Tag: ಮಹಾಮಸ್ತಾಭಿಷೇಕ

  • ನವ ದಿನಗಳ ಮಹಾಮಸ್ತಕಾಭಿಷೇಕಕ್ಕೆ ತೆರೆ – ಕಡೆ ದಿನ ಶ್ರವಣಬೆಳಗೊಳಕ್ಕೆ ಭಕ್ತಸಾಗರ

    ನವ ದಿನಗಳ ಮಹಾಮಸ್ತಕಾಭಿಷೇಕಕ್ಕೆ ತೆರೆ – ಕಡೆ ದಿನ ಶ್ರವಣಬೆಳಗೊಳಕ್ಕೆ ಭಕ್ತಸಾಗರ

    ಹಾಸನ: ಕಳೆದ 9 ದಿನಗಳಿಂದ ನಡೆಯುತ್ತಿರುವ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಇಂದು ತೆರೆಬಿದ್ದಿದೆ. ಕೊನೆಯ ದಿನವಾದ ಇಂದು 58.8 ಅಡಿ ಎತ್ತರದ ಮಹಾಮೂರ್ತಿಗೆ ನೀರು, ಎಳನೀರು, ಕಬ್ಬಿನರಸ, ಕಲ್ಕಚೂರ್ಣ, ಕ್ಷೀರ, ಅರಿಶಿನ, ಶ್ರೀಗಂಧ ಮತ್ತು ಅಷ್ಟಗಂಧ ಅಭಿಷೇಕ ಮಾಡಲಾಯ್ತು.

    ಕಡೆಯ ದಿನವಾದ ಇಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ಜೈನಮಠದ ಬಳಿಯೇ ಏಕಶಿಲಾ ಮೂರ್ತಿಗೆ ನಮಿಸಿದ್ರು. ವಿಂದ್ಯಗಿರಿಯಲ್ಲಿ ಎಲ್ಲಿ ನೋಡಿದ್ರೂ ಭಕ್ತ ಸಾಗರವೇ ಕಾಣುತ್ತಿತ್ತು. ಇದೇ ವೇಳೆ ಶ್ರೀ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ನಾಳೆ ಸಮಾರೋಪ ಸಮಾರಂಭ ನಡೆಯಲಿದೆ. ಮುಂದಿನ ಜೂನ್‍ವರೆಗೆ ಪ್ರತಿ ಭಾನುವಾರ ಮಸ್ತಕಾಭಿಷೇಕ ನಡೆಯಲಿದೆ ಅಂತಾ ತಿಳಿಸಿದ್ರು.

    ಈ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಜೈನಧರ್ಮ ನಮ್ಮ ದೇಶದ ರತ್ನವಿದ್ದಂತೆ, ಅಹಿಂಸೆಗೆ ಒತ್ತು ನೀಡುವ ಏಕೈಕ ಧರ್ಮ ಜೈನಧರ್ಮ. ಭಯೋತ್ಪಾದನೆ ಮಟ್ಟಹಾಕಲು ಜೈನಧರ್ಮದ ಸಂದೇಶದಲ್ಲಿ ಪರಿಹಾರವಿದೆ. ಬಾಹುಬಲಿ ಮೂರ್ತಿ ಅದ್ಭುತ ಪ್ರತಿಮೆ. ಇಲ್ಲಿಗೆ ಬಂದ ತಕ್ಷಣ ನನಗೆ ಶಾಂತಿಯ ಅನುಭೂತಿಯಾಯಿತು. ಇಡೀ ಪ್ರಪಂಚಕ್ಕೆ ತ್ಯಾಗ, ಶಾಂತಿಯ ಸಂದೇಶ ಸಾರುವ ತಾಣ ಶ್ರವಣಬೆಳಗೊಳ. ಇಲ್ಲಿಗೆ ಭೇಟಿ ನೀಡಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಅಂತಾ ರಾಜನಾಥ್ ಸಿಂಗ್ ತಮ್ಮ ಅನುಭವ ಹಂಚಿಕೊಂಡರು.

  • ಶ್ರವಣಬೆಳಗೊಳಕ್ಕೂ ಮೊದ್ಲೇ ಮಂಡ್ಯದಲ್ಲಿರೋ ಅತೀ ಪುರಾತನ ಮೂರ್ತಿಗೆ ಮಹಾಮಸ್ತಕಾಭಿಷೇಕ

    ಶ್ರವಣಬೆಳಗೊಳಕ್ಕೂ ಮೊದ್ಲೇ ಮಂಡ್ಯದಲ್ಲಿರೋ ಅತೀ ಪುರಾತನ ಮೂರ್ತಿಗೆ ಮಹಾಮಸ್ತಕಾಭಿಷೇಕ

    ಮಂಡ್ಯ: ಶ್ರವಣಬೆಳಗೊಳಕ್ಕೂ ಮೊದಲೇ ಜಿಲ್ಲೆಯಲ್ಲಿ ಅತೀ ಪುರಾತನ ಮೂರ್ತಿಯೊಂದಕ್ಕೆ ಮಹಾಮಸ್ತಕಾಭಿಷೇಕ ನಡೆಯಲಿದೆ.

    ಮುಂದಿನ ವರ್ಷ ಫೆಬ್ರವರಿಯಲ್ಲಿ ಶ್ರವಣಬೆಳಗೂಳದ ಗೊಮ್ಮಟೇಶ್ವರ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಆದರೆ ಅದಕ್ಕಿಂತ ಮೊದಲೇ ಶ್ರವಣಬೆಳಗೂಳದ ಗೊಮ್ಮಟೇಶ್ವರ ಮೂರ್ತಿಗಿಂತ ಹಳೆಯದಾದ ಮತ್ತು ದಕ್ಷಿಣ ಭಾರತದಲ್ಲಿಯೇ ಅತ್ಯಂತ ಪ್ರಾಚೀನವಾದ 11 ಅಡಿ ಗೊಮ್ಮಟೇಶ್ವರ ಮೂರ್ತಿಗೆ ಮಸ್ತಕಾಭೀಷೇಕ ನಡೆಯಲಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಆರತಿಪುರದಲ್ಲಿ ಪ್ರಾಚೀನವಾದ ಈ ಮೂರ್ತಿ ಇದೆ. ಆರತಿಪುರದ ಗೊಮ್ಮಟೇಶ್ವರನಿಗೆ ಶ್ರವಣಬೆಳಗೂಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಮುಂಚೆಯೇ ಅದ್ಧೂರಿಯಾಗಿ ಮಹಾಮಸ್ತಕಾಭಿಷೇಕ ನಡೆಯಲಿದೆ.

    ಗಂಗ ಮತ್ತು ಹೊಯ್ಸಳರ ಕಾಲದಲ್ಲಿ ಈ ಮೂರ್ತಿ ಸ್ಥಾಪನೆಯಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಆರತಿಪುರದ ಗೊಮ್ಮಟೇಶ್ವರನಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತಿತ್ತು. ಆದರೆ ಕಾಲಾಂತರದಲ್ಲಿ ಅದು ನಿಂತು ಹೋಗಿತ್ತು. ಆದರೆ ಈ ಆರತಿಪುರದ ಗೊಮ್ಮಟೇಶ್ವರಮೂರ್ತಿಗೆ ಇದೇ ಡಿಸೆಂಬರ್ 1 ರಿಂದ 3 ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ತಿಳಿದುಬಂದಿದೆ.