Tag: ಮರಿ ಆನೆ

  • ಜಮೀನಿನ ತಂತಿ ಬೇಲಿಗೆ ಹರಿಸಲಾಗಿದ್ದ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಮರಿ ಸಾವು

    ಜಮೀನಿನ ತಂತಿ ಬೇಲಿಗೆ ಹರಿಸಲಾಗಿದ್ದ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಮರಿ ಸಾವು

    ಚಾಮರಾಜನಗರ: ಜಮೀನಿನ ತಂತಿ ಬೇಲಿಗೆ ಹರಿಸಲಾಗಿದ್ದ ವಿದ್ಯುತ್ ಸ್ಪರ್ಶಿಸಿ ಮೂರು ವರ್ಷದ ಗಂಡಾನೆ ಮರಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಚಿನ ಜಕ್ಕಳ್ಳಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.

    ಶರಿಯರ್ ಖಾನ್ ಎಂಬವರಿಗೆ ಸೇರಿದ ಜಮೀನಿನ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಕಾಡಿನಿಂದ ಮೇವು ಅರಸಿ ಬಂದ ಆನೆ ಮರಿಗೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ.

    ಜಮೀನು ಮಾಲೀಕರು ಹಾಗೂ ಜಮೀನು ಗುತ್ತಿಗೆ ಪಡೆದಿದ್ದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

  • ಮೃತಪಟ್ಟ ಮರಿಯನ್ನು ಶವಸಂಸ್ಕಾರಕ್ಕೆ ಹೊತ್ತೊಯ್ದ ಆನೆಗಳು- ವಿಡಿಯೋ ವೈರಲ್

    ಮೃತಪಟ್ಟ ಮರಿಯನ್ನು ಶವಸಂಸ್ಕಾರಕ್ಕೆ ಹೊತ್ತೊಯ್ದ ಆನೆಗಳು- ವಿಡಿಯೋ ವೈರಲ್

    ನವದೆಹಲಿ: ವನ್ಯಜೀವಿಗಳಿಗೂ ಭಾವನೆಗಳಿವೆ, ತಮ್ಮವರಿಗಾಗಿ ಅವುಗಳು ಕೂಡ ಪರಿತಪಿಸುತ್ತವೆ ಎನ್ನುವುದಕ್ಕೆ ಸದ್ಯ ಕಾಡಾನೆಗಳ ಹಿಂಡೊಂದು ಮೃತಪಟ್ಟ ಮರಿ ಆನೆಯ ಶವವನ್ನು ಹೊತ್ತೊಯ್ದ ವಿಡಿಯೋ ಸಾಕ್ಷಿಯಾಗಿದೆ.

    ಕಾಡಿನ ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಆನೆಯೊಂದು ಮೃತಪಟ್ಟ ಮರಿ ಆನೆಯನ್ನು ಕಚ್ಚಿಕೊಂಡು ಹೋಗುತಿತ್ತು. ಈ ವೇಳೆ ಅದರ ಹಿಂದೆಯೇ ಶವ ಸಂಸ್ಕಾರಕ್ಕೆ ಆನೆಯ ಹಿಂಡೇ ನಾಯಕ ಆನೆಯನ್ನು ಹಿಂಬಾಲಿಸುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಆನೆಗಳ ಮೂಕವೇದನೆ ಕಂಡು ನೆಟ್ಟಿಗರು ಮರುಗಿದ್ದಾರೆ.

    ವಿಡಿಯೋದಲ್ಲಿ ಆನೆಯೊಂದು ಸತ್ತ ಮರಿಯನ್ನು ಕಚ್ಚಿಕೊಂದು ಬರುತ್ತಿದ್ದು, ಮೊದಲಿಗೆ ರಸ್ತೆ ದಾಟಿ ಮರಿಯ ಶವವನ್ನು ಅಲ್ಲಿಯೇ ಇಡುತ್ತದೆ. ಬಳಿಕ ಕೆಲ ಕ್ಷಣದ ನಂತರ ಮತ್ತೊಂದು ಆನೆ ಬಂದು ಮರಿ ಬಳಿ ನಿಲ್ಲುತ್ತದೆ. ಇದಾದ ನಂತರ ಆನೆಗಳ ಹಿಂಡೊಂದು ಸ್ಥಳಕ್ಕೆ ಬಂದು ಮರಿಯನ್ನು ಹೊತ್ತುಕೊಂಡು ಕಾಡಿನ ಮತ್ತೊಂದು ದಿಕ್ಕಿಗೆ ಹೋಗಿರುವ ದೃಶ್ಯ ಸೆರೆಯಾಗಿದೆ.

    ಈ ವಿಡಿಯೋ ಪೋಸ್ಟ್ ಮಾಡಿರುವ ಅಧಿಕಾರಿ, ಶವ ಸಂಸ್ಕಾರಕ್ಕೆ ಆನೆಗಳ ಹಿಂಡು ಮೃತಪಟ್ಟ ಮರಿ ಆನೆಯನ್ನು ಹೊತ್ತೊಯ್ಯುತ್ತಿದೆ. ಮರಿಯನ್ನು ಬಿಟ್ಟು ಹೋಗಲು ಈ ಕುಟುಂಬ ಬಯಸುತ್ತಿಲ್ಲ ಎಂದು ಬರೆದು ವಿಡಿಯೋ ಜೊತೆ ಟ್ವೀಟ್ ಮಾಡಿದ್ದಾರೆ.

    ಅಲ್ಲದೆ ಮತ್ತೊಂದು ಟ್ವೀಟ್‍ನಲ್ಲಿ, ಹಿಂದಿನ ಕಾಲದಲ್ಲಿ ಅರಣ್ಯಗಳಲ್ಲಿ ಆನೆಗಳು ಶವ ಸಂಸ್ಕಾರ ಮಾಡಿರುವ ಬಗ್ಗೆ ಸಿದ್ಧಾಂತಗಳಿವೆ. ಸ್ಟ್ರೆಸಿ ಸೇರಿದಂತೆ ಹಲವರು ಈ ಬಗ್ಗೆ ತಮ್ಮ ಪುಸ್ತಕಗಳಲ್ಲಿ ಬರೆದಿದ್ದಾರೆ. ಆದರೆ ಈವರೆಗೆ ಈ ಬಗ್ಗೆ ನನಗೆ ಯಾವುದೆ ಸಾಕ್ಷಿ ಸಿಕ್ಕಿಲ್ಲ. ಬಹುತೇಕ ಪ್ರಕರಣದಲ್ಲಿ ಆನೆಗಳು ಹೆಚ್ಚಾಗಿ ನೀರು ಹರಿಯುವ ಸ್ಥಳದಲ್ಲೇ ಕೊನೆಯುಸಿರು ಎಳೆಯುತ್ತವೆ ಎಂದು ತಿಳಿದ್ದಾರೆ.

    https://twitter.com/ParveenKaswan/status/1137553283596185602

    ಅದು ಏನೆಯಾಗಲಿ, ಈ ಆನೆಗಳ ಮೂಕವೇದನೆಯ ವಿಡಿಯೋ ನೋಡಿದವರು ಮಾತ್ರ ಮನುಷ್ಯರಿಗಿಂತ ಪ್ರಾಣಿಗಳೇ ಲೇಸು. ಪ್ರಾಣಿಗಳಿಂದ ಮನುಷ್ಯ ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಜೂನ್ 7ರಂದು ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಸದ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

  • 50 ಆಡಿ ಆಳದ ಗುಂಡಿಗೆ ಬಿದ್ದ ಆನೆ ಮರಿಯ ಕಣ್ಣಿಗೆ ಬಟ್ಟೆ ಕಟ್ಟಿ ಮೇಲೇತ್ತಿದ ಅರಣ್ಯ ಸಿಬ್ಬಂದಿ

    50 ಆಡಿ ಆಳದ ಗುಂಡಿಗೆ ಬಿದ್ದ ಆನೆ ಮರಿಯ ಕಣ್ಣಿಗೆ ಬಟ್ಟೆ ಕಟ್ಟಿ ಮೇಲೇತ್ತಿದ ಅರಣ್ಯ ಸಿಬ್ಬಂದಿ

    ಬೆಂಗಳೂರು: 50 ಅಡಿ ಗುಂಡಿಗೆ ಬಿದ್ದು ಮೇಲೆ ಬಾರಲಾಗದ ಸ್ಥಿತಿಯಲ್ಲಿರುವ ಮರಿ ಆನೆಯನ್ನು ಅರಣ್ಯ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.

    ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಪಾವಡಪಟ್ಟಿ ಹಳ್ಳಿಯಲ್ಲಿ ಆನೆ ಮರಿ ಗುಂಡಿಗೆ ಬಿದ್ದಿತ್ತು. ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ ಕಾಡಾನೆಗಳು ಆಹಾರ ಅರಸಿ ನಾಡಿಗೆ ಬರುವುದು ಸರ್ವೆ ಸಾಮಾನ್ಯ. ಹೀಗೆ ನಾಡಿಗೆ ಬಂದ ಆನೆಗಳು ರೈತರ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿರುತ್ತವೆ. ಅದೇ ರೀತಿ ಈ ವರ್ಷವೂ 60ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದವು. ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ಇಂದು ಮುಂಜಾನೆ ಕಾಡಿಗೆ ಅಟ್ಟುವಾಗ ಮರಿ ಆನೆ ಗುಂಡಿಗೆ ಬಿದ್ದಿತ್ತು. ಇದನ್ನೂ ಓದಿ: ಮೃತಪಟ್ಟಿರುವ ತನ್ನ ಕಂದಮ್ಮನಿಗಾಗಿ ತಾಯಿ ಆನೆಯ ಹುಡುಕಾಟ-ಬಂಡೀಪುರದಲ್ಲೊಂದು ಮನಕಲಕುವ ಘಟನೆ

    ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಗುಂಡಿಯಲ್ಲಿ ಬಿದ್ದಿದ್ದ ಅನೆ ಮರಿಯನ್ನು ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಗುಂಡಿಯಿಂದ ಮೇಲೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಂಡಿಯಿಂದ ಮೇಲೆತ್ತುವಾಗ ಅನೆ ಮರಿ ಗಾಬರಿ ಆಗಬಾರದೆಂದು ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ರಕ್ಷಿಸಿದ ಮರಿಯಾನೆಯನ್ನು ಸಾನಮಾವು ಅರಣ್ಯ ಪ್ರದೇಶದಲ್ಲಿದ್ದ ತಾಯಿ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    https://www.youtube.com/watch?v=pMKGHV1Bdao

     

  • ಮಾವುತರಿಂದಲೇ ಮರಿ ಆನೆಗೆ ಥಳಿತ- ಮನಕಲಕುವ ವೀಡಿಯೋ ನೋಡಿ

    ಮಾವುತರಿಂದಲೇ ಮರಿ ಆನೆಗೆ ಥಳಿತ- ಮನಕಲಕುವ ವೀಡಿಯೋ ನೋಡಿ

    ಬೆಂಗಳೂರು: ಇತ್ತೀಚೆಗೆ ಊರಿನ ಜನರ ಕೈಯಿಂದ ಏಟು ತಿಂದ ಸಿದ್ದ ಕೊನೆಗೆ ಚೇತರಿಸಿಕೊಳ್ಳಲಾಗದ ಸ್ಥಿತಿ ತಲುಪಿದಾಗ ಎಲ್ರೂ ಆತನ ಚೇತರಿಕೆಗಾಗಿ ಪ್ರಾರ್ಥನೆ ಮಾಡಿದ್ದರು. ಇದೀಗ ಇಂಥದ್ದೇ ಘಟನೆ ಮತ್ತೆ ಮರುಕಳಿಸಿದ್ದು, ಮರಿಯಾನೆಗೆ ಮಾವುತರೇ ಕೋಲು ಹಿಡಿದು ಸರಿಯಾಗಿ ಥಳಿಸಿದ ವಿಡಿಯೋ ವೈರಲ್ ಆಗ್ತಿದೆ.

    ದುಬಾರೆ ಎಲಿಫೆಂಟ್ ಕ್ಯಾಂಪ್ ನಲ್ಲಿ ನೀರಿಗಿಳಿಯದ ಮರಿಯಾನೆಗೆ ಮಾವುತರು ರಾಕ್ಷಸರಂತೆ ಹೊಡೆಯುತ್ತಾರೆ. ಪುಟ್ಟ ಆನೆ ಏಟಿನ ಹೊಡೆತ ತಾಳಲಾರದೇ ನೀರಿಗೆ ಬಿದ್ದು ಒದ್ದಾಡಿದ್ರು ಈ ರಾಕ್ಷಸರು ಬಿಡದೇ ಏಟು ನೀಡುತ್ತಾರೆ. ಪಕ್ಕದಲ್ಲಿ ನಿಂತಿದ್ದ ತಾಯಾನೆ ಇದೆಲ್ಲವನ್ನು ಮರುಗುತ್ತ ನೋಡೋ ದೃಶ್ಯ ಎಂಥವರ ಕಣ್ಣಲ್ಲಿ ನೀರು ತರಿಸುತ್ತೆ. ಇದೀಗ ಈ ಮಾವುತರ ವಿರುದ್ಧ ಅರುಣ್ ಪ್ರಸಾದ್ ಅನ್ನೋರು ಬೆಂಗಳೂರು ಪೊಲೀಸ್ ಕಮೀಷನರ್‍ಗೆ ಹಾಗೂ ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

    https://www.youtube.com/watch?v=LRwenPuGuh0&feature=youtu.be