Tag: ಮಲೇಷಿಯಾ

  • ಒಳ ಉಡುಪಿನಲ್ಲಿ 4 ಕೆಜಿ ಚಿನ್ನ ಸಾಗಿಸ್ತಿದ್ದ ಮಹಿಳೆಯರು ಮುಂಬೈನಲ್ಲಿ ಅರೆಸ್ಟ್

    ಒಳ ಉಡುಪಿನಲ್ಲಿ 4 ಕೆಜಿ ಚಿನ್ನ ಸಾಗಿಸ್ತಿದ್ದ ಮಹಿಳೆಯರು ಮುಂಬೈನಲ್ಲಿ ಅರೆಸ್ಟ್

    ಮುಂಬೈ: ತಮ್ಮ ಒಳ ಉಡುಪಿನಲ್ಲಿ 4 ಕೆ.ಜಿ ಯಷ್ಟು ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಭಾರತೀಯ ಮೂಲದ ಮಹಿಳೆಯರಿಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಮಲೇಷಿಯಾದ ಸಂತಾಲೆತ್ಮಿ ಸುಮಮಾನಂ(41) ಹಾಗೂ ಸಿಂಗಾಪುರದ ಮ್ಯಾಗಿಸ್ವೇರಿ ಜೈರಾಮ್ನ(59) ಬಂಧಿತ ಮಹಿಳೆಯರು.

    ಶನಿವಾರ ಈ ಮಹಿಳೆಯರಿಬ್ಬರು ಜೆಟ್ ಏರ್ ವೇಸ್ ಫ್ಲೈಟ್ 9ಢ 009 ಮೂಲಕ 3 ಗಂಟೆ ಸುಮಾರಿಗೆ ಮುಂಬೈ ಏರ್‍ಪೋರ್ಟ್ ಗೆ ಬಂದಿಳಿದಿದ್ದಾರೆ. ಈ ವೇಳೆ ಅಧಿಕಾರಿಗಳು ತಪಾಸಣೆ ಮಾಡಿದಾಗ ಮಹಿಳೆಯರು ತಮ್ಮ ಸೊಂಟ, ಕೈ ಅಡಿ ಹಾಗೂ ಒಳ ಉಡುಪಿನಲ್ಲಿ ಸುಮಾರು 1.2 ಕೋಟಿ ರೂ. ಮೌಲ್ಯದ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಓರ್ವ ಮಹಿಳೆ ತಾನು ಶಾಪಿಂಗ್ ಮುಗಿಸಿ ಬಂದಿದ್ದು, ನಾಳೆ ಸಿಂಗಾಪುರಕ್ಕೆ ತೆರಳಲಿದ್ದೇನೆ ಅಂತ ಅಧಿಕಾರಿಗಳ ಜೊತೆ ಹೇಳಿದ್ದಾಳೆ. ಆದ್ರೆ ಆಕೆಯ ಹೇಳಿಕೆಯಿಂದ ಅಧಿಕಾರಿಗಳಲ್ಲಿ ಸಂಶಯ ವ್ಯಕ್ತವಾಗಿದೆ. ಒಟ್ಟಾರೆ ಇಬ್ಬರು ಮಹಿಳೆಯರಿಂದ ಅಧಿಕಾರಿಗಳು ತಲಾ 2 ಕೆಜಿ ಚಿನ್ನದ ಸರವನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಈ ಚಿನ್ನವನ್ನು ಸ್ವೀಕರಿಸಲು ವ್ಯಕ್ತಿಯೊಬ್ಬರು ಹೊರಗಡೆ ನಿಂತಿರುವುದಾಗಿ ಮಹಿಳೆಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಈ ವಿಚಾರ ತಿಳಿದು ಅಧಿಕಾರಿಗಳು ವಿಮಾನ ನಿಲ್ದಾಣದ ಹೊರಗಡೆ ನಿಂತಿದ್ದ ವ್ಯಕ್ತಿಯನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಈ ವೇಳೆ `ತಾನು ಸಿಂಗಾಪುರ ಮೂಲದ ವ್ಯಕ್ತಿಯಿಂದ ನಾನು ಚಿನ್ನ ಖರೀದಿಸುತ್ತಿದ್ದೆ. ಆದ್ರೆ ಆತ ಯಾರ ಬಳಿ ಕಳುಹಿಸುತ್ತಿದ್ದಾನೆ ಅಂತ ನನಗೆ ಗೊತ್ತಿಲ್ಲ. ಆತ ಚಿನ್ನ ಕಳುಹಿಸುತ್ತಿರೋ ವ್ಯಕ್ತಿಯ ಫೋಟೋಗಳನ್ನು ನನಗೆ ಮೊಬೈಲ್ ನಲ್ಲಿ ಕಳುಹಿಸುತ್ತಿದ್ದ. ಹೀಗಾಗಿ ನಾನು ಅವರ ಕೈಯಿಂದ ತೆಗೆದುಕೊಳ್ಳಲೆಂದು ಬಂದಿದ್ದೆ. ಆದ್ರೆ ಇದರಲ್ಲಿ ನನ್ನ ತಪ್ಪಿಲ್ಲ ಅಂತ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.

    ಬಂಧಿತ ಇಬ್ಬರು ಮಹಿಳೆಯರು ಬಹಳ ಬುದ್ಧಿವಂತಿಕೆಯಿಂದ ಚಿನ್ನದ ಸರ ಹಾಗೂ ಕಡಗಗಳನ್ನು ಸಾಗಾಟ ಮಾಡುತ್ತಿದ್ದರು. ಸದ್ಯ ಈ ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅಂತ ಕಸ್ಟಮ್ಸ್ ಉಪ ಕಮಿಷನರ್ ಎಐಯು ಪ್ರದ್ನ್ಯಾ ಶೀಲ್ ಜುಮ್ಮೆ ಹೇಳಿದ್ದಾರೆ.

    ಇನ್ನು ಚಿನ್ನವನ್ನು ಕಳುಹಿಸಿದ ವ್ಯಕ್ತಿ ಈ ಇಬ್ಬರು ಮಹಿಳೆಯರಿಗೆ ಉಳಿದುಕೊಳ್ಳಲೆಂದು ವಿಮಾನ ನಿಲ್ದಾಣದ ಪಕ್ಕದಲ್ಲಿರೋ ಹೊಟೇಲಿನಲ್ಲಿ ರೂಮ್ ಕೂಡ ಬುಕ್ ಮಾಡಿದ್ದನು ಎನ್ನಲಾಗಿದೆ.

  • ವಿಡಿಯೋ: ನದಿಯಲ್ಲಿ 20 ಅಡಿ ಉದ್ದದ ಹೆಬ್ಬಾವು ಕಂಡು ದಂಗಾದ್ರು!

    ವಿಡಿಯೋ: ನದಿಯಲ್ಲಿ 20 ಅಡಿ ಉದ್ದದ ಹೆಬ್ಬಾವು ಕಂಡು ದಂಗಾದ್ರು!

     

    ಕೌಲಾಲಂಪುರ: ನದಿಯೊಂದರಲ್ಲಿ ಈಜಾಡುತ್ತಿದ್ದ ಭಾರೀ ಗಾತ್ರದ ಹೆಬ್ಬಾವೊಂದನ್ನ ಮಲೇಷಿಯಾದಲ್ಲಿ ಸೆರೆಹಿಡಿಯಲಾಗಿದೆ.

    ಇಲ್ಲಿನ ಜೆಲಿ ಜಿಲ್ಲೆಯ ಸುಂಗೈ ಲಾಂಗ್ ಗ್ರಾಮದ ನದಿಯೊಂದರಲ್ಲಿ ಬರೋಬ್ಬರಿ 20 ಅಡಿ ಉದ್ದದ ಈ ಹೆಬ್ಬಾವು ಕಾಣಿಸಿಕೊಂಡಿತ್ತು. ಸೋಮವಾರದಂದು ಸೆರೆಹಿಡಿಯಲಾಗಿರುವ ವಿಡಿಯೋದಲ್ಲಿ, ದಡದ ಬಳಿ ಬರುತ್ತಿದ್ದ ಹಾವಿನ ಮೇಲೆ ವ್ಯಕ್ತಿಯೊಬ್ಬ ಕಲ್ಲು ಎಸೆಯುತ್ತಿರೋದನ್ನ ಕಾಣಬಹುದು.

     

    ಈ ಹಾವನ್ನ ನದಿಯಿಂದ ಹೊರತರೋದಕ್ಕೆ 6 ಜನರು ಹರಸಾಹಸ ಪಡಬೇಕಾಯ್ತು ಅಂತ ವಿಡಿಯೋ ಸೆರೆಹಿಡಿದ ವ್ಯಕ್ತಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ನಂತರ ಈ ಹಾವನ್ನ ಸ್ಥಳೀಯ ಅಧಿಕಾರಿಗಳಿಗೆ ನೀಡಲಾಗಿದೆ. ಸ್ಥಳೀಯ ಮೃಗಾಲಯವೊಂದರಲ್ಲಿ ಈ ಹೆಬ್ಬಾವಿಗೆ ಆಶ್ರಯ ಸಿಗಲಿದೆ ಎಂದು ವರದಿಯಾಗಿದೆ.

    ಹಾವು ಕಾಣಿಸಿಕೊಂಡ ವೇಳೆ ನದಿಯ ದಡದ ಬಳಿ ಸಾಕಷ್ಟು ಮೇಕೆಗಳು ಮೇಯುತ್ತಿದ್ದವು. ಬಹುಶಃ ಹಾವು ಆಹಾರ ಹುಡುಕಿಕೊಂಡು ಬಂದಿರಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.

  • ವರ್ಷಪೂರ್ತಿ ನೀರಿನಲ್ಲೇ ವಾಸ ಮಾಡ್ತಾರೆ ಈ ಜನ!

    ವರ್ಷಪೂರ್ತಿ ನೀರಿನಲ್ಲೇ ವಾಸ ಮಾಡ್ತಾರೆ ಈ ಜನ!

    ಕೌಲಾಲಂಪುರ: ಸಮುದ್ರದದಲ್ಲಿ ಹಡುಗಗಳಲ್ಲಿ ಜನರು ಜೀವನ ಮಾಡುವುದು ನಿಮಗೆ ಗೊತ್ತೆ ಇದೆ. ಆದರೆ ಮಲೇಷಿಯಾದಲ್ಲಿರುವ ಒಂದು ಬುಡಕಟ್ಟು ಜನಾಂಗದ ಸದಸ್ಯರು ವರ್ಷಪೂರ್ತಿ ಸಮುದ್ರದಲ್ಲಿ ಮೇಲೆ ಮನೆ ಮಾಡುತ್ತಿದ್ದಾರೆ.

    ಹೌದು, ಮಲೇಷ್ಯಾದ ಬಜೌ ಬುಡಕಟ್ಟು ಸಮುದಾಯದ ಸದಸ್ಯರು ಸಮುದ್ರದ ಮೇಲೆ ಸಣ್ಣ ಮನೆಯನ್ನು ನಿರ್ಮಿಸಿ ತಮ್ಮ ಜೀವನವನ್ನು ಕಳೆಯುತ್ತಾರೆ.

    ಸಣ್ಣ ಸಮುದಾಯವಾಗಿರುವ ಇವರು ಭೂಮಿಮೇಲೆ ನೆಲೆಸುವುದಿಲ್ಲ. ಬರೀ ನೀರಿನ ಮೇಲೆ ಬುದುಕುವುದು ಇವರ ವಿಶೇಷತೆ. ಸಮುದ್ರದ ಅಂಚಿನಲ್ಲಿ ನೀರಿನೊಳಗೆ ಮನೆಕಟ್ಟಿ ಜೀವನ ನಡೆಸುವ ಸಂಪ್ರದಾಯ ಅನಾದಿಕಾಲದಿಂದ ಬಂದಿದೆ.

    ನಾಗರಿಕತೆಗಳು ಬೆಳೆದಿದ್ದರೂ ಇನ್ನೂ ಯಾಕೆ ಇಲ್ಲೆ ಇದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ, ನಮ್ಮ ಹಿರಿಯರು ಈ ವ್ಯವಸ್ಥೆಯಲ್ಲಿ ನೆಲೆಸಿದ್ದರು. ನಾವು ಈ ರೀತಿಯ ಮನೆಯಲ್ಲಿ ನೆಲೆಸಿ ಹಿರಿಯರ ಸಂಪ್ರದಾಯವನ್ನು ಮುಂದುವರೆಸುತ್ತಿದ್ದೇವೆ ಎಂದು ಉತ್ತರಿಸುತ್ತಾರೆ.

     

    ಮೀನು ಹಿಡಿಯುವ ಇವರು ಮೂಲತಃ ಫಿಲಿಪೈನ್ಸ್ ಮೂಲದವರಾಗಿದ್ದು, ಇನ್ನು ಮಲೇಷ್ಯಾ ಸರ್ಕಾರ ಇವರಿಗೆ ಪೌರತ್ವ ನೀಡಿಲ್ಲ.

     

    https://www.youtube.com/watch?v=8tJmFYeKLlg