Tag: ಮಾಜಿ ಶಾಸಕ ಚಲುವರಾಯ ಸ್ವಾಮಿ

  • ಮತ ಹಾಕ್ಲಿಲ್ಲ ಅಂತ ಮನೆ ಕೆಡವಿದ್ರು – ಮಂಡ್ಯದಲ್ಲಿ ಮತ್ತೆ ಜೆಡಿಎಸ್, ಕಾಂಗ್ರೆಸ್ ಕಿತ್ತಾಟ!

    ಮತ ಹಾಕ್ಲಿಲ್ಲ ಅಂತ ಮನೆ ಕೆಡವಿದ್ರು – ಮಂಡ್ಯದಲ್ಲಿ ಮತ್ತೆ ಜೆಡಿಎಸ್, ಕಾಂಗ್ರೆಸ್ ಕಿತ್ತಾಟ!

    ಮಂಡ್ಯ: ವಿಧಾನಸೌಧದಲ್ಲಿ ಮೈತ್ರಿ ಸರ್ಕಾರ ರಚಿಸಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಸ್ಥಿತಿ ಜಿಲ್ಲೆಯಲ್ಲಿ ತದ್ವಿರುದ್ಧವಾಗಿದೆ.

    ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವಿನ ರಾಜಕೀಯ ದ್ವೇಷ ಎಷ್ಟಿದೆ ಅಂದರೆ, ಕಳೆದ ವಿಧಾನಸೌಧ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಚಲುವರಾಯಸ್ವಾಮಿಗೆ ಮತ ಹಾಕಿದ್ದಾರೆ ಎಂಬ ದ್ವೇಷದಲ್ಲಿ ನಾಗಮಂಗಲ ಶಾಸಕ ಸುರೇಶ್‍ಗೌಡ ಮತದಾರರೊಬ್ಬರ ಮನೆ ಒಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಬಚ್ಚಿಕೊಪ್ಪಲು ಗೇಟ್‍ನಿಂದ ಹುರುಳಿಗಂಗನಹಳ್ಳಿಗೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ರಸ್ತೆ ಆಗಲಿಕಾರಣಕ್ಕೆ ಮನೆ ಅಡ್ಡ ಬರುತ್ತಿದೆ ಎಂದು ಮನೆ ಕೆಡವಲಾಗಿದೆ. ಆದರೆ ತಮ್ಮ ಮನೆಯನ್ನ ಕಡವದಂತೆ ಮನೆ ಒಡತಿ ಸುಧಾಮಣಿ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡಿದ ಅಧಿಕಾರಿಗಳು ಮನೆ ಕೆಡವಿ ಹಾಕಿದ್ದಾರೆ.

    ಅಧಿಕಾರಿಗಳ ದರ್ಪ ಎಷ್ಟಿದೆ ಎಂದರೆ ಮನೆಯ ಪಕ್ಕ ಇದ್ದ ಕೊಟ್ಟಿಗೆಯನ್ನು ಬಿಟ್ಟಿಲ್ಲ. ಕೊಟ್ಟಿಗೆಯನ್ನು ಕಡವಿದ ಕಾರಣ ಅವಶೇಷಗಳಡಿ ಸಿಲುಕಿರುವ ಹಸು-ಎಮ್ಮೆಗಳು ನರಳಾಡುತ್ತಿದ್ದು, ಶಾಸಕ ಸುರೇಶ್‍ಗೌಡ ಕುಮ್ಮಕ್ಕಿನಿಂದ ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ಚಲುವರಾಯಸ್ವಾಮಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮನೆ ಒಡತಿ ಸುಧಾಮಣಿ ಅವರು, 6 ತಿಂಗಳಿಂದ ಪದೇ ಪದೇ ಅಧಿಕಾರಿಗಳು ಮನೆ ಬಳಿ ಬಂದು ಸಮಸ್ಯೆ ನೀಡುತ್ತಿದ್ದಾರೆ. ಆದರೆ ಈ ಬಗ್ಗೆ 3 ಬಾರಿ ಶಾಸಕರಿಗೂ ದೂರು ನೀಡಲಾಗಿದೆ. ಅಧಿಕಾರಿಗಳಿಗೆ ಒತ್ತಡ ಹಾಕಿದ ಕಾರಣ ಕೃತ್ಯ ನಡೆಸಿದ್ದು, ನಮಗೇ ನ್ಯಾಯ ದೊರೆಯದಿದ್ದರೆ ಇಡೀ ಕುಟುಂಬ ಸಿಎಂ ಕುಮಾರಸ್ವಾಮಿ ಅವರ ಮನೆಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

    https://www.youtube.com/watch?v=AtcVfWX1fsw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv