Tag: ಮಲಮಗ

  • ಮಲಮಗನನ್ನು ವಿವಾಹವಾಗಿ ಮಗುವಿಗೆ ಜನ್ಮ ನೀಡಿದ ಮಹಿಳೆ

    ಮಲಮಗನನ್ನು ವಿವಾಹವಾಗಿ ಮಗುವಿಗೆ ಜನ್ಮ ನೀಡಿದ ಮಹಿಳೆ

    ಮಾಸ್ಕೋ: ರಷ್ಯಾದ 35 ವರ್ಷದ ಮಹಿಳೆ ತನ್ನ ಮೊದಲ ಮಗುವಿಗೆ ಮಲಮಗನೊಂದಿಗೆ ಜನ್ಮ ನೀಡಿರುವುದಾಗಿ ಘೋಷಿಸಿದ್ದಾಳೆ. ಗಂಡನನ್ನು ತೊರೆದು ಮಲಮಗನನ್ನೇ ವಿವಾಹವಾಗಿ ಮಗುವಿಗೆ ಜನ್ಮ ನೀಡುತ್ತಿರುವ ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

    ಮರೀನಾ ಮಾಜಿ ಗಂಡನ ಹೆಣ್ಣು ಮಗುವಿಗೆ ಜನ್ಮ ನೀಡುವ ಮುನ್ನವೇ ಆತನ ಪುತ್ರ ವ್ಲಾಡಿಮಿರ್ ನನ್ನು ವಿವಾಹವಾಗಿದ್ದಾಳೆ. ಇದೀಗ ಮಾಜಿ ಗಂಡನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗು 3 ಕೆಜಿ ತೂಕವಿದೆ.

    10 ವರ್ಷದಿಂದ ಜೊತೆಗಿದ್ದ ಮಾಜಿ ಪತಿಗೆ ಇದೀಗ ಮರೀನಾ ವಿಚ್ಛೇದನ ನೀಡಿದ್ದಾಳೆ. ವ್ಲಾಡಿಮಿರ್ ರಜೆಯ ದಿನಗಳಲ್ಲಿ ಮನೆಗೆ ಬರುತ್ತಿದ್ದಾಗ ಆಕೆಗೆ ಆತನ ಮೇಲೆ ಪ್ರೇಮವಾಗಿದ್ದು ಈಗ ಆತನನ್ನೆ ಗಂಡನೆಂದು ಘೋಷಿಸಿದ್ದಾಳೆ.

    7 ವರ್ಷದಿಂದ ಮರೀನಾ ತನ್ನ ತಂದೆ ಅಲೆಕ್ಸಿ ಶಾವಿರಿನ್(45)ನನ್ನು ಮದುವೆಯಾಗಿದ್ದಳು ಮತ್ತು ಅವರಿಬ್ಬರು 5 ದತ್ತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು ಎಂಬ ವಿಚಾರ ಮಲಮಗನಾದ ವ್ಲಾಡಿಮಿರ್ ತಿಳಿದಿತ್ತು.

    ಇನ್ ಸ್ಟಾಗ್ರಾಮ್ ನಲ್ಲಿ 5 ಲಕ್ಷ ಫಾಲೋವರ್ ಹೊಂದಿರುವ ಮರೀನಾ ವ್ಲಾಡಿಮಿರ್ ಸೂಚನೆ ಮೇರೆಗೆ ಮಗುವಿನ ಮುಖ ಕಾಣಿಸದಂತೆ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾಳೆ. ತನ್ನ ಹೊಸ ಸಂಗಾತಿಯನ್ನು ಆಕರ್ಷಿಸಲು ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆ ಮಾಡಿಸಿಕೊಂಡಿರುವ ಸತ್ಯವನ್ನು ಬಹಿರಂಗ ಪಡಿಸಿದ್ದಾಳೆ ಮತ್ತು ವಿಶ್ವದಲ್ಲಿಯೇ ತಾನು ಆಕರ್ಷಿತ ನೀಲಿ ಕಣ್ಣುಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾಳೆ.

    ಈ ಹಿಂದೆ ನನಗೆ ಬಹಳಷ್ಟು ಜನರು ಹೊಸ ಸಂಗಾತಿಯನ್ನು ಆಕರ್ಷಿಸಲು ಮೇಕಪ್ ಮಾಡಿಕೊಳ್ಳುವುದಾಗಿ ಸಲಹೆ ನೀಡಿದ್ದರು. ಆದರೆ ಅದರ ಅವಶ್ಯಕತೆ ಇಲ್ಲ. ತನ್ನ ಪ್ಲಾಸ್ಟಿಕ್ ಸರ್ಜರಿ, ಚರ್ಮ ಮತ್ತು ವ್ಯಕ್ತಿತ್ವವನ್ನು ನನ್ನ ಈಗಿನ ಪತಿಯಾಗಿರುವ ವ್ಲಾಡಿಮಿರ್ ಪ್ರೀತಿಸುತ್ತಾನೆ. ನಾನು ಹೀಗೆಯೇ ಇರಲು ಬಯಸುತ್ತೇನೆ ಇದ್ದಕ್ಕಿಂತ ಸುಂದರವಾಗಿ ಕಾಣಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ.

  • ಶ್ರೀದೇವಿಯ ಅಂತ್ಯಕ್ರಿಯೆ ಮಾಡ್ತಾರಾ ಮಲಮಗ ಅರ್ಜುನ್ ಕಪೂರ್!

    ಶ್ರೀದೇವಿಯ ಅಂತ್ಯಕ್ರಿಯೆ ಮಾಡ್ತಾರಾ ಮಲಮಗ ಅರ್ಜುನ್ ಕಪೂರ್!

    ಮುಂಬೈ: ಶ್ರೀದೇವಿ ನನ್ನ ಸ್ವಂತ ತಾಯಿಯಲ್ಲ. ಜಾಹ್ನವಿ ಕಪೂರ್ ನನ್ನ ಸ್ವಂತ ತಂಗಿಯಲ್ಲ ಎಂದು ಈ ಮೊದಲು ನಟ ಅರ್ಜುನ್ ಕಪೂರ್ ಹೇಳಿಕೆ ನೀಡಿದ್ದರು. ಆದರೆ ಶ್ರೀದೇವಿ ಜೊತೆಗೆ ಅರ್ಜುನ್ ಕಪೂರ್ ಉತ್ತಮ ಬಾಂಧವ್ಯ ಹೊಂದಿದ್ದರು ಎಂದೆನಿಸುತ್ತದೆ. ಹೀಗಾಗಿ ಅರ್ಜುನ್ ಕಪೂರ್ ಚಿಕ್ಕಮ್ಮ ಶ್ರೀದೇವಿ ಅವರ ಅಂತ್ಯಸಂಸ್ಕಾರ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಕಾರ್ಯಕ್ರಮವೊಂದರಲ್ಲಿ ಅರ್ಜುನ್ ಕಪೂರ್ ತಮ್ಮ ಹಾಗೂ ಶ್ರೀದೇವಿ ಮಧ್ಯೆ ಇರುವ ಸಂಬಂಧ ಉತ್ತಮವಾಗಿದೆ ಎಂದು ತಿಳಿಸಿದ್ದರು. ನನ್ನ ತಂದೆ ಬದುಕಿನಲ್ಲಿರುವ ಪ್ರತಿಯೊಂದು ವ್ಯಕ್ತಿಯನ್ನು ನಾನು ಗೌರವಿಸುತ್ತೇನೆ. ಏಕೆಂದರೆ ನನ್ನ ತಂದೆ ನನ್ನಿಂದ ಅದನ್ನು ನಿರೀಕ್ಷಿಸುತ್ತಾರೆ. ಹಾಗಾಗಿ ನಾನು ಶ್ರೀದೇವಿಯನ್ನು ಗೌರವಿಸುತ್ತೇನೆ. ಅವರಿಗೆ ಕೆಟ್ಟದನ್ನು ಬಯಸುವುದಿಲ್ಲ ಎಂದು ಅರ್ಜುನ್ ಕಪೂರ್ ಹೇಳಿದ್ದರು.

    ಶ್ರೀದೇವಿ ಸಾವಿನ ಸಂದರ್ಭದಲ್ಲಿ ಅರ್ಜುನ್ ತಮ್ಮ ಕುಟುಂಬದ ಜೊತೆ ಇರಬೇಕೆಂದು ಮುಂಬೈಗೆ ಬಂದಿಳಿದಿದ್ದಾರೆ. ಕುಟುಂಬದ ಜೊತೆಯಿದ್ದು, ತಂಗಿ ಜಾಹ್ನವಿಗೆ ಸಾಂತ್ವಾನ ಹೇಳಲು ಮುಂಬೈಗೆ ಬಂದಿದ್ದಾರೆ. ಈ ವೇಳೆ ಶ್ರೀದೇವಿ ಮನೆ ಮುಂದೆ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಕಾಯುತ್ತಿದ್ದಾರೆ.

    ಅರ್ಜುನ್ ಕಪೂರ್ ಬೋನಿ ಕಪೂರ್ ಹಾಗೂ ಅವರ ಮೊದಲನೇ ಪತ್ನಿ ಮೋನಾ ಕಪೂರ್ ಮಗ. ಬಳಿಕ ಬೋನಿ ಶ್ರೀದೇವಿಯನ್ನು ಮದುವೆಯಾಗಿದ್ದರು. ಶ್ರೀದೇವಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರ ಮಲಮಗ ಅರ್ಜುನ್ ಅಂತ್ಯಕ್ರಿಯೆ ಮಾಡುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

    ಶ್ರೀದೇವಿ ಹೃದಯಾಘಾತದಿಂದ ದುಬೈಯಲ್ಲಿ ಶನಿವಾರ ರಾತ್ರಿ ಮೃತಪಟ್ಟರು. ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತಗೊಂಡು ನಿಧನರಾಗಿದ್ದಾರೆ.