Tag: ಮಳೆ

  • ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ಮಳೆ- ಚಿಕ್ಕಮಗಳೂರಿನಲ್ಲಿ ಇಬ್ಬರ ಸಾವು

    ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ಮಳೆ- ಚಿಕ್ಕಮಗಳೂರಿನಲ್ಲಿ ಇಬ್ಬರ ಸಾವು

    – ತುಮಕೂರಿನಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಐವರಿಗೆ ಗಾಯ

    ಬೆಂಗಳೂರು: ರಾಜ್ಯದ ವಿವಿಧೆಡೆ ಶನಿವಾರ ಧಾರಾಕಾರ ಮಳೆಯಾಗಿದೆ.

    ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯ ವೇಳೆ ಸಿಡಿಲು ಬಡಿದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ ಮನೆಯ ಛಾವಣಿ ಹಾರಿಹೋಗಿ ಬಾಲಕನ ಮೇಲೆ ಬಿದ್ದ ಪರಿಣಾಮ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

    ಇತ್ತ ತುಮಕೂರಿನ ಮಧುಗಿರಿಯಲ್ಲೂ ಜೋರು ಮಳೆಯಾಗಿದೆ. ಮಳೆ ವೇಳೆ ಬೃಹತ್ ಮರವೊಂದು ನೆಲಕ್ಕುರುಳಿ ಕಾರು ಸಂಪೂರ್ಣ ಜಖಂಗೊಂಡಿದೆ. ತುಮಕೂರು ನಗರದಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಬಿದ್ದಿದೆ. ಮತ್ತೊಂದೆಡೆ ಸಿಡಿಲು ಬಡಿದು ಒಂದೇ ಕುಟುಂಬದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಹಾಸನ, ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಹಾವೇರಿಯಲ್ಲಿ ಕೂಡ ಧಾರಾಕಾರ ಮಳೆಯಾಗಿದೆ.

  • ಕಲಬುರಗಿ: ಜೂನ್‍ನಿಂದ ಅಕ್ಟೋಬರ್‍ವರೆಗೆ ಈ ಗ್ರಾಮದಲ್ಲಿ ಗರ್ಭಿಣಿಯರು ಇರಲ್ಲ!

    ಕಲಬುರಗಿ: ಜೂನ್‍ನಿಂದ ಅಕ್ಟೋಬರ್‍ವರೆಗೆ ಈ ಗ್ರಾಮದಲ್ಲಿ ಗರ್ಭಿಣಿಯರು ಇರಲ್ಲ!

    ಕಲಬುರಗಿ: ಜಿಲ್ಲೆಯ ಬಿಕ್ಕನಳ್ಳಿ ಗ್ರಾಮದಲ್ಲಿ ಮಳೆಗಾಲ ಆರಂಭವಾಗ್ತಿದ್ದಂತೆ ತುಂಬು ಗರ್ಭಿಣಿಯರನ್ನು ಜೂನ್‍ನಿಂದ ಅಕ್ಟೋಬರ್ ತಿಂಗಳವರೆಗೆ ಗ್ರಾಮದಿಂದ ಹೊರಗಿಡ್ತಾರೆ.

    ಹೌದು. ವಿಚಿತ್ರ ಆದ್ರೂ ಸತ್ಯ. ಜೂನ್ ತಿಂಗಳು ಆರಂಭವಾಗ್ತಿದ್ದಂತೆ ಈ ಗ್ರಾಮದ ತುಂಬು ಗರ್ಭಿಣಿಯರು ಸಂಬಂಧಿಕರ ಮನೆಗೆ ಶಿಫ್ಟ್ ಆಗ್ತಾರೆ. ಯಾಕಂದ್ರೆ ಜೂನ್ ತಿಂಗಳಲ್ಲಿ ಮಳೆ ಶುರುವಾದ್ರೆ ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗುತ್ತೆ. ಇದ್ರಿಂದ ಗರ್ಭಿಣಿಯರಿಗೆ ವೈದ್ಯಕೀಯ ಸೇವೆ ಸಿಗಲ್ಲ. ಹೀಗಾಗಿ ಜೂನ್‍ನಿಂದ ಅಕ್ಟೋಬರ್‍ವರೆಗೆ ಗರ್ಭಿಣಿಯರು ಸಂಬಂಧಿಕರ ಮನೆಯಲ್ಲಿ ವಾಸಿಸ್ತಾರೆ.

    ಗ್ರಾಮಸ್ಥರ ಈ ಗೋಳು ಕಂಡ ಜನಪ್ರತಿನಿಧಿಗಳು ರಸ್ತೆ ಸಂಪರ್ಕ ಕಲ್ಪಿಸಲು ಮುಂದಾಗಿದ್ರು. ಆದ್ರೆ ಈ ಏರಿಯಾ ಕೊಂಚಾವರಂ ಸಂರಕ್ಷಿತ ಅರಣ್ಯ ಪ್ರದೇಶವಾದ್ರಿಂದ ಅರಣ್ಯ ಇಲಾಖೆ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಜಿಲ್ಲಾಡಳಿತ ಈ ಗ್ರಾಮವನ್ನೇ ಬೇರೆಡೆ ಶಿಫ್ಟ್ ಮಾಡಲು ಯೋಜನೆ ರೂಪಿಸಿ ಪ್ರತಿ ಮನೆಗೆ 10 ಲಕ್ಷ ರೂ. ನಿಗದಿ ಮಾಡಿದೆ. ಆದ್ರೆ ಅರಣ್ಯದಲ್ಲಿರುವ ಇವರ ಜಮೀನುಗಳಿಗೆ ಕಂದಾಯ ಇಲಾಖೆ ಪರಿಹಾರ ನೀಡಲು ಮೀನಾ ಮೇಷ ಎಣಿಸ್ತಿದೆ. ಹೀಗಾಗಿ ಜನ ಅನಿವಾರ್ಯವಾಗಿ ಕಾಡಿನಲ್ಲಿ ಕಾಲ ಕಳೆಯುತ್ತಿದ್ದಾರೆ.

    ಒಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತು ಈ ಗ್ರಾಮವನ್ನು ಕಾಡಿನಿಂದ ನಾಡಿಗೆ ಶಿಫ್ಟ್ ಮಾಡಬೇಕಾಗಿದೆ. ಆಗ ಮಾತ್ರ ಈ ಗ್ರಾಮದ ತುಂಬು ಗರ್ಭಿಣಿಯರು ನಿರಾಳವಾಗಿ ಕಾಲ ಕಳೆಯುವಂತಾಗುತ್ತೆ.

  • ಬೆಂಗ್ಳೂರಿಗೆ ವರದಾನವಾದ ನಿರಂತರ ಮಳೆ- ಜೂನ್‍ವರೆಗೆ ನೀರಿನ ಸಮಸ್ಯೆ ಇಲ್ಲ

    ಬೆಂಗ್ಳೂರಿಗೆ ವರದಾನವಾದ ನಿರಂತರ ಮಳೆ- ಜೂನ್‍ವರೆಗೆ ನೀರಿನ ಸಮಸ್ಯೆ ಇಲ್ಲ

    ಬೆಂಗಳೂರು: ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಸುರಿದ ಮಳೆ ಬೆಂಗಳೂರಿಗೆ ವರದಾನವಾಗಿದೆ. ಮಳೆಯಿಂದಾಗಿ ನಗರದ ನೀರಿನ ಸಮಸ್ಯೆ 15 ದಿನಗಳ ಕಾಲ ಮುಂದೂಡಿದೆ.

    ಮಳೆಯಿಂದಾಗಿ ಜಲಾಶಯಗಳಲ್ಲಿ ಒಳಹರಿವು ಹೆಚ್ಚಿದ್ದು, ಮಳೆರಾಯ ಬೆಂಗಳೂರಿಗರ ನೀರಿನ ದಾಹ ನೀಗಿಸಿದ್ದಾನೆ.

    ಕೆಆರ್‍ಎಸ್ ನಲ್ಲಿ ಶೇಖಡಾ 30 ರಷ್ಟು ಒಳಹರಿವು ಹೆಚ್ಚಳವಾಗಿದೆ. ಕಳೆದ ವರ್ಷ ಮೇ ಅಂತ್ಯದಲ್ಲೆ ಜಲಾಶಯ ಖಾಲಿಯಾಗಿತ್ತು. ಆದ್ರೆ ಈಗ ಜಲಾಶಯದಲ್ಲಿ 3.5 ಟಿಎಮ್‍ಸಿ ನೀರು ಲಭ್ಯವಿದ್ದು, ಜೂನ್ ಮೊದಲ ವಾರದವರೆಗೆ ನೀರಿನ ಸಮಸ್ಯೆಯಿಲ್ಲ ಎಂದು ಜಲಮಂಡಳಿ ಮುಖ್ಯ ಅಭಿಯಂತರರಾದ ಕೆಂಪರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

    ಆರು ತಿಂಗಳೊಳಗಾಗಿ ಎಸ್‍ಟಿಪಿ(ತ್ಯಾಜ್ಯ ಶುದ್ದೀಕರಣ ಘಟಕ) ಆಳವಡಿಸಿಕೊಳ್ಳದಿದ್ದರೆ ದಂಡ ಬೀಳಲಿದೆ ಎಂದು ಅಪಾರ್ಟ್‍ಮೆಂಟ್ ಮಾಲೀಕರಿಕೆ ಎಚ್ಚರಿಕೆ ನೀಡಿದ್ದಾರೆ.ಡಿಸೆಂಬರ್ ಅಂತ್ಯದೊಳಗೆ ಎಸ್‍ಟಿಪಿ ಆಳವಡಿಸಿಕೊಳ್ಳದಿದ್ದರೆ ಮೊದಲು ವಾಟರ್ ಬಿಲ್‍ನ ಶೇಖಡ 50 ರಷ್ಟು ದಂಡ, ತದನಂತರ ಶೇಖಡ ನೂರರಷ್ಟು ದಂಡ ವಿಧಿಸಲು ಜಲಮಂಡಳಿ ನಿರ್ಧಾರ ಮಾಡಿದೆ.

    ಬೆಳ್ಳಂದೂರು ಕೆರೆ ತ್ಯಾಜ್ಯ ಹರಿಬಿಡುವ ಕಾರ್ಖಾನೆಗಳಿಗೆ 5 ಲಕ್ಷ ರೂ. ದಂಡ ಬೀಳಲಿದೆ ಎಂದು ಕೆಂಪರಾಮಯ್ಯ ಹೇಳಿದ್ದಾರೆ.

  • ಕೊರಟಗೆರೆಯಲ್ಲಿ ಬಿರುಗಾಳಿ ಸಹಿತ ಮಳೆ- 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ

    ಕೊರಟಗೆರೆಯಲ್ಲಿ ಬಿರುಗಾಳಿ ಸಹಿತ ಮಳೆ- 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ

    ಬೆಂಗಳೂರು: ರವಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈಚಾಪುರ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

    ಬೈಚಾಪುರ ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿ 15ಕ್ಕೂ ಹೆಚ್ಚು ಮರಗಳು ಧರೆಗುರಳಿವೆ. ರಾತ್ರಿ ಸುರಿದ ಭಾರೀ ಮಳೆಗೆ ಗ್ರಾಮದ ಜನರಲ್ಲಾ ಭಯಭೀತರಾಗಿದ್ದರು. ರಸ್ತೆಯ ಬದಿಯ ಮರಗಳು ನೇರವಾಗಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿದರಿಂದ ಊರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

    ಮೈಸೂರು ನಗರದಲ್ಲಿ ನಿನ್ನೆ ರಾತ್ರಿ ಮಳೆಯಾಗಿದ್ದು, ಅನೇಕ ಮರಗಳು ಬಿದ್ದಿವೆ. ಮಹಾನಗರ ಬೆಂಗಳೂರಿನ ವಿದ್ಯಾರಣ್ಯಪುರಂನ ಮೂರು ಮೆನೆಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳ್ಕಕ್ಕ್ಕೆ ಸ್ಥಳೀಯಪಾಲಿಕೆ ಸದಸ್ಯ ಎಂ..ವಿ.ರಾಮಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮ್‍ಪ್ರಸಾದ್ ಮನೆಯ ಮಾಲೀಕರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

     

  • ರಾಜ್ಯದ ಹಲವೆಡೆ ತಂಪೆರೆದ ಮಳೆರಾಯ – ರೈತರ ಮುಖದಲ್ಲಿ ನಗು

    ರಾಜ್ಯದ ಹಲವೆಡೆ ತಂಪೆರೆದ ಮಳೆರಾಯ – ರೈತರ ಮುಖದಲ್ಲಿ ನಗು

    ಬೆಂಗಳೂರು: ರಾಜ್ಯದ ಬಹುತೇಕ ಕಡೆಗಳಲ್ಲಿ ಇಂದು ಸಂಜೆ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

    ಸಿಲಿಕಾನ್ ಸಿಟಿಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು, ಕೆಂಗೇರಿ, ವಿಜಯನಗರ, ಆರ್‍ಆರ್ ನಗರ, ಶ್ರೀನಗರ ಸೇರಿ ಹಲವೆಡೆ ವರುಣನ ದರ್ಶನವಾಗಿದೆ. ಗುಡುಗು ಹಾಗೂ ಅಲಿಕಲ್ಲು ಸಹಿತ ಮಳೆಗೆ ವಾಹನ ಸವಾರರ ಪರದಾಟ ನಡೆಸುತ್ತಿದ್ದಾರೆ. ಕೆಂಗೇರಿ ಉಪನಗರದಲ್ಲಿ ಮರ ಉರುಳಿ ಇಂಡಿಕಾ ಕಾರು ಸಂಪೂರ್ಣ ಜಖಂಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಕಾರು ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಹಾಸನ, ರಾಮನಗರ, ತುಮಕೂರು, ಬೆಳಗಾವಿ, ವಿಜಯಪುರ, ಚಿತ್ರದುರ್ಗ ಸೇರಿ ಹಲವೆಡೆ ಭಾರೀ ಮಳೆಯಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ಹಾಸನದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಬೇಕಾಯ್ತು.

    ಇನ್ನು ಬಿಸಿಲು ನಾಡು ಖ್ಯಾತಿಯ ವಿಜಯಪುರದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಅಲ್ಲಿನ ಜನರಲ್ಲಿ ಸಂತಸ ಮೂಡಿದೆ. ವಿಜಯಪುರ ನಗರದ ಸುತ್ತಮುತ್ತ ಭಾರಿ ಗಾಳಿ, ಸಿಡಿಲು ಸಮೇತ ಮಳೆಯಾಗಿದೆ.

    ಬೆಳಗಾವಿ ನಗರದಲ್ಲಿ ಕೂಡ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಸತತ ಒಂದು ಗಂಟೆಯಿಂದ ಮಳೆರಾಯ ಸುರಿಯುತ್ತಿದ್ದು, ಮಳೆಯಿಂದ ವೀಕೆಂಡ್ ಆಗಿದ್ದರಿಂದ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಇಲ್ಲಿನ ಚಾವಟ್ ಗಲ್ಲಿಯ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಕಟ್ಟಡ ಕಾಮಗಾರಿ ಸ್ಥಳದಲ್ಲಿ ನಿಲ್ಲಿಸಿದ ಜೆಸಿಬಿ ಸಂಪೂರ್ಣ ಜಲಾವೃತಗೊಂಡಿದೆ. ಒಟ್ಟಿನಲ್ಲಿ ಬಿಸಿಲಿನ ಬೇಗೆಯಿಂದ ಬಳಲಿದ ಗಡಿನಾಡು ಜನರಿಗೆ ವರುಣ ತಂಪೆರೇದಿದ್ದಾನೆ. ಈ ಮೂಲಕ ಭೀಕರ ಬರಗಾಲದಿಂದ ಕಂಗೆಟ್ಟ ರೈತರಲ್ಲಿ ಸಂತಸ ಮೂಡಿದೆ.

                                                                                               ಆಲಿಕಲ್ಲು

  • ಭೀಕರ ಬರ: ಮಳೆಗಾಗಿ ಪ್ರಾರ್ಥಿಸಿ ಮಂಡ್ಯದಲ್ಲಿ ಪರ್ಜನ್ಯ ಪೂಜೆ

    ಭೀಕರ ಬರ: ಮಳೆಗಾಗಿ ಪ್ರಾರ್ಥಿಸಿ ಮಂಡ್ಯದಲ್ಲಿ ಪರ್ಜನ್ಯ ಪೂಜೆ

    ಮಂಡ್ಯ: ಸಮರ್ಪಕವಾಗಿ ಮಳೆಯಾಗದೇ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಇಂದು ಬ್ರಾಹ್ಮಣ ಸಭಾದಿಂದ ಪರ್ಜನ್ಯ ಪೂಜೆ ಮಾಡಲಾಯಿತು.

    ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾನ ಘೋಸಾಯಿ ಘಾಟ್ ನ ಕಾವೇರಿ ನದಿ ತೀರದಲ್ಲಿ ಪರ್ಜನ್ಯ ಪೂಜೆ ನಡೆಯಿತು. ವೇದ ಬ್ರಹ್ಮ ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಐವತ್ತಕ್ಕೂ ಹೆಚ್ಚು ಬ್ರಾಹ್ಮಣರಿಂದ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

    ಮೊದಲು ನದಿ ದಡದಲ್ಲಿ ಪೂಜೆ ಸಲ್ಲಿಸಿ ಬಳಿಕ ಕಾವೇರಿ ನದಿಗೆ ಇಳಿದು ಮಂತ್ರ ಪಠಿಸಿದ್ರು. ಈ ವರ್ಷವಾದ್ರೂ ಉತ್ತಮ ಮಳೆಯಾಗಿ ನಾಡಿನ ಜನರ ರಕ್ಷಣೆ ಆಗಲಿ ಅಂತಾ ಪ್ರಾರ್ಥಿಸಿಕೊಳ್ಳಲಾಯ್ತು.

  • ಕೊಪ್ಪಳ: ಮಳೆ-ಗಾಳಿಗೆ ಹಾರಿದ 30ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಕೊಪ್ಪಳ: ಮಳೆ-ಗಾಳಿಗೆ ಹಾರಿದ 30ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಕೊಪ್ಪಳ: ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಸುಮಾರು 30ಕ್ಕೂ ಹೆಚ್ಚು ಮನೆಯ ಮೇಲ್ಛಾವಣೆಯ ತಗಡುಗಳು ಹಾರಿಹೋಗಿವೆ.

    ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ ದೇವಪ್ಪ, ಶಂಕ್ರಪ್ಪ ಹೊರಪೇಟೆ ಸೇರಿದಂತೆ ಇತರರ ಮನೆಯ ಮೇಲ್ಛಾವಣಿಗಳು ಹಾರಿಹೋಗಿವೆ. ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ತಗಡಿನ ಮೇಲ್ಛಾವಣಿಯುಳ್ಳ ಮನೆಯವರು ಪಕ್ಕದ ಮನೆಗಳಲ್ಲಿ ಮಲಗಿದ್ದರು.

    ಮನೆಗಳ ಮೇಲ್ಛಾವಣೆಗಳು ಹಾರಿ ಹೋಗಿದ್ದರಿಂದ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ಕುಟುಂಬಸ್ಥರ ಬದುಕು ಬೀದಿಗೆ ಬಂದಂತಾಗಿದೆ. ಘಟನೆ ನಡೆದು ಕೆಲವು ಗಂಟೆಗಳು ಕಳೆದರೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಬಳ್ಳಾರಿಯಲ್ಲಿ ತಂಪೆರದ ವರುಣ ದೇವ: ಬಿರುಬಿಸಿಲ ನಾಡು ಬಳ್ಳಾರಿಯಲ್ಲಿ ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಮಳೆಯಾಗಿದೆ. ಮಳೆಯ ಆಗಮನದಿಂದ ಬಿಸಿಲಿನಿಂದ ಕಂಗಾಲಾಗಿದ್ದ ಜನರು ಸಂತೋಷಗೊಂಡಿದ್ದಾರೆ.

  • ತುಮಕೂರಿನಲ್ಲಿ ಗುಡುಗು ಸಹಿತ ಮಳೆ- ಸಿಡಿಲು ಬಡಿದು 2 ಹಸು ಸಾವು

    ತುಮಕೂರಿನಲ್ಲಿ ಗುಡುಗು ಸಹಿತ ಮಳೆ- ಸಿಡಿಲು ಬಡಿದು 2 ಹಸು ಸಾವು

    ತುಮಕೂರು: ಬುಧವಾರ ಸಂಜೆ ಜಿಲ್ಲೆಯಲ್ಲಿ ಗುಡಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಎರಡು ಹಸುಗಳು ಸಾವನ್ನಪ್ಪಿವೆ.

    ಜಿಲ್ಲೆಯ ಮಧುಗಿರಿ ತಾಲೂಕಿನ ಮರಿತಿಮ್ಮನಹಳ್ಳಿಯ ರೈತ ಗೋಪಾಲಯ್ಯ ಎಂಬವರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ನಿನ್ನೆ ಸಂಜೆ ಮೋಡ ಕವಿದ ಮೇಲೆ ಗೋಪಾಲಯ್ಯ ಅವರು ತಮ್ಮ ಹಸುಗಳನ್ನು ಬಿದಿರು ಮರದ ಕೆಳಗೆ ಕಟ್ಟಿದ್ದರು. ಈ ವೇಳೆ ಹಸುಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿವೆ.

    ಈ ವರ್ಷ ಭೀಕರ ಬರಗಾರವಿದ್ದು, ಗೋಪಾಲಯ್ಯ ಅವರು ಹಸುಗಳ ಹಾಲು ಮಾರಿ ಜೀವನ ಸಾಗಿಸುತ್ತಿದ್ದರು. ಇದೀಗ ಬರಗಾಲದ ನಡುವೆ ಗೋಪಾಲಯ್ಯ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಾಲೂಕು ಆಡಳಿತ ಮಂಡಳಿ ಪರಿಹಾರ ನೀಡಬೇಕೆಂದು ಗೋಪಾಲಯ್ಯ ಮನವಿ ಮಾಡಿಕೊಂಡಿದ್ದಾರೆ.

     

  • ಕರ್ನಾಟಕದ ಈ ಭಾಗದಲ್ಲಿ ಇಂದು ಸಂಜೆ ಗುಡುಗು ಮಿಂಚು ಸಹಿತ ಭಾರೀ ಮಳೆ ಬೀಳುತ್ತೆ

    ಕರ್ನಾಟಕದ ಈ ಭಾಗದಲ್ಲಿ ಇಂದು ಸಂಜೆ ಗುಡುಗು ಮಿಂಚು ಸಹಿತ ಭಾರೀ ಮಳೆ ಬೀಳುತ್ತೆ

    ಬೆಂಗಳೂರು: ಇಂದು ರಾಜ್ಯದ ಹಲವಡೆ ಮಳೆಯಾಗಲಿದೆ ಜನತೆಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗಲಿದ್ದು, ಗಾಳಿ, ಗುಡುಗು ಮಿಂಚಿನ ತೀವ್ರತೆ ಹೆಚ್ಚಾಗಿರುವ ಸಾಧ್ಯತೆಗಳಿವೆ. ಬೆಂಗಳೂರು, ಕೋಲಾರ, ರಾಮನಗರದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇನ್ನೂ ಮಂಂಡ್ಯ ಮೈಸೂರು, ಸೇರಿದಂತೆ ದಕ್ಷಿಣ ಒಳನಾಡು ಕರಾವಳಿ ಭಾಗದಲ್ಲಿ ಚದುರಿದ ಮಳೆಯಾಗಲಿದೆ. ಬೆಂಗಳೂರು, ಕೋಲಾರ, ರಾಮನಗರ ಭಾಗದ ಜನ್ರಿಗೆ ಕೊಂಚ ಎಚ್ಚರವಾಗಿರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

     

  • ರಾಜ್ಯದ ಹಲವೆಡೆ ರಾತ್ರಿ ಗುಡುಗು ಸಹಿತ ಮಳೆ- ಮೈಸೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು

    ರಾಜ್ಯದ ಹಲವೆಡೆ ರಾತ್ರಿ ಗುಡುಗು ಸಹಿತ ಮಳೆ- ಮೈಸೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು

    ಬೆಂಗಳೂರು: ಮಂಗಳವಾರ ರಾತ್ರಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆ ಬಂದಿದ್ದರಿಂದ ವಾಹನ ಸವಾರರು ಪರದಾಡಿದರು. ರಾಮನಗರದಲ್ಲೂ ಭಾರಿ ಮಳೆಯಾಗಿದ್ದು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಯಿತು.

    ಮೈಸೂರಿನಲ್ಲೂ ಮಳೆಯಾಗಿದ್ದು, ನಗರದ ಹೊರವಲಯದ ಕೆಂಪಯ್ಯನಹುಂಡಿಯಲ್ಲಿ ಸಿಡಲು ಬಡಿದು ನಾಡನಹಳ್ಳಿ ಗ್ರಾಮದ ನಿವಾಸಿ ನಾಗರಾಜು (42) ಎಂಬವರು ಸಾವನ್ನಪ್ಪಿದ್ದಾರೆ. ಕೆಂಪಯ್ಯನಹುಂಡಿಗೆ ಕೂಲಿ ಕೆಲಸಕ್ಕೆ ನಾಗರಾಜು ಬಂದಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಪಿ.ಗಂಗಾಪುರದಲ್ಲಿ ಒನಮ್ಮ ಎಂಬುವರಿಗೆ ಸೇರಿದ ಸೀಮೆಹಸುವೊಂದು ಸಿಡಿಲು ಬಡಿತಕ್ಕೆ ಸಿಲುಕಿ ಸಾವನ್ನಪ್ಪಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಿತ್ತಲಪುರಗ್ರಾಮದಲ್ಲಿ ಗ್ರಾಮದ ನಂಜುಂಡಯ್ಯ ಎಂಬುವರಿಗೆ ಸೇರಿದ ಹಸು ಸಾವನ್ನಪ್ಪಿದೆ. ಈ ವೇಳೆ ಅದೃಷ್ಟವಶಾತ್ ಸ್ಥಳದಲ್ಲಿದ್ದ ನಂಜುಡಯ್ಯ ಪಾರಾಗಿದ್ದಾರೆ.