತ್ತೆ ಎಂದು ಹೇಳಿ ಅಮಾಯಕ ಮಹಿಳೆಯರನ್ನು ಬೇರೆಯವರ ಹಾಸಿಗೆಗೆ ಕಳಿಸುತ್ತಿದ್ದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಹಂಜಾನಟ್ಟಿ ಗ್ರಾಮದಲ್ಲಿ ನಡೆದಿದೆ.

    ನೀಚ ಸ್ವಾಮೀಜಿ ಅಮಾಯಕ ಮಹಿಳೆಯರನ್ನು ಬೇರೆಯವರ ಹಾಸಿಗೆಗೆ ಕಳಿಸುತ್ತಾನೆ. ನಾನು ದೇವ ಮಾನವ. ಮೈಯಲ್ಲಿ ಸಾಕ್ಷಾತ್ ಆಂಜನೇಯ ದೇವ ಬರುತ್ತೆ ಎಂದು ಹೇಳಿದ್ದಾನೆ. ಬ್ರಹ್ಮ ಬರೆದ ಹಣೆ ಬರಹವನ್ನು ಮೊಬೈಲ್ ಟಾರ್ಚ್ ಬಳಸಿ ಓದಿ ಯಾಮಾರಿಸ್ತಾನೆ. ನಿಮ್ಮ ಮನೆಯಲ್ಲಿ ವಾಮಾಚಾರ ನಡೆದಿದೆ. ವಾಮಾಚಾರ ಬಿಡಿಸುತ್ತೇನೆ ಎಂದು ಭವಿಷ್ಯ ಹೇಳ್ತಿನಿ ಎಂದು ಜನರ ಬಳಿ ಹಣ ಪೀಕುತ್ತಾನೆ. ಪಬ್ಲಿಕ್ ಟಿವಿ ಕಾರ್ಯಾಚರಣೆಯಲ್ಲಿ ಮೋಸಗಾರ, ಖತರ್ನಾಕ್ ಸ್ವಾಮಿಯ ಕೃತ್ಯ ಬಯಲಾಗಿದೆ.

    ಈ ಡೇಂಜರಸ್ ಸ್ವಾಮೀಜಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಹಂಜಾನಟ್ಟಿ ಗ್ರಾಮದಲ್ಲಿದ್ದಾನೆ. ಕತ್ತಲಾಗುತ್ತಿದ್ದಂತೆ ಕಾವಿ ತೊಡುತ್ತಾನೆ. ಬೆಳಗಿನ ಜಾವ ವಾಟರ್ ಮ್ಯಾನ್ ಕೆಲಸ ಮಾಡುತ್ತಾನೆ. ಎರಡು ಕೆಲಸದಲ್ಲೂ ಅಮಾಯಕರನ್ನ ಮೋಸ ಮಾಡಿ ಕಳುಹಿಸುತ್ತಾನೆ. ಹುಕ್ಕೇರಿಯ ಪುರಸಭೆಯ ವಾಟರ್ ಮ್ಯಾನ್ ಈರಪ್ಪ ಭೀಮನ್ನವರನಿಂದ ವಂಚನೆ ಮಾಡುತ್ತಾನೆ. ಸಮಸ್ಯೆ ಹೇಳಿಕೊಂಡು ಬರುವ ಅಮಾಯಕ ಮಹಿಳೆಯರ ಬಾಳಿನ ಜೊತೆ ಚೆಲ್ಲಾಟವಾಡುತ್ತಾನೆ.

    ಮಕ್ಕಳಾಗದವರು, ಗಂಡ ಸತ್ತಿರುವ ಮಹಿಳೆಯರೇ ಇವನ ಟಾರ್ಗೆಟ್‍ಯಾಗಿದ್ದು, ನಾನು ತೋರಿಸಿದ ವ್ಯಕ್ತಿಯ ಜೊತೆಗೆ ಹಾಸಿಗೆ ಹಂಚಿಕೊಂಡರೆ ಸಮಸ್ಯೆ ಬಗೆಹರಿಯುತ್ತೆ ಎಂದು ಹೇಳುತ್ತಾನೆ. ಸಮಸ್ಯೆ ಬಗೆಹರಿಸುತ್ತೀನಿ ಎಂದು ಪಿಂಪ್ ಕೆಲಸ ಮಾಡುತ್ತಿದ್ದಾನೆ. ಪಿಂಪ್ ಕೆಲಸದ ಜೊತೆ ದೆವ್ವ ಬಿಡಿಸುತ್ತೀನಿ ಎಂದು ಈ ನೀಚ ಸ್ವಾಮೀಜಿ ವಾಮಾಚಾರದ ಕೆಲಸ ಮಾಡುತ್ತಾನೆ. ಈರಪ್ಪ ಕೃತ್ಯಕ್ಕೆ ಮ್ಮನ್ನೋಳಿ ಗ್ರಾಮ ಪಂಚಾಯತ್ ಸದಸ್ಯೆ ಕೂಡ ಸಾಥ್ ನೀಡಿದ್ದು, ಪಬ್ಲಿಕ್ ಟಿವಿ ಕಾರ್ಯಾಚರಣೆಯಲ್ಲಿ ಖತರ್ನಾಕ್ ಸ್ವಾಮಿಯ ದೊಡ್ಡ ಜಾಲ ಬಟಾ ಬಯಲಾಗಿದೆ.

    ಈ ಸ್ವಾಮೀಜಿ ಬಳಿ ಯಾರೇ ಬರಲಿ ಅವರ ಕೈಯಲ್ಲಿ 2 ನಿಂಬೆ ಹಣ್ಣು ನೀಡಿ ಚಡಿಯಿಂದ ಹೊಡೆಯುತ್ತಾನೆ. ನೀನು ಇವನ ಬಿಟ್ಟು ಹೋಗುವುದಿಲ್ಲ ಎಂದರೆ ತಲೆಯ ಮೇಲೆ ಕರ್ಪೂರ ಸುಡುತ್ತೇನೆ ಎಂದು ಹೆದರಿಸಿ ಜನರನ್ನು ವಂಚಿಸುತ್ತಿದ್ದಾನೆ.

    ಈ ವಂಚನೆ ಕಾರ್ಯವನ್ನು ಇವನು ಅಷ್ಟೇ ಮಾಡದೆ ಈತನ ಪತ್ನಿ ಹುಕ್ಕೇರಿ ತಾಲೂಕಿನ ಎಲಿ ಮುನ್ನೋಳಿ ಗ್ರಾಮ ಪಂಚಾಯತಿ ಸದಸ್ಯೆ ಕೂಡ ಈ ಮಾಟ ಮಂತ್ರದಲ್ಲಿ ತೊಡಗಿಕೊಂಡಿದ್ದಾಳೆ. ಇನ್ನೂ ಈರಪ್ಪ್ ಸ್ವಾಮಿಯ ಒಂದು ಬಹು ದೊಡ್ಡ ಜಾಲವನ್ನು ಮಾಡಿಕೊಂಡಿದ್ದು, ನಿಧಿ ತೆಗೆಯುತ್ತೇನೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದಾನೆ. ಇವನ ಮನೆಯಲ್ಲಿ ಎಲ್ಲಿ ನೋಡಿದರು ನಿಂಬೆ ಹಣ್ಣು, ಗೊಂಬೆಗಳು, ಬೆಕ್ಕು ಮರಿ ಸೇರಿದಂತೆ ಮಾಟ ಮಂತ್ರ ಮಾಡುವ ಸಾಮಗ್ರಿಗಳು ಕಂಡು ಬರುತ್ತವೆ.

  • ಬಾಯಲ್ಲಿ ಚೊಂಬು ಇಟ್ಟು, ಪೇಪರ್‍ನಲ್ಲಿ ಬೆನ್ನು ಉಜ್ಜಿ ಹೊಟ್ಟೆಯಿಂದ ಏನಾದ್ರೂ ಬಿದ್ರೆ ಕಂಟಕ ಬಿಡ್ತು ಅಂತಾನೆ ಈ ಡೋಂಗಿ ಬಾಬಾ!

    ಬಾಯಲ್ಲಿ ಚೊಂಬು ಇಟ್ಟು, ಪೇಪರ್‍ನಲ್ಲಿ ಬೆನ್ನು ಉಜ್ಜಿ ಹೊಟ್ಟೆಯಿಂದ ಏನಾದ್ರೂ ಬಿದ್ರೆ ಕಂಟಕ ಬಿಡ್ತು ಅಂತಾನೆ ಈ ಡೋಂಗಿ ಬಾಬಾ!

    ವಿಜಯಪುರ: ಜಿಲ್ಲೆಯಲ್ಲೊಬ್ಬ ಮಾಟ ಮಂತ್ರ ಹೋಗಲಾಡಿಸುವ ಡೋಂಗಿ ಬಾಬಾನಿರುವ ಬಗ್ಗೆ ಬೆಳಕಿಗೆ ಬಂದಿದೆ. ಈತ ತಂಬಿಗೆ ಬಾಬಾ ಅಂತಾನೇ ಫೇಮಸ್ಸ್ ಆಗಿದ್ದಾನೆ.

    ಹೌದು. ವಿಜಯಪುರದ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ವಂದಾಲ ಗ್ರಾಮದ ಈ ಡೋಂಗಿ ಸ್ವಾಮಿಯ ಹೆಸರು ಧರ್ಮಣ್ಣ. ಇವನು ಬಾಯಲ್ಲಿ ಖಾಲಿ ತಂಬಿಗೆ ಇಟ್ಟು, ಬೆನ್ನಿನ ಮೇಲೆ ಪೇಪರ್‍ನಿಂದ ಸವರುತ್ತಾನೆ. ಆಗ ಮಾಟ ಮಂತ್ರಕ್ಕೆ ಒಳಗಾದ್ರೆ ಅವರ ಬಾಯಿಂದ ಕಸವೋ, ಕಡ್ಡಿಯೋ ಅಥವಾ ಕಾಳೋ ಇಲ್ಲವೇ ಹಿಟ್ಟಿನ ಉಂಡೆಯೋ ಬೀಳುತ್ತಂತೆ. ಹೀಗೆ ಬಾಯಿಂದ ಬಿದ್ದ ವಸ್ತು ರೂಪದಲ್ಲಿ ಮಾಟ ಮಂತ್ರ ಮಾಯವಾಗುತ್ತಂತೆ.

    ವಿಚಿತ್ರ ಅಂದ್ರೆ ತಲೆ ಹಾಗೂ ಬೆನ್ನಿನ ಮೇಲೆ ಕೂಡಾ ಪೇಪರ್ ಇಟ್ಟು ಪೆನ್ನಿನಿಂದ ಗೀಚುತ್ತಾನೆ. ತದನಂತರ ಬೇರೆ ಪೇಪರ್ ಕೊಟ್ಟು ಅದನ್ನು ಸೊಂಟದ ಮಧ್ಯೆ ಭಾಗ ಅಂದ್ರೆ ಕಿಬ್ಬೊಟ್ಟೆಯಲ್ಲಿ ಇಟ್ಟುಕೊಳ್ಬೇಕು ಅಂತ ಹೇಳುತ್ತಾನೆ. ಹೀಗೆ ಮಾಡುತ್ತಾ ಕಿಲಾಡಿ ಬಾಬಾ ಧರ್ಮಣ್ಣ ಇಬ್ಬರಿಂದ 200- 300 ರೂಪಾಯಿ ತೆಗೆದುಕೊಳ್ಳುತ್ತಾನೆ. ಅಲ್ಲದೇ ಈತನ ಪತ್ನಿಯ ಕೈಯಿಂದ ತಾಯ್ತ ಕೊಡಿಸಿ 50 ರೂಪಾಯಿ ವಸೂಲಿ ಮಾಡುತ್ತಿದ್ದಾನೆ ಅಂತ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.