Tag: ಮಾಜಿ ಪ್ರಧಾನಿ

  • ಪ್ರಧಾನಿಯಾಗಿ ಅಟಲ್ ಬಿಹಾರಿ ವಾಜಪೇಯಿ: ಫೋಟೋಗಳಲ್ಲಿ ನೋಡಿ

    ಪ್ರಧಾನಿಯಾಗಿ ಅಟಲ್ ಬಿಹಾರಿ ವಾಜಪೇಯಿ: ಫೋಟೋಗಳಲ್ಲಿ ನೋಡಿ

    ಅಜಾತ ಶತ್ರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿದೇಶಿ ನಾಯಕರುಗಳ ಭೇಟಿ, ಉದ್ಘಾಟನಾ ಸಮಾರಂಭ ಹಾಗೂ ಇನ್ನೂ ಅನೇಕ ಅಪರೂಪದ ಫೋಟೋಗಳನ್ನು ನೋಡಿ.

    2003ರ ಮೇ 21ರಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಂದ ಲಕ್ನೋದ ಕೊರಿಯಾ ಘಾಟ್ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ.
    2003ರ ಮೇ 24ರಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ನವದೆಹಲಿಯಲ್ಲಿ ನಡೆದ ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ, ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಉಪ ರಾಷ್ಟ್ರಪತಿ ಶ್ರೀ ಭೈರೋನ್ ಸಿಂಗ್ ಶೇಕಾವತ್‍ರೊಂದಿಗೆ.
    2003ರ ಜನವರಿ 3ರಂದು ಬೆಂಗಳೂರಿನಲ್ಲಿ ನಡೆದ 90ನೇ ಭಾರತೀಯ ವಿಜ್ಞಾನ ಸಮಾವೇಶ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ.
    2003ರ ಮೇ 3ರಂದು ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಯ ರಾಷ್ಟ್ರೀಯ ಸಮಾವೇಶ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಅಟಲ್ ಜೀ.
    2003 ಮೇ 4ರಂದು ಬೆಂಗಳೂರಿನ ಎಚ್.ಎ.ಎಲ್ ನಡೆದ ವಿಜ್ಞಾನಿಗಳೊಂದಿಗೆ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳೊಂದಿಗೆ ವಾಜಪೇಯಿ.
    2003ರ ಜನವರಿ 6ರಂದು ಮುಂಬೈನಲ್ಲಿ ನಡೆದ 14ನೇ ವರ್ಷದ ಶ್ರೀ ಹಸುಅಡ್ವಾನಿ ಮೆಮೋರಿಯಲ್ ನ ವಿವೇಕಾನಂದ ಶಿಕ್ಷಣ ಸಂಸ್ಥೆಯನ್ನು ದೀಪ ಹಚ್ಚುವ ಮೂಲಕ ಉದ್ಘಾಟಿಸಿದ ಪ್ರಧಾನಿ.
    2003ರ ಮೇ 7ರಂದು ನವದೆಹಲಿಯಲ್ಲಿ ಬೊಸ್ನಿಯಾ ಮತ್ತು ಹರ್ಜೆಗೋವಿನಾ ವಿದೇಶಾಂಗ ಸಚಿವ ಡಾ. ಮೆಲೇಡೆನ್ ಐವೊಯಿಕ್ ರವರ ಜೊತೆ ಮಾತುಕತೆ.
    2003ರ ಮೇ 7ರಂದು ನವದೆಹಲಿಯಲ್ಲಿ ಲಾವೋಸ್ ನ ಉಪಪ್ರಧಾನಿ ಶ್ರೀ ಸೋಮಸಾವತ್ ಲೆಂಗ್ಸಾವ್ದ್ ಅವರೊಂದಿಗೆ.
    2003ರ ಮೇ 11 ರಂದು ನವದೆಹಲಿಯಲ್ಲಿ ನಡೆದ ಡಿ.ಆರ್.ಡಿ.ಓ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸುತ್ತಿರುವ ಪ್ರಧಾನಿ ವಾಜಪೇಯಿ.
    2003ರ ಮೇ 12ರಂದು ನವದೆಹಲಿಯ ಸಮಾರಂಭಕ್ಕೆ ಆಗಮಿಸಿದ್ದ ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷ ಜೋಕ್ವಿಮ್ ಅಲ್ಬೆರ್ಟೊ ಚಿಸ್ಸಾನೋರವರನ್ನು ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂರೊಂದಿಗೆ ಸ್ವಾಗತಿಸುತ್ತಿರುವುದು.
    ಮೇ 15, 2003 ರಂದು ಮನಾಲಿಯಲ್ಲಿನ ಪ್ರನಿ ಗ್ರಾಮದ ಸ್ಥಳೀಯ ಕಲಾವಿದರೊಂದಿಗೆ.
    2003ರ ಮೇ 18ರಂದು ನವದೆಹಲಿಗೆ ತೆರಳುವ ಮೊದಲು ಮನಾಲಿ ವಿಮಾನ ನಿಲ್ದಾಣದ ಮಧ್ಯಮದವರಿಗೆ ಪ್ರತಿಕ್ರಿಯಿಸುತ್ತಿರುವ ಪ್ರಧಾನಿ.
    2003ರ ಮೇ 24ರಂದು ನವದೆಹಲಿಯಲ್ಲಿ ಕೆ. ಕಸ್ತೂರಿರಂಗನ್ ಅವರ ನೇತೃತ್ವದ ವಿಜ್ಞಾನಿಗಳ ತಂಡದಿಂದ ಜಿ.ಎಸ್.ಎಲ್.ವಿ-3 ಮಾದರಿಯನ್ನು ಪ್ರಸ್ತುತಪಡಿಸುತ್ತಿರುವುದು.
    2003ರ ಮೇ 27 ನವದೆಹಲಿಯಿಂದ ಜರ್ಮನಿ, ರಷ್ಯಾ ಮತ್ತು ಸ್ವಿಜ್ಜರ್ಲೆಂಡ್ ಹಾಗೂ ಫ್ರಾನ್ಸ್ ಪ್ರವಾಸಕ್ಕೆ ತೆರಳುವ ಮೊದಲು ಅಡ್ವಾಣಿಗೆ ಹಸ್ತಲಾಘವ.
    2003 ಮೇ 28ರಂದು ಜರ್ಮನಿ ಪ್ರವಾಸದ ವೇಳೆ ವಾಜಪೇಯಿಯವರಿಗೆ ಜರ್ಮನಿಯ ಚಾನ್ಸೆಲರ್ ಮಿ. ಗೆರ್ಹಾರ್ಡ್ ಶ್ರೋಡರ್ ರವರು ಸ್ವಾಗತಿಸುತ್ತಿರುವುದು.
    2003ರ ಮೇ 31 ರಂದು ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರೊಂದಿಗೆ ಮಾತುಕತೆ.
    2003ರ ಮೇ 31ರಂದು ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ನೆವಾ ನದಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಅಟಲ್ ಜೀ.
    ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ.
    2000ದ ಜನವರಿ 2ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸಂತ ಬ್ಯಾನೇಶ್ವರ ಮಹಾರಾಜ ಸಭೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವರಾಗಿದ್ದ ಅನಂತ ಕುಮಾರ್ ಹಾಗೂ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ರೊಂದಿಗೆ ಪಾಲ್ಗೊಂಡಿದ್ದಾಗ.
    2003ರ ಮೇ 2ರಂದು ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅಟಲ್ ಜೀಯವರನ್ನು ನವದೆಹಲಿಯಲ್ಲಿ ಭೇಟಿಯಾದ ವೇಳೆ.
    2003ರ ಮೇ 20ರಂದು ನವದೆಹಲಿಯಲ್ಲಿ ನಡೆದ ಮೊದಲ ಬಾರಿ ಮೌಂಟ್ ಎವರೆಸ್ಟ್ ಏರಿದ ಸರ್ ಎಡ್ಮಂಡ್ ಹಿಲರಿಯವರನ್ನು ಸನ್ಮಾನಿಸುತ್ತಿರುವುದು.
    2003ರ ಮೇ 21ರಂದು ಲಕ್ನೋದ ವಿಮಾನ ನಿಲ್ದಾಣದಿಂದ ಲಕ್ನೋ-ಜೆಡ್ಡಾ ಗೆ ವಿಮಾನಯಾನಕ್ಕೆ ಚಾಲನೆ ನೀಡಿದ ಅಟಲ್ ಜೀ.
    2003ರ ಮೇ 22ರಂದು ನವದೆಹಲಿಯಲ್ಲಿ ಬಾಂಗ್ಲಾದೇಶದ ಹಣಕಾಸು ಸಚಿವ ಎಂ. ಸೈಫೂರ್ ರೆಹಮಾನ್ ರವರೊಂದಿಗೆ ಮಾತುಕತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೀತಾ ಔರ್ ಗೀತಾ ಚಿತ್ರವನ್ನು 25 ಬಾರಿ ವೀಕ್ಷಿಸಿದ್ದ ವಾಜಪೇಯಿ!

    ಸೀತಾ ಔರ್ ಗೀತಾ ಚಿತ್ರವನ್ನು 25 ಬಾರಿ ವೀಕ್ಷಿಸಿದ್ದ ವಾಜಪೇಯಿ!

    ನವದೆಹಲಿ: ಅಟಲ್ ಬಿಹಾರಿ ಕೇವಲ ರಾಜಕಾರಣಿಯಲ್ಲ. ಕವಿ, ಪತ್ರಕರ್ತರಾಗಿದ್ದ ಅವರು ಸಿನಿಮಾ ನೋಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು.

    ಸಾಹಿತ್ಯ, ಸಂಗೀತವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ವಾಜಪೇಯಿ ಅವರು, ಹೇಮಾಮಾಲಿನಿ ಅವರ ಮೇಲೆ ಬಹಳ ಅಭಿಮಾನವಿತ್ತು. ಅದರಲ್ಲೂ ಕನಸಿನ ಕನ್ಯೆ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ‘ಸೀತಾ ಔರ್ ಗೀತಾ’ ಚಲನಚಿತ್ರವನ್ನು ಅವರು ಬರೋಬ್ಬರಿ 25 ಬಾರಿ ವೀಕ್ಷಿಸಿದ್ದರು.

    ಹೇಮಾಮಾಲಿನಿ ವಾಹಿನಿಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ, ನಾನು ವಾಜಪೇಯಿ ಅವರನ್ನು ಭೇಟಿಯಾಗಿರಲಿಲ್ಲ. ಹೀಗಾಗಿ ಒಮ್ಮೆ ಅವರನ್ನು ಭೇಟಿಯಾಗಬೇಕು ಎಂದು ಅಧಿಕಾರಿಗಳನ್ನು ಕೇಳಿಕೊಂಡಿದ್ದೆ. ಅವರನ್ನು ನೋಡಲು ನಾನು ಹೋದಾಗ ಬಹಳ ಮುಜುಗರದಿಂದಲೇ ಮಾತನಾಡಿದ್ದರು ಎಂದು ಆ ಕ್ಷಣವನ್ನು ಹಂಚಿಕೊಂಡಿದ್ದರು.

    1972 ರಲ್ಲಿ ನಾನು ಅಭಿನಯಿಸಿದ ಸೀತಾ ಔರ್ ಗೀತಾ ಸಿನಿಮಾವನ್ನು ಅವರು 25 ಬಾರಿ ವೀಕ್ಷಿಸಿದ್ದರು. ನನ್ನ ಅಭಿಮಾನಿಯಾಗಿದ್ದ ಕಾರಣಕ್ಕೆ ಅವರು ಮುಜುಗರಂದಿಂದಲೇ ಮಾತನಾಡಿರಬಹುದು ಎಂದು ಹೇಮಾಮಲಿನಿ ತಿಳಿಸಿದ್ದರು.

    ಅಟಲ್ ನಿಧನಕ್ಕೆ ಕಂಬನಿ ಮಿಡಿದ ಹೇಮಾಮಾಲಿನಿ, ವಿನೋದ್ ಖನ್ನಾ ಅವರಿಂದ ನನಗೆ ಅಟಲ್ ಬಿಹಾರಿ ವಾಜಪೆಯಿ ಅವರ ಪರಿಚಯವಾಯಿತು. ನಾನು ಬಿಜೆಪಿಗೆ ಸೇರಲು ಅಟಲ್ ಕಾರಣ ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

    2003 ರಿಂದ 2009 ರವರೆಗೆ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ ಅವರು 2014ರಲ್ಲಿ ಉತ್ತರ ಪ್ರದೇಶದ ಮಥುರಾ ಲೋಕಸಭೆಯಿಂದ ಸ್ಪರ್ಧಿಸಿ ಗೆದ್ದಿದ್ದರು.

  • ತ್ರಿವರ್ಣ ಧ್ವಜ ಅರ್ಧಕ್ಕೆ ಇಳಿಸಿ ಮಾಜಿ ಪ್ರಧಾನಿಗೆ ರಾಜ್ಯ ಸರ್ಕಾರದಿಂದ ಗೌರವ

    ತ್ರಿವರ್ಣ ಧ್ವಜ ಅರ್ಧಕ್ಕೆ ಇಳಿಸಿ ಮಾಜಿ ಪ್ರಧಾನಿಗೆ ರಾಜ್ಯ ಸರ್ಕಾರದಿಂದ ಗೌರವ

    ಬೆಂಗಳೂರು: ಮಾಜಿ ಪ್ರಧಾನಿ, ಅಜಾತ ಶತ್ರು ಹಾಗೂ ಭಾರತ ರತ್ನ ಪುರಸ್ಕೃತ ಅಟಲ್ ಬಿಹಾರಿ ನಿಧನರಾದ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರದಿಂದ ಅವರಿಗೆ ಗೌರವ ಸೂಚಿಸಲಾಯಿತು.

    ವಿಧಾನಸೌಧ, ಹೈಕೋರ್ಟ್, ಸರ್ಕಾರಿ ಕಚೇರಿಗಳ ಮೇಲಿನ ತ್ರಿವರ್ಣ ಧ್ವಜ ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಲಾಯಿತು. ಅಲ್ಲದೇ ಕರ್ನಾಟಕ ಸರ್ಕಾರದಿಂದ ಶ್ರದ್ಧಾಂಜಲಿ ಕೂಡ ಅರ್ಪಿಸಲಾಯಿತು.

    ರಾಜ್ಯ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಹಿರಿಯ ನಾಯಕ ರಾಮಚಂದ್ರೇಗೌಡ, ಮಾಜಿ ಡಿಸಿಎಂ ಆರ್.ಅಶೋಕ್, ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಟ್ಟಿನಲ್ಲಿ 9 ವಾರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅಟಲ್ ಜಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

    ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಒಟ್ಟಿನಲ್ಲಿ ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣ್ಯಾತಿಗಣ್ಯರಿಂದ ಭಾರತ ರತ್ನ ಪುರಸ್ಕೃತ ಅಟಲ್ ಜಿಗೆ ಅಂತಿಮ ನಮನ

    ಗಣ್ಯಾತಿಗಣ್ಯರಿಂದ ಭಾರತ ರತ್ನ ಪುರಸ್ಕೃತ ಅಟಲ್ ಜಿಗೆ ಅಂತಿಮ ನಮನ

    ನವದೆಹಲಿ: ಮಾಜಿ ಪ್ರಧಾನಿ, ಅಜಾತಶತ್ರು ಮತ್ತು ಭಾರತ ರತ್ನ ಪುರಸ್ಕೃತ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯಿಂದ ದೇಶದಾದ್ಯಂತ ಶೋಕಾಚರಣೆ ಆಚರಿಸಲಾಗುತ್ತಿದ್ದು, ಗಣ್ಯಾತಿ ಗಣ್ಯರು ಅವರ ಅಂತಿ ದರ್ಶನ ಪಡೆದು ನಮನ ಸಲ್ಲಿಸುತ್ತಿದ್ದಾರೆ.

    ದೆಹಲಿಯ 6ಎ ಕೃಷ್ಣಮೆನನ್ ಮಾರ್ಗ್ ನಲ್ಲಿರುವ ವಾಜಪೇಯಿ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ಇಡಲಾಗಿದೆ. ಈ ವೇಳೆ ಬಂಧು ಮಿತ್ರರು ಮತ್ತು ಗಣ್ಯರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಬಿಜೆಪಿ ಮುಖಂಡ ಹಾಗೂ ವಾಜಪೇಯಿ ಅವರ ಆಪ್ತ ಎಲ್ ಕೆ ಅಡ್ವಾಣಿ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಸೇರಿದಂತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದಿದ್ದಾರೆ.

    ಅಷ್ಟೇ ಅಲ್ಲದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಯೋಗ ಗುರು ಬಾಬಾ ರಾಮ್ ದೇವ್ ಸೇರಿದಂತೆ ಇನ್ನು ಅನೇಕ ಗಣ್ಯರು ಅಟಲ್ ಬಿಹಾರಿ ವಾಜಪೇಯಿಗೆ ಮಾಲಾರ್ಪಣೆ ಸಮರ್ಪಿಸಿ ಅಂತಿಮ ನಮನವನ್ನು ಸಲ್ಲಿಸಿದ್ದಾರೆ.

    ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಟ್ಟಿನಲ್ಲಿ 9 ವಾರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅಟಲ್ ಜಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ತಂದಯನ್ನೇ ಕಳೆದುಕೊಂಡಂತಾಗಿದೆ: ಅಟಲ್ ಜಿ ಅಗಲಿಕೆಯಿಂದ ಭಾವುಕರಾದ ಲತಾ ಮಂಗೇಶ್ಕರ್

    ನನ್ನ ತಂದಯನ್ನೇ ಕಳೆದುಕೊಂಡಂತಾಗಿದೆ: ಅಟಲ್ ಜಿ ಅಗಲಿಕೆಯಿಂದ ಭಾವುಕರಾದ ಲತಾ ಮಂಗೇಶ್ಕರ್

    ಮುಂಬೈ: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಅಗಲಿಕೆಯಿಂದ ನನ್ನ ತಂದೆಯನ್ನೇ ಕಳೆದುಕೊಂಡಂತಾಗಿದೆ ಎಂದು ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ಭಾರತದ ನೈಟಿಂಗೇಲ್ ಎಂದೇ ಹೆಸರು ಪಡೆದಿರುವ ಲತಾ ಮಂಗೇಶ್ಕರ್ ತಿಳಿಸಿದ್ದಾರೆ.

    ಅಟಲ್ ಜಿಯವರ ಅಗಲಿಕೆಗೆ ಕಂಬನಿ ಮಿಡಿದ ಅವರು, ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅಟಲ್ ಜೀಯವರು ನನ್ನನ್ನು ಯಾವಾಗಲೂ ಭೇಟಿ ಎಂದೇ ಕರೆಯುತ್ತಿದ್ದರು. ನಾನೂ ಕೂಡ ಅವರನ್ನು ದಾದಾ ಎಂದೇ ಕರೆಯುತ್ತಿದ್ದೆ. ಅವರ ಅಗಲಿಕೆಯಿಂದ ನನ್ನ ತಂದೆಯನ್ನೇ ಮತ್ತೊಮ್ಮೆ ಕಳೆದುಕೊಂಡ ರೀತಿ ನನಗೆ ನೋವುಂಟಾಗಿದೆ ಎಂದು ಭಾವುಕರಾದ್ರು.

    ನಮ್ಮ ತಂದೆ ಪಂಡಿತ್ ದಿನನಾಥ್ ಮಂಗೇಶ್ಕರ್ ರೊಂದಿಗೆ ಅವರು ಹೆಚ್ಚಿನ ಒಡನಾಟವನ್ನು ಹೊಂದಿದ್ದರು. ಅಟಲ್ ಜಿ ನಮ್ಮ ಮನೆಗೆ ಹಲವು ಬಾರಿ ಬಂದಿದ್ದರು. ಆವಾಗಿನಿಂದಲೂ ನಾನು ಅವರಿಗೆ ಹೆಚ್ಚು ಹತ್ತಿರದಲ್ಲಿದ್ದೆನೆ. ಪೂಣೆಯಲ್ಲಿ ದಿನನಾತ್ ಮಂಗೇಶ್ವರ್ ಹೆಸರಿನಲ್ಲಿ ನಿರ್ಮಿಸಿದ್ದ ಆಸ್ಪತ್ರೆಯನ್ನು ಉದ್ಘಾಟನೆಗೆ ಕರೆದಾಗ ಅವರು ಆತ್ಮೀಯವಾಗಿ ಬಂದು ಉದ್ಘಾಟನೆಯನ್ನು ನೆರವೇರಿಸಿದ್ದರು.

    2014 ರಲ್ಲಿ ಅವರು ಬರೆದ ಎಲ್ಲಾ ಕವಿತೆಗಳನ್ನು ಅಂತರ್ನಾದ್ ಎಂಬ ಶೀರ್ಷಿಕೆಯಲ್ಲಿ ಸಂಗೀತದ ಆಲ್ಬಂ ಆಗಿ ಸಿದ್ಧಪಡಿಸಿದ್ದೆವು. ಅದನ್ನು ನವದೆಹಲಿಯಲ್ಲಿರುವ ಅವರ ಮನೆಯಲ್ಲಿ ಬಿಡುಗಡೆ ಮಾಡಿದ್ದೆವು. ಅದಕ್ಕೆ ಅವರು ಅಪಾರ ಸಂತೋಷವನ್ನು ವ್ಯಕ್ತಪಡಿಸಿದ್ದರು ಎಂದು ಅಟಲ್‍ಜಿ ಯವರ ಒಡನಾಟವನ್ನು ನೆನಪಿಸಿಕೊಂಡರು.

    ದೇಶ ಭಾರತ ರತ್ನಕ್ಕಿಂತಲೂ ಹೆಚ್ಚಿರುವ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ದುಃಖ ಸಾಗರದಲ್ಲಿ ಮುಳುಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿ ಯಶಸ್ಸಿನ ಹಿಂದಿನ ನಾಯಕ ವಾಜಪೇಯಿ!

    ಮೋದಿ ಯಶಸ್ಸಿನ ಹಿಂದಿನ ನಾಯಕ ವಾಜಪೇಯಿ!

    ಬೆಂಗಳೂರು: ಬಿಜೆಪಿ ಇಂದು ಆಡಳಿರೂಢ ಪಕ್ಷವಾಗಿದೆ. ಸದ್ಯಕ್ಕೆ ಬಿಜೆಪಿ ಎಂದರೆ ಮೋದಿ ಎನ್ನುವಂತಾಗಿದೆ. ಆದರೆ ಕೆಲ ವರ್ಷಗಳ ಹಿಂದೆ “ಅಬ್ ಕೀ ಬಾರ್ ಅಟಲ್ ಸರ್ಕಾರ್” ಎಂದೇ ಕರೆಯಲಾಗುತ್ತಿತ್ತು. ಎಂತಹ ಸಂದರ್ಭದಲ್ಲೂ ಎದೆಗುಂದದ ಅಟಲ್ ಅವರ ಧೈರ್ಯ, ಪ್ರೋಖ್ರಾನ್ ಅಣು ಪರೀಕ್ಷೆಯ ಸಂದರ್ಭದಲ್ಲೇ ಆಗಲಿ, ಕಾರ್ಗಿಲ್ ಯುದ್ಧದ ಸಮಯದಲ್ಲೇ ಆಗಲಿ ಅವರು ತೋರಿದ ದಿಟ್ಟತನ ಅವರೊಳಗಿದ್ದ ಪ್ರಖರ ರಾಜಕಾರಣಿಯ ಪರಿಚಯವನ್ನು ಮಾಡಿಕೊಟ್ಟಿತ್ತು. ಇಂತಹ ವಾಜಪೇಯಿಯವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಮಾತ್ರವಲ್ಲ, ತಮ್ಮಂತೆ ಬಿಜೆಪಿ ಪಕ್ಷಕ್ಕೆ ನೇತಾರರಾಗುವಂತಹ ಸಮರ್ಥ ಶಿಷ್ಯರನ್ನ ತಯಾರು ಮಾಡಿದರು. ಇವತ್ತು ಮೋದಿ ಭಾರತದ ಯಶಸ್ವಿ ಪ್ರಧಾನಿಯಾಗಿದ್ದಾರೆ ಅಂದರೆ ಅದರ ಹಿಂದಿರುವ ಶಕ್ತಿ ಅಡ್ವಾಣಿ ಮತ್ತು ವಾಜಪೇಯಿ ಮಾತ್ರ.


    ವಾಜಪೇಯಿ ಎಂತಹ ಸಂದರ್ಭವನ್ನು ಹೇಗೆ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದರು ಎನ್ನುವುದಕ್ಕೆ ಒಂದು ಸಣ್ಣ ನಿದರ್ಶನವೆಂದರೆ, ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಉದ್ಭವಿಸಿದ್ದ ಕ್ಷೋಭೆಯನ್ನು ಸಂಭಾಳಿಸಿದ ರೀತಿ. 2002 ಫೆಬ್ರವರಿ 27. ಅಂದು ಗುಜರಾತಿನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಕೋಮುದಳ್ಳುರಿಯಲ್ಲಿ ನೊಂದು ಬೆಂದವರು ಸಾವಿರಾರು ಜನ. ಪ್ರಾಣ ಕಳೆದುಕೊಂಡವರು ನೂರಾರು ಮಂದಿ. ಗುಜರಾತ್ ರಾಜ್ಯದಲ್ಲಿ ನಡೆದ ಒಂದು ಹತ್ಯಾಕಾಂಡ ಭಾರತದ ಉದ್ದಗಲಕ್ಕೂ ಕಾವನ್ನು ಹರಡಿತ್ತು. ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ನರಮೇಧವನ್ನೇ ಮಾಡಿಬಿಟ್ಟರು.


    ಭಾವೈಕ್ಯತೆಗೆ ಧಕ್ಕೆ ತಂದು ಬಿಟ್ಟರು ಎಂದು ಆರೋಪಿಸಲಾಯ್ತು. ಇದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿ ಸರ್ಕಾರ ಭಾರೀ ಮುಖಭಂಗವನ್ನು ಅನುಭವಿಸಬೇಕಾಗಿ ಬಂತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪರ-ವಿರೋಧ ಚರ್ಚೆಗಳು ಹಲವು ದಿನಗಳ ಮಟ್ಟಿಗೆ ಭಾರೀ ಸಂಚಲನವನ್ನೇ ಉಂಟು ಮಾಡಿದವು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೋ ಬೇಡವೋ ಎನ್ನುವ ಜಿಜ್ಞಾಸೆ ತೀವ್ರವಾಗಿದ್ದ ಸಮಯದಲ್ಲಿಯೇ ಈ ಘಟನೆ ನಡೆದದ್ದು, ಆತಂಕಕ್ಕೂ ಕಾರಣವಾಗಿತ್ತು. ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎನ್ನುವ ಒತ್ತಡ ಹೆಚ್ಚಾಗುತ್ತೆ. ಆಗ ವಾಜಪೇಯಿ ಹೇಳಿದ್ದು ಒಂದೇ ಮಾತು.


    “ಗೋಧ್ರಾ ಹತ್ಯಾಕಾಂಡವನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ರಾಜನಾದವನು ಪ್ರಜೆಗಳನ್ನು ಸಮಾನವಾಗಿ ಕಾಣಬೇಕೇ ಹೊರತು ಜಾತಿ-ಧರ್ಮಗಳ ಆಧಾರದ ಮೇಲೆ ವರ್ಗೀಕರಣ ಮಾಡುವುದು ಸರಿಯಲ್ಲ. ಮೋದಿ ಅವರೇ, ಮೊದಲು ರಾಜಧರ್ಮ ಪಾಲನೆ ಮಾಡಿ. ಅದು ನಿಮ್ಮ ಕರ್ತವ್ಯ ಕೂಡ.” ಹೀಗೆ ಹೇಳಿ ಮುಖ್ಯಮಂತ್ರಿ ಹುದ್ದೆ ತ್ಯಜಿಸಬೇಕಿದ್ದ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ರಕ್ಷಿಸಿದ್ದರು. ಅಂದು ಅಟಲ್ ಬಿಹಾರಿ ವಾಜಪೇಯಿ ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ.


    ಮೋದಿಯಂತಹ ನಾಯಕ ಮಾತ್ರವಲ್ಲ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹೀಗೆ ರಾಷ್ಟ್ರ ರಾಜಕೀಯದಿಂದ ಪ್ರಾದೇಶಿಕ ಮಟ್ಟದವರೆಗೂ ಹಲವು ನವ ನಾಯಕರ ಹುಟ್ಟಿಗೆ ಕಾರಣರಾದರು ವಾಜಪೇಯಿ. ಆ ಮೂಲಕ ಸಾವಿರಾರು ಕಾರ್ಯಕರ್ತರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ಫೂರ್ತಿಯಾಗಿದ್ದ ವಾಜಪೇಯಿ ಇಂದಿಗೂ ಎಂದೆಂದಿಗೂ ಅಜರಾಮರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಟಲ್ ಜಿಗೆ ಕರ್ನಾಟಕದೊಂದಿಗಿತ್ತು ಆತ್ಮೀಯ ಒಡನಾಟ

    ಅಟಲ್ ಜಿಗೆ ಕರ್ನಾಟಕದೊಂದಿಗಿತ್ತು ಆತ್ಮೀಯ ಒಡನಾಟ

    ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೂ ಕರ್ನಾಟಕಕ್ಕೂ ಬಿಡಿಸಲಾಗದ ನಂಟು. ಕರುನಾಡಿನ ತುಂಬಾ ಮಂದಿ ಅಟಲ್‍ಜಿ ಒಡನಾಡಿಗಳಾಗಿದ್ರು. ಡಿ ಹೆಚ್ ಶಂಕರಮೂರ್ತಿ, ದಿವಂಗತ ನಾಯಕ ವಿಎಸ್ ಆಚಾರ್ಯ, ಆರ್‍ಎಸ್‍ಎಸ್‍ನ ಕೆ ನರಹರಿ ಅವರೊಂದಿಗೆ ಆಪ್ತ ಒಡನಾಟ ಹೊಂದಿದ್ರು.

    ನವ ಭಾರತದ ಹರಿಕಾರ, ಛಲವಾದಿ ಅಟಲ್ ಬಿಹಾರಿ ವಾಜಪೇಯಿ ಇನ್ನು ನೆನಪು ಮಾತ್ರ. ಅವರು ಇಲ್ಲ ಅಂದ್ರ ಅವರ ನೆನಪುಗಳು ಎದೆಂದು ಅಜರಾಮರ. ಅಟಜೀ ಅವರು ಕರ್ನಾಟಕದೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು. ಅಟಲ್‍ಜಿ 1977ರಲ್ಲಿ ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದಾಗ ಪ್ರೋಟೋಕಾಲ್ ಮುಗಿದ ಕೂಡಲೇ ಶಂಕರಮೂರ್ತಿ ಕಹಾ ಹೈ ಎಂದಿದ್ದರಂತೆ. ಮೂಲೆಯಲ್ಲಿ ನಿಂತಿದ್ದ ಶಂಕರಮೂರ್ತಿ ಎದುರಿಗೆ ಬಂದಾಗ ಅಟಲ್‍ಜಿ ಸೀದಾ ಹೆಗಲ ಮೇಲೆ ಕೈ, ಎಲ್ಲಿ ನಿನ್ನ ಕಾರು..? ನಡಿ ನಿನ್ನ ಮನೆಗೆ ಎಂದು ಶಂಕರಮೂರ್ತಿಯನ್ನು ಉದ್ದೇಶಿಸಿ ವಾಜಪೇಯಿ ಮಾತನಾಡಿದ್ರು.


    ಒಂದೇ ಚಪಾತಿ ಹಂಚಿಕೊಂದ್ದರು:
    1983 ಚುನಾವಣೆ ಸಮಯದಲ್ಲಿ ವಾಜಪೇಯಿ, ಶಂಕರಮೂರ್ತಿ ಒಟ್ಟೊಟ್ಟಿಗೆ ಪ್ರಚಾರ ಮಾಡಿದ್ದರು. ಬೆಳಗಾವಿಯಲ್ಲಿ ಪ್ರಚಾರ ವೇಳೆ ಇಬ್ಬರಿಗೂ ಹೊಟ್ಟೆ ಹಸಿವಾಗಿತ್ತು. ಆದ್ರೆ ಒಂದೇ ಚಪಾತಿ ಇತ್ತು. ಚಪಾತಿಯ ಒಂದು ತುಂಡು ಸವಿದ ಅಟಲ್‍ಜಿ, ಕೂಡಲೇ ನಿನ್ನ ಗತಿಯೇನು..? ತಿಂದೆಯಾ ಅಂತಾ ಶಂಕರಮೂರ್ತಿಯನ್ನು ಪ್ರಶ್ನಿಸಿದ್ದರು. ಇಲ್ಲ ಎಂದ ತಕ್ಷಣ ಚಪಾತಿಯ `ಆ ಕಡೆ ನೀನು ತಿನ್ನು.. ಈ ಕಡೆ ನಾನು ತಿನ್ನುತ್ತಾ ಬರುವೆ’ ಅಂತ ಶಂಕರಮೂರ್ತಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಭದ್ರಾವತಿಗೆ ಬಂದಿದ್ದರು ಅಟಲ್ ಜೀ:
    ಇಂದಿರಾ ಹತ್ಯೆ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದ ಸಂದರ್ಭದಲ್ಲಿ ವಾಜಪೇಯಿ ಸೋಲು ಅರಗಿಸಿಕೊಳ್ಳದ ಭದ್ರಾವತಿಯ ಲಕ್ಷ್ಮಿನಾರಾಯಣ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ರು. ವಿಚಾರ ತಿಳಿದ ಕೂಡಲೇ ವಾಜಪೇಯಿ ಭದ್ರಾವತಿಗೆ ಬಂದು, ಲಕ್ಷ್ಮಿನಾರಾಯಣ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ, ತಂಗಿ ತಮ್ಮನ ಓದಿಗೂ ನೆರವು ನೀಡಿದ್ದರಂತೆ. ಅಲ್ಲದೇ ರಾಜ್ಯ ಬಿಜೆಪಿ ನಾಯಕರ ಕಣ್ಣೀರು ಕಂಡು ವಾಜಪೇಯಿ ನ ದೈನ್ಯಂ ನ ಪಲಾಯನಂ ಎಂದಿದ್ದರು.


    ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದ ವಾಜಪೇಯಿಗೆ ಜ್ವರ ಬಂದು ಮಲಗಿದ್ದಾಗ, ವಿಎಸ್ ಆಚಾರ್ಯರು ವಾಜಪೇಯಿ ಚಹಾ ಹಿಡಿದ ಕೊಡಲೇ ಎದ್ದು ಕುಳಿತ್ತದ್ದರಂತೆ. ಅಲ್ಲದೇ ವಿಎಸ್ ಆಚಾರ್ಯರ ಸಣ್ಣ ಕೆಂಪು ಕಾರಿನಲ್ಲಿ ಕುಳಿತುಕೊಳ್ಳಲಾಗದೇ ವಾಜಪೇಯಿ ಕೆಳಗೆ ಇಳಿದಿದ್ದರು. ಅಟಲ್‍ಜೀ ಬೆಂಗಳೂರಿಗೆ ಬಂದಾಗ ಆಪ್ತ ಆರ್‍ಎಸ್‍ಎಸ್‍ನ ಕೆ.ನರಹರಿ ಮನೆಗೆ ನೇರವಾಗಿ ತೆರಳುತ್ತಿದ್ರಂತೆ. ಕೆ.ನರಹರಿ ತಾಯಿಯ ಅಡುಗೆ ಕೈ ರುಚಿಗೆ ವಾಜಪೇಯಿ ಮಾರು ಹೋಗಿದ್ದಲ್ಲದೇ, ರೋಟಿ ಮಾಡಿಸಿಕೊಂಡು ತಿಂದು ಬರುತ್ತಿದ್ದರು.

    1994ರ ಚುನಾವಣೆಯಲ್ಲಿ ಹುಣಸೂರಿನಿಂದ ಸಿ ಹೆಚ್ ವಿಜಯಶಂಕರ್ ಸ್ಪರ್ಧೆ ಮಾಡಿದ್ದರು. ವಿಜಯಶಂಕರ್ ಪರ ಪ್ರಚಾರಕ್ಕೆ ಬಂದಿದ್ದ ವಾಜಪೇಯಿ ಇಷ್ಟು ದಿನ ಶಂಕರ ಮಾತ್ರ ನಮ್ಮೊಂದಿಗೆ ಇದ್ದ.. ಈಗ ವಿಜಯ ಸೇರಿಕೊಳ್ಳಲಿದೆ ಎಂದಿದ್ದರು. ದೆಹಲಿಯಲ್ಲಿ ಭೇಟಿ ಮಾಡಿದಾಗ ಮಹಾರಾಜನನ್ನ ಸೋಲಿಸಿದ್ದು ನೀವೇನಾ ಎಂದು ಪ್ರಶ್ನಿಸಿದ್ದರು ಎಂಬಂತಹ ಮಾಹಿತಿಗಳು ತಿಳಿದುಬಂದಿದೆ. ಒಟ್ಟಿನಲ್ಲಿ ಅಜಾತಶತ್ರು, ಮಹಾನ್ ನಾಯಕನನ್ನು ಕಳೆದುಕೊಂಡ ದೇಶವೇ ಕಂಬನಿ ಮಿಡಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಗೃಹದಲ್ಲಿ ಅಟಲ್‍ಜಿ ಪಾರ್ಥಿವ ಶರೀರ – ಸಂಜೆ 4 ಗಂಟೆಗೆ ಅಂತ್ಯಕ್ರಿಯೆ

    ಸ್ವಗೃಹದಲ್ಲಿ ಅಟಲ್‍ಜಿ ಪಾರ್ಥಿವ ಶರೀರ – ಸಂಜೆ 4 ಗಂಟೆಗೆ ಅಂತ್ಯಕ್ರಿಯೆ

    ನವದೆಹಲಿ: ಅಜಾತಶತ್ರು, ಮಾಜಿ ಪ್ರಧಾನಿ ವಾಜಪೇಯಿ ಅಗಲಿಕೆಯೊಂದಿಗೆ ದೇಶದಲ್ಲಿ ಒಂದು ಯುಗಾಂತ್ಯವಾಗಿದೆ. ಈ ಮಹಾನ್ ನಾಯಕನ ಅಂತಿಮ ದರ್ಶನಕ್ಕೆ ಇದೀಗ ಗಣ್ಯರ ದಂಡೇ ಹರಿದು ಬರ್ತಿದೆ.

    ಬೆಳಗ್ಗೆ 9 ಗಂಟೆವರೆಗೆ ದೆಹಲಿಯ 6ಎ ಕೃಷ್ಣಮೆನನ್ ಮಾರ್ಗ್‍ನಲ್ಲಿರುವ ವಾಜಪೇಯಿ ನಿವಾಸದಲ್ಲಿಯೇ ದರ್ಶನಕ್ಕೆ ಇಡಲಾಗುತ್ತೆ. ಈ ವೇಳೆ ಬಂಧು ಮಿತ್ರರಿಗೆ ಮತ್ತು ಗಣ್ಯರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಂತರ 9 ಗಂಟೆಗೆ ಕೃಷ್ಣಮೆನನ್ ಮಾರ್ಗ್‍ನ ನಿವಾಸದಿಂದ ಪಾರ್ಥಿವ ಶರೀರದ ಮೆರವಣಿಗೆ ಹೊರಡಲಿದ್ದು, 5 ಕಿಲೋಮೀಟರ್ ದೂರದ ಬಿಜೆಪಿ ಮುಖ್ಯ ಕಚೇರಿಗೆ ತಲುಪಲಿದೆ.

    ಅಲ್ಲಿ 2 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ. ಬಳಿಕ 9 ಕಿಲೋಮೀಟರ್ ದೂರದ ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ.

    ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಪ್ರಧಾನಿಗೆ ಸಿಕ್ಕಿದೆ 7 ಟಾಪ್ ಗೌರವಗಳು- ನಿಭಾಯಿಸಿದ ಹುದ್ದೆಗಳು ಎಷ್ಟು ಗೊತ್ತೆ?

    ಮಾಜಿ ಪ್ರಧಾನಿಗೆ ಸಿಕ್ಕಿದೆ 7 ಟಾಪ್ ಗೌರವಗಳು- ನಿಭಾಯಿಸಿದ ಹುದ್ದೆಗಳು ಎಷ್ಟು ಗೊತ್ತೆ?

    ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಾಗಿದ್ದ ವಾಜಪೇಯಿ ಅವರಿಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ಅಷ್ಟೇ ಅಲ್ಲದೇ ಅವರು ಹಲವು ಹುದ್ದೆಗಳುನ್ನು ಅವರು ನಿಭಾಯಿಸಿದ್ದಾರೆ. ಹೀಗಾಗಿ ಇಲ್ಲಿ ವಾಜಪೇಯಿ ಅವರಿಗೆ ಸಿಕ್ಕಿದ ಹುದ್ದೆಗಳು ಮತ್ತು ಪ್ರಶಸ್ತಿಗಳ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪ್ರಶಸ್ತಿಗಳು:
    * 1992: ಪದ್ಮವಿಭೂಷಣ
    * 1993: ಕಾನ್ಪುರ ವಿವಿಯಿಂದ ಗೌರವ ಡಾಕ್ಟರೇಟ್
    * 1994: ಲೋಕಮಾನ್ಯ ತಿಲಕ್ ಪ್ರಶಸ್ತಿ
    * 1994: ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ
    * 1994: ಭಾರತ ರತ್ನ ಪಂಡಿತ್ ಗೋವಿಂದ ವಲ್ಲಭ ಪಂತ್ ಪ್ರಶಸ್ತಿ
    * 2015: ಭಾರತ ರತ್ನ ಗೌರವ
    * 2015: ಬಾಂಗ್ಲಾ ಸರ್ಕಾರದಿಂದ ‘ಲಿಬರೇಶನ್ ಆಫ್ ವಾರ್ ಪ್ರಶಸ್ತಿ ( ಬಾಂಗ್ಲಾದೇಶ ಸರ್ಕಾರ ನೀಡುವ ಅತ್ಯುತ್ತನ ನಾಗರಿಕ ಗೌರವ)

    ನಿಭಾಯಿಸಿದ ಹುದ್ದೆಗಳು

    * 1951: ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ
    * 1957: ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆ(ಮೂರು ಕಡೆ ಸ್ಪರ್ಧೆ, ಮಥುರಾ, ಲಕ್ನೋದಲ್ಲಿ ಸೋಲು. ಉತ್ತರ ಪ್ರದೇಶದ ಬಲ್‍ರಂಪುರ ಕ್ಷೇತ್ರದಿಂದ ಆಯ್ಕೆ ಆಯ್ಕೆ, ಜನಸಂಘ ಪಕ್ಷ)
    * 1957-77: ಭಾರತೀಯ ಜನಸಂಘದ ಸಂಸದೀಯ ಸಮಿತಿಯ ನಾಯಕ
    * 1962: ಲೋಕಸಭಾ ಚುನಾವಣೆಯಲ್ಲಿ ಸೋಲು
    * 1962: ರಾಜ್ಯಸಭೆಯ ಸದಸ್ಯನಾಗಿ ಆಯ್ಕೆ
    * 1966: ಸರ್ಕಾರದ ಭರವಸೆಗಳ ಕುರಿತಾದ ಸಮಿತಿಯ ಅಧ್ಯಕ್ಷ

    * 1967-71 ಎರಡನೇ ಬಾರಿಗೆ ಲೋಕಸಭೆಗೆ ಆಯ್ಕೆ (ಬಲ್‍ರಂಪುರ ಕ್ಷೇತ,ಜನಸಂಘ ಪಕ್ಷ್ರ)
    * 1967-70: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ
    * 1968-73: ಭಾರತೀಯ ಜನಸಂಘದ ಅಧ್ಯಕ್ಷ
    * 1971-77 ಲೋಕಸಭೆಗೆ ಮೂರನೇ ಬಾರಿ ಆಯ್ಕೆ(ಗ್ವಾಲಿಯರ್ ಮಧ್ಯಪ್ರದೇಶ ಜನಸಂಘ ಪಕ್ಷ)
    * 1977-80: ಲೋಕಸಭೆಗೆ ನಾಲ್ಕನೇಯ ಬಾರಿ ಆಯ್ಕೆ(ದೆಹಲಿ, ಜನತಾ ಪಕ್ಷದಿಂದ ಆಯ್ಕೆ)

    * 1977-79: ಮೋರಾರ್ಜಿ ದೇಸಾಯಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ
    * 1977-80: ಜನತಾ ಪಕ್ಷದ ಸಂಸ್ಥಾಪಕ ಸದಸ್ಯ
    * 1980-84: ಲೋಕಸಭೆಗೆ ಐದನೇ ಬಾರಿ ಆಯ್ಕೆ(ದೆಹಲಿ, ಬಿಜೆಪಿಯಿಂದ ಆಯ್ಕೆ)
    * 1980-86: ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ನೇಮಕ
    * 1986 : ರಾಜ್ಯಸಭೆ ಸದಸ್ಯರಾಗಿ ನೇಮಕ

    * 1991: ಆರನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1991-93: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ
    * 1993-96: ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ, ಲೋಕಸಭೆಯ ವಿರೋಧ ಪಕ್ಷದ ನಾಯಕ
    * 1996: ಏಳನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1996 ಮೇ.16: ಪ್ರ್ರಧಾನಿಯಾಗಿ ನೇಮಕ. 13 ದಿನಗಳಲ್ಲಿ ಸರ್ಕಾರ ಪತನ

    * 1996-97: ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ನಿರ್ವಹಣೆ* 1998: ಎಂಟನೇ ಬಾರಿಗೆ ಲೋಕಸಭೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1998-99: ಎರಡನೇ ಬಾರಿ ಪ್ರಧಾನಿಯಾಗಿ ನೇಮಕ
    * 1999: ಒಂಭತ್ತನೆ ಬಾರಿ ಲೋಕಭೆಗೆ ಆಯ್ಕೆ (ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1999 ಅಕ್ಟೋಬರ್ 13 ರಿಂದ 2004 ಮೇ 13ರವರೆಗೆ ಅಧಿಕಾರ
    * 2004: ಹತ್ತನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 2005: ರಾಜಕೀಯದಿಂದ ನಿವೃತ್ತಿ

    https://youtu.be/RuoTJWHKNDY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜಕಾರಣದಲ್ಲಿ ಉತ್ತುಂಗದಲ್ಲಿ ಕಾಣುವ ಮೊದಲನೇ ವ್ಯಕ್ತಿ ವಾಜಪೇಯಿ: ಹೆಚ್‍ಡಿಡಿ

    ರಾಜಕಾರಣದಲ್ಲಿ ಉತ್ತುಂಗದಲ್ಲಿ ಕಾಣುವ ಮೊದಲನೇ ವ್ಯಕ್ತಿ ವಾಜಪೇಯಿ: ಹೆಚ್‍ಡಿಡಿ

    ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಟಲ್ ಬಿಹಾರ್ ವಾಜಪೇಯಿಯವರು ರಾಜಕಾರಣದಲ್ಲಿ ಉತ್ತುಂಗದಲ್ಲಿ ಕಾಣುವ ಮೊದಲನೇ ವ್ಯಕ್ತಿಯೆಂದು ಕೊಂಡಾಡಿದ್ದಾರೆ.

    ಭಾವುಕರಾದ ಎಚ್‍ಡಿಡಿ:
    ವಾಜಪೇಯಿಯವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ. 4 ದಶಕಗಳ ಕಾಲ ರಾಜಕೀಯದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಹೊಂದಿ ಇಂದು ತಮ್ಮ ಪಯಣವನ್ನು ಮುಕ್ತಗೊಳಿಸಿದ್ದಾರೆ. ಅವರು ವಿದೇಶಾಂಗ ಮಂತ್ರಿಯಾಗಿ, ಪ್ರಧಾನಿಯಾಗಿ ರಾಷ್ಟ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ.

    ಅವರೊಬ್ಬ ಶ್ರೇಷ್ಠ ನಾಯಕರು. ಅವರ ಭಾಷಣ ಕೇಳಲು ವಿರೋಧ ಪಕ್ಷದಲ್ಲಿದ್ದ ನಾನು ಸ್ವತಃ ತೆರಳುತ್ತಿದ್ದೆ. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ತನ್ನ ಶತ್ರುವನ್ನು ಸಹ ಎಂದಿಗೂ ಕಟುವಾಗಿ ಮಾತನಾಡಿಸಿದ ವ್ಯಕ್ತಿ ಅವರಲ್ಲ. ನಾನು ಪ್ರಧಾನಿಯಾಗಿದ್ದಾಗ ಲೋಕಸಭಾ ಕಾರ್ಯಕಲಾಪಕ್ಕೆ ಎಂದಿಗೂ ಅಡ್ಡಿಪಡಿಸಿರಲಿಲ್ಲ. ಯುದ್ಧ ಸಾಮಗ್ರಿ ಖರೀದಿ ವೇಳೇ ನನ್ನ ಸರ್ಕಾರದ ಪರ ನಿಂತಿದ್ದರು. ಅಲ್ಲದೇ ನಾನು ರಾಜೀನಾಮೆ ಕೊಡುವ ಸಮಯ ಬಂದಾಗ, ನೀವು ನಿಶ್ಚಂತೆಯಿಂದಿರಿ ನಾನು ನಿಮ್ಮ ಸ್ಥಾನವನ್ನು ಉಳಿಸಿಕೊಡುತ್ತೇನೆಂದು ಪಕ್ಷದ ಮುಖಂಡರ ಮನವೊಲಿಸಿದ ಮಹಾನ್ ವ್ಯಕ್ತಿ ವಾಜಪೇಯಿ.

    ಅಟಟಲ್ ಬಿಹಾರಿ ವಾಜಪೇಯಿಯವರು ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆದ ವ್ಯಕ್ತಿಯಾಗಿದ್ದಾರೆ. ಅಲ್ಲದೇ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ಸಂಬಂಧ ಉತ್ತಮ ಪಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಅಲ್ಲದೇ ಲಾಹೋರ್‍ಗೂ ತೆರಳಿ ಮುಷರಫ್‍ರೊಂದಿಗೆ ಮಾತುಕತೆಯನ್ನು ಮಾಡಿದ್ದರು. ಆದರೆ ಅವರ ಪ್ರಯತ್ನ ಸಫಲವಾಗಲಿಲ್ಲ. ಪಾಕಿಸ್ತಾನ ತನ್ನ ಕುತಂತ್ರದಿಂದ ಯುದ್ಧ ಮಾಡಿತು. ಆದರೆ ನಮ್ಮ ಶಕ್ತಿ ಏನೆಂದು ಕಾರ್ಗಿಲ್ ಯುದ್ಧದ ಮೂಲಕ ಪಾಕಿಸ್ತಾನಕ್ಕೆ ತೋರಿಸಿ ಕೊಟ್ಟಿದ್ದರು.

    ನಾನು ಪ್ರಧಾನಿಯಾಗಿದ್ದಾಗ ಅಣು ಪರೀಕ್ಷೆ ನಿರ್ಧಾರಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಅವರು ಅದನ್ನು ಮಾಡಿಸಿ ತೋರಿಸಿ, ಎಲ್ಲಾ ರಾಷ್ಟ್ರಗಳಲ್ಲೂ ಭಯ ಹುಟ್ಟಿಸುವಂತೆ ಮಾಡಿದ್ದರು. ರಾಜಕಾರಣ ಹೇಗೆ ನಡೆಸಬೇಕು ಅನ್ನೋದನ್ನ ಅವರ ಗೋದ್ರಾ ಪ್ರಕರಣವೇ ಸಾಕ್ಷಿಯಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜಧರ್ಮ ಪಾಲನೆ ಮಾಡಿಲ್ಲ ಅಂತ ಹೇಳಿದ್ದರು. ಅದು ವಾಜಪೇಯಿಯವರ ವ್ಯಕ್ತಿತ್ವ, ಇಂದು ನಮ್ಮನ್ನೆಲ್ಲಾ ಅವರು ಬಿಟ್ಟುಹೋಗಿದ್ದಾರೆ ವಿಷಾದ ವ್ಯಕ್ತಪಡಿಸಿದರು.

    ಅಟಲ್ ಬಿಹಾರಿ ವಾಜಪೇಯಿಯವರು ದೇಶಕ್ಕೆ ಅಪಾರ ಕೊಡಗೆಯನ್ನು ನೀಡಿದ್ದಾರೆ. ಅವರು ಜಾತಿ, ಧರ್ಮ ಎನ್ನದೇ ಕೇವಲ ಭಾರತೀಯರ ಅಭಿವೃದ್ಧಿಗೆ ಶ್ರಮಿಸಿದ್ದರು. ಯಾರ ಮನಸ್ಸನ್ನು ನೋಯಿಸಬಾರದು ಅನ್ನುವುದು ಅವರ ಆಶಾವಾದವಾಗಿತ್ತು. ನನ್ನ ಸರ್ಕಾರವನ್ನು ಉಳಿಸಲು ಕೊನೆ ಕ್ಷಣದವರೆಗೂ ಪ್ರಯತ್ನ ಪಟ್ಟವರು ಅಟಲ್ ಜೀ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ಅಗಲಿಕೆ ತುಂಬುವ ಶಕ್ತಿ ನೀಡಲಿ, ನಾನು ಸಹ ದೆಹಲಿಗೆ ಪ್ರಯಾಣ ಬೆಳೆಸಿ, ಅವರ ಅಂತಿಮ ದರ್ಶನ ಮಾಡಿಕೊಳ್ಳುತ್ತೇನೆಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv