Tag: ಮಹಾವೀರ ಜಯಂತಿ

  • ಏ.10 ಮಹಾವೀರ ಜಯಂತಿ – ಏನಿದರ ಮಹತ್ವ? ಆಚರಣೆ ಹೇಗೆ?

    ಏ.10 ಮಹಾವೀರ ಜಯಂತಿ – ಏನಿದರ ಮಹತ್ವ? ಆಚರಣೆ ಹೇಗೆ?

    ಜೈನ ಧರ್ಮದ ಅನುಯಾಯಿಗಳಿಗೆ ಮಹಾವೀರ ಜಯಂತಿ ಬಹಳ ವಿಶೇಷವಾದ ಹಬ್ಬ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನದಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಏ.10 ರಂದು ಆಚರಣೆ ಮಾಡಲಾಗುತ್ತದೆ. ಆಚರಣೆ ಹೇಗೆ? ಆಚರಣೆಯ ಮಹತ್ವ ಏನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

    ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾವೀರ ಸ್ವಾಮಿಯು ಕ್ರಿ.ಪೂ 599 ರಲ್ಲಿ ಚೈತ್ರ ಮಾಸದ 13ನೇ ದಿನ ಬಿಹಾರದ ಕುಂದಾಗ್ರಾಮದಲ್ಲಿ ರಾಜಮನೆತನದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಅವರ ಬಾಲ್ಯದ ಹೆಸರು ವರ್ಧಮಾನ್. ಅವರು 30ನೇ ವಯಸ್ಸಿನಲ್ಲಿ, ಸಿಂಹಾಸನವನ್ನು ತ್ಯಜಿಸಿ ಆಧ್ಯಾತ್ಮಿಕತೆಯ ಮಾರ್ಗವನ್ನು ಆರಿಸಿಕೊಂಡರು. ಇನ್ನೂ ಮಹಾವೀರ ಜಯಂತಿಯನ್ನು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಇರುವ ಜೈನ ಸಮುದಾಯವರು ಆಚರಿಸುತ್ತಾರೆ.

    ಪ್ರಾಪಂಚಿಕ ಜೀವನ ತ್ಯಜಿಸಿದ್ದು ಭಗವಾನ್ ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ಆತಂರಿಕ ಶಾಂತಿ ಮತ್ತು ಜ್ಞಾನೋದಯವನ್ನು ಪಡೆಯಲು ರಾಜ್ಯ, ಕುಟುಂಬ ಹಾಗೂ ಲೌಕಿಕ ಕರ್ತವ್ಯಗಳನ್ನು ತೊರೆಯುತ್ತಾರೆ. ಅವರು ಅಶೋಕ ವೃಕ್ಷದ ಕೆಳಗೆ 12 ವರ್ಷಗಳ ಕಾಲ ಧ್ಯಾನ ಮಾಡಿ, ಜ್ಞಾನೋದಯ ಪಡೆಯುತ್ತಾರೆ. ಇವರು ಜೈನ ಧರ್ಮದ ಕೊನೆಯ ತೀರ್ಥಂಕರರಾಗಿದ್ದಾರೆ.

    ಈ ಹಬ್ಬದ ಮಹತ್ವ
    ಮಹಾವೀರ ಜಯಂತಿ ಜೈನರ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಭಗವಾನ್ ಮಹಾವೀರರ ಬೋಧನೆಗಳಾದ ಅಹಿಂಸೆ, ಸತ್ಯ, ಅಪರಿಗ್ರಹ ಮತ್ತು ಸನ್ಯಾಸ ಜನರ ನೈತಿಕ ನಡವಳಿಕೆಯ ಅಡಿಪಾಯವನ್ನು ನಿರ್ಮಾಣ ಮಾಡುತ್ತದೆ.

    ಮಹಾವೀರ ಜಯಂತಿಯನ್ನು ಹೇಗೆ ಆಚರಿಸಲಾಗುತ್ತದೆ?
    ಈ ದಿನದಂದು ಜೈನರು ಪ್ರಾರ್ಥನೆ, ಧಾರ್ಮಿಕ ಮೆರವಣಿಗೆ,ದಾನ ಮತ್ತು ದತ್ತಿ ಕಾರ್ಯಗಳಲ್ಲಿ ತೊಡಗುತ್ತಾರೆ. ಜೈನ ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಿ, ಅನೇಕ ಸ್ಥಳಗಳಲ್ಲಿ ರಥಯಾತ್ರೆ ನಡೆಸಲಾಗುತ್ತದೆ. ರಥ ಅಥವಾ ಪಲ್ಲಕ್ಕಿಯಲ್ಲಿ ಭಗವಾನ್ ಮಹಾವೀರರ ವಿಗ್ರಹ ಅಥವಾ ಚಿತ್ರವನ್ನು ಇರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

    ಮನೆ ಅಥವಾ ಬಸದಿಗಳಲ್ಲಿ ಮಹಾವೀರ ಸ್ವಾಮಿಯ ವಿಗ್ರಹಕ್ಕೆ ಜಲಾಭಿಷೇಕ, ಪಂಚಾಮೃತ ಅಭಿಷೇಕ ಮಾಡುತ್ತಾರೆ. ಈ ಸಮಯದಲ್ಲಿ, ಜೈನ ಪಂಥದ ಗುರುಗಳು ಭಗವಾನ್ ಮಹಾವೀರರ ಬೋಧನೆಗಳನ್ನು ವಿವರಿಸುತ್ತಾರೆ. ಈ ದಿನ, ದೇಶಾದ್ಯಂತ ಜೈನ ಬಸದಿಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.

    ಈ ಶುಭ ದಿನದಲ್ಲಿ ತಯಾರಿಸಲಾಗುವ ಭಕ್ಷ್ಯಗಳು
    ಮಹಾವೀರ ಜಯಂತಿಯಂದು , ಜೈನರು ಜೈನ ಧರ್ಮದ ತತ್ವಗಳಿಗೆ ಹೊಂದಿಕೆಯಾಗುವ ವಿವಿಧ ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತಾರೆ. ದಾಲ್ ಬಾತಿ ಚುರ್ಮಾ , ಧೋಕ್ಲಾ , ಸಾಬುದಾನ ಖಿಚಡಿ, ಕಚೋರಿ, ಪುರಿ ಮತ್ತು ಸಬ್ಜಿ , ಜೈನ್ ಪುಲಾವ್ , ಮತ್ತು ಜೈನ್ ಭಿಂಡಿ ಮಸಾಲಾ ಸೇರಿದಂತೆ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಈ ಹಬ್ಬದ ದಿನ ಉಪವಾಸ ಆಚರಿಸುವವರು ಹಣ್ಣುಗಳು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುತ್ತಾರೆ.

    ತೀರ್ಥಂಕರರು ಎಂದರೆ ಯಾರು?
    ಪೌರಾಣಿಕ ಕಥೆಗಳ ಪ್ರಕಾರ, ಮಹಾವೀರರನ್ನು ಜೈನ ಧರ್ಮದ 24ನೇ ತೀರ್ಥಂಕರರಾಗಿದ್ದಾರೆ. ಕಠಿಣ ತಪಸ್ಸು ಮಾಡಿ ಇಂದ್ರಿಯಗಳು ಮತ್ತು ಮನಸ್ಸಿನ ಭಾವನೆಗಳ ಮೇಲೆ ಸಂಪೂರ್ಣ ಹಿಡಿತ ಹೊಂದಿರುವವರನ್ನು ತೀರ್ಥಂಕರರು ಎಂದು ಹೇಳಲಾಗುತ್ತದೆ.

    ಭಗವಾನ್ ಮಹಾವೀರರ ಐದು ತತ್ವಗಳು:
    ಸಾಮಾನ್ಯ ಜೀವನವನ್ನು ತೊರೆದು ಆಧ್ಯಾತ್ಮಿಕತೆಯ ಮಾರ್ಗವನ್ನು ಅಳವಡಿಸಿಕೊಂಡ ಭಗವಾನ್ ಮಹಾವೀರರು ತಮ್ಮ ಜೀವನದುದ್ದಕ್ಕೂ ಮಾನವಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಾರ್ಗವನ್ನು ತೋರಿಸಿದರು. ಮಹಾವೀರರು 5 ಮುಖ್ಯ ತತ್ವಗಳನ್ನು ನೀಡಿದ್ದರು, ಅವುಗಳನ್ನು ಪಂಚಶೀಲ ತತ್ವಗಳು ಎಂದೂ ಕರೆಯಲಾಗುತ್ತದೆ.

    ಸತ್ಯ, ಅಹಿಂಸೆ, ಅಸ್ತೇಯ (ಕದಿಯದಿರುವುದು), ಅಪರಿಗ್ರಹ (ವಿಷಯ ವಸ್ತುಗಳ ಬಗ್ಗೆ ಮೋಹವಿಲ್ಲದಿರುವುದು), ಬ್ರಹ್ಮಚರ್ಯವನ್ನು ಅನುಸರಿಸುವುದು. ಭಗವಾನ್ ಮಹಾವೀರರ ಈ ಐದು ತತ್ವಗಳನ್ನು ಅನುಸರಿಸುವುದರಿಂದ ವ್ಯಕ್ತಿಯು ಮೋಕ್ಷ ಪಡೆಯುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.

    ಜೈನ ಧರ್ಮದ ಪ್ರಮುಖ ಕ್ಷೇತ್ರಗಳು
    ಕುಂದಲ್ಪುರ: ಇದು ಬಿಹಾರದ ನಳಂದಾ ಜಿಲ್ಲೆಯಲ್ಲಿದೆ. ಈ ಸ್ಥಳವು ಪಾಟ್ನಾದಿಂದ 100 ಕಿಮೀ ಮತ್ತು ಬಿಹಾರ ಷರೀಫ್‌ನಿಂದ ಕೇವಲ 15 ಕಿಮೀ ದೂರದಲ್ಲಿದೆ. ಇದು ಮಹಾವೀರರ ಜನ್ಮಸ್ಥಳವಾಗಿದ್ದು, ಈ ಸ್ಥಳವನ್ನು ಜೈನ ಧರ್ಮದಲ್ಲಿ ಕಲ್ಯಾಣ ಕ್ಷೇತ್ರವೆಂದು ಪರಿಗಣಿಸಲಾಗಿದೆ.

    ಪಾರ್ಶ್ವನಾಥ ಪರ್ವತ: ಸಮ್ಮೇದ್ ಶಿಖರ್ಜಿಯನ್ನು ಜೈನ ಧರ್ಮದ ಅತಿದೊಡ್ಡ ಯಾತ್ರಾ ಕೇಂದ್ರವೆಂದು ಪರಿಗಣಿಸಲಾಗಿದೆ. ಇದು ಭಾರತದ ಜಾರ್ಖಂಡ್ ರಾಜ್ಯದ ಗಿರಿದಿಹ್ ಜಿಲ್ಲೆಯ ಚೋಟಾ ನಾಗ್ಪುರ ಪ್ರಸ್ಥಭೂಮಿಯ ಪರ್ವತದ ಮೇಲಿದೆ. ಈ ಪರ್ವತವನ್ನು ಪಾರ್ಶ್ವನಾಥ ಪರ್ವತ ಎಂದು ಕೂಡ ಕರೆಯಲಾಗುತ್ತದೆ.

    ಶ್ರವಣಬೆಳಗೊಳ: ಶ್ರವಣ ಬೆಳಗೊಳ ಕರ್ನಾಟಕದಲ್ಲಿದೆ ಇಲ್ಲಿ ಭಗವಾನ್ ಬಾಹುಬಲಿಯ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದು ಸಂಪೂರ್ಣವಾಗಿ ಒಂದೇ ಕಲ್ಲಿನಿಂದ ಕೆತ್ತಲಾಗಿದೆ.

  • ಹುಡುಗಿಯರು ಕೆಟ್ಟ ಉಡುಪಿನಲ್ಲಿ ಶೂರ್ಪನಖಿಯಂತೆ ಕಾಣ್ತಾರೆ: ಕೈಲಾಶ್

    ಹುಡುಗಿಯರು ಕೆಟ್ಟ ಉಡುಪಿನಲ್ಲಿ ಶೂರ್ಪನಖಿಯಂತೆ ಕಾಣ್ತಾರೆ: ಕೈಲಾಶ್

    ಇಂದೋರ್: ಹುಡುಗಿಯರು ಕೆಟ್ಟ ಉಡುಪಿನಲ್ಲಿ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿ (BJP) ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ (Kailash Vijayvargiya) ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

    ಇತ್ತೀಚೆಗೆ ನಡೆದ ಹನುಮಾನ್ ಮತ್ತು ಮಹಾವೀರ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಇವರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ರಾತ್ರಿ ಮನೆಯಿಂದ ಹೊರಗೆ ಬಂದಾಗ ಮದ್ಯದ ಅಮಲಿನಲ್ಲಿ ಯುವಜನತೆ ತೇಲಾಡುತ್ತಿರುವುದನ್ನು ಗಮನಿಸಿದೆ. ದೇವ್ರಾಣೆ ಹೇಳ್ತೀನಿ ಅವರನ್ನು ನೋಡಿದಾಗ ಕಾರಿಂದ ಇಳಿದು ಎರಡು ಏಟು ಹೊಡೆಯಬೇಕು ಅನಿಸುವಷ್ಟು ಸಿಟ್ಟು ಬಂತು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಟಿಕೆಟ್‍ಗಾಗಿ ದೈವದ ಮೊರೆ ಹೋದ ಮಡಿಕೇರಿ ಆಕಾಂಕ್ಷಿ ಭರತೀಶ್

    ನಾವು ಮಹಿಳೆಯರನ್ನು ದೇವತೆ ಎಂದು ಭಾವಿಸುತ್ತೇವೆ. ಆದರೆ ಹುಡುಗಿಯರು ಕೊಳಕು ಬಟ್ಟೆಗಳನ್ನು ಧರಿಸುತ್ತಾರೆ. ಇಂತಹ ಹೆಣ್ಮಕ್ಕಳು ಶೂರ್ಪನಖಿಯಂತೆ ಕಾಣುತ್ತಾರೆ, ದೇವರು ನಿಮಗೆ ಒಳ್ಳೆಯ ದೇಹವನ್ನು ನೀಡಿದ್ದಾನೆ, ಒಳ್ಳೆಯ ಬಟ್ಟೆಗಳನ್ನು ಧರಿಸಿ, ದಯವಿಟ್ಟು ನಿಮ್ಮ ಮಕ್ಕಳಿಗೆ ಚೆನ್ನಾಗಿ ಕಲಿಸಿ. ನಾನು ತುಂಬಾ ಚಿಂತಿತನಾಗಿದ್ದೇನೆ ಎಂದು ಅವರು ಹೇಳಿದರು.

  • ಮಂಗಳವಾರ ಬೆಂಗ್ಳೂರಲ್ಲಿ ಮಾಂಸ ಸಿಗಲ್ಲ

    ಮಂಗಳವಾರ ಬೆಂಗ್ಳೂರಲ್ಲಿ ಮಾಂಸ ಸಿಗಲ್ಲ

    ಬೆಂಗಳೂರು: ಮಹಾವೀರ ಜಯಂತಿ (Mahavir Jayanti) ಹಿನ್ನೆಲೆಯಲ್ಲಿ ಏಪ್ರಿಲ್ 4ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪ್ರಾಣಿ ವಧೆ ಮತ್ತು ಮಾಂಸ (Meat) ಮಾರಾಟವನ್ನು ನಿಷೇಧ ಮಾಡಲಾಗಿದೆ ಎಂದು ಬಿಬಿಎಂಪಿ ಪಶುಪಾಲನಾ ಜಂಟಿ ನಿರ್ದೇಶಕರಿಂದ ಆದೇಶ ಹೊರಡಿಸಿದ್ದಾರೆ.

    ಬಿಬಿಎಂಪಿ ಪಶುಪಾಲನಾ ಜಂಟಿ ನಿರ್ದೇಶಕರು ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯ ಪ್ರಕಾರ ಏ. 4 ಅಂದರೆ ಮಂಗಳವಾರ ಮಹಾವೀರ ಜಯಂತಿ ಪ್ರಯುಕ್ತ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕಸಾಯಿಖಾನೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡುವ ಹಾಗಿಲ್ಲ ಎಂದು ತಿಳಿಸಿದೆ.

    ಇತ್ತೀಚೆಗೆ ಅಂದರೆ ಮಾರ್ಚ್‌ 30ರಂದು ರಾಮನವಮಿಯಂದೂ ಬೆಂಗಳೂರಿನಲ್ಲಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿತ್ತು. ರಾಮ ನವಮಿಯಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಕುರಿ, ಕೋಳಿ, ಮೀನು, ಮಾಂಸ ಮಾರಾಟ ನಿಷೇಧಿಸಿ ಆದೇಶಿಸಲಾಗಿತ್ತು. ರಾಮನವಮಿಯಂದು ಕಲಬುರಗಿ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆ ಸೇರಿದಂತೆ ವಿವಿಧ ನಗರಸಭಾ ವ್ಯಾಪ್ತಿಯಲ್ಲಿ ಸಹ ಇದೇ ರೀತಿ ಆದೇಶ ಹೊರಡಿಸಲಾಗಿತ್ತು.

  • ಎರಡನೇ ದಿನದ ವೀಕೆಂಡ್ ಲಾಕ್‍ಗೆ ಸಂಪೂರ್ಣ ಸ್ತಬ್ಧವಾದ ಕೊಡಗು

    ಎರಡನೇ ದಿನದ ವೀಕೆಂಡ್ ಲಾಕ್‍ಗೆ ಸಂಪೂರ್ಣ ಸ್ತಬ್ಧವಾದ ಕೊಡಗು

    – ಮಾಂಸದಂಗಡಿಗಳಿಗೆ ನಗರಸಭೆಯಿಂದ ಬೀಗ

    ಮಡಿಕೇರಿ: ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅಚರಣೆ ಮಾಡುತ್ತಿರುವ ವೇಳೆಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ನಗರಸಭೆಯ ಸಿಬ್ಬಂದಿ ದಾಳಿ ನಡೆಸಿ ಅಂಗಡಿಗಳಿಗೆ ಬೀಗ ಹಾಕಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.

    ವಾರಾಂತ್ಯದ ಲಾಕ್‍ಡೌನ್ ಇರುವುದರಿಂದ ಇಂದು ಮಾಂಸ ಪ್ರಿಯರು ಚಿಕನ್ ಹಾಗೂ ಮಟನ್ ಅಂಗಡಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಮಾಂಸ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರು ಎಂದಿನಂತೆ ಬೆಳಗ್ಗೆ ಅಂಗಡಿಗಳನ್ನು ತೆರೆದಿದ್ದರು. ಅದರೆ ಮಹಾವೀರ ಜಯಂತಿ ಇದ್ದರೂ ಅದರ ಅರಿವು ಇಲ್ಲದೆ ಎಂದಿನಂತೆ ವ್ಯಾಪಾರಿಗಳು ವ್ಯಾಪಾರ ಮಾಡಲು ಮುಂದಾಗಿದ್ದ ವೇಳೆಯಲ್ಲಿ ನಗರಸಭೆಯ ಸಿಬ್ಬಂದಿಗಳು ದಾಳಿ ನಡೆಸಿದರು. ನಗರದ ಮಾರ್ಕೆಟ್ ಕೊಯಿನೂರ್ ರಸ್ತೆ. ಪೋಸ್ಟ್ ಅಫೀಸ್ ರಸ್ತೆ ಸೇರಿದಂತೆ 10 ಕ್ಕೂ ಹೆಚ್ಚು ಅಂಗಡಿಗಳಿಗೆ ದಾಳಿ ನಡೆಸಿ ಬೀಗ ಹಾಕಿ, ಅಂಗಡಿ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇಂದು ಭಾನುವಾರ ಅಗಿರುವುದರಿಂದ ಮಾಂಸ ತೆಗೆದುಕೊಂಡು ಹೋಗುವುದಕ್ಕೆ ಬಂದ ನಾನ್‍ವೆಜ್ ಪ್ರಿಯರು ನಿರಾಸೆಯಿಂದ ಮನೆ ವಾಪಸ್ ಹೋದರು.

    ಕೊಡಗು ಸ್ತಬ್ಧ: ವಿಕೇಂಡ್ ಬಂತು ಅಂದ್ರೆ ದಕ್ಷಿಣ ಕಾಶ್ಮೀರ ಕೊಡಗಿನ ಪ್ರವಾಸಿ ತಾಣಗಳನ್ನು ನೋಡುವುದಕ್ಕೆ ಜನ ತುಂಬಿ ತುಳುಕುತ್ತಿದರು. ಆದರೆ ರಾಜ್ಯದಾದ್ಯಂತ ವಿಕೇಂಡ್ ಲಾಕ್‍ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎರಡನೇ ದಿನವಾದ ಭಾನುವಾರ ಕೊಡಗು ಸಂಪೂರ್ಣ ಸ್ಥಬ್ಧವಾಗಿದೆ. ಯಾವುದೇ ರಸ್ತೆಗಳಲ್ಲೂ ಒಂದೇ ಒಂದು ವಾಹನಗಳ ಓಡಾಟವಿಲ್ಲ. ಪ್ರವಾಸಿಗರ ಮಾತಿರಲಿ, ಸ್ಥಳೀಯರು ಸೇರಿದಂತೆ ವಾಹನ ಚಾಲಕರು ಕೂಡ ಮನೆಬಿಟ್ಟು ಹೊರಗೆ ಕಾಲಿಡಲಿಲ್ಲ. ಹೀಗಾಗಿ ಭಾನುವಾರದಂದು ಪ್ರವಾಸಿಗರ ಹಾಟ್ ಸ್ಪಾಟ್ ಎಂದು ಪ್ರಸಿದ್ಧಿಯಾಗಿರುವ ಮಡಿಕೇರಿ ಸಂಪೂರ್ಣ ಮೌನಕ್ಕೆ ಜಾರಿತ್ತು.

    ನಿನ್ನೆ ಕೆಲ ಸಾರ್ವಜನಿಕರು ಕುತೂಹಲಕ್ಕೆಂದು ನಗರ ಪ್ರದೇಶಗಳಿಗೆ ಬಂದು ವೀಕ್ಷಣೆ ಮಾಡಿ ಹೋಗುತ್ತಿದ್ದರು. ಅದರೆ ಇಂದು ಒಬ್ಬರೆ ಒಬ್ಬರು ರಸ್ತೆಗೆ ಇಳಿಯಲಿಲ್ಲ. ಬೆಳಗ್ಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋದ ಸಾರ್ವಜನಿಕರು ಮತ್ತೆ ಮನೆಯಿಂದ ಹೊರ ಬಾರದೆ ಇರುವುದರಿಂದ ರಸ್ತೆಗಳೆಲ್ಲ. ಸಂಪೂರ್ಣವಾಗಿ ಖಾಲಿ ಖಾಲಿ ಯಾಗಿತ್ತು. ಕೊಡಗಿನ ವಾಣಿಜ್ಯ ನಗರಿ ಕುಶಾಲನಗರ. ಸೋಮವಾರಪೇಟೆ. ವಿರಾಜಪೇಟೆ. ಪೊನ್ನಂಪೇಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಪೂರ್ಣ ವಾರಾಂತ್ಯದ ಲಾಕ್‍ಡೌನ್ ಯಶಸ್ವಿಯಾಗಿದೆ.