Tag: ಮಹದೇವಪುರ ಪೊಲೀಸ್‌

  • ಬೆಂಗಳೂರಲ್ಲಿ ಬಿಹಾರದ ಯುವತಿ ಮೇಲೆ ರೇಪ್ – ಅಣ್ಣನಿಗೆ ಥಳಿಸಿ ತಂಗಿಯನ್ನು ಎಳೆದೊಯ್ದು ಅತ್ಯಾಚಾರ

    ಬೆಂಗಳೂರಲ್ಲಿ ಬಿಹಾರದ ಯುವತಿ ಮೇಲೆ ರೇಪ್ – ಅಣ್ಣನಿಗೆ ಥಳಿಸಿ ತಂಗಿಯನ್ನು ಎಳೆದೊಯ್ದು ಅತ್ಯಾಚಾರ

    – ಮಹದೇವಪುರ ಪೊಲೀಸರಿಂದ ಇಬ್ಬರು ಕಾಮುಕರ ಬಂಧನ

    ಬೆಂಗಳೂರು: ನಗರದ ಕೆಆರ್‌ಪುರಂ ರೈಲ್ವೇ ನಿಲ್ದಾಣದಲ್ಲಿ (KR Puram Railway Station) ಅಣ್ಣನ ಜೊತೆ ಹೊರಟಿದ್ದ ತಂಗಿಯನ್ನು ಎಳೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.

    ಸಂತ್ರಸ್ತೆಯನ್ನು ಬಿಹಾರ (Bihar) ಮೂಲದವರು ಎಂದು ತಿಳಿಯಲಾಗಿದ್ದು, ಬುಧವಾರ ತಡರಾತ್ರಿ 1:30ರ ಸುಮಾರಿಗೆ ಈ ಘಟನೆ ನಡೆದಿದೆ.ಇದನ್ನೂ ಓದಿ:ಪೊಲೀಸ್‌ ಗಂಡ, ಹೆಂಡತಿಗೆ ಸಿಕ್ತು ಮುಖ್ಯಮಂತ್ರಿ ಪದಕ

    ಸಂತ್ರಸ್ತೆ ತನ್ನ ಅಕ್ಕ-ಬಾವನ ಜೊತೆಗೆ ಕೆಲಸಕ್ಕೆಂದು ಕೇರಳಕ್ಕೆ ಹೋಗಿದ್ದರು. ಆದರೆ ಸಂತ್ರಸ್ತೆಗೆ ಕೆಲಸ ಮಾಡಲು ಇಷ್ಟವಿಲ್ಲದೇ ಬುಧವಾರ ಎರ್ನಾಕುಲಂನಿಂದ (Ernakulam) ಬೆಂಗಳೂರಿಗೆ (Bengaluru) ಬಂದು ಊರಿಗೆ ಹೊರಟಿದ್ದರು. ಈ ವೇಳೆ ತನ್ನ ದೊಡ್ಡಮ್ಮನ ಮಗನಿಗೆ ಕರೆ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿಸಿದ್ದು, ಆಗ ಅವರು ಕೆಆರ್‌ಪುರ ರೈಲು ನಿಲ್ದಾಣದಲ್ಲಿ ಇಳಿಯುವಂತೆ ಸೂಚಿಸಿದ್ದರು. ಅದರಂತೆ ಸಂತ್ರಸ್ತೆ ಬುಧವಾರ ತಡರಾತ್ರಿ 1:13ಕ್ಕೆ ಕೆಆರ್‌ಪುರ ರೈಲು ನಿಲ್ದಾಣದಲ್ಲಿ ಇಳಿದಿದ್ದರು.

    ರೈಲು ನಿಲ್ದಾಣಕ್ಕೆ ಬಂದಿದ್ದ ಅಣ್ಣನೊಂದಿಗೆ ಊಟ ಮಾಡಲು ಮಹದೇವಪುರ ಕಡೆಗೆ ಹೋಗುತ್ತಿದ್ದರು. ಈ ವೇಳೆ ದಿಢೀರನೆ ಇಬ್ಬರು ಅಪರಿಚಿತ ಯುವಕರು ಬಂದಿದ್ದು, ಓರ್ವ ಆಸಾಮಿ ಸಂತ್ರಸ್ತೆಯ ಅಣ್ಣನ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನೋರ್ವ ಸಂತ್ರಸ್ತೆಯ ಕೈಗಳನ್ನು ಬಿಗಿಯಾಗಿ ಹಿಡಿದು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ.

    ಸಂತ್ರಸ್ತೆಯ ಕಿರುಚಾಟದಿಂದ ಅಲ್ಲಿದ್ದ ಜನರು ಸ್ಥಳಕ್ಕೆ ಬಂದಿದ್ದು, ಬೀದಿ ಕಾಮುಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಶಿಫ್ ಹಾಗೂ ಮತ್ತೋರ್ವ ಕಾಮುಕನನ್ನು ಮಹದೇವಪುರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

    ಇನ್ನೂ ಮಹದೇವಪುರ ಪೊಲೀಸ್ ಠಾಣೆಗೆ (Mahadevapura) ಪೊಲೀಸ್ ಕಮಿಷನರ್ ದಯಾನಂದ್ ಭೇಟಿ ನೀಡಿದ್ದು, ವೈಟ್ ಫೀಲ್ಡ್ ಡಿಸಿಪಿ ಶಿವಕುಮಾರ್ ಗುಣಾರೆಯಿಂದ ಕೃತ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.ಇದನ್ನೂ ಓದಿ:ಪೊಲೀಸ್‌ ಗಂಡ, ಹೆಂಡತಿಗೆ ಸಿಕ್ತು ಮುಖ್ಯಮಂತ್ರಿ ಪದಕ

  • ಸದ್ದಿಲ್ಲದೇ ಬಸ್‌ ಹತ್ತಿ, ಮೊಬೈಲ್‌ ಎಗರಿಸಿಕೊಂಡು ಹೋಗ್ತಿದ್ರು; 120 ಮೊಬೈಲ್‌ಗಳೊಂದಿಗೆ ಕಳ್ಳಿಯರ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ?

    ಸದ್ದಿಲ್ಲದೇ ಬಸ್‌ ಹತ್ತಿ, ಮೊಬೈಲ್‌ ಎಗರಿಸಿಕೊಂಡು ಹೋಗ್ತಿದ್ರು; 120 ಮೊಬೈಲ್‌ಗಳೊಂದಿಗೆ ಕಳ್ಳಿಯರ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ?

    – ರಶ್‌ ಆಗಿರೋ ಬಸ್‌ಗಳಿಗೆ ಮಾತ್ರ ಹತ್ತುತ್ತಿದ್ದ ಕಳ್ಳಿಯರು

    ಬೆಂಗಳೂರು: ನಗರದ ಹೊರವಲಯದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡ್ತಿದ್ದವರ ಬಳಿ ಸಿಕ್ಕಿದ್ವು ನೂರಾರು ಮೊಬೈಲ್‌ಗಳು, ಐಟಿ ಬಿಟಿ ಏರಿಯಾಗಳಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ (BMTC Bus) ಓಡಾಡುತ್ತಿದ್ದ ಮಹಿಳೆಯರ ಮೊಬೈಲ್‌ಗಳನ್ನೇ ಟಾರ್ಗೆಟ್ ಮಾಡ್ತಾ ಇದ್ದ ಕಳ್ಳಿಯರ ಗ್ಯಾಂಗ್ ರಾಜಧಾನಿಯಲ್ಲಿ ಸಿಕ್ಕಿ ಬಿದ್ದಿರೊ ಸ್ಟೋರಿ ಇದೆ ನೋಡಿ.

    ಹೊಂಚು ಹಾಕಿ ಬಿಎಂಟಿಸಿ ಬಸ್ ಹತ್ತೋ ಮಹಿಳೆಯರನ್ನ (Women) ನೋಡಿ. ಏನೋ ಕೆಲಸದ ಅರ್ಜೆಂಟ್‌ನಲ್ಲಿ ಬಸ್‌ಗೆ ಹತ್ತುತ್ತಿದ್ದಾರೆ ಅಂದುಕೊಂಡ್ರೆ ಖಂಡಿತಾ ನಿಮ್ಮ ಊಹೆ ತಪ್ಪು. ಇಷ್ಟಕ್ಕೂ ಇವರು ಹೀಗೆ ಬಸ್ ಹತ್ತುತ್ತಿರೋದು ಕೆಲಸಕ್ಕೆ ಹೋಗೋಕಲ್ಲ, ಮೊಬೈಲ್ ಕದಿಯೋಕೆ. ರಾಜಧಾನಿ ಬೆಂಗಳೂರಲ್ಲಿ ತುಂಬಾ ರಶ್ ಇರುವ ಐಟಿ-ಬಿಟಿ ಏರಿಯಾಗಳ ಬಿಎಂಟಿಸಿ ಬಸ್ ಹತ್ತೋ ಇವ್ರು ಮಹಿಳೆಯರ ಮೊಬೈಲ್‌ಗಳನ್ನ (Mobile) ಕದಿಯೋದೇ ಟಾರ್ಗೇಟ್ ಮಾಡಿಕೊಂಡಿದ್ದರು. ಇಂತಹ ಕಳ್ಳಿಯರ ಗ್ಯಾಂಗನ್ನ ಬೆಂಗಳೂರಿನ ಮಹದೇವಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ಅಂಜಾರಿಯಾ ನೇಮಕ

    ಹೀಗೆ ಪೊಲೀಸರಿಗೆ ಸಿಕ್ಕಿಬಿದ್ದವರ ಹೆಸರು ರಾಧಾ, ನಂದಿನಿ, ಸುಜಾತ, ಶಂಕರಮ್ಮ ಅಂತಾ. ಬಹುತೇಕರು ದೂರದ ಅನಂತಪುರದವರು. ಆದರೆ ಇಲ್ಲಿಗೆ ಬಂದು ರಾಜಧಾನಿಯ ಹೊರವಲಯದ ಹೊಸಕೋಟೆ ಬಳಿಯ ಚೊಕ್ಕನಹಳ್ಳಿಯಲ್ಲಿ ಮನೆ ಮಾಡಿಕೊಂಡು ರಾಜಧಾನಿಗೆ ಮೊಬೈಲ್ ಕದಿಯೋಕೆ ಅಂತಲೇ ಬರ್ತಿದ್ದರು. ಬಸ್ ಗಳು ತುಂಬಾ ರಶ್ ಇರುವ ಸಮಯದಲ್ಲಿ ಬಸ್ ಹತ್ತಿ ನೂಕಾಟದಲ್ಲಿ ಮಹಿಳೆಯರ ಮೊಬೈಲ್ ಎಗರಿಸಿ ಪುನಃ ವಾಪಸ್‌ ಮನೆಗೆ ಹೋಗ್ತಿದ್ರು. ಹೀಗೆ ಒಂದಷ್ಟು ಮೊಬೈಲ್ ಸಂಗ್ರಹಿಸಿ ಅನಂತಪುರದ ವ್ಯಕ್ತಿಯೊಬ್ಬನ ಕರೆಸಿ ಸೇಲ್ ಮಾಡಿದ್ದರು. ಇದನ್ನೂ ಓದಿ: ಶಾಲಾ-ಕಾಲೇಜುಗಳ ಅಭಿವೃದ್ಧಿಗೆ 850 ಕೋಟಿ ರೂ. ಅನುದಾನ; ಸಿಎಂಗೆ ಮಧು ಬಂಗಾರಪ್ಪ ಅಭಿನಂದನೆ

    ಸದ್ಯ ಆರೋಪಿ ಮಹಿಳೆಯರಿಂದ ಮಹದೇವಪುರ ಠಾಣಾ ಪೊಲೀಸ್ರು ಬರೋಬ್ಬರಿ 30 ಲಕ್ಷ ಮೌಲ್ಯದ 120 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಇವರಿಂದ ಮೊಬೈಲ್‌ಗಳನ್ನ ಕೊಂಡುಕೊಳ್ಳುತ್ತಿದ್ದ ವ್ಯಕ್ತಿಗೂ ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ʻಚಿನ್ನʼ ಗೆದ್ದವರಿಗೆ 6 ಕೋಟಿ ರೂ. ಗಿಫ್ಟ್‌ – – ಬೆಂಗ್ಳೂರಿಗೇ ಬರಲಿದೆ ʻಕ್ರೀಡಾ ನಗರʼ