Tag: ಮಲೆ ಮಹಾದೇಶ್ವರ ಬೆಟ್ಟ

  • ಇದು ಸಮಾಜದ ಸಭೆ ವಿನಯ್ ಕುಲಕರ್ಣಿ ವಿಷಯ ಬೇಡ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಇದು ಸಮಾಜದ ಸಭೆ ವಿನಯ್ ಕುಲಕರ್ಣಿ ವಿಷಯ ಬೇಡ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಬೆಳಗಾವಿ: ಇಂದು ಮಾಜಿ ಮಂತ್ರಿ ವಿನಯ್ ಕುಲಕರ್ಣಿ ಅವರ ಬಿಡುಗಡೆ ಹಿನ್ನೆಲೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಿರಾಕರಿಸಿದ್ದಾರೆ.

    ಶನಿವಾರ ಬೆಳಗಾವಿಯಲ್ಲಿ ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ 2 ರಲ್ಲಿ ಮೀಸಲಾತಿ ನೀಡಲು ಸರ್ಕಾರ ಕೇಳಿರುವ ಸಮಯಾವಕಾಶದ ವೇಳೆ ಸರ್ಕಾರ ಗಮನ ಸೆಳೆಯಲು ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಸಮಾಜ ಸಭೆಯಲ್ಲಿ ವಿನಯ್ ಕುಲಕರ್ಣಿ ಕುರಿತು ಮಾತನಾಡುವುದು ಸೂಕ್ತವಲ್ಲ ಎಂದಿದ್ದಾರೆ.   ಇದನ್ನೂ ಓದಿ:ಜೈಲಿಗೆ ಬಂದು ಸಾಕಷ್ಟು ಓದುವುದನ್ನು ಕಲಿತೆ, ಇದು ನನ್ನ ಜೀವನದಲ್ಲಿ ಅತೀ ದೊಡ್ಡ ಬದಲಾವಣೆ: ವಿನಯ್ ಕುಲಕರ್ಣಿ

    ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ 2 ರಲ್ಲಿ ಮೀಸಲಾತಿ ನೀಡಲು ಸರ್ಕಾರ ಸೆಪ್ಟೆಂಬರ್ 15ರವರೆಗೆ ಕಾಲಾವಕಾಶವನ್ನು ಕೇಳಿದೆ. ಆದ್ದರಿಂದ ಸರ್ಕಾರಕ್ಕೆ ನಮ್ಮ ವಿಚಾರವನ್ನು ಮನದಟ್ಟಾಗಿಸುವ ಉದ್ದೇಶದಿಂದ ಆಗಸ್ಟ್ 26ರಿಂದ ಅಕ್ಟೋಬರ್ ಒಂದರವರೆಗೂ ರಾಜ್ಯ ಮಟ್ಟದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಚಾಮರಾಜನಗರದ ಮಲೆ ಮಹಾದೇಶ್ವರ ಬೆಟ್ಟದಿಂದ ಈ ಪಂಚಮಸಾಲಿ ಪತ್ರಿಜ್ಞಾ ಪಂಚಾಯತಿ ಎಂಬ ಅಭಿಯಾನ ಆರಂಭಗೊಳ್ಳಲಿದೆ. ಇದರಲ್ಲಿ ಗೌಡ ಲಿಂಗಾಯತರು, ದೀಕ್ಷ ಲಿಂಗಾಯತರು, ಪಂಚಮಸಾಲಿ ಲಿಂಗಾಯತರು ಭಾಗಿಯಾಗಲಿದ್ದಾರೆ. ಈ ಅಭಿಯಾನ ಎಲ್ಲೆಡೆ ಸಂಚರಿಸಿ ಜಾಗೃತಿ ಮೂಡಿಸಲಿದೆ ಎಂದು ನುಡಿದಿದ್ದಾರೆ.

    ಈ ಅವಧಿಯಲ್ಲಿಯೇ ಸರ್ಕಾರ ಪ್ರವರ್ಗ 2 ರಲ್ಲಿ ಮೀಸಲಾತಿಯ ಭರವಸೆಯನ್ನು ಈಡೇರಿಸಬೇಕಾಗಿದೆ. ಈಗಾಗಲೇ ಸಿಎಂ ಬೊಮ್ಮಾಯಿ ನಮ್ಮನ್ನ ಭೇಟಿಯಾಗಿದ್ದು, ಕಾಲಾವಕಾಶ ಕೇಳಿದ್ದಾರೆ. ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ. ಜೊತೆಗೆ ಪಂಚಮಸಾಲಿ ಲಿಂಗಾಯತರನ್ನು ಬೇರೆ-ಬೇರೆ ಹೆಸರುಗಳಿಂದ ಕರೆಯುತ್ತಾರೆ ಅವರೆಲ್ಲರನ್ನು ಒಗ್ಗೂಡಿಸಿ ಹಕ್ಕೋತ್ತಾಯ ಮಂಡಿಸಲೆಂದೇ ಮಲೆ ಮಹಾದೇಶ್ವರ ಬೆಟ್ಟದಿಂದ ಅಭಿಯಾನವನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ:ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್‍ಗೆ ಥಿಯೇಟರ್ ಬಂದ್ ಹೈ ಎಂದ ರಾಜೂ ಗೌಡ

  • ಕಾವೇರಿ ನದಿಗೆ ಸೇತುವೆ ನಿರ್ಮಿಸುವಂತೆ ಮಾದಪ್ಪನ ಭಕ್ತರ ಒತ್ತಾಯ

    ಕಾವೇರಿ ನದಿಗೆ ಸೇತುವೆ ನಿರ್ಮಿಸುವಂತೆ ಮಾದಪ್ಪನ ಭಕ್ತರ ಒತ್ತಾಯ

    ಚಾಮರಾಜನಗರ: ಮಲೆ ಮಹದೇಶ್ವರನ ದರ್ಶನಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ನಡೆದೆ ಬರುತ್ತಾರೆ. ಅಪಾಯಕಾರಿಯಾಗಿ ಹರಿಯುತ್ತಿರೋ ಕಾವೇರಿ ನದಿಯನ್ನು ಲೆಕ್ಕಿಸದೆ ನಡೆದೆ ಹೋಗುತ್ತಾರೆ. ಒಬ್ಬಿಬ್ಬರಲ್ಲ ಲಕ್ಷಾಂತರ ಮಂದಿ ನದಿಯನ್ನು ದಾಟುತ್ತಾರೆ. ಹೀಗಾಗಿ ಕಾವೇರಿ ನದಿಗೆ ಸೇತುವೆ ಮಾಡಬೇಕೆಂಬುದು ಭಕ್ತರ ಬೇಡಿಕೆಯಾಗಿದ್ದು, ಅವರ ಬೇಡಿಕೆ ಈಡೇರುತ್ತಾ? ಅವರು ನಡೆದು ಹೋಗುವುದು ಯಾವ ಪವಾಡ ಪುರುಷ ಮಹದೇಶ್ವರನ ಭಕ್ತರ ಅಳಲು ಈಡೇರುತ್ತಾ ಅಂತ ಕಾಯುತ್ತಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪವಾಡ ಪುರುಷ ಮಲೆ ಮಹದೇಶ್ವರನ ಬೆಟ್ಟಕ್ಕೆ ಭಕ್ತರ ದಂಡೆ ಹರಿದು ಬಂದಿದೆ. ಅದರಲ್ಲೂ ಶಿವರಾತ್ರಿ ದಿನವಾದ ಇಂದು ಎತ್ತ ನೋಡಿದರು ಜನ ಸಾಗರವೇ ಕಾಣಸಿಗುತ್ತದೆ. ಎಲ್ಲಿ ಹೋದರು ಹರ ಹರ ಮಹದೇವನ ಸದ್ದು ಜೋರಾಗಿದೆ. ಇಂತಹ ಮಲೆ ಮಾದಪ್ಪನ ದರ್ಶನಕ್ಕೆ ಕಾಡು-ಮೇಡು, ನದಿ ಲೆಕ್ಕಿಸದೆ ಜೀವ ಕೈಲಿಡಿದು ಲಕ್ಷಾಂತರ ಮಂದಿ ಭಕ್ತರು ನಡೆದು ಬರೋದನ್ನ ನೋಡಿದರೆ ಎಲ್ಲರಿಗೂ ಅಚ್ಚರಿಯಾಗುತ್ತೆ. ಅದರಲ್ಲೂ ಕೂಡ ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ಜನರು ಮಾದಪ್ಪನಿಗೆ ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ಸನ್ನಿದಾನಕ್ಕೆ ಬಂದು ಹರಕೆ ತೀರಿಸುತ್ತಾರೆ.

    ರಾಮನಗರ ಜಿಲ್ಲೆಯ ಸಂಗಮ ಸಮೀಪದಲ್ಲಿರುವ ಮೇಕೆದಾಟು ಮೂಲಕ ರಭಸವಾಗಿ ಹರಿಯುವ ಕಾವೇರಿ ನದಿಯಲ್ಲಿ ಮಿಂದು ಪ್ರಾಣದ ಹಂಗು ತೊರೆದು ನದಿಯಲ್ಲಿ ನಡೆದು ಭಕ್ತರು ಮಲೆ ಮಾದಪ್ಪನ ದರ್ಶನಕ್ಕೆ ಬರುತ್ತಾರೆ. ಸುಮಾರು 150ಕ್ಕೂ ಹೆಚ್ಚು ಕಿ.ಮೀ ದೂರವನ್ನು ಕ್ರಮಿಸಿ ಕಾಲ್ನಡಿಗೆಯಲ್ಲಿ ಬರುವುದರಿಂದ ಒಂದು ಸೇತುವೆ ನಿರ್ಮಣ ಮಾಡೋದು ಒಳ್ಳೆಯದು ಎಂಬುದು ಭಕ್ತರ ಅಭಿಪ್ರಾಯವಾಗಿದೆ. ಇದೀಗ ಮಾದಪ್ಪನ ದರ್ಶನಕ್ಕೆ ನಡೆದು ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಸರ್ಕಾರ, ಜಿಲ್ಲಾಡಳಿತ ಇತ್ತ ಗಮನಹರಿಸಿ ಸೇತುವೆ ನಿರ್ಮಾಣ ಮಾಡುವಂತೆ ಭಕ್ತರು ಒತ್ತಾಯಿಸಿದ್ದಾರೆ.

    ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದೇವಸ್ಥಾನದ ಸಿಬ್ಬಂದಿ, ಹಲವು ವರ್ಷಗಳಿಂದಲೂ ಜನರು ಮಾದಪ್ಪನ ದರ್ಶನಕ್ಕೆ ನಡೆದು ಬರುತ್ತಿರುವುದು ನಮಗೂ ಕೂಡ ಅರಿವಿದೆ. ಆದರೆ ಅವರು ನಡೆದು ಬರುತ್ತಿರುವ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದು, ಹೀಗಾಗಿ ಸೇತುವೆ ನಿರ್ಮಾಣಕ್ಕೆ ಭಾರತ ಸರ್ಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕಮರ್ಷಿಯಲ್ ದೃಷ್ಟಿಯಿಂದಲೂ ಕೂಡ ಮಾದಪ್ಪನ ಬೆಟ್ಟಕ್ಕೆ ಆ ಮಾರ್ಗದಲ್ಲಿ ರಸ್ತೆ, ಸೇತುವೆ ಮಾಡುವುದು ಒಳ್ಳೆಯದು. ಆದರೆ ಅರಣ್ಯ ಇಲಾಖೆ ಅನುಮತಿ ಬೇಕಾಗಿರುವುದರಿಂದ ಅಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆಗ್ತಿಲ್ಲ. ಅರಣ್ಯ ಇಲಾಖೆ ಒಪ್ಪಿದರೆ ಸೇತುವೆ ನಿರ್ಮಾಣ ಮಾಡುವ ಕುರಿತು ಸರ್ಕಾರದ ಜೊತೆ ಚರ್ಚಿಸಲಾಗುವುದು. ಜೊತೆಗೆ ರಸ್ತೆ ಕೂಡ ನಿರ್ಮಾಣ ಮಾಡುವುದರಿಂದ ಪ್ರವಾಸೋದ್ಯಮ ಕೂಡ ಬೆಳೆಯುತ್ತೆ ಎನ್ನುತ್ತಿದ್ದಾರೆ.

    ಈ ಲಕ್ಷಾಂತರ ಭಕ್ತರ ಕೂಗು ಆಲಿಸಿ ಸೇತುವೆ ನಿರ್ಮಾಣ ಮಾಡಿದರೆ ಸಾಕು ಪ್ರವಾಸೋದ್ಯಮ ಅಭಿವೃದ್ದಿಯಾಗುತ್ತೆ. ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಮತ್ತಷ್ಟು ಭಕ್ತರು ಮಾದಪ್ಪನ ದರ್ಶನಕ್ಕೆ ಹೋಗುತ್ತಾರೆ. ಇನ್ನಾದರು ಸರ್ಕಾರ ಈ ಬಗ್ಗೆ ಎಚ್ಚೆತ್ತು ಸೇತುವೆ ನಿರ್ಮಾಣ ಮಾಡ್ತಾರಾ ಅನ್ನೊದೆ ಸದ್ಯದ ಪ್ರಶ್ನೆಯಾಗಿದೆ.

  • ಮಾದಪ್ಪನಿಗೆ ಬೆಳ್ಳಿ ಕೊಡ್ತೀನಿ ಅಂದು ಆಯ್ತು 2 ವರ್ಷ- ಮಲೆಮಾದೇಶ್ವರನನ್ನೇ ಮರೆತ್ರಾ ಸಿದ್ದರಾಮಯ್ಯ?

    ಮಾದಪ್ಪನಿಗೆ ಬೆಳ್ಳಿ ಕೊಡ್ತೀನಿ ಅಂದು ಆಯ್ತು 2 ವರ್ಷ- ಮಲೆಮಾದೇಶ್ವರನನ್ನೇ ಮರೆತ್ರಾ ಸಿದ್ದರಾಮಯ್ಯ?

    ಚಾಮರಾಜನಗರ: ಪವಾಡ ಪುರುಷ, ಏಳು ಬೆಟ್ಟಗಳ ಒಡೆಯ ಹೀಗೆ ಹಲವು ಹೆಸರುಗಳಿಂದ ಕರೆಯುವ ಮಲೆಮಹದೇಶ್ವರ ಸ್ವಾಮಿಗೆ ಭಕ್ತರು ಹಲವು ಹರಕೆಗಳನ್ನು ಹೊತ್ತುಕೊಂಡು ಬಳಿಕ ತೀರಿಸುತ್ತಾರೆ. ಒಂದು ವೇಳೆ ಹರಕೆ ತೀರಿಸದೇ ಇದ್ದರೆ ತೊಂದರೆಗಳನ್ನು ಅನುಭವಿಸುತ್ತಾರೆ ಎಂದು ಹೇಳುತ್ತಾರೆ. ಅದೇ ರೀತಿ ಇದೀಗ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಹರಕೆ ತೀರಿಸದೇ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

    ರಾಜಕಾರಣಿಗಳಿಗೂ ಚಾಮರಾಜನಗರಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ. ಚಾಮರಾಜನಗರ ಅಂದರೆ ಸಾಕು ರಾಜಕಾರಣಿಗಳು ಮಾರುದ್ದ ದೂರ ಓಡುತ್ತಾರೆ. ಇಲ್ಲಿಗೆ ಹೋದರೆ 6 ತಿಂಗಳಲ್ಲಿ ಅಧಿಕಾರ ಹೋಗುತ್ತದೆ ಅನ್ನೋ ಮಾತು ಬಹುಕಾಲದಿಂದಲೂ ಇದೆ. ಈ ಹಿಂದೆ ಜೆ.ಎಚ್ ಪಟೇಲ್ ಆದಿಯಾಗಿ ಬಹುತೇಕ ಸಿಎಂಗಳು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಂಡಿದ್ದರು.

    ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯ ಕಡೆ ದಿನಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಕಾಕತಾಳೀಯ ಎಂಬಂತೆ ಅವರು ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿಲ್ಲ. ಆದರೆ ಇದೆಲ್ಲವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹುಸಿ ಮಾಡಿದ್ದರು. ಸಿದ್ದರಾಮಯ್ಯ ಚಾಮರಾಜನಗರ ಪಟ್ಟಣಕ್ಕೆ 10 ಬಾರಿ, ಜಿಲ್ಲೆಗೆ 23 ಬಾರಿ ಭೇಟಿ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅಂದು ಭೇಟಿ ನೀಡಿದಾಗ ಮಲೆಮಾದಪ್ಪನಿಗೆ ಹರಕೆ ಹೊತ್ತಿದ್ದು ಅದನ್ನು ಇಂದಿಗೂ ತೀರಿಸಿಲ್ಲ.

    ಮಾದಪ್ಪನಿಗೆ ಬೆಳ್ಳಿ ರಥ ಮಾಡಿಸಲು ನಾನು ನನಗೆ ಬಂದಿರುವ ಬೆಳ್ಳಿ ಉಡುಗೊರೆಗಳನ್ನು ನೀಡುತ್ತೇನೆ ಎಂದು ಎರಡು ವರ್ಷಗಳ ಹಿಂದೆ ಸಿಎಂ ಆಗಿದ್ದ ವೇಳೆ ಸಿದ್ದರಾಮಯ್ಯ ಹೇಳಿದ್ದರು. ಆದರೆ ಎರಡು ವರ್ಷಗಳು ಕಳೆದರೂ ಮಾದಪ್ಪನಿಗೆ ರಥ ಮಾಡಿಸಲು ಸಿದ್ದರಾಮಯ್ಯ ಅವರು ಬೆಳ್ಳಿಯನ್ನು ಮಾತ್ರ ನೀಡಿಲ್ಲ. ಹಾಗಾಗಿ ಸಿದ್ದರಾಮಯ್ಯ ಇದೀಗ ಮಾದಪ್ಪನ ಕೆಂಗಣ್ಣಿಗೆ ಗುರಿಯಾದಂತೆ ಕಾಣುತ್ತಿದೆ ಎಂದು ದೇವಾಲಯದ ಅರ್ಚಕ ಹೇಳುತ್ತಾರೆ.

    ಎರಡು ವರ್ಷಗಳ ಹಿಂದೆ ಬೆಳ್ಳಿ ರಥ ಮಾಡಿಸೋ ಪ್ರಸ್ತಾವನೆ ಇಟ್ಟಾಗ ತಾನು ಬೆಳ್ಳಿ ಕೊಡುತ್ತೇನೆ. ನೀವು ರಥ ಮಾಡಿಸಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಮಾದಪ್ಪನಿಗೆ ಬೆಳ್ಳಿಯ ರಥ ಮಾಡಿಸಲು ಮರದ ರಥ ತಯಾರಾಗಿದ್ದು ಅದಕ್ಕೆ ಬೆಳ್ಳಿಯ ಕವಚ ಹಾಕೋದಷ್ಟೇ ಬಾಕಿ ಇದೆ. ಆದರೆ ಸಿದ್ದರಾಮಯ್ಯ ಹರಕೆ ಮಾತ್ರ ನೀಡಿಲ್ಲ. ಇದರಿಂದಲೇ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಂಡರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಕಳೆದುಕೊಂಡಿತು. ದೋಸ್ತಿ ಸರ್ಕಾರದಲ್ಲೂ ಸಮಸ್ಯೆ ಆಯ್ತು ಅನ್ನೋ ಮಾತುಗಳು ಕೆಳಿ ಬರುತ್ತಿದೆ ಎಂದು ದೇಗುಲದ ಆಡಳಿತ ಕಾರ್ಯದರ್ಶಿ ಅನಂತ್ ಪ್ರಸಾದ್ ಹೇಳಿದ್ದಾರೆ.

    ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಚಾಮರಾಜನಗರದ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು. ಆದರೆ ಅಧಿಕಾರ ಹೋಗಿ ಎರಡು ವರ್ಷವಾಗ್ತಾ ಬಂದರೂ ತಾನು ಕೊಟ್ಟಿದ್ದ ಮಾತು ಉಳಿಸಿಕೊಂಡಿಲ್ಲ. ಈ ಮೂಲಕ ಸಿದ್ದರಾಮಯ್ಯ ಮಲೆಮಾದಪ್ಪನನ್ನೇ ಮರೆತ್ರಾ ಅನ್ನೋ ಚರ್ಚೆ ಎದ್ದಿದೆ.