Tag: ಮಹಾಲಕ್ಷ್ಮೀ ದೇವಾಲಯ

  • ರಾಜಕಾರಣಿಗಳ ಕಾರ್ಯಕ್ರಮಕ್ಕೆ ಬಾರದ ಕೊರೊನಾ, ಹಬ್ಬಕ್ಕೆ ಬರುತ್ತಾ – ಜನರ ಪ್ರಶ್ನೆ

    ರಾಜಕಾರಣಿಗಳ ಕಾರ್ಯಕ್ರಮಕ್ಕೆ ಬಾರದ ಕೊರೊನಾ, ಹಬ್ಬಕ್ಕೆ ಬರುತ್ತಾ – ಜನರ ಪ್ರಶ್ನೆ

    ಮಂಡ್ಯ: ಇಂದು ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಸಾವಿರಾರು ಜನರು ಲಕ್ಷ್ಮೀ ದೇವಸ್ಥಾನಗಳಿಗೆ ಬರುತ್ತಾರೆ ಎಂಬ ಕಾರಣಕ್ಕೆ ಮಂಡ್ಯ ಜಿಲ್ಲೆಯಾದ್ಯಂತ ಇರುವ ಲಕ್ಷ್ಮೀ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ.

    ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆ ಸಾಮಾನ್ಯವಾಗಿ ಜನರು ಲಕ್ಷ್ಮೀ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಇರುವ ಹಿನ್ನೆಲೆ ಜನರನ್ನು ನಿಯಂತ್ರಿಸುವ ಸಲುವಾಗಿ ಮಂಡ್ಯ ಜಿಲ್ಲೆಯ ಎಲ್ಲಾ ಲಕ್ಷ್ಮೀ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ದೇವಸ್ಥಾನಗಳಿಗೆ ಇಂದು ಸಾವಿರಾರು ಜನರು ಬಂದರೆ ಸಾಮಾಜಿಕ ಅಂತರ ಪಾಲಿಸದೇ ಹಾಗೂ ಮಾಸ್ಕ್ ಧರಿಸದೇ ಪೂಜೆ ಮಾಡುತ್ತಾರೆ. ಇದರಿಂದ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ಲಕ್ಷ್ಮೀ ದೇವಸ್ಥಾನಗಳಲ್ಲಿ ಬೆಳಗ್ಗೆ ಪೂಜೆ ಮಾಡಿ, ದೇವಸ್ಥಾನಗಳಿಗೆ ಬೀಗ ಹಾಕಲಾಗಿದೆ. ಇದನ್ನೂ ಓದಿ:ಗಡಿಕೇಶ್ವಾರದಲ್ಲಿ ಕಂಪಿಸಿದ ಭೂಮಿ

    ದೇವಸ್ಥಾನಗಳನ್ನು ಬಂದ್ ಮಾಡಿರುವ ಕಾರಣ ಭಕ್ತರು ದೇವಸ್ಥಾನದ ಹೊರ ಭಾಗದಲ್ಲಿಯೇ ಪೂಜೆ ಮಾಡಿಕೊಂಡು ಮನೆಗೆ ತೆರಳುತ್ತಿರುವ ದೃಶ್ಯಗಳು ಮಂಡ್ಯ ಜಿಲ್ಲೆಯ ಲಕ್ಷ್ಮಿ ದೇವಸ್ಥಾನಗಳಲ್ಲಿ ಕಂಡು ಬಂತು. ರಾಜಕಾರಣಿಗಳು ಮಾಡುವ ಕಾರ್ಯಕ್ರಮದಲ್ಲಿ ಅಪಾರ ಜನರು ಸೇರಿದರೆ ಕೊರೊನಾ ಬರುವುದಿಲ್ಲ, ಜನರು ಮಾಡುವ ಧಾರ್ಮಿಕ ಆಚರಣೆ ಮಾಡಿದರೆ ಕೊರೊನಾ ಬರುತ್ತದೆ. ಈ ಸರ್ಕಾರದವರು ಅವರಿಗೆ ಬೇಕಾದ ರೀತಿಯಲ್ಲಿ ರೂಲ್ಸ್‌ ಗಳನ್ನು ಬದಲಾವಣೆ ಮಾಡಿಕೊಂಡು, ಆ ರೂಲ್ಸ್ ಗಳನ್ನು ಜನರ ಮೇಲೆ ಹೇರುವುದು ಸರಿಯಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:ಚಾಮುಂಡಿ ಬೆಟ್ಟದಲ್ಲಿ ಜನಸ್ತೋಮ – ಇಂದು ಸೇರಿದಂತೆ 3 ದಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ

  • 100 ಕೋಟಿಗೂ ಅಧಿಕ ರೂ.ಗಳಲ್ಲಿ ಅಲಂಕೃತಗೊಂಡ ಮಹಾಲಕ್ಷ್ಮೀ

    100 ಕೋಟಿಗೂ ಅಧಿಕ ರೂ.ಗಳಲ್ಲಿ ಅಲಂಕೃತಗೊಂಡ ಮಹಾಲಕ್ಷ್ಮೀ

    ಭೋಪಾಲ್: ಇಂದಿನಿಂದ ದೀಪಾವಳಿ ಆರಂಭವಾಗಿದ್ದು, ದೇಶಾದ್ಯಂತ ಜನರು ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಬುಧವಾರ ಅಮವಾಸ್ಯೆ ಆಗಿದ್ದು ಬಹುತೇಕ ಜನರು ತಮ್ಮ ಮನೆಗಳಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ. ಮಧ್ಯಪ್ರದೇಶ ರಾಜ್ಯದ ರತ್ಲಂ ನಗರದ ಮಹಾಲಕ್ಷ್ಮೀ ದೇವಾಲಯವನ್ನು ನಗದು, ಚಿನ್ನಾಭರಣ ಮತ್ತು ವಜ್ರಾಭರಣ ಒಳಗೊಂಡಂತೆ ಒಟ್ಟು 100 ಕೋಟಿ ರೂ.ನಲ್ಲಿ ಅಲಂಕರಿಸಲಾಗಿದೆ.

    ಸಾಮನ್ಯವಾಗಿ ಮಹಾಲಕ್ಷ್ಮೀ ಪೂಜೆಯಲ್ಲಿ ದೇವಿಯ ಆಹವಾನೆಗಾಗಿ ಹಣ, ಚಿನ್ನಾಭರಣಗಳನ್ನು ಇಡುತ್ತಾರೆ. ರತ್ಲಂ ನಗರದ ಮಹಾಲಕ್ಷ್ಮೀ ದೇವಾಲಯವನ್ನು ಗರಿ ಗರಿ ನೋಟುಗಳಿಂದ ಅಲಂಕರಿಸಲಾಗಿದೆ. ನಗರದ ಪುರಾಣ ದೇವಾಲಯಗಳಲ್ಲಿ ಮಹಾಲಕ್ಷ್ಮೀ ದೇಗುಲ ಒಂದಾಗಿದ್ದು, ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ಅಲಂಕಾರ ಮಾಡಲಾಗಿದೆ. ದೇವಿಯ ಮುಂದೆ ಚಿನ್ನಾಭರಣ, ವಜ್ರಾಭರಣ ಸೇರಿದಂತೆ ಕಂತೆ ಕಂತೆ ನೋಟುಗಳನ್ನು ಇರಿಸಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ, ನಾನು ಹಲವು ವರ್ಷಗಳಿಂದ ಇಲ್ಲಿಯ ಆಚರಣೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ಮೊದಲು 6 ರಿಂದ 7 ಲಕ್ಷ ರೂ. ಮಾತ್ರ ಬಳಸಿ ದೇಗುಲವನ್ನು ಅಲಂಕಾರ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ 100 ಕೋಟಿ ರೂ.ನಲ್ಲಿ ಆಲಯವನ್ನು ಅಲಂಕರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv