Tag: ಮಾಂಸಹಾರಿ

  • ಅಯ್ಯಪ್ಪನ ಭಕ್ತರಿಗೆ ಸಸ್ಯಾಹಾರಿ ಎಂದು ಮಾಂಸಾಹಾರಿ ಊಟ ನೀಡಿದ ಹೋಟೆಲ್

    ಅಯ್ಯಪ್ಪನ ಭಕ್ತರಿಗೆ ಸಸ್ಯಾಹಾರಿ ಎಂದು ಮಾಂಸಾಹಾರಿ ಊಟ ನೀಡಿದ ಹೋಟೆಲ್

    ಮಂಗಳೂರು: ಅಯ್ಯಪ್ಪ ಸ್ವಾಮಿ ವೃತಾಧಾರಿಗಳಿಗೆ ಸಸ್ಯಾಹಾರಿ ಊಟ ಇದೆಯೆಂದು ನಂಬಿಸಿ ಮಾಂಸಾಹಾರಿ ಊಟ ನೀಡಿದ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದ್ದು ಹೋಟೆಲ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ಶಬರಿಮಲೆ ಯಾತ್ರೆ ವೇಳೆ ಕಾಸರಗೋಡು ಚೆರ್ಕಳದ ಹಳ್ಳಿಮನೆ ಎಂಬ ಹೋಟೆಲ್ ನಲ್ಲಿ ಘಟನೆ ನಡೆದಿದೆ. 50 ಜನರಿದ್ದ ಅಯ್ಯಪ್ಪ ವೃತಾಧಾರಿಗಳು ಊಟಕ್ಕೆಂದು ಬಸ್ಸು ನಿಲ್ಲಿಸಿ ಚೆರ್ಕಳದ ಹಳ್ಳಿಮನೆ ಹೋಟೆಲ್ ಗೆ ತೆರಳಿದ್ದರು. ಸಸ್ಯಾಹಾರಿ ಊಟ ನೀಡುತ್ತೇವೆ ಎಂದು ನಂಬಿಸಿ ಬಳಿಕ ಮಾಂಸಹಾರಿ ಉಪಹಾರ ಬಡಿಸಿ ವೃತಾಧಾರಿಗಳಿಗೆ ಅವಮಾನ ಮಾಡಿದ್ದಾರೆ.

    ಹೋಟೆಲ್ ಮಾಲೀಕ ತುಂಬಾ ಜನರಿದ್ದ ಕಾರಣ ಮಾಂಸಹಾರಿ ಊಟದ ಹೋಟೆಲ್ ನಲ್ಲಿ ಸಸ್ಯಹಾರಿ ಊಟ ನೀಡಲು ಮುಂದಾಗಿದ್ದ ಎನ್ನಲಾಗಿದೆ. ಆದರೆ ಮಾಂಸಹಾರಿ ಹೋಟೆಲ್ ಎಂದು ಭಾವಿಸಿದ ಅಯ್ಯಪ್ಪ ವೃತಾಧಾರಿಗಳು ಮಾಲೀಕನನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡು ಬಳಿಕ ತಿಂದ ಆಹಾರಕ್ಕೆ ಹಣ ನೀಡಿ ಹಿಂದಿರುಗಿದ್ದಾರೆ.

  • ಅನೈತಿಕ ಸಂಬಂಧದಿಂದ ಭಗವಾನ್ ಹುಟ್ಟಿದ್ರೆ, ರಾಮನೂ ಮಾಂಸಹಾರಿ: ಬಿಜೆಪಿ ಜಿಲ್ಲಾಧ್ಯಕ್ಷೆ

    ಅನೈತಿಕ ಸಂಬಂಧದಿಂದ ಭಗವಾನ್ ಹುಟ್ಟಿದ್ರೆ, ರಾಮನೂ ಮಾಂಸಹಾರಿ: ಬಿಜೆಪಿ ಜಿಲ್ಲಾಧ್ಯಕ್ಷೆ

    ಕಲಬುರಗಿ: ಪ್ರೊ. ಕೆ.ಎಸ್.ಭಗವಾನ್ ತಾಯಿ ಅನೈತಿಕ ಸಂಬಂಧ ಇಟ್ಟು ಅವನ ಹೆತ್ತಿದ್ದು ನಿಜವಾದ್ರೆ, ರಾಮನು ಕೂಡ ಮಾಂಸಹಾರಿ ಅವನು ಮದ್ಯ ಕುಡಿತಿದ್ದು ಅನ್ನೋದು ಸತ್ಯವಾಗುತ್ತೆ ಎಂದು ಪ್ರೊ. ಭಗವಾನ್ ವಿರುದ್ಧ ಕಲಬುರಗಿ ಮಹಿಳಾ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷೆ (ಪೇಜಾವರ ಸೇನೆ ಜಿಲ್ಲಾಧ್ಯಕ್ಷೆ) ದಿವ್ಯಾ ಹಾಗರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಿಂದೂ ದೇವತೆಗಳ ವಿರುದ್ಧ ಭಗವಾನ್ ಹೇಳಿಕೆ ಖಂಡಿಸಿ ಪೇಜಾವರ ಸೇನೆ ಇಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ದಿವ್ಯಾ ಹಾಗರಗಿ, ಪ್ರೊ. ಭಗವಾನನ್ನು ಶೀಘ್ರ ಬಂಧಿಸದಿದ್ದರೆ, ಅವನ ಬಾಯಿಗೆ ಆಸಿಡ್ ಹಾಕಿ ನಾಲಿಗೆ ಸುಟ್ಟು ಹಾಕುತ್ತೇವೆ. ಭಗವಾನ್ ಒಬ್ಬ ಲು… ಲ… ಎಷ್ಟು ಜನರಿಗೆ ಹುಟ್ಟಿದ್ದಾನೋ ಗೊತ್ತಿಲ್ಲ. ಹೀಗಾಗಿ ಭಗವಾನ್ ಬಾಯಿಗೆ ಬೀಗ ಹಾಕಿ, ಆತ ಹಿಂದೂ ದೇವತೆಗಳನ್ನ ನಿಂದಿಸುವುದೇ ಮಹಾನ್ ಕಾಯಕ ಎಂದುಕೊಂಡಿದ್ದಾನೆ. ಕುಮಾರಸ್ವಾಮಿ ಅವರಿಗೆ ಬೇಕಾದರೆ ತಮ್ಮ ಮನೆಯ ಹಣದಿಂದ ಆತನಿಗೆ ಭದ್ರತೆ ನೀಡಲಿ, ಜನರ ಹಣದಲ್ಲಿ ಆತನಿಗೆ ರಕ್ಷಣೆ ನೀಡಿರುವುದು ಸರಿಯಲ್ಲ ಅಂತಾ ಭಗವಾನ್ ವಿರುದ್ಧ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಮ ಒಬ್ಬ ಕುಡುಕ, ಮಾಂಸ ತಿನ್ತಿದ್ದ- ಮತ್ತೆ ಕೆಂಗಣ್ಣಿಗೆ ಗುರಿಯಾದ ಪ್ರೊ. ಭಗವಾನ್

    ರಾಮ ಮಂದಿರ ಯಾಕೆ ಬೇಡ ಎನ್ನುವ ಪುಸ್ತಕದ ಮೂಲಕ ಹಿಂದೂಗಳ ಆರಾಧ್ಯ ರಾಮ, ಆಂಜನೇಯ, ಸೀತೆಯ ಬಗ್ಗೆ ನಿಂದಿಸಿದ ಪ್ರೊಫೆಸರ್ ಭಗವಾನ್ ಸದ್ಯ ತೀವ್ರ ಚರ್ಚೆಗೀಡಾಗಿದ್ದಾರೆ. ಹೀಗಾಗಿ ಅವರಿಗೆ ಜೀವ ಬೆದರಿಕೆಯಿದ್ದು, ಭಗವಾನ್ ಭದ್ರತೆಗಾಗಿ ರಾಜ್ಯ ಸರ್ಕಾರ ಬರೋಬ್ಬರಿ ಅರ್ಧ ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದೆ. ಸಶಸ್ತ್ರ ಮೀಸಲು ಪಡೆಯ ಮೂವರು ಪೊಲೀಸರು ಮತ್ತು ಓರ್ವ ಪೊಲೀಸ್ ಅಧಿಕಾರಿ ಭಗವಾನ್ ಮನೆಯನ್ನು ಕಾಯುತ್ತಿದ್ದಾರೆ. ಜೊತೆಗೆ ಭಗವಾನ್ ಹೋದ ಬಂದ ಕಡೆಯೆಲ್ಲಾ ಓರ್ವ ಗನ್‍ಮ್ಯಾನ್ ಇರುತ್ತಾರೆ. ಮೈಸೂರಿನಲ್ಲಿರುವ ಭಗವಾನ್ ಮನೆಗೆ ಸರ್ಕಾರ ಕಡೆಯಿಂದಲೇ ಸಿಸಿಟಿವಿ ಅಳವಡಿಸಲಾಗಿದೆ. ಅದರ ನಿರ್ವಹಣೆಯನ್ನೂ ಸರ್ಕಾರವೇ ಮಾಡುತ್ತಿದೆ. ಇದನ್ನೂ ಓದಿ: ಭಗವಾನ್ ಭದ್ರತೆಗೆ ಅರ್ಧ ಕೋಟಿಗೂ ಹೆಚ್ಚು ಖರ್ಚು ಮಾಡ್ತಿದೆ ಸರ್ಕಾರ..!

    ಈ ಬಗ್ಗೆ ಭಗವಾನ್ ಅವರನ್ನು ಪಬ್ಲಿಕ್ ಟಿವಿ ಪ್ರಶ್ನಿಸಿದಾಗ, “ನನಗೆ ಈ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲ. ಇದು ಸರ್ಕಾರ ಮತ್ತು ಸದರಿ ಇಲಾಖೆಗೆ ಬಿಟ್ಟ ವಿಷಯವಾಗಿದೆ. ಸಂವಿಧಾನ ಪ್ರಕಾರವಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ನನ್ನ ಭದ್ರತೆಗೆ ಖರ್ಚು ಆಗುತ್ತಿರುವ ಹಣದ ಬಗ್ಗೆ ಹಾಗೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಸರ್ಕಾರಕ್ಕೆ ಬಿಟ್ಟ ವಿಷಯ. ನನಗೆ ಈ ವಿಚಾರದ ಬಗ್ಗೆ ಕೇಳಬೇಡಿ” ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv