Tag: ಮಾಜಿ ಪ್ರಧಾನಿ ಮನಮೋಹನ್ ಸಿಂಗ್

  • ಮೋದಿ ತಮ್ಮ ಮಾತಿನಿಂದಾಗೋ ಪರಿಣಾಮವನ್ನ ಅರಿಯಬೇಕು: ಮನಮೋಹನ್ ಸಿಂಗ್

    ಮೋದಿ ತಮ್ಮ ಮಾತಿನಿಂದಾಗೋ ಪರಿಣಾಮವನ್ನ ಅರಿಯಬೇಕು: ಮನಮೋಹನ್ ಸಿಂಗ್

    – ಚೀನಾ, ಭಾರತ ಸಂಘರ್ಷದ ಬಗ್ಗೆ ಪ್ರಧಾನಿಗೆ ಪತ್ರ

    ನವದೆಹಲಿ: ತಮ್ಮ ಮಾತಿನಿಂದಾಗುವ ಪರಿಣಾಮವನ್ನ ಪ್ರಧಾನಿ ನರೇಂದ್ರ ಮೋದಿ ಅರಿಯಬೇಕು ಎಂದು ಮಾಜಿ ಪ್ರಧಾನಿ, ಕಾಂಗ್ರೆಸ್ ಹಿರಿಯ ಮುಖಂಡ ಮನಮೋಹನ್ ಸಿಂಗ್ ಹೇಳಿದ್ದಾರೆ.

    ಸರ್ವಪಕ್ಷ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, “ದೇಶದ ಗಡಿಯನ್ನು ರಕ್ಷಿಸಲು ನಮ್ಮ ಸೇನಾ ಪಡೆಗಳು ಸಂಪೂರ್ಣ ಸಮರ್ಥವಾಗಿವೆ. ದೇಶದೊಳಗೆ ಯಾರೂ ಪ್ರವೇಶ ಮಾಡಿಲ್ಲ. ಯಾವುದೇ ಅಧಿಕಾರಿಯನ್ನು ಚೀನಾ ಸೆರೆ ಹಿಡಿದಿಲ್ಲ” ಎಂದು ಹೇಳಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮನಮೋಹನ್ ಸಿಂಗ್ ಅವರು, “ಲಡಾಕ್‍ನಲ್ಲಿ ಮೃತಪಟ್ಟ ಸೈನಿಕರಿಗೆ ಪ್ರಧಾನಿ ನ್ಯಾಯ ಒದಗಿಸಬೇಕು. ಜನರ ನಂಬಿಕೆಯನ್ನು ಹಾಳು ಮಾಡುವುದು ಐತಿಹಾಸಿಕ ದ್ರೋಹವಾಗಿದೆ” ಎಂದು ಹೇಳಿದ್ದಾರೆ.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಈ ಮೂಲಕ ಹುತಾತ್ಮರಾದ ಯೋಧರ ತ್ಯಾಗವನ್ನು ವ್ಯರ್ಥ ಮಾಡದಂತೆ ಮನವಿ ಸಲ್ಲಿಸಿದ್ದಾರೆ.

    ಪತ್ರದಲ್ಲಿ ಏನಿದೆ?:
    ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಜೂನ್ 15ರಿಂದ 16ರವರೆಗೆ 20 ಮಂದಿ ಯೋಧರನು ಕಳೆದುಕೊಂಡಿದ್ದೇವೆ. ಅವರು ದೇಶಕ್ಕಾಗಿ ತ್ಯಾಗ, ಶೌರ್ಯ ಮತ್ತು ಕರ್ತವ್ಯದ ಮೂಲಕ ಶ್ರಮಿಸಿ ಅಂತಿಮವಾಗಿ ಪ್ರಾಣವನ್ನು ಅರ್ಪಿಸಿದರು. ನಮ್ಮ ಕೆಚ್ಚೆದೆಯ ಸೈನಿಕರು ಮಾತೃಭೂಮಿಗಾಗಿ ಕೊನೆಯ ಉಸಿರಿನವರೆಗೂ ಹೋರಾಡಿದರು. ಅದಕ್ಕಾಗಿ ನಾವು ಅವರ ಕುಟುಂಬಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ, ಬೆಂಬಲಕ್ಕೆ ನಿಲ್ಲಬೇಕಿದೆ. ಅವರ ತ್ಯಾಗವನ್ನು ವ್ಯರ್ಥ ಮಾಡಲು ನಾವು ಬಿಡಬಾರದು.

    ಈ ಕ್ಷಣದಲ್ಲಿ ನಾವು ಐತಿಹಾಸಿಕ ಸಂದರ್ಭದಲ್ಲಿ ನಿಲ್ಲುತ್ತೇವೆ. ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಾರ್ಯಗಳು ಯುವ ಪೀಳಿಗೆ ನಮ್ಮನ್ನು ಹೇಗೆ ಗ್ರಹಿಸುತ್ತವೆ ಎಂಬುದರ ಬಗ್ಗೆ ಗಂಭೀರವಾದ ಪ್ರಭಾವ ಬೀರುತ್ತವೆ. ಪ್ರಧಾನಿ ನಮ್ಮನ್ನು ಮುನ್ನಡೆಸುವವರು ಕರ್ತವ್ಯವನ್ನು ಹೊಂದಿದ್ದಾರೆ. ಪ್ರಧಾನ ಮಂತ್ರಿಗಳ ಕಚೇರಿಗೆ ಪ್ರಜಾಪ್ರಭುತ್ವದಲ್ಲಿ ಅಂತಹ ವಿಶೇಷ ಜವಾಬ್ದಾರಿ ಇರುತ್ತದೆ. ರಾಷ್ಟ್ರದ ಭದ್ರತೆಯ ಕಾರ್ಯತಂತ್ರ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಮೇಲೆ ಪ್ರಧಾನಿ ಹಾಗೂ ಅವರ ಕಚೇರಿಯಿಂದ ಬರುವ ಹೇಳಿಕೆಗಳ ಪರಿಣಾಮವನ್ನು ಯಾವಾಗಲೂ ಗಮನದಲ್ಲಿರಿಸಿಕೊಳ್ಳಬೇಕು.

    2020ರ ಏಪ್ರಿಲ್‍ನಿಂದ ಇಲ್ಲಿಯವರೆಗೆ ಅನೇಕ ಬಾರಿ ದಾಳಿ ಮಾಡುವ ಮೂಲಕ ಚೀನಾ ನಿರ್ಭಯವಾಗಿ ಮತ್ತು ಕಾನೂನುಬಾಹಿರವಾಗಿ ಭಾರತದ ಭೂಪ್ರದೇಶಗಳಾದ ಗಾಲ್ವಾನ್ ಕಣಿವೆ ಮತ್ತು ಪಾಂಗೊಂಗ್ ತ್ಸೋ ಸರೋವರವನ್ನು ಅತಿಕ್ರಮಣ ಮಾಡುತ್ತಿದೆ. ಚೀನಾ ಬೆದರಿಕೆಗಳಿ ನಾವು ಹೆದರುವ ಅಗತ್ಯವೇ ಇಲ್ಲ. ದೇಶದ ಪ್ರಾದೇಶಿಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲು ಅನುಮತಿಸುವುದಿಲ್ಲ.

    ರಾಜತಾಂತ್ರಿಕತೆ ಅಥವಾ ನಿರ್ಣಾಯಕ ನಾಯಕತ್ವಕ್ಕೆ ತಪ್ಪು ಮಾಹಿತಿಯು ಪರ್ಯಾಯವಲ್ಲ ಎಂದು ನಾವು ಸರ್ಕಾರಕ್ಕೆ ನೆನಪಿಸುತ್ತೇವೆ. ಸುಳ್ಳು ಹೇಳಿಕೆಗಳ ಮೂಲಕ ಸತ್ಯವನ್ನು ನಿಗ್ರಹಿಸುವುದು ಸರಿಯಲ್ಲ. ಹುತಾತ್ಮ ಕರ್ನಲ್ ಬಿ. ಸಂತೋಷ್ ಬಾಬು ಮತ್ತು ಸೈನಿಕರ ತ್ಯಾಗವನ್ನು ಅರಿತು ದೇಶದ ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ಸಮರ್ಥಿಸಿಕೊಂಡ ನ್ಯಾಯವನ್ನು ಖಚಿತಪಡಿಸಿಕೊಳ್ಳಬೇಕು. ಈ ನಿಟ್ಟಿ ಕೇಂದ್ರ ಸರ್ಕಾರ ಶ್ರಮಿಸಬೇಕು ಎಂದು ಒತ್ತಾಯಿಸುತ್ತೇವೆ. ದೇಶದ ಜನರ ನಂಬಿಕೆಯನ್ನು ಕಡೆಗಣಿಸುವುದು ಐತಿಹಾಸಿಕ ದ್ರೋಹವಾಗಿದೆ.

  • ಮೋದಿ ವಿದೇಶ ಪ್ರವಾಸದ ಲೆಕ್ಕ

    ಮೋದಿ ವಿದೇಶ ಪ್ರವಾಸದ ಲೆಕ್ಕ

    ನವದೆಹಲಿ: ನರೇಂದ್ರಮೋದಿ ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಬಳಿಕ ಹಲವು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದು, ತಮ್ಮ ಆಡಳಿತ ಅವಧಿಯ ಅಂತಿಮ ಪ್ರವಾಸವನ್ನು ಈ ತಿಂಗಳಿನಲ್ಲಿ ಕೈಗೊಳ್ಳುವ ನಿರೀಕ್ಷೆ ಇದೆ.

    ಕಳೆದ ಐದು ವರ್ಷಗಳಲ್ಲಿ ಮೋದಿ ಅವರು ಏರ್ ಇಂಡಿಯಾ ಸಂಸ್ಥೆಯ ಮೂಲಕ ವಿದೇಶಿ ಪ್ರವಾಸಗೊಂಡ ಪರಿಣಾಮ ಸಂಸ್ಥೆ ಒಟ್ಟು 443.4 ಕೋಟಿ ರೂ. ಮೊತ್ತದ ಬಿಲ್ ನೀಡಿದೆ. ಪ್ರಧಾನಿ ಮಂತ್ರಿಗಳ ಅಧಿಕೃತ ಕಚೇರಿ ಈ ಮಾಹಿತಿಯನ್ನು ನೀಡಿದೆ.

    ಮೋದಿ ಅವರಿಗೂ ಮುನ್ನ 2ನೇ ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು, 2009-14ರ ಅವಧಿಯಲ್ಲಿ 38 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದರು. ಆ ವೇಳೆ ಕೇಂದ್ರ ಸರ್ಕಾರ 493.22 ಕೋಟಿಗಳನ್ನು ಏರ್ ಇಂಡಿಯಾಗೆ ಪಾವತಿ ಮಾಡಿತ್ತು.

    ವಿದೇಶಿ ಪ್ರವಾಸದ ವಿಚಾರವಾಗಿ ಪ್ರಧಾನಿ ಮೋದಿ ಅವರು ವಿಪಕ್ಷಗಳಿಂದ ಭಾರೀ ಟೀಕೆಗೆ ಗುರಿಯಾಗಿದ್ದರು. ಆದರೆ ಮೋದಿ ಅವರು ಪ್ರಧಾನಿ ಆಗುವ ಮುನ್ನ 2ನೇ ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗಿಂತಲೂ 50 ಕೋಟಿ ರೂ. ವೆಚ್ಚ ಕಡಿಮೆ ಇದೆ. ಆದರೆ ಪಿಎಂಒ ನೀಡಿರುವ ಮಾಹಿತಿ ಅನ್ವಯ ಈ ಬಿಲ್ ನಲ್ಲಿ ಇನ್ನು 5 ಪ್ರವಾಸಗಳ ಖರ್ಚಿನ ಪ್ರಮಾಣವನ್ನು ಸೇರಿಸಬೇಕಿದೆ.

    ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಎಇ ಸರ್ಕಾರ ಅತ್ಯುನ್ನತ ನಾಗರಿಕ ಪುರಸ್ಕಾರ ‘ಝೂಯೆದ್ ಮೆಡಲ್’ ಗೌರವನ್ನು ನೀಡಿ ಗೌರವಿಸಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಅವರು ತಿಂಗಳ ಅಂತ್ಯದ ವೇಳೆಗೆ ಯುಎಇಗೆ ಭೇಟಿ ನೀಡಿರುವ ಸಾಧ್ಯತೆಗಳಿವೆ.

    ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸಗಳ ಪರಿಣಾಮ ವಿಶ್ವಮಟ್ಟದಲ್ಲಿ ಭಾರತದ ಮೇಲಿನ ಗೌರವ ಹಾಗೂ ದೇಶದ ವರ್ಚಸ್ಸು ಹೆಚ್ಚಾಗಿದ್ದು, ನ್ಯೂಕ್ಲಿಯರ್ ಪವರ್, ಪ್ರಮುಖ ಆರ್ಥಿಖ ಒಪ್ಪಂದಗಳು ಹಾಗೂ ಪ್ರಪಂಚದ ಇತರೇ ದೇಶಗಳೊಂದಿಗೆ ಉತ್ತಮ ಸಂಪರ್ಕವನ್ನು ರೂಪಿಸಿದೆ. ಪ್ರಮುಖವಾಗಿ ಮೋದಿ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು ಕೂಡ ಅವರ ಪ್ರಯಾಣ ವೆಚ್ಚ ಕಡಿಮೆ ಆಗಲು ಕಾರಣವಿದ್ದು, ಒಮ್ಮೆ ಒಂದು ದೇಶಕ್ಕ ಪ್ರವಾಸ ಕೈಗೊಳ್ಳುವ ಬದಲು ಹೆಚ್ಚಿನ ದೇಶಗಳನ್ನು ಭೇಟಿ ನೀಡಿದ್ದೇ ಕಾರಣ ಎನ್ನಲಾಗಿದೆ.

    2015 ರಲ್ಲಿ ಮಾಧ್ಯಮವೊಂದರ ಸಂದರ್ಶನದ ವೇಳೆಯೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದ ಮೋದಿ, ‘ಸಿಂಗಲ್ ಟಿಕೆಟ್, ಡಬಲ್ ಜರ್ನಿ’ ಎಂದು ತಿಳಿಸಿದ್ದರು. ಒಮ್ಮೆಗೆ ಮೋದಿ 6 ದೇಶಗಳನ್ನು ಭೇಟಿ ನೀಡಿದ್ದು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈ ವೇಳೆ ಮೋದಿ ಅವರು ಉಜ್ಜೇಕಿಸ್ತಾನ್, ಖಜಕಿಸ್ತಾನ್, ರಷ್ಯಾ, ತಜಕಿಸ್ತಾನ್, ಕಿರ್ಗೀಸ್ ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಅಲ್ಲದೇ ತಮ್ಮ ಕೆಲ ದೇಶಗಳಿಗ ಪ್ರವಾಸ ಕೈಗೊಳ್ಳುವ ವೇಳೆ ಬಿಸಿನೆಸ್ ಕ್ಲಸ್ ನಲ್ಲಿ ಪ್ರಯಾಣಿಸಿದ್ದರು. ನೇಪಾಳ, ಬಾಂಗ್ಲಾದೇಶ, ಇರಾನ್, ಸಿಂಗಾಪೂರ್ ಭೇಟಿಗೆ ವಿವಿಐಪಿ ಸೇವೆ ಬದಲು ಬೋಯಿಂಗ್ 727 ಬಿಸಿನಿಎಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಿದ್ದರು.

  • ಮೋದಿ ದೇಶದಲ್ಲಿ `ಮೌನಿ ಬಾಬಾ’, ವಿದೇಶದಲ್ಲಿ ಮಾತ್ರ ಮಾತಾಡ್ತಾರೆ : ಶಿವಸೇನೆ

    ಮೋದಿ ದೇಶದಲ್ಲಿ `ಮೌನಿ ಬಾಬಾ’, ವಿದೇಶದಲ್ಲಿ ಮಾತ್ರ ಮಾತಾಡ್ತಾರೆ : ಶಿವಸೇನೆ

    ಮುಂಬೈ: ಬಿಜೆಪಿ ಪಕ್ಷದ ಬಹುಕಾಲದ ಮಿತ್ರ ಪಕ್ಷವಾಗಿದ್ದ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮೋದಿ ದೇಶದ ಸ್ಥಳೀಯ ವಿಷಯಗಳನ್ನು ವಿದೇಶಿದಲ್ಲಿ ನಿಂತು ಮಾತನಾಡುತ್ತಾರೆ. ಪ್ರಧಾನಿಗಳ ಈ ನಡೆ ಸೂಕ್ತವಲ್ಲ ಎಂದು ಕಿಡಿಕಾರಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಇಂಗ್ಲೆಂಡ್ ಪ್ರವಾಸವನ್ನು ಟೀಕಿಸಿರುವ ಶಿವಸೇನೆ, ಬಹುಕೋಟಿ ಸಾಲ ಮಾಡಿ ಇಂಗ್ಲೆಂಡ್ ಗೆ ಪರಾರಿಯಾಗಿರುವ ವಿಜಯ್ ಮಲ್ಯ ಅಲ್ಲೇ ಇದ್ದರೂ ಪ್ರಧಾನಿಗಳು ಬರಿಗೈ ನಲ್ಲಿ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ ಅಂತಾ ವ್ಯಂಗ್ಯ ಮಾಡಿದೆ.

    ತನಗೆ ಕಾಂಗ್ರೆಸ್ ಅಥವಾ ಗಾಂಧಿ ಹೆಸರಿನ ಕುಟುಂಬದ ವಿರುದ್ಧ ಅಸಮಾಧಾನವಿದ್ದು, ಆದರೆ ದೇಶದ ವಿಷಯಗಳ ಕುರಿತು ವಿದೇಶದಲ್ಲಿ ಮಾತನಾಡುವುದು ಯಾರಿಗೂ ಲಾಭ ತಂದು ಕೊಡುವುದಿಲ್ಲ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹೇಳಿದೆ.

    ಇದೇ ವೇಳೆ ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಯನ್ನು ಅನುಸರಿಸಬೇಕು ಎಂದು ತಿಳಿಸಿದೆ. ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಮನಮೋಹನ್ ಸಿಂಗ್ ತಮ್ಮ ಆಡಳಿತ ಅವಧಿಯಲ್ಲಿ ಹೇಗೆ ತಮ್ಮನ್ನು ಮೌನಿ ಎಂದು ಟೀಕಿಸುತ್ತಿದ್ದು ಇಂದು ತಮಗೂ ಆನ್ವಯವಾಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಶೀವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

    ಇಂಗ್ಲೆಂಡ್ ಪ್ರವಾಸದ ವೇಳೆ ಪ್ರಧಾನಿ ಮೋದಿ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಲಂಡನ್ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಭಾವುಕರಾಗಿದ್ದರು. ಅಲ್ಲದೇ ಕಳೆದ ಬಾರಿ ಜಪಾನ್ ಪ್ರವಾಸದ ವೇಳೆ ಸಭೆಯೊಂದರಲ್ಲಿ ಭ್ರಷ್ಟಾಚಾರದ ಕುರಿತು ಹೇಳಿಕೆ ನೀಡಿದ್ದರು. ಈ ಎರಡು ಘಟನೆಗಳನ್ನು ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿರುವ ಶಿವಶೇನೆ ವಿದೇಶದಲ್ಲಿ ಭಾರತ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ ದೇಶದ ಹೆಸರಿಗೆ ಕೆಟ್ಟ ಅಭಿಪ್ರಾಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.  ಇದನ್ನೂ ಓದಿ : ದೇಶದ ಮಹಿಳೆಯರ ಸುರಕ್ಷತೆ ಬಗ್ಗೆ ಮೋದಿ ಗಮನ ಹರಿಸಬೇಕು- ಐಎಂಎಫ್ ಮುಖ್ಯಸ್ಥೆ

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸದ್ಯ ಮಾತನಾಡಲು ಆರಂಭಿಸಿದ್ದಾರೆ. ಆದರೆ ಪ್ರಧಾನಿಗಳು ಮೌನಿಯಾಗಿದ್ದಾರೆ. ರಾಹುಲ್ ಗಾಂಧಿ ಮೋದಿ ಅವರನ್ನು ಮೌನವಾಗಿ ಮಾಡಲು 15 ನಿಮಿಷ ಸಮಯಾವಕಾಶ ಕೇಳಿರುವುದು ಪ್ರಧಾನಿ ಮೌನಿಯಾಗಿದ್ದರೆ ಎಂಬುವುದಕ್ಕೆ ಸೂಕ್ತ ಸಾಕ್ಷಿ ಎಂದು ಹೇಳಿದೆ.  ಇದನ್ನೂ ಓದಿ: ನಮಗೆ ದೇಶಭಕ್ತಿ ಬಗ್ಗೆ ಬೋಧನೆ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಧವ್ ಠಾಕ್ರೆ